Tag: Dhanveer

  • ಧನ್ವೀರ್ ಬರ್ತ್‍ಡೇಗೆ ಹೊಸ ರಂಗು ತುಂಬಿತು ಬಂಪರ್ ಟೀಸರ್!

    ಧನ್ವೀರ್ ಬರ್ತ್‍ಡೇಗೆ ಹೊಸ ರಂಗು ತುಂಬಿತು ಬಂಪರ್ ಟೀಸರ್!

    ಗಂಟೆ ಕಳೆಯೋದರೊಳಗೆ ದಾಖಲೆಯ ವೀಕ್ಷಣೆ!

    ಬಜಾರ್ ಖ್ಯಾತಿಯ ಧನ್ವೀರ್ ನಟನೆಯ ಬಂಪರ್ ಚಿತ್ರ ವರ್ಷದ ಹಿಂದೆಯೇ ಸಾಕಷ್ಟು ಸದ್ದು ಮಾಡಿದೆ. ಮೊದಲ ಚಿತ್ರದಲ್ಲಿಯೇ ಮಾಸ್ ಲುಕ್ಕಲ್ಲಿ ಮಿಂಚಿದ್ದ ಧನ್ವೀರ್ ಬಂಪರ್ ಮೂಲಕ ಮತ್ತೊಂದು ಭರ್ಜರಿ ಗೆಟಪ್ಪಿನಲ್ಲಿ ಎಂಟ್ರಿ ಕೊಡುತ್ತಿರೋ ವಿಚಾರವೂ ಈ ಟೈಟಲ್ ಮೂಲಕವೇ ಸ್ಪಷ್ಟವಾಗಿತ್ತು. ಖ್ಯಾತ ಯುವ ನಿರ್ಮಾಪಕ ಸುಪ್ರೀತ್ ನಿರ್ಮಾಣ ಮಾಡಿರೋ ಈ ಚಿತ್ರದ ಮತ್ತಷ್ಟು ಚಿತ್ರಣವೀಗ ಜಾಹೀರುಗೊಂಡಿದೆ. ನಾಯಕ ಧನ್ವೀರ್ ಹುಟ್ಟುಹಬ್ಬಕ್ಕೆ ಗಿಫ್ಟ್ ಎಂಬಂತೆ ಚಿತ್ರತಂಡ ಪರಿಣಾಮಕಾರಿಯಾದ ಟೀಸರ್ ಒಂದನ್ನು ಲಾಂಚ್ ಮಾಡಿದೆ. ಈ ಮೂಲಕ ಹೆಸರಿಗೆ ತಕ್ಕುದಾದ ಕಂಟೆಂಟಿನ ಸಿನಿಮಾ ನೋಡೋ ಭಾಗ್ಯ ಪ್ರೇಕ್ಷಕರಿಗೆ ಸಿಗಲಿರೋದು ಪಕ್ಕಾ ಆಗಿದೆ.

    ಇದು ಹರಿ ಸಂತೋಷ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಚಿತ್ರ. ಇದರ ಟೀಸರ್ ಬಿಡುಗಡೆಗೊಂಡು ಅತ್ಯಂತ ಕಡಿಮೆ ಅವಧಿಯಲ್ಲಿಯೇ ಪಡೆದುಕೊಂಡಿರೋ ವೀಕ್ಷಣೆ, ಅದರೊಂದಿಗೆ ಸೃಷ್ಟಿಯಾಗಿರೋ ಕ್ರೇಜ್, ಸಿಕ್ಕಿರೋ ಅಪಾರ ಪ್ರಮಾಣದ ಪ್ರತಿಕ್ರಿಯೆಗಳೆಲ್ಲವೂ ಧನ್ವೀರ್ ಪಾಲಿಗೆ ಈ ಹುಟ್ಟುಹಬ್ಬದ ಸಂಭ್ರಮವನ್ನ ಇಮ್ಮಡಿಸಿದೆ. ಅದರಾಚೆ ನಿಂತು ನೋಡಿದರೂ ಬಂಪರ್ ಟೀಸರ್‍ನದ್ದು ಭರವಸೆ ಮೂಡಿಸುವಂಥಾ ಖದರ್. ಧನ್ವೀರ್ ಮೇಲೆ ಮೊದಲ ಚಿತ್ರದಲ್ಲಿ ಎಂಥಾ ನಿರೀಕ್ಷೆ ಮೊಳೆತುಕೊಂಡಿತ್ತೋ ಅದನ್ನು ಮೀರಿಸುವಂಥ ರಗಡ್ ಕಥಾನಕದ ಹೊಳಹು ಸಲೀಸಾಗಿ ಸಿಕ್ಕಂತಾಗಿದೆ.

    ಧನ್ವೀರ್ ಮೊದಲ ಸಿನಿಮಾದಲ್ಲಿಯೇ ಮಾಸ್ ಹೀರೋ ಆಗಿ ಅವತರಿಸಿದ್ದವರು. ನಟನೆ ಸೇರಿದಂತೆ ಎಲ್ಲದರಲ್ಲಿಯೂ ಪಳಗಿಕೊಂಡಿದ್ದ ಧನ್ವೀರ್‍ಗೆ ಒಂದೇ ಒಂದು ಸಿನಿಮಾ ಮೂಲಕ ಕುದುರಿಕೊಂಡಿರೋ ಅಭಿಮಾನಿ ಬಳಗ ನಿಜಕ್ಕೂ ಬೆರಗಾಗುವಂತಿದೆ. ಅಂಥಾ ಅಭಿಮಾನಿಗಳೆಲ್ಲ ಧನ್ವೀರ್ ಅವರನ್ನು ಮತ್ತಷ್ಟು ರಿಗಡ್ ಲುಕ್ಕಿನಲ್ಲಿ ನೋಡಲು ಕಾತರಿಸಿದ್ದರು. ಅದನ್ನು ಸಂಪೂರ್ಣವಾಗಿ ತಣಿಸುವಂಥ ಗೆಟಪ್ಪಿನಲ್ಲಿ ಧನ್ವೀರ್ ಕಂಗೊಳಿಸಿದ್ದಾರೆ. ಮಾಸ್ ಮಾತ್ರವಲ್ಲದೆ ಸಖತ್ ಸ್ಟೈಲಿಶ್ ಆಗಿಯೂ ಅವರು ಕಾಣಿಸಿಕೊಂಡಿದ್ದಾರೆ.

    ಕಳೆದ ವರ್ಷವೇ ಧನ್ವೀರ್ ಹುಟ್ಟುಹಬ್ಬದಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಪರ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಳಿಸಿದ್ದರು. ಆ ದೆಸೆಯಿಂದಲೇ ಭಾರೀ ಸೌಂಡು ಮಾಡಿದ್ದ ಬಂಪರ್ ಕೊರೊನಾ ಕಾಟ ಇಲ್ಲದೇ ಹೋಗಿದ್ದರೆ ಈ ಹೊತ್ತಿಗೆಲ್ಲ ಬಿಡುಗಡೆಯಾಗಿರುತ್ತಿತ್ತೇನೋ. ಆದರೆ, ಕೊರೊನಾದಿಂದ ಕೊಂಚ ಹಿನ್ನಡೆಯಾದರೂ ಬಂಪರ್ ಅನ್ನು ಮಜಬೂತಾಗಿಯೇ ಸಿದ್ಧಗೊಳಿಸಲಾಗಿದೆ. ಅದಕ್ಕೆ ಲಕ್ಷ ಲಕ್ಷ ವೀಕ್ಷಣೆ ಪಡೆದುಕೊಂಡು ಮುನ್ನುಗ್ಗುತ್ತಿರೋ ಈ ಟೀಸರ್‍ಗಿಂತಲೂ ಬೇರೆ ಸಾಕ್ಷಿ ಬೇಕಿಲ್ಲ.

  • ‘ಬಂಪರ್’ಗೆ ಕೆಜಿಎಫ್ ಖ್ಯಾತಿಯ ಗರುಡ ರಾಮ್ ವಿಲನ್!

    ‘ಬಂಪರ್’ಗೆ ಕೆಜಿಎಫ್ ಖ್ಯಾತಿಯ ಗರುಡ ರಾಮ್ ವಿಲನ್!

    ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದ ಮೂಲಕ ನಾಯಕ ನಟನಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿಕೊಟ್ಟ ಭರವಸೆಯ ನಟ ಧನ್ವೀರ್. ಮೊದಲ ಸಿನಿಮಾದಲ್ಲೇ ಮಾಸ್ ಪ್ರೇಕ್ಷಕರ ಮನ ಗೆದ್ದ ಧನ್ವೀರ್ ಈಗ ಎರಡನೇ ಚಿತ್ರ ‘ಬಂಪರ್’ಗೆ ಸಿದ್ಧರಾಗುತ್ತಿದ್ದಾರೆ. ಹರಿ ಸಂತೋಷ್ ನಿರ್ದೇಶನದ ಬಂಪರ್ ಚಿತ್ರದಲ್ಲಿ ಧನ್ವೀರ್ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

    ಇದೀಗ ಬಂಪರ್ ಚಿತ್ರತಂಡದಿಂದ ‘ಬಂಪರ್’ ಸುದ್ದಿಯೊಂದು ಹೊರ ಬಿದ್ದಿದೆ. ಕೆಜಿಎಫ್ ಚಿತ್ರದಲ್ಲಿ ಗರುಡನಾಗಿ ಮಿಂಚಿದ್ದ ರಾಮ್ ಬಂಪರ್ ಚಿತ್ರದಲ್ಲಿ ವಿಲನ್ ಆಗಿ ಧನ್ವೀರ್ ಎದುರು ಸೆಣಸಾಡೋದು ಕನ್ಫರ್ಮ್ ಆಗಿದೆ.

    ಹೌದು, ಕೆಜಿಎಫ್ ಚಿತ್ರದಲ್ಲಿ ಗರುಡ ಪಾತ್ರದಲ್ಲಿ ಖಡಕ್ ವಿಲನ್ ಆಗಿ ಬಣ್ಣ ಹಚ್ಚಿದ್ದ ರಾಮ್ ಸಖತ್ ಫೇಮಸ್ ಆಗಿದ್ರು. ಮೊದಲ ಚಿತ್ರದಲ್ಲೇ ರಾಮ್ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡು ಜನಪ್ರಿಯತೆ ಗಳಿಸಿಕೊಂಡ್ರು. ಟಾಲಿವುಡ್, ಕಾಲಿವುಡ್ ಅಂಗಳದಿಂದಲೂ ರಾಮ್‍ಗೆ ವಿಲನ್ ಆಗಿ ನಟಿಸಲು ಆಫರ್ ಬರತೊಡಗಿತ್ತು. ಇದೀಗ ಹರಿ ಸಂತೋಷ್ ನಿರ್ದೇಶನದ ಬಂಪರ್ ಚಿತ್ರಕ್ಕೆ ರಾಮ್ ವಿಲನ್ ಆಗಿ ಆಯ್ಕೆ ಆಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.

    ‘ಬಂಪರ್’ ಚಿತ್ರ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಭರಾಟೆ ಖ್ಯಾತಿಯ ನಿರ್ಮಾಪಕ ಸುಪ್ರಿತ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಫ್ಯಾಮಿಲಿ ಎಂಟರ್ ಟೈನ್ಮೆಂಟ್ ಚಿತ್ರವಾಗಿರೋ ಬಂಪರ್ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿದೆ.

  • ಬಜಾರ್ ಹುಡುಗನ ಎರಡನೇ ಇನ್ನಿಂಗ್ಸ್- ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಲ್ಯಾಪ್

    ಬಜಾರ್ ಹುಡುಗನ ಎರಡನೇ ಇನ್ನಿಂಗ್ಸ್- ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಲ್ಯಾಪ್

    ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದ ಮೂಲಕ ಸ್ಯಾಂಡಲ್‍ವುಡ್ ಅಂಗಳಕ್ಕೆ ಎಂಟ್ರಿಕೊಟ್ಟ ಮಾಸ್ ಹೀರೋ ಧನ್ವೀರ್ ‘ಬಂಪರ್’ ಚಿತ್ರದ ಮೂಲಕ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮೊದಲ ಚಿತ್ರದಲ್ಲಿ ಸಾಕಷ್ಟು ಅಭಿಮಾನಿ ಬಳಗ ಸಂಪಾದಿಸಿದ ಬಜಾರ್ ಹುಡ್ಗ ಇದೀಗ ಬಂಪರ್ ನಲ್ಲೂ ಮಾಸ್ ಆಗಿ ಮನರಂಜನೆ ನೀಡೋಕೆ ಸಿದ್ಧವಾಗ್ತಿದ್ದಾರೆ.

    ಜನವರಿ 15ಕ್ಕೆ ಚಿತ್ರದ ಮುಹೂರ್ತ ಸಮಾರಂಭವನ್ನು ಚಿತ್ರತಂಡ ಹಮ್ಮಿಕೊಂಡಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಪರ್ ಚಿತ್ರಕ್ಕೆ ಕ್ಲ್ಯಾಪ್ ಮಾಡಲಿದ್ದಾರೆ.

    ಈಗಾಗಲೇ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿರುವ ಬಂಪರ್ ಚಿತ್ರಕ್ಕೆ ಹರಿ ಸಂತೋಷ್ ಆಕ್ಷನ್ ಕಟ್ ಹೇಳ್ತಿದ್ದಾರೆ. ಫ್ಯಾಮಿಲಿ ಎಂಟಟೈನ್ಮೆಂಟ್ ಚಿತ್ರವಾಗಿದ್ದು ಕಮರ್ಶಿಯಲ್ ಎಳೆಯಲ್ಲಿ ವಿಭಿನ್ನವಾಗಿ ಚಿತ್ರವನ್ನು ತೆರೆಮೇಲೆ ತರಲು ಪ್ಲಾನ್ ಮಾಡಿಕೊಂಡಿದ್ದಾರೆ ನಿರ್ದೇಶಕ ಹರಿ ಸಂತೋಷ್.

    ಕಿರಿಕ್ ಪಾರ್ಟಿ ಖ್ಯಾತಿಯ ಅಜನೀಶ್ ಲೋಕನಾಥ್ ಬಂಪರ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡ್ತಿದ್ದಾರೆ. ‘ಭರಾಟೆ’ ನಿರ್ಮಾಪಕ ಸುಪ್ರಿತ್ ‘ಬಂಪರ್’ ಚಿತ್ರಕ್ಕೆ ಬಂಡವಾಳ ಹೂಡಿದ್ಧಾರೆ. ಚಿತ್ರಕ್ಕಾಗಿ ನಾಯಕಿಯ ಹುಡುಕಾಟದಲ್ಲಿರುವ ನಿರ್ದೇಶಕರು ಚಿತ್ರದ ಇನ್ನಷ್ಟು ಮಾಹಿತಿ ಹಾಗೂ ತಾರಾಬಳಗದ ಬಗ್ಗೆ ಸದ್ಯದಲ್ಲೇ ಹೆಚ್ಚಿನ ಮಾಹಿತಿ ನೀಡಲಿದ್ದಾರೆ.

  • ದರ್ಶನ್ ಅಭಿಮಾನಿ ‘ಬಜ್ಹಾರ್’ಗೆ ಬಂದಾಗ…

    ದರ್ಶನ್ ಅಭಿಮಾನಿ ‘ಬಜ್ಹಾರ್’ಗೆ ಬಂದಾಗ…

    ಬೆಂಗಳೂರು: ಸಿಂಪಲ್ ಸುನಿ ನಿರ್ದೇಶನದ ಬಜ್ಹಾರ್ ಚಿತ್ರದ ಮೂಲಕ ಹೊಸಾ ಹುಡುಗ ಧನ್ವೀರ್ ನಾಯಕ ನಟನಾಗಿ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಅವರು ಈ ಸಿನಿಮಾಗಾಗಿ ಅದೆಷ್ಟು ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ, ಹೇಗೆಲ್ಲ ತಯಾರಾಗಿದ್ದಾರೆಂಬ ವಿಚಾರವೂ ಹೊರ ಬಿದ್ದಿದೆ. ಈ ಬಗ್ಗೆ ಜನಸಾಮಾನ್ಯರೂ ಧನ್ವೀರ್ ಬಗ್ಗೆ ಪ್ರೀತಿ ಮೂಡಿಸಿಕೊಳ್ಳುವಂತೆಯೂ ಆಗಿದೆ.

    ಬಜ್ಹಾರ್ ಮೂಲಕ ರಗಡ್ ಲುಕ್ಕಿನಲ್ಲಿಯೇ ಎಂಟ್ರಿ ಕೊಟ್ಟಿರೋ ಧನ್ವೀರ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಸ್ಫೂರ್ತಿ. ಚಿಕ್ಕ ವಯಸ್ಸಿನಿಂದಲೇ ದರ್ಶನ್ ಅವ್ರ ಚಿತ್ರಗಳನ್ನು ನೋಡುತ್ತಾ ಅವರ ಕಾರಣದಿಂದಲೇ ನಾಯಕನಾಗಬೇಕು ಎಂಬ ಕನಸು ಕಂಡ ಧನ್ವೀರ್ ಅವರಂತೆಯೇ ಕಷ್ಟಪಟ್ಟರೆ ಮಾತ್ರವೇ ಏನಾದರೂ ಮಾಡಲು ಸಾಧ್ಯ ಎಂಬ ಮನಸ್ಥಿತಿ ಹೊಂದಿದ್ದಾರೆ.

    ದರ್ಶನ್ ಅವರೇ ತನ್ನ ಪಾಲಿನ ದೇವರಿದ್ದಂತೆ ಅನ್ನೋವಷ್ಟರ ಮಟ್ಟಿಗೆ ಧನ್ವೀರ್ ಅವರಿಗೆ ದರ್ಶನ್ ಅಂದ್ರೆ ಪ್ರೀತಿ. ಇದನ್ನು ಮನಗಂಡು ದರ್ಶನ್ ಕೂಡಾ ಬಜ್ಹಾರಿನ ಆಡಿಯೋ ಲಾಂಚ್ ಮಾಡಿದ್ದರು. ತಮ್ಮ ಅಭಿಮಾನಿಯನ್ನು ಹರಸಿದ್ದರು. ಧನ್ವೀರ್ ಈ ಚಿತ್ರದಲ್ಲಿ ಕಾಣಿಸಿಕೊಂಡಿರೋ ರೀತಿ ನೋಡಿದರೆ ಕನ್ನಡಕ್ಕೊಬ್ಬ ಹೀರೋ ಸಿಕ್ಕುವ ಲಕ್ಷಣಗಳೇ ಕಾಣಿಸುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದರ್ಶನ್ ಜೊತೆ ರಾರಾಜಿಸಿದ ಸ್ಯಾಂಡಲ್‍ವುಡ್ ನಟ

    ದರ್ಶನ್ ಜೊತೆ ರಾರಾಜಿಸಿದ ಸ್ಯಾಂಡಲ್‍ವುಡ್ ನಟ

    ಬೆಂಗಳೂರು: ಸ್ಯಾಂಡಲ್‍ವುಡ್ ಗೆ ನವ ನಾಯಕ ಎಂಟ್ರಿಕೊಟ್ಟಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಕ್ಕದಲ್ಲಿ ಆಟೋ ಮೇಲೆ ರಾರಾಜಿಸುತ್ತಿದ್ದಾರೆ.

    `ಬಜಾರ್’ ಸಿನಿಮಾದ ನಟ ಧನ್ವೀರ್ ದರ್ಶನ್ ಜೊತೆ ಕಾಣಿಸಿಕೊಂಡಿದ್ದಾರೆ. ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಮೊದಲ ಬಾರಿಗೆ ಧನ್ವೀರ್ ನಾಯಕನಾಗಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

    ಇತ್ತೀಚಿಗಷ್ಟೇ ಧನ್ವೀರ್ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ಆದ್ದರಿಂದ ಇವರಿಗೆ ದರ್ಶನ್ ಅಭಿಮಾನಿಗಳಿಂದ ಉಡುಗೊರೆ ಸಿಕ್ಕಿದೆ. ನಟ ಧನ್ವೀರ್ ದರ್ಶನ್ ಅವರ ಅಭಿಮಾನಿ. ಈ ಬಗ್ಗೆ ಅವರು ಹಿಂದೆಯೇ ಹೇಳಿದ್ದರು. ಆದ್ದರಿಂದ ದರ್ಶನ್ ಅಭಿಮಾನಿ ತಮ್ಮ ಆಟೋ ಮೇಲೆ ಧನ್ವೀರ್ ಹುಟ್ಟುಹಬ್ಬದ ವಿಶೇಷವಾಗಿ ದರ್ಶನ್ ಹಾಗೂ ಧನ್ವೀರ್ ಅವರ ಫೋಟೋವನ್ನು ಹಾಕಿಸಿಕೊಂಡಿದ್ದಾರೆ.

    ದರ್ಶನ್ ಜೊತೆ ತಮ್ಮ ಫೋಟೋ ನೋಡಿ ಸಂತಸ ಪಟ್ಟ ಧನ್ವೀರ್ ಈ ಬಗ್ಗೆ  ಫೇಸ್ ಬುಕ್ ನಲ್ಲಿ ಖುಷಿ ಹಂಚಿಕೊಂಡಿದ್ದಾರೆ. “ನನಗೆ ಪ್ರತಿ ವರ್ಷ ಬರ್ತ್ ಡೇಗೆ ಸಿಗುತ್ತಿದ್ದ ಉಡುಗೊರೆಗಿಂತ ಈ ವರ್ಷ ತುಂಬಾ ದೊಡ್ಡ ಗಿಫ್ಟ್ ಸಿಕ್ಕಿದೆ. ಆಟೋ ಮೇಲೆ ತುಂಬಾ ದೊಡ್ಡ ಸ್ಟಾರ್ ಗಳ ಫೋಟೋ ಇರುವುದನ್ನು ನೋಡಿದ್ದೇನೆ. ಆದರೆ ನನ್ನ ಫೋಟೋ ನೋಡಿ ಏನು ಹೇಳಬೇಕೋ ತಿಳಿಯುತ್ತಿಲ್ಲ. ಅದರಲ್ಲೂ ದರ್ಶನ್ ಪಕ್ಕದಲ್ಲಿ ನನ್ನ ಫೋಟೋ ಹಾಕಿರುವುದು ತುಂಬಾ ಖುಷಿಯಾಗಿದೆ. ದರ್ಶನ್ ಸರ್ ಅಭಿಮಾನಿಗಳಿಗೆ ಧನ್ಯವಾದಗಳು ಆಟೋ ಡ್ರೈವರ್ ಚಂದನ್ ಅವರಿಗೆ ಕೋಟಿ ನಮನಗಳು, ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಯಾವಾಗಲೂ ಚಿರಋಣಿ” ಎಂದು ಬರೆದುಕೊಂಡಿದ್ದಾರೆ.

    ನಿರ್ದೇಶಕ ಸುನಿ ಅವರು ಈ ಹಿಂದೆ ಚಮಕ್ ಸಿನಿಮಾ ಮಾಡಿದ್ದರು. ಈಗ `ಬಜಾರ್’ ಸಿನಿಮಾ ನಿರ್ದೇಶನ ಮಾಡಿದ್ದು, ತಿಮ್ಮೇಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ. ಸದ್ಯಕ್ಕೆ ಈ ಸಿನಿಮಾ ಚಿತ್ರೀಕರಣವನ್ನು ಮುಗಿಸಿ ತೆರೆಗೆ ಬರಲು ಸಿದ್ಧವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv