Tag: Dhaba

  • ಕಾಲಿಗೆ ಕೋಳ, ಪ್ರತಿನಿತ್ಯ ಚಿತ್ರಹಿಂಸೆ – ಜೀತ ಪದ್ಧತಿಯ ಪ್ರತ್ಯಕ್ಷ ವರದಿ; ʻಪಬ್ಲಿಕ್‌ʼ ವರದಿ ಬೆನ್ನಲ್ಲೇ ಕಾರ್ಮಿಕರ ರಕ್ಷಣೆ!

    ಕಾಲಿಗೆ ಕೋಳ, ಪ್ರತಿನಿತ್ಯ ಚಿತ್ರಹಿಂಸೆ – ಜೀತ ಪದ್ಧತಿಯ ಪ್ರತ್ಯಕ್ಷ ವರದಿ; ʻಪಬ್ಲಿಕ್‌ʼ ವರದಿ ಬೆನ್ನಲ್ಲೇ ಕಾರ್ಮಿಕರ ರಕ್ಷಣೆ!

    ಬೆಳಗಾವಿ: ಅನ್ನ – ನೀರು ನೀಡದೆ ಕಾಲಿಗೆ ಕಬ್ಬಿಣದ ಸರಪಳಿ ಕಟ್ಟಿ ಕೋಳ ತೊಡಿಸಿ ಹೊಟೇಲ್ ಕಾರ್ಮಿಕರಿಗೆ (labourers)  ಪ್ರತಿನಿತ್ಯ ಚಿತ್ರಹಿಂಸೆ ನೀಡುತ್ತಿದ್ದ ಅಮಾನವೀಯ ಘಟನೆ ಬೆಳಗಾವಿಯಲ್ಲಿ ಕಂಡುಬಂದಿದೆ. ಈ ದೃಶ್ಯಗಳನ್ನು ನೋಡಿದರೆ ಜೀತ ಪದ್ಧತಿ ಇನ್ನೂ ಜೀವಂತವಿದೆಯೇ ಎಂಬುದಕ್ಕೆ ಈ ವರದಿ ಪುಷ್ಟಿ ನೀಡಿತ್ತು. ಈ ಕುರಿತು ʻಪಬ್ಲಿಕ್‌ ಟಿವಿʼ (Public TV) ವರದಿ ಪ್ರಸಾರ ಮಾಡಿದ ಕೆಲವೇ ಸಮಯದಲ್ಲಿ ಚಿತ್ರಹಿಂಸೆ ಅನುಭವಿಸುತ್ತಿದ್ದ ಕಾರ್ಮಿಕರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

    ಬೆಳಗಾವಿ (Belagavi) ಜಿಲ್ಲೆಯ ಕಿತ್ತೂರು ಹಾಗೂ ಧಾರವಾಡ ತಾಲೂಕಿನ ತೇಗೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-4ರಲ್ಲಿರುವ ಖಾಸಗಿ ಢಾಬಾಗೆ ಗ್ರಾಮೀಣ ಸಿಪಿಐ ಸಮೀರ ಮುಲ್ಲಾ ಭೇಟಿ ನೀಡಿದ್ದಾರೆ. ತಹಶೀಲ್ದಾರ್‌ ಸಹ ಭೇಟಿ ನೀಡಿದ್ದು, ಢಾಬಾ ಮಾಲಿಕ ಹಾಗೂ ಕೆಲಸಗಾರರಿಂದ ಮಾಹಿತಿ ಕಲೆಹಾಕುತ್ತಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ 5 ವರ್ಷ ಅಧಿಕಾರದಲ್ಲಿ ಇರ್ತಾರೋ ಇರಲ್ವೋ ಗೊತ್ತಿಲ್ಲ: ಸಿಎಂ ಆಪ್ತ ಸಲಹೆಗಾರ ಬಿಆರ್ ಪಾಟೀಲ್ ಹೊಸ ಬಾಂಬ್

    ಹೊಟೇಲ್ ಕೆಲಸಕ್ಕೆ ಉತ್ತರ ಭಾರತದ ಯುವಕರನ್ನು ಕರೆತಂದು ಪುಡಿಗಾಸು ಮುಂಗಡವಾಗಿ ನೀಡಿ ಅವರಿಗೆ ಚಿತ್ರಹಿಂಸೆ ಕೊಟ್ಟು ಕಾಲಿಗೆ ಬೇಡಿ ಹಾಕಿ ಕಬ್ಬಿಣದ ಸರಪಳಿಯಿಂದ ಕಟ್ಟಿ ಥಳಿಸುವ ದೃಶ್ಯಗಳು ಕಂಡುಬಂದಿದ್ದವು. ಇದನ್ನೂ ಓದಿ: ಚಾಮರಾಜನಗರ| ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಉಚಿತ ಸಿ.ಟಿ ಸ್ಕ್ಯಾನ್ ಸೌಲಭ್ಯವಿದ್ರೂ ರೋಗಿಗಳ ಪರದಾಟ

    ಮಾಲಿಕನ ಕುಕೃತ್ಯಕ್ಕೆ ರೋಸಿಹೋದ ಹೊಟೇಲ್ ಕೂಲಿ ಕಾರ್ಮಿಕರು ಬಿಡುಗಡೆ ಭಾಗ್ಯ ಯಾವಾಗ ಎಂಬುದನ್ನು ಕಾದು ನೋಡುತ್ತಿದ್ದರು. ಉತ್ತರ ಭಾರತದಿಂದ ಬಂದ ಯುವಕರಿಗೆ ಇಲ್ಲಿಯ ಭಾಷೆ ಬರುವುದಿಲ್ಲ. ಕಾಲಿಗೆ ಕೋಳ ತೊಟ್ಟುಕೊಂಡೇ ರೊಟ್ಟಿ ತಟ್ಟಿ ಜನರ ಹೊಟ್ಟೆ ತುಂಬಿಸುತ್ತಿದ್ದುದ್ದಂತು ವಿಷಾಧನಿಯ.

    ಇದೀಗ ʻಪಬ್ಲಿಕ್‌ ಟಿವಿʼ ವರದಿ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್‌ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಕಾರ್ಮಿಕರನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ. ಈ ಸಂಬಂಧ ಮಾತನಾಡಿರುವ ಕಾರ್ಮಿಕ ಇಲಾಖೆ ಅಧಿಕಾರಿಗಳು, ಇಷ್ಟೊಂದು ಕಾಯ್ದೆ ಕಾನೂನುಗಳು ಪ್ರಬಲವಾಗಿದ್ದರೂ ಇಂಥ ಅಮಾನವೀಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಜೀತ ಪದ್ದತಿ ಸಂಪೂರ್ಣ ಹೊಗಲಾಡಿಸಲು ಕಠಿಣ ಕಾನೂನುಗಳಿದ್ದು ಹೋಟೆಲ್ ಮಾಲಿಕರಿಗೆ ಶಿಕ್ಷೆಯಾಗುತ್ತದೆ ಮತ್ತು ದಂಡ ವಿಧಿಸಲಾಗುತ್ತದೆ ತಿಳಿಸಿದ್ದಾರೆ.

  • ಚಿಕನ್ ನೀಡದ್ದಕ್ಕೆ ಡಾಬಾಗೆ ಬೆಂಕಿ ಇಟ್ರು

    ಚಿಕನ್ ನೀಡದ್ದಕ್ಕೆ ಡಾಬಾಗೆ ಬೆಂಕಿ ಇಟ್ರು

    ಮುಂಬೈ: ಇಬ್ಬರು ವ್ಯಕ್ತಿಗಳು ಚಿಕನ್ ನೀಡದ ಕಾರಣಕ್ಕೆ ಡಾಬಾಗೆ ಬೆಂಕಿ ಹಚ್ಚಿರುವ ಘಟನೆ ಭಾನುವಾರ ಮಹಾರಾಷ್ಟ್ರದ ನಾಗ್ಪುರ್ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿಗಳನ್ನು ಶಂಕರ್ ಟೇಡೆ(29) ಮತ್ತು ಸಾಗರ್ ಪಟೇಲ್(19) ಎಂದು ಗುರುತಿಸಲಾಗಿದೆ. ಇವರು ಭಾನುವಾರ ಬೆಲ್ಟರೋಡಿ ಪ್ರದೇಶದ ರಸ್ತೆ ಬದಿಯ ಡಾಬಾಗೆ ರಾತ್ರಿ ಸುಮಾರು 1 ಗಂಟೆ ಭೇಟಿ ನೀಡಿದ್ದಾರೆ. ಮದ್ಯಪಾನ ಸೇವಿಸಿದ ಸ್ಥಿತಿಯಲ್ಲಿದ್ದ ಇವರು ಚಿಕನ್ ನೀಡುವಂತೆ ಹೇಳಿದ್ದಾರೆ.

    ಮಾಲೀಕರು ಚಿಕನ್ ಖಾಲಿಯಾಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಇಬ್ಬರು ಕುಡಿದ ಮತ್ತಿನಲ್ಲಿ ಡಾಬಾಗೆ ಬೆಂಕಿ ಹಚ್ಚಿದ್ದಾರೆ. ಸದ್ಯ ಘಟನೆಯಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ. ಆರೋಪಿಗಳ ವಿರುದ್ಧ ಡಾಬಾ ಮಾಲೀಕ ಪೊಲೀಸರಿಗೆ ದೂರು ನೀಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

  • ನೂತನ ವಧುವನ್ನು ಕೊಂದು ತಾನೂ ಶೂಟೌಟ್ ಮಾಡ್ಕೊಂಡ 3 ಮಕ್ಕಳ ತಂದೆ

    ನೂತನ ವಧುವನ್ನು ಕೊಂದು ತಾನೂ ಶೂಟೌಟ್ ಮಾಡ್ಕೊಂಡ 3 ಮಕ್ಕಳ ತಂದೆ

    ಚಂಡೀಗಢ: ಆಗ ತಾನೇ ಮದುವೆಯಾದ 20 ವರ್ಷದ ಯುವತಿಯನ್ನು ಡಾಬಾ ಮಾಲೀಕನೊಬ್ಬ ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆ ಮಡಿಕೊಂಡ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

    ಆರೋಪಿಯನ್ನು ರಾಜೇಶ್(30) ಎಂದು ಗುರುತಿಸಲಾಗಿದ್ದು, ಈತ ಪ್ರಿಯಾಂಕ ಎಂಬಾಕೆಯನ್ನು ಹತ್ಯೆ ಮಾಡಿದ್ದಾನೆ. ಈ ಘಟನೆ ಭಾನುವಾರ ಪಟೌಡಿ ಎಂಬ ಪ್ರದೇಶದಲ್ಲಿ ನಡೆದಿದೆ.

    ಮೃತರಿಬ್ಬರೂ ಪಟೌಡಿಯ ನಂಕುವಾನ್ ಗ್ರಾಮದವರಾಗಿದ್ದು, ಹಲವು ವರ್ಷಗಳಿಂದ ಪರಿಚಯವಿದ್ದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರಿಬ್ಬರ ಮಧ್ಯೆ ಸಂಬಂಧವಿತ್ತು. ಈ ವಿಚಾರವೇ ಕೊಲೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ಘಟನೆಯ ಸಂಬಂಧ ತನಿಖೆ ನಡೆಸಿದಾಗ, ರಾಜೇಶ್ ಗೆ ಈಗಾಗಲೇ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ಪ್ರಿಯಾಂಗೆ ಕಳೆದ ಜೂನ್ 29ರಂದು ಮದುವೆಯಾಗಿದ್ದು, ತವರು ಮನೆಗೆ ಬಂದಿದ್ದಳು. ಈ ವೇಳೆ ಆರೋಪಿ ಕೃತ್ಯವೆಸಗಿದ್ದಾನೆ. ಪ್ರಿಯಾಂಕ ಅಂಕಲ್ ರಾಮ್‍ಜಿಲಾಲ್ ಅವರು ಪೊಲೀಸರಿಗೆ ದೂರು ನೀಡಿದ ಬಳಿಕವಷ್ಟೇ ಪ್ರಕರಣ ಬೆಳಕಿಗೆ ಬಂದಿದೆ.

    ರಾಜೇಶ್ ಶನಿವಾರ ಪ್ರಿಯಾಂಕ ಮನೆಗೆ ಬಂದಿದ್ದು, ಅಲ್ಲದೆ ಆಕೆಯನ್ನು ತನ್ನ ಡಾಬಾಗೆ ಕರೆದುಕೊಂಡು ಹೋಗಿದ್ದಾನೆ ಎಂದು ಪ್ರಿಯಾಂಕ ಅಂಕಲ್ ಅರೋಪಿಸಿದ್ದಾರೆ. ಅಲ್ಲದೆ ರಾಜೇಶ್ ಜೊತೆ ಹೊರಹೋದ ಪ್ರಿಯಾಂಕ ತಡರಾತ್ರಿಯಾದರೂ ಮನೆಗೆ ವಾಪಸ್ ಆಗಲಿಲ್ಲ. ಇದರಿಂದ ಗಾಬರಿಗೊಂಡ ಆಕೆಯ ಕುಟುಂಬಸ್ಥರು ಪ್ರಿಯಾಂಕಳ ಹುಡುಕಾಟ ಆರಂಭಿಸಿದ್ದಾರೆ. ಹೀಗೆ ಹುಡುಕಡುತ್ತಿದ್ದಾಗ, ಭಾನುವಾರ ಮುಂಜಾನೆ 5 ಗಂಟೆ ಸುಮಾರಿಗೆ ರಾಜೇಶ್ ಮಾಲೀಕತ್ವದ ಡಾಬಾ ಹಿಂಬದಿಯಲ್ಲಿ ಪ್ರಿಯಾಂಕ ಮೃತದೇಹ ಪತ್ತೆಯಾಗಿದೆ ಎಂದು ಲಾಲ್ ತಿಳಿಸಿದ್ದಾರೆ.

    ರಾಜೇಶ್ ಮೊದಲು ನನ್ನ ಸೊಸೆಯ ಎದೆಗೆ ಗುಂಡು ಹಾರಿಸಿ ನಂತರ ಆತನ ತಲೆಗೆ ಶೂಟೌಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಲಾಲ್ ಪೊಲೀಸರ ಬಳಿ ಹೇಳಿದ್ದಾರೆ. ಇಬ್ಬರ ಮೃತದೇಹವೂ ಹತ್ತಿರ ಹತ್ತಿರವೇ ದೊರೆತಿದ್ದು, ಕೊಲೆ ಹಾಗೂ ಆತ್ಮಹತ್ಯೆಗೆ ಬಳಸಿದ್ದ ಪಿಸ್ತೂಲ್ ಕೂಡ ಸ್ಥಳದಲ್ಲಿ ಸಿಕ್ಕಿದೆ.

    ಘಟನೆಯ ಮಹಿತಿ ಅರಿತ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ತನಿಖೆ ನಡೆಸಿದ್ದಾರೆ. ಪಿಸ್ತಲ್ ವಶಕ್ಕೆ ಪಡೆದುಕೊಂಡಿದ್ದಾರೆ.

  • ಊಟ ಸಿಗದಕ್ಕೆ ಸೌಟ್, ಪಾತ್ರೆ, ಸಿಕ್ಕ ಸಿಕ್ಕ ವಸ್ತುವಿಂದ ಡಾಬಾ ಮಾಲೀಕರ ಮೇಲೆ 12 ಮಂದಿಯಿಂದ ಹಲ್ಲೆ!

    ಊಟ ಸಿಗದಕ್ಕೆ ಸೌಟ್, ಪಾತ್ರೆ, ಸಿಕ್ಕ ಸಿಕ್ಕ ವಸ್ತುವಿಂದ ಡಾಬಾ ಮಾಲೀಕರ ಮೇಲೆ 12 ಮಂದಿಯಿಂದ ಹಲ್ಲೆ!

    ಮಂಡ್ಯ: ಊಟದ ವಿಚಾರಕ್ಕೆ ಜಗಳ ತೆಗೆದು 12 ಜನರ ಗುಂಪೊಂದು ಡಾಬಾಗೆ ನುಗ್ಗಿ ದಾಂಧಲೆ ನಡೆಸಿದಲ್ಲದೇ ಡಾಬಾ ಮಾಲೀಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಎ ರಾಮನಹಳ್ಳಿ ಬಳಿ ನಡೆದಿದೆ.

    ಲಕ್ಷ್ಮಿ ಡಾಬಾದಲ್ಲೇ ದಾಂಧಲೆ ನಡೆದಿದ್ದು, ಮಾಲೀಕ ದೇವರಾಜು ಹಾಗೂ ಅವರ ಸಹೋದರರ ಮೇಲೆ ಮನಬಂದಂತೆ ಥಳಿಸಿರುವ ದಾಳಿಕೋರರು ಅಲ್ಲಿಂದ ಪರಾರಿಯಾಗಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಲ್ಲೆಯ ದೃಶ್ಯ ಬೆಚ್ಚಿ ಬೀಳಿಸುವಂತಿದೆ.

    ಇದೇ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ನಾಗಮಂಗಲ ಪಟ್ಟಣದ ಯುವಕರ ತಂಡವೊಂದು, ನಾಗಮಂಗಲ ಪಟ್ಟಣದ ಸಮೀಪವಿರುವ ಶ್ರೀರಾಮನಹಳ್ಳಿ ಬಳಿಯಿರುವ ಡಾಬಾಗೆ ಬಂದು ಊಟ ಕೇಳಿದ್ದಾರೆ. ಅದಾಗಲೇ ಟೈಂ ಆಗಿದ್ದರಿಂದ ಡಾಬಾದ ಮಾಲೀಕ ದೇವರಾಜು ಅವರು ಇಲ್ಲಿ ಊಟ ಖಾಲಿಯಾಗಿದೆ ಎಂದು ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಆ ಯುವಕರು ಡಾಬಾ ಮಾಲೀಕ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ, ದೇವರಾಜು ಅವರ ಮೇಲೆ ರೇಗಾಡಿಕೊಂಡು ಅಲ್ಲಿಂದ ತೆರಳಿದ್ದಾರೆ.

    ನಾವು ಬಂದು ಊಟ ಕೇಳಿದರೂ ಕೊಡಲಿಲ್ಲ ಎಂದುಕೊಂಡ ಯುವಕರ ಗುಂಪು ಮತ್ತೆ ಸಂಜೆ ಏಕಾಏಕಿ ಡಾಬಾದ ಬಳಿ ಬಂದು ಗಲಾಟೆ ಮಾಡಲಾರಂಭಿಸಿದ್ದಾರೆ. ಅಲ್ಲಿಯೇ ಕೆಲಸ ಮಾಡುತ್ತಿದ್ದ ಡಾಬಾದ ಮಾಲೀಕರಾದ ದೇವರಾಜು ಹಾಗೂ ಅವರ ಸಹೋದರ ರೇವಣ್ಣರ ಮೇಲೆ ಮಾರಕಾಸ್ತ್ರಗಳು ಮತ್ತು ಡಾಬಾದಲ್ಲಿ ಸಿಗುವ ಪಾತ್ರಗಳನ್ನೇ ತೆಗೆದುಕೊಂಡು ಮನಸ್ಸೋ ಇಚ್ಚೆ ದಾಳಿ ನಡೆಸಿ ತಾವು ಬಂದಿದ್ದ ಬೈಕ್ ನಲ್ಲೇ ಅಲ್ಲಿಂದ ತೆರಳಿದ್ದಾರೆ.

    ಸಂಜೆ 6.20 ರ ವೇಳೆಗೆ ಬೈಕಿನಲ್ಲಿ ಬಂದ ಯುವಕರ ಗುಂಪು ಮೊದಲು ಡಾಬಾದ ಒಳಗೆ ಪ್ರವೇಶಿಸಿದ್ದಾರೆ. ಒಳ ಹೋದವರೇ ಕೈಗೆ ಸಿಕ್ಕ ಅಡುಗೆ ಮಾಡುವ ವಸ್ತುಗಳನ್ನ ತೆಗೆದುಕೊಂಡು ದೇವರಾಜು ಹಾಗೂ ರೇವಣ್ಣರ ಮೇಲೆ ಹಲ್ಲೆ ನಡೆಸಿದೆ. ಅಷ್ಟು ಸಾಲದು ಎಂಬಂತೆ ಇಬ್ಬರನ್ನೂ ಡಾಬಾದ ಹೊರಗೆ ಎಳೆದುಕೊಂಡು ಬಂದು ಅಲ್ಲಿಯೂ ಕಾಲಿನಿಂದ ಒದಿದ್ದಾತ್ತಾರೆ. ಸೌಟ್ ನಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಇದಿಷ್ಟೂ ಚಿತ್ರಣ ಡಾಬಾದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಈ ಗಲಾಟೆ ನಡೆಯುವ ಕೆಲವೇ ನಿಮಿಷದ ಮುಂಚಿತವಾಗಿ ಶಾಸಕ ಎನ್ ಚಲುವರಾಯಸ್ವಾಮಿ ಅವರು ಡಾಬಾದ ಬಳಿಗೆ ಬಂದು ಹೋಗಿದ್ದರು. ಅವರ ಕಾರು ಅಲ್ಲಿಂದ ಹೋಗುತ್ತಿದ್ದಂತೆ ಯುವಕರು ಆಗಮಿಸಿ ಡಾಬಾದ ಮೇಲೆ ದಾಳಿ ನಡೆಸಿದ್ದು, ನಂತರ ಅವರ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಇದೊಂದು ರಾಜಕೀಯ ದ್ವೇಷಕ್ಕೆ ನಡೆದ ಹಲ್ಲೆ ಎಂದೇ ಹೇಳಲಾಗುತ್ತಿದೆ. ಆದರೆ, ಹಲ್ಲೆಗೊಳಗಾದವರೇ ಇದು ರಾಜಕೀಯ ದ್ವೇಷದಿಂದ ನಡೆದಿಲ್ಲ ಎಂದು ಸ್ಪಷ್ಟನೆ ನೀಡುವ ಮೂಲಕ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದ್ದಾರೆ.

  • ಊಟ ಚೆನ್ನಾಗಿಲ್ಲ ಎಂದಿದ್ದಕ್ಕೆ ಅಡುಗೆ ಪಾತ್ರೆಗಳಿಂದ ಹಲ್ಲೆ ಮಾಡಿ ಗ್ರಾಹಕನನ್ನ ಕೊಂದ ಢಾಬಾ ಸಿಬ್ಬಂದಿ

    ಊಟ ಚೆನ್ನಾಗಿಲ್ಲ ಎಂದಿದ್ದಕ್ಕೆ ಅಡುಗೆ ಪಾತ್ರೆಗಳಿಂದ ಹಲ್ಲೆ ಮಾಡಿ ಗ್ರಾಹಕನನ್ನ ಕೊಂದ ಢಾಬಾ ಸಿಬ್ಬಂದಿ

    ನವದೆಹಲಿ: 30 ವರ್ಷದ ವ್ಯಕ್ತಿಯನ್ನ ಢಾಬಾದ ಮೂವರು ಸಿಬ್ಬಂದಿ ಸೇರಿ ಕೊಲೆ ಮಾಡಿರೋ ಘಟನೆ ದೆಹಲಿಯ ಪ್ರೀತ್ ವಿಹಾರ್‍ನಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನ ಪವನ್ ಕುಮಾರ್ ಎಂದು ಗುರುತಿಸಲಾಗಿದೆ. ಪವನ್ ಅವರು ಮಂಡಾವ್ಲಿಯಲ್ಲಿ ತನ್ನದೇ ಸ್ವಂತ ಉಪಹಾರಗೃಹವನ್ನ ಹೊಂದಿದ್ದಾರೆ. ಅವರು ಭಾನುವಾರ ಸಂಜೆ ಕಮಲ್ ಢಾಬಾಗೆ ಊಟಕ್ಕೆಂದು ಹೋಗಿದ್ದು, ಅಲ್ಲಿ ನೀಡಲಾಗಿದ್ದ ಆಹಾರದ ಗುಣಮಟ್ಟದ ಬಗ್ಗೆ ಸಿಬ್ಬಂದಿಗೆ ದೂರಿದ್ದರು. ಇದರಿಂದ ಕೋಪಗೊಂಡ ಢಾಬಾ ಸಿಬ್ಬಂದಿ ಪವನ್ ಜೊತೆ ವಾಗ್ವಾದ ನಡೆಸಿದ್ದಾರೆ. ಬಳಿಕ ಢಾಬಾ ಮಾಲೀಕ ಹಾಗೂ ಮತ್ತೋರ್ವ ನೌಕರ ಸೇರಿ ಭಾರವಾದ ಪಾತ್ರೆಗಳಿಂದ ಪವನ್ ಮೇಲೆ ಹಲ್ಲೆ ಮಾಡಿದ್ದಾರೆ.

    ಪವನ್ ಅವರ ತಲೆ, ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಹಲವು ಬಾರಿ ಹೊಡೆಯಲಾಗಿದ್ದು, ಅವರು ಸ್ಥಳದಲ್ಲೇ ಕುಸಿದು ಬಿದ್ದರು ಎಂದು ವರದಿಯಾಗಿದೆ.

    ಸ್ಥಳೀಯರೊಬ್ಬರು ಕರೆ ಮಾಡಿ ವಿಷಯ ತಿಳಿಸಿದ ಬಳಿಕ ನಾವು ಸ್ಥಳಕ್ಕೆ ಹೋದೆವು. ಬಳಿಕ ಪವನ್ ಅವರನ್ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಆದ್ರೆ ಚಿಕಿತ್ಸೆ ಫಲಿಸದೇ ಭಾನುವಾರ ರಾತ್ರಿ ಪವನ್ ಸಾವನ್ನಪ್ಪಿದ್ರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಢಾಬಾ ಸಿಬ್ಬಂದಿಯಾದ ಸಚಿನ್, ಗೋವಿಂದ್ ಹಾಗೂ ಕರಣ್ ಎಂಬ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ಹಾಗೂ 302(ಕೊಲೆ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಸಮವಸ್ತ್ರದಲ್ಲೇ ಡಾಬಾಗೆ ನುಗ್ಗಿ ಮದ್ಯಪಾನ ಮಾಡಿದ ಎಎಸ್‍ಐ

    ಸಮವಸ್ತ್ರದಲ್ಲೇ ಡಾಬಾಗೆ ನುಗ್ಗಿ ಮದ್ಯಪಾನ ಮಾಡಿದ ಎಎಸ್‍ಐ

    ಬಳ್ಳಾರಿ: ಎಎಸ್‍ಐವೊಬ್ಬರು ಪೊಲೀಸ್ ಸಮವಸ್ತ್ರದಲ್ಲೇ ಡಾಬಾಗೆ ನುಗ್ಗಿ ಮದ್ಯಪಾನ ಮಾಡಿದ ಪ್ರಕರಣ ಇದೀಗ ಬಯಲಾಗಿದೆ.

    ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯ ಎಎಸ್‍ಐ ಮೋಹನಕುಮಾರ ಕಳೆದ ರಾತ್ರಿ ಹಗರಿಬೊಮ್ಮನಹಳ್ಳಿ ಹೊರವಲಯದ ಡಾಬಾ ಪರಿಶೀಲನೆ ಮಾಡೋ ನೆಪದಲ್ಲಿ ಅಡುಗೆ ಮನೆಗೆ ನುಗ್ಗಿ ಅಲ್ಲೆ ಗಡದ್ದಾಗಿ ಕಂಠಪೂರ್ತಿ ಕುಡಿದಿರುವ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಎಎಸ್‍ಐ ಮೋಹನಕುಮಾರ ಡಾಬಾ ಮೇಲೆ ಕೇಸ್ ಮಾಡೋದಾಗಿ ಬೆದರಿಸಿ ಅವರಿಂದಲೇ ಎಣ್ಣೆ ತರಿಸಿಕೊಂಡು ಸಮವಸ್ತ್ರದಲ್ಲೆ ಎಣ್ಣೆ ಏರಿಸುವುದು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದ್ರೂ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.