Tag: DG

  • ಡಿಜೆ ಹಾಕಿ ಭರ್ಜರಿ ಮದುವೆ ಪಾರ್ಟಿ- ವಿಡಿಯೋ ವೈರಲ್

    ಡಿಜೆ ಹಾಕಿ ಭರ್ಜರಿ ಮದುವೆ ಪಾರ್ಟಿ- ವಿಡಿಯೋ ವೈರಲ್

    – 200ಕ್ಕೂ ಹೆಚ್ಚು ಮಂದಿ ಸಾಮೂಹಿಕ ಡ್ಯಾನ್ಸ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದಲ್ಲಿ ಅದ್ಧೂರಿಯಾಗಿ ಮದುವೆ ಪಾರ್ಟಿ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಅಮ್ಮುಂಜೆ ಗ್ರಾಮದಲ್ಲಿ ಡಿಜೆ ಹಾಕಿಕೊಂಡು ಹಲವಾರು ಜನರು ಸಾಮೂಹಿಕ ಡ್ಯಾನ್ಸ್ ಮಾಡಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಜನರು ಮೆಹಂದಿ ಪಾರ್ಟಿಯಲ್ಲಿ ಭಾಗಿಯಾಗಿದ್ದು, ಮಾಸ್ಕ್ ಕೂಡ ಹಾಕದೇ ಯುವಕರು ಕುಣಿದು ಕುಪ್ಪಳಿಸಿದ್ದಾರೆ. ಅಲ್ಲದೇ ಸಾಮಾಜಿಕ ಅಂತರ ಉಲ್ಲಂಘಿಸಿ ಯುವಕರು ಡ್ಯಾನ್ಸ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಕೊರೊನಾ ಸಂದರ್ಭದಲ್ಲಿ 50ಕ್ಕಿಂತ ಅಧಿಕ ಜನರು ಮದುವೆ, ಸಮಾರಂಭದಲ್ಲಿ ಭಾಗಿಯಾಗಬಾರದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಮದುವೆಯ ಮೊದಲ ಕಾರ್ಯಕ್ರಮವಾದ ಮೆಹಂದಿ ಶಾಸ್ತ್ರದಲ್ಲಿ ನೂರಾರು ಜನರು ಸೇರಿ ಪಾರ್ಟಿ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಹೀಗಾಗಿ ಎಸ್‍ಪಿ ಅವರು ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸ್ಥಳೀಯ ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ.

    ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ದೊಡ್ಡ ಪಾರ್ಟಿ ಬೇಕಿತ್ತಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಮನೆಯಲ್ಲಿಯೇ ಈ ರೀತಿಯ ಪಾರ್ಟಿಯನ್ನು ಆಯೋಜನೆ ಮಾಡಿಕೊಂಡಿದ್ದಾರೆ. ಹೀಗಾಗಿ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಎಸ್‍ಪಿ ಲಕ್ಷ್ಮಿ ಪ್ರಸಾದ್, ಶನಿವಾರ ಸಂಜೆ ಈ ಎರಡು ವಿಡಿಯೋ ಲಭ್ಯವಾಗಿದೆ. ಮದುವೆ ಮನೆಯಲ್ಲಿ ನಡೆದಿದೆ. ವಿಚಾರಣೆ ಮಾಡಿದಾಗ ಕಳೆದ ವರ್ಷ ಈ ಪಾರ್ಟಿ ಮಾಡಿರುವುದು ಎಂದು ಯುವಕರು ಹೇಳುತ್ತಿದ್ದಾರೆ. ಹೀಗಾಗಿ ನಾವು ಈ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡುತ್ತಿದ್ದೇವೆ. ಒಂದು ವೇಳೆ ಲಾಕ್‍ಡೌನ್ ಸಂದರ್ಭದಲ್ಲಿ ಈ ರೀತಿ ಪಾರ್ಟಿ ಮಾಡಿವುದು ಖಚಿತವಾದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

    ಸಂಡೇ ಲಾಕ್‍ಡೌನ್:
    ಇನ್ನೂ ಜಿಲ್ಲೆಯಲ್ಲಿ ಸಂಡೇ ಲಾಕ್‍ಡೌನ್ ಹಿನ್ನೆಲೆಯಲ್ಲಿ ಎಲ್ಲರೂ ಕೂಡ ತಮ್ಮ ತಮ್ಮ ಮನೆಗಳಲ್ಲೇ ಇದ್ದಾರೆ. ಹಾಲು, ಪೇಪರ್, ಮೆಡಿಕಲ್, ವೈದ್ಯಕೀಯ ಸೇವೆಗೆ ಮಾತ್ರ ಅವಕಾಶ ನೀಡಲಾಗಿದೆ. ತರಕಾರಿ, ಮೀನು, ಮಾಂಸ ಮಾರಾಟ ಸೇರಿದಂತೆ ಉಳಿದೆಲ್ಲ ಅಂಗಡಿ ಮುಂಗಟ್ಟುಗಳನ್ನು ಮಾಡಲಾಗಿದೆ. ಜನ ರಸ್ತೆಗಿಳಿದರೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳುವ ಬಗ್ಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿತ್ತು. ವಾಹನಗಳು ಸಹ ರಸ್ತೆಗಿಳಿಯದಂತೆ ಪೋಲಿಸರು ಪ್ರಮುಖ ರಸ್ತೆಗಳಲ್ಲಿ ನಾಕಾಬಂಧಿಯನ್ನು ಹಾಕಿದ್ದಾರೆ.

  • ಡಿಜಿ-ಐಜಿಪಿ ನೀಲಮಣಿ ಸೇರಿ ಮೂವರು ಐಪಿಎಸ್ ಅಧಿಕಾರಿಗಳು ನಿವೃತ್ತಿ

    ಡಿಜಿ-ಐಜಿಪಿ ನೀಲಮಣಿ ಸೇರಿ ಮೂವರು ಐಪಿಎಸ್ ಅಧಿಕಾರಿಗಳು ನಿವೃತ್ತಿ

    ಬೆಂಗಳೂರು: ರಾಜ್ಯದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕರಾಗಿ ಎರಡುವರೆ ವರ್ಷ ಮೂರು ತಿಂಗಳ ಕಾಲ ಅಧಿಕಾರ ನಡೆಸಿದ ನೀಲಮಣಿ ಎನ್.ರಾಜು ಇಂದು ಸೇವೆಯಿಂದ ನಿವೃತ್ತಿಹೊಂದಿದರು.

    ಡಿಜಿ, ಐಜಿಪಿ ಜೊತೆ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳು ನಿವೃತ್ತಿ ಪಡೆದರು. ಅಗ್ನಿಶಾಮಕ ದಳದ ಡಿಜಿಪಿ ಎಂ.ಎನ್.ರೆಡ್ಡಿ, ವಸತಿ ಮೂಲ ಸೌಕರ್ಯ ನಿಗಮದ ಡಿಜಿಪಿ ನಿವೃತ್ತಿಯಾದರು. ನಿವೃತ್ತಿಯಾದ ಮೂವರು ಅಧಿಕಾರಿಗಳಿಗೆ ಕೋರಮಂಗಲ ಕೆಎಸ್‌ಆರ್‌ಪಿ ಮೈದಾನದಲ್ಲಿ ಬಿಳ್ಕೋಡೆಗೆ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು.

    ಕಾರ್ಯಕ್ರಮದಲ್ಲಿ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಗೌರವ ವಂದನೆ ಸಲ್ಲಿಸಲಾಯಿತು. ಹಿರಿಯ ಅಧಿಕಾರಿಗಳ ಬಿಳ್ಕೋಡೆಗೆ ಕಾರ್ಯಕ್ರಮಕ್ಕೆ ಗೃಹ ಇಲಾಖೆ ಅಪರ ಕಾರ್ಯದರ್ಶಿ ರಜನೀಶ್ ಗೊಯಲ್, ಇಲಾಖೆಯ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

    ರಾಜ್ಯದಲ್ಲಿ ಪೊಲೀಸ್ ಇಲಾಖೆಯ ಸಾರಥಿಯಾಗಿ ಕೆಲಸ ಮಾಡುವುದಕ್ಕೆ ಸಹಕಾರ ನೀಡಿದ ಸರ್ಕಾರಕ್ಕೆ ಹಾಗೂ ಸಹೋದ್ಯೋಗಿಗಳಿಗೆ ಧನ್ಯವಾದಗಳು. ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ಭದ್ರತೆಗೆ ಕೇಂದ್ರ ಚುನಾವಣಾ ಆಯೋಗ ಪ್ರಶಂಸೆಯ ಪತ್ರಕೊಟ್ಟಿದೆ. ಇದು ಕರ್ನಾಟಕ ಪೊಲೀಸರಿಗೆ ಸಿಕ್ಕ ದೊಡ್ಡಗೌರವ. ಕಳೆದ ಎರಡು ವರ್ಷ ಮೂರು ತಿಂಗಳಲ್ಲಿ ಇಲಾಖೆಯಲ್ಲಿ ಜನಸ್ನೇಹಿ ಪೊಲೀಸ್ ಸೇರಿ ಹಲವು ರೀತಿಯ ಬದಲಾವಣೆಗಳನ್ನ ಮಾಡಿದ್ದೇನೆ. ಇಲಾಖೆಯಲ್ಲಿ 100 ಪರ್ಸೆಂಟ್ ಯಶಸ್ಸು ಖಂಡಿರುವ ಹೆಮ್ಮೆ ಇದೆ ಎಂದು ತನ್ನ ಅಧಿಕಾರದ ಅವಧಿಯಲ್ಲಾದ ಕೆಲಸಗಳು ಹಾಗೂ ಘಟನೆಗಳ ಬಗ್ಗೆ ನೀಲಮಣಿ ಅವರು ಮೇಲಕು ಹಾಕಿದರು.

  • ಮಹಿಳಾ ಪೊಲೀಸರು ಸೀರೆ ಉಡುವಂತಿಲ್ಲ, ಕೈ ತುಂಬ ಬಳೆ ತೊಡುವಂತಿಲ್ಲ: ಹೊಸ ಡ್ರೆಸ್ ಕೋಡ್‍ನಲ್ಲಿ ಏನಿದೆ?

    ಮಹಿಳಾ ಪೊಲೀಸರು ಸೀರೆ ಉಡುವಂತಿಲ್ಲ, ಕೈ ತುಂಬ ಬಳೆ ತೊಡುವಂತಿಲ್ಲ: ಹೊಸ ಡ್ರೆಸ್ ಕೋಡ್‍ನಲ್ಲಿ ಏನಿದೆ?

    ಬೆಂಗಳೂರು: ಕರ್ತವ್ಯ ನಿರತ ಮಹಿಳಾ ಪೊಲೀಸರು ಇನ್ನು ಮುಂದೆ ಸೀರೆಯ ಬದಲು ಪ್ಯಾಂಟು, ಶರ್ಟ್ ಕಡ್ಡಾಯವಾಗಿ ಧರಿಸಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಸುತ್ತೋಲೆ ಹೊರಡಿಸಿದ್ದಾರೆ.

    ಈ ಸಂಬಂಧ ಅಕ್ಟೋಬರ್ 16 ರಂದು ಸುತ್ತೋಲೆ ಹೊರಡಿಸಲಾಗಿದ್ದು, ಈಗ ಇಲಾಖೆಯಲ್ಲೇ ಪರ ವಿರೋಧ ಚರ್ಚೆ ಆರಂಭವಾಗಿದೆ. ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮತ್ತು ಕೆಲವು ಅಧಿಕಾರಿಗಳ ಸೂಚನೆಯ ಮೇರೆಗೆ ಮಹಿಳಾ ಪೊಲೀಸರಿಗೆ ಖಾಕಿ ಸೀರೆಯ ಬದಲು ಪ್ಯಾಂಟು-ಶರ್ಟ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಇದರಿಂದ ಅಪರಾಧಗಳನ್ನ ತಡೆಯಲು ಸುಲಭವಾಗುತ್ತದೆ ಎಂದು ಎಂದು ಡಿಜಿ ನೀಲಮಣಿ ಎನ್ ರಾಜು ಹೇಳಿದ್ದಾರೆ.

    ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಸರಗಳ್ಳತನ ಇತ್ಯಾದಿ ಅಪರಾಧಗಳನ್ನು ಎಸಗುವ ಆರೋಪಿಗಳನ್ನು ಹಿಡಿಯಲು ಸೀರೆ ತೊಟ್ಟ ಮಹಿಳಾ ಸಿಬ್ಬಂದಿಗೆ ಓಡಲು ಕಷ್ಟವಾಗುತ್ತದೆ ಇದರಿಂದ ಖಾಕಿ ಸೀರೆಯ ಬದಲು ಪ್ಯಾಂಟು-ಶರ್ಟ್ ಮತ್ತು ಬೂಟನ್ನು ಧರಿಸಿದ್ರೆ ಹೆಚ್ಚು ಅನುಕೂಲವಾಗುತ್ತದೆ ಎನ್ನುವ ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಈ ಸುತ್ತೋಲೆಯನ್ನು ಹೊರಡಿಸಲಾಗಿದೆ.

    ಈ ಸಂಬಂಧ ಹಿರಿಯ ಅಧಿಕಾರಿಗಳು ಸೇರಿದಂತೆ ಮಹಿಳಾ ಪೊಲೀಸರ ಜೊತೆ ಮಾತುಕತೆ ನಡೆಸಿದ್ದೇವೆ. ಕರ್ತವ್ಯ ನಿರ್ವಹಿಸುವ ಮಹಿಳಾ ಪೊಲೀಸರು ಪ್ಯಾಂಟು, ಶರ್ಟ್ ಧರಿಸುವುದು ಕಡ್ಡಾಯ ಎನ್ನುವ ಕಾನೂನು ಮೊದಲಿನಿಂದಲೇ ಇದೆ. ಆದರೆ ಅದನ್ನು ಕೆಲವು ಬದಲಾವಣೆಯೊಂದಿಗೆ ಈಗ ಜಾರಿಗೆ ತರುತ್ತಿದ್ದೇವೆ ಅಷ್ಟೇ ಎಂದು ನೀಲಮಣಿ ರಾಜು ಸ್ಪಷ್ಟನೆ ನೀಡಿದ್ದಾರೆ.

    ಹೊಸ ಡ್ರೆಸ್ ಕೋಡ್‍ನಲ್ಲಿ ಹೇಗಿರಬೇಕು?

    ಪ್ಯಾಂಟು-ಶರ್ಟು, ಬೆಲ್ಟ್ ಮತ್ತು ಬೂಟ್ಸ್ ಇರುವ ಸಮವಸ್ತ್ರವನ್ನು ಕರ್ತವ್ಯದ ಅವಧಿಯಲ್ಲಿ ಕಡ್ಡಾಯವಾಗಿ ಧರಿಸಬೇಕು. ತಲೆ ಕೂದಲನ್ನು ಇಳಿಬಿಟ್ಟು ಓಡಾಡುವಂತಿಲ್ಲ, ಹೂವನ್ನ ಮುಡಿಯುವಂತಿಲ್ಲ, ಕಪ್ಪು ಬಣ್ಣವನ್ನ ಬಿಟ್ಟರೆ ಬೇರೆ ಯಾವ ಬಣ್ಣವನ್ನು ಕೂದಲಿಗೆ ಹಾಕುವಂತಿಲ್ಲ. ಕೂದಲನ್ನು ಗಂಟು ಕಟ್ಟಿ, ಕಪ್ಪು ಬಣ್ಣದ ನೆಟ್ ಬ್ಯಾಂಡ್ ಕಟ್ಟಿ ಹೇರ್ ಕ್ಲಿಪ್ ಹಾಕಬೇಕು. ಚಿಕ್ಕದಾದ ಕಿವಿಯೋಲೆ ಹಾಕಬಹುದು. ಬಿಂದಿ ಚಿಕ್ಕದಾಗಿರಬೇಕು. ಕೈಗಳಿಗೆ ತಲಾ ಒಂದು ಬಳೆಯನ್ನ ಹಾಕಬಹುದು.

    ಸಿಬ್ಬಂದಿಯಿಂದ ವಿರೋಧ:
    ಹೊಸ ಡ್ರೆಸ್ ಕೋಡ್‍ಗೆ ಕೆಲ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದ್ದು, ದಪ್ಪಗಿರುವ ಮಹಿಳೆಯರು ಪ್ಯಾಂಟು ಶರ್ಟ್ ಹಾಕಿಕೊಂಡು ಓಡಾಡುವುದು ಕಷ್ಟವಾಗುತ್ತದೆ ಎಂದಿದ್ದಾರೆ. ಅಲ್ಲದೇ 40 ವರ್ಷ ದಾಟಿದ ಮಹಿಳಾ ಸಿಬ್ಬಂದಿಗೆ ಈ ಆದೇಶದಿಂದ ರಿಯಾಯಿತಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
  • ಡಿಜಿ ನೀಲಮಣಿರಾಜುಗೆ ಸಿಎಂ ಎಚ್.ಡಿ ಕುಮಾರಸ್ವಾಮಿ ಸೂಚನೆ

    ಡಿಜಿ ನೀಲಮಣಿರಾಜುಗೆ ಸಿಎಂ ಎಚ್.ಡಿ ಕುಮಾರಸ್ವಾಮಿ ಸೂಚನೆ

    ಬೆಂಗಳೂರು: ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದ ಬಹುಮತ ಸಾಬೀತು ಹಿನ್ನೆಲೆಯಲ್ಲಿ ಡಿಜಿ ನೀಲಮಣಿರಾಜು ಅವರಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.

    ಕುಮಾರಸ್ವಾಮಿ ಮನೆಗೆ ಡಿಜಿ ನೀಲಮಣಿರಾಜು ಭೇಟಿ ನೀಡಿ ಚರ್ಚೆ ನಡೆಸಿದ್ದು, ಭದ್ರತೆಯ ಬಗ್ಗೆ ಸಿಎಂ ಮಾಹಿತಿ ಪಡೆದಿದ್ದಾರೆ. ಈ ವೇಳೆ ಸಿಎಂ ಅವರು, ಯಾವುದೇ ಕಾರಣಕ್ಕೂ ಬಹುಮತ ಸಾಬೀತುಪಡಿಸುವ ಸಮಯದಲ್ಲಿ ಗೊಂದಲ, ಗಲಾಟೆ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೇ ಯಾವುದೇ ಅಹಿತಕರ ಘಟನೆ ನಡೆಯದಂತೆ ಕೂಡ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚನೆ ನೀಡಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

    ಶಾಸಕರು ವಿಧಾನಸೌಧಕ್ಕೆ ಬರುವ ಸಮಯದಲ್ಲಿ ಗೊಂದಲ ಸೃಷ್ಟಿಯಾಗದಂತೆ ನೋಡಿಕೊಳ್ಳುವಂತೆ ತಿಳಿಸಿದ್ದಾರೆ. ಸಿಎಂ ಜೊತೆ ಚರ್ಚೆ ನಡೆಸಿ ಡಿಜಿ ನೀಲಮಣಿ ರಾಜು ಹೊರಟ ಬಳಿಕ ಇಂಟಲಿಜೆನ್ಸ್ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಅವರ ಬಳಿಯೂ ಸಿಎಂ ಮಾಹಿತಿ ಪಡೆದಿದ್ದಾರೆ.

    ಸದ್ಯ ವಿಧಾನಸೌಧದ ಸುತ್ತಾಮುತ್ತಾ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

  • ರಾಜ್ಯದ ಮೊದಲ ಮಹಿಳಾ ಡಿಜಿಯಾಗಿ ನೀಲಮಣಿ ರಾಜು ಆಯ್ಕೆ

    ರಾಜ್ಯದ ಮೊದಲ ಮಹಿಳಾ ಡಿಜಿಯಾಗಿ ನೀಲಮಣಿ ರಾಜು ಆಯ್ಕೆ

    ಬೆಂಗಳೂರು: ಪೊಲೀಸ್ ಮಹಾ ನಿರ್ದೇಶಕರ ಹುದ್ದೆಗೆ ನೀಲಮಣಿ ರಾಜು ಆಯ್ಕೆ ಆಗಿದ್ದು, ಈ ಮೂಲಕ ಈ ಹುದ್ದೆ ಏರಿದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಪೊಲೀಸ್ ಮಹಾನಿರ್ದೇಶಕ ದತ್ತಾ ಅವರ ಅಧಿಕಾರಾವಧಿ ಇಂದಿಗೆ(ಅಕ್ಟೋಬರ್ 31) ಮುಕ್ತಾಯವಾಗಲಿದ್ದು, ಈ ಹುದ್ದೆಗೆ ಹುದ್ದೆಗೆ ಹಿರಿತನದ ಆಧಾರದಲ್ಲಿ ನೀಲಮಣಿ ರಾಜು ಅವರ ಹೆಸರು ಮುಂದಿದ್ದ ಹಿನ್ನೆಲೆಯಲ್ಲಿ ಸರ್ಕಾರ ಅವರನ್ನೇ ಆಯ್ಕೆ ಮಾಡಿದೆ.

    ಉತ್ತರಾಖಂಡ್ ಮೂಲದ ನೀಲಮಣಿ ರಾಜು ನೀಲಮಣಿ ರಾಜು ಅವರು 1983ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದು 23 ವರ್ಷಗಳ ಕಾಲ ಕೇಂದ್ರ ಸೇವೆಯಲ್ಲಿ ಸೇವೆ ಸಲ್ಲಿಸಿದ್ದರು. ಎಂಎ, ಎಂಬಿಎ, ಎಂ.ಫಿಲ್ ಪದವೀಧರೆಯಾಗಿರುವ ಇವರ ಸೇವಾವಧಿಯು 2020ರ ಜನವರಿ ತಿಂಗಳವರೆಗೆ ಇರಲಿದೆ.

    ಸಂಜೆ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಿರ್ಗಮಿಸುತ್ತಿರುವ ಪೊಲೀಸ್ ಮಹಾ ನಿರ್ದೇಶಕ ರೂಪಕ್ ಕುಮಾರ್ ದತ್ತ ಅವರು ನೀಲಮಣಿ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ.

    ರಾಜ್ಯ ಪೊಲೀಸ್ ಮುಖ್ಯಸ್ಥ ಹುದ್ದೆಗೆ ಹಿರಿಯ ಐಪಿಎಸ್ ಅಧಿಕಾರಿ, ಕನ್ನಡಿಗ ಮೈಸೂರು ಮೂಲದ ಕಿಶೋರ್ ಚಂದ್ರ ಹಾಗೂ ಭ್ರಷ್ಟಾಚಾರ ನಿಗ್ರಹ ದಳ ಮುಖ್ಯಸ್ಥ ಎಂ.ಎನ್ ರೆಡ್ಡಿ ರೇಸ್‍ನಲ್ಲಿದ್ದರು.

  • ನೂತನ ಪೊಲೀಸ್ ಮಹಾನಿರ್ದೇಶಕರ ಆಯ್ಕೆಗೆ ಪೈಪೋಟಿ

    ನೂತನ ಪೊಲೀಸ್ ಮಹಾನಿರ್ದೇಶಕರ ಆಯ್ಕೆಗೆ ಪೈಪೋಟಿ

    ಬೆಂಗಳೂರು: ನೂತನ ಪೊಲೀಸ್ ಮಹಾನಿರ್ದೇಶಕರ ಆಯ್ಕೆಗೆ ದಿನಗಣನೆ ಹೆಚ್ಚಾಗಿರೋ ಬೆನ್ನಲ್ಲೆ ಪೈಪೋಟಿಯೂ ಹೆಚ್ಚಾಗಿದೆ. ಈಗಾಗ್ಲೇ ಮೂರು ಅಧಿಕಾರಿಗಳು ರೇಸ್‍ನಲ್ಲಿದ್ದು ನಾ ಮುಂದು ತಾ ಮುಂದು ಅಂತಿದ್ದಾರೆ.

    ಹಿರಿಯ ಅಧಿಕಾರಿಗಳಾದ ನೀಲಮಣಿರಾಜು, ಎಂಎನ್ ರೆಡ್ಡಿ ಮತ್ತು ಕಿಶೋರ್ ಚಂದ್ರ ನಡುವೆ ಪೈಪೋಟಿ ಎದುರಾಗಿದೆ. ಆದ್ರೆ ರಾಜ್ಯ ಸರ್ಕಾರ ನೀಲಮಣಿರಾಜು ಅವರಿಗೆ ಪೊಲೀಸ್ ಮಹಾನಿರ್ದೇಶಕರ ಸ್ಥಾನವನ್ನು ನೀಡೋದಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗ್ತಿದೆ.

    ನೀಲಮಣಿ ರಾಜು ಅವರಿಗೆ ಸ್ಥಾನ ನೀಡಿದ್ರೆ ರಾಜ್ಯದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕರಾಗುತ್ತಾರೆ. ಅದರ ಲಾಭವನ್ನು ಪಡೆಯಲು ಸರ್ಕಾರ ಪ್ಲಾನ್ ಕೂಡ ಮಾಡ್ತಿರೋದು ಸುಳ್ಳಲ್ಲ. ಆದ್ರೆ ಕಿಶೋರ್ ಚಂದ್ರ ಮತ್ತು ಎಂಎನ್ ರೆಡ್ಡಿ ನೇರಾನೇರ ಪೈಪೋಟಿ ಮಾಡ್ತಾ ಇದ್ದಾರೆ ಎನ್ನಲಾಗಿದೆ. ರೂಪ್ ಕುಮಾರ್ ದತ್ತಾ ಅವಧಿ ಈ ತಿಂಗಳಾಂತ್ಯದಲ್ಲಿ ಕೊನೆಗೊಳ್ಳಲಿದೆ.