Tag: devotee

  • ರಾಯರ 349ನೇ ಆರಾಧನೆಗೆ ಭಕ್ತರಿಗೆ ಪ್ರವೇಶವಿಲ್ಲ

    ರಾಯರ 349ನೇ ಆರಾಧನೆಗೆ ಭಕ್ತರಿಗೆ ಪ್ರವೇಶವಿಲ್ಲ

    – ಮಂತ್ರಾಲಯ ವಾಹಿನಿಯಲ್ಲಿ ನೇರಪ್ರಸಾರ

    ರಾಯಚೂರು: ಮಂತ್ರಾಲಯದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ 349ನೇ ಆರಾಧನಾ ಮಹೋತ್ಸವ ಆಗಸ್ಟ್ 2 ರಿಂದ 8 ರವರೆಗೆ ನಡೆಯಲಿದೆ. ಆದ್ರೆ ಕೊರೊನಾ ಬಾಧೆ ಹಿನ್ನೆಲೆ ಈ ಬಾರಿ ಮಂತ್ರಾಲಯ ಮಠಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶವಿಲ್ಲ. ಹೀಗಾಗಿ ಮಠದ ಆಡಳಿದ ಮಂಡಳಿ ಆರಾಧನಾ ಸಪ್ತರಾತ್ರೋತ್ಸವದ ಎಲ್ಲಾ ಕಾರ್ಯಕ್ರಮಗಳನ್ನ ಮಠದ ಅಧಿಕೃತ ಯೂ ಟ್ಯೂಬ್ ಚಾನಲ್ “ಮಂತ್ರಾಲಯ ವಾಹಿನಿ”ಯಲ್ಲಿ ನೇರಪ್ರಸಾರ ಮಾಡಲು ನಿರ್ಧರಿಸಿದೆ.

    ಆರಾಧನಾ ಮಹೋತ್ಸವಕ್ಕೆ ಮಠದಲ್ಲಿ 50 ಕ್ಕಿಂತ ಕಡಿಮೆ ಜನರಿಗೆ ಮಾತ್ರ ಅವಕಾಶ ಇರುವುದರಿಂದ ಯಾವುದೇ ಭಕ್ತರು ಮಠಕ್ಕೆ ಬರುವುದು ಬೇಡ. ಅಲ್ಲದೆ ನಾನಾ ರಾಜ್ಯಗಳಲ್ಲಿ ಕೊರೊನಾ ಹಿನ್ನೆಲೆ ಅಂತರರಾಜ್ಯ ಓಡಾಟಕ್ಕೆ ನಿರ್ಭಂದ ಹೇರಿವೆ. ಹೀಗಾಗಿ ಖಾಸಗಿ ವಾಹನ, ಸ್ವಂತ ವಾಹನ, ಪಾದಯಾತ್ರೆ ಸೇರಿದಂತೆ ಯಾವುದೇ ರೀತಿಯಲ್ಲಿ ಭಕ್ತರು ಮಠಕ್ಕೆ ಬರುವುದು ಬೇಡ. ಇದ್ದ ಜಾಗದಲ್ಲೇ ರಾಯರನ್ನ ಸ್ಮರಿಸಿ ಆರಾಧನೆ ಮಾಡಬೇಕು ಅಂತ ಮನವಿ ಮಾಡಲಾಗಿದೆ.

    ಮಂತ್ರಾಲಯ ಮಠದ ಪ್ರಾಕಾರದಲ್ಲಿ ಮಾತ್ರ ಕಾರ್ಯಕ್ರಮಗಳು ನಡೆಯುತ್ತಿದ್ದು ಧಾರ್ಮಿಕ, ಆಧ್ಯಾತ್ಮಿಕ, ಉತ್ಸವ, ಪ್ರವಚನ ಸೇರಿ ಎಲ್ಲಾ ಕಾರ್ಯಕ್ರಮಗಳ ನೇರ ಪ್ರಸಾರ ಮಾಡಲಾಗುವುದು. ಒಂದು ವೇಳೆ ಭಕ್ತರು ಮಠಕ್ಕೆ ಬಂದರೆ ಇಲ್ಲಿ ವಸತಿ ವ್ಯವಸ್ಥೆಯೂ ಇಲ್ಲಾ, ದರ್ಶನಕ್ಕೂ ಅವಕಾಶವಿಲ್ಲ. ಕೊರೊನಾ ಮುಗಿದ ಬಳಿಕ ಭಕ್ತರಿಗಾಗಿ ಆರಾಧನಾ ಸಂಸ್ಮರಣೋತ್ಸವ ಕಾರ್ಯಕ್ರಮವನ್ನ ಆಯೋಜಿಸಲಾಗುವುದು ಇದರಲ್ಲಿ ಎಲ್ಲಾ ಭಕ್ತರು ಭಾಗವಹಿಸಬಹುದು ಅಂತ ಮಂತ್ರಾಲಯ ಮಠದ ಆಡಳಿತ ಮಂಡಳಿ ತಿಳಿಸಿದೆ.

  • ಒಂದೊತ್ತು ಊಟಕ್ಕೂ ಪರದಾಡ್ತಿದ್ದ ಭಕ್ತನಿಂದ 10 ಕೋಟಿ ಮೌಲ್ಯದ ಚಿನ್ನದ ತೇರು ಅರ್ಪಣೆ

    ಒಂದೊತ್ತು ಊಟಕ್ಕೂ ಪರದಾಡ್ತಿದ್ದ ಭಕ್ತನಿಂದ 10 ಕೋಟಿ ಮೌಲ್ಯದ ಚಿನ್ನದ ತೇರು ಅರ್ಪಣೆ

    – ತನ್ನ ದುಡಿಮೆಯಲ್ಲಿ ಸಂಪಾದಿಸಿದ ಆಸ್ತಿ ಮಾರಾಟ
    – ಸಿದ್ಧಲಿಂಗೇಶ್ವರ ದೇವರಿಗೆ 10 ಕೋಟಿ ವೆಚ್ಚದ ಚಿನ್ನದ ತೇರು

    ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿ ದೇವರಿಗೆ ಭಕ್ತರೊಬ್ಬರು ಸುಮಾರು 10 ಕೋಟಿ ರೂ. ಮೌಲ್ಯದ  ಚಿನ್ನದ ತೇರನ್ನು ಕಾಣಿಕೆಯಾಗಿ ನೀಡಿದ್ದಾರೆ.

    ಕುಣಿಗಲ್ ತಾಲೂಕಿನ ದೇವಕನ್ನಸಂದ್ರದ ಶಿವಣ್ಣ ತೋಂಟದಾರ್ಯ ಎಂಬುವರು ದೇವರಿಗೆ ಚಿನ್ನದ ತೇರನ್ನ ಸಮರ್ಪಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಶಿವಣ್ಣ ಅವರಿಗೆ ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇತ್ತಂತೆ. ಆಗ ಎಡೆಯೂರು ಸಿದ್ಧಲಿಂಗೇಶ್ವರ ದೇವರು ಕೈ ಹಿಡಿದು ಕೋಟ್ಯಂತರ ರೂ. ಸಂಪಾದನೆ ಮಾಡುವಂತೆ ಆಶೀರ್ವಾದ ಮಾಡಿದ್ದರಂತೆ. ಹೀಗಾಗಿ ದೇವರ ಕೃಪೆಯಿಂದ ತಾನು ಶ್ರೀಮಂತನಾಗಿದ್ದು, ದೇವರಿಗೆ ಕಾಣಿಕೆ ಕೊಡಬೇಕು ಎಂದು ಬಯಸಿ ಕುಟುಂಬ ಸಮೇತವಾಗಿ ಬಂದು ಚಿನ್ನದ ತೇರನ್ನ ಸಮರ್ಪಿಸಿದ್ದಾರೆ.

    ಶಿವಣ್ಣ 50 ವರ್ಷದ ಹಿಂದೆ ಉಟ್ಟ ಬಟ್ಟೆಯಲ್ಲಿ ಬೆಂಗಳೂರಿಗೆ ಹೋದರು. ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಕೂಲಿ ಮಾಡದೆ ಬದುಕಿಲ್ಲ ಎನ್ನುವ ಸ್ಥಿತಿಯಲ್ಲಿ ಕುಟುಂಬ ಇತ್ತು. ಅಂದಿನಿಂದ ಕೆಲ ಕಾಲ ಖಾಸಗಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದರು. ನಂತರ ತರಕಾರಿ ವ್ಯಾಪಾರ ಮಾಡಿದರು. ಬಳಿಕ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕಾಲಿಟ್ಟರು. ಇದೀಗ ಶಿವಣ್ಣನವರು ಬೆಂಗಳೂರಿನ ಪ್ರಭಾವಿ ರಿಯಲ್ ಎಸ್ಟೇಟ್ ಉದ್ಯಮಿಗಳಲ್ಲಿ ಒಬ್ಬರು. ಅಂದು ಧೈರ್ಯ ತುಂಬಿದ ದೈವಕ್ಕೆ ಏನಾದರೂ ಮಾಡಬೇಕು ಎನ್ನುವ ಬಯಕೆಯ ಹಿನ್ನೆಲೆಯಲ್ಲಿ ತಮ್ಮ ಹೆಸರಿಗಿದ್ದ ಸೈಟ್‍ಗಳನ್ನ ಮಾರಿ ಎಡೆಯೂರು ಸಿದ್ಧಲಿಂಗೇಶ್ವರನಿಗೆ 10 ಕೋಟಿ ಮೌಲ್ಯದ ಚಿನ್ನದ ತೇರು ನೀಡಿದ್ದಾರೆ ಎಂದು ಪ್ರಧಾನ ಅರ್ಚಕರು ಶಿವಮೂರ್ತಿಯ್ಯ ತಿಳಿಸಿದ್ದಾರೆ.

    ಶಿವಣ್ಣ ತಾವು ಹಂತ ಹಂತವಾಗಿ ಜೀವನದಲ್ಲಿ ಮೇಲಕ್ಕೆ ಏರುತಿದ್ದಂತೆ ಎಡೆಯೂರು ಸಿದ್ಧಲಿಂಗೇಶ್ವರನಿಗೆ ವಿಶೇಷ ಕಾಣಿಕೆ, ದೇವಸ್ಥಾನದ ಸೇವಾಕಾರ್ಯ ಮಾಡುತ್ತಿದ್ದರು. ಈ ಹಿಂದೆ ಕಗ್ಗೆರೆ ಸಿದ್ಧಲಿಂಗೇಶ್ವರನಿಗೆ ಬೆಳ್ಳಿಯ ಮೂರ್ತಿ ಅರ್ಪಿಸಿದ್ದರು. ಇದೀಗ ಶಿವಣ್ಣ ಕೊಟ್ಟ ಚಿನ್ನದ ತೇರು ಶ್ರೀಕ್ಷೇತ್ರದ ಜಾತ್ರೆ ವೇಳೆ ರಥದಲ್ಲಿ ಅಲಂಕರಿಸಿ ಎಳೆಯಲಾಗುವುದು.

  • ಶಬರಿಮಲೆಯಲ್ಲಿ ಮಿಸ್- ಊರಿಗೆ ಹಿಂದಿರುಗಿದ 2 ಗಂಟೆಯಲ್ಲೇ ಪರ್ಸ್ ಪತ್ತೆ

    ಶಬರಿಮಲೆಯಲ್ಲಿ ಮಿಸ್- ಊರಿಗೆ ಹಿಂದಿರುಗಿದ 2 ಗಂಟೆಯಲ್ಲೇ ಪರ್ಸ್ ಪತ್ತೆ

    – ಶಬರಿಮಲೆಯಲ್ಲಿ ಕಳೆದು ಹೋದ ಪರ್ಸ್ ಮಂಗ್ಳೂರಲ್ಲಿ ಪ್ರತ್ಯಕ್ಷ
    – ಅಯ್ಯಪ್ಪನ ಮಹಿಮೆಗೆ ಶರಣಾದ ಭಕ್ತ

    ಮಂಗಳೂರು: ಶಬರಿಮಲೆಯ ಅಯ್ಯಪ್ಪನ ಸನ್ನಿಧಾನದಲ್ಲಿ ಕಳೆದು ಹೋಗಿದ್ದ ಭಕ್ತರೊಬ್ಬರ ಪರ್ಸ್ ಮಂಗಳೂರಿನಲ್ಲಿ ಸಿಕ್ಕಿರುವ ಅಪರೂಪದ ಘಟನೆ ನಡೆದಿದೆ.

    ಮಂಗಳೂರಿನ ಕುಂಜತ್ತಬೈಲ್ ನಿವಾಸಿ ದೇವರಾಜ್ ಅಮೀನ್, ವರ್ಷದ ಪ್ರತಿ ತಿಂಗಳೂ ಶಬರಿಮಲೆ ಯಾತ್ರೆ ಮಾಡುತ್ತಾರೆ. ಅದರಂತೆ ಕಳೆದ ಮಕರ ಸಂಕ್ರಾಂತಿಯಂದು ತನ್ನ ಶಿಷ್ಯ ವೃಂದದ ಜೊತೆಗೆ ಶಬರಿಮಲೆಗೆ ತೆರಳಿದ್ದರು. ಅಯ್ಯಪ್ಪನ ದರ್ಶನ ಮಾಡುವ ವೇಳೆ 7,500 ರೂಪಾಯಿ ಇದ್ದ ಪರ್ಸ್ ಕಳೆದು ಹೋಗಿತ್ತು.

    ಭಾರೀ ಜನಸಂದಣಿಯ ನಡುವೆ ತನ್ನಲ್ಲಿದ್ದ ಪರ್ಸ್ ಎಲ್ಲಿ ಕಳೆದು ಹೋಗಿರಬಹುದೆಂದು ದುಃಖಿಸಿದರು. ಪ್ರಸಾದ ತೆಗೆದುಕೊಳ್ಳಲೂ ಹಣವಿಲ್ಲದೆ ರೋಧಿಸಿದರು. ಸನ್ನಿಧಾನದಲ್ಲಿ ಪರಮ ಪಾವನ ಮೂರ್ತಿಯ ಎದುರು ಕಣ್ಣೀರಿಟ್ಟರು. ಪವಿತ್ರ ಕ್ಷೇತ್ರದಲ್ಲೇ ಹಣ ಕಳೆದುಕೊಂಡಿರುದರಿಂದ ಇನ್ಮುಂದೆ ಈ ಶಬರಿಮಲೆಗೆ ಬರೋದಿಲ್ಲ ಎಂದು ದೇವರ ಎದುರೇ ಕೋಪ ತೋಡಿಕೊಂಡರು.

    ಹೀಗೆ ಅತ್ಯಂತ ದುಃಖದಿಂದಲೇ ಶಬರಿಮಲೆ ಯಾತ್ರೆ ಮುಗಿಸಿ ಬಂದ ದೇವರಾಜ್ ಅಯ್ಯಪ್ಪನಲ್ಲಿ ಮತ್ತೆ ಮತ್ತೆ ಬೇಡಿಕೊಂಡರು. ಪವಾಡವೆಂಬಂತೆ ಊರಿಗೆ ಬಂದ ಎರಡೇ ಗಂಟೆಯಲ್ಲಿ ದೇವರಾಜರ ಮೊಬೈಲ್‍ಗೆ ಅಪರಿಚಿತ ನಂಬರ್ ನಿಂದ ಕರೆ ಬಂದಿದೆ. ಮಂಗಳೂರಿನ ಕೊಟ್ಟಾರದ ಅಬ್ಬಕ್ಕನಗರದಿಂದ ಶಬರಿಮಲೆಗೆ ಹೋಗಿದ್ದ ಜಯಪ್ರಕಾಶ್‍ಗೆ ದೇವರಾಜ್ ಪರ್ಸ್ ಸನ್ನಿಧಾನದಲ್ಲಿ ಸಿಕ್ಕಿದ್ದು, ಸುರಕ್ಷಿತವಾಗಿ ಅದನ್ನು ಊರಿಗೆ ಬಂದು ಒಪ್ಪಿಸಿದ್ದಾರೆ.

    ಲಕ್ಷಾಂತರ ಜನರಿರುವ ಸ್ಥಳದಲ್ಲಿ ಕಳೆದು ಹೋದ ಪರ್ಸ್ ಮರಳಿ ಸಿಕ್ಕಿರುವುದರಿಂದ ದೇವರಾಜ್ ತಾನು ನಂಬುವ ಅಯ್ಯಪ್ಪನ ಮಹಿಮೆಗೆ ಶರಣಾದರು.

  • ಆಸ್ಪತ್ರೆಗೆ ದಾಖಲಾಗಿರೋ ಪೇಜಾವರ ಶ್ರೀ- ವಿಜಯಪುರದ ಭಕ್ತರಲ್ಲಿ ಆತಂಕ

    ಆಸ್ಪತ್ರೆಗೆ ದಾಖಲಾಗಿರೋ ಪೇಜಾವರ ಶ್ರೀ- ವಿಜಯಪುರದ ಭಕ್ತರಲ್ಲಿ ಆತಂಕ

    ವಿಜಯಪುರ: ಉಡುಪಿಯ ಪೇಜಾವರ ಶ್ರೀಗಳು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿದು ವಿಜಯಪುರ ಜಿಲ್ಲೆಯಲ್ಲಿ ಭಕ್ತರು ಆತಂಕಗೊಂಡಿದ್ದಾರೆ.

    ಶ್ರೀಗಳ ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ಸಿಗದೆ ಭಕ್ತರು ಪರದಾಡುತ್ತಿದ್ದಾರೆ. ಶ್ರೀಗಳು ಆದಷ್ಟು ಬೇಗ ಗುಣಮುಖರಾಗಲಿ ಅಂತ ಭಕ್ತರು ದೇವರ ಮೊರೆ ಹೋಗಿದ್ದಾರೆ. ನಗರದ ನಂಜನಗೂಡು ರಾಯರ ಮಠದಲ್ಲಿ ಹಾಗೂ ಕೃಷ್ಣ ವಾದಿರಾಜ ಮಠದಲ್ಲಿ ನೂರಾರು ಭಕ್ತರು ಭಜನೆ,ಹಾಡುಗಳ ಮೂಲಕ ಪ್ರಾರ್ಥನೆ ಮಾಡುತ್ತಿದ್ದಾರೆ.

    ಶ್ರೀಗಳ ಗುಣವಾಗುವಿಕೆಯ ಸುದ್ದಿ ಕೇಳಲು ಭಕ್ತವೃಂದ ಕಾದು ಕುಳಿತಿದೆ. ಪ್ರಾರ್ಥನೆಯಲ್ಲಿ ಪಂಡಿತ್ ಬಿಂದು ಮಧ್ವಾಚಾರ್ಯ, ಗೋಪಾಲ ನಾಯ್ಕ, ಆರ್ ಆರ್ ಕುಲಕರ್ಣಿ, ರವಿ ಆಚಾರ್ಯ ಸೇರಿದಂತೆ ಇತರರು ಸೇರಿದಂತೆ ನೂರಾರು ಮಹಿಳೆಯರು ಹಾಗೂ ಪುರುಷರು ಪ್ರಾರ್ಥನೆ ಪಾಲ್ಗೊಂಡಿದ್ದರು.

    ಶುಕ್ರವಾರ ಮುಂಜಾನೆ 3 ಗಂಟೆ ಸುಮಾರಿಗೆ ಶ್ರೀಗಳಿಗೆ ತೀವ್ರ ಉಸಿರಾಟದ ತೊಂದರೆ ಉಂಟಾಗಿದೆ. ಕೂಡಲೇ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದೆ. ಸದ್ಯ ಶ್ರೀಗಳಿಗೆ ಆಸ್ಪತ್ರೆಯ ಐಸಿಯುನಲ್ಲಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದು ಮಠದ ಮೂಲಗಳು ತಿಳಿಸಿವೆ.

  • ನಿರ್ಬಂಧಿತ ಬೆಟ್ಟದಲ್ಲಿ ಭಕ್ತನಿಂದ ರಾತ್ರೋರಾತ್ರಿ ರಸ್ತೆ ನಿರ್ಮಾಣ

    ನಿರ್ಬಂಧಿತ ಬೆಟ್ಟದಲ್ಲಿ ಭಕ್ತನಿಂದ ರಾತ್ರೋರಾತ್ರಿ ರಸ್ತೆ ನಿರ್ಮಾಣ

    ರಾಯಚೂರು: ಮಸ್ಕಿ ಪಟ್ಟಣದಲ್ಲಿ ರಾತ್ರೋ ರಾತ್ರಿ ನಿರ್ಬಂಧಿತ ಐತಿಹಾಸಿಕ ಬೆಟ್ಟ ಅಗೆದು ರಸ್ತೆ ನಿರ್ಮಾಣ ಮಾಡಲಾಗಿದೆ.

    ಪುರಾತತ್ವ ಇಲಾಖೆಗೆ ಸೇರಿದ ಬೆಟ್ಟದಲ್ಲಿ ಸುಮಾರು 6 ಕಿಮೀ ಅಕ್ರಮವಾಗಿ ರಸ್ತೆ ನಿರ್ಮಾಣವಾಗಿದೆ. ಇಲ್ಲಿನ ಐತಿಹಾಸಿಕ ಮಲ್ಲಿಕಾರ್ಜುನ ದೇವಸ್ಥಾನದ ಪಕ್ಕದಲ್ಲೆ ಬೆಟ್ಟ ಅಗೆದು ಅಪರಿಚಿತರು ರಸ್ತೆ ನಿರ್ಮಿಸಿದ್ದಾರೆ.

    ಪರವಾನಿಗೆ ಇಲ್ಲದೇ ರಾತ್ರಿ ವೇಳೆ ಹಿಟಾಚಿ, ಲಾರಿ ತಂದು ಬೆಟ್ಟ ಕೊರೆದಿದ್ದಾರೆ. ವಿಷಯ ತಿಳಿದು ಸ್ಥಳೀಯರು ಬೆಟ್ಟಕ್ಕೆ ಬಂದಾಗ ಜೆ.ಸಿ.ಬಿ ಹಾಗೂ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಅಲ್ಲಿದ್ದವರು ಪರಾರಿಯಾಗಿದ್ದಾರೆ. ಸುಮಾರು ಆರು ಕಿ.ಮೀ ರಸ್ತೆ ನಿರ್ಮಾಣವಾದರೂ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸ್ಥಳೀಯರ ದೂರಿನ ಮೇರೆಗೆ ಮಸ್ಕಿ ತಹಶೀಲ್ದಾರ್ ಬಲರಾಮ ಕಟ್ಟೀಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಂಧನೂರು ಮೂಲದ ಮಲ್ಲಿಕಾರ್ಜುನ ಸ್ವಾಮಿ ಭಕ್ತನೋರ್ವ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದ ಎನ್ನಲಾಗಿದೆ. ಆದರೆ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದವರ ವಿರುದ್ಧ ಇನ್ನೂ ಯಾವುದೇ ಕ್ರಮ ಜರುಗಿಸಿಲ್ಲ.

    ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕಲ್ಲತ್ತಗಿರಿ ಫಾಲ್ಸ್‌ನಲ್ಲಿ ಕೊಚ್ಚಿ ಹೋಗ್ತಿದ್ದವರ ರಕ್ಷಣೆ

    ಕಲ್ಲತ್ತಗಿರಿ ಫಾಲ್ಸ್‌ನಲ್ಲಿ ಕೊಚ್ಚಿ ಹೋಗ್ತಿದ್ದವರ ರಕ್ಷಣೆ

    ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಕಲ್ಲತ್ತಗಿರಿ ಜಲಪಾತದಲ್ಲಿ ಕೊಚ್ಚಿ ಹೋಗುತ್ತಿದ್ದ ಭಕ್ತರನ್ನು ರಕ್ಷಣೆ ಮಾಡಲಾಗಿದೆ.

    ಕಲ್ಲತ್ತಗಿರಿ ಜಲಪಾತದಲ್ಲಿ ಭಾರೀ ನೀರು ಹರಿದ ಪರಿಣಾಮ ವೀರಭದ್ರೇಶ್ವರ ದೇವಾಲಯದಲ್ಲಿ ಭಕ್ತರು ಸಿಲುಕಿದ್ದರು. ದೇವಾಲಯದಿಂದ ಈ ಕಡೆ ಬರಲಾಗದೆ ಭಕ್ತಾದಿಗಳು ಪರದಾಡಿದ್ದಾರೆ. ಕೂಡಲೇ ವಿಷಯ ತಿಳಿದು ಅಗ್ನಿಶಾಮಕ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ನಂತರ ಹಗ್ಗ ಕಟ್ಟಿ ಭಕ್ತಾದಿಗಳನ್ನ ರಕ್ಷಣೆ ಮಾಡಿದ್ದಾರೆ. ಒಬೊಬ್ಬರನ್ನೇ ಸಿಬ್ಬಂದಿ ರಕ್ಷಣೆ ಮಾಡಿದ್ದು, ಭಕ್ತರು ಭಯದಿಂದಲೇ ದಡ ಸೇರಿದ್ದಾರೆ.

    ದೇವಸ್ಥಾನದ ಮುಂಭಾಗ ಸಾಕಷ್ಟು ಜನ ನಿಂತಿದ್ದರು. ಈ ವೇಳೆ ಜಲಪತಾದಲ್ಲಿ ಹೆಚ್ಚಿನ ನೀರು ಹರಿಯಲಾರಂಭಿಸಿದೆ. ನೀರು ಹರಿಯುತ್ತಿದ್ದಂತೆಯೇ ಕೆಲವರು ಹೊರಬಂದಿದ್ದು, ನೀರಿನಲ್ಲಿ ಸಿಲುಕಿಕೊಂಡಿದ್ದರು. ಮತ್ತೆ ಕೆಲವರು ಈ ಕಡೆ ಬರಲಾರದೆ ದೇವಸ್ಥಾನಲ್ಲೇ ನಿಂತಿದ್ದರು.

    ಕೆಮ್ಮಣ್ಣು ಗುಂಡಿ ಭಾಗದಲ್ಲಿ ಹರಿಯುತ್ತಿರುವ ಮಳೆಯಿಂದಾಗಿ ಜಲಪಾತದಲ್ಲಿ ಕಳೆದ 2 ದಿನಗಳಿಂದ ಸಾಕಷ್ಟು ಪ್ರಮಾಣದ ನೀರು ಹರಿಯುತ್ತಿತ್ತು. ಆದರೆ ಭಕ್ತರು ದೇವಸ್ಥಾನಕ್ಕೆ ತೆರಳಲು ಯಾವುದೇ ರೀತಿಯ ಸಮಸ್ಯೆ ಉಂಟಾಗಿರಲಿಲ್ಲ. ಆದರೆ ನಿನ್ನೆ ರಾತ್ರಿಯಿಂದ ನಿರಂತವಾಗಿ ಮಳೆ ಸುರಿಯುತ್ತಿದ್ದರಿಂದ ಇಂದು ಬೆಳಗ್ಗೆ ನೀರು ಹರಿಯುವ ಪ್ರಮಾಣ ಹೆಚ್ಚಾಗುತ್ತಿತ್ತು.

  • 10 ವರ್ಷದ ಹಿಂದೆ ಸೈಕಲೂ ಇರ್ಲಿಲ್ಲ, ಈಗ ಕೋಟಿಗಳ ಒಡೆಯ – ಭಕ್ತನಿಂದ ದೇವಸ್ಥಾನ ಪುಷ್ಪಮಯ

    10 ವರ್ಷದ ಹಿಂದೆ ಸೈಕಲೂ ಇರ್ಲಿಲ್ಲ, ಈಗ ಕೋಟಿಗಳ ಒಡೆಯ – ಭಕ್ತನಿಂದ ದೇವಸ್ಥಾನ ಪುಷ್ಪಮಯ

    ಉಡುಪಿ: ಕಷ್ಟ ಬಂದಾಗ ದೇವರಿಗೆ ವಿಧವಿಧದ ಹರಕೆ ಹೋರುತ್ತಾರೆ. ಆದರೆ ಇಲ್ಲೊಬ್ಬ ಭಕ್ತ ಪ್ರತಿವರ್ಷ ಇಡೀ ದೇವಸ್ಥಾನವನ್ನೇ ವಿವಿಧ ಹೂವುಗಳಿಂದ ಅಲಂಕಾರ ಮಾಡಿ ತನ್ನ ಹರಕೆಯನ್ನು ಪೂರೈಸುತ್ತಿದ್ದಾರೆ.

    ರಮೇಶ್ ಬಾಬು ಹೂವಿನಿಂದ ಇಡೀ ದೇವಸ್ಥಾನವನ್ನು ಅಲಂಕಾರ ಮಾಡಿದ್ದಾರೆ. ಇವರು ಮೂಲತಃ ಚಿಕ್ಕಬಳ್ಳಾಪುರದವರಾಗಿದ್ದು, 10 ವರ್ಷದ ಹಿಂದೆ ಇವರ ಬಳಿಯಲ್ಲಿ ಒಂದು ಸೈಕಲ್ ಕೂಡ ಇರಲಿಲ್ಲ. ಆದರೆ ಇಂದು ಇವರು ಕೋಟಿಗಳ ಒಡೆಯರಾಗಿದ್ದಾರೆ. ಹೀಗಾಗಿ ರಮೇಶ್ ತಮ್ಮ ಈ ಬೆಳವಣಿಗೆಗೆ ಉಡುಪಿಯ ಜನಾರ್ದನ ದೇವರು ಮತ್ತು ಮಹಾಕಾಳಿ ದೇವಿ ಕಾರಣ ಎಂದುಕೊಂಡು ಪೂಜೆ ಮಾಡುತ್ತಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ರಮೇಶ್, ಕಳೆದ ಮೂರು ವರ್ಷದಿಂದ ಆಷಾಢದ ಶುಕ್ರವಾರದಂದು ಜನಾರ್ದನ- ಮಹಾಕಾಳಿ ದೇವಾಲಯದಲ್ಲಿ ನಿರಂತರವಾಗಿ ಅಮ್ಮನವರಿಗೆ ಹೂವಿನ ಅಲಂಕಾರ ಮಾಡಿಕೊಂಡು ಬರುತ್ತಿದ್ದೇನೆ. ಹೀಗಾಗಿ ಕಷ್ಟದಲ್ಲಿದ್ದಾಗ ಕೈ ಹಿಡಿದ ದೇವರನ್ನು ಪ್ರತೀ ವರ್ಷ ಹೂವಿನ ತೊಟ್ಟಿಲಿನಲ್ಲಿಟ್ಟು ಹರಕೆ ತೀರಿಸುತ್ತಿದ್ದೇನೆ. ಈ ರೀತಿಯ ಹರಕೆ ನೀಡುತ್ತಿರುವುದು ಆರನೇ ಬಾರಿಯಾಗಿದೆ ಎಂದು ಹೇಳಿದ್ದಾರೆ.

    ಹೂವಿನ ಅಲಂಕಾರ ಸಂಕಲ್ಪ ಏಕೆ?
    ಒಮ್ಮೆ ಈ ತಾಯಿಯ ಸನ್ನಿಧಾನಕ್ಕೆ ಬಂದಾಗ ನಮ್ಮ ಊರಿನ ರೀತಿಯಲ್ಲಿ ಈ ತಾಯಿಗೂ ಏಕೆ ಹೂವಿನ ಅಲಂಕಾರ ಮಾಡಬಾರದು ಎಂದು ನಮ್ಮ ತಂಡದವರ ಜೊತೆ ಮಾತನಾಡಿದೆ. ಆಗ ಅವರು ಕೂಡ ಖುಷಿಯಿಂದ ಒಪ್ಪಿಕೊಂಡಿದ್ದರು. ಹೀಗಾಗಿ ಎಲ್ಲರೂ ಇಲ್ಲಿಗೆ ಬಂದು ಹೂವಿನ ಅಲಂಕಾರ ಮಾಡುತ್ತಿದ್ದೇವೆ. ಪ್ರತಿಬಾರಿ ಹೂವಿನ ಅಲಂಕಾರ ಮಾಡಿ ಹೋದಾಗೆಲ್ಲಾ ನಾವು ಹಂತಹಂತವಾಗಿ ಬೆಳೆಯುತ್ತಾ ಹೋದೆವು. ಇಂದು ನಾನು ಚಿಕ್ಕಬಳ್ಳಾಪುರದಲ್ಲಿ ನಗರಸಭಾ ಸದಸ್ಯನಾಗಿದ್ದೇನೆ. ನಾನು ಸಾಮಾನ್ಯ ವ್ಯಕ್ತಿಯಾಗಿ ಇಲ್ಲಿಗೆ ಬಂದಿದ್ದೆ. ಆದರೆ ಇಂದು ನನಗೆ ಒಂದು ಸ್ಥಾನ ಸಿಕ್ಕಿದೆ ಅಂದರೆ ಅದಕ್ಕೆ ಈ ತಾಯಿಯೇ ಕಾರಣ. ಹೀಗಾಗಿ ನನ್ನ ಉಸಿರಿರುವ ತನಕ ಪ್ರತಿವರ್ಷ ಬಂದು ಹೂವಿನ ಅಲಂಕಾರ ಮಾಡುತ್ತೇನೆ ಎಂದು ರಮೇಶ್ ಬಾಬು ಹೇಳಿದ್ದಾರೆ.

    ಪ್ರತಿ ವರ್ಷದಂತೆ ಈ ಬಾರಿಯೂ ತಮ್ಮ 50 ಮಂದಿ ಯುವಕರ ತಂಡದ ಜೊತೆ ರಮೇಶ್, ಉಡುಪಿಗೆ ಬಂದಿದ್ದಾರೆ. ಲಕ್ಷಾಂತರ ರೂಪಾಯಿ ಹೂವುಗಳನ್ನು ಹೊತ್ತು ತಂದಿದ್ದು, ಅಂಬಲ್ಪಾಡಿ ಜನಾರ್ದನ- ಮಹಾಕಾಳಿ ದೇವಸ್ಥಾನಕ್ಕೆ ಬಂದು ಇಡೀ ದೇವಸ್ಥಾನವನ್ನು ಪುಷ್ಪಮಯ ಮಾಡಿದ್ದಾರೆ. ಸಂಪೂರ್ಣ ದೇವಸ್ಥಾನವನ್ನು ಬಣ್ಣಬಣ್ಣದ ಹೂವುಗಳಿಂದ ಸಿಂಗಾರ ಮಾಡಿಸಿದ್ದಾರೆ. ಶಿಲಾಮಯ ಕೆತ್ತನೆಗಳುಳ್ಳ ದೇವಸ್ಥಾನ ಹೂವಿನ ದೇವಾಲಯವಾಗಿ ಇಂದು ಪರಿವರ್ತನೆಗೊಂಡಿದೆ ಎಂದು ಭಕ್ತರು ಹೇಳುತ್ತಿದ್ದಾರೆ.

    ಶುಕ್ರವಾರದಿಂದ ಮೂರು ದಿನ ಈ ಅಲಂಕಾರ ಇರುತ್ತದೆ. ಸುಮಾರು 3 ಲಕ್ಷ ರೂಪಾಯಿಯ ಹೂವಿನಿಂದ ದೇವಸ್ಥಾನವನ್ನು ಸಿಂಗಾರ ಮಾಡಲಾಗಿದೆ. ಈ ಮೂಲಕ ವಿಭಿನ್ನ ಹರಕೆಯನ್ನು ದೇವರಿಗೆ ಅರ್ಪಿಸಲಾಗಿದೆ.

  • ತಿಮ್ಮಪ್ಪನ ಕೈಗೆ 2.25 ಕೋಟಿ ಮೌಲ್ಯದ ಚಿನ್ನದ ಹಸ್ತ ದಾನ

    ತಿಮ್ಮಪ್ಪನ ಕೈಗೆ 2.25 ಕೋಟಿ ಮೌಲ್ಯದ ಚಿನ್ನದ ಹಸ್ತ ದಾನ

    ಹೈದರಾಬಾದ್: ಉದ್ಯಮಿ ಭಕ್ತರೊಬ್ಬರು ಲಾರ್ಡ್ ಬಾಲಾಜೀ ತಿರುಪತಿಗೆ ಚಿನ್ನದ ಎರಡು ಹಸ್ತಗಳನ್ನು ದಾನ ಕೊಟ್ಟಿದ್ದಾರೆ.

    ತಮಿಳುನಾಡಿನ ನಿವಾಸಿ ತಂಗಡೋರೈ ಅವರು ಬರೋಬ್ಬರಿ 2.25 ಕೋಟಿ ಮೌಲ್ಯ ಬೆಲೆ ಬಾಳುವ ಚಿನ್ನದ ಅಭಯ ಹಸ್ತ ಮತ್ತು ಕಟಿ ಹಸ್ತವನ್ನು ತಿರುಪತಿಯ ಬಾಲಾಜಿ ದೇವಾಲಯಕ್ಕೆ ದಾನ ಮಾಡಿದ್ದಾರೆ. ಇವರು ತಮಿಳುನಾಡಿನ ಉದ್ಯಮಿ ಎಂದು ತಿಳಿದು ಬಂದಿದೆ.

    ತಂಗಡೋರೈ ಶನಿವಾರ “ಸುಪ್ರಭಾತ ಸೇವಾ” ಸಂದರ್ಭದಲ್ಲಿ ತಿರುಮತಿ ತಿರುಮಲ ದೇವಸ್ಥಾನದ ಅಧಿಕಾರಿಗಳಿಗೆ ಚಿನ್ನದ ‘ಅಭಯ ಹಸ್ತ’ ಮತ್ತು ‘ಕಟಿ ಹಸ್ತ’ ಆಭರಣಗಳನ್ನು ಅರ್ಪಿಸಿದ್ದಾರೆ. ಈ ಎರಡು ಚಿನ್ನದ ಕೈಗಳು ತಲಾ 6 ಕಿ.ಗ್ರಾಂ ತೂಕವಿದೆ.

    ಶುಕ್ರವಾರ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ಅರ್ಜುನ್ ರಾಮ್ ಮೇಘವಾಲ್ ಅವರು ಇಲ್ಲಿನ ಭಗವಾನ್ ಬಾಲಾಜಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು.

  • ವಿರೋಧಿಗಳ ನಾಶಕ್ಕೆ ಭಕ್ತರ ಬೇಡಿಕೆ – ಯಲಗೂರು ದೇಗುಲದ ಹುಂಡಿಯಲ್ಲಿತ್ತು ವಿಚಿತ್ರ ಪತ್ರ

    ವಿರೋಧಿಗಳ ನಾಶಕ್ಕೆ ಭಕ್ತರ ಬೇಡಿಕೆ – ಯಲಗೂರು ದೇಗುಲದ ಹುಂಡಿಯಲ್ಲಿತ್ತು ವಿಚಿತ್ರ ಪತ್ರ

    ವಿಜಯಪುರ: ದೇವರ ಹುಂಡಿಯಲ್ಲಿ ಹಣದ ಬದಲು ವಿರೋಧಿಗಳ ನಾಶಕ್ಕೆ ಭಕ್ತರು ಬೇಡಿಕೆ ಪತ್ರ ಹಾಕಿರುವ ವಿಚಿತ್ರ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಯಲಗೂರಿನಲ್ಲಿ ನಡೆದಿದೆ.

    ಶ್ರೀಕ್ಷೇತ್ರ ಯಲಗೂರ ದೇವಸ್ಥಾನದ ಕಾಣಿಕೆ ಹುಂಡಿಗಳಲ್ಲಿ ಚಿತ್ರವಿಚಿತ್ರ ಬೇಡಿಕೆಗಳನ್ನು ಬರೆದು ಭಕ್ತರು ಹಾಕಿದ್ದಾರೆ. ಹುಂಡಿ ತೆಗೆದು ಎಣಿಕೆ ಮಾಡುವ ವೇಳೆ ಪತ್ರ ಕಂಡು ಕಂದಾಯ ಅಧಿಕಾರಿಗಳು ಹಾಗೂ ದೇವಸ್ಥಾನ ಕಮಿಟಿ ಬೆಚ್ಚಿಬಿದ್ದಿದೆ. ಕಂದಾಯ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ಸೇರಿದಂತೆ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮತ್ತು ಸದಸ್ಯರಿಂದ ಎಣಿಕೆ ಕಾರ್ಯ ನಡೆದಿದೆ.

    ಪತ್ರದಲ್ಲೇನಿದೆ..?
    ನನಗೆ ಗಂಡು ಮಗು ಹುಟ್ಟಲಿ ತಂದೆ. ನಿನ್ನ ಸನ್ನಿಧಿಗೆ ಬಂದು ಜವಳದ ಕಾರ್ಯ ಮಾಡುವೆನು ಎಂದು ಭಕ್ತರೊಬ್ಬರು ಪತ್ರ ಬರೆದ್ರೆ, ನಮಗೆ ಕೆಲವರು ಶತ್ರುಗಳಾಗಿ ಕಾಡುತ್ತಿದ್ದಾರೆ ಅವರಿಗೆ ಕಣಿಯಾಗಿ ಕಾಡಬೇಕಿದೆ. ಅವರು ನಮ್ಮ ತಂಟೆಗೆ ಬರಬಾರದು. ನಮ್ಮ ಕಟ್ಟೆ ಮೇಲೆ ಸಾಮಾನುಗಳನ್ನು ಇಡಬಾರದು. ಹನುಮಂತೇಶ ನೀನು ಅವರಿಗೆ ಕಾಡಬೇಕು ಬೇಡಿಕೆಯಿಟ್ಟು ಪತ್ರದಲ್ಲಿ ನಾಲ್ವರ ಹೆಸರನ್ನು ಉಲ್ಲೇಖಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv