Tag: Development

  • ಕೈ ಶಾಸಕರಿಗೆ ಆಮಿಷ ಒಡ್ಡಿದ್ದ ಬಿಜೆಪಿಯವರ ಮೇಲೆ ಮೊದಲು ದಾಳಿಯಾಗಬೇಕು: ಸಿದ್ದರಾಮಯ್ಯ

    ಕೈ ಶಾಸಕರಿಗೆ ಆಮಿಷ ಒಡ್ಡಿದ್ದ ಬಿಜೆಪಿಯವರ ಮೇಲೆ ಮೊದಲು ದಾಳಿಯಾಗಬೇಕು: ಸಿದ್ದರಾಮಯ್ಯ

    ಬೆಂಗಳೂರು: ಬಹುಮತ ಸಾಬೀತಿನ ವೇಳೆ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿ ಆಮಿಷ ಒಡ್ಡಿದ್ದ ಬಿಜೆಪಿಯವರ ಮೇಲೆ ಮೊದಲು ದಾಳಿಯಾಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಕಾಂಗ್ರೆಸ್ ಪಕ್ಷದವರನ್ನೇ ಟಾರ್ಗೆಟ್ ಮಾಡಿ ದ್ವೇಷದ ದಾಳಿ ಮಾಡಿಸುತ್ತಿದ್ದಾರೆ. ಬಿಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಅವರ ಬಳಿ ಹಣ ಇಲ್ಲವೇ? ಅವರ ಮೇಲೆ ಯಾಕೆ ದಾಳಿ ಆಗಲ್ಲ ಎಂದು ಪ್ರಶ್ನಿಸಿದರು.

    ಇದೇ ವೇಳೆ ಆರ್‍ಆರ್ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಲ್ಲಿ ಗೆಲ್ಲುತ್ತೇವೆ ಅನ್ನುವ ನಿರೀಕ್ಷೆ ಇತ್ತು. ನಿರೀಕ್ಷೆಯಂತೆ ಫಲಿತಾಂಶ ಬಂದಿದೆ ಎಂದು ತಿಳಿಸಿದರು.

    ಬೆಂಗಳೂರಿನಲ್ಲಿ ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನ ಒಪ್ಪಿಕೊಂಡು ಮತ ನೀಡಿದ್ದಾರೆ. ಇಂದಿನ ಗೆಲುವು ಸೇರಿ ಒಟ್ಟು 14 ಕ್ಷೇತ್ರಗಳಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿದೆ. ಅಭಿವೃದ್ಧಿ ಕೆಲಸಗಳನ್ನು ರಾಜರಾಜೇಶ್ವರಿ ಕ್ಷೇತ್ರದ ಜನ ನೋಡಿ ಮುನಿರತ್ನ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಕ್ಷೇತ್ರದ ಜನರಿಗೆ ಹೃತ್ಪೂರ್ವಕವಾದ ಧನ್ಯವಾದಗಳು. ಅದೇ ರೀತಿಯಾಗಿ 20 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಮುನಿರತ್ನ ಅವರಿಗೆ ಅಭಿನಂದನೆ ತಿಳಿಸಿದರು.

  • ಬಿಜೆಪಿ ಸಾಧನೆಯನ್ನು ತನ್ನ ಸಾಧನೆ ಎಂದು ಬಿಂಬಿಸಿ ನಗೆಪಾಟಲಿಗೀಡಾದ ಮಂಗಳೂರು ಕೈ ಶಾಸಕ ಲೋಬೋ

    ಬಿಜೆಪಿ ಸಾಧನೆಯನ್ನು ತನ್ನ ಸಾಧನೆ ಎಂದು ಬಿಂಬಿಸಿ ನಗೆಪಾಟಲಿಗೀಡಾದ ಮಂಗಳೂರು ಕೈ ಶಾಸಕ ಲೋಬೋ

    ಮಂಗಳೂರು: ಬಿಜೆಪಿ ಸರ್ಕಾರದ ಸಾಧನೆಗಳನ್ನು ತನ್ನ ಸಾಧನೆಯೆಂದು ಬಿಂಬಿಸಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜೆಆರ್ ಲೋಬೋ ಮತ್ತೆ ನಗೆಪಾಟಲಿಗೀಡಾಗಿದ್ದಾರೆ.

    ಚುನಾವಣಾ ಹಿನ್ನೆಲೆಯಲ್ಲಿ ಸಾಧನೆಯ ಹಾದಿಯಲ್ಲಿ ಎಂಬ ಅಭಿವೃದ್ಧಿ ಯೋಜನೆಗಳ ಕುರಿತ ಪುಸ್ತಕವನ್ನು ಜೆಆರ್ ಲೋಬೋ ಬಿಡುಗಡೆ ಮಾಡಿದ್ದು, ಪುಸ್ತಕದಲ್ಲಿ ಬಿಜೆಪಿ ಸರ್ಕಾರದ ಕಾಲಾವಧಿಯಲ್ಲಿ ಆದಂತಹ ಯೋಜನೆಗಳನ್ನು ಸೇರಿಸಿಕೊಂಡಿದ್ದಾರೆ.

    ಮಂಗಳೂರಿನ ಬಿಜೈ ಮಾರ್ಕೆಟ್ ನಿರ್ಮಾಣ, ಪಂಪ್ವಲ್ ಜಂಕ್ಷನ್ ಬಳಿ ಸೇತುವೆ ನಿರ್ಮಾಣ, ಗಣಪತಿ ಹೈ ಸ್ಕೂಲ್ ರಸ್ತೆ ಅಭಿವೃದ್ಧಿ, ಮಿನಿವಿಧಾನಸೌಧ ಕಟ್ಟಡ ರಚನೆ, ಲೋಕಾಯುಕ್ತ ಕಚೇರಿ ಉದ್ಘಾಟನೆ ಸೇರಿದಂತೆ ಬಿಜೆಪಿ ಸರ್ಕಾರದಲ್ಲಿ ಅನುಷ್ಠಾನಗೊಂಡ ಯೋಜನೆಗಳನ್ನು ಪುಸ್ತಕದಲ್ಲಿ ಅಳವಡಿಸಿದ್ದಾರೆ.

    ಈ ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ಶಾಸಕ ಲೋಬೋ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದ್ದು, ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಜೆಆರ್ ಲೋಬೋ ಸುಳ್ಳಿನ ಮಾರ್ಗವನ್ನು ಹಿಡಿದಿದ್ದಾರೆ. ಈ ಮೂಲಕ ಜನರ ಮನಗೆಲ್ಲಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

     

  • ಆನಂದ್‍ಸಿಂಗ್ ಮತಯಾಚನೆ ವೇಳೆ ಮೋದಿ ಘೋಷಣೆ- ಸಿಎಂ ಸಂಸದೀಯ ಕಾರ್ಯದರ್ಶಿಗೆ ಪೊರಕೆ ತೋರಿಸಿದ ಮಹಿಳೆಯರು

    ಆನಂದ್‍ಸಿಂಗ್ ಮತಯಾಚನೆ ವೇಳೆ ಮೋದಿ ಘೋಷಣೆ- ಸಿಎಂ ಸಂಸದೀಯ ಕಾರ್ಯದರ್ಶಿಗೆ ಪೊರಕೆ ತೋರಿಸಿದ ಮಹಿಳೆಯರು

    ಬಳ್ಳಾರಿ: ಕ್ಷೇತ್ರದಲ್ಲಿ ಮತದಾರರ ಆಕ್ರೋಶ ಭುಗಿಲೆದ್ದಿದ್ದು, ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಇಬ್ಬರು ಶಾಸಕರಿಗೆ ಮತದಾರರು ಇಂದು ತರಾಟೆಗೆ ತೆಗೆದುಕೊಂಡು ಬಿಸಿ ಮುಟ್ಟಿಸಿದ್ದಾರೆ.

    ಹೊಸಪೇಟೆಯ ಕೌಲಪೇಟೆ ಯಲ್ಲಿ ಮತಯಾಚನೆಗೆ ತೆರಳಿದ ಕಾಂಗ್ರೆಸ್ ಅಭ್ಯರ್ಥಿ ಆನಂದ್‍ಸಿಂಗ್ ಅವರಿಗೆ ಮತಯಾಚನೆಗೂ ಅವಕಾಶ ಕೊಡದೇ ಮರಳಿ ಕಳಿಸಿದರು. ಇನ್ನೂ ಚಿಕ್ಕಾಅಂತಾಪುರರಲ್ಲಿ ಪ್ರಚಾರಕ್ಕೆ ತೆರಳಿದ ಸಂಡೂರು ಶಾಸಕ, ಸಿಎಂ ಸಂಸದೀಯ ಕಾರ್ಯದರ್ಶಿ ತುಕಾರಾಂ ಅವರಿಗೆ ಮಹಿಳೆಯರು ಪೊರಕೆ ತೋರಿಸಿ ಪ್ರಚಾರಕ್ಕೆ ಅಡ್ಡಿಪಡಿಸುವ ಮೂಲಕ ಬಿಸಿ ಮುಟ್ಟಿಸಿದರು.

    ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಆನಂದ್‍ಸಿಂಗ್ ಅವರು ಕ್ಷೇತ್ರದ ಕೌಲಪೇಟೆಯ ಕುರುಬರ ಓಣಿಯಲ್ಲಿ ಮತಯಾಚನೆಗೆ ತೆರಳಿದ್ದ ವೇಳೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ನಿಮ್ಮ ಹತ್ತು ವರ್ಷಗಳ ಅಧಿಕಾರ ಅವಧಿಯಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಿ ಎಂದರು ಪ್ರಶ್ನಿಸಿದರು. ಅಲ್ಲದೇ ಆನಂದಸಿಂಗ್ ಗೋ ಬ್ಯಾಕ್ ಗೋ ಬ್ಯಾಕ್ ಎಂದು ಘೋಷಣೆ ಕೂಗಿದ್ದರು. ಇದರಿಂದ ಮುಜಗರಕ್ಕೆ ಒಳಗಾದ ಆನಂದ್‍ಸಿಂಗ್ ವಾಪಸ್ ಮರಳಿದರು.

    ಸಂಡೂರಿನ ಚಿಕ್ಕಅಂತಾಪುರದಲ್ಲಿ ಕಾರ್ಮಿಕನೊಬ್ಬನ ಸಾವಿನ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರನ್ನು ಪೊಲೀಸರು ಬಲವಂತವಾಗಿ ಬಂಧಿಸಿ ಕೇಸ್ ದಾಖಲಿಸಿದ ವೇಳೆ ಪ್ರಶ್ನೆ ಮಾಡದ ಶಾಸಕರು ಇದೀಗ ಮತ ಕೇಳಲು ಬಂದಿದ್ದೀರಾ ಎಂದು ಸ್ಥಳೀಯರು ತರಾಟೆಗೆ ತೆಗೆದುಕೊಂಡರು, ಅಲ್ಲದೇ ಕೆಲ ಮಹಿಳೆಯರು ಪೊರಕೆ ಪ್ರದರ್ಶನ ಮಾಡಿದರು. ಈ ವೇಳೆ ಗ್ರಾಮಸ್ಥರು ಹಾಗೂ ಶಾಸಕರ ಬೆಂಬಲಿಗರ ಮಧ್ಯೆ ಜಟಾಪಟಿ ಸಹ ನಡೆಯಿತು.

  • 22 ವರ್ಷಗಳ ಬಳಿಕ ಗ್ರಾಮದಲ್ಲಿ ಮದುವೆ ಸಂಭ್ರಮ!

    22 ವರ್ಷಗಳ ಬಳಿಕ ಗ್ರಾಮದಲ್ಲಿ ಮದುವೆ ಸಂಭ್ರಮ!

    ಜೈಪುರ: ಅಘೋಷಿತ ಶಾಪಕ್ಕೆ ಗುರಿಯಾಗಿದ್ದ ರಾಜಸ್ಥಾನದ ದೋಲ್‍ಪುರ ಗ್ರಾಮದಲ್ಲಿ 22 ವರ್ಷಗಳ ಬಳಿಕ ಮದುವೆಯ ಸಂಭ್ರಮ ಮನೆ ಮಾಡಿದೆ.

    1996 ರಲ್ಲಿ ಈ ಗ್ರಾಮದಲ್ಲಿ ಮದುವೆಯ ಕಾರ್ಯಕ್ರಮ ನಡೆದಿತ್ತು. ಮತ್ತೆ 22 ವರ್ಷಗಳ ಬಳಿಕ ಈ ಗ್ರಾಮದಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ. ಯಾವುದೇ ಮೂಲಭೂತ ಸೌಲಭ್ಯಗಳನ್ನು ಹೊಂದಿರದ ಈ ಹಳ್ಳಿಗೆ ವಿದ್ಯುತ್, ರಸ್ತೆ, ನೀರು ಕೂಡ ಇಲ್ಲ. ಗ್ರಾಮಕ್ಕೆ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದ ಕಾರಣ ಇಲ್ಲಿನ ಯುವಕರಿಗೆ ಹೆಣ್ಣು ನೀಡಲು ಯಾರು ಮುಂದೇ ಬರುತ್ತಿರಲಿಲ್ಲ. ಅದ್ದರಿಂದ ಇಲ್ಲಿನ ಯುವಕರು ಬ್ರಹ್ಮಚಾರಿಗಳಾಗಿಯೇ ಉಳಿಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈ ಬಾರಿ ಗ್ರಾಮದ ಪವನ್ ಎಂಬ ಯುವಕನಿಗೆ ಮದುವೆ ನಿಶ್ಚಾಯವಾಗಿದ್ದು, ಹಳ್ಳಿಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ.

    ಈ ಗ್ರಾಮದಲ್ಲಿ 40 ಕಚ್ಚಾ ಮನೆಗಳಿದ್ದು, 300 ಜನ ವಾಸಿಸುತ್ತಿದ್ದಾರೆ. ಗ್ರಾಮಸ್ಥರನ್ನು ಬಡತನ ಕಾಡುತ್ತಿದೆ. ಸರ್ಕಾರದ ಅಭಿವೃದ್ಧಿಯ ಹೆಸರಿನಲ್ಲಿ ಗ್ರಾಮಕ್ಕೆ ಒಂದು ಶಾಲೆ ಹಾಗೂ ನೀರಿನ ಕೈ ಪಂಪ್ ನೀಡಿದೆ. ಹಳ್ಳಿಯಲ್ಲಿರುವ 125 ಮಹಿಳೆಯಲ್ಲಿ ಕೇವಲ ಇಬ್ಬರು ಮಾತ್ರ ತಮ್ಮ ಹೆಸರನ್ನು ಬರೆಯುತ್ತಾರೆ. ಅಲ್ಲದೆ ಇದುವರೆಗೂ ಹಳ್ಳಿಯ ಯಾವುದೇ ಮಹಿಳೆಯರು ಟಿವಿಯನ್ನು ನೋಡಿಲ್ಲ.

  • ಐತಿಹಾಸಿಕ ಸಾಧನೆ: ಭಾರತದ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ

    ಐತಿಹಾಸಿಕ ಸಾಧನೆ: ಭಾರತದ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ

    ನವದೆಹಲಿ: ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ತಲುಪುವ ಮೂಲಕ ಭಾರತ ಐತಿಹಾಸಿಕ ಸಾಧನೆ ನಿರ್ಮಿಸಿದೆ. ಮಣಿಪುರದ ಸೇನಾಪತಿ ಜಿಲ್ಲೆಯ ಗ್ರಾಮವೊಂದಕ್ಕೆ ಶನಿವಾರ ಸಂಜೆ 5.30ಕ್ಕೆ ವಿದ್ಯುತ್ ತಲುಪುವ ಮೂಲಕ ಈ ಸಾಧನೆ ನಿರ್ಮಾಣವಾಗಿದೆ.

    2014ರಲ್ಲಿ ಮೋದಿ ಸರ್ಕಾರ ದೇಶದ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಟ್ವೀಟ್ ಮಾಡಿ, ಭಾರತದ ಅಭಿವೃದ್ಧಿಯ ಪ್ರಯಾಣದಲ್ಲಿ 2018ರ ಏಪ್ರಿಲ್ 28 ಐತಿಹಾಸಿಕ ದಿನ. ಶನಿವಾರ ನಾವು ನೀಡಿದ್ಧ ಭರವಸೆ ಪೂರ್ಣವಾಗಿದೆ. ಭಾರತದ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಸಿಕ್ಕಿದ್ದಕ್ಕೆ ನನಗೆ ಬಹಳ ಹೆಮ್ಮೆಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

    ಪ್ರಧಾನಿ ಮೋದಿ 2015ರ ಸ್ವಾತಂತ್ರ್ಯ ದಿನಾಚಣೆಯ ಭಾಷಣದಲ್ಲಿ, 1 ಸಾವಿರ ದಿನದ ಒಳಗಡೆ ದೇಶದ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗುವುದು ಎಂದು ಘೋಷಣೆ ಮಾಡಿದ್ದರು. ಆದರೆ ಈ ಗುರಿಯನ್ನು 987 ದಿನದಲ್ಲೇ ಪೂರ್ಣಗೊಳಿಸಿದ್ದೇವೆ ಎಂದು ಪೀಯುಷ್ ಗೋಯಲ್ ರೀಟ್ವೀಟ್ ಮಾಡಿದ್ದಾರೆ.

    ಈ ಗುರಿಯನ್ನು ತಲುಪಲು ಸಹಕರಿಸಿದ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಮತ್ತು ಎಲ್ಲ ಕೆಲಸಗಾರರಿಗೆ ಮೋದಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

    https://twitter.com/India_Policy/status/990479994362122240

     

  • ವೋಟಿನ, ದೇವರ ರಾಜಕೀಯ ನಮಗೆ ಬೇಡ: ಪ್ರಕಾಶ್ ರೈ

    ವೋಟಿನ, ದೇವರ ರಾಜಕೀಯ ನಮಗೆ ಬೇಡ: ಪ್ರಕಾಶ್ ರೈ

    ಚಿತ್ರದುರ್ಗ: ವೋಟಿನ ರಾಜಕೀಯ, ದೇವರ ರಾಜಕೀಯ ನಮಗೆ ಬೇಡ. ಹಳ್ಳಿಗಳಲ್ಲಿ ಹಲವು ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸುವ ಕಾರ್ಯದಲ್ಲಿ ನಾವು ತೊಡಗಬೇಕಿದೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.

    ಜಿಲ್ಲೆಯ ಹಿರಿಯೂರು ತಾಲೂಕಿನ ಬಂಡ್ಲಾರಹಟ್ಟಿಯ ಗ್ರಾಮಕ್ಕೆ ದಿಡೀರ್ ಭೇಟಿ ನೀಡಿದ ಅವರು, ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವ ಬಯಕೆಯನ್ನು ವ್ಯಕ್ತಪಡಿಸಿದರು.

    ಈ ವೇಳೆ ಗ್ರಾಮಸ್ಥರೊಂದಿಗೆ ಮಾತನಾಡಿ ಪ್ರಕಾಶ್ ರೈ, ಈ ಹಿಂದೆ ತೆಲಂಗಾಣದ ಕೊಂಡರೆಡ್ಡಿಪಲ್ಲಿ ಎಂಬ ಊರನ್ನು ದತ್ತು ಪಡೆದು ಮಾದರಿ ಗ್ರಾಮವನ್ನಾಗಿ ಮಾಡುವ ಪ್ರಯತ್ನದಲ್ಲಿದ್ದೇವೆ. ಇದೇ ರೀತಿ ಬಂಡ್ಲಾರಹಟ್ಟಿಯನ್ನು ಅಭಿವೃದ್ಧಿ ಪಡಿಸುವ ಇಚ್ಚೆ ಹೊಂದಿದ್ದೇನೆ ಎಂದರು.

    ನನಗೆ ಒಂದು ತಿಂಗಳು ಸಮಯ ನೀಡಿದರೆ ಗ್ರಾಮದ ಅಭಿವೃದ್ಧಿಗೆ ಬೇಕಾದ ಮಾದರಿ ಯೋಜನೆಯನ್ನು ಸಿದ್ಧಪಡಿಸುತ್ತೇನೆ. ನಂತರ ದಿನಗಳಲ್ಲಿ ನಾನು ನನ್ನ ತಂಡ ಗ್ರಾಮಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳು ನೀಡಿ ಮಾದರಿ ಗ್ರಾಮವನ್ನಾಗಿ ರೂಪಿಸು ಪ್ರಯತ್ನ ಮಾಡೋಣ ಎಂದರು. ಇದೇ ವೇಳೆ ಗ್ರಾಮ ಪ್ರತಿ ಕುಟುಂಬ ಸಹಕಾರ ಹೊಂದಿದ್ದಾರೆ ಮಾತ್ರ ನಮ್ಮ ಯೋಜನೆ ಯಶಸ್ವಿಯಾಗಲು ಸಾಧ್ಯವಿದ್ದು ಎಲ್ಲರು ಈ ಕುರಿತು ಯೋಚಿಸಬೇಕಿದೆ. ಗ್ರಾಮದ ಪ್ರತಿಯೊಬ್ಬ ಜನರ ಸಮಸ್ಯೆಗಳನ್ನು ಕೇಳುತ್ತೇನೆ ಎಂದು ಹೇಳಿದರು.