Tag: Detective Agency

  • ಯೋಗ ಶಿಕ್ಷಕಿ ಜೀವಂತ ಸಮಾಧಿ ಕೇಸ್‌ | ಮರ್ಡರ್‌ ಮಾಡೋಕೆ 4 ಲಕ್ಷ ಸುಪಾರಿ, 1 ಲಕ್ಷ ಅಡ್ವಾನ್ಸ್ – ರಹಸ್ಯ ಸ್ಫೋಟ

    ಯೋಗ ಶಿಕ್ಷಕಿ ಜೀವಂತ ಸಮಾಧಿ ಕೇಸ್‌ | ಮರ್ಡರ್‌ ಮಾಡೋಕೆ 4 ಲಕ್ಷ ಸುಪಾರಿ, 1 ಲಕ್ಷ ಅಡ್ವಾನ್ಸ್ – ರಹಸ್ಯ ಸ್ಫೋಟ

    ಚಿಕ್ಕಬಳ್ಳಾಪುರ: ಯೋಗ ಶಿಕ್ಷಕಿ ಕಿಡ್ನ್ಯಾಪ್‌ (Yoga Teacher Kidnap) ಮತ್ತು ಕೊಲೆಯತ್ನ ಜೀವಂತ ಸಮಾಧಿ ಪ್ರಕರಣದಲ್ಲಿ ನಾಲ್ವರು ಪ್ರಮುಖ ಆರೋಪಿಗಳನ್ನ ಬಂಧಿಸಿರುವ ಚಿಕ್ಕಬಳ್ಳಾಪುರ ಪೊಲೀಸರು (Chikkaballapura Police) ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ತೀವ್ರ ವಿಚಾರಣೆ ಮುಂದುವರೆಸಿದ್ದಾರೆ. ವಿಚಾರಣೆ ವೇಳೆ 4 ಲಕ್ಷ ರೂಪಾಯಿಗೆ ಪ್ರಿಯಕರನ ಪತ್ನಿ ಬಿಂದು ಸುಪಾರಿ ನೀಡಿರೋದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

    ಸುಪಾರಿಯಂತೆ ಮೊದಲು 1 ಲಕ್ಷ ರೂ. ಫೋನ್‌ಪೇ (Phone Pay) ಮೂಲಕ ಅಡ್ವಾನ್ಸ್‌ ಆಗಿ ಪಡೆದುಕೊಂಡಿದ್ದಾರೆ. 1 ಲಕ್ಷದಲ್ಲೇ ಇಷ್ಟೆಲ್ಲಾ ಕೃತ್ಯ ನಡೆಸಿದ್ದು, ಇನ್ನೂ ಯೋಗಶಿಕ್ಷಕಿಯ ಮಾಂಗಲ್ಯ ಸರ ಚಿನ್ನಾಭರಣಗಳನ್ನ ಸಹ ಆರೋಪಿಗಳು ದೋಚಿದ್ರು. ಆದ್ರೆ ಅವುಗಳನ್ನ ಸಹ ಪೊಲೀಸರು ರಿಕವರಿ ಮಾಡಿದ್ದಾರೆ. ಮಂತ್ರಾಲಯದಲ್ಲಿದ್ದ ಆರೋಪಿಗಳನ್ನ ಎಡೆಮುರಿ ಕಟ್ಟಿ ತಂದಿದ್ರು. ಇದನ್ನೂ ಓದಿ: ಕಿಡ್ನ್ಯಾಪ್‌ ಕೇಸ್‌ಗೆ ಟ್ವಿಸ್ಟ್ – ಅರೆಬೆತ್ತಲೆ ಮೈಗೆ ಸೊಪ್ಪು ಸುತ್ತಿಕೊಂಡು ಬಂದಿದ್ದ ಯೋಗ ಶಿಕ್ಷಕಿ!

    ಆರೋಪಿಗಳಿಗೆ ಖಾಕಿ ಪುಲ್ ಡ್ರಿಲ್:
    ಬೆಂಗಳೂರಿನ (Bengaluru) ಯೋಗ ಶಿಕ್ಷಕಿ ಜೀವಂತ ಸಮಾಧಿ ಮಾಡಿದ್ದ ಪ್ರಕರಣದ 4 ಮಂದಿ ಆರೋಪಿಗಳಿಗೆ ಚಿಕ್ಕಬಳ್ಳಾಪುರ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಯೋಗ ಶಿಕ್ಷಕಿ ಕಿಡ್ನಾಪ್‌ಗೆ ಸುಪಾರಿ ನೀಡಿದ್ದ ಬಿಂದು ಈಗಾಗಲೇ ಜೈಲು ಸೇರಿದ್ದಾಳೆ. ಇನ್ನೂ ಕಿಡ್ನ್ಯಾಪ್‌ ಮಾಡಿದ್ದ ಪ್ರಮುಖ ಆರೋಪಿಗಳಾದ ಸತೀಶ್ ರೆಡ್ಡಿ, ನಾಗೇಂದ್ರ ರೆಡ್ಡಿ, ರಮಣಾರೆಡ್ಡಿ, ರವಿಚಂದ್ರ ನಾಲ್ಕು ಮಂದಿಯನ್ನ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಚಿಕ್ಕಬಳ್ಳಾಪುರ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

    ಕಿಡ್‌ನ್ಯಾಪ್‌ಗೆ 3 ತಿಂಗಳ ಹಿಂದೆಯೇ ಪ್ಲ್ಯಾನ್‌:
    5 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದು ಶುಕ್ರವಾರ ಮತ್ತು ಶನಿವಾರವಾದ ಇಂದು ಆರೋಪಿಗಳ ಸ್ಥಳ ಮಹಜರು ನಡೆಸಿ ಮಹತ್ವದ ಸಾಕ್ಷ್ಯಗಳನ್ನ ಕಲೆ ಹಾಕಿದ್ದಾರೆ. ಇನ್ನೂ ವಿಚಾರಣೆ ವೇಳೆ ರೋಚಕ ಅಂಶಗಳು ಬೆಳಕಿಗೆ ಬಂದಿವೆ. ಆರೋಪಿಗಳು ಯೋಗ ಶಿಕ್ಷಕಿಯ ಕಿಡ್ನಾಪ್ ಗೆ ಮೂರು ತಿಂಗಳಿಂದಲೇ ಪ್ಲ್ಯಾನ್‌ ಮಾಡಿರೋದಾಗಿ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ: ಯೋಗ ಶಿಕ್ಷಕಿ ಕಿಡ್ನ್ಯಾಪ್‌ ಕೇಸ್: ಘಟನೆ ಬಳಿಕ ಟೆಂಪಲ್ ರನ್ ನಡೆಸಿದ್ದ ಆರೋಪಿಗಳು ಅರೆಸ್ಟ್

    ಬಿಂದು ನೀಡಿದ ಸುಪಾರಿ ಮೇರೆಗೆ ಕಿಡ್ನಾಪರ್ ಸತೀಶ್ ರೆಡ್ಡಿ ತಾನು ಕುದುರೆ ಸವಾರಿ ಮಾಡುವಾಗ ಕೆಳಗೆ ಬಿದ್ದು ಕಾಲಿಗೆ ಗಾಯವಾಗಿದೆ. ಹಾಗಾಗಿ ನನಗೆ ಯೋಗ ಕಲಿತು ಕಾಲು ನೋವು ಸರಿ ಮಾಡಿಕೊಳ್ಳಬೇಕಿದೆ ಅಂತ ಸುಳ್ಳು ಹೇಳಿ ಯೋಗ ಶಿಕ್ಷಕಿಯ ಸಂಪರ್ಕ ಸಾಧಿಸಿದ್ದನಂತೆ, ದಿನೇ ದಿನೇ ಸಲುಗೆ ಹೆಚ್ಚಾಗಿ ಆಕೆಗೆ ಜಮೀನು ತೋರಿಸ್ತೀನಿ, ಗನ್ ಶೂಟಿಂಗ್ ಟ್ರೈನಿಂಗ ಕೊಡುವುದಾಗಿ ಹೇಳಿಕೊಂಡಿದ್ದನಂತೆ..ಆದೇ ರೀತಿ ಆಕೆಯನ್ನ ಪುಸಲಾಯಿಸಿ ಕಿಡ್ನಾಪ್ ಮಾಡಿದೀವಿ ಅಂತ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಇನ್ನೂ ಆರೋಪಿಗಳ ಕಸ್ಟಡಿ ಸೋಮವಾರಕ್ಕೆ ಅಂತ್ಯವಾಗಲಿದ್ದು ನ್ಯಾಯಾಧೀಶರ ಮುಂದೆ ಆರೋಪಿಗಳನ್ನ ಹಾಜರುಪಡಿಸುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಈ ಸರ್ಕಾರ ತೆಗೆಯೋವರೆಗೆ ಮನೆಯಲ್ಲಿ ಮಲಗಲ್ಲ – ಗುಡುಗಿದ ಗೌಡರು

    ಬಿಂದು ಪತಿ ಸಂತೋಷ್ ವಿಚಾರಣೆ:
    ಯೋಗ ಶಿಕ್ಷಕಿ ಕಿಡ್ನಾಪ್‌ಗೆ ಸುಪಾರಿ ನೀಡಿದ್ದ ಬಿಂದು ಪತಿ ಸಂತೋಷ್ ಕುಮಾರ್ ನನ್ನ ಚಿಕ್ಕಬಳ್ಳಾಪುರ ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದಾರೆ. ಅಂದಹಾಗೆ ಯೋಗ ಶಿಕ್ಷಕಿಯ ಜೊತೆ ಸಂತೋಷ್ ಕುಮಾರ್ ಅನೈತಿಕ ಸಂಬಂಧ ಹೊಂದಿದ್ದಾರೆ ಅಂತ ಬಿಂದು 4 ಲಕ್ಷಕ್ಕೆ ಸುಪಾರಿ ನೀಡಿದ್ದಳು. ಸುಪಾರಿ ಮೇರೆಗೆ ಸತೀಶ್‌ ರೆಡ್ಡಿ ಆಕೆಯನ್ನ ಕಿಡ್ನಾಪ್ ಮಾಡಿದ್ದ. ಈ ಪ್ರಕರಣದಲ್ಲಿ ಸಂತೋಷ್ ಕುಮಾರ್ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಸಂತೋಷ್ ಕುಮಾರ್, ಯೋಗಿ ಶಿಕ್ಷಕಿಯ ಪತಿ ವಿಶ್ವನಾಥ್ ನಾನು ಒಂದೇ ಕಡೆ ಕೆಲಸ ಮಾಡುತ್ತಿದ್ದು ಸ್ನೇಹಿತರಾಗಿದ್ದೇವು. ವಿಶ್ವನಾಥ್‌ಗೆ ಅಪಘಾತವಾದ ಸಂದರ್ಭದಲ್ಲಿ ಆತನ ಬ್ಯಾಂಕ್ ಖಾತೆ ಪ್ರೀಝ್ ಆಗಿದ್ದ ಕಾರಣ ಆತನ ವಿಮೆ ಹಣ ನನ್ನ ಖಾತೆಗೆ ವರ್ಗಾಯಿಸಿದ್ರು.

    ಈ ಹಣ ಕೊಟ್ಟು ತೆಗೆದುಕೊಳ್ಳುವ ವಿಚಾರದಲ್ಲಿ ವಿಶ್ವನಾಥ್ ಪತ್ನಿ ಯೋಗ ಶಿಕ್ಷಕಿ ಪರಿಚಯವಾಯಿತು. ಸಲುಗೆಯಿಂದ ಇದ್ದೇವು, ಅಂತ ತಿಳಿಸಿದ್ದಾನೆ. ಆದ್ರೆ ತನ್ನ ಹೆಂಡತಿ ಹೀಗೆ ಮಾಡುತ್ತಾಳೆಂದು ಅಂದುಕೊಂಡರಲಿಲ್ಲ ಅಂತ ಪೊಲೀಸರ ಬಳಿ ಅವಲತ್ತುಕೊಂಡಿದ್ದಾನೆ.

  • ಕಿಡ್ನ್ಯಾಪ್‌ ಕೇಸ್‌ಗೆ ಟ್ವಿಸ್ಟ್ – ಅರೆಬೆತ್ತಲೆ ಮೈಗೆ ಸೊಪ್ಪು ಸುತ್ತಿಕೊಂಡು ಬಂದಿದ್ದ ಯೋಗ ಶಿಕ್ಷಕಿ!

    ಕಿಡ್ನ್ಯಾಪ್‌ ಕೇಸ್‌ಗೆ ಟ್ವಿಸ್ಟ್ – ಅರೆಬೆತ್ತಲೆ ಮೈಗೆ ಸೊಪ್ಪು ಸುತ್ತಿಕೊಂಡು ಬಂದಿದ್ದ ಯೋಗ ಶಿಕ್ಷಕಿ!

    ಚಿಕ್ಕಬಳ್ಳಾಪುರ: ಬೆಂಗಳೂರಿನ ಯೋಗ ಶಿಕ್ಷಕಿಯನ್ನ (Yoga Teacher) ಕಿಡ್ನ್ಯಾಪ್‌ ಮಾಡಿ ಜೀವಂತ ಸಮಾಧಿ ಮಾಡಿದ್ದ ಪ್ರಕರಣ ಯಾವುದೇ ಸಿನಿಮಾ ಕಥೆಗೂ ಕಮ್ಮಿಯಿಲ್ಲ ಎನ್ನುವಂತಿದೆ.

    ಹೌದು. ಬೆಂಗಳೂರಿನ (Bengaluru) ಯೋಗ ಶಿಕ್ಷಕಿಯನ್ನ ಸಂತೋಷ್ ಕುಮಾರ್ ಪತ್ನಿ ಬಿಂದು ಕೊಟ್ಟ ಸುಪಾರಿ ಮೇರೆಗೆ ಸತೀಶ್ ರೆಡ್ಡಿ ಅಂಡ್ ಕಿಡ್ನಾಪರ್ಸ್ ಗ್ಯಾಂಗ್ ಆಕ್ಟೋಬರ್ 23 ರಂದು ಅಪಾರ್ಟ್ಮೆಂಟ್‌ನಿಂದ (Apartment) ಕಾರಿನಲ್ಲಿ ಕರೆದುಕೊಂಡು ಬಂದಿದ್ರು. ಪ್ರೀ ಪ್ಲಾನ್‌ನಂತೆ ಆಕೆಯನ್ನ ಕಾರಲ್ಲಿ ಇಡೀ ದಿನ ಬೆಂಗಳೂರಿನ ನಾನಾ ಕಡೆ ಸುತ್ತಾಡಿಸಿ ಕೊನೆಗೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ರಸ್ತೆಯಲ್ಲಿನ ಗೌಡನಹಳ್ಳಿ ಧನಮಿಟ್ಟೇನಹಳ್ಳಿ ಬಳಿ ಮಾರ್ಗ ಮಧ್ಯೆ ನಿರ್ಜನ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಕಾರಿಂದ ಕೆಳಗೆ ಇಳಿಸಿ ಹಲ್ಲೆ ನಡೆಸಿದ್ದರು. ಆಕೆಯ ಮೈಮೇಲೆ ಇದ್ದ ಚಿನ್ನಾಭರಣ ಕಸಿದು, ಲೈಂಗಿಕ ದೌರ್ಜನ್ಯ ಮಾಡಿದ್ದರು. ಅರೆಬೆತ್ತಲೆಯಾಗಿದ್ದ ಆಕೆಯ ಕುತ್ತಿಗೆಗೆ ಚಾರ್ಜರ್ ವೈರ್‌ನಿಂದ ಬಲವಾಗಿ ಬಿಗಿದು ಉಸಿರುಗಟ್ಟಿಸಿದ್ದರು.. ಇನ್ನೇನು ಆಕೆ ಸತ್ತಳು ಅಂತ ಅಲ್ಲಿಂದ ಎಸ್ಕೇಪ್ ಆಗಿದ್ದರು. ಆದ್ರೆ ಯೋಗ ಶಿಕ್ಷಕಿಯಾಗಿದ್ದ ಅರ್ಚನಾ ಪ್ರಾಣಾಯಾಮದ ಟೆಕ್ನಿಕ್‌ಗಳ ಮೂಲಕ ಸತ್ತವಳಂತೆ ನಾಟಕ ಮಾಡಿದ್ರು, ಕಿಡ್ನಾಪರ್ಸ್ ಎಸ್ಕೇಪ್ ಆದ ನಂತರ ಮೆಲ್ಲಗೆ ಎದ್ದು ಅಲ್ಲಿಂದ ಊರಿನತ್ತ ಬಂದಿದ್ದಾರೆ.

    ಮೊದಲೇ ಅರಬೆತ್ತಲೆಯಾಗಿದ್ದ ಆಕೆ ಮೈ ಮುಚ್ಚಿಕೊಳ್ಳಲು ಅಲ್ಲೇ ಎಲ್ಲೋ ಬಿದ್ದಿದ್ದ ಹಳೆಯ ಶರ್ಟ್ ಧರಿಸಿಕೊಂಡಿದ್ದಾಳೆ. ಇನ್ನೂ ಸೊಂಟದ ಕೆಳಭಾಗಕ್ಕೆ ಕಾಡು ಮನುಷ್ಯರಂತೆ ಸೊಪ್ಪು ಸುತ್ತಿಕೊಂಡು ದಾರಿಯುದ್ದಕ್ಕೂ ನಡೆದುಕೊಂಡೇ ಬಂದಿದ್ದು. ಕೋಳಿ ಕೂಗುವ ಶಬ್ದ ಕೇಳಿ ವೆಂಕಟೇಶ್ ಎಂಬುವವರ ಮನೆಯತ್ತ ಧಾವಿಸಿದ್ದಾರೆ. ಮುಂಜಾನೆ 5 ಗಂಟೆ ಸುಮಾರಿಗೆ ಇದ್ಯಾರಪ್ಪ ಅಂತ ಎದ್ದವರು ಶಾಕ್ ಆಗಿ ನೋಡಿ ಈಕೆಗೆ ಸಹಾಯ ಮಾಡಿದ್ದಾರೆ. ಇದನ್ನೂ ಓದಿ: ಜಮಾತ್-ಎ-ಇಸ್ಲಾಮಿ ಬೆಂಬಲದೊಂದಿಗೆ ಪ್ರಿಯಾಂಕಾ ವಯನಾಡಿನಲ್ಲಿ ಸ್ಪರ್ಧೆ – ಪಿಣರಾಯಿ ವಿಜಯನ್‌

    ಇನ್ನೂ ಯೋಗ ಶಿಕ್ಷಕಿಯನ್ನ ಕೊಲೆ ಮಾಡಿದ್ದ ಜಾಗ ನಿರ್ಜನ ಅರಣ್ಯ ಪ್ರದೇಶವಾಗಿದ್ದು, ಕುರಚಲು ಗಿಡಗಳು ಬೆಳೆದುಕೊಂಡಿವೆ. ಎತ್ತ ನೊಡಿದರೂ ಮಳೆಯ ನೀರು ಹರಿದಿರೋ ದೊಡ್ಡ ಗುಂಡಿಗಳಿವೆ. ಆದೇ ಗುಂಡಿಯೊಳಗೆ ಈಕೆಯನ್ನ ಮುಚ್ಚಿ ಹಾಕಿದ್ದ ಕಿಡ್ನಾಪರ್ಸ್ ಆ ಗುಂಡಿ ಮೇಲೆ ಕುರಚಲು ಗಿಡಗಳ ಸೊಪ್ಪು ಸೆದೆ ಹಾಕಿ ಮುಚ್ಚಿ ಹಾಕಿದ್ದಾರೆ. ಆದ್ರೆ ಪ್ರಾಣಾಯಾಮದ ಟೆಕ್ನಿಕ್ ಮೂಲಕ ಬದುಕಿ ಬಂದಿದ್ದಾರೆ. ಸದ್ಯ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಕೃತ್ಯಕ್ಕೂ ಮುನ್ನ ಆಕೆಯನ್ನ ಹತ್ತಿಸಿಕೊಂಡಿದ್ದ ಅಪಾರ್ಟ್ಮೆಂಟ್, ಹಾಗೂ ಕಿಡ್ನಾಪರ್ ಸತೀಶ್ ರೆಡ್ಡಿ ಆಫೀಸ್, ಸೇರಿದಂತೆ ಪ್ಲಾನ್ ಮಾಡಲು ಸೇರಿದ್ದ ಸ್ಥಳವೊಂದರಲ್ಲಿ ಮಹಜರು ನಡೆಸಿದ್ದಾರೆ. ಇದನ್ನೂ ಓದಿ: ಕರ್ನಾಟಕವನ್ನ ಲೂಟಿ ಹೊಡೀತಿದ್ದಾರೆ.. ರಕ್ಷಣೆ ಮಾಡಿ – ನಿರ್ಮಲಾ ಸೀತಾರಾಮನ್ ಎದುರು ಹೈಡ್ರಾಮಾ

    ಈ ಯೋಗ ಟೀಚರ್ ಅರ್ಚನಾಗೆ ಗುಂಡಿ ತೋಡಿಸಿದ್ದೇ ಈ ಬಿಂದು. ಈ ಬಿಂದುಗೆ ಅರ್ಚನಾ ತನ್ನ ಗಂಡನ ಜೊತೆ ಸಲುಗೆಯಿಂದ ಇರೋದು ಇಷ್ಟವಿರಲಿಲ್ಲ. ಗಂಡನೊಂದಿಗೆ ಈಕೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಅನ್ನೋ ಸಿಟ್ಟಿತ್ತು. ತನ್ನ ಗಂಡನನ್ನ ತನ್ನತ್ತಲೇ ಉಳಿಸಿಕೊಳ್ಳಬೇಕು ಅಂತ ಬಿಂದು ಯೋಚನೆ ಮಾಡಿದಳು, ಅದಕ್ಕೆ ದಾರಿ ಹುಡುಕೋಕೆ ಶುರು ಮಾಡಿದ್ಳು. ಈಗಂತೂ ಯಾರಿಗೆ ಯಾವ ಡೌಟ್ ಬಂದ್ರೂ ಹುಡುಕೋದೇ ಗೂಗಲ್‌ನಲ್ಲಿ. ಅದೇ ರೀತಿ ಬಿಂದು ಕೂಡ ಈ ಅರ್ಚನಾಗೆ ಒಂದು ಗತಿ ಕಾಣಿಸಬೇಕು ಅಂದ್ರೆ ಏನ್ ಮಾಡೋದು ಅಂತ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾಳೆ. ಹೀಗೆ ಸರ್ಚ್ ಮಾಡಿದವಳಿಗೆ ಸಿಕ್ಕಿದ್ದು ಡಿಟೆಕ್ಟಿವ್ ಏಜೆನ್ಸಿ.. ಈ ಡಿಟೆಕ್ಟಿವ್ ಏಜೆನ್ಸಿಗೆ ಕಾಲ್ ಮಾಡ್ತಿದ್ದವಳಿಗೆ ಇಲ್ಲಿದ್ದಾನಲ್ಲ ಈ ಸತೀಶ್ ರೆಡ್ಡಿಯ ಕಾಂಟ್ಯಾಕ್ಟ್ ಸಿಕ್ಕಿಬಿಟ್ಟಿತ್ತು. ಡಿಟೆಕ್ಟಿವ್ ಏಜೆನ್ಸಿ ನಡೆಸುತ್ತಿದ್ದ ಸತೀಶ್ ರೆಡ್ಡಿಗೆ 4 ಲಕ್ಷ ರೂ. ಸುಪಾರಿ ಕೊಟ್ಟಿದ್ದಾಳೆ.

    ಒಟ್ನಲ್ಲಿ ಕಿಡ್ನ್ಯಾಪ್‌ ಆಗಿ ಕೊಲೆಯಾಗಬೇಕಿದ್ದ ಯೋಗ ಶಿಕ್ಷಕಿ ಬದುಕಿದ್ದೇ ರೋಚಕವಾಗಿದೆ. ಸದ್ಯ ಕಿಡ್ನಾಪರ್ಸ್ ಹಾಗೂ ಸುಪಾರಿ ಕೊಟ್ಟಿದ್ದ ಕಿಲಾಡಿ ಲೇಡಿ ಜೈಲು ಸೇರಿದ್ದು, ಕಿಡ್ನಾಪ್‌ಗಾಗಿ ಕಾರು ಕಳವು ಮಾಡಿದ ತಂದಿದ್ದ ಅಪ್ರಾಪ್ತ ಬಾಲಕ ಸಹ ಕಾನೂನು ಪ್ರಕ್ರಿಯೆಗೆ ಒಳಗಾಗಿದ್ದಾನೆ. ಇದನ್ನೂ ಓದಿ: Kodagu | ದೇವಾಲಯಕ್ಕೂ ಹಬ್ಬಿದ ವಕ್ಫ್‌ ಭೂತ – ವನದುರ್ಗ, ಗುಳಿಗ ದೈವಾರಾಧನೆ ನಡೆಯುವ 11 ಎಕ್ರೆ ಜಾಗ ವಕ್ಫ್‌ ಆಸ್ತಿ!