ಹೈದರಾಬಾದ್: ತೆಲಂಗಾಣದ ಪ್ರದೇಶವೊಂದರಲ್ಲಿ ನೇಮಕಗೊಂಡ ಗುಪ್ತಚರ ಇಲಾಖೆಯ (ಐಬಿ) ಅಧಿಕಾರಿಯೊಬ್ಬರು ಕರ್ತವ್ಯದಲ್ಲಿದ್ದಾಗ ಆಕಸ್ಮಿಕವಾಗಿ ಬಿದ್ದ ಪರಿಣಾಮ ಗಾಯಗೊಂಡು ಸಾವನ್ನಪ್ಪಿದ್ದಾರೆ.
ಐಬಿ ಸಹಾಯಕ ನಿರ್ದೇಶಕ ಅಮರೀಶ್ (51) ಮೃತ ಅಧಿಕಾರಿ. ಅಮರೀಶ್ ಅವರು ಬುಧವಾರ ಮಧ್ಯಾಹ್ನ ಹೈದರಾಬಾದ್ನ ಮಾದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶಿಲ್ಪ ಕಲಾ ವೇದಿಕೆಯಲ್ಲಿ ಭದ್ರತಾ ತಪಾಸಣೆ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದಿದ್ದಾರೆ. ಇದನ್ನೂ ಓದಿ: ಬಾಕ್ಸಿಂಗ್ ರಿಂಗ್ನಲ್ಲಿಯೇ ಹೃದಯಾಘಾತ – ಚಾಂಪಿಯನ್ ಮೂಸಾ ಯಮಕ್ ವಿಧಿವಶ
ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಬಂದು ಬರೋಬ್ಬರಿ ಆರು ತಿಂಗಳು ತುಂಬಿವೆ. ಆದರೆ ಆರು ತಿಂಗಳ ನಂತರ ಸರ್ಕಾರ, ಪಕ್ಷ, ಸಚಿವರು, ಶಾಸಕರು, ವಲಸಿಗರು ಹೀಗೆ ಎಲ್ಲರ ಎಲ್ಲದರ ವರಸೆಗಳು ನಿಧಾನಕ್ಕೆ ಬದಲಾಗತೊಡಗಿವೆ. ಆರು ತಿಂಗಳ ಹಿಂದಿನ ಬಿಜೆಪಿಗೂ ಈಗಿನ ಬಿಜೆಪಿಗೂ ನಡುವೆ ಬಹಳಷ್ಟು ಬದಲಾವಣೆಗಳು ಆಗಿವೆ, ಆಗತೊಡಗಿವೆ. ಯಡಿಯೂರಪ್ಪ ನಾಯಕತ್ವದಲ್ಲಿ ನಾವೆಲ್ಲ ಮುಂದೆ ಹೋಗ್ತೀವಿ, ಉತ್ತಮ ಆಡಳಿತ ಕೊಡ್ತೀವಿ, ಪ್ರಸಕ್ತ ಸರ್ಕಾರದ ಈ ಅವಧಿ ಪೂರೈಸಿ ಮುಂದಿನ ಬಾರಿಗೂ ಬಿಜೆಪಿಯೇ ಬರೋ ಹಾಗೆ ಮಾಡ್ತೀವಿ ಅಂದವರ ಮನಸ್ಥಿತಿ- ಹೇಳಿಕೆಗಳು, ನಿಲುವು- ನಡೆಗಳು ಬಣ್ಣ ಬದಲಾಯಿಸತೊಡಗಿವೆ. ಈಗ ಸರ್ಕಾರ ಮತ್ತು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಇತ್ತೀಚಿನ ವಿದ್ಯಮಾನಗಳಿಂದ ಸಾಬೀತಾಗಿದೆ. ಖುದ್ದು ಈಗಲೂ ಪಕ್ಷದ ಮೇರು ನಾಯಕ, ಸರ್ಕಾರದಲ್ಲೂ ಹಿಡಿತ ಇಟ್ಟುಕೊಂಡಿರುವ ಸಿಎಂ ಯಡಿಯೂರಪ್ಪ ಅವರಿಗೆ ಖುದ್ದು ಪಕ್ಷದ ಶಾಸಕರ ಮೇಲೆಯೇ ನಂಬಿಕೆ ಹೋಗತೊಡಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಯಡಿಯೂರಪ್ಪ ಅವರಿಗೆ ಶಾಸಕರ ನಡವಳಿಕೆಗಳ ಮೇಲೆ ಅದಾಗಲೇ ಗುಮಾನಿ ಶುರುವಾಗಿದೆ.
ಇತ್ತೀಚೆಗೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ನಿವಾಸದಲ್ಲಿ ಬಿಜೆಪಿ ಶಾಸಕರು ಸಭೆ ನಡೆಸಿದ್ದರು. ಆ ಸಭೆಯ ಉದ್ದೇಶ ಬಳಿಕ ಅದು ಮಾಧ್ಯಮಗಳಲ್ಲಿ ವರದಿಯಾದ ರೀತಿ ಏನೇ ಇರಬಹುದು. ಆದರೆ ಹೀಗೆ ತಮ್ಮ ಗಮನಕ್ಕೆ ಬರದೇ ಶಾಸಕರು ಗುಪ್ತ ಸಭೆ ಮಾಡಿದ್ದಕ್ಕೆ ಯಡಿಯೂರಪ್ಪ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ಶೆಟ್ಟರ್ ನಿವಾಸದ ಸಭೆಯ ಬೆನ್ನಲ್ಲೇ ಪಂಚಮಸಾಲಿ ಶಾಸಕರು ಸಹ ಸ್ವಾಮೀಜಿಗಳ ಜೊತೆ ಸಭೆ ನಡೆಸಿರುವುದು ಯಡಿಯೂರಪ್ಪ ಅವರಲ್ಲಿ ಅಸಮಾಧಾನ ಹಟ್ಟಿಸಿದೆ ಎಂದು ಅವರ ಆಪ್ತ ವರ್ಗ ಹೇಳಿಕೊಂಡಿದೆ. ಇದರ ಜೊತೆ ಬೇರೆ ಬೇರೆ ಭಿನ್ನಮತಗಳು, ರಹಸ್ಯ ಚಲನವಲನಗಳು ನಡೆಯುತ್ತಿರುವುದು ಯಡಿಯೂರಪ್ಪ ಅವರ ಗಮನಕ್ಕೆ ಬಂದಿದೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದ ಹಲವು ಶಾಸಕರ ಚಲನವಲನಗಳ ಮಾಹಿತಿ ಪಡೆಯಲು ಗುಪ್ತಚರ ದಳವನ್ನು ಛೂ ಬಿಟ್ಟಿದ್ದಾರೆ ಎನ್ನಲಾಗಿದೆ.
ಶೆಟ್ಟರ್ ನಿವಾಸದ ಸಭೆ ಬಳಿಕ ಎಚ್ಚೆತ್ತುಕೊಂಡ ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯ ಗುಪ್ತಚರ ಇಲಾಖೆಗೆ ಸಿಎಂ ಹೊಸ ಟಾಸ್ಕ್ ನೀಡಿದ್ದಾರೆ. ಸಿಎಂ ಗುಪ್ತಚರ ಇಲಾಖೆಗೆ ನೀಡಿದ ಟಾಸ್ಕ್ ನಿಂದಾಗಿ ಯಾರೇ ಪ್ರತ್ಯೇಕ ಸಭೆ ನಡೆಸಿದ್ರು ತಕ್ಷಣ ಮಾಹಿತಿ ಸಿಎಂಗೆ ರವಾನೆ ಆಗಲಿದೆ ಎನ್ನಲಾಗಿದೆ.
ಸಂಜೆ ಆಗ್ತಿದ್ದಂತೆ ಕಾರ್ಯಪ್ರವೃತ್ತರಾಗುವ ಆ ಇಂಟಲಿಜೆನ್ಸ್ ತಂಡ ಬೆಂಗಳೂರಿನ ಪಂಚತಾರಾ ಹೋಟೆಲ್ ಗಳ ಮೇಲೆ ಹದ್ದಿನ ಕಣ್ಣು ಇಟ್ಟಿದೆ ಎನ್ನಲಾಗಿದೆ. ಗುಪ್ತಚರ ಇಲಾಖೆಗೆ ಬೆಂಗಳೂರಿನ ಎಲ್ಲ ಪಂಚತಾರಾ ಹೋಟೆಲುಗಳಿಗೆ ರೌಂಡ್ಸ್ ಹೊಡೆಯಲು ಸಿಎಂ ಗುಪ್ತಚರ ಇಲಾಖೆಗೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ. ಸಿಎಂ ಸೂಚನೆ ಮೇರೆಗೆ ಪಂಚತಾರಾ ಹೋಟೆಲ್ ಗಳಿಗೆ ಗುಪ್ತಚರ ಇಲಾಖೆ ಅಧಿಕಾರಿಗಳು ರೌಂಡ್ಸ್ ಹೊಡೆಯುತ್ತಿದ್ದಾರೆ ಎನ್ನಲಾಗಿದೆ.
ಶಾಸಕರು ಪ್ರತ್ಯೇಕ ಸಭೆ ನಡೆಸುತ್ತಿರುವ ಮಾಹಿತಿ ಸಿಕ್ಕರೆ ತಕ್ಷಣ ಸಿಎಂಗೆ ಮಾಹಿತಿ ನೀಡಲಿದೆಯಂತೆ ಗುಪ್ತಚರ ಇಲಾಖೆಯ ಈ ತಂಡ. ಪ್ರತ್ಯೇಕ ಸಭೆಯಲ್ಲಿ ಯಾರೆಲ್ಲ ಇದ್ದಾರೆ, ಸಭೆಯ ಅಜೆಂಡಾ ಏನು, ಎಷ್ಟು ಸಮಯ ಸಭೆ ನಡೆಸಿದ್ರು, ಎಲ್ಲಿ ಸಭೆ ನಡೆಸಿದರು ಎಂಬಿತ್ಯಾದಿ ಮಾಹಿತಿ ತಕ್ಷಣ ಸಿಎಂಗೆ ರವಾನೆ ಆಗಲಿದೆಯಂತೆ. ಸಂಜೆಯಾಗ್ತಿದ್ದಂತೆ ಬೆಂಗಳೂರಿನಲ್ಲಿ ಯಾರೆಲ್ಲ ಬಿಜೆಪಿ ಶಾಸಕರಿದ್ದಾರೆ, ಲೋಕೇಶನ್ ಎಲ್ಲಿ, ಮೀಟಿಂಗ್ ಏನಾದ್ರು ಮಾಡ್ತಿದ್ದಾರಾ ಅಂತಲೂ ಈ ತಂಡ ಪತ್ತೆ ಹಚ್ಚುತ್ತಿದೆ ಎನ್ನಲಾಗಿದೆ. ಗುಪ್ತಚರ ಇಲಾಖೆಯ ಈ ತಂಡ ತಡರಾತ್ರಿವರೆಗೂ ಪಂಚತಾರ ಹೋಟೆಲ್ ಗಳ ರೌಂಡ್ಸ್ ಹೊಡೆಯುತ್ತಿದೆ ಎನ್ನಲಾಗಿದೆ. ಆ ಮೂಲಕ ಸರ್ಕಾರ ಉಳಿಸಿ ಉಳಿದ ಅವಧಿವರೆಗೂ ಎದುರಾಗುವ ಸಮಸ್ಯೆಗಳನ್ನು ಬರದಂತೆ ತಡೆಯಲು ಸಿಎಂ ಯಡಿಯೂರಪ್ಪ ಈ ಮುನ್ನೆಚ್ಚರಿಕೆ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಚೆನ್ನೈ: ಮಾಲ್ಡೀವ್ಸ್ನ ಮಾಜಿ ಉಪಾಧ್ಯಕ್ಷ ಅಹ್ಮದ್ ಆದೀಬ್ ಅಬ್ದುಲ್ ಗಫೂರ್ ಅವರನ್ನು ಅಕ್ರಮವಾಗಿ ದೇಶವನ್ನು ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಭಾರತೀಯ ಗುಪ್ತಚರ ಇಲಾಖೆ (ಐಬಿ) ಅಧಿಕಾರಿಗಳು ಇಂದು ತಮಿಳುನಾಡಿನ ತೂತುಕುಡಿಯಲ್ಲಿ ಬಂಧಿಸಿದ್ದಾರೆ.
ಅಹ್ಮದ್ ಆದೀಬ್ ಅಬ್ದುಲ್ ಗಫೂರ್ ಅವರು ಒಂದು ಬೋಟಿನಲ್ಲಿ ಅ ಬೋಟಿನ ಸಿಬ್ಬಂದಿಯಂತೆ ನಟಿಸಿ ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಲು ಯತ್ನಿಸಿದಾಗ ಅವರನ್ನು ಗುಪ್ತಚಾರ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಗುಪ್ತಚರ ಇಲಾಖೆ ಅಧಿಕಾರಿಗಳು ಅವರು ಬಳಿ ಯಾವುದೇ ಪಾಸ್ ಪೋರ್ಟ್ ಇರಲಿಲ್ಲ ಮತ್ತು ಅವರು ಮಾಲ್ಡೀವ್ಸ್ ನ ರಾಜಕಾರಣಿಯಾಗಿ ಏಕೆ ಭಾರತಕ್ಕೆ ಅನಧಿಕೃತವಾಗಿ ಪ್ರವೇಶ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ನಾವು ತನಿಖೆ ಮಾಡುತ್ತಿದ್ದೇವೆ. ಮಾಲ್ಡೀವ್ಸ್ ನ ಮಾಜಿ ಉಪಾಧ್ಯಕ್ಷರಾಗಿರುವ ಕಾರಣ ಅವರನ್ನು ಬಂಧಿಸಿರುವ ಮಾಹಿತಿಯನ್ನು ಭಾರತೀಯ ವಿದೇಶಾಂಗ ಸಚಿವಾಲಯಕ್ಕೆ ವರದಿ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್, ನಾವು ನಮಗೆ ಸಿಕ್ಕಿರುವ ವರದಿಗಳ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ಇದರ ಜೊತೆಗೆ ನಾವು ಮಾಲ್ಡೀವ್ಸ್ ಸರ್ಕಾರವನ್ನು ಸಂಪರ್ಕಿಸಿ ಈ ವರದಿಗಳು ನಿಜವೇ ಎಂದು ತಿಳಿಯಲು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ.
ಅಹ್ಮದ್ ಆದೀಬ್ ಅಬ್ದುಲ್ ಗಫೂರ್ ವಿರುದ್ಧ ಮಾಲ್ಡೀವ್ಸ್ ನ್ಯಾಯಾಲಯಗಳಲ್ಲಿ ಹಲವಾರು ಪ್ರಕರಣಗಳು ಇದ್ದು, ಅಲ್ಲಿನ ಸರ್ಕಾರ ಅವರ ಪಾಸ್ ಪೋರ್ಟ್ ರದ್ದು ಮಾಡಿದೆ. ಹೀಗಾಗಿ ದೇಶ ಬಿಟ್ಟು ಭಾರತಕ್ಕೆ ಬೋಟ್ ಮೂಲಕ ಅನಧಿಕೃತವಾಗಿ ಪ್ರವೇಶ ಮಾಡಲು ಯತ್ನಿಸಿದ್ದರು ಎಂದು ವರದಿಯಾಗಿದೆ.
ಅಬ್ದುಲ್ ಗಫೂರ್ ಮಾಲ್ಡೀವ್ಸ್ ಮಾರ್ಕೆಟಿಂಗ್ ಮತ್ತು ಪಬ್ಲಿಕ್ ರಿಲೇಶನ್ಸ್ ಕಾರ್ಪೊರೇಷನ್ (ಎಮ್.ಎಂ.ಪಿ.ಆರ್.ಸಿ) ಗೆ ಸಂಬಂಧಿಸಿದ ಪ್ರಕರಣವೂ ಸೇರಿದಂತೆ ಅನೇಕ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಗಫೂರ್ ಅವರನ್ನು ಮಾಲ್ಡೀವ್ಸ್ ನ ಭ್ರಷ್ಟಾಚಾರ ನಿಗ್ರಹ ದಳ (ಎಸಿಸಿ) ಬುಧವಾರ ವಿಚಾರಣೆಗೆ ಕರೆದಿತ್ತು. ಆದರೆ ಅವರು ತಪ್ಪಿಸಿಕೊಂಡು ಭಾರತಕ್ಕೆ ಬಂದಿದ್ದಾರೆ.