Tag: Dentist

  • ಮಹಿಳೆಯ ದೇಹ ತುಂಡರಿಸಿ ಎಸೆದಿದ್ದ ಪ್ರಕರಣಕ್ಕೆ ಟ್ವಿಸ್ಟ್ – ಡೆಂಟಿಸ್ಟ್ ಅಳಿಯನಿಂದಲೇ ಅತ್ತೆಯ ಹತ್ಯೆ

    ಮಹಿಳೆಯ ದೇಹ ತುಂಡರಿಸಿ ಎಸೆದಿದ್ದ ಪ್ರಕರಣಕ್ಕೆ ಟ್ವಿಸ್ಟ್ – ಡೆಂಟಿಸ್ಟ್ ಅಳಿಯನಿಂದಲೇ ಅತ್ತೆಯ ಹತ್ಯೆ

    – ನಾಲ್ವರು ಆರೋಪಿಗಳು ಅಂದರ್
    – ಕೊಲೆ ಬಳಿಕ ಧರ್ಮಸ್ಥಳ ಯಾತ್ರೆಗೆ ತೆರಳಿದ್ದ ಆರೋಪಿಗಳು

    ತುಮಕೂರು: ಜಿಲ್ಲೆಯ ಕೊರಟಗೆರೆಯಲ್ಲಿ (Koratagere) ಮಹಿಳೆಯನ್ನು ಕೊಲೆ ಮಾಡಿ ಮೃತ ದೇಹ ತುಂಡರಿಸಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮೃತ ಲಕ್ಷ್ಮೀದೇವಮ್ಮಳ ಅಳಿಯನೇ (Son In Law) ಈ ಕೃತ್ಯ ನಡೆಸಿರೋದು ಬೆಳಕಿಗೆ ಬಂದಿದೆ.

    ವೃತ್ತಿಯಲ್ಲಿ ದಂತ ವೈದ್ಯನಾಗಿರುವ (Dentist) ಡಾ. ರಾಮಚಂದ್ರ ತನ್ನ ಸ್ನೇಹಿತ ಸತೀಶ್ ಹಾಗೂ ಕಿರಣನ ಜೊತೆ ಸೇರಿ ಹತ್ಯೆ ಮಾಡಿದ್ದಾನೆ. ಮೃತ ಲಕ್ಷ್ಮೀದೇವಮ್ಮ ತನ್ನ ಮಗಳನ್ನೇ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರಚೋದಿಸುತಿದ್ದಳು ಎಂಬ ಆರೋಪ ಇದೆ. ಇದನ್ನು ಸಹಿಸದ ಅಳಿಯ ಡಾ.ರಾಮಚಂದ್ರ ಅತ್ತೆಯನ್ನೇ ಕೊಲೆ ಮಾಡಿದ್ದಾನೆ. ಕೋಳಾಲದಲ್ಲಿ ಇರುವ ಸ್ನೇಹಿತ ಸತೀಶ್ ಎಂಬಾತನ ಫಾರ್ಮ್ ಹೌಸ್‌ನಲ್ಲಿ ಕೊಲೆ ಮಾಡಿ ದೇಹದ ಭಾಗಗಳನ್ನು ಪೀಸ್ ಪೀಸ್ ಮಾಡಿ ಎಸೆಯಲಾಗಿತ್ತು. ಬಳಿಕ ಆರೋಪಿಗಳು ಧರ್ಮಸ್ಥಳ ಯಾತ್ರೆಗೆ ಹೋಗಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ 5 ದಿನ ಭಾರೀ ಮಳೆ ಮುನ್ಸೂಚನೆ

    ಅತ್ತೆಯ ಕೊಲೆ ಆದರೂ ಅಳಿಯ ಸ್ಥಳದಲ್ಲಿ ಇಲ್ಲದಿರುವುದಕ್ಕೆ ಅನುಮಾನಗೊಂಡ ಪೊಲೀಸರು ವಿಚಾರಣೆ ಮಾಡಿದ್ದಾರೆ. ಆಗ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಕೊರಟಗೆರೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪಂಚಾಯತ್ ರಾಜ್ ಇಲಾಖೆಯ ಹಿರಿಯ ಸಹಾಯಕಿಗೆ 45,000 ರೂ. ಸೈಬರ್ ವಂಚನೆ

  • ಪಾಗಲ್ ಪ್ರೇಮಿ ಕಾಟಕ್ಕೆ ಬೇಸತ್ತು UP ಮೂಲದ ದಂತ ವೈದ್ಯೆ ಆತ್ಮಹತ್ಯೆ

    ಪಾಗಲ್ ಪ್ರೇಮಿ ಕಾಟಕ್ಕೆ ಬೇಸತ್ತು UP ಮೂಲದ ದಂತ ವೈದ್ಯೆ ಆತ್ಮಹತ್ಯೆ

    ಬೆಂಗಳೂರು: ಪಾಗಲ್ ಪ್ರೇಮಿಯ ಕಾಟಕ್ಕೆ ಬೇಸತ್ತು ದಂತ ವೈದ್ಯೆ (Dentist) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಸಂಜಯ್ ನಗರದಲ್ಲಿ (SanjayNagar) ನಡೆದಿದೆ.

    ಜನವರಿ 25ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಿಯಾಂನ್ಷಿ ತ್ರಿಪಾಠಿ ಆತ್ಮಹತ್ಯೆ ಮಾಡಿಕೊಂಡ ದಂತ ವೈದ್ಯೆ. ಇದನ್ನೂ ಓದಿ: ವಿಡಿಯೋ ಕಾಲ್ ಮಾಡಿ ಹೆಂಡತಿ ತೋರಿಸದಿದ್ದಕ್ಕೆ ಸ್ನೇಹಿತನಿಗೆ ಚಾಕು ಇರಿತ

    ಉತ್ತರಪ್ರದೇಶ (Uttar Pradesh) ಲಕ್ನೋ ಮೂಲದ ಪ್ರಿಯಾಂನ್ಷಿ ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ (MS Ramaiah Memorial Hospital) ದಂತವೈದ್ಯೆ ಆಗಿ ಕೆಲಸ ಮಾಡುತ್ತಿದ್ದರು.

    ಅದೇ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಸುಮಿತ್ ತನ್ನನ್ನು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ಆದ್ರೆ ಪ್ರಿಯಾಂನ್ಷಿ ತ್ರಿಪಾಠಿ, ಪ್ರೀತಿಗೆ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡ ವೈದ್ಯ ಸುಮಿತ್, ಪ್ರಿಯಾಂನ್ಷಿ ತ್ರಿಪಾಠಿಯ ವ್ಯಕ್ತಿತ್ವದ ಬಗ್ಗೆ ಕೆಟ್ಟದಾಗಿ ಬಿಂಬಿಸಿದ್ದ. ಆಕೆ ಸರಿಯಿಲ್ಲ, ಸಿಗರೆಟ್ ಸೇದುತ್ತಾಳೆ, ಡ್ರಿಂಗ್ಸ್ ಮಾಡ್ತಾಳೆ.. ಸಿಕ್ಕ ಸಿಕ್ಕವರ ಜೊತೆಗೆ ಓಡಾಡ್ತಾಳೆ ಅಂತಾ ಹೇಳಿಕೊಂಡು ಬರ್ತಿದ್ದ. ಇದರಿಂದ ಮನನೊಂದ ಪ್ರಿಯಾಂನ್ಷಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಪ್ರಿಯಾಂನ್ಷಿ ತಂದೆ ಸುಶೀಲ್ ತ್ರಿಪಾಠಿ ಅವರು ನೀಡಿದ ದೂರು ಆಧರಿಸಿ ಸಂಜಯ್ ನಗರದ ಪೊಲೀಸರು ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಗುಬ್ಬಿ ಜಾತ್ರೆಯಲ್ಲಿ ಅನ್ಯಕೋಮಿನವರ ವ್ಯಾಪಾರಕ್ಕೆ ನಿಷೇಧ ಹೇರಲು ಒತ್ತಾಯ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತವರು ಮನೆಯಿಂದ 12 ವರ್ಷ ದೂರವಾಗಿದ್ದಕ್ಕೆ ದಂತವೈದ್ಯೆ ಆತ್ಮಹತ್ಯೆ?

    ತವರು ಮನೆಯಿಂದ 12 ವರ್ಷ ದೂರವಾಗಿದ್ದಕ್ಕೆ ದಂತವೈದ್ಯೆ ಆತ್ಮಹತ್ಯೆ?

    ಬೆಂಗಳೂರು: ನಗರದ ಬನಶಂಕರಿಯಲ್ಲಿ ತಾಯಿ ಮಗಳನ್ನೇ ಕೊಂದು ಬಳಿಕ ತಾನೂ ನೇಣಿಗೆ ಶರಣಾದ ಘಟನೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕಳೆದ 12 ವರ್ಷಗಳಿಂದ ತವರು ಮನೆಗೆ ಪ್ರವೇಶ ನೀಡಿರಲಿಲ್ಲ ಎಂಬ ಕಾರಣಕ್ಕೆ ಕುಗ್ಗಿಹೋಗಿದ್ದ ದಂತವೈದ್ಯೆ ಮಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

    ವಿರಾಜಪೇಟೆ ಮೂಲದ ಸೈಮಾ ಗಂಡ ಕೆಲಸಕ್ಕೆ ಹೋಗಿದ್ದ ಸಂದರ್ಭ ತನ್ನ 10 ವರ್ಷದ ಮಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಳು. ಪತಿ ನಾರಾಯಣ್ ಕೂಡಾ ದಂತ ವೈದ್ಯನಾಗಿದ್ದು, ಕೆಲಸದ ಸ್ಥಳದಿಂದ ಪತ್ನಿಗೆ ಎಷ್ಟು ಬಾರಿ ಕರೆ ಮಾಡಿದರೂ ಉತ್ತರಿಸುತ್ತಿಲ್ಲವೆಂದು ತನ್ನ ಸಹಾಯಕನನ್ನು ಮನೆಗೆ ಕಳುಹಿಸಿದಾಗ ವಿಚಾರ ಬೆಳಕಿಗೆ ಬಂದಿತ್ತು. ಇದನ್ನೂ ಓದಿ: ಧಾರಾಕಾರ ಮಳೆಯಿಂದ ಕೊಡಗು ಮಂದಿ ತತ್ತರ- ಸೂಕ್ಷ ಪ್ರದೇಶದ ಜನ ಪರಿಹಾರ ಕೇಂದ್ರಕ್ಕೆ ಶಿಫ್ಟ್

    12 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಸೈಮಾ ಹಾಗೂ ನಾರಾಯಣ್‌ಗೆ ಅಂದಿನಿಂದಲೂ ತವರಿನಲ್ಲಿ ಪ್ರವೇಶ ನೀಡಿರಲಿಲ್ಲ. ಇದರ ನಡುವೆಯೇ ಸೈಮಾಳ ತಾಯಿಯೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲೂ ಸೈಮಾಗೆ ತವರಿಗೆ ಪ್ರವೇಶ ನೀಡಿರಲಿಲ್ಲ. ಇದರಿಂದ ಕುಗ್ಗಿ ಹೋಗಿದ್ದ ಸೈಮಾ ಪದೇ ಪದೇ ಆತ್ಮಹತ್ಯೆ ಬಗ್ಗೆ ಚರ್ಚಿಸುತ್ತಿದ್ದ ವಿಷಯ ಈಗ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬೆಳಗಾವಿಯಲ್ಲೊಂದು ‘ರುದ್ರಪ್ರಯಾಗ’ದ ಥ್ರಿಲ್ಲರ್ ಸ್ಟೋರಿ – ಚಿರತೆ ಸೆರೆಗೆ 7 ಬೋನ್, 16 ಕ್ಯಾಮೆರಾ

     

    1 ತಿಂಗಳ ಹಿಂದೆಯಷ್ಟೇ ಸೈಮಾಗೆ ತವರಿಗೆ ಹೋಗಲು ಸಾಧ್ಯವಾಗಿದ್ದು, 10 ದಿನಗಳ ಕಾಲ ಅಲ್ಲಿಯೇ ಇದ್ದು ಮರಳಿದ್ದಳು. ತವರು ಮನೆಯಿಂದ ಬಂದ ಬಳಿಕ ಆಕೆ ಸಂಪೂರ್ಣವಾಗಿ ಆತ್ಮಹತ್ಯೆ ಬಗ್ಗೆ ಯೋಚನೆ ಮಾಡುತ್ತಿದ್ದಳು. ತಾನೊಬ್ಬಳೇ ಆತ್ಮಹತ್ಯೆ ಮಾಡಿಕೊಂಡರೆ ಮಗು ಅನಾಥವಾಗುತ್ತೆ, ತಾಯಿ ಇಲ್ಲದೇ ತಾನು ಅನುಭವಿಸಿದ ಕಷ್ಟವನ್ನು ಮಗು ಅನುಭವಿಸಬಾರದು ಎಂದು, ಗಂಡನಿಲ್ಲದ ಸಮಯ ನೋಡಿಕೊಂಡು ಸೈಮಾ ಮೊದಲಿಗೆ ಮಗಳನ್ನು ಕುಣಿಕೆಗೆ ಹಾಕಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ಈಗ ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಮನೆಗೆ ನುಗ್ಗಿ ಕತ್ತು ಕೊಯ್ದು ದಂತ ವೈದ್ಯೆಯ ಬರ್ಬರ ಹತ್ಯೆ

    ಮನೆಗೆ ನುಗ್ಗಿ ಕತ್ತು ಕೊಯ್ದು ದಂತ ವೈದ್ಯೆಯ ಬರ್ಬರ ಹತ್ಯೆ

    – ಎಂಟು ವರ್ಷದ ಮಗಳ ಮಂದೆಯೇ ಅಮ್ಮನ ಕೊಲೆ
    – ಕೇಬಲ್ ಆಪರೇಟರ್ ಗಳ ಹೆಸರಲ್ಲಿ ಮನೆಗೆ ಎಂಟ್ರಿ
    – ಅಪಾಯದಿಂದ ಪಾರಾದ ವೈದ್ಯೆಯ ಮಕ್ಕಳು

    ಲಕ್ನೋ: ಮನೆಗೆ ನುಗ್ಗಿದ ಕಿರಾತಕ ದಂತ ವೈದ್ಯೆಯ ಕತ್ತು ಸೀಳಿ ಕೊಲೆಗೈದಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಆಗ್ರಾದ ಕಾವೇರಿ ಕುಂಜ್ ಕಾಲೋನಿಯಲ್ಲಿ ಶುಕ್ರವಾರ ನಡೆದಿದೆ. ಆರೋಪಿಯ ಸಂಪೂರ್ಣ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಡಾ. ನಿಶಾ ಸಿಂಘಾಲ್ ಕೊಲೆಯಾದ ದಂತ ವೈದ್ಯೆ. ಮಹಿಳೆಯ ಎಂಟು ವರ್ಷದ ಪುತ್ರಿ ಅನಿಶಾ ಮತ್ತು ನಾಲ್ಕು ವರ್ಷದ ಪುತ್ರ ಅದ್ವಯ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿಶಾ ಅವರ ಕೊಲೆಯಾದ ಮಕ್ಕಳು ಮತ್ತೊಂದು ಕೋಣೆಯಲ್ಲಿ ಆಟವಾಡುತ್ತಿದ್ದರು. ಆರೋಪಿ ಮಕ್ಕಳ ಮೇಲೆಯೂ ಹಲ್ಲೆ ನಡೆಸಿದ್ದು, ಆದ್ರೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಇಂದು ಬೆಳಗ್ಗೆ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

    ನಿಶಾ ಪತಿ ಸಹ ವೈದ್ಯರಾಗಿದ್ದು ದಾಳಿ ವೇಳೆ ಆಸ್ಪತ್ರೆಯಲ್ಲಿದ್ದರು. ಆರೋಪಿ ದರೋಡೆಯ ಸಂಚು ರೂಪಿಸಿ ಕೇಬಲ್ ಟೆಕ್ನಿಷಿಯನ್ ಅಂತ ಹೇಳಿಕೊಂಡು ಮನೆಗೆ ಬಂದಿದ್ದಾನೆ. ಮನೆಯಲ್ಲಿದ್ದ ನಿಶಾ ಅವರ ಕತ್ತು ಸೀಳಿ ಕೊಲೆಗೈದು ಮಕ್ಕಳ ಮೇಲೆ ಹಲ್ಲೆ ನಡೆಸಿ ಸುಮಾರು ಒಂದು ಗಂಟೆಯ ಬಳಿಕ ಮನೆಯಿಂದ ಹೊರ ಹೋಗಿದ್ದಾನೆ.

    ಮನೆಗೆ ಬಂದಿದ್ದ ಆ ಅಂಕಲ್ ರಕ್ತಮಯವಾದ ಚಾಕು ಹಿಡಿದು ನನ್ನ ಬಳಿ ಬಂದಿದ್ದನು. ತಮ್ಮ ಅದ್ವಯ್ ಜೋರಾಗಿ ಅಳಲು ಆರಂಭಿಸಿದನು. ಸುಮ್ಮನಿರಿ, ಇಲ್ಲವಾದ್ರೆ ಅಮ್ಮನ ರೀತಿ ನಿಮ್ಮನ್ನು ಕೊಲ್ಲುತ್ತೇನೆ ಎಂದು ಕತ್ತಿನ ಭಾಗದಲ್ಲಿ ಚಾಕು ಇಟ್ಟಿದ್ದನು. ತಮ್ಮ ಜೋರಾಗಿ ಅತ್ತಿದ್ದರಿಂದ ಚಾಕು ಜೋರಾಗಿ ಒತ್ತಿದ. ಹಾಗಾಗಿ ಕತ್ತಿನ ಭಾಗದಲ್ಲಿ ರಕ್ತ ಬಂತು ಎಂದು ವೈದ್ಯ ಪುತ್ರಿ ಅನಿಶಾ ಪೊಲೀಸರ ಮುಂದೆ ತನ್ನ ಹೇಳಿಕೆ ದಾಖಲಿಸಿದ್ದಾಳೆ.

  • ಕ್ಲಿನಿಕ್ ಲ್ಯಾಬ್‍ಗೆ ಕರ್ಕೊಂಡು ಹೋದ – ಡೆಂಟಿಸ್ಟ್‌ಗೆ ಚಾಕು ಇರಿದ ಲಿವ್ ಇನ್ ಪಾರ್ಟ್ನರ್

    ಕ್ಲಿನಿಕ್ ಲ್ಯಾಬ್‍ಗೆ ಕರ್ಕೊಂಡು ಹೋದ – ಡೆಂಟಿಸ್ಟ್‌ಗೆ ಚಾಕು ಇರಿದ ಲಿವ್ ಇನ್ ಪಾರ್ಟ್ನರ್

    – 2 ವರ್ಷಗಳಿಂದ ಲಿವ್ ಇನ್ ರಿಲೇಷನ್‍ಶಿಪ್‍ನಲ್ಲಿದ್ರು

    ತಿರುವನಂತಪುರಂ: ಲಿವ್ ಇನ್ ಪಾರ್ಟ್ನರ್ ನೊಬ್ಬ ದಂತವೈದ್ಯೆಗೆ ಚಾಕುವಿನಿಂದ ಇರಿದಿದ್ದು, ಪರಿಣಾಮ ಚಿಕಿತ್ಸೆ ಫಲಿಕಾರಿಯಾಗದೆ ಡೆಂಟಿಸ್ಟ್ ಮೃತಪಟ್ಟಿರುವ ಘಟನೆ ಕೇಳರದ ಎರ್ನಾಕುಲಂ ಜಿಲ್ಲೆಯಲ್ಲಿ ನಡೆದಿದೆ.

    ಡಾ.ಸೋನಾ (30) ಮೃತ ಡೆಂಟಿಸ್ಟ್. ಸೆಪ್ಟೆಂಬರ್ 28 ರಂದು ಆರೋಪಿ ಮಹೇಶ್ (37) ಚಾಕುವಿನಿಂದ ಇರಿದಿದ್ದನು. ತೀವ್ರ ಗಾಯಗೊಂಡಿದ್ದ ಸೋನಾರನ್ನು ತ್ರಿಶೂರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ನಿಧನರಾಗಿದ್ದಾರೆ. ಚಾಕುವಿನಿಂದ ಇರಿದ ನಂತರ ಆರೋಪಿ ಮಹೇಶ್ ಸ್ಥಳದಿಂದ ಪರಾರಿಯಾಗಿದ್ದಾನೆ.

    ಮೃತ ಸೋನಾ ಕಳೆದ ಒಂದೂವರೆ ವರ್ಷಗಳಿಂದ ತ್ರಿಶೂರ್‌ನ ಒಲ್ಲೂರು ಬಳಿಯ ಕುಟ್ಟ ನೆಲ್ಲೂರ್ ನಲ್ಲಿ ಡೆಂಟಲ್ ಕ್ಲಿನಿಕ್ ನಡೆಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಮಹೇಶ್ ಜೊತೆ ಲಿವ್ ಇನ್ ರಿಲೇಷನ್‍ಶಿಪ್‍ನಲ್ಲಿದ್ದರು. ಆರೋಪಿ ಮಹೇಶ್ ಕಟ್ಟಣ ನಿರ್ಮಾಣ ಕೆಲಸ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಇತ್ತೀಚೆಗೆ ಇವರ ಮಧ್ಯೆ ಹಣಕಾಸಿನ ವಿಚಾರಕ್ಕೆ ಜಗಳ ನಡೆದಿತ್ತು. ಈ ವೇಳೆ ಮಹೇಶ್ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಸೋನಾ ಒಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಹೇಶ್ ನನ್ನ ಆದಾಯವನ್ನು ಕ್ಲಿನಿಕ್‍ನಿಂದ ಅಕ್ರಮವಾಗಿ ತೆಗೆದುಕೊಂಡಿದ್ದಾನೆ ಎಂದು ಸೋನಾ ದೂರಿನಲ್ಲಿ ಆರೋಪಿಸಿದ್ದರು ಎಂದು ತಿಳಿದುಬಂದಿದೆ.

    ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಸೆಪ್ಟೆಂಬರ್ 28 ರಂದು ಮೃತ ಸೋನಾ ಮತ್ತು ಮಹೇಶ್ ಇಬ್ಬರು ಕ್ಲಿನಿಕ್‍ನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಸೋನಾ ತಂದೆ ಜೋಸ್ ಕೂಡ ಇದ್ದರು. ಆದರೆ ಮಾತುಕತೆಯ ಸಮಯದಲ್ಲೇ ಆರೋಪಿ ಮಹೇಶ್ ಸೋನಾರನ್ನು ಕ್ಲಿನಿಕ್‍ನ ಲ್ಯಾಬ್‍ಗೆ ಒತ್ತಾಯಿಸಿ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಏಕಾಏಕಿ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಹಲ್ಲೆಯಿಂದ ಸೋನಾರ ಹೊಟ್ಟೆಗೆ ತೀವ್ರ ಗಾಯಗಳಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋನಾ ಭಾನುವಾರ ಸಾವನ್ನಪ್ಪಿದ್ದಾರೆ. ಆರೋಪಿ ಮಹೇಶ್ ಹಲ್ಲೆ ಮಾಡಿದ ತಾನು ತಪ್ಪೊಪ್ಪಿಕೊಳ್ಳಲು ಪೊಲೀಸ್ ಠಾಣೆಗೆ ಹೋಗುವುದಾಗಿ ಹತ್ತಿರದ ಅಂಗಡಿ ಮಾಲೀಕರಿಗೆ ತಿಳಿಸಿ ನಂತರ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸೋನಾಗೆ ಈಗಾಗಲೇ ಮದುವೆಯಾಗಿದ್ದು, ತನ್ನ ಪತಿಯಿಂದ ಬೇರೆಯಾಗಿದ್ದರು. ಒಂದು ಮಗು ಕೂಡ ಇತ್ತು. ಆರೋಪಿ ಮಹೇಶ್ ಇನ್ನೂ ಮದುವೆಯಾಗಿರಲಿಲ್ಲ. ಸದ್ಯಕ್ಕೆ ಪೊಲೀಸರು ಸೋನಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೇರೆ ಆಸ್ಪತ್ರೆಗೆ ರವಾನಿಸಿದ್ದು, ಆರೋಪಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

  • ಪತಿ, ಮಕ್ಕಳು ಹೊರಗೆ ಹೋಗಿದ್ದಾಗ ದಂತ ವೈದ್ಯೆ ಆತ್ಮಹತ್ಯೆ

    ಪತಿ, ಮಕ್ಕಳು ಹೊರಗೆ ಹೋಗಿದ್ದಾಗ ದಂತ ವೈದ್ಯೆ ಆತ್ಮಹತ್ಯೆ

    – ಸಮಾಜ ಮುಖಿ ಕೆಲಸ ಮಾಡ್ತಿದ್ದ ಡಾಕ್ಟರ್

    ಹೈದರಾಬಾದ್: ಖ್ಯಾತ ದಂತ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಕರ್ನೂಲ್ ಜಿಲ್ಲೆಯ ನಂದ್ಯಾಲದಲ್ಲಿ ನಡೆದಿದೆ.

    ಮಾಧವಿ ಲತಾ ಆತ್ಮಹತ್ಯೆ ಮಾಡಿಕೊಂಡ ದಂತ ವೈದ್ಯೆ. ನಂದ್ಯಾಲದ ಶ್ರೀನಿವಾಸ ನಗರ ಬಳಿ ಡಾ.ಮಾಧವಿ ಲತಾ ದಂತ ಆಸ್ಪತ್ರೆಯನ್ನು ನಡೆಸುತ್ತಿದ್ದರು. ಆದರೆ ಭಾನುವಾರ ಮಧ್ಯಾಹ್ನ ತನ್ನ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ.

    ಮೃತ ಡಾ.ಮಾಧವಿ ಲತಾ ಅನೇಕ ವರ್ಷಗಳ ಹಿಂದೆ ಲಕ್ಷ್ಮಣ್ ಎಂಬವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ಕೂಡ ವೈದ್ಯರಾಗಿದ್ದು, ಇಬ್ಬರು ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿದ್ದರು. ಭಾನುವಾರ ಮಧ್ಯಾಹ್ನ ಪತಿ ಮತ್ತು ಮಕ್ಕಳು ಹೊರಗಡೆ ಹೋಗಿದ್ದರು. ಈ ವೇಳೆ ಡಾ.ಲತಾ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದಾರೆ. ಡಾ.ಮಾಧವಿ ಲತಾ ನಂದ್ಯಾಲದಲ್ಲಿ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಹೀಗಾಗಿ ಇವರ ಸಾವಿನ ನಂತರ ನಂದ್ಯಾಲದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು.

    ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೆ ವೈದ್ಯೆಯ ಸಾವಿಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಹೀಗಾಗಿ ಪೊಲೀಸರು ವೈದ್ಯೆಯ ಸಂಬಂಧಿಕರು ಮತ್ತು ಸ್ನೇಹಿತರನ್ನು ವಿಚಾರಣೆ ಮಾಡುತ್ತಿದ್ದಾರೆ. ಕೌಟುಂಬಿಕ ಸಮಸ್ಯೆಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರ ಅಥವಾ ಬೇರೆ ಕಾರಣಗಳಿವೆಯೇ ಎಂದು ನಂದ್ಯಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಬೆಂಗಳೂರಿನಲ್ಲಿ ನಕಲಿ ಡೆಂಟಲ್ ಡಾಕ್ಟರ್ಸ್ ಹಾವಳಿ!

    ಬೆಂಗಳೂರಿನಲ್ಲಿ ನಕಲಿ ಡೆಂಟಲ್ ಡಾಕ್ಟರ್ಸ್ ಹಾವಳಿ!

    – ಬೀದಿಬದಿಯೇ ಕೊಡ್ತಾರೆ ಟ್ರೀಟ್‍ಮೆಂಟ್
    – ಐದೇ ನಿಮಿಷದಲ್ಲಿ ಜೋಡಣೆಯಾಗುತ್ತೆ ಹಲ್ಲು

    ಬೆಂಗಳೂರು: ರಾಜಧಾನಿಯಲ್ಲಿ ನಕಲಿ ದಂತ ವೈದ್ಯರ ಹಾವಳಿ ತಾಂಡವವಾಡುತ್ತಿದ್ದು, ಮಾತಲ್ಲೇ ಮರುಳು ಮಾಡಿ ಕಡಿಮೆ ಬೆಲೆಗೆ ಹಲ್ಲು ಜೋಡಿಸುತ್ತಾರೆ. ಸ್ವಲ್ಪ ಯಾಮಾರಿದರೂ ಈ ನಕಲಿ ಡೆಂಟಲ್ ಡಾಕ್ಟರ್ಸ್ ಸಾಯಿಸಿಬಿಡುತ್ತಾರೆ. ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ನಕಲಿ ವೈದ್ಯರ ಕರ್ಮಕಾಂಡ ಬೆಳಕಿಗೆ ಬಂದಿದೆ.

    ಯಾವುದೇ ಇಲಾಖೆಯ ಅನುಮತಿ ಪಡೆಯದೇ ಈ ನಕಲಿ ಡಾಕ್ಟರ್ಸ್ ಫುಟ್ ಪಾತ್‍ನಲ್ಲೇ ಚಿಕಿತ್ಸೆ ಕೊಡುತ್ತಿದ್ದಾರೆ. ನಗರದ ಕೆ.ಆರ್ ಮಾರ್ಕೆಟ್ ನಲ್ಲಿ ಡೆಂಟಲ್ ಕ್ಲಿನಿಕ್ ಗಳನ್ನು ನಡೆಸುತ್ತಿದ್ದಾರೆ. ಇದನ್ನೆಲ್ಲ ಕುಲ ಕಸುಬನ್ನಾಗಿ ಮಾಡಿಕೊಂಡಿರುವ ಕೆಲ ಆಸಾಮಿಗಳು ಫುಟ್ ಪಾತ್ ನಲ್ಲೇ ವ್ಯಾಪಾರ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿ ಪ್ರತಿನಿಧಿ ನಕಲಿ ದಂತವೈದ್ಯರೊಂದಿಗೆ ನಡೆಸಿದ ಸಂಭಾಷಣೆ ಇಂತಿದೆ.
    ಪ್ರತಿನಿಧಿ: ರೆಗ್ಯೂಲರ್ ಇರ್ತಿರಾ
    ನಕಲಿ ಡಾಕ್ಟರ್: ಕಾರ್ಡ್ ತೊಗೊಂಡ್ರಾ..
    ಪ್ರತಿನಿಧಿ: ಲಾಸ್ಟ್ ಟೈಮ್ ಮಾಡ್ಸಿದ್ದೆ. ಬಿಚ್ಚೋಗಿತ್ತು
    ನಕಲಿ ಡಾಕ್ಟರ್: ಅದು ಕೆಲ್ಸ ಇದೆ ಮಾಡ್ಬೇಕು. ಅರ್ಧ ಘಂಟೆಯಲ್ಲಿ ಮಾಡ್ತೀನಿ. ಒಳಗಡೆ ಕಂಬಿ ಲಾಕ್ ಮಾಡಿ ಕೊಡ್ತೀನಿ
    ಪ್ರತಿನಿಧಿ: ಎಷ್ಟಾಗುತ್ತೆ ಅಂತ ಹೇಳಿದ್ರಿ
    ನಕಲಿ ಡಾಕ್ಟರ್: ಸಾವಿರ ರೂಪಾಯಿ
    ಪ್ರತಿನಿಧಿ: ಬರೀ ಕ್ಯಾಪ್ ಅಷ್ಟೆ
    ನಕಲಿ ಡಾಕ್ಟರ್: ಹಲ್ಲು ನೋಡಿಲ್ಲ ನಿಮ್ಗೆ. ಬರೀ ಹೋಲ್ಸ್ ಗೆ ಅಂತ. ಈ ಹಲ್ಲಿಗೆ ಫುಲ್ ಉಜ್ಜು ಬಿಟ್ಟು ಹಾಕಿಕೊಡ್ತೀನಿ
    ಪ್ರತಿನಿಧಿ: ಕೊಡಿ.. ಯಾವುದು ಇದು
    ನಕಲಿ ಡಾಕ್ಟರ್: ಸಿರಾಮಿಕ್ ಹಲ್ಲು. 28 ಹಲ್ಲು ಬರುತ್ತೆ.
    ಪ್ರತಿನಿಧಿ: ನೀವು ಎಲ್ಲಿಂದ ತರ್ತೀರಿ
    ನಕಲಿ ಡಾಕ್ಟರ್: ನಾವು ತರ್ಸೋದು ಅಣ್ಣ
    ಪ್ರತಿನಿಧಿ: ಡೆಂಟಲ್ ಆಸ್ಪತ್ರೆಗೆ ಹೋದ್ರೆ
    ನಕಲಿ ಡಾಕ್ಟರ್: ಅಲ್ಲಿ ನಿಮಗೆ ಸ್ಟೀಲ್ ಕ್ಯಾಪ್ ಹಾಕ್ತಾರೆ
    ಪ್ರತಿನಿಧಿ: ನೀವು ಯಾವ ಪೌಡರ್ ಹಾಕ್ತೀರಿ.
    ನಕಲಿ ಡಾಕ್ಟರ್: ನಮ್ದು ಏನಿದ್ರೂ ಅಶ್ವಿನಿ ಲಿಕ್ವಿಡ್ ಪೌಡರ್
    ನಕಲಿ ಡಾಕ್ಟರ್: ನಾವು ನಿಮ್ಗೆ ಚೆನ್ನಾಗಿ ಮಾಡಿದ್ರೆ, ಬೇರೆಯವ್ರನ್ನ ಕಳಿಸ್ತೀರಾ. ಕೊಲ್ಕತ್ತಾದಿಂದ ಹುಡ್ಕೊಂಡು ಬರ್ತಾರೆ ನನ್ನ
    ಪ್ರತಿನಿಧಿ: ಹೌದಾ..ಮೆಟರಿಯಲ್ ಬೇರೆ ಕಡೆಯಿಂದ ತರ್ತೀರಾ
    ನಕಲಿ ಡಾಕ್ಟರ್: ನಾನೇ ಹೋಗಿ ತೊಗೊಂಡು ಬರ್ತೀನಿ. ಒಂದು ಕಡೆ ಬರುತ್ತೆ
    ಪ್ರತಿನಿಧಿ: ಆಸ್ಪತ್ರೆಗಳಿಂದ ನಿಮಗೆ ಅನುಮತಿ ಇರುತ್ತಾ. ಅವ್ರಿಗೆ ನಿಮಗೆ ಪರಿಚಯ
    ನಕಲಿ ಡಾಕ್ಟರ್: ಆ ರೀತಿ ಏನೂ ಇಲ್ಲ. ಅರ್ಜೆಂಟ್ ಮದುವೆ, ಸಮಾರಂಭಗಳಿಗೆ ಹೋಗಬೇಕಾದಾಗ ಹಾಕಿ, ತೆಗೆಯೋದು ಫಿಟ್ಟಿಂಗ್ ಮಾಡಿಕೊಡ್ತೀನಿ
    ಪ್ರತಿನಿಧಿ: ನಾನು ಎರಡು ಸಲ ಮೋಸ ಹೋಗಿದ್ದೀನಿ ಭಾಯ್
    ನಕಲಿ ಡಾಕ್ಟರ್: ಕುಂತು ಮಾಡೋಕೆ ಐದು ನಿಮಿಷನೂ ಆಗಲ್ಲ. ನಾನು ಕಾಸುಗೆ ಯೋಚನೆ ಮಾಡಿದ್ರೆ, ಯಾವಾಗೋ ಕಳಿಸಿದ್ದೆ ನಿಮಗೆ
    ಪ್ರತಿನಿಧಿ: ನಿಮ್ಮ ಕೆಲಸದಲ್ಲಿ ನಂಬಿಕೆ ಅಷ್ಟೆ, ಎಟಿಎಂ ಗೆ ಹೋಗು ಬರೋಣ
    ನಕಲಿ ಡಾಕ್ಟರ್: ಬನ್ನಿ ಸಾರ್. ಯಾವಾಗ ಟೈಮ್ ಇರುತ್ತೆ ಆಗ ಬನ್ನಿ.
    ಪ್ರತಿನಿಧಿ: ಹುಮ್.
    ನಕಲಿ ಡಾಕ್ಟರ್: ನಾಲ್ಕೈದು ಜನ ಇದ್ರೆ ನಿಮ್ ಮನೆಗೂ ಬರ್ತಿನಿ. ನಾಲ್ಕೈದು ಜನ ಲೇಡಿಸ್ ಇದ್ರುನೂ ಮನೆ ಹತ್ರನೇ ಬಂದು ಮಾಡಿ ಹೋಗ್ತೀನಿ
    ಪ್ರತಿನಿಧಿ: ಎಕ್ಸ್ಟ್ರಾ ಚಾರ್ಜ್ ತೊಗೊತೀರಾ
    ನಕಲಿ ಡಾಕ್ಟರ್: ಎಲ್ಲಾ ಲೆಕ್ಕ ಅಷ್ಟೆ. ಮೂರು ನೂರು, ನಾಲ್ಕು ನೂರು, ಐನೂರು. ಬನ್ನಿ ಅಣ್ಣ ಮಾಡಿಕೊಡ್ತೀನಿ
    ಪ್ರತಿನಿಧಿ: ಸರಿ. ನಂಬರ್ ಇದೆ ಕಾಲ್ ಮಾಡ್ತೀನಿ

    ಕೇವಲ ಫುಟ್ ಪಾತ್ ಮಾತ್ರವಲ್ಲದೇ ಮನೆಗೂ ಬಂದು ಚಿಕಿತ್ಸೆ ನೀಡುತ್ತೇವೆ ಎಂದು ನಕಲಿ ಡಾಕ್ಟರ್ಸ್ ಹೇಳುತ್ತಿದ್ದು, ನಾಲ್ಕೈದು ಜನ ಇದ್ದರೆ ಹೋಮ್ ಡೆಲಿವರಿ ಕೂಡ ಮಾಡ್ತಾರಂತೆ. ಒಬ್ಬರ ಬಾಯಿಗೆ ಇಟ್ಟಿರುವ ಸಲಕರಣೆಗಳನ್ನು ಸರಿಯಾಗಿ ಶುಚಿ ಮಾಡದೆ, ಮತ್ತೊಬ್ಬರ ಬಾಯಿಗೆ ಇಟ್ಟು ಹಲ್ಲು ಜೋಡಿಸುತ್ತಾರೆ. ಹೀಗೆ ಮಾಡುವುದರಿಂದ ಹೆಚ್‍ಐವಿ ಕೂಡ ಬರುವ ಸಾಧ್ಯತೆಗಳಿರುತ್ತೆ ಎಂದು ತಜ್ಞ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

    ಇಲ್ಲಿ ಚಿಕಿತ್ಸೆ ನೀಡುವವರು ಕುಲ ಕಸುಬನ್ನು ವೃತ್ತಿಯನ್ನಾಗಿ ಮಾಡಿಕೊಂಡಿದ್ದು, ಯಾವುದೇ ಮೆಡಿಕಲ್ ಶಿಕ್ಷಣವನ್ನು ಪಡೆದಿಲ್ಲ. ಮುಖ್ಯವಾಗಿ ಕರ್ನಾಟಕ ಸ್ಟೇಟ್ ಡೆಂಟಲ್ ಕೌನ್ಸಿಲ್ ನಲ್ಲಿ ಅನುಮತಿ ಪಡೆದು ಡೆಂಟಲ್ ಕ್ಲಿನಿಕನ್ನು ಓಪನ್ ಮಾಡಬೇಕಾಗುತ್ತೆ. ಆದರೆ ಈ ಡಾಕ್ಟರ್ಸ್ ಯಾರ ಅನುಮತಿಯನ್ನೂ ಪಡೆದಿಲ್ಲ. ಆದ್ರೂ ರಾಜರೋಷವಾಗಿ ಬ್ಯೂಸಿನೆಸ್ ಮಾಡುತ್ತಿದ್ದಾರೆ. ನಗರದ ಕೆ.ಆರ್.ಮಾರ್ಕೆಟ್‍ನಲ್ಲಿರುವ ಮತ್ತೊಂದು ಡೆಂಟಲ್ ಕ್ಲಿನಿಕ್‍ನ ನಕಲಿ ಡೆಂಟಲ್ ಡಾಕ್ಟರ್ಸ್ ಮಾತು ಇಂತಿದೆ.

    ಪ್ರತಿನಿಧಿ: ಹಲ್ಲು ಸ್ಪೇಸ್ ಇದೆ. ಹಾಕಿ ಕೊಡ್ತೀರಾ
    ನಕಲಿ ಡಾಕ್ಟರ್: ಯಾರಿಗೆ
    ಪ್ರತಿನಿಧಿ: ನಮ್ಗಲ್ಲ. ನಮ್ ಹುಡ್ಗನಿಗೆ
    ನಕಲಿ ಡಾಕ್ಟರ್: ಎಲ್ಲಿದ್ದಾರೆ..?
    ಪ್ರತಿನಿಧಿ: ಆ ಹುಡ್ಗ ಇಲ್ಲ. ಕರ್ಕೊಂಡು ಬರುತ್ತೀವಿ. ಎಷ್ಟಾಗುತ್ತೆ..?
    ನಕಲಿ ಡಾಕ್ಟರ್: ಇನ್ನೂರು, ಮುನ್ನೂರು, ನಾನ್ನೂರು ಅಷ್ಟೆ.
    ಪ್ರತಿನಿಧಿ: ನೀವೇ ಕೊಡುತ್ತೀರಾ..?
    ನಕಲಿ ಡಾಕ್ಟರ್: ಕರ್ಕೊಂಡು ಬನ್ನಿ. ಮಾಡಿ ಕೊಡ್ತೀನಿ..

    ಹಲ್ಲು ಜೋಡಿಸುವಾಗ, ತೆಗೆಯುವಾಗ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿಲ್ಲ. ಸ್ವಲ್ಪ ಎಡವಟ್ಟು ಆದ್ರು, ಹಲ್ಲಿನ ಚಿಗುರೇ ಛಿದ್ರ ಛಿದ್ರವಾಗುವ ಸಾಧ್ಯತೆಗಳಿವೆ. ಸಾಮಾನ್ಯವಾಗಿ ಅನುಮತಿ ಪಡೆದು ನಡೆಸುವ ಡೆಂಟಲ್ ಆಸ್ಪತ್ರೆಗಳಲ್ಲಿ ಹಲ್ಲು ಜೋಡಿಸುವಾಗ, ತೆಗೆಯುವಾಗ, ಅದರ ಮಾಪನ, ಅಳತೆಯನ್ನು ಲ್ಯಾಬ್‍ಗೆ ಕಳುಹಿಸಿ ಚಿಕಿತ್ಸೆ ಶುರು ಮಾಡುತ್ತಾರೆ. ಆದರೆ ಇಲ್ಲಿ ಮಾತ್ರ ಬರೀ ಐದೇ ನಿಮಿಷದಲ್ಲಿ ಗಮ್ ಲಿಕ್ವಿಡ್ ಹಾಕಿ ಹಲ್ಲು ಜೋಡಿಸಿ ಕೊಡುತ್ತಾರೆ. ಇದು ಅಕ್ರಮ ಅಂತ ಗೊತ್ತಿದ್ದರು ಸಂಬಂಧಪಟ್ಟ ಪಾಲಿಕೆಯ ಆರೋಗ್ಯಧಿಕಾರಿಗಳು ಮಾತ್ರ ಗಾಢ ನಿದ್ರೆಯಲ್ಲಿದ್ದಾರೆ. ಈ ನಕಲಿ ವೈದ್ಯರು ಪೊಲೀಸರಿಗೆ ಪ್ರತಿದಿನ ಮಾಮೂಲು ನೀಡಿ ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪಕೊಳ್ಳಿ ಬಂದಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಲು ಎಚ್ಚೆತ್ತುಕೊಂಡು ಶಿಸ್ತು ಕ್ರಮ ಕೈಗೊಳ್ಳಬೇಕಿದೆ.

  • ಗನ್‍ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಯತ್ನಿಸಿದ ದಂತ ವೈದ್ಯ

    ಗನ್‍ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಯತ್ನಿಸಿದ ದಂತ ವೈದ್ಯ

    ಕೋಲಾರ: ತಲೆಗೆ ಗನ್‍ನಿಂದ ಶೂಟ್ ಮಾಡಿಕೊಂಡು ಪ್ರಸಿದ್ಧ ದಂತ ವೈದ್ಯ ಆತ್ಮಹತ್ಯೆ ಯತ್ನಿಸಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಸಲ್ಡಾನ್ ವೃತ್ತದಲ್ಲಿ ನಡೆದಿದೆ.

    ಕೆಜಿಎಫ್ ನಗರದ ಡಾ. ಸಲ್ಡಾನ್ (55) ಆತ್ಮಹತ್ಯೆಗೆ ಯತ್ನಿಸಿದ್ದ ದಂತ ವೈದ್ಯ. ಸಲ್ಡಾನ್ ಸೋಮವಾರ ಸಂಜೆ 7.30 ಗಂಟೆ ಸುಮಾರಿಗೆ ಸಲ್ಡಾನ್ ವೃತ್ತದಲ್ಲಿರುವ ಅವರ ಕ್ಲಿನಿಕ್‍ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಲೆಗೆ ಗನ್‍ನಿಂದ ಗುಂಡು ಹಾರಿಸಿಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಅವರ ಕುಟುಂಬದ ಸದಸ್ಯರು ಮತ್ತು ಖಾಸಗಿ ವೈದ್ಯರು ಅವರನ್ನು ಕೆಜಿಎಫ್ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ನಿಮ್‍ಹಾನ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ತಮ್ಮ ಮಗ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಾನೆ ಎಂದು ಗಾಯಾಳು ವೈದ್ಯರ ತಂದೆ ಡಾ.ಕಾರ್ಲಟಸನ್ ಸಲ್ಡಾನ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

    ಈ ಸಂಬಂಧ ರಾಬರ್ಟಸನ್‍ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಡಾ. ಸಲ್ಡಾನ್ ಅವರು ಯಾಕೆ ಆತ್ಮಹತ್ಯೆಗೆ ಯತ್ನಿಸಿದರು ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

  • ಚಿಕಿತ್ಸೆ ಬಗ್ಗೆ ದೂರಿದ ತಾಯಿ, ಮಗಳನ್ನು ಕೊಲ್ಲಲು ಯತ್ನಿಸಿದ ವೈದ್ಯ

    ಚಿಕಿತ್ಸೆ ಬಗ್ಗೆ ದೂರಿದ ತಾಯಿ, ಮಗಳನ್ನು ಕೊಲ್ಲಲು ಯತ್ನಿಸಿದ ವೈದ್ಯ

    – ಅಡ್ಡ ಬಂದ ನಾಯಿಮರಿ ಕತ್ತು ಹಿಸುಕಿದ
    – ಪೊಲೀಸರಿಂದ ದಂತ ವೈದ್ಯ ಅರೆಸ್ಟ್

    ಲಕ್ನೋ: ಮಗಳಿಗೆ ಸರಿಯಾಗಿ ಚಿಕಿತ್ಸೆ ಕೊಟ್ಟಿಲ್ಲವೆಂದು ತಾಯಿಯೊಬ್ಬರು ದೂರಿದ್ದಕ್ಕೆ ಸಿಟ್ಟಿಗೆದ್ದ ದಂತ ವೈದ್ಯನೋರ್ವ ಇಬ್ಬರನ್ನೂ ಕೊಲೆ ಮಾಡಲು ಯತ್ನಿಸಿ, ಅಡ್ಡ ಬಂದ ನಾಯಿ ಮರಿಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಘಾಜಿಯಾಬಾದ್‍ನಲ್ಲಿ ಶನಿವಾರ ಈ ಘಟನೆ ನಡೆದಿದೆ. ಆರೋಪಿಯನ್ನು ದಂತ ವೈದ್ಯ ಯಾಮಿನ್ ಸಿದ್ದಿಕಿ ಎಂದು ಗುರುತಿಸಲಾಗಿದೆ. ಈತ ವಿಜಯನಗರದಲ್ಲಿ ಡೆಂಟಲ್ ಕ್ಲಿನಿಕ್ ಇಟ್ಟುಕೊಂಡಿದ್ದಾನೆ. ಕಳೆದ 6 ತಿಂಗಳಿನಿಂದ ವೈದ್ಯನ ಮನೆ ಬಳಿ ಇದ್ದ ಮಹಿಳೆಯೊಬ್ಬರು ತನ್ನ ಮಗಳ ಹಲ್ಲು ನೋವಿಗೆ ಈತನ ಬಳಿಯೇ ಚಿಕಿತ್ಸೆ ಕೊಡಿಸುತ್ತಿದ್ದರು. 6 ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಬಾಲಕಿಯ ಹಲ್ಲು ನೋವು ಮಾತ್ರ ಕಡಿಮೆಯಾಗಿರಲಿಲ್ಲ.

    ಆದ್ದರಿಂದ ತಾಯಿ ಸಿದ್ದಿಕಿ ಬಳಿ ಹೋಗಿ ಜಗಳವಾಡಿದ್ದರು. ನೀವು ಸರಿಯಾಗಿ ಚಿಕಿತ್ಸೆ ಕೊಡುತ್ತಿಲ್ಲ ಎಂದು ದೂರಿದ್ದರು. ಇದರಿಂದ ಸಿಟ್ಟಿಗೆದ್ದ ವೈದ್ಯ ಶನಿವಾರ ಮಹಿಳೆ ಮನೆಗೆ ನುಗ್ಗಿ ಚಾಕುವಿನಿಂದ ತಾಯಿ, ಮಗಳನ್ನು ಕೊಲ್ಲಲು ಯತ್ನಿಸಿದನು. ಈ ವೇಳೆ ಅವರನ್ನು ರಕ್ಷಿಸಲು ಮನೆಯಲ್ಲಿ ಸಾಕಿದ್ದ ನಾಯಿ ಮರಿ ಮುಂದೆ ಬಂದು, ವೈದ್ಯನ ಕಾಲಿಗೆ ಕಚ್ಚಿತು. ಇದರಿಂದ ಮತ್ತಷ್ಟು ಕೋಪಗೊಂಡ ವೈದ್ಯ ನಾಯಿ ಮರಿಯ ಕತ್ತು ಹಿಸುಕಿ ಕೊಂದು ಹಾಕಿದನು.

    ಅಷ್ಟೇ ಅಲ್ಲದೆ ಮಹಿಳೆ ಹಾಗೂ ಆಕೆಯ ಮಗಳ ಜೊತೆ ವೈದ್ಯ ಅಸಭ್ಯವಾಗಿ ವರ್ತಿಸಿದ್ದನು, ಈ ವೇಳೆ ಮಹಿಳೆ ಕಿರುಚಾಡಿ ಅಲಾರಾಂ ಹೊಡೆದಾಗ ಅಕ್ಕಪಕ್ಕದ ಮನೆಯವರು ಬಂದು ಆರೋಪಿಯನ್ನು ಹಿಡಿದರು ಎಂದು ಪೊಲೀಸರು ತಿಳಿಸಿದರು.

    ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 354, 307 ಕಾಯ್ದೆ ಅಡಿ ಹಾಗೂ ಪ್ರಾಣಿ ಮೇಲೆ ವಿಕೃತಿ ಮೆರೆದಿದ್ದಕ್ಕೆ ಸಂಬಂಧಿಸಿದ ಪ್ರಕರಣವನ್ನು ದಾಖಲಿಸಲಾಗಿದೆ. ಇಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನದಲ್ಲಿ ಇರಿಸುವಂತೆ ಆದೇಶಿಸಿದ್ದಾರೆ.

  • 7 ವರ್ಷದ ಬಾಲಕನ ಬಾಯಲ್ಲಿ 526 ಹಲ್ಲುಗಳು!

    7 ವರ್ಷದ ಬಾಲಕನ ಬಾಯಲ್ಲಿ 526 ಹಲ್ಲುಗಳು!

    ಚೆನ್ನೈ: 7 ವರ್ಷದ ಬಾಲಕನ ಬಾಯಲ್ಲಿ ಸುಮಾರು 526 ಹಲ್ಲುಗಳು ಬೆಳೆದಿರುವ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ.

    ನಗರದ ಸವಿತಾ ದಂತ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ 7 ವರ್ಷದ ಬಾಲಕನ ಬಾಯಿಯಲ್ಲಿದ್ದ 526 ಹಲ್ಲುಗಳನ್ನು ವೈದ್ಯರು ಆಪರೇಷನ್ ಮಾಡಿ ಹೊರ ತೆಗೆದಿದ್ದಾರೆ.

    ‘ಕಾಂಪೌಂಡ್ ಕಾಂಪೋಸಿಟ್ ಒಂಡೊಂಟೊಮ್’ ಎಂಬ ಅಪರೂಪದ ಖಾಯಿಲೆಯಿಂದ ಬಾಲಕ ಬಳಲುತ್ತಿದ್ದ. ಸುಮಾರು 526 ಹಲ್ಲುಗಳು ಬೆಳೆದಿದ್ದರಿಂದ ಕೆಳಗಿನ ಬಲ ದವಡೆ ತುಂಬಾ ಊದಿಕೊಂಡಿತ್ತು. ಸರ್ಜರಿ ಮೂಲಕ ಆ ಎಲ್ಲ ಹಲ್ಲುಗಳನ್ನು ಹೊರ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

    ಬಾಲಕ ಮೂರು ವರ್ಷದವನಿರುವಾಗಲೇ ಆತನ ಬಾಯಿ ಊದಿಕೊಂಡಿರುವುದನ್ನು ಪೋಷಕರು ಗಮನಿಸಿದ್ದರು. ಆದರೆ ಬಲಕನ ಬಾಯಿ ಬಾವು ಬಂದಿರುವ ಕುರಿತು ತಲೆ ಕೆಡಿಸಿಕೊಂಡಿರಲಿಲ್ಲ. ಅಲ್ಲದೆ, ಬಾಯಿಯನ್ನು ಪರೀಕ್ಷಿಸಲು ಮುಂದಾದಾಗ ಬಾಲಕ ಅಳಲು ಪ್ರಾರಂಭಿಸುತ್ತಿದ್ದ. ಹೀಗಾಗಿ ಪೋಷಕರು ನಿರ್ಲಕ್ಷ್ಯ ವಹಿಸಿದ್ದರು. ಬಾವು ಹೆಚ್ಚಾಗುತ್ತಿದ್ದಂತೆ ಪೋಷಕರು ಭಯಭೀತರಾಗಿದ್ದು, ನಂತರ ಆಸ್ಪತ್ರೆಗೆ ಕರೆ ತಂದಿದ್ದಾರೆ ಎಂದು ಓರಲ್ ಆಂಡ್ ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗದ ಪ್ರಾಧ್ಯಾಪಕ ಪಿ.ಸೆಂದಿಲ್‍ನಾಥನ್ ತಿಳಿಸಿದ್ದಾರೆ.

    ಎಕ್ಸ್-ರೇ ಹಾಗೂ ಸಿಟಿ ಸ್ಕ್ಯಾನ್ ಮಾಡಿದಾಗ ಕೆಳಭಾಗದ ಬಲ ದವಡೆಯಲ್ಲಿ ಹೆಚ್ಚು ಹಲ್ಲುಗಳಿರುವುದು ಕಂಡು ಬಂತು. ಹೀಗಾಗಿ ಸರ್ಜರಿ ಮಾಡಲು ನಿರ್ಧರಿಸಿದೆವು. ನಂತರ ಅರಿವಳಿಕೆ(ಅನಸ್ತೇಶಿಯಾ) ನೀಡಿ ಬಲಭಾಗದ ದವಡೆಯನ್ನು ತೆರೆದೆವು, ಅಲ್ಲಿ ಒಂದು ಚೀಲದ ರೀತಿ ಕಾಣಿಸಿತು. ಅದು ಸುಮಾರು 200 ಗ್ರಾಂ. ತೂಕವಿತ್ತು. ಆ ಚೀಲದ ತುಂಬ ಹಲ್ಲುಗಳಿದ್ದವು. ತುಂಬಾ ಎಚ್ಚರಿಕೆ ವಹಿಸಿ ಹಲ್ಲುಗಳನ್ನು ಹೊರ ತೆಗೆದೆವು. ಚೀಲ ತೆರೆದು ನೋಡಿದಾಗ ನೋಡಿದಾಗ ಸಣ್ಣ, ಮಧ್ಯಮ ಹಾಗೂ ದೊಡ್ಡ ಗಾತ್ರದ 526 ಹಲ್ಲುಗಳು ಪತ್ತೆಯಾಗಿವೆ ಎಂದು ಪಿ.ಸೆಂದಿಲ್‍ನಾಥನ್ ವಿವರಿಸಿದರು.

    ಕೆಲವು ತುಂಬಾ ಸಣ್ಣ ಕಣಗಳಿದ್ದರೂ ಅವುಗಳಲ್ಲಿ ಹಲ್ಲುಗಳ ಗುಣಗಳಿರುತ್ತವೆ. ಆ ಚೀಲದಿಂದ ಹಲ್ಲುಗಳನ್ನು ತೆಗೆಯಲು ಸುಮಾರು 5 ತಾಸು ತೆಗೆದುಕೊಳ್ಳಲಾಗಿದೆ. ಹೊರ ತೆಗೆಯಲಾದ ಹಲ್ಲುಗಳು ಮುತ್ತಿನ ಆಕಾರದಲ್ಲಿವೆ ಎಂದು ವೈದ್ಯರು ತಿಳಿಸಿದ್ದಾರೆ.

    ಓರಲ್ ಆಂಡ್ ಮ್ಯಾಕ್ಸಿಲೊಫೇಶಿಯಲ್ ಪ್ಯಾಥೋಲಜಿ ವಿಭಾಗದ ಮುಖ್ಯಸ್ಥೆ ಪ್ರತಿಭಾ ರಮಣಿ ಈ ಕುರಿತು ಮಾಹಿತಿ ನೀಡಿ, ಸರ್ಜರಿ ಮಾಡಿದ ಮೂರು ದಿನಗಳ ನಂತರ ಬಾಲಕ ಸಹಜ ಸ್ಥಿಗೆ ಮರಳಿದ್ದಾನೆ ಎಂದು ತಿಳಿಸಿದ್ದಾರೆ. ಬಾಯಿಯಲ್ಲಿ 526 ಹಲ್ಲುಗಳು ಪತ್ತೆಯಾಗಿದ್ದು ವಿಶ್ವದಲ್ಲೇ ದಾಖಲಾದ ಮೊದಲ ಪ್ರಕರಣ ಇದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.