Tag: Demonetization

  • ಭ್ರಷ್ಟಾಚಾರ ನಿರ್ಮೂಲನೆಗೆ ನೋಟು ಅಮಾನ್ಯೀಕರಣ ಒಂದು ಉತ್ತಮ ಔಷಧ: ಮೋದಿ

    ಭ್ರಷ್ಟಾಚಾರ ನಿರ್ಮೂಲನೆಗೆ ನೋಟು ಅಮಾನ್ಯೀಕರಣ ಒಂದು ಉತ್ತಮ ಔಷಧ: ಮೋದಿ

    -ಮ.ಪ್ರ. ಚುನಾವಣೆ ಪ್ರಚಾರದಲ್ಲಿ ಕರ್ನಾಟಕದ ಮೈತ್ರಿ ಸರ್ಕಾರದ ವಿರುದ್ಧ ಕಿಡಿ

    ಭೋಪಾಲ್: ದೇಶದಲ್ಲಿ ಆಳವಾಗಿ ಬೇರೂರಿದ್ದ ಭ್ರಷ್ಟಾಚಾರ ವ್ಯವಸ್ಥೆಯ ನಿರ್ಮೂಲನೆಗೆ ನೋಟು ಅಮಾನ್ಯೀಕರಣ ಒಂದು ಉತ್ತಮ ಔಷಧಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಮಧ್ಯಪ್ರದೇಶದ ಜಾಬ್ವಾದಲ್ಲಿ ಚುನಾವಣಾ ಪ್ರಚಾರದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿನ ಭ್ರಷ್ಟಾಚಾರ ನಿರ್ಮೂಲನೆಗೆ ಔಷಧಿಯನ್ನಾಗಿ ನೋಟು ಅಮಾನ್ಯೀಕರಣವನ್ನು ಬಳಸಿದ್ದೇವೆ. ಇದರಿಂದಾಗಿ ಕಾರ್ಖಾನೆ, ಕಚೇರಿ, ಮನೆ ಹಾಗೂ ಹಾಸಿಗೆ ಕೆಳಗೆ ಇಟ್ಟಿದ್ದ ಪ್ರತಿಯೊಂದು ಪೈಸೆಗೂ ತೆರಿಗೆ ಕಟ್ಟುವಂತಾಗಿದೆ. ಈ ಹಣವನ್ನು ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಯೋಜನೆ ಜಾರಿಗೆ ತರಲು ಉಪಯೋಗಿಸಿದ್ದೇವೆಂದು ಹೇಳಿದರು.

    ವಿಧಾನಸಭಾ ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಕಾಂಗ್ರೆಸ್ ಸಾಲಮನ್ನಾ ಮಾಡುವುದಾಗಿ ಹೇಳಿತ್ತು. ಆದರೆ ಈಗ ಹಾಗೆ ಮಾಡುವ ಬದಲು, ರೈತರನ್ನು ಜೈಲಿಗೆ ಕಳುಹಿಸಲು ಸಿದ್ಧವಾಗುತ್ತಿದೆ. ಈಗ ಕರ್ನಾಟಕದಲ್ಲಿ ಹೇಳಿದ್ದ ರೀತಿಯಲ್ಲಿಯೇ, ಇಲ್ಲಿಯೂ ಹೇಳುತ್ತಿದೆ. ಹೀಗಾಗಿ ಕಾಂಗ್ರೆಸ್ ಮಾತಿಗೆ ಮರಳಾಗಬೇಡಿ. 2022 ರೊಳಗೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವುದಾಗಿ ಭರವಸೆ ನೀಡಿದರು.

    ಯಾವುದೇ ಆಧಾರವಿಲ್ಲದೇ ಪ್ರಧಾನಿ ಮಂತ್ರಿ ಮುದ್ರಾ ಯೋಜನೆಯಡಿ 14 ಕೋಟಿ ಜನರಿಗೆ ಕೇಂದ್ರ ಸರ್ಕಾರ ಸಾಲ ನೀಡಿದೆ. ಯುಪಿಎ ಸರ್ಕಾರ 10 ವರ್ಷದಲ್ಲಿ ಮಾಡದ ಕೆಲಸವನ್ನು, ಕೇವಲ ನಾಲ್ಕೇ ವರ್ಷದಲ್ಲಿ ಎನ್‍ಡಿಎ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕಿಂತ ಕಾಂಗ್ರೆಸ್ ಹೇಗೆ ಅಧಿಕಾರವನ್ನು ನಡೆಸಿತ್ತು ಎಂಬುದು ನಿಮಗೆ ಗೊತ್ತಿದೆ. ಕಾಂಗ್ರೆಸ್ ತನ್ನ 55 ವರ್ಷಗಳಲ್ಲಿ ರಾಜ್ಯಾದ್ಯಂತ ಕೇವಲ 1,500 ಶಾಲೆಗಳನ್ನು ತೆರದಿತ್ತು. ಆದರೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ವಾಣ್ ನೇತೃತ್ವದಲ್ಲಿ ಕಳೆದ 15 ವರ್ಷಗಳಲ್ಲಿ ಸುಮಾರು 4,000 ಶಾಲೆಗಳು ಪ್ರಾರಂಭವಾಗಿದೆ ಎಂದು ತಿಳಿಸಿದರು.

    ನಮ್ಮ ಮುಖ್ಯ ಉದ್ದೇಶ ಎಲ್ಲಾ ಮಕ್ಕಳಿಗೂ ಶಿಕ್ಷಣ ಸಿಗುವುದು, ಯುವ ಪೀಳಿಗೆಗೆ ಆದಾಯ ಬರುವಂತೆ ಮಾಡುವುದು, ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಹಾಗೂ ಹಿರಿಯರಿಗೆ ಔಷಧಿಗಳನ್ನು ಪೂರೈಸುವುದು. ಅಲ್ಲದೇ 2022ರ ವೇಳೆಗೆ ಎಲ್ಲಾ ವಸತಿ ರಹಿತರಿಗೆ ‘ಪುಕ್ಕಾ’ ಮನೆಗಳನ್ನು ನೀಡುವುದು ನನ್ನ ಕನಸಾಗಿದೆ. ಈಗಾಗಲೇ ನಾವು 1.25 ಕೋಟಿ ಜನರಿಗೆ ಅವರ ಸ್ವಂತ ಮನೆಯ ಕೀಲಿಗಳನ್ನು ಹಸ್ತಾಂತರಿಸಿದ್ದೇವೆಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ನೋಟ್ ಬ್ಯಾನ್, ಜಿಎಸ್‍ಟಿಯಿಂದಾಗಿ ಭಾರತದ ಆರ್ಥಿಕತೆಯ ಬೆಳವಣಿಗೆ ಕುಂಠಿತವಾಗಿದೆ: ರಘುರಾಂ ರಾಜನ್

    ನೋಟ್ ಬ್ಯಾನ್, ಜಿಎಸ್‍ಟಿಯಿಂದಾಗಿ ಭಾರತದ ಆರ್ಥಿಕತೆಯ ಬೆಳವಣಿಗೆ ಕುಂಠಿತವಾಗಿದೆ: ರಘುರಾಂ ರಾಜನ್

    ವಾಷಿಂಗ್ಟನ್: ನೋಟು ಅಮಾನ್ಯೀಕರಣ ಹಾಗೂ ನೂತನ ಜಿಎಸ್‍ಟಿ ತೆರಿಗೆಯಿಂದಾಗಿ ಭಾರತದ ಆರ್ಥಿಕತೆಯ ಬೆಳವಣಿಗೆ ಕುಂಠಿತವಾಗಿದೆಯೆಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಅಭಿಪ್ರಾಯ ಪಟ್ಟಿದ್ದಾರೆ.

    ಶುಕ್ರವಾರ ಬರ್ಕಲಿಯಾದ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡಿದ್ದ ಭಟ್ಟಾಚಾರ್ಯರವರ ಭಾರತದ ಭವಿಷ್ಯ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2012 ರಿಂದ 2016ರ ವರೆಗೆ ಭಾರತದ ಬೆಳವಣಿಗೆಯ ವೇಗ ಹೆಚ್ಚಾಗಿತ್ತು. ಆದರೆ 2017ರಲ್ಲಿ ನೋಟು ಅಮಾನ್ಯೀಕರಣ ಹಾಗೂ ಜಿಎಸ್‍ಟಿಯಿಂದಾಗಿ ಇದರ ವೇಗಕ್ಕೆ ತಡೆಯುಂಟಾಗಿದೆ. ಇವುಗಳ ಹೊಡೆತದಿಂದಾಗಿ ದೇಶದ ಆರ್ಥಿಕತೆ ಕುಂಠಿತವಾಗಿದೆ. ಜಗತ್ತು ಆರ್ಥಿಕತೆಯಲ್ಲಿ ವೇಗವಾಗಿ ಬೆಳೆಯುತ್ತಿರುವಾಗ ಭಾರತದ ಆರ್ಥಿಕತೆಗೆ ಇವುಗಳಿಂದ ಹೊಡೆತ ಬಿದ್ದಿದೆ ಎಂದು ತಿಳಿಸಿದರು.

    ಸತತ 25 ವರ್ಷಗಳ ಕಾಲಮಾನಕ್ಕೆ ಹೋಲಿಸಿದರೆ, ಇಂದಿನ ಶೇ.7 ರಷ್ಟು ಆರ್ಥಿಕ ಬೆಳವಣಿಗೆಯೇ ಅತ್ಯಂತ ಬಲಿಷ್ಠವಾಗಿದೆ. ಆದರೆ ಇದನ್ನು ಕೆಲವರು ಹಿಂದೂ ಬೆಳವಣಿಗೆ ದರ ಎಂದು ಹೇಳುತ್ತಿದ್ದಾರೆ. ಈ ಮೊದಲು ಹಿಂದೂ ಬೆಳವಣಿಗೆಯ ದರ ಕೇವಲ ಶೇ.3.5ರಷ್ಟಿತ್ತು. ಪ್ರಸ್ತುತ ಇರುವ ಶೇ.7 ರಷ್ಟು ಬೆಳವಣಿಗೆ ಸಾಕಾಗುವುದಿಲ್ಲ. ಮುಂಬರುವ ದಿನಗಳಲ್ಲಿ ದೇಶದಲ್ಲಿ ಉದ್ಯೋಗ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತದೆ. ಹೀಗಾಗಿ ನಾವು ಇಷ್ಟಕ್ಕೆ ತೃಪ್ತಿಪಟ್ಟುಕೊಳ್ಳಲು ಸಾಧ್ಯವಿಲ್ಲ. ಜಾಗತೀಕ ಬೆಳವಣಿಗೆಯಲ್ಲಿ ಭಾರತವನ್ನು ಸೂಕ್ಷ್ಮವಾಗಿ ನೋಡಿದರೆ, ಇಂದು ಅತಿ ಹೆಚ್ಚಿನ ಮುಕ್ತ ಅರ್ಥವ್ಯವಸ್ಥೆಯಾಗಿ ಬೆಳೆದಿದೆ. ಜಾಗತಿಕ ಅರ್ಥವ್ಯವಸ್ಥೆ ಬೆಳೆದರೇ, ಭಾರತವೂ ಬೆಳೆಯುತ್ತದೆ ಎಂದು ವಿವರಿಸಿದರು.

    2017 ರಲ್ಲಿ ಭಾರತ ಅರ್ಥವ್ಯವಸ್ಥೆ ಇಳಿಮುಖವಾಗಿತ್ತು. ಇದಕ್ಕೆ ನೇರ ಕಾರಣ ನೋಟು ಅಮಾನ್ಯೀಕರಣ ಹಾಗೂ ಜಿಎಸ್‍ಟಿ. ಇವುಗಳ ಹೊಡೆತ ಎಷ್ಟು ಬಲವಾಗಿತ್ತು ಎನ್ನುವುದಕ್ಕೆ ಇದೇ ನಿದರ್ಶನವಾಗಿದೆ. ಸದ್ಯದ ಭಾರತದ ಅರ್ಥವ್ಯವಸ್ಥೆ ಚೇತರಿಕೆಯ ಹಾದಿಯಲ್ಲಿದೆ. ಆದರೆ ತೈಲ ಬೆಲೆ ಏರಿಕೆಯಿಂದಾಗಿ, ಇದಕ್ಕೂ ಅಡ್ಡಿಯುಂಟಾಗುತ್ತಿದೆ. ಭಾರತದ ಅತ್ಯಧಿಕ ಸಂಪನ್ಮೂಲಗಳು ತೈಲ ಉತ್ಪನ್ನಗಳ ಆಮದಿಗೆ ವೆಚ್ಚವಾಗುತ್ತಿದೆ ಎಂದು ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ನೋಟು ನಿಷೇಧದಿಂದ ಆನ್‍ಲೈನ್ ವ್ಯವಹಾರ ಎಷ್ಟು ಏರಿಕೆಯಾಗಿದೆ? ಹಿಂದೆ ಎಷ್ಟಿತ್ತು?

    ನೋಟು ನಿಷೇಧದಿಂದ ಆನ್‍ಲೈನ್ ವ್ಯವಹಾರ ಎಷ್ಟು ಏರಿಕೆಯಾಗಿದೆ? ಹಿಂದೆ ಎಷ್ಟಿತ್ತು?

    ನವದೆಹಲಿ: ನೋಟು ನಿಷೇಧದಿಂದಾಗಿ ಭಾರತದ ಅರ್ಥ ವ್ಯವಸ್ಥೆ ಹಳಿಗೆ ಬಂದಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

    ಕೇಂದ್ರ ಸರ್ಕಾರ ನೋಟು ನಿಷೇಧ ನಿರ್ಧಾರಕ್ಕೆ 2 ವರ್ಷ ಕಳೆದಿದೆ. ಜನರಲ್ಲಿದ್ದ ಹಣವನ್ನು ಜಪ್ತಿ ಮಾಡಲು ನೋಟು ನಿಷೇಧ ಮಾಡಿಲ್ಲ. ಅಕ್ರಮವಾಗಿ ಸಂಗ್ರಹಿಸಿದ್ದ ಹಣವನ್ನು ತೆರಿಗೆ ವ್ಯಾಪ್ತಿಗೆ ತರಲು ಈ ನಿರ್ಧಾರವನ್ನು ಕೈಗೊಳ್ಳಲಾಯಿತು ಎಂದು ಜೇಟ್ಲಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

    ಎನ್‍ಡಿಎ ಸರ್ಕಾರ ಮೇ 2014ರಲ್ಲಿ ಅಧಿಕಾರಕ್ಕೆ ಬಂದಾಗ ದೇಶದಲ್ಲಿ ಆದಾಯ ತೆರಿಗೆ ಪಾವತಿದಾರರ ಸಂಖ್ಯೆ 3.8 ಕೋಟಿ ಇತ್ತು. 4 ವರ್ಷದಲ್ಲಿ ಈ ಸಂಖ್ಯೆ 6.86 ಕೋಟಿಗೆ ಏರಿಕೆಯಾಗಿದ್ದು, ನಮ್ಮ ಸರ್ಕಾರದ ಅವಧಿ ಮುಗಿಯುವ ಮುನ್ನ ಈ ಸಂಖ್ಯೆ ದುಪ್ಪಟ್ಟು ಆಗಬೇಕು ಎಂದು ಜೇಟ್ಲಿ ಹೇಳಿದ್ದಾರೆ.

    ಈ ಸಂಬಂಧ ಫೇಸ್‍ಬುಕ್ ನಲ್ಲಿ ದೀರ್ಘ ಪೋಸ್ಟ್ ಪ್ರಕಟಿಸಿರುವ ಜೇಟ್ಲಿ ನೋಟು ನಿಷೇಧದಿಂದ ದೇಶದ ಮೇಲೆ ಆದ ಬದಲಾವಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ನೋಟು ನಿಷೇಧಗೊಂಡ ಬಳಿಕ ಜನರ ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ಅನುಕೂಲವಾಗಲು ಕೇಂದ್ರ ಸರ್ಕಾರ `ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್(ಯುಪಿಐ)ಅನ್ನು 2016ರಲ್ಲಿ ಜಾರಿಗೆ ತಂದಿತ್ತು. ಇದರ ಪರಿಣಾಮ 2016ರ ಅಕ್ಟೋಬರ್ ನಲ್ಲಿ 50 ಕೋಟಿ ರೂ.ನಷ್ಟು ಆನ್‍ಲೈನ್ ವಹಿವಾಟು ನಡೆದಿತ್ತು. ಇದಲ್ಲದೇ 2016 ಅಕ್ಟೋಬರ್ ನಿಂದ ಸೆಪ್ಟೆಂಬರ್ 2018ರ ವರೆಗೆ ಭಾರತದಲ್ಲಿ 59,800 ಕೋಟಿ ರೂ. ಆನ್‍ಲೈನ್ ವ್ಯವಹಾರ ನಡೆದಿದೆ.

    ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ಅಭಿವೃದ್ಧಿ ಮಾಡಿದ್ದ ಭೀಮ್ ಯುಪಿಐ ಆ್ಯಪನ್ನು ಭಾರತದ 1.25 ಕೋಟಿ ಗ್ರಾಹಕರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಭೀಮ್ ಆ್ಯಪಿನ ಆನ್‍ಲೈನ್ ವಹಿವಾಟು 2016ರ ಅಕ್ಟೋಬರ್ ನಲ್ಲಿ 20 ಲಕ್ಷ ರೂ. ಇದ್ದರೆ, ಇದೇ ಸೆಪ್ಟೆಂಬರ್ 2018ರಲ್ಲಿ 7,060 ಕೋಟಿ ರೂ. ವಹಿವಾಟು ಏರಿಕೆಯಾಗಿದೆ. 2017ರ ಜೂನ್ ತಿಂಗಳಲ್ಲಿ ದೇಶಾದ್ಯಂತ ಭೀಮ್ ಆ್ಯಪ್ ಮೂಲಕ ಶೇ.48ರಷ್ಟು ವಹಿವಾಟು ನಡೆದಿದೆ.

    ಹೆಚ್ಚಿದ ರುಪೇ ವ್ಯವಹಾರ:
    ರುಪೇ ಕಾರ್ಡ್ ಅನ್ನು ಪಾಯಿಂಟ್ ಆಫ್ ಸೇಲ್(ಪಿಓಎಸ್) ಮತ್ತು ಆನ್ ಲೈನ್ ವ್ಯವಹಾರಕ್ಕೆ ಬಳಸುತ್ತಿದ್ದಾರೆ. ನೋಟು ನಿಷೇಧಕ್ಕೂ ಮೊದಲು ಪಿಓಎಸ್‍ನಲ್ಲಿ 800 ಕೋಟಿ ರೂ. ವ್ಯವಹಾರ ನಡೆದಿದ್ದರೆ 2018 ಸೆಪ್ಟೆಂಬರ್ ವರೆಗೆ 5,730 ಕೋಟಿ ರೂ.ಗೆ ಏರಿಕೆಯಾಗಿದೆ. ಇ ಕಾಮರ್ಸ್ ನಲ್ಲಿ 300 ಕೋಟಿ ರೂ. ವ್ಯವಹಾರ ನಡೆಯುತ್ತಿದ್ದರೆ ಈಗ 2,700 ಕೋಟಿ ರೂ.ಗೆ ಏರಿಕೆಯಾಗಿದೆ.

    ವಿದೇಶಿ ಕಾರ್ಡ್ ಗಳಾದ ವೀಸಾ ಹಾಗೂ ಮಾಸ್ಟರ್ ಕಾರ್ಡ್ ಸಂಸ್ಥೆಗಳು ಭಾರತದಲ್ಲಿ ತಮ್ಮ ಮಾರುಕಟ್ಟೆಯನ್ನು ಕಳೆದುಕೊಳ್ಳುತ್ತಿವೆ. ದೇಶದಲ್ಲಿ ಶೇ.65ರಷ್ಟು ಆನ್‍ಲೈನ್ ವ್ಯವಹಾರಗಳು ಯುಪಿಐ ಹಾಗೂ ರುಪೇ ಕಾರ್ಡ್ ಮೂಲಕವೇ ನಡೆಯುತ್ತಿದೆ. ಇದನ್ನೂ ಓದಿ: ಮೋದಿ ವಿರುದ್ಧ ಅಮೆರಿಕಕ್ಕೆ ದೂರು ಕೊಟ್ಟ ಮಾಸ್ಟರ್ ಕಾರ್ಡ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಹರಿದ ನೋಟು ವಿನಿಮಯಕ್ಕೆ ಆರ್ ಬಿಐ ನಿಂದ ಹೊಸ ನೀತಿ

    ಹರಿದ ನೋಟು ವಿನಿಮಯಕ್ಕೆ ಆರ್ ಬಿಐ ನಿಂದ ಹೊಸ ನೀತಿ

    ನವದೆಹಲಿ: ಕೊಳೆಯಾದ, ಹರಿದ 2000 ರೂ ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಆರ್ ಬಿಐ ಹೊಸ ನಿಯಮಾವಳಿಗಳನ್ನು ತರುವುದಾಗಿ ಹೇಳಿದೆ.

    ಬಹಳಷ್ಟು ಬ್ಯಾಂಕ್ ಗಳು ಕೊಳೆಯಾದ ಹಾಗೂ ಹರಿದ 2000 ರೂ ಮುಖಬೆಲೆಯ ನೋಟುಗಳನ್ನ ಸ್ವೀಕರಿಸುತ್ತಿಲ್ಲ. ಆರ್ ಬಿಐ ನಿಯಮಾವಳಿಗಳಲ್ಲಿ 2000 ರೂ ನೋಟು ವಿನಿಮಯದ ಬಗ್ಗೆ ಪ್ರಸ್ತಾಪ ಇಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಹೇಳುತ್ತಿದ್ದಾರೆ.

    2009 ರ ಆರ್ ಬಿಐ ನೋಟು ವಿನಿಮಯದ ನಿಯಮದ ಪ್ರಕಾರ 50 ರೂಪಾಯಿ ಮೇಲ್ಪಟ್ಟ ಎಲ್ಲಾ ಕೊಳೆಯಾದ ಹಾಗೂ ಹರಿದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು ಎಂದು ತಿಳಿಸುತ್ತದೆ. ಹರಿದು ಹೋಗಿರುವ ನೋಟಿನ ಒಂದು ಭಾಗ ಇದ್ದು 70, 75, 80 ಮತ್ತು 84 ಚದುರ ಸೆಂಟಿಮೀಟರ್ ನಷ್ಟು ಇದ್ದರೂ ವಿನಿಮಯ ಮಾಡಿಕೊಳ್ಳಬಹುದು ಎಂದು ನಿಯಮದಲ್ಲಿ ಹೇಳಿದೆ.

    ನವೆಂಬರ್ 8, 2016 ರ 500 ಹಾಗೂ 1000 ರೂ ಅಪನಗದೀಕರಣ ದ ನಂತರ 1,000 ರೂ ಬದಲು 2000 ರೂ. ಮುಖಬೆಲೆಯ ನೋಟು ಬಂದಿದೆ. 1000 ರೂಗಳಿಗೆ ಇದ್ದ ನಿಯಮಗಳನ್ನು ಬ್ಯಾಂಕ್ ಗಳು 2000 ರೂ ಮುಖಬೆಲೆಯ ನೋಟುಗಳಿಗೆ ಅಳವಡಿಸಿ ವಿನಿಮಯ ಮಾಡಲು ಒಪ್ಪುತ್ತಿಲ್ಲ.

    ಕಳೆದ ಬಾರಿ ಜುಲೈ 3, 2017 ರಂದು ಆರ್ ಬಿಐ ನಿಯಮಾವಳಿಗಳನ್ನ ಮಾರ್ಪಾಡು ಮಾಡಿತ್ತು. ಮಣ್ಣಾದ ನೋಟು ಎಂದರೆ ಹೆಚ್ಚು ಕೈಯಿಂದ ಕೈಗೆ ಬಳಕೆಯಾಗಿ ಹಳೆಯದಾಗಿರುವ ನೋಟು ಹಾಗೂ ಇಬ್ಬಾಗವಾದ ನೋಟನ್ನು ಸೇರಿಸಿದ್ದು ಅಗತ್ಯವಿರುವ ನೋಟಿನ ಅಂಶಗಳು ಇರತಕ್ಕದ್ದು ಹಾಗೂ ಅಂತಹ ನೋಟುಗಳನ್ನು ಬ್ಯಾಂಕ್ ಗಳು ಸ್ವೀಕರಿಸಬಹುದು ಎಂದು ಆರ್ ಬಿಐ ತಿಳಿಸಿದೆ.

    ಹರಿದ ನೋಟುಗಳ ವಿನಿಮಯಕ್ಕೆ ಆರ್ ಬಿಐ ನಿಯಮಾವಳಿಗಳಲ್ಲಿ ಸ್ಪಷ್ಟವಾಗಿ ಹೇಳಿದರೂ ಬ್ಯಾಂಕ್ ಗಳು 2000 ರೂ ಮುಖಬೆಲೆಯ ನೋಟುಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ.

    ಕೊಳೆಯಾದ ಮತ್ತು ಹರಿದ ಹೊಸ ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಹೊಸ ನಿಯಮಾವಳಿಗಳನ್ನು ರಚಿಸಿದ್ದು ಕಾನೂನು ಇಲಾಖೆ ಪರಿಶೀಲನೆ ನಡೆಸುತ್ತಿದೆ ಎಂದು ಆರ್ಥಿಕ ವ್ಯವಹಾರಗಳ ಇಲಾಖೆ ನಿರ್ದೇಶಕ ಮನಮೋಹನ್ ಸಚ್ದೇವ ತಿಳಿಸಿದ್ದಾರೆ.

  • ಡಿಕೆ ಸಹೋದರರ ಆಪ್ತರ ಮನೆ, ಕಚೇರಿ ಗಳ ಮೇಲೆ ಸಿಬಿಐ ದಾಳಿ

    ಡಿಕೆ ಸಹೋದರರ ಆಪ್ತರ ಮನೆ, ಕಚೇರಿ ಗಳ ಮೇಲೆ ಸಿಬಿಐ ದಾಳಿ

    ಬೆಂಗಳೂರು: 500, 1 ಸಾವಿರ ರೂ. ನೋಟು ನಿಷೇಧಗೊಂಡ ಸಮಯದಲ್ಲಿ ಹಣ ವಿನಿಮಯ ನಡೆದಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಡಿಕೆ ಸಹೋದರರ ಆಪ್ತರ ಮನೆ ಮತ್ತು ಕಚೇರಿಗಳ ಮೇಲೆ ಸಿಬಿಐ ದಾಳಿ ಮಾಡಿದೆ.

    ನಿನ್ನೆಯೇ ಸಿಬಿಐ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದಿದ್ದ ಸಿಬಿಐ ಅಧಿಕಾರಿಗಳು ಇಂದು ಕನಕಪುರ, ರಾಮನಗರ, ಯಶವಂತಪುರ, ಬಸವನಗುಡಿ, ನೆಲಮಂಗಲ ಸೇರಿದಂತೆ ಹಲವು ಕಡೆ ದಾಳಿ ಮಾಡಿದ್ದಾರೆ.

    ಸರ್ಕಾರಿ ಬ್ಯಾಂಕ್‍ನಲ್ಲಿ ನಡೆದಿದ್ದ 10 ಲಕ್ಷ ಹಣ ಬದಲಾವಣೆ ಕುರಿತು ದಾಳಿ ನಡೆಸಿರುವ ಸಿಬಿಐ, ಸರ್ಕಾರಿ ಬ್ಯಾಂಕ್ ನ ಇಬ್ಬರು ಮ್ಯಾನೇಜರ್ ಗಳ ಮನೆ ಹಾಗೂ ಕಚೇರಿ ಮೇಲೆ, ಕಾರ್ಪೊರೇಷನ್ ಬ್ಯಾಂಕ್ ಅಧಿಕಾರಿಗಳ ಮನೆ ಮೇಲೆ ಕೂಡ ದಾಳಿ ನಡೆಸಿದೆ. 11 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿಗೊಳಗಾಗಿರುವ ಎಲ್ಲರೂ ಡಿಕೆ ಸಹೋದರರ ಆಪ್ತರಾಗಿದ್ದಾರೆ.

    ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ ಸಂಸದ ಡಿಕೆ ಸುರೇಶ್ ಮತ್ತು ಡಿಕೆ ಶಿವಕುಮಾರ್ ಅವರು 11 ಮಂದಿ ಆಪ್ತರ ಮೇಲೆ ಸಿಬಿಐ, ಇಡಿ ಮತ್ತು ಐಟಿ ಮೂಲಕ ಕೇಸ್ ದಾಖಲಿಸಿ ಸರ್ಚ್ ವಾರೆಂಟ್ ಜಾರಿ ಮಾಡಲು ಸಿದ್ಧತೆ ನಡೆಸಿದ್ದಾರೆ. ನಿನ್ನೆಯೇ ಸರ್ಚ್ ವಾರೆಂಟ್ ಪಡೆದಿರುವ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದರು.

    ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ದ್ವೇಷದ ರಾಜಕಾರಣ ಮಾಡುತ್ತಿದೆ. ನಾವು ಹೆದರುವುದಿಲ್ಲ ಎದುರಿಸಲು ಸಿದ್ಧರಿದ್ದೇವೆ. ಕಾನೂನು ಮೀರಿ ರಾಜಕಾರಣ ಮಾಡಿದವರಲ್ಲ ಅಕ್ರಮ ಮಾಡಿಲ್ಲ. ಸುಳ್ಳು ಕೇಸ್ ದಾಖಲಿಸಿ ಧ್ವನಿಯನ್ನು ಅಡಗಿಸುತ್ತೇವೆ ಅಂತ ಅಂದುಕೊಂಡಿದ್ದಲ್ಲಿ ಅದು ಬಿಜೆಪಿಯವರ ಭ್ರಮೆ ಎಂದು ಹೇಳಿದರು.