Tag: Delhi Metro corporation

  • ದೆಹಲಿ ಮೊರೆ ಹೋದ BMRCL ಅಧಿಕಾರಿಗಳು- ಮುಂದುವರಿದ ದುರಸ್ತಿ ಕಾರ್ಯ

    ದೆಹಲಿ ಮೊರೆ ಹೋದ BMRCL ಅಧಿಕಾರಿಗಳು- ಮುಂದುವರಿದ ದುರಸ್ತಿ ಕಾರ್ಯ

    ಬೆಂಗಳೂರು: ಟ್ರಿನಿಟಿ ಸರ್ಕಲ್ ಮೆಟ್ರೋ ನಿಲ್ದಾಣದ ಪಿಲ್ಲರ್‌ನಲ್ಲಿ ಕಾಣಿಸಿಕೊಂಡಿರುವ ಬಿರಕು ದುರಸ್ತಿ ಕಾರ್ಯವನ್ನು ರಾತ್ರಿ ಇಡೀ ಮಾಡಲಾಗಿದೆ.

    ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಬಿಎಂಆರ್‌ಸಿಎಲ್ ಅಧಿಕಾರಿಗಳು ದೆಹಲಿ ಮೆಟ್ರೋ ನಿಗಮದ ಮೊರೆ ಹೋಗಿದ್ದರು. ಅಧಿಕಾರಿಗಳ ಮನವಿಯಂತೆ ದೆಹಲಿ ಮೆಟ್ರೋ ನಿಗಮದ ಇಬ್ಬರು ಎಂಜಿನಿಯರ್‌ಗಳು ಬೆಂಗಳೂರಿಗೆ ಬಂದು ರಾತ್ರಿ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.

    ದೆಹಲಿ ಮೆಟ್ರೋ ನಿಗಮದ ಅಧಿಕಾರಿಗಳ ಜೊತೆ ದುರಸ್ತಿ ವಿಚಾರವಾಗಿ ಬಿಎಂಆರ್‌ಸಿಎಲ್ ಅಧಿಕಾರಿಗಳು ಚರ್ಚಿಸಿ ಮುಂಜಾನೆ ಅಷ್ಟರಲ್ಲಿ ದುರಸ್ತಿ ಕೆಲಸ ಮುಗಿಸುವ ವಿಶ್ವಾಸದಲ್ಲಿದ್ದಾರೆಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಅಷ್ಟೇ ಅಲ್ಲದೆ ಸದ್ಯ ದುರಸ್ಥಿ ಕಾರ್ಯ ನಡೆಯುತ್ತಿದ್ದು, ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv