Tag: Delhi Capitals

  • ರಿಷಬ್ ಪಂತ್ ಭವಿಷ್ಯದ ಸ್ಟಾರ್ ಆಟಗಾರ : ಯುವಿ

    ರಿಷಬ್ ಪಂತ್ ಭವಿಷ್ಯದ ಸ್ಟಾರ್ ಆಟಗಾರ : ಯುವಿ

    ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಸ್ಫೋಟಕ ಪ್ರದರ್ಶನ ನೀಡಿದ ಯುವ ಆಟಗಾರ ರಿಷಬ್ ಪಂತ್ ಕುರಿತು ಯುವರಾಜ್ ಸಿಂಗ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದು, ಭವಿಷ್ಯದ ಸ್ಟಾರ್ ಆಟಗಾರ ಎಂದಿದ್ದಾರೆ.

    ಮುಂಬೈ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಭರ್ಜರಿ ಆಟ ಪ್ರದರ್ಶಿಸಿದ ಪಂತ್ 27 ಎಸೆತಗಳಲ್ಲಿ 78 ರನ್ ಸಿಡಿಸಿ ಮಿಂಚಿದ್ದರು. ಅಲ್ಲದೇ 7 ಸಿಕ್ಸರ್, 7 ಬೌಂಡರಿ ಸಿಡಿಸಿದ್ದರು. ಪಂದ್ಯದ ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿದ 2011ರ ವಿಶ್ವಕಪ್ ಹೀರೋ ಯುವಿ, ರಿಷನ್ ಪಂತ್ ವಿಶ್ವಕಪ್ ಆಯ್ಕೆ ಬಗ್ಗೆ ನಾನು ಏನು ಹೇಳಲು ಸಾಧ್ಯವಿಲ್ಲ. ಆದರೆ ಕಳೆದ ವರ್ಷ ಪಂತ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಲ್ಲದೇ ಟೆಸ್ಟ್ ಪಂದ್ಯಗಳನ್ನು ಆಡುತ್ತಿದ್ದು, ಮುಂದಿನ ದಿನಗಳಲ್ಲಿ ಸ್ಟಾರ್ ಆಟಗಾರ ಆಗುವ ವಿಶ್ವಾಸ ಇದೆ ಎಂದಿದ್ದಾರೆ.

    ಇತ್ತ ಟೂರ್ನಿಯ ಆರಂಭದ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿದ ಯುವಿ ಕೂಡ ಈ ಬಾರಿ ಮುಂಬೈ ಮಿಂಚುವ ಸೂಚನೆ ನೀಡಿದ್ದಾರೆ. ಆದರೆ ಯುವಿ ಅರ್ಧ ಶತಕದ ನಡುವೆಯೂ ಮುಂಬೈ ಸೋಲುಂಡಿತು. 35 ಎಸೆತಗಳಲ್ಲಿ ಯುವಿ 53 ರನ್ ಗಳಿಸಿದ್ದರು.

    ಕಳೆದ ಎರಡು ವರ್ಷಗಳ ಪ್ರದರ್ಶನದಲ್ಲಿ ಸಾಕಷ್ಟು ವ್ಯತ್ಯಾಸ ಉಂಟಾಯಿತು. ಆದರೆ ನಾನು ಕ್ರಿಕೆಟ್ ಮೇಲಿನ ಪ್ರೀತಿಯಿಂದಲೇ ಆಡುತ್ತಿದ್ದೇನೆ. ದೇಶ ಪರ ಸದ್ಯ ಆಡಲು ಸಾಧ್ಯವಾಗದಿದ್ದರೂ ಕೂಡ ಈ ಹಿಂದೆ ಅಂಡರ್ 16, 14 ತಂಡದ ಪರ ಆಡಿದಂತೆಯೇ ಸಂತಸದಿಂದ ಆಡುತ್ತಿದ್ದೇನೆ. ಸಚಿನ್ ಅವರೊಂದಿಗೆ ಕಳೆದ ಸಮಯ, ನನ್ನ ಪ್ರದರ್ಶನ ಉತ್ತಮ ಪಡಿಸಲು ಸಹಾಯಕವಾಗಿದೆ ಎಂದು ತಿಳಿಸಿದ್ದಾರೆ.

  • ತಮ್ಮ ವಿರುದ್ಧ ಆರೋಪಗಳಿಗೆ ಪೃಥ್ವಿ ಶಾ ತಿರುಗೇಟು!

    ತಮ್ಮ ವಿರುದ್ಧ ಆರೋಪಗಳಿಗೆ ಪೃಥ್ವಿ ಶಾ ತಿರುಗೇಟು!

    ಮುಂಬೈ: ಆಸೀಸ್ ಸರಣಿಯಲ್ಲಿ ವೇಳೆ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರ ನಡೆದಿದ್ದ ಟೀಂ ಇಂಡಿಯಾ ಯುವ ಆಟಗಾರ ಪೃಥ್ವಿ ಶಾ ತಮ್ಮ ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದ್ದಾರೆ.

    ಸರಣಿಯಲ್ಲಿ ಗಾಯಗೊಂಡಿದ್ದ ಪೃಥ್ವಿಶಾರನ್ನು ಅಶಿಸ್ತಿನ ವರ್ತನೆ ತೋರಿದ ಹಿನ್ನೆಲೆಯಲ್ಲಿ ಸರಣಿಯಿಂದ ಕೈ ಬಿಡಲಾಗಿತ್ತು ಎಂದು ಕೆಲ ವರದಿಗಳು ಪ್ರಕಟಗೊಂಡಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೃಥ್ವಿ ಶಾ, ಗಾಯದ ಸಮಸ್ಯೆಯಿಂದ ಹೊರಗುಳಿಯ ಬೇಕಾಯಿತು. ಆದರೆ ಅಶಿಸ್ತಿನ ವರ್ತನೆ ವರದಿಗಳು ಎಲ್ಲವೂ ಕಪೋಲಕಲ್ಪಿತ ಎಂದು ಅಲ್ಲಗೆಳೆದಿದ್ದಾರೆ.

    19 ವರ್ಷದ ಪೃಥ್ವಿ ಶಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಆದೆ ಪಂದ್ಯದ ವೇಳೆ ಗಾಯಗೊಂಡ ಪರಿಣಾಮ ಸರಣಿಯ ನಡುವೆ ಭಾರತಕ್ಕೆ ಹಿಂದಿರುಗಿದ್ದರು. ಸದ್ಯ ಚೇತರಿಸಿಕೊಂಡಿರುವ ಪೃಥ್ವಿ ಶಾ ಐಪಿಎಲ್ ಆಡಲು ಅಭ್ಯಾಸದಲ್ಲಿ ತೊಡಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಪೃಥ್ವಿ ಆಡಲಿದ್ದಾರೆ.

    ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಪೃಥ್ವಿ ಶಾ, ನಾನು ಟೀಂ ಇಂಡಿಯಾ ಡ್ರೆಸಿಂಗ್ ರೂಮ್ ಗೆ ಹೋಗುಚ ವೇಳೆ ನನ್ನೊಂದಿಗೆ 10 ವರ್ಷ ಅನುಭವವುಳ್ಳ ಹಿರಿಯ ಆಟಗಾರರು ಇದ್ದರು. ಆದರೆ ನಾಯಕ ಹಾಗೂ ಕೋಚ್ ಇಲ್ಲಿ ಹಿರಿಯ, ಕಿರಿಯ ಎಂಬುವುದಿಲ್ಲ. ನೀನು ಯಾವುದೇ ಸಮಯದಲ್ಲಿ ಆಟಗಾರರೊಂದಿಗೆ ಮಾತನಾಡಬಹುದು, ನಿನ್ನ ಪ್ರಶ್ನೆಗಳ ಮೂಲಕ ಅವರಿಗೆ ಕಿರಿಕಿರಿ ಕೂಡ ಮಾಡಬಹುದು ಎಂದು ತಿಳಿದಿದ್ದಾಗಿ ಹೇಳಿದರು.

    ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಆಕಾಡೆಮಿ ನನಗೆ ಬಹುತೇಕ ಚೇತರಿಸಿಕೊಳ್ಳಲು ಸಹಾಯ ಮಾಡಿದೆ. ಕೋಚ್ ಹಾಗೂ ತಜ್ಞರು ಉತ್ತಮ ಸಹಕಾರ ನೀಡಿದ್ದಾರೆ. ಹಲವು ಅನುಭವಿ ಆಟಗಾರರ ಆಡುವುದನ್ನು ನಾನು ಗಮನಿಸಿದ್ದೇನೆ. ಸದ್ಯ ತಂಡದಲ್ಲಿ ನನಗೆ ನಂ.5 ಕ್ರಮಾಂಕ ಸಿಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.