Tag: Delhi Capitals

  • ಚರ್ಚೆಗೆ ಗ್ರಾಸವಾಯ್ತು ಅಶ್ವಿನ್‌ ಮಿಸ್‌ ಫೀಲ್ಡಿಂಗ್‌

    ಚರ್ಚೆಗೆ ಗ್ರಾಸವಾಯ್ತು ಅಶ್ವಿನ್‌ ಮಿಸ್‌ ಫೀಲ್ಡಿಂಗ್‌

    ಶಾರ್ಜಾ: ಶನಿವಾರ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್‌ 18 ರನ್‌ಗಳಿದ್ದ ರೋಚಕವಾಗಿ ಗೆದ್ದರೂ ಸ್ಪಿನ್ನರ ಆರ್‌ ಅಶ್ವಿನ್‌ ಅವರ ಮಿಸ್‌ ಫೀಲ್ಡ್‌ ಮಾಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

    ಇಯಾನ್‌ ಮಾರ್ಗನ್‌ ಮತ್ತ ರಾಹುಲ್‌ ತ್ರಿಪಾಠಿ ಸಿಕ್ಸ್‌, ಬೌಂಡರಿಗಳನ್ನು ಸಿಡಿಸುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದ್ದರು. ತಂಡದ ಮೊತ್ತ 200 ಆಗಿದ್ದಾಗ 19ನೇ ಓವರಿನ ಮೂರನೇ ಎಸೆತವನ್ನು ಸಿಕ್ಸ್‌ ಹೊಡೆಯಲು ಹೋಗಿ ಬೌಂಡರಿ ಬಳಿ ಹೆಟ್ಮೆಯರ್‌ಗೆ ಕ್ಯಾಚ್‌ ನೀಡಿ ಮಾರ್ಗನ್‌ ಔಟಾದರು.

    ಮಾರ್ಗನ್‌ ಸ್ಥಾನವನ್ನು ತುಂಬಲು ಬೌಲರ್‌ ನಾಗರ್‌ಕೋಟಿ ಕ್ರೀಸಿಗೆ ಆಗಮಿಸಿದರು. ಅನ್ರಿಕ್‌ ನಾರ್ಟ್ಜೆ ಎಸೆದ 4ನೇ ಎಸೆತದಲ್ಲಿ ತ್ರಿಪಾಠಿ ಒಂದು ರನ್‌ ಓಡಿದರು. 5ನೇ ಎಸೆತವನ್ನು ನಾಗರ್‌ಕೋಟಿ ಬಲಗಡೆಗೆ ಹೊಡೆದಾಗ ಪಾಯಿಂಟ್‌ನಲ್ಲಿದ್ದ ಅಶ್ವಿನ್‌ ಮಿಸ್‌ಫೀಲ್ಡ್‌ ಮಾಡಿದರು.

    ಅಶ್ವಿನ್‌ ಮಿಸ್‌ ಫೀಲ್ಡ್‌ ಮಾಡಿದ ಚೆಂಡು ಅಷ್ಟೇನು ವೇಗದಲ್ಲಿ ಇರಲಿಲ್ಲ ಮತ್ತು ಸುಲಭವಾಗಿ ಹಿಡಿಯಬಹುದಿತ್ತು. ಮಿಸ್‌ ಫೀಲ್ಡ್‌ ಆದ ಕಾರಣ ಎರಡು ರನ್‌ ಓಡಿ ಮತ್ತೆ ಸ್ಟ್ರೈಕ್‌ಗೆ ನಾಗರಕೋಟಿ ಬಂದರು. ಇದನ್ನೂ ಓದಿ: ವಿವಾದಕ್ಕೆ ಕಾರಣವಾಯ್ತು ಚಹಲ್ ಹಿಡಿದ ಕ್ಯಾಚ್- ಚೆಂಡು ನೆಲಕ್ಕೆ ತಾಗಿತ್ತಾ?

    ಒಂದು ವೇಳೆ ಮಿಸ್‌ ಫೀಲ್ಡ್‌ ಆಗದೇ ಇದ್ದರೆ ಸ್ಟ್ರೈಕ್‌ಗೆ ತ್ರಿಪಾಠಿ ಬರುತ್ತಿದ್ದರು. ಅವರಿಗೆ ಎರಡು ಎಸೆತ ಸಿಗುತ್ತಿತ್ತು. ಐಪಿಎಲ್‌ನಲ್ಲಿ 2 ಎಸೆತದಲ್ಲಿ ಏನು ಬೇಕಾದರೂ ಆಗುತ್ತದೆ ಎಂಬುದು ಹಲವು ಪಂದ್ಯಗಳಲ್ಲಿ ಈಗಾಗಲೇ ಸಾಬೀತಾಗಿದೆ. ಹೀಗಾಗಿ ಉದ್ದೇಶಪೂರ್ವಕವಾಗಿ ಅಶ್ವಿನ್‌ ಮಿಸ್‌ಫೀಲ್ಡ್‌ ಮಾಡಿದ್ದಾರೆ ಎಂಬುದರ ಬಗ್ಗೆ ಈ ಚರ್ಚೆ ನಡೆಯುತ್ತಿದೆ. ವಿಶೇಷವಾಗಿ ಕನ್ನಡ ಕಮೆಂಟ್ರಿಯಲ್ಲೂ ಮಿಸ್‌ಫೀಲ್ಡ್‌ ವಿಚಾರ ಪ್ರಸ್ತಾಪವಾಗಿತ್ತು.

    ಈ ಹಿಂದೆ 2019ರ ಐಪಿಎಲ್‍ನಲ್ಲಿ ಅಶ್ವಿನ್ ಜೋಸ್ ಬಟ್ಲರ್ ಅವರನ್ನು ಮಂಕಡ್ ರನೌಟ್‌ ಮಾಡಿ ಬಹಳ ಟ್ರೋಲ್ ಆಗಿದ್ದರು. ಬೌಲರ್ ಬೌಲ್ ಮಾಡುವ ಮೊದಲೇ ನಾನ್ ಸ್ಟ್ರೈಕ್‍ನಲ್ಲಿ ನಿಂತಿರುವ ಬ್ಯಾಟ್ಸ್ ಮ್ಯಾನ್ ಕ್ರೀಸ್‍ನಿಂದ ಮುಂದೆ ಹೋದಾಗ ಬಾಲ್‌ ಎಸೆಯದೇ ಔಟ್‌ ಮಾಡುವುದಕ್ಕೆ ಮಂಕಡ್ ರನೌಟ್‌ ಎನ್ನುತ್ತಾರೆ. ಇದು ಐಸಿಸಿ ನಿಯಮದಲ್ಲಿ ಇದ್ದರೂ ಜನಾಭಿಪ್ರಾಯದಲ್ಲಿ ಇದಕ್ಕೆ ಭಾರೀ ವಿರೋಧವಿದೆ. ಇದನ್ನೂ ಓದಿ: ಫ್ರೀ ಹಿಟ್ ರೀತಿ, ಫ್ರೀ ಬಾಲ್ – ಔಟ್ ಆದ್ರೆ 5 ರನ್ ಕಡಿತಗೊಳಿಸಿ ಎಂದ ಅಶ್ವಿನ್

    ಕ್ರಿಕೆಟ್‌ ಆಡುವ ಸಂರ್ಭದಲ್ಲಿ ಅಶ್ವಿನ್‌ ಬಹಳ ಸ್ಮಾರ್ಟ್‌ ಆಗಿ ಆಡುತ್ತಿರುತ್ತಾರೆ. ಬೇರೆಯವರು ತಪ್ಪು ಮಾಡಿದರೆ ಚರ್ಚೆ ಆಗುತ್ತಿರಲಿಲ್ಲ. ಆದರೆ ಅಶ್ವಿನ್‌ ಮಿಸ್‌ ಫೀಲ್ಡ್‌ ಮಾಡಿದ್ದರಿಂದ ಚರ್ಚೆ ಆಗುತ್ತಿದೆ.

    ಇಯಾನ್‌ ಮಾರ್ಗನ್‌ ಮತ್ತು ರಾಹುಲ್‌ ತ್ರಿಪಾಠಿ 7ನೇ ವಿಕೆಟಿಗೆ 31 ಎಸೆತದಲ್ಲಿ 78 ರನ್‌ ಹೊಡೆದಿದ್ದರು. ಸ್ಟೋನಿಸ್‌ ಎಸೆದ 17ನೇ ಓವರಿನಲ್ಲಿ 24 ರನ್‌ ಬಂದಿತ್ತು. ಈ ಓವರಿನಲ್ಲಿ ತ್ರಿಪಾಠಿ 3 ಸಿಕ್ಸ್‌ 1 ಬೌಂಡರಿ ಹೊಡೆದಿದ್ದರು. ರಬಾಡ ಎಸೆದ 18ನೇ ಓವರಿನಲ್ಲಿ 23 ರನ್‌ ಬಂದಿತ್ತು. ಮಾರ್ಗನ್‌ 3 ಸಿಕ್ಸ್‌ ಹೊಡೆದಿದ್ದರೆ ತ್ರಿಪಾಠಿ 1 ಬೌಂಡರಿ ಹೊಡೆದಿದ್ದರು.

    https://twitter.com/ImArvind_18/status/1312452990867972096

  • ಅಯ್ಯರ್‌ಗೆ 12 ಲಕ್ಷ ದಂಡ – ಐಪಿಎಲ್‌ನಲ್ಲಿ ದಂಡ ಹಾಕೋದು ಯಾಕೆ?

    ಅಯ್ಯರ್‌ಗೆ 12 ಲಕ್ಷ ದಂಡ – ಐಪಿಎಲ್‌ನಲ್ಲಿ ದಂಡ ಹಾಕೋದು ಯಾಕೆ?

    ಅಬುದಾಬಿ: ಹೈದರಾಬಾದ್‌ ವಿರುದ್ಧ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ ಮಾಡಿದ್ದಕ್ಕೆ ಡೆಲ್ಲಿ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

    ಐಪಿಎಲ್‌ ನಿಯಮದ ಪ್ರಕಾರ ಒಂದು ತಂಡ 20 ಓವರ್‌ಗಳನ್ನು 90 ನಿಮಿಷದ ಒಳಗಡೆ ಮುಗಿಸಬೇಕು. ಈ ಅವಧಿಯಲ್ಲಿ ಓವರ್‌ಗಳನ್ನು ಪೂರ್ಣ ಮಾಡದೇ ಇದ್ದರೂ 20ನೇ ಓವರ್‌ ಅನ್ನು 90ನೇ ನಿಮಿಷದಲ್ಲೇ ಆರಂಭಿಸಬೇಕು. ಈ ನಿಯಮವನ್ನು ಮೊದಲ ಬಾರಿ ಉಲ್ಲಂಘಿಸಿದರೆ 12 ಲಕ್ಷ ರೂ. ದಂಡವನ್ನು ವಿಧಿಸಲಾಗುತ್ತದೆ. ಇದನ್ನೂ ಓದಿ: 3 ವಿಕೆಟ್‌ ಕಿತ್ತು ರೋಚಕ ತಿರುವು – ತಾಯಿಯ ಬಗ್ಗೆ ರಶೀದ್‌ ಖಾನ್‌ ಭಾವನಾತ್ಮಕ ಮಾತು

    ಪ್ರತಿ ಪಂದ್ಯದಲ್ಲಿ 2 ನಿಮಿಷ 30 ಸೆಕೆಂಡಿನ 4 ಸ್ಟ್ರಟೆಜಿಕ್‌ ಟೈಮ್‌ ಔಟ್‌ ಬ್ರೇಕ್‌ಗಳು ಇರುತ್ತದೆ. ಮೊದಲ ಇನ್ನಿಂಗ್ಸ್‌ನಲ್ಲಿ ಬೌಲಿಂಗ್‌ ತಂಡ 6-9 ಓವರ್‌ ಮಧ್ಯೆ ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು. ಎರಡನೇ ಸ್ಟ್ರಟೆಜಿಕ್‌ ಟೈಮ್‌ ಔಟ್‌ ಅನ್ನು ಬ್ಯಾಟಿಂಗ್ ತಂಡ 13-16 ಓವರ್‌ ಮಧ್ಯೆ ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು.

    ಈ ಮೊದಲು ಬೆಂಗಳೂರು ಮತ್ತು ಪಂಜಾಬ್‌ ಪಂದ್ಯದ ವೇಳೆ ನಿಧಾನಗತಿಯ ಬೌಲಿಂಗ್‌ ಪ್ರದರ್ಶನ ನೀಡಿದ್ದಕ್ಕೆ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಇದನ್ನೂ ಓದಿ: 3 ವಿಕೆಟ್ ಪಡೆದು 14 ರನ್ ನೀಡಿದ ರಶೀದ್ – ಖಾನ್ ಸ್ಪಿನ್ ಮೋಡಿಗೆ ಡೆಲ್ಲಿ ಉಡೀಸ್

    ದಂಡ ಯಾಕೆ?
    ಐಪಿಎಲ್‌ ಅಂದ್ರೆ ಬಿಸಿನೆಸ್‌. ಇಲ್ಲಿ ಹಣದ ಹೊಳೆಯೇ ಹರಿಯುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಪ್ರತಿ ಸೆಕೆಂಡ್‌ ಬಹಳ ಮುಖ್ಯ.

    ಮಳೆಯಿಂದ ಅಥವಾ ಇನ್ಯಾವುದೋ ಕಾರಣದಿಂದ ಪಂದ್ಯಕ್ಕೆ ಅಡ್ಡಿಯಾದರೆ ಅದು ಬೇರೆ ವಿಷಯ. ಆದರೆ ಒಂದು ತಂಡ ನಿಧಾನಗತಿ ಬೌಲಿಂಗ್‌ ಮಾಡಿದರೆ ಅದು ಐಪಿಎಲ್‌ ದಿನದ ವಹಿವಾಟಿನ ಮೇಲೆ ಪರಿಣಾಮ ಬೀರುತ್ತದೆ. ವೆಚ್ಚಗಳು ಜಾಸ್ತಿಯಾಗುತ್ತದೆ.

    ಐಪಿಎಲ್‌ಗೆ ಹೆಚ್ಚಿನ ಆದಾಯ ಬರುತ್ತಿರುವುದು ಟಿವಿ ರೈಟ್ಸ್‌ನಿಂದ. ಟಿವಿಯಲ್ಲಿ ಪ್ರತಿ ಸೆಕೆಂಡ್‌ ಬಹಳ ಮುಖ್ಯ. ಅದರಲ್ಲೂ 2 ಪಂದ್ಯ ಒಂದೇ ದಿನ ನಿಗದಿಯಾದರೆ ಎರಡನ್ನು ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. ಯಾಕೆಂದರೆ ಜಾಹೀರಾತುಗಳು ಮೊದಲೇ ಬುಕ್‌ ಆಗಿರುತ್ತದೆ.

    ಏನೇ ಮಾಡಿದರೂ ಶಿಸ್ತು ಇರಬೇಕು. ಹೀಗಾಗಿ ಯಾರಿಗೂ ಸಮಸ್ಯೆ ಆಗದೇ ಇರಲು ಮತ್ತು ಎಲ್ಲ ಸರಿಯಾದ ಸಮಯಕ್ಕೆ ಮುಕ್ತಾಯವಾಗಲು ಪಂದ್ಯ ಮುಗಿಯಲು ಸಮಯವನ್ನು ನಿಗದಿ ಮಾಡಲಾಗಿದೆ. ಹೆಚ್ಚು ಸಮಯ ತೆಗೆದುಕೊಂಡರೆ ದಂಡ ವಿಧಿಸಲಾಗುತ್ತದೆ. ಈ ಕಾರಣಕ್ಕೆ ಶಿಸ್ತುಬದ್ಧವಾಗಿ ನಡೆದುಕೊಂಡ ತಂಡಕ್ಕೆ ಫೇರ್‌ ಪ್ಲೇ ಅಂಕಗಳನ್ನು ನೀಡಲಾಗುತ್ತದೆ. ಇಬ್ಬರು ಫೀಲ್ಡ್‌ ಅಂಪೈರ್‌ ಮತ್ತು ಮೂರನೇ ಅಂಪೈರ್‌ ಈ ಅಂಕವನ್ನು ತಂಡಗಳಿಗೆ ನೀಡುತ್ತಾರೆ.

  • 3 ವಿಕೆಟ್‌ ಕಿತ್ತು ರೋಚಕ ತಿರುವು – ತಾಯಿಯ ಬಗ್ಗೆ ರಶೀದ್‌ ಖಾನ್‌ ಭಾವನಾತ್ಮಕ ಮಾತು

    3 ವಿಕೆಟ್‌ ಕಿತ್ತು ರೋಚಕ ತಿರುವು – ತಾಯಿಯ ಬಗ್ಗೆ ರಶೀದ್‌ ಖಾನ್‌ ಭಾವನಾತ್ಮಕ ಮಾತು

    ಅಬುದಾಬಿ: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸನ್‌ ರೈಸರ್ಸ್‌ ಹೈದರಾಬಾದ್‌ ಜಯಕ್ಕೆ ಕಾರಣವಾದ ರಶೀದ್‌ ಖಾನ್‌ ಪಂದ್ಯ ಮುಗಿದ ಬಳಿಕ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

    14 ರನ್‌ ನೀಡಿ 3 ವಿಕೆಟ್‌ ಕಿತ್ತು ರಶೀದ್‌ ಖಾನ್‌ ಅವರನ್ನು ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ತಂದೆ, ತಾಯಿಯ ಬಗ್ಗೆ ರಶೀದ್‌ ಖಾನ್‌ ಭಾವನಾತ್ಮಕವಾಗಿ ಮಾತನಾಡಿದರು.

    ಕಳೆದ ಒಂದೂವರೆ ವರ್ಷದಲ್ಲಿ ನಾನು ನನ್ನ ಪೋಷಕರನ್ನು ಕಳೆದುಕೊಂಡಿದ್ದೇನೆ. ಆರಂಭದಲ್ಲಿ ನಾನು ನನ್ನ ತಂದೆಯನ್ನು ಕಳೆದುಕೊಂಡಿದ್ದೆ. 3-4 ತಿಂಗಳ ಹಿಂದೆ ನನ್ನ ತಾಯಿ ತೀರಿಕೊಂಡರು. ತಾಯಿ ನನ್ನ ಅತಿ ದೊಡ್ಡ ಅಭಿಮಾನಿ. ವಿಶೇಷವಾಗಿ ಐಪಿಎಲ್‌ ಸಮಯದಲ್ಲಿ ರಾತ್ರಿ ತಾಯಿ ನನ್ನ ಜೊತೆ ಮಾತನಾಡುತ್ತಿದ್ದರು ಎಂದು ನೆನಪನ್ನು ಹಂಚಿಕೊಂಡರು. ಈ ವೇಳೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ರಶೀದ್‌ ಖಾನ್‌ ಪೋಷಕರಿಗೆ ಸಮರ್ಪಿಸಿದರು. ಇದನ್ನೂ ಓದಿ: ಟೆನ್ನಿಸ್ ಬಾಲ್ ಮ್ಯಾಚಿನಿಂದ ಸೂಪರ್ ಓವರ್ ಬೌಲರ್ – ಆರ್‌ಸಿಬಿ ಸೈನಿಯ ಕ್ರಿಕೆಟ್ ಪ್ರಯಾಣದ ಕಥೆ

     

    ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ ರೈಸರ್ಸ್‌ ತಂಡ 4 ವಿಕೆಟ್‌ ಕಳೆದುಕೊಂಡು 162 ರನ್‌ ಗಳಿಸಿತ್ತು. ನಂತರ ಹೈದರಾಬಾದ್‌ ತಂಡದ ಶಿಸ್ತು ಬದ್ಧ ಬೌಲಿಂಗ್‌ಗೆ ಡೆಲ್ಲಿ ತಂಡ 7 ವಿಕೆಟ್‌ ಕಳೆದುಕೊಂಡು 147 ರನ್‌ ಗಳಿಸಿತು.

    7.1 ಓವರ್‌ಗೆ 42 ರನ್‌ಗೆ 1 ವಿಕೆಟ್‌ ಕಳೆದುಕೊಂಡು ಡೆಲ್ಲಿ ತಂಡ ಉತ್ತಮ ಸ್ಥಿತಿಯಲ್ಲಿ ಇತ್ತು. ಆದರೆ ನಂತರ ನಡೆದದ್ದು ರಶೀದ್‌ ಖಾನ್‌ ಮ್ಯಾಜಿಕ್‌. ಐದನೇಯವರಾಗಿ ಬೌಲಿಂಗ್‌ಗೆ ಇಳಿದ ರಶೀದ್‌ ಖಾನ್‌ 17 ರನ್‌ ಗಳಿಸಿದ್ದ ಶ್ರೇಯಸ್‌ ಅಯ್ಯರ್‌ ಅವರನ್ನು ಔಟ್‌ ಮಾಡಿದ ಬಳಿಕ ಇನ್ನಿಂಗ್ಸ್‌ನ 11.3 ಓವರ್‌ನಲ್ಲಿ ಮತ್ತೊಂದು ಬ್ರೇಕ್‌ ನೀಡಿದರು. ಇದನ್ನೂ ಓದಿ:ಅಂದು ಅಪಘಾತದಿಂದ ಕಾಲಿಗೆ ಪೆಟ್ಟು, ಇಂದು ಬೆಂಕಿ ಫೀಲ್ಡಿಂಗ್‌ – ಇದು ಪೂರನ್‌ ಸಾಧನೆಯ ಕಥೆ

    34 ರನ್‌ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಶಿಖರ್‌ ಧವನ್‌ ಅವರನ್ನು ಔಟ್‌ ಮಾಡಿದರು. ತಂಡದ ಮೊತ್ತ 117 ಆಗಿದ್ದಾಗ ರಿಷಬ್‌ ಬಂತ್‌ ಅವರನ್ನು ಪೆವಿಲಿಯನ್‌ಗೆ ಕಳುಹಿಸುವಲ್ಲಿ ಯಶಸ್ವಿಯಾದರು. 4 ಓವರ್‌ಗಳಲ್ಲಿ ಕೇವಲ 14 ರನ್‌ ನೀಡಿ 3.50 ಎಕಾನಮಿಯಲ್ಲಿ ಮೂರು ವಿಕೆಟ್‌ ಕಿತ್ತ ಪರಿಣಾಮ ಪಂದ್ಯ ಹೈದರಾಬಾದ್‌ ಕಡೆ ವಾಲಿತು. ವಿಶೇಷ ಏನೆಂದರೆ ಹೈದರಾಬಾದ್‌ ಪರ 5 ಮಂದಿ ಬೌಲ್‌ ಮಾಡಿದ್ದು, ಈ ಪೈಕಿ ರಶೀದ್‌ ಖಾನ್‌ ಹೊರತು ಪಡಿಸಿ ಉಳಿದ ಎಲ್ಲರೂ ಒಂದೊಂದು ವೈಡ್‌ ಎಸೆದಿದ್ದಾರೆ.

    104 ರನ್‌ಗೆ ಮೂರು ವಿಕೆಟ್‌ ಕಳೆದುಕೊಂಡಿದ್ದ ಡೆಲ್ಲಿ ಕೊನೆಯ 4 ವಿಕೆಟ್‌ಗಳನ್ನು 44 ರನ್‌ಗಳ ಅಂತರದಲ್ಲಿ ಕಳೆದುಕೊಂಡಿತು.

  • ಮುಂದಿನ ಪಂದ್ಯದಲ್ಲಿ ಗ್ಲುಕೋಸ್ ತೆಗೆದುಕೊಂಡು ಬನ್ನಿ- ಸಿಎಸ್‍ಕೆಗೆ ಸೆಹ್ವಾಗ್ ಸಲಹೆ

    ಮುಂದಿನ ಪಂದ್ಯದಲ್ಲಿ ಗ್ಲುಕೋಸ್ ತೆಗೆದುಕೊಂಡು ಬನ್ನಿ- ಸಿಎಸ್‍ಕೆಗೆ ಸೆಹ್ವಾಗ್ ಸಲಹೆ

    ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡ ಅನುಭವಿ ಆಟಗಾರರನ್ನೇ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಐಪಿಎಲ್ 2020ರ ಆವೃತ್ತಿಯ ಅಂಕಪಟ್ಟಿಯಲ್ಲಿ ಅರ್ಹವಾಗಿಯೇ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

    ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ತಂಡ ಸಿಎಸ್‍ಕೆ ವಿರುದ್ದದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿಯೂ ಉತ್ತಮ ಪ್ರದರ್ಶನ ನೀಡಿತ್ತು. 175 ರನ್ ಮೊತ್ತವನ್ನು ಬೆನ್ನತ್ತಿದ್ದ ಸಿಎಸ್‍ಕೆ 131 ರನ್ ಗಳಿಗೆ ಆಲೌಟ್ ಆಯ್ತು.

    ಚೆನ್ನೈ ಸೋಲಿನ ಕುರಿತು ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ಚೆನ್ನೈ ಬ್ಯಾಟ್ಸ್ ಮನ್ಸ್ ಸರಿಯಾಗಿ ಆಡುತ್ತಿಲ್ಲ. ಮುಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಹೋಗುವ ಗ್ಲುಕೋಸ್ ತೆಗೆದುಕೊಂಡು ಬರುವಂತೆ ಹೇಳಿದ್ದಾರೆ.

    ಸುರೇಶ್ ರೈನಾ, ರಾಯುಡು ಅನುಪಸ್ಥಿತಿಯಲ್ಲಿ ಚೆನ್ನೈ ತಂಡದ ಬ್ಯಾಟಿಂಗ್ ಪ್ರದರ್ಶನ ಕಳಪೆಯಿಂದ ಕೂಡಿದೆ. ಅದರಲ್ಲೂ ಡೆಲ್ಲಿ ವಿರುದ್ಧದ ಸೋಲಿನ ಬಳಿಕ ಸಿಎಸ್‍ಕೆ ಅಭಿಮಾನಿಗಳು ಕೂಡ ಬ್ಯಾಟಿಂಗ್ ಶೈಲಿಯನ್ನು ಟೀಕಿಸಿದ್ದಾರೆ. ಅಲ್ಲದೇ ಡೆಲ್ಲಿ ವಿರುದ್ಧದ ಪಂದ್ಯದಲ್ಲಿಯೂ ನಾಯಕ ಧೋನಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಇಳಿದಿದ್ದು ಕೂಡ ಟೀಕೆಗೆ ಗುರಿಯಾಗಿದೆ.

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡದ ಪರ ಧವನ್, ಪೃಥ್ವಿ ಶಾ 94 ರನ್ ಗಳ ಜೊತೆಯಾಟದ ಮೂಲಕ ಉತ್ತಮ ಆರಂಭ ನೀಡಿದ್ದರು. 20 ವರ್ಷದ ಪೃಥ್ವಿ ಶಾ 43 ಎಸೆತಗಳಲ್ಲಿ 64 ರನ್ ಸಿಡಿಸಿದ್ದರು. ಧವನ್ ಔಟಾದ ಬಳಿಕ ನಾಯಕ ಅಯ್ಯರ್, ಪೃಥ್ವಿ ಶಾರೊಂದಿಗೆ ಕೂಡಿಕೊಂಡು 58 ರನ್‍ಗಳ ಜೊತೆಯಾಟ ನೀಡಿದ್ದರು.

    ಟೂರ್ನಿಯಲ್ಲಿ ಸತತ ಎರಡು ಸೋಲುಗಳನ್ನು ಪಡೆದಿರುವ ಚೆನ್ನೈ ತಂಡದ ಮುಂದಿನ ಪಂದ್ಯಕ್ಕೆ ಒಂದು ವಾರಗಳ ಸಮಯವನ್ನು ಹೊಂದಿದೆ. ಸಿಎಸ್‍ಕೆ ಅಕ್ಟೋಬರ್‌ 2 ರಂದು ಮುಂದಿನ ಪಂದ್ಯವನ್ನು ಆಡಲಿದ್ದು, ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್‍ರೈಸರ್ಸ್ ತಂಡವನ್ನು ಎದುರಿಸಲಿದೆ.

  • ಡೆಲ್ಲಿ ತಂಡಕ್ಕೆ ನೆರವಾಯ್ತು ಅಂಪೈರ್ ಎಡವಟ್ಟು ತೀರ್ಪು- ಶ್ರೀನಾಥ್‍ಗೆ ದೂರು ಕೊಟ್ಟ ಪಂಜಾಬ್

    ಡೆಲ್ಲಿ ತಂಡಕ್ಕೆ ನೆರವಾಯ್ತು ಅಂಪೈರ್ ಎಡವಟ್ಟು ತೀರ್ಪು- ಶ್ರೀನಾಥ್‍ಗೆ ದೂರು ಕೊಟ್ಟ ಪಂಜಾಬ್

    ಅಬುಧಾಬಿ: ಕಿಂಗ್ಸ್ ಇಲೆವೆನ್ ತಂಡ ಫೀಲ್ಡ್ ಅಂಪೈರ್ ನಿತಿನ್ ಮೆನನ್ ಅವರ ವಿವಾದಾತ್ಮಕ ಶಾರ್ಟ್ ರನ್ ವಿರುದ್ಧ ಪಂಜಾಬ್ ತಂಡ ಮನವಿ ಮಾಡಿದ್ದು, ಉತ್ತಮ ಫಲಿತಾಂಶಕ್ಕಾಗಿ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಲು ಆಟಗಾರರು ಮನವಿ ಮಾಡಿದ್ದಾರೆ.

    ಈ ಕುರಿತು ಮಾಹಿತಿ ನೀಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಿಇಒ ಸತೀಶ್ ಮೆನನ್, ಪಂದ್ಯದ ರೆಫರಿ ಜಾವಗಲ್ ಶ್ರೀನಾಥ್ ಬಳಿ ಮನವಿ ಮಾಡಿದ್ದೇವೆ. ಮಾನವ ತಪ್ಪು ಸಹಜವಾಗಿ ನಡೆಯುತ್ತದೆ. ಆದರೆ ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ, ತಂತ್ರಜ್ಞಾನ ಲಭ್ಯವಿದ್ದರೂ ಇಂತಹ ಪ್ರಮಾದ ನಡೆಯುವುದು ಸರಿಯಲ್ಲ. ಈ ಒಂದು ರನ್ ನಮ್ಮ ಪ್ಲೇ ಆಫ್ ಪ್ರವೇಶಿಸಲು ದುಬಾರಿಯಾಗಬಹುದು. ಸೋಲು ಅಂತಿಮವಾಗಿ ಸೋಲು ಅಷ್ಟೇ. ಆದ್ದರಿಂದ ನಿಯಮಗಳಲ್ಲಿ ಬದಲಾವಣೆ ತರುವ ವಿಶ್ವಾಸವಿದೆ ಎಂದು ತಿಳಿಸಿದರು.

    ಇತ್ತ ವಿವಾದದ ಕುರಿತು ಪ್ರತಿಕ್ರಿಯೆ ನೀಡಿರುವ ಆಸ್ಟ್ರೇಲಿಯಾ ಮಾಜಿ ಆಟಗಾರ ಟಾಮ್ ಮೂಡಿ, ತಂತ್ರಜ್ಞಾನ ಆಟಕ್ಕೆ ಸಹಾಯ ಮಾಡಬೇಕಾದರೆ ನಿಯಮಗಳ ಬದಲಾವಣೆ ಅಗತ್ಯವಿದೆ. ಆದರೆ ಯಾವುದೋ ಒಂದು ತಪ್ಪು ನಡೆಯುವವರೆಗೂ ಅಂತಹ ವಿಷಯಗಳನ್ನು ನಾವು ಯೋಚಿಸಲಾಗುವುದಿಲ್ಲ. ಘಟನೆಯಲ್ಲಿ ಮೂರನೇ ಅಂಪೈರ್ ತೀರ್ಪು ನೀಡಬೇಕಾಗಿತ್ತು. ಯಾವುದೇ ನಿಯಮಗಳನ್ನು ಬದಲಿಸಿದರೂ ಟೂರ್ನಿಯ ಆರಂಭದಲ್ಲೇ ಅದನ್ನು ಘೋಷಿಸಬೇಕಿದೆ ಎಂದು ಹೇಳಿದ್ದಾರೆ.

    ಪಂಜಾಬ್ ಮತ್ತು ಡೆಲ್ಲಿ ವಿರುದ್ಧ ಪಂದ್ಯ ಸೂಪರ್ ಓವರ್ ಮುನ್ನ ಕಗಿಸೊ ರಬಡಾ ಬೌಲ್ ಮಾಡಿದ ಓವರಿನಲ್ಲಿ ನಾನ್‍ಸ್ಟ್ರೇಕ್ ನಲ್ಲಿದ್ದ ಕ್ರಿಸ್ ಜೋರ್ಡನ್ ರನ್ ಪೂರ್ಣಗೊಂಡಿರುವುದು ರಿಪ್ಲೇನಲ್ಲಿ ಸ್ಪಷ್ಟವಾಗಿತ್ತು. ತಾಂತ್ರಿಕವಾಗಿ ಸಾಕ್ಷಿ ಇದ್ದರೂ ಅಂಪೈರ್ ಮೆನನ್ ತಮ್ಮ ತೀರ್ಪನ್ನು ಮರುಪರಿಶೀಲನೆ ಮಾಡಲಿಲ್ಲ. ಪರಿಣಾಮ ಕಿಂಗ್ಸ್ ಇಲೆವೆನ್ ಖಾತೆಗೆ ಕೇವಲ 1 ರನ್ ಲಭಿಸಿತ್ತು.

    ಅಂತಿಮ ಓವರಿನಲ್ಲಿ ಪಂಜಾಬ್ 13 ರನ್ ಗಳಿಸಬೇಕಿತ್ತು. ಮಯಾಂಕ್ 12 ರನ್ ಸಿಡಿಸಲು ಯಶಸ್ವಿಯಾಗಿದ್ದರು. ಒಂದೊಮ್ಮೆ ಶಾರ್ಟ್ ರನ್ ಅವರ ಖಾತೆಗೆ ಜಮೆಯಾಗಿದ್ದರೆ ಮೂರು ಎಸೆತ ಬಾಕಿ ಇರುವಂತೆಯೇ ಪಂದ್ಯದಲ್ಲಿ ಪಂಜಾಬ್ ತಂಡ ಗೆಲುವು ಪಡೆಯುತ್ತಿತ್ತು. ಆದರೆ ಬಳಿಕ ನಡೆದ ಎರಡು ಎಸೆತಗಳಲ್ಲಿ, ಎರಡು ವಿಕೆಟ್ ಉರುಳಿದ ಕಾರಣ ಪಂದ್ಯದ ಫಲಿತಾಂಶ ತೀರ್ಮಾನ ಸೂಪರ್ ಓವರ್‍ನಲ್ಲೇ ಮಾಡಬೇಕಾಯ್ತು.

    ಇತ್ತ ಶಾರ್ಟ್ ರನ್ ಕುರಿತಂತೆ ಟ್ವೀಟ್ ಮಾಡಿ ತಮ್ಮ ಅಸಮಾಧಾನ ಹೊರ ಹಾಕಿರುವ ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ, ಕೊರೊನಾ ಸಂದರ್ಭದಲ್ಲಿ ಐಪಿಎಲ್‍ಗಾಗಿ ಉತ್ಸಾಹದಿಂದ ಪ್ರಯಾಣಿಸಿದೆ. 6 ದಿನಗಳ ಕ್ವಾರಂಟೈನ್ ಹಾಗೂ 5 ಕೋವಿಡ್ ಟೆಸ್ಟ್‍ಗಳನ್ನ ನಗುವಿನ ಮೂಲಕವೇ ಎದುರಿಸಿದ್ದೆ. ಆದರೆ ಒಂದು ಶಾರ್ಟ್ ರನ್ ನನಗೆ ತೀವ್ರ ಹೊಡೆತ ನೀಡಿದೆ. ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲು ಆಗದಿದ್ದರೆ ಅದರ ಅರ್ಥವೇನು? ಬಿಸಿಸಿಐಗೆ ಇದು ಹೊಸ ನಿಯಮಗಳನ್ನು ಪರಿಚಯಿಸಲು ಸೂಕ್ತ ಸಮಯ. ಇದು ಪ್ರತಿ ವರ್ಷ ಸಂಭವಿಸುವುದಿಲ್ಲ ಎಂದು ಹೇಳಿದ್ದಾರೆ.

    ಇತ್ತ ಕಿವೀಸ್ ಮಾಜಿ ಆಟಗಾರ ಸ್ಕಾಟ್ ಸ್ಟೈರಿಸ್ ಪ್ರತಿಕ್ರಿಯೆ ನೀಡಿ, ಶಾರ್ಟ್ ರನ್ ಇಂದಿನ ಐಪಿಎಲ್ ಪಂದ್ಯದಲ್ಲಿ ಸಣ್ಣ ನಿರ್ಧಾರ. ಆದರೆ ನಿಮಗೆ ಕೊನೆಯ 2 ಎಸೆತಗಳಲ್ಲಿ 1 ರನ್ ಬೇಕಾಗಿದ್ದು, ಗೆಲುವು ಪಡೆಯಲು ಸಾಧ್ಯವಾಗದಿದ್ದರೆ ನಿಮ್ಮನ್ನು ನೀವೇ ದೂಷಿಸಿಕೊಳ್ಳಬೇಕು ಎಂದಿದ್ದಾರೆ.

  • ಯುವ ನಟಿಯೊಂದಿಗೆ ಪ್ರೀತಿಯಲ್ಲಿ ಬಿದ್ದ ಪೃಥ್ವಿ ಶಾ?

    ಯುವ ನಟಿಯೊಂದಿಗೆ ಪ್ರೀತಿಯಲ್ಲಿ ಬಿದ್ದ ಪೃಥ್ವಿ ಶಾ?

    ಮುಂಬೈ: ಟೀಂ ಇಂಡಿಯಾ ಆರಂಭಿಕ ಆಟಗಾರ 20 ವರ್ಷದ ಪೃಥ್ವಿ ಶಾ ಬಾಲಿವುಡ್ ಯುವ ನಟಿಯೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.

    ಐಪಿಎಲ್ 2020ರ ಆವೃತ್ತಿಯ ಹಿನ್ನೆಲೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರ ಪೃಥ್ವಿ ಶಾ ಯುಎಇಗೆ ತೆರಳಿದ್ದಾರೆ. ಇತ್ತೀಚೆಗೆ ಯುಎಇನಲ್ಲಿ ತಂಡದ ಆಟಗಾರರೊಂದಿಗೆ ಅಭ್ಯಾಸ ನಡೆಸುತ್ತಿದ್ದ ಫೋಟೋ ಹಾಗೂ ವಿಡಿಯೋಗಳನ್ನು ಶಾ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಈ ಪೋಸ್ಟ್‍ಗಳಿಗೆ ನಟಿ ಪ್ರಾಂಚಿ ಸಿಂಗ್ ಮಾಡಿರುವ ಕಾಮೆಂಟ್‍ಗಳು ಸದ್ಯ ಇಬ್ಬರ ನಡುವೇ ಪ್ರೀತಿ ಮೂಡಿದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ. ಇಬ್ಬರು ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದ್ದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

    ಇತ್ತೀಚೆಗೆ ಹೋಟೆಲ್‍ನಿಂದ ಹೊರ ಬರುವ ಸಂದರ್ಭದ ವಿಡಿಯೋವನ್ನು ಪೃಥ್ವಿ ಶಾ ತಮ್ಮ ಇನ್‍ಸ್ಟಾದಲ್ಲಿ ಶೇರ್ ಮಾಡಿದ್ದರು. ಈ ವಿಡಿಯೋಗೆ ಕಾಮೆಂಟ್ ಮಾಡಿದ್ದ ಪ್ರಾಚಿ ಸಿಂಗ್, ‘ವ್ಹಾ ವ್ಹಾ ಐ ಮಿಸ್ ಡಟ್ ಲಾಫ್’ ಎಂದು ಬರೆದುಕೊಂಡಿದ್ದರು. ಮತ್ತೊಂದು ಫೋಟೋಗೆ ‘ಕ್ಯೂಟಿ’ ಎಂದು ಲವ್ ಇಮೋಜಿ ಕಾಮೆಂಟ್ ಮಾಡಿದ್ದರು. ಅಲ್ಲದೇ ಪೃಥ್ವಿ ಶಾ ಪೋಸ್ಟ್ ಮಾಡುವ ಪ್ರತಿಯೊಂದು ಪೋಸ್ಟ್ ಗೂ ಪ್ರಾಚಿ ಸಿಂಗ್ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದರೊಂದಿಗೆ ಇಬ್ಬರು ಡೇಟಿಂಗ್‍ನಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

    ಯುವ ನಟಿ ಪ್ರಾಚಿ ಸಿಂಗ್ ಹೆಸರು ಕಿರುತೆರೆ ಹಾಗೂ ಸಿನಿಮಾ ರಂಗದಲ್ಲಿ ಸಾಕಷ್ಟು ಕೇಳಿ ಬರುತ್ತಿದೆ. ಪ್ರಾಚಿ ಸಿಂಗ್ ಸದ್ಯ ಕಲರ್ಸ್ ವಾಹಿನಿಯ ಉಡಾನ್ ಎಂಬ ಸೀರಿಸ್‍ನಲ್ಲಿ ನಟಿಸುತ್ತಿದ್ದು, ಪೃಥ್ವಿ ಶಾ ಮತ್ತು ಪ್ರಾಚಿ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್ ಆಗಿರುವುದರಿಂದ ಇಬ್ಬರು ಪ್ರೀತಿಯಲ್ಲಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 4 ಟೆಸ್ಟ್ ಪಂದ್ಯಗಳನ್ನು ಆಡಿರುವ ಪೃಥ್ವಿ ಶಾ, 3 ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 2018 ರಿಂದಲೂ ಐಪಿಎಲ್‍ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದು, ಇದುವರೆಗೂ 25 ಪಂದ್ಯಗಳಿಂದ 598 ರನ್ ಸಿಡಿಸಿದ್ದಾರೆ. ಇದರಲ್ಲಿ 5 ಅರ್ಧ ಶತಕಗಳೂ ಸೇರಿದ್ದು, 99 ರನ್ ಗರಿಷ್ಠ ಸ್ಕೋರ್ ಆಗಿದೆ. ಸೆ.19 ರಿಂದ ನ.10ರವರೆಗೂ ಐಪಿಎಲ್ ಟೂರ್ನಿ ನಡೆಯಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಶಿಖರ್ ಧವನ್‍ರೊಂದಿಗೆ ಪೃಥ್ವಿ ಶಾ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

    ಕ್ರಿಕೆಟಿಗರು ಹಾಗೂ ನಟಿಯರ ನಡುವೆ ಆಗಾಗ ಡೇಟಿಂಗ್, ಲವ್ ನಂತಹ ರೂಮರ್ಸ್ ಕೇಳಿ ಬರುತ್ತಲೇ ಇರುತ್ತವೆ. ಇಂತಹ ರೂಮರ್ಸ್ ಕೆಲವೊಮ್ಮೆ ನಿಜವಾಗಿದೆ. ವಿರಾಟ್ ಕೊಹ್ಲಿ-ಅನುಷ್ಕಾ, ಜಹೀರ್ ಖಾನ್-ಸಾಗರಿಕಾ, ಹರ್ಭಜನ್ ಸಿಂಗ್-ಗೀತಾ, ಯುವರಾಜ್ ಸಿಂಗ್-ಹೇಝಲ್ ಕೀಚ್, ಹಾರ್ದಿಕ್ ಪಾಂಡ್ಯ-ನತಾಶಾ ಸೇರಿದಂತೆ ಹಲವು ಜೋಡಿಗಳು ಇದಕ್ಕೆ ಉದಾಹರಣೆಯಾಗಿದೆ.

     

    View this post on Instagram

     

    ???? . . . #bellydanceindia

    A post shared by Prachi Singh (@prachisingh2202) on

  • 9 ವರ್ಷದ ರಾಜಸ್ಥಾನ್ ನಂಟು ಮುರಿದು ದೆಹಲಿ ಪರ ಬ್ಯಾಟ್ ಬೀಸಲಿದ್ದಾರೆ ರಹಾನೆ

    9 ವರ್ಷದ ರಾಜಸ್ಥಾನ್ ನಂಟು ಮುರಿದು ದೆಹಲಿ ಪರ ಬ್ಯಾಟ್ ಬೀಸಲಿದ್ದಾರೆ ರಹಾನೆ

    ಮುಂಬೈ: ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಮುಂದಿನ ಇಂಡಿಯನ್ ಪ್ರಿಮಿಯರ್ ಲೀಗ್ ಆವೃತ್ತಿಯಲ್ಲಿ ದೆಹಲಿ ಪರ ಆಡಲಿದ್ದಾರೆ. ಈ ಮೂಲಕ ಐಪಿಎಲ್‍ನಲ್ಲಿ ಒಂಬತ್ತು ವರ್ಷಗಳಿಂದ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ರಹಾನೆ ತಂಡದಿಂದ ಹೊರಬಿದ್ದಿದ್ದಾರೆ.

    ಐಪಿಎಲ್ ಉಭಯ ತಂಡಗಳ ನಡುವಿನ ವರ್ಗಾವಣೆ ಪ್ರಕ್ರಿಯೆ ಇಂದು ಪೂರ್ಣಗೊಳ್ಳಲಿದೆ. ಈ ಮೂಲಕ ರಹಾನೆಯನ್ನು ಕೈಬಿಟ್ಟಿರುವ ರಾಜಸ್ಥಾನ ತಂಡವು ದೆಹಲಿ ಕ್ಯಾಪಿಟಲ್ಸ್ ತಂಡದ ಇಬ್ಬರು ಆಟಗಾರರನ್ನು ಪಡೆಯಲಿದೆ. ಇದಲ್ಲದೆ ಮುಂದಿನ ಆವೃತ್ತಿಯಲ್ಲಿ ವರ್ಗಾವಣೆ ಒಪ್ಪಂದಗಳ ನಂತರ, ಟ್ರೆಂಟ್ ಬೋಲ್ಟ್ ಈಗ ಮುಂಬೈ ಇಂಡಿಯನ್ಸ್ ಮತ್ತು ಅಂಕಿತ್ ರಜಪೂತ್ ರಾಜಸ್ಥಾನದಲ್ಲಿ ಆಡಲಿದ್ದಾರೆ. ವರ್ಗಾವಣೆ ಪ್ರಕ್ರಿಯೆ ಗುರುವಾರ ಮುಕ್ತಾಯವಾದ ನಂತರ, ಯಾವುದೇ ಆಟಗಾರರನ್ನು ಫ್ರಾಂಚೈಸಿಗಳ ವರ್ಗಾಯಿಸಲು ಸಾಧ್ಯವಾಗುವುದಿಲ್ಲ.

    ಅಜಿಂಕ್ಯ ರಹಾನೆ 2011ರಿಂದ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡಿದ್ದರು. ಕಳೆದ ಆವೃತ್ತಿಯಲ್ಲಿ ಅವರನ್ನು 4 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ರಹಾನೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡದ ಹಿನ್ನೆಲೆಯಲ್ಲಿ ತಂಡವು ಅವರನ್ನು ಕೈಬಿಟ್ಟಿದೆ ಎಂದು ವರದಿಯಾಗಿದೆ.

    ರಹಾನೆಯನ್ನು ತಂಡಕ್ಕೆ ಸೇರಿಸಿಕೊಳ್ಳಲು ದೆಹಲಿ ಕ್ಯಾಪಿಟಲ್ಸ್ ರಾಜಸ್ಥಾನ್ ತಂಡದೊಂದಿಗೆ ಮಾತುಕತೆ ನಡೆಸಿತ್ತು. ಸೌರವ್ ಗಂಗೂಲಿ ದೆಹಲಿ ಸಲಹೆಗಾರರಾಗಿದ್ದಾಗ ರಹಾನೆ ಅವರನ್ನು ತಂಡಕ್ಕೆ ಸೇರಿಸುವ ಬಗ್ಗೆ ಸಲಹೆ ನೀಡಿದ್ದರು. ರಹಾನೆ ಎಲ್ಲಾ ಮಾದರಿಯ ಆಟಗಾರ ಎಂದು ಗಂಗೂಲಿ ಭಾವಿಸಿದ್ದಾರೆ. ವರದಿಗಳ ಪ್ರಕಾರ, ರಹಾನೆ ಕೂಡ ತಂಡವನ್ನು ಬದಲಾಯಿಸಲು ಬಯಸಿದ್ದರು. ಐಪಿಎಲ್‍ನ 2019ರ ಆವೃತ್ತಿಯಲ್ಲಿ ಎಂಟು ಪಂದ್ಯಗಳ ನಂತರ ರಹಾನೆ ನಾಯಕತ್ವವನ್ನು ಹಿಂಪಡೆದು ಸ್ಟೀವ್ ಸ್ಮಿತ್‍ಗೆ ಹಸ್ತಾಂತರಿಸಲಾಗಿತ್ತು. ಈ ನಡೆಯ ಬಗ್ಗೆ ರಹಾನೆ ಬೇಸರ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

    ರಹಾನೆ ಆಗಮನದಿಂದ ದೆಹಲಿ ತಂಡದ ಬ್ಯಾಟಿಂಗ್ ಕ್ರಮಾಂಕ ಇನ್ನಷ್ಟು ಬಲಗೊಳ್ಳಲಿದೆ. ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಮತ್ತು ಹನುಮಾ ವಿಹಾರಿ ಅವರಂತಹ ಆಟಗಾರರಿಗೆ ರಹಾನೆ ಸಾಥ್ ನೀಡಲಿದ್ದಾರೆ. ದೆಹಲಿ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮತ್ತು ವೈಯಕ್ತಿಕ ತರಬೇತುದಾರ ಪ್ರವೀಣ್ ಅಮ್ರೆ ಅವರೊಂದಿಗೆ ರಹಾನೆ ದೆಹಲಿ ಕ್ಯಾಪಿಟಲ್ಸ್ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

    ಐಪಿಎಲ್‍ನಲ್ಲಿ ರಹಾನೆ ದಾಖಲೆ ಅಂತರಾಷ್ಟ್ರೀಯ ಟಿ-20 ವೃತ್ತಿಜೀವನಕ್ಕಿಂತ ಉತ್ತಮವಾಗಿದೆ. ಐಪಿಎಲ್‍ನ 140 ಪಂದ್ಯಗಳಲ್ಲಿ ರಹಾನೆ ಸುಮಾರು 33 ಸರಾಸರಿಯಲ್ಲಿ 3,820 ರನ್ ಗಳಿಸಿದ್ದಾರೆ. ಅಂತರಾಷ್ಟ್ರೀಯ ಟಿ-20ಯ 20 ಪಂದ್ಯಗಳಲ್ಲಿ 21 ಸರಾಸರಿಯಲ್ಲಿ 375 ರನ್ ಗಳಿಸಿದ್ದಾರೆ.

    2020ರ ಐಪಿಎಲ್‍ನಲ್ಲಿ ನ್ಯೂಜಿಲೆಂಡ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ದೆಹಲಿ ಕ್ಯಾಪಿಟಲ್ಸ್ ಬದಲಿಗೆ ಮುಂಬೈ ಇಂಡಿಯನ್ಸ್ ಪರ ಆಡಲಿದ್ದು, ದೇಶೀಯ ವೇಗದ ಬೌಲರ್ ಅಂಕಿತ್ ರಜಪೂತ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬದಲು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಡಲಿದ್ದಾರೆ. ಬೋಲ್ಟ್ 2014ರಲ್ಲಿ ಐಪಿಎಲ್‍ಗೆ ಪಾದಾರ್ಪಣೆ ಮಾಡಿದ್ದರು. ಅವರು ಕಳೆದ ಎರಡು ಆವೃತ್ತಿಗಳಲ್ಲಿ ದೆಹಲಿ ತಂಡದ ಪರ ಆಡಿದ್ದರು. ಒಟ್ಟು 33 ಪಂದ್ಯಗಳನ್ನು ಆಡಿರುವ ಬೋಲ್ಟ್ ಒಟ್ಟು 38 ವಿಕೆಟ್ ಪಡೆದಿದ್ದಾರೆ. ಪಂಜಾಬ್ ತಂಡವನ್ನು 2018ರಲ್ಲಿ ಸೇರಿಕೊಂಡಿದ್ದ ಅಂಕಿತ್ 23 ಐಪಿಎಲ್ ಪಂದ್ಯಗಳಲ್ಲಿ 22 ವಿಕೆಟ್ ಪಡೆದಿದ್ದಾರೆ. ಅಂಕಿತ್ 2018ರಲ್ಲಿ ಹೈದರಾಬಾದ್ ತಂಡದ ವಿರುದ್ಧ ಪಂದ್ಯದಲ್ಲಿ ಕೇವಲ 14 ರನ್ ನೀಡಿ, 5 ವಿಕೆಟ್ ಉಳಿಸಿ ಭರ್ಜರಿ ಮಿಂಚಿದ್ದರು.

  • 2019 IPL: ಕುಂಬ್ಳೆ ಬೆಸ್ಟ್ ಐಪಿಎಲ್ ತಂಡ ಪ್ರಕಟ – ವಿಶ್ವದ ನಂ.1 ಬ್ಯಾಟ್ಸ್ ಮನ್‍ಗಿಲ್ಲ ಸ್ಥಾನ

    2019 IPL: ಕುಂಬ್ಳೆ ಬೆಸ್ಟ್ ಐಪಿಎಲ್ ತಂಡ ಪ್ರಕಟ – ವಿಶ್ವದ ನಂ.1 ಬ್ಯಾಟ್ಸ್ ಮನ್‍ಗಿಲ್ಲ ಸ್ಥಾನ

    ಬೆಂಗಳೂರು: ಟೀಂ ಇಂಡಿಯಾ ಮಾಜಿ ಕೋಚ್ ಅನಿಲ್ ಕುಂಬ್ಳೆ ತಮ್ಮ ಬೆಸ್ಟ್ ಐಪಿಎಲ್ ಬೆಸ್ಟ್ ತಂಡವನ್ನು ಆಯ್ಕೆ ಮಾಡಿದ್ದು, ಅಚ್ಚರಿ ಎಂಬಂತೆ ಆರ್ ಸಿಬಿ ತಂಡದ ನಾಯಕ ವಿರಾಟ್‍ಕೊಹ್ಲಿ ಅವರಿಗೆ ಪಟ್ಟಿಯಲ್ಲಿ ಸ್ಥಾನ ನೀಡಿಲ್ಲ.

    ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ, ಯುವ ಆಟಗಾರ ಶ್ರೇಯಸ್ ಅಯ್ಯರ್ ಅವರಿಗೆ ತಂಡದಲ್ಲಿ ಸ್ಥಾನ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕುಂಬ್ಳೆ, ಶ್ರೇಯಸ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಕಠಿಣ ಪರಿಸ್ಥಿತಿಯಲ್ಲಿ ತಮ್ಮ ಜವಾಬ್ದಾರಿಯನ್ನ ನಿರ್ವಹಿಸಿದ್ದಾರೆ. ಡೆಲ್ಲಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್‍ಗೆ ಉತ್ತಮವಾಗಿಲ್ಲದಿದ್ದರು ತಂಡವನ್ನು ಮುಂದೆ ನಿಂತು ಮುನ್ನಡೆಸಿದ್ದಾರೆ ಎಂದಿದ್ದಾರೆ. ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ 16 ಪಂದ್ಯಗಳಿಂದ 119.94 ಸ್ಟ್ರೈಕ್ ರೇಟ್ ನಲ್ಲಿ 463 ರನ್ ಗಳಿಸಿದ್ದಾರೆ.

    ಈ ತಂಡವನ್ನು ಗ್ರೂಪ್ ಹಂತದಲ್ಲಿ ಆಟಗಾರರು ತೋರಿದ ಪ್ರದರ್ಶನ ಮೇಲೆ ಮಾತ್ರ ಆಯ್ಕೆ ಮಾಡಲಾಗಿದೆ ಎಂದು ಕುಂಬ್ಳೆ ತಿಳಿಸಿದ್ದು, ಡೇವಿಡ್ ವಾರ್ನರ್, ಕೆಎಲ್ ರಾಹುಲ್ ಅವರಿಗೆ ಆರಂಭಿಕರ ಸ್ಥಾನ ನೀಡಿದ್ದಾರೆ.

    ವಾರ್ನರ್ ಈ ಬಾರಿಯ ಟೂರ್ನಿಯಲ್ಲಿ 12 ಪಂದ್ಯಗಳಿಂದ 692 ರನ್ ಗಳಿಸಿ ಲೀಡಿಂಗ್ ರನ್ ಸ್ಕೋರರ್ ಆಗಿದ್ದು, ಕೆಎಲ್ ರಾಹುಲ್ 14 ಪಂದ್ಯಗಳಿಂದ 521 ರನ್ ಗಳಿಸಿದ್ದಾರೆ. ಉಳಿದಂತೆ ಮಧ್ಯಮ ಕ್ರಮಾಂಕದಲ್ಲಿ ರಿಷಬ್ ಪಂತ್, ಎಂಎಸ್ ಧೋನಿ, ರಸೆಲ್, ಹಾರ್ದಿಕ್ ಪಾಂಡ್ಯರನ್ನು ಆಯ್ಕೆ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ಆಂಡ್ರೆ ರಸೆಲ್ ಏಕಾಂಕಿಯಾಗಿ ತಂಡವನ್ನು ಗೆಲ್ಲಿಸುವ ಸಾಮಥ್ರ್ಯ ಹೊಂದಿದ್ದಾರೆ. ಉಳಿದಂತೆ ತಂಡದಲ್ಲಿ ಶ್ರೇಯಸ್ ಗೋಪಾಲ್, ಇಮ್ರಾನ್ ತಹೀರ್ ಸ್ಪಿನ್ನರ್ ಗಳಾಗಿದ್ದರೆ, ರಬಾಡ, ಬುಮ್ರಾ ವೇಗದ ಬೌಲರ್ ಗಳಾಗಿದ್ದಾರೆ.

    ತಂಡ ಇಂತಿದೆ: ಡೇವಿಡ್ ವಾರ್ನರ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಧೋನಿ (ನಾಯಕ), ಹಾರ್ದಿಕ್ ಪಾಂಡ್ಯ, ಆಂಡ್ರೆ ರಸೆಲ್, ಶ್ರೇಯಸ್ ಗೋಪಾಲ್, ಇಮ್ರಾನ್ ತಹೀರ್, ರಬಾಡ, ಜಸ್ಪ್ರೀತ್ ಬುಮ್ರಾ.

  • ಐಪಿಎಲ್ 2019: ಸತತ 6ನೇ ಸೋಲುಂಡ ಕೊಹ್ಲಿ ಪಡೆ

    ಐಪಿಎಲ್ 2019: ಸತತ 6ನೇ ಸೋಲುಂಡ ಕೊಹ್ಲಿ ಪಡೆ

    ಬೆಂಗಳೂರು: 2019ರ 12ನೇ ಐಪಿಎಲ್ ಆವೃತ್ತಿಯಲ್ಲಿ ಸೋಲಿನ ಕಹಿಯನ್ನು ಮುಂದುವರಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ 6ನೇ ಪಂದ್ಯದಲ್ಲೂ ಸೋಲುಂಡು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರ್ ಸಿಬಿ ಸುಲಭ ತುತ್ತಾಯಿತು. ಆ ಮೂಲಕ ಬ್ಯಾಟಿಂಗ್ ಹಾಗೂ ಬೌಲಿಂಗ್ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ತೋರಿದ ಡೆಲ್ಲಿ 4 ವಿಕೆಟ್ ಗಳೊಂದಿಗೆ ಗೆಲುವು ಪಡೆಯಿತು.

    ಸತತ ಐದು ಸೋಲುಗಳಿಂದ ಕಂಗೆಟ್ಟಿದ್ದ ಕೊಹ್ಲಿ ಪಡೆ ಟಾಸ್ ಸೋತು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಡೆಲ್ಲಿ ಬೌಲರ್ ರಬಾಡಾ ಬೌಲಿಂಗ್ ದಾಳಿಗೆ ನಲುಗಿ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. 150 ರನ್ ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 7 ಎಸೆತ ಬಾಕಿ ಇರುವಂತೆಯೇ 6 ವಿಕೆಟ್ ಕಳೆದುಕೊಂಡು 152 ಗಳಿಸಿ  ಜಯ ಪಡೆಯಿತು.

    ಆರಂಭದಲ್ಲಿ ಧವನ್ ವಿಕೆಟ್ ಪಡೆದು ಡೆಲ್ಲಿ ತಂಡಕ್ಕೆ ಅಘಾತ ನೀಡಲು ಆರ್ ಸಿಬಿ ಬೌಲರ್ ಟಿಮ್ ಸೌಥಿ ಯಶಸ್ವಿಯಾದರೂ ಪಂದ್ಯದ ಮೇಲಿನ ಹಿಡಿತ ಮುಂದುವರಿಸಲು ಸಾಧ್ಯವಾಗಲಿಲ್ಲ. ಡೆಲ್ಲಿ ತಂಡದ ಭರವಸೆಯ ಯುವ ಆಟಗಾರರಾದ ಪೃಥ್ವಿ ಶಾ, ಶ್ರೇಯಸ್ ಅಯ್ಯರ್ ಆರ್‍ಸಿಬಿ ಬೌಲರ್‍ಗಳ ಲೆಕ್ಕಚಾರವನ್ನು ತಲೆಕೆಳಗಾಗಿ ಮಾಡಿದ್ರು. ನಾಯಕ ಶ್ರೇಯಸ್ ಅಯ್ಯರ್ 40 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ನೆರವಿನಿಂದ 53 ರನ್ ಗಳಿಸಿ ಮಿಂಚಿದರೆ ಪೃಥ್ವಿ ಶಾ 28 ರನ್, ಇಂಗ್ರಾಮ್ 22 ರನ್ ಗಳಿಸಿ ತಂಡ ಗೆಲುವಿಗೆ ಕಾರಣರಾದರು.

    ಇದಕ್ಕೂ ಮುನ್ನ ಬ್ಯಾಟ್ ನಡೆಸಿದ ಆರ್ ಸಿಬಿ ಪರ ನಾಯಕ ವಿರಾಟ್ ಕೊಹ್ಲಿ ಮಾತ್ರ ತಮ್ಮ ಮೇಲಿನ ಜವಾಬ್ದಾರಿಯನ್ನು ನಿರ್ವಹಿಸಲು ಪ್ರಯತ್ನಿಸಿದರು. ಇದಕ್ಕೆ ಸಾಕ್ಷಿ ಎಂಬಂತೆ ಇಂದಿನ ಪಂದ್ಯದಲ್ಲಿ ಕೊಹ್ಲಿ ಸತತ 17 ಎಸೆತಗಳಲ್ಲಿ ಒಂಟಿ ರನ್ ಕಾದಿಯುವ ಮೂಲಕ ಗಮನ ಸೆಳೆದರು. ಪಂದ್ಯದಲ್ಲಿ ಕೊಹ್ಲಿ 33 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಮೂಲಕ 41 ರನ್ ಗಳಿಸಿ ನಿರ್ಗಮಿಸಿದರು. ಉಳಿದಂತೆ ಅಲಿ 32 ರನ್, ಆಕ್ಷದೀಪ್ ನಾಥ್ 19, ಎಬಿಡಿ 17 ರನ್ ಗಳಿಸಿದ್ದರು. ಡೆಲ್ಲಿ ಪರ ಮಿಂಚಿನ ಬೌಲಿಂಗ್ ದಾಳಿ ನಡೆಸಿದ ರಬಾಡಾ 21 ರನ್ ನೀಡಿ 4 ವಿಕೆಟ್ ಪಡೆದು ಆರ್ ಸಿಬಿ ಸೋಲಿಗೆ ಪ್ರಮುಖ ಕಾರಣರಾದ್ರು.

  • ರಿಷಬ್ ಪಂತ್ ಮೇಲಿನ ಫಿಕ್ಸಿಂಗ್ ಆರೋಪಕ್ಕೆ ಬಿಸಿಸಿಐ ಸ್ಪಷ್ಟನೆ

    ರಿಷಬ್ ಪಂತ್ ಮೇಲಿನ ಫಿಕ್ಸಿಂಗ್ ಆರೋಪಕ್ಕೆ ಬಿಸಿಸಿಐ ಸ್ಪಷ್ಟನೆ

    ಮುಂಬೈ: ಐಪಿಎಲ್ ಟೂರ್ನಿಯ ಡೆಲ್ಲಿ, ಕೋಲ್ಕತ್ತಾ ನಡುವಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಚಕ ಗೆಲುವು ಪಡೆದಿದ್ದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಪಂದ್ಯದ ವೇಳೆ ಡೆಲ್ಲಿ ವಿಕೆಟ್ ಕೀಪರ್ ರಿಷಬ್ ಪಂತ್ ಆಡಿದ್ದ ಮಾತುಗಳು ವಿವಾದಕ್ಕೆ ಕಾರಣವಾಗಿದ್ದು, ಈ ಬಗ್ಗೆ ಬಿಸಿಸಿಐ ಸ್ಪಷ್ಟನೆ ನೀಡಿದೆ.

    ಪಂದ್ಯದ ವೇಳೆ ರಿಷಬ್ ಆಡಿದ ಮಾತು ಸ್ಟಂಪ್ ಮೈಕಿನಲ್ಲಿ ದಾಖಲಾಗಿದ್ದು, ಈ ಮಾತು ಕೇಳಿದ ಹಲವು ನೋಡುಗರು ಪಂದ್ಯ ಫಿಕ್ಸ್ ಆಗಿತ್ತಾ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಪಂದ್ಯದ ವೇಳೆ ರಬಿನ್ ಉತ್ತಪ್ಪ ಬ್ಯಾಟ್ ಮಾಡುತ್ತಿದ್ದ ಸಂದರ್ಭದಲ್ಲಿ ರಿಷಬ್ ‘ಈ ಎಸೆತ ಖಚಿತವಾಗಿ ಬೌಂಡರಿ ಗೆರೆ ದಾಟುತ್ತದೆ’ ಎಂದು ತಿಳಿಸಿದ್ದರು. ಕಾಕತಾಳೀಯ ಎಂಬಂತೆ ಆ ಎಸೆತದಲ್ಲಿ ಉತ್ತಪ್ಪ ಬೌಂಡರಿ ಸಿಡಿಸಿದರು.

    ರಿಷಬ್ ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದಂತೆ ಹಲವರು ಈ ಬಗ್ಗೆ ಪ್ರಶ್ನೆ ಮಾಡಿದ್ದು. ಬೌಲರ್ ಚೆಂಡು ಎಸೆಯುವ ಮುನ್ನವೇ ರಿಷಬ್ ಬೌಂಡರಿ ಸಿಡಿಸಲಿದ್ದಾರೆ ಎಂದು ಹೇಳಿದ್ದು ಹೇಗೆ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅಲ್ಲದೇ ಐಪಿಎಲ್ ಎಂದರೆ ಮ್ಯಾಚ್ ಫಿಕ್ಸಿಂಗ್ ಅಲ್ವಾ ಎಂಬ ಹಲವು ಟೀಕೆಗಳು ಕೂಡ ಕೇಳಿ ಬಂದಿತ್ತು.

    ಇದರ ನಡುವೆ ರಿಷಬ್ ಮಾತಿಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ ವಕ್ತಾರರು, ರಿಷಬ್ ಮಾತನ್ನು ತಪ್ಪಾಗಿ ಆರ್ಥೈಸಲಾಗಿದೆ. ಆತನ ಹೇಳಿಗೂ ಮುನ್ನ ರಿಷಬ್ ಏನು ಮಾತನಾಡಿದ್ದರು ಎಂಬುವುದು ಯಾರಿಗೂ ತಿಳಿದಿಲ್ಲ. ರಿಷಬ್ ತಂಡದ ನಾಯಕನಿಗೆ ಆಫ್ ಸೈಡ್ ಭಾಗದಲ್ಲಿ ಆಟಗಾರರ ಸಂಖ್ಯೆಯನ್ನು ಹೆಚ್ಚಿಸುವಂತೆ ಸಲಹೆ ನೀಡಿದ್ದರು. ಈ ಸಂದರ್ಭದಲ್ಲಿಯೇ ಮಾತನಾಡಿದ್ದಾರೆ ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ.