Tag: Defence Minister

  • ಯುದ್ಧಕಾಲದ ರಕ್ಷಣಾ ಸಚಿವರನ್ನ ವಜಾಗೊಳಿಸಿದ ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ

    ಯುದ್ಧಕಾಲದ ರಕ್ಷಣಾ ಸಚಿವರನ್ನ ವಜಾಗೊಳಿಸಿದ ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ

    ಕೀವ್: ಯುದ್ಧಕಾಲದ ರಕ್ಷಣಾ ಸಚಿವ ಓಲೆಕ್ಸಿ ರೆಜ್ನಿಕೋವ್ (Oleksii Reznik) ಅವರನ್ನು ವಜಾಗೊಳಿಸಿ, ಅವರ ಸ್ಥಾನಕ್ಕೆ ರುಸ್ಟೆಮ್ ಉಮೆರೋವ್ ಅವರನ್ನು ನಾಮನಿರ್ದೇಶನ ಮಾಡಿ ಉಕ್ರೇನ್‌ (Ukraine) ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ (Volodimir Zelensky) ಆದೇಶ ಹೊರಡಿಸಿದ್ದಾರೆ.

    ಉಕ್ರೇನ್‌ ಮೇಲಿನ ರಷ್ಯಾ (Russia) ಯುದ್ಧವು 19 ನೇ ತಿಂಗಳನ್ನು ಪ್ರವೇಶಿಸಿದೆ. ಈ ಹೊತ್ತಿನಲ್ಲಿ ರಕ್ಷಣಾ ವ್ಯವಸ್ಥೆ ವಿಚಾರವಾಗಿ ಸಚಿವಾಲಯಕ್ಕೆ ಹೊಸ ವಿಧಾನಗಳ ಅಗತ್ಯವಿದೆ ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: 2ನೇ ಮಹಾಯುದ್ಧದ ನಂತರ ಅತಿ ಹೆಚ್ಚು ಸಾವುಗಳಾದ ಯುದ್ಧ ರಷ್ಯಾ-ಉಕ್ರೇನ್‌ ವಾರ್‌; ಮಡಿದವರೆಷ್ಟು?

    ಹೊಸ ರಕ್ಷಣಾ ಸಚಿವರಾಗಲು ಉಕ್ರೇನ್‌ನ ಮಾಜಿ ಪೀಪಲ್ಸ್ ಡೆಪ್ಯೂಟಿ ರುಸ್ಟೆಮ್ ಉಮೆರೊವ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ಝೆಲೆನ್ಸ್ಕಿ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ವೀಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

    ಉಕ್ರೇನ್‌ನ ರಕ್ಷಣಾ ಸಚಿವರನ್ನು ಬದಲಿಸಲು ನಾನು ನಿರ್ಧರಿಸಿದ್ದೇನೆ. ಮಿಲಿಟರಿ ಮತ್ತು ಸಮಾಜದೊಂದಿಗೆ ಉತ್ತಮ ಪ್ರಮಾಣದಲ್ಲಿ ಸಂವಹನದ ಹೊಸ ವಿಧಾನಗಳು ಮತ್ತು ಇತರ ಸ್ವರೂಪಗಳ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಸಿಂಗಾಪುರ ಅಧ್ಯಕ್ಷರಾಗಿ ಆಯ್ಕೆಯಾದ ಭಾರತೀಯ ಮೂಲದ ಷಣ್ಮುಗರತ್ನಂಗೆ ಮೋದಿ ಅಭಿನಂದನೆ – ಯಾರಿವರು?

    ಈಗ ರುಸ್ಟೆಮ್ ಉಮೆರೋವ್ ಸಚಿವಾಲಯವನ್ನು ಮುನ್ನಡೆಸಬೇಕು. ಉಕ್ರೇನ್‌ನ ವರ್ಕೋವ್ನಾ ರಾಡಾ (ಶಾಸಕಾಂಗ) ಈ ವ್ಯಕ್ತಿಯನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ಉಮೆರೋವ್‌ಗೆ ಯಾವುದೇ ಹೆಚ್ಚುವರಿ ಪರಿಚಯಗಳ ಅಗತ್ಯವಿಲ್ಲ. ಸಂಸತ್ತು ಈ ಅಭ್ಯರ್ಥಿಯನ್ನು ಬೆಂಬಲಿಸುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ ಎಂದು ಉಕ್ರೇನ್‌ ಅಧ್ಯಕ್ಷ ಹೇಳಿದ್ದಾರೆ.

    ಫೆಬ್ರವರಿ 24, 2022 ರಂದು ರಷ್ಯಾ-ಉಕ್ರೇನ್ ಯುದ್ಧದ ಆರಂಭದಿಂದಲೂ ರೆಜ್ನಿಕೋವ್ ರಕ್ಷಣಾ ಸಚಿವರಾಗಿ ಕೆಲಸ ಮಾಡಿದ್ದರು. ಯುದ್ಧವು ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದೆ. ಈಗಲೂ ಎರಡು ರಾಷ್ಟ್ರಗಳ ನಡುವೆ ಯುದ್ಧವು ಉಲ್ಬಣಗೊಳ್ಳುತ್ತಲೇ ಇದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಕ್ಷಣಾ ಒಪ್ಪಂದ ಬಲಪಡಿಸಲು ಆಸ್ಟ್ರೇಲಿಯಾ ಪ್ಲ್ಯಾನ್‌ – ಜೂನ್ 21, 22 ಭಾರತಕ್ಕೆ ಉಪ ಪ್ರಧಾನಿ ಪ್ರವಾಸ

    ರಕ್ಷಣಾ ಒಪ್ಪಂದ ಬಲಪಡಿಸಲು ಆಸ್ಟ್ರೇಲಿಯಾ ಪ್ಲ್ಯಾನ್‌ – ಜೂನ್ 21, 22 ಭಾರತಕ್ಕೆ ಉಪ ಪ್ರಧಾನಿ ಪ್ರವಾಸ

    ಕ್ಯಾನ್‌ಬೆರಾ: ಭಾರತದೊಂದಿಗಿನ ರಕ್ಷಣಾ ಒಪ್ಪಂದವನ್ನು ಮುಂದುವರಿಸುವ ಜೊತೆಗೆ ಅದನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸುವ ಸಲುವಾಗಿ ಆಸ್ಟ್ರೇಲಿಯಾ ಉಪಪ್ರಧಾನಿ ಹಾಗೂ ರಕ್ಷಣಾ ಸಚಿವ ರಿಚರ್ಡ್ ಮಾರ್ಲ್ಸ್ ಇದೇ ಜೂನ್ 21, 22ರಂದು ಭಾರತಕ್ಕೆ ಪ್ರವಾಸ ಕೈಗೊಂಡಿದ್ದಾರೆ.

    ಆಸ್ಟ್ರೇಲಿಯಾದ ಉಪ ಪ್ರಧಾನಿ ಮತ್ತು ರಕ್ಷಣಾ ಸಚಿವ ರಿಚರ್ಡ್ ಮಾರ್ಲ್ಸ್ ಅವರು ಮುಂದಿನ ವಾರ ಭಾರತದ ಪ್ರವಾಸದಲ್ಲಿದ್ದಾರೆ. ಆಸ್ಟ್ರೇಲಿಯಾದ ನೂತನ ಪ್ರಧಾನಿಯಾಗಿ ಆಂಥೋನಿ ಅಲ್ಬನಿಸ್ ಕಳೆದ ತಿಂಗಳು ಅಧಿಕಾರ ವಹಿಸಿಕೊಂಡ ನಂತರ ಅವರ ಸಂಪುಟದಲ್ಲಿ ನೂತನ ರಕ್ಷಣಾ ಸಚಿವರಾಗಿರುವ ರಿಚರ್ಡ್ ಮಾರ್ಲ್ಸ್ ಜೂನ್ 21 ಮತ್ತು 22ರಂದು ದೆಹಲಿಗೆ ಆಗಮಿಸಲಿದ್ದಾರೆ. ಇದನ್ನೂ ಓದಿ: ಸಿಧು ಮೂಸೆ ವಾಲಾ ಹತ್ಯೆ ಪ್ರಕರಣ: ಆರೋಪಿ ಭದ್ರತೆಗೆ ಬುಲೆಟ್ ಪ್ರೂಫ್ ವಾಹನ, 100 ಪೊಲೀಸರು

    ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಲಿದ್ದು, ದೇಶದ ರಕ್ಷಣಾ ಪಡೆಗಳಲ್ಲಿ ಸಿಬ್ಬಂದಿ ಬದಲಾವಣೆ ಹಾಗೂ ಕ್ಯಾನ್‌ಬೆರಾ ನಡುವಿನ ರಕ್ಷಣಾ ಬಾಂಧವ್ಯವನ್ನು ಮುಂದುವರಿಸುವ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

    Anthony Albanese

    ಇತ್ತೀಚೆಗೆ ನಡೆದ ಕ್ವಾಡ್ ಶೃಂಗಸಭೆಯ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾ ಪ್ರಧಾನಿ ಅವರೊಂದಿಗೆ ಜಪಾನಿನ ಟೋಕಿಯೊದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಈ ವೇಳೆ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಅಲ್ಬನಿಸ್ ಅವರಿಗೆ `ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ರಕ್ಷಣಾ ಸಂಬಂಧ ಮುಂದುವರಿಸಲು ನಾನು ಶೀಘ್ರವೇ ಭಾರತಕ್ಕೆ ಭೇಟಿ ನೀಡುವುದನ್ನು ಎದುರು ನೋಡುತ್ತೇನೆ ಎಂದು ಹೇಳಿದ್ದರು. ಇದನ್ನೂ ಓದಿ: ಇದಕ್ಕಿಂತ ಮೊದಲು ನಿಜವಾದ ಪ್ರೀತಿ ಅನುಭವಿಸಿಲ್ಲ – ಕಾರಿನ ಜೊತೆ ಲೈಂಗಿಕ ಸಂಬಂಧ ಹೊಂದಿರುವ ವ್ಯಕ್ತಿ

    narendra modi Denmark (1)

    ಅಂತೆಯೇ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಒಂದು ತಿಂಗಳ ನಂತರ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಈಗಾಗಲೇ ಭಾರತ, ಆಸ್ಟ್ರೇಲಿಯಾವು ಯುಎಸ್ ಹಾಗೂ ಜಪಾನ್‌ನೊಂದಿಗೆ ರಕ್ಷಣಾ ಕಾರ್ಯಗಳನ್ನು ಹೆಚ್ಚಿಸಿವೆ. ಈ ತಿಂಗಳ ಆರಂಭದಲ್ಲೇ ಭಾರತ ಮತ್ತು ಆಸ್ಟ್ರೇಲಿಯಾ, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಡಲ ಕಣ್ಗಾವಲು ಉಪಕ್ರಮ ಕೈಗೊಂಡವು. ಈ ಉಪಕ್ರಮದ ಅಡಿಯಲ್ಲಿ ರಾಯಲ್ ಆಸ್ಟ್ರೇಲಿಯನ್ ಏರ್‌ಫೋರ್ಸ್ P-8A ಪೋಸಿಡಾನ್ ವಿಮಾನವನ್ನು ಭಾರತಕ್ಕೆ ನಿಯೋಜಿಸಲಾಗಿದೆ.

  • ಕೆನಡಾ ರಕ್ಷಣಾ ಸಚಿವರಾಗಿ ಭಾರತ ಮೂಲದ ಅನಿತಾ ಆನಂದ್ ಆಯ್ಕೆ

    ಕೆನಡಾ ರಕ್ಷಣಾ ಸಚಿವರಾಗಿ ಭಾರತ ಮೂಲದ ಅನಿತಾ ಆನಂದ್ ಆಯ್ಕೆ

    ಒಟ್ಟಾವಾ: ಭಾರತ ಮೂಲದ ಅನಿತಾ ಆನಂದ್ ಕೆನಡಾದ ರಕ್ಷಣಾ ಸಚಿವರಾಗಿ ಆಯ್ಕೆಯಾಗಿದ್ದಾರೆ. ಒಂಟಾರಿಯೊ ಪ್ರಾಂತ್ಯವನ್ನ ಅನಿತಾ ಆನಂದ್ ಪ್ರತಿನಿಧಿಸುತ್ತಿದ್ದಾರೆ.

    ಪ್ರಧಾನಿ ಜಸ್ಟಿನ್ ಟ್ರುಡೋ ಸಂಪುಟ ಪುನಃ ರಚನೆಯಾದ ಕಾರಣ ಅನಿತಾರನ್ನ ರಕ್ಷಣಾ ಸಚಿವ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಈ ಮೂಲಕ ದೇಶದ ಮೊದಲ ರಕ್ಷಣಾ ಸಚಿವೆ ಎಂಬ ಹೆಗ್ಗಳಿಕೆಗೆ ಅನಿತಾ ಪಾತ್ರರಾಗಿದ್ದಾರೆ.

    ರಕ್ಷಣಾ ಸಚಿವೆಯಾಗಿರುವ 54 ವರ್ಷದ ಅನಿತಾಗೆ ಇಲಾಖೆಯಲ್ಲಿ ಹಲವಾರು ತೊಡಕುಗಳು. ಸಮಸ್ಯೆಗಳಿದ್ದು, ಇದೆನ್ನೆಲ್ಲಾ ಹೇಗೆ ನಿಭಾಯಿಸಿಕೊಂಡು ಹೋಗೊತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಖಾಸಗಿ ವಾಹಿನಿಯ ವರದಿ ಪ್ರಕಾರ ರಕ್ಷಣಾ ಇಲಾಖೆಯನ್ನು ಮುನ್ನಡೆಸಲು ಅನಿತಾ ಆಣಮದ್ ಸಮರ್ಥರಾಗಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: ರೋಹಿತ್ ಡ್ರಾಪ್ ಮಾಡ್ತೀರಾ – ಪ್ರಶ್ನೆಗೆ ತಲೆ ಕೆಳಗಡೆ ಹಾಕಿ Unbelievable ಎಂದ ಕೊಹ್ಲಿ

    ಕೊರೊನಾ ಅಂದರ್ಭದಲ್ಲಿ ಅನಿತಾ ಆನಂದ್ ಕಾರ್ಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶೀಘ್ರವಾಗಿ ಕೊರೊನಾ ಲಸಿಕೆಗಳು ದೇಶಕ್ಕೆ ಲಭ್ಯವಾಗುವಂತೆ ಮಾಡುವಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ಕೊರೊನಾ ಜಾಗೃತಿ ಅಭಿಯಾನದ ಉಸ್ತುವಾರಿಯನ್ನು ಅವರು ನೋಡಿಕೊಂಡಿದ್ದರು ಎಂದು ವರದಿಯಾಗಿದೆ.

  • ಮೋದಿ ಜೊತೆ ರಾಹುಲ್ ಹೋಲಿಕೆ ತಪ್ಪು, ಪಾಕಿಸ್ತಾನಕ್ಕೆ ಆಗದ್ದನ್ನು ನಾವು ಮಾಡಿದ್ದೇವೆ: ಸೀತಾರಾಮನ್

    ಮೋದಿ ಜೊತೆ ರಾಹುಲ್ ಹೋಲಿಕೆ ತಪ್ಪು, ಪಾಕಿಸ್ತಾನಕ್ಕೆ ಆಗದ್ದನ್ನು ನಾವು ಮಾಡಿದ್ದೇವೆ: ಸೀತಾರಾಮನ್

    ಉಡುಪಿ: ಜಿಲ್ಲೆಯಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ಕೊಟ್ಟರು. ಫಿರ್ ಏಕ್ ಬಾರ್ ಮೋದಿ ಸರ್ಕಾರ್ ಎನ್ನುವ ಮೂಲಕ ಭಾಷಣ ಆರಂಭಿಸಿದರು.

    ಮೋದಿ ಜೊತೆ ರಾಹುಲ್ ಹೋಲಿಕೆ ಮಾಡುವುದೇ ತಪ್ಪು. ರಕ್ಷಣೆ ವಿಷಯದಲ್ಲಿ ದೇಶ ಗೌರವಪಡುವಂತೆ ನಡೆದುಕೊಂಡಿದ್ದೇವೆ. ಪುಲ್ವಾಮ ಘಟನೆಯಿಂದ ಭಾರತ ತತ್ತರಿಸಿ ಹೋಗಿತ್ತು. 12 ದಿನದಲ್ಲಿ ನಮ್ಮ ಕೆಲಸ ಮಾಡಿ ತೋರಿಸಿದ್ದೇವೆ. ಪುಲ್ವಾಮದಂತೆ ಇನ್ನೂ ಅನೇಕ ಆತ್ಮಹತ್ಯೆ ದಾಳಿ ಎಸಗುವ ಸೂಚನೆ ಇತ್ತು. ಹಾಗಾಗಿ ಅವರನ್ನು ತಡೆಯಲು ಕಾರ್ಯಾಚರಣೆ ಮಾಡಲೇಬೇಕಿತ್ತು ಎಂದು ಏರ್ ಸ್ಟ್ರೈಕ್ ಸಮರ್ಥಿಸಿದರು.

    ಬೆಲೆ ಏರಿಕೆ ನಿಯಂತ್ರಣಕ್ಕೆ ತಂದಿದ್ದೇವೆ. ಭ್ರಷ್ಟಾಚಾರದ ಆರೋಪವಂತೂ ಇಲ್ಲವೇ ಇಲ್ಲ. ಬಡವರಿಗಾಗಿ ನಿರಂತರ ಹೊಸ ಕಾರ್ಯಕ್ರಮ ನೀಡಿದ್ದೇವೆ. ಕಾಂಗ್ರೆಸ್ ಬಡತನವನ್ನು ದೇಶದಲ್ಲಿ ಜೀವಂತವಾಗಿರಿಸಿತು. ಚುನಾವಣೆ ಬಂದಾಗ ಬಡತನ ನಿರ್ಮೂಲನೆಯ ಮಾತನಾಡುತ್ತಾ ಬಂತು. ಮಹಾಘಟ ಬಂಧನ್ ಮೋದಿಯನ್ನು ಕೆಳಗಿಳಿಸಲು ಹವಣಿಸುತ್ತಿದೆ. ಪ್ರಧಾನಿ ಹುದ್ದೆಗೆ ಗೌರವ ನೀಡಲು ಬರದ ರಾಹುಲ್ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ಛೇಡಿಸಿದರು.

    ಸುಮ್ಮನಿದ್ದರೆ ದೇಶ ನಮ್ಮನ್ನು ಕ್ಷಮಿಸುತ್ತಿರಲಿಲ್ಲ. ಭಯೋತ್ಪಾಧನಾ ಕೇಂದ್ರವನ್ನೇ ಧ್ವಂಸ ಮಾಡಿದ್ದೇವು. ಪಾಕಿಸ್ತಾನಕ್ಕೆ ಆಗದ್ದನ್ನು ಮೋದಿ ಮಾಡಿ ತೊರಿಸಿದ್ದಾರೆ. ಭಯೋತ್ಪಾದನೆ ಸಹಿಸಲು ಸಾಧ್ಯವೇ ಇಲ್ಲ ಎನ್ನುವ ಸಂದೇಶ ರವಾನೆಯಾಗಿದೆ ಎಂದು ಹೇಳಿದರು. ಸೇನೆಗೆ ಸ್ವಾತಂತ್ರ್ಯ ನೀಡಿದ್ದೇವೆ. ಮುಂಬೈ ಅಟ್ಯಾಕ್ ಆದಾಗ ಕಾಂಗ್ರೆಸ್ ಧೈರ್ಯ ತೋರಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಕುಟುಕಿದರು.

    ಸೇನಾ ಮುಖ್ಯಸ್ಥರನ್ನೇ ಬೀದಿಯ ಗೂಂಡಾ ಅಂತಾರೆ. ಮೋಯ್ಲಿ ಸೈನ್ಯದ ಮುಖ್ಯಸ್ಥರನ್ನು ಸುಳ್ಳು ಎಂದು ಹೇಳುತ್ತಾರೆ. ಮಣಿ ಶಂಕರ್ ಅಯ್ಯರ್ ಪಾಕಿಸ್ತಾನದ ನೆರವು ಕೇಳ್ತಾರೆ. ಪಾಕ್ ಪ್ರಧಾನಿಗೆ ನೋಬೆಲ್ ಕೊಡಬೇಕು ಎನ್ನುವವರು ಕಾಂಗ್ರೆಸ್ ನಲ್ಲಿದ್ದಾರೆ. ಇಂತಹ ಕಾಂಗ್ರೆಸ್ ನಿಂದ ದೇಶ ಉದ್ಧಾರ ಆಗಲ್ಲ ಎಂದು ಹೇಳಿದರು.

  • ರಾಜಕಾರಣಿಗಳಿಗೆ ಸಿಗೋ ಸೇನಾ ಹೆಲಿಕಾಪ್ಟರ್ ವೀರಯೋಧರಿಗೆ ಏಕಿಲ್ಲ..?

    ರಾಜಕಾರಣಿಗಳಿಗೆ ಸಿಗೋ ಸೇನಾ ಹೆಲಿಕಾಪ್ಟರ್ ವೀರಯೋಧರಿಗೆ ಏಕಿಲ್ಲ..?

    – ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

    ಬೆಂಗಳೂರು: ಉಗ್ರನ ಆತ್ಮಾಹುತಿ ದಾಳಿಗೆ ಬಲಿಯಾದ ಹುತಾತ್ಮನ ಕುಟುಂಬಕ್ಕೆ ಮಧ್ಯಪ್ರದೇಶದಲ್ಲಿ 1 ಕೋಟಿ ಪರಿಹಾರ ನೀಡಿದ್ದಾರೆ. ಅಲ್ಲದೇ ತತ್‍ಕ್ಷಣವೇ ಹುತಾತ್ಮರ ಪತ್ನಿಗೆ ಸರ್ಕಾರಿ ಉದ್ಯೊಗದ ಆದೇಶ ಪತ್ರವನ್ನೂ ಕೊಟ್ಟಿದ್ದಾರೆ. ಆದ್ರೆ, ರಾಜ್ಯದ ಯೋಧನಿಗೆ ಕೋಟಿ ಪರಿಹಾರವೂ ಇಲ್ಲ. ಹೆಲಿಕಾಪ್ಟರ್ ವ್ಯವಸ್ಥೆಯೂ ಸಿಗಲಿಲ್ಲ.

    ಹೌದು. ಯೋಧ ಗುರು ಕುಟುಂಬಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೇವಲ 25 ಲಕ್ಷ ರೂಪಾಯಿ ಕೊಟ್ಟು ಸುಮ್ಮನಾಗಿದ್ದಾರೆ. ಮಧ್ಯಪ್ರದೇಶ ಸಿಎಂ ಕೈಲಿ ಆಗಿದ್ದು, ನಮ್ಮ ಸಿಎಂಗೆ ಯಾಕೆ ಆಗಲಿಲ್ಲ. ಅಲ್ಲದೇ ರಾಜಕಾರಣಿಗಳಿಗೆ ಸಿಗುವ ಸೇನಾ ಹೆಲಿಕಾಪ್ಟರ್ ವೀರಮರಣವಪ್ಪಿದ ಯೋಧರಿಗೆ ಏಕೆ ಇಲ್ಲ ಎಂಬ ಚರ್ಚೆಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಎದ್ದಿದೆ.

    ಪನ್ನೀರ್ ಸೆಲ್ವಮ್ ಸಹೋದರನನ್ನ ಆಸ್ಪತ್ರೆಗೆ ಸೇರಿಸಲು ಸೇನಾ ಹೆಲಿಕಾಪ್ಟರ್ ಸಿಗುತ್ತದೆ. ಆದ್ರೆ ಯೋಧ ಗುರುವಿನ ಪಾರ್ಥಿವ ಶರೀರ ಕೊಂಡೊಯ್ಯಲು ಸೇನೆಯ ಹೆಲಿಕಾಪ್ಟರ್ ಸಿಗೋದಿಲ್ಲ. ಇದಕ್ಕೆ ಜವಬ್ದಾರರಾಗ್ತೀರಾ ಎಂದು ರಕ್ಷಣಾ ಸಚಿವರನ್ನು ಜನ ಪ್ರಶ್ನಿಸುತ್ತಿದ್ದಾರೆ. ಕರ್ನಾಟಕದಿಂದ ರಾಜ್ಯಸಭೆಗೆ ಹೋದ ನಿಯತ್ತಿಗಾದ್ರೂ ಒಂದೊಳ್ಳೆ ಕೆಲಸ ಬೇಡ್ವಾ..? ನಿಮ್ಮದೇ ಇಲಾಖೆಯ ಯೋಧನ ಪಾರ್ಥಿವ ಶರೀರ ಕೊಂಡೊಯ್ಯಲು ಹೆಲಿಕಾಪ್ಟರ್ ಯಾಕೆ ಕೊಡಲಿಲ್ಲ. ಸಿಎಂ ಫೋನ್ ಮಾಡಿ ಸೇನಾ ಹೆಲಿಕಾಪ್ಟರ್ ಒದಗಿಸುವಂತೆ ಕೇಳಿದ್ರೂ ಯಾಕೆ ನೀಡಲಿಲ್ಲ ಎಂದು ಸಚಿವರ ಮೇಲೆ ಹರಿಹಾಯ್ದಿದ್ದಾರೆ.

    ನಟ ಅಂಬರೀಶ್ ಮೃತದೇಹ ಸಾಗಿಸಲು ಇದ್ದ ಉತ್ಸಾಹವನ್ನು ಈಗ ಯಾಕೆ ಕಳೆದುಕೊಂಡ್ರಿ. ಅಂಬರೀಶ್ ಮೃತದೇಹ ಸಾಗಿಸಲು ಕ್ಷಣಾರ್ಧದಲ್ಲಿ ರಕ್ಷಣಾ ಹೆಲಿಕಾಪ್ಟರ್ ಅರೇಂಜ್ ಮಾಡಿಸಿದ್ರಿ. ಆದ್ರೆ ಗುರು ಪಾರ್ಥಿವ ಶರೀರ ಸಾಗಿಸಲು ಸೇನಾ ಹೆಲಿಕಾಪ್ಟರ್ ಏಕಿಲ್ಲ. ಬರೀ ಫೋನ್ ಮಾಡ್ಬಿಟ್ರೆ ಸಾಕಾ, ಯಾಕೆ ಒತ್ತಡ ಹಾಕಿಲ್ಲ. ನೀವೇನೊ ಒಂದೇ ಗಂಟೆಯಲ್ಲಿ ಹೆಲಿಕಾಪ್ಟರ್ ಹಿಡಿದು ಸ್ಥಳಕ್ಕೆ ಹೋಗಿ ಬಿಡುತ್ತೀರಿ. ನಿಮಗೆ ಗಂಟೆಯಲ್ಲಿ ಸಿಗೋ ಹೆಲಿಕಾಪ್ಟರ್ ದೇಶ ಕಾಯೋ ಯೋಧ ಗುರುಗೆ ಯಾಕೆ ಇಲ್ಲ. ಮೃತದೇಹ ನೋಡಲು ಹೆತ್ತವರು, ಬಂಧು ಬಳಗ ದಿನವೆಲ್ಲಾ ಅಳುತ್ತಾ ಕಾಯಬೇಕಾ. ಒಂದು ವೇಳೆ ನೀವು ಹೆಲಿಕಾಪ್ಟರ್ ವ್ಯವಸ್ಥೆ ಮಾಡುತ್ತಿದ್ದರೆ ಆರು ಗಂಟೆಗಳ ರಸ್ತೆ ಪ್ರಯಾಣದ ಬದಲು ಕೇವಲ 45 ನಿಮಿಷಗಳಲ್ಲಿ ಹುಟ್ಟೂರಿಗೆ ಪಾರ್ಥಿವ ಶರೀರ ಕೊಂಡೊಯ್ಯಬಹುದಿತ್ತು ಎಂದು ಜನ ಸಿಎಂ ಕುಮಾರಸ್ವಾಮಿ ವಿರುದ್ಧವೂ ಕಿಡಿಕಾರಿದ್ದಾರೆ.

    https://www.youtube.com/watch?v=B9rOIgx736A

    https://www.youtube.com/watch?v=m1D69xXhDFA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಡಗಿಗೆ ಕೇಂದ್ರದಿಂದ 8 ಕೋಟಿ ಪರಿಹಾರ- 2 ಸಾವಿರ ಕೋಟಿ ರೂ. ಬಿಡುಗಡೆಗೆ ಮೋದಿಗೆ ಸಿಎಂ ಪತ್ರ

    ಕೊಡಗಿಗೆ ಕೇಂದ್ರದಿಂದ 8 ಕೋಟಿ ಪರಿಹಾರ- 2 ಸಾವಿರ ಕೋಟಿ ರೂ. ಬಿಡುಗಡೆಗೆ ಮೋದಿಗೆ ಸಿಎಂ ಪತ್ರ

    ಮಡಿಕೇರಿ: ಮಹಾಮಳೆಗೆ ತತ್ತರಿಸಿರುವ ಕೊಡಗಿಗೆ ಕೇಂದ್ರ ಸರ್ಕಾರ 8 ಕೋಟಿ ರೂ. ಪರಿಹಾರ ಬಿಡುಗಡೆಗೊಳಿಸಿದೆ. ಇನ್ನು 2 ಸಾವಿರ ಕೋಟಿ ತುರ್ತು ನೆರವಿಗಾಗಿ ಸಿಎಂ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಇತ್ತ ಸಿಎಂ ಪರಿಹಾರ ನಿಧಿಯಲ್ಲಿ 25 ಕೋಟಿ ಹಣ ಜಮೆಯಾಗಿದೆ.

    ಕಂಡು ಕೇಳರಿಯದ ಮಳೆಗೆ ತತ್ತರಿಸಿರುವ ಕೊಡಗಿಗೆ ಕೇಂದ್ರ ಸರ್ಕಾರ ನೆರವಿನ ಭರವಸೆ ನೀಡಿದೆ. ಕೇಂದ್ರ ತಂಡ ಮಳೆಹಾನಿ ಸಮೀಕ್ಷೆ ನಡೆಸಿದ ನಂತರ ಪುನರ್ವಸತಿ ಪ್ಯಾಕೇಜ್ ಘೋಷಿಸಲಾಗತ್ತೆ ಅಂತಾ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಹೇಳಿದ್ದಾರೆ. ಸದ್ಯಕ್ಕೆ ರಕ್ಷಣಾ ವಿಭಾಗದ ಸಾರ್ವಜನಿಕ ನಿಧಿಯಿಂದ 7 ಕೋಟಿ, ಸಂಸದರ ನಿಧಿಯಿಂದ 1 ಕೋಟಿ ನೀಡಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ವಿರುದ್ಧ ಸಾರಾ ಮಹೇಶ್ ಗರಂ

    ಕೊಡಗಿನಲ್ಲಿ 3 ಸಾವಿರ ಕೋಟಿ ನಷ್ಟ ಆಗಿದೆ. ಹಾಗಾಗಿ ಪುನರ್ವಸತಿಗಾಗಿ 2 ಸಾವಿರ ಕೋಟಿ ತುರ್ತಾಗಿ ನೆರವು ನೀಡಿ ಎಂದು ಪ್ರಧಾನಿ ಮೋದಿಗೆ ಸಿಎಂ ಎಚ್‍ಡಿ ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಜೋರಾಯ್ತು ಫಂಡ್ ಪಾಲಿಟಿಕ್ಸ್!

    ದೇಣಿಗೆ ವಿವರ ಹಾಗೂ ಜಮೆಯಾದ ಹಣ ಈ ಕೆಳಗಿನಂತಿದೆ:
    ಡಿಡಿಯಲ್ಲಿ ಸಲ್ಲಿಕೆಯಾಗಿರುವ ಮೊತ್ತ- 13,59,90,418 ರೂ.
    ಆನ್‍ಲೈನ್‍ನಲ್ಲಿ ಸಲ್ಲಿಕೆಯಾಗಿರುವ ಮೊತ್ತ- 9,06,99,390 ರೂ.
    ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ- 2,50,00,000. ರೂ.
    ಒಟ್ಟು- 25,16,89,808 ರೂ.

    ಇನ್ನು ಪ್ರವಾಹ ಸಂತ್ರಸ್ತ ಕೊಡಗು ಮತ್ತು ಇತರೇ ಜಿಲ್ಲೆಗಳ ಸಂತ್ರಸ್ತರಿಗೆ ನೆರವಾಗಲೆಂದು ಧನ ಸಹಾಯ ಮಾಡುವಂತೆ ಕರೆಕೊಡಲಾಗಿತ್ತು. ಆ ನಿಟ್ಟಿನಲ್ಲಿ ನಿನ್ನೆವರೆಗೆ ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ಡಿಡಿಯಲ್ಲಿ 13 ಕೋಟಿಯ 59 ಲಕ್ಷ ಮತ್ತು ಆನ್‍ಲೈನ್‍ನಲ್ಲಿ 9 ಕೋಟಿಯ 6 ಲಕ್ಷ, ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದಿಂದ 2 ಕೋಟಿಯ 50 ಲಕ್ಷ ಜಮೆಯಾಗಿದೆ. ಒಟ್ಟು 25 ಕೋಟಿಯ 16 ಲಕ್ಷದ 89 ಸಾವಿರ 808 ರೂಪಾಯಿ ಜಮೆಯಾಗಿದೆ. ಇದನ್ನೂ ಓದಿ: ನೀರು ಬರುತ್ತಿದ್ದಂತೆ ಅಪ್ಪ, ಅಮ್ಮ ರೋಡಿಗೆ ಓಡಿದ್ರು- ಚಿತ್ರ ಬಿಡಿಸಿ ಸಚಿವೆಗೆ ವಿವರಿಸಿದ ಬಾಲಕ

    ಶುಕ್ರವಾರ ನಗರದಲ್ಲಿ ನಡೆದ ಸುದ್ದಿಗೋಷ್ಟಿ ವೇಳೆ ಸಾ.ರಾ.ಮಹೇಶ್ ಹಾಗೂ ನಿರ್ಮಲಾ ಸೀತಾರಾಮ್ ನಡುವೆ ಜಟಾಪಟಿ ಉಂಟಾಗಿತ್ತು. ಈ ಬಗ್ಗೆ ನಿರ್ಮಲಾ ಸೀತಾರಾಮ್ ಸಿಎಂ ಎಚ್‍ಡಿಕೆಗೆ ದೂರು ನೀಡಿದ್ದಾರೆ. ಸಚಿವರು ಪ್ರೋಟೋಕಾಲ್ ಪಾಲಿಸಿಲ್ಲ. ಸಚಿವರ ವರ್ತನೆ ಸಹಾ ಆಕ್ಷೇಪಾರ್ಹ ಎಂದು ಅಸಮಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಸಚಿವ ಸಾರಾ ಮಹೇಶ್ ವಿರುದ್ಧ ನಿರ್ಮಲಾ ಸೀತಾರಾಮನ್ ಗರಂ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿರ್ಮಲಾ ಸೀತಾರಾಮನ್ ವಿರುದ್ಧ ಸಾರಾ ಮಹೇಶ್ ಗರಂ

    ನಿರ್ಮಲಾ ಸೀತಾರಾಮನ್ ವಿರುದ್ಧ ಸಾರಾ ಮಹೇಶ್ ಗರಂ

    ಮಡಿಕೇರಿ: ಕೊಡಗು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಭೆ ಬಳಿಕ ಕೇಂದ್ರ ಸರ್ಕಾರದ ನಡೆಯ ವಿರುದ್ಧ ಸಚಿವ ಸಾರಾ ಮಹೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಸಭೆಯ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಾರಾ ಮಹೇಶ್ ಅವರು, ಕೇರಳದಲ್ಲಿ ಪ್ರವಾಹ ಆಗಿರುವಂತೆ ರಾಜ್ಯದ 4 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ನಷ್ಟ ಉಂಟಾಗಿದ್ದು, ಕೇಂದ್ರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಆದರೆ ಕೇರಳಕ್ಕೆ ಅನುದಾನ ನೀಡಿದ ಕೇಂದ್ರ ಸರ್ಕಾರ ಇಂದು ವರದಿ ಬಂದ ಬಳಿಕ ಎಲ್ಲಾ ಸಚಿವರೊಂದಿಗೆ ಮಾತನಾಡಿ ಅನುದಾನ ಬಿಡುಗಡೆ ಮಾಡುವ ಆಶ್ವಾಸನೆ ನೀಡಿದ್ದಾರೆ. ಇದು ನಿಮಗೂ ತಿಳಿದಿದೆ, ಎಲ್ಲಾ ಸಚಿವರ ಕೆಲಸ ನನೊಬ್ಬಳೇ ಮಾಡಲು ಸಾಧ್ಯವಿಲ್ಲ. ಆದರೆ ಎಲ್ಲಾ ಇಲಾಖೆಗೆ ಹಾಗೂ ಪ್ರಧಾನಿಗೆ ಮಾಹಿತಿ ನೀಡುತ್ತೇನೆ ಎಂದು ಕೇಂದ್ರ ರಕ್ಷಣಾ ಸಚಿವರು ಹೇಳಿದ್ದಾಗಿ ಸಾರಾ ಮಹೇಶ್ ತಿಳಿಸಿದರು.

    ಇದೇ ವೇಳೆ ನಿರ್ಮಲಾ ಸೀತಾರಾಮನ್ ಅವರ ನಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಾರಾಮಹೇಶ್ ಅವರು, ರಕ್ಷಣಾ ಸಚಿವರು ಇಂದು ತುಂಬಾ ಸ್ಪೀಡ್ ಆಗಿದ್ದರು. ಇದು ಅವರ ಪಕ್ಷದ ಸಮಸ್ಯೆ ಇರಬಹುದು. ಆದರೆ ಇಂದು ಅವರು ತಾಳ್ಮೆ ವಹಿಸುವ ಅಗತ್ಯವಿತ್ತು. ರಾಜಕಾರಣದಲ್ಲಿ ಜನರಿಂದ ನೇರವಾಗಿ ಆಯ್ಕೆ ಆಗಿದ್ದರೆ ತಾಳ್ಮೆ ನಿರ್ವಹಣೆ ಕುರಿತು ತಿಳಿಯುತ್ತಿತ್ತು. ರಾಜ್ಯಸಭೆಯಿಂದ ಆಯ್ಕೆ ಆದ ಕಾರಣ ಕಷ್ಟಗೊತ್ತಿಲ್ಲ. ಆದರೆ ರಾಜ್ಯ ಸರ್ಕಾರದಿಂದ ನೀಡಬೇಕಾದ ಎಲ್ಲಾ ಗೌರವ ನೀಡಿದ್ದೆವೆ ಎಂದರು.  ಇದನ್ನು ಓದಿ: ಸಚಿವ ಸಾರಾ ಮಹೇಶ್ ವಿರುದ್ಧ ನಿರ್ಮಲಾ ಸೀತಾರಾಮನ್ ಗರಂ

    ಸ್ಪಷ್ಟನೆ: ಜಿಲ್ಲಾಡಳಿತ, ಅಧಿಕಾರಿಗಳು ಹಾಗೂ ಸಚಿವರ ನಡುವೆ ಹೊಂದಾಣಿಕೆ ಸಮಸ್ಯೆ ಇದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿ, ರಕ್ಷಣಾ ಸಚಿವರು ಮೊದಲು ಕುವೆಂಪು ಬಡಾವಣೆ, ಸಾಯಿ ಬಡಾವಣೆ ಭೇಟಿ ನೀಡಿ ಬಳಿಕ ಮೈತ್ರಿ ಹಾಲ್‍ಗೆ ಆಗಮಿಸಬೇಕಿತ್ತು. ಆದರೆ ಅವರು ನಿಗದಿಯಾಗಿದ್ದ ಕಾರ್ಯಕ್ರಮ ಹೊರತು ಪಡಿಸಿ ಸೇವಾ ಭವನಕ್ಕೆ ತೆರಳಿದ್ದರು. ಅದು ಅವರ ನಿರ್ಧಾರ. ಆದರೆ ಈ ವೇಳೆ ಕಾರ್ಯಕ್ರಮದ ಪಟ್ಟಿ ಇರಲಿಲ್ಲ. ಅದ್ದರಿಂದ ಅವರು ಗರಂ ಆಗಿದ್ದಾರೆ. ಈ ಮಧ್ಯೆ ಸಂಸದ ಪ್ರತಾಪ್ ಸಿಂಹ, ನಾನು ಮಾತನಾಡುವ ವೇಳೆ ತಮಗೇ ಮುಜುಗರ ತರದಂತೆ ಹೇಳಿದ್ದರೆ ಅಷ್ಟೇ. ಆದರೆ ಅಧಿಕಾರಿಗಳ ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ. ಎಲ್ಲರೂ ಪ್ರವಾಹ ನಿರ್ವಹಣೆ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೀರು ಬರುತ್ತಿದ್ದಂತೆ ಅಪ್ಪ, ಅಮ್ಮ ರೋಡಿಗೆ ಓಡಿದ್ರು- ಚಿತ್ರ ಬಿಡಿಸಿ ಸಚಿವೆಗೆ ವಿವರಿಸಿದ ಬಾಲಕ

    ನೀರು ಬರುತ್ತಿದ್ದಂತೆ ಅಪ್ಪ, ಅಮ್ಮ ರೋಡಿಗೆ ಓಡಿದ್ರು- ಚಿತ್ರ ಬಿಡಿಸಿ ಸಚಿವೆಗೆ ವಿವರಿಸಿದ ಬಾಲಕ

    ಮಡಿಕೇರಿ: ಇಲ್ಲಿನ ಮೈತ್ರಿ ಕೇಂದ್ರದಲ್ಲಿ ಗುಡ್ಡ ಕುಸಿತ ಹಾಗೂ ಪ್ರವಾಹದ ಪರಿಸ್ಥಿತಿಯನ್ನು ಶಾಲಾ ಬಾಲಕನೋರ್ವ ಚಿತ್ರ ಬಿಡಿಸಿದ್ದು, ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವಿವರಿಸಿದ ರೀತಿ ಮನಕಲಕುವಂತಿತ್ತು.

    ಬಾಲಕ ನವನೀಶ್ ತಾನು ಬಿಡಿಸಿದ ಪ್ರವಾಹ ಚಿತ್ರವನ್ನು ಸಚಿವೆ ಹಾಗೂ ಪಬ್ಲಿಕ್ ಟಿವಿಗೂ ವಿವರಿಸಿದ್ದಾನೆ. ಸದ್ಯ ಬಾಲಕ ವಿವರಣೆ ಅಲ್ಲಿದ್ದವರನ್ನು ಕಣ್ಣೀರು ತರುಸುವಂತಿದ್ದು, ಮನಕಲಕುವಂತಿದೆ.

    ಬಾಲಕ ಹೇಳಿದ್ದು ಹೀಗೆ:
    ಬೆಟ್ಟದಿಂದ ನೀರು ಕೆಳಗೆ ಬರುತ್ತಿದೆ. ಇದು ನಮ್ಮ ಮನೆ. ನೀರು ರಭಸವಾಗಿ ಬಂದು ನಮ್ಮ ಮನೆಯನ್ನು ಕೊಚ್ಚಿಕೊಂಡು ಹೋಗಿದೆ. ಈಗ ಅಲ್ಲಿ ಯಾರೂ ಕೂಡ ಇಲ್ಲ. ನಮ್ಮ ಮನೆ ಮತ್ತು ಬೇರೆ ಮನೆ ಮಾತ್ರ ಅಲ್ಲಿ ಇರೋದು. ಅಂದು ನಮ್ಮ ಅಜ್ಜಿಯನ್ನು ನೀರು ಕೊಚ್ಚಿಕೊಂಡು ಹೋಯಿತು. ಅದನ್ನು ಪೇಪರಿಗೆ ಹಾಕಿಬಿಟ್ಟಿದ್ದಾರೆ. ಘಟನೆಯ ಬಳಿಕ ನಾವು ಅಲ್ಲಿಂದ ಪರಿಹಾರ ಕೇಂದ್ರಕ್ಕೆ ಓಡಿಕೊಂಡು ಬಂದ್ವಿ. ಅಪ್ಪ-ಅಮ್ಮ ರೋಡಿಗೆ ಹೋಗಿದ್ರು. ನೀರು ಮೇಲೆ ಹೋಗ್ಬಿಟ್ಟು ಕೆಳಗಡೆ ಬಂತು. ನೀರು ಬಂದಾಗ ಅಪ್ಪ- ಅಮ್ಮ ಓಡಿ ಬಂದ್ರು. ಆಗ ಅಮ್ಮ ಎಲ್ಲಾ ಪ್ಯಾಕ್ ಮಾಡು, ಬಿಟ್ಟು ಓಡಿ ಹೋಗುವ ಅಂತ ಹೇಳಿದ್ರು. ಆಗ ನಾವು ಕುಶಾಲನಗರದಲ್ಲಿರುವ ನೆಂಟರ ಮನೆಗೆ ಹೋಗ್ಬಿಟ್ವಿ. ಅಲ್ಲಿ ಟಿವಿಯಲ್ಲಿ ನೋಡಿ ಭಯ ಆಯ್ತು. ನಂತರ ನಾವು ಪರಿಹಾರ ಕೇಂದ್ರಕ್ಕೆ ಬಂದೆವು ಅಂತ ಬಾಲಕ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಕಣ್ಣಾರೆ ಕಂಡ ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾನೆ.

    ನಮ್ಮ ಮನೆಯ ಮೇಲೆ ಒಂದು ಮನೆ ಇತ್ತು. ಆ ಮನೆ ಒಡೆದು ಹೋಗಿದೆ. ಅದನ್ನು ನಾನು ನನ್ನ ಅಪ್ಪನ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದೇನೆ. ಆವಾಗ ಅಲ್ಲೇ ಇದ್ದ ಅಜ್ಜಿ ನನ್ನನ್ನು ಬಾ ಬಾ ಅಂತ ಕರೆದ್ರು. ನಾನು ಬರುವಷ್ಟರಲ್ಲಿ ನೀರು ಅಲ್ಲಿದ್ದ ಅಜ್ಜಿಯನ್ನು ಕೊಚ್ಚಿಕೊಂಡು ಹೋಯಿತು. ಮೊನ್ನೆ ಅವರು ಮನೆಯವರಿಗೆ ಸಿಕ್ಕಿದ್ರು ಅಂತ ಬಾಲಕ ನೈಜತೆಯನ್ನು ತಿಳಿಸಿದ್ದು, ಬಾಲಕನ ವಿವರಣೆ ಕರುಳುಕಿತ್ತು ಬರುವಂತಿತ್ತು.

    ಹೆಬ್ಬಟ್ಟಗೇರಿ ಗ್ರಾಮದ ಜನಾರ್ದನ ಹಾಗೂ ಶಾರದಾ ದಂಪತಿ ಪುತ್ರ 7 ವರ್ಷದ ನವಿನಾಶ್ ಸ್ಥಳೀಯ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಓದುತ್ತಿದ್ದು, ಮುಂದೆ ಎಂಜಿನಿಯರ್ ಆಗೋ ಕನಸು ಹೊಂದಿದ್ದಾನೆ. ಕೊಡಗಿನ ಪ್ರವಾಹ ಪೀಡಿ ಪ್ರದೇಶಗಳಿಗೆ ಇಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೇಟಿ ನಿಡಿದ್ದರು. ಈ ವೇಳೆ ಮೈತ್ರಿಯಲ್ಲಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಕಷ್ಟಗಳನ್ನು ಆಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಪುಟ್ಟ ಬಾಲಕ ಪ್ರವಾಹ ಬಂದ ದಿನದಂದು ಕಣ್ಣಾರೆ ಕಂಡ ಘಟನೆಯನ್ನು ಚಿತ್ರೀಕರಿಸಿದ್ದಾನೆ. ಅಲ್ಲದೇ ಸಚಿವೆಗೆ ವಿವರಿಸಿದ್ದು, ಅಲ್ಲಿದ್ದವರಲ್ಲಿ ಕಣ್ಣೀರು ತರಿಸಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಹಿಳೆಯರು, ಮಕ್ಕಳು ಧರಿಸುವ ಬಟ್ಟೆಗಳು ಅತ್ಯಾಚಾರಕ್ಕೆ ಕಾರಣವಲ್ಲ- ನಿರ್ಮಲಾ ಸೀತಾರಾಮನ್

    ಮಹಿಳೆಯರು, ಮಕ್ಕಳು ಧರಿಸುವ ಬಟ್ಟೆಗಳು ಅತ್ಯಾಚಾರಕ್ಕೆ ಕಾರಣವಲ್ಲ- ನಿರ್ಮಲಾ ಸೀತಾರಾಮನ್

    ನವದೆಹಲಿ: ಮಹಿಳೆಯರು ಮತ್ತು ಮಕ್ಕಳು ಧರಿಸುವ ಬಟ್ಟೆಗಳೇ ಅತ್ಯಾಚಾರಕ್ಕೆ ಕಾರಣವಲ್ಲ ಎಂಬುದಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಸೋಮವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಕುರಿತು ಮಾತನಾಡಿದ ಸಚಿವೆ, ಇತ್ತೀಚೆಗೆ ಧರಿಸುವ ಬಟ್ಟೆಗಳಿಂದ ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚುತ್ತಿವೆ ವಾದವನ್ನು ಖಂಡಿಸಿದ್ದಾರೆ. ಹೆಚ್ಚಿನ ಎಲ್ಲಾ ಪ್ರಕರಣಗಳು ಮನೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತ್ರ ನಡೆಯುತ್ತವೆ. ಅಲ್ಲದೇ ಬಂಧುಗಳು, ಸ್ನೇಹಿತರು ಹಾಗೂ ನೆರೆಮನೆಯವರೇ ಆರೋಪಿಗಳಾಗುತ್ತಾರೆ ಅಂತ ಹೇಳಿದ್ರು.

    ಒಂದು ವೇಳೆ ಧರಿಸುವ ಬಟ್ಟೆಗಳಿಂದಲೇ ಪ್ರೇರೇಪಿತರಾಗಿ ಅತ್ಯಾಚಾರ ಪ್ರಕರಣಗಳು ನಡೆಯುವುದು ಎಂದಾದರೆ, ವೃದ್ಧೆಯರು ಮತ್ತು ಸಣ್ಣ-ಪುಟ್ಟ ಮಕ್ಕಳ ಮೇಲೆ ಯಾಕೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತವೆ ಎಂಬುದಾಗಿ ಪ್ರಶ್ನಿಸಿದ್ದಾರೆ.

    ಅಪ್ತಾಪ್ತರ ಮೇಲೆ ನಡೆಯುವ ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಕಾನೂನು ಮತ್ತು ಇಲಾಖೆಗಳು ಎಚ್ಚೆತ್ತುಕೊಳ್ಳಬೇಕು. ಅಲ್ಲದೇ ಈ ಮಧ್ಯೆ ಹೆತ್ತವರು ಕೂಡ ತಮ್ಮ ಮಕ್ಕಳ ಮೇಲೆ ಗಮನವಿಟ್ಟಿರಬೇಕು. ಒಟ್ಟಿನಲ್ಲಿ ಹೆಣ್ಣು ಮಕ್ಕಳನ್ನು ಗಂಡು ಮಕ್ಕಳು ನೋಡುವ ದೃಷ್ಟಿಕೋನ ಬದಲಾಗಬೇಕಾಗಿದೆ ಅಂತ ಅವರು ಅಭಿಪ್ರಾಯಿಸಿದ್ದಾರೆ.

    ಜಮ್ಮು ಕಾಶ್ಮೀರದ ಕಟುವಾದಲ್ಲಿ 8 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ಈ ಘಟನೆಯ ಬಳಿಕ ಕೇಂದ್ರ ಸರ್ಕಾರ ಅಪ್ರಾಪ್ತರ ಮೇಲೆ ಅತ್ಯಾಚಾರ ಆರೋಪಿಗಳಿಗೆ ಮರಣದಂಡನೆ ಶಿಕ್ಷೆಯನ್ನು ಜಾರಿಗೆ ತಂದಿದೆ. ಈ ಸಂಬಂಧ ಕೇಂದ್ರ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಸುಗ್ರೀವಾಜ್ಞೆ ಹೊರಡಿಸಿ ತಿದ್ದುಪಡಿ ಮಾಡಲಾಗಿದೆ.

  • ನಿರ್ಮಲಾ ಸೀತಾರಾಮನ್ ಹೆಗಲಿಗೆ ದೇಶದ ರಕ್ಷಣೆಯ ಹೊಣೆ

    ನಿರ್ಮಲಾ ಸೀತಾರಾಮನ್ ಹೆಗಲಿಗೆ ದೇಶದ ರಕ್ಷಣೆಯ ಹೊಣೆ

    ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟ ಪುನಾರಚನೆಯಾಗಿದ್ದು, ಇಲ್ಲಿಯವರೆಗೆ ವಾಣಿಜ್ಯ ಖಾತೆಯನ್ನು ನಿರ್ವಹಿಸುತ್ತಿದ್ದ ನಿರ್ಮಲಾ ಸೀತಾರಾಮನ್ ಅವರು ದೇಶದ ರಕ್ಷಣಾ ಸಚಿವೆಯಾಗಿ ನೇಮಕಗೊಂಡಿದ್ದಾರೆ.

    58 ವರ್ಷದ ನಿರ್ಮಲಾ ಸೀತಾರಾಮನ್ ಅವರು ಆಯ್ಕೆಯಾಗುವ ಮೂಲಕ ಪೂರ್ಣಾವಧಿಯಾಗಿ ರಕ್ಷಣಾ ಖಾತೆಯನ್ನು ಹೊಂದಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ರಕ್ಷಣೆಯ ಹೊಣೆ ಹೊತ್ತಿದ್ದರು. ಪ್ರಧಾನಿ ಹುದ್ದೆಯೊಂದಿಗೆ ಜೊತೆ 1982 ರವರೆಗೂ ಈ ಖಾತೆಯನ್ನು ನಿರ್ವಹಣೆ ಮಾಡಿದ್ದರು.

    ಇದನ್ನೂ ಓದಿ: ಮೋದಿ ಸಂಪುಟ ಸೇರಿದ ಸಚಿವರ ಸಾಧನೆ ಏನು? ಇಷ್ಟೊಂದು ಮಹತ್ವ ಯಾಕೆ?

    ವಾಣಿಜ್ಯ ಖಾತೆಯನ್ನು ನಿಭಾಯಿಸುತ್ತಿದ್ದ ನಿರ್ಮಲಾ ಸೀತಾರಾಮನ್ ಅವರು ರಾಜ್ಯಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಆಯ್ಕೆಯಾಗಿದ್ದರು.

    ಅಧಿಕಾರಕ್ಕೆ ಏರಿದ ಮೋದಿ ಸರ್ಕಾರದಲ್ಲಿ ಆರಂಭದ ದಿನಗಳಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ರಕ್ಷಣೆಯ ಹೊಣೆ ಹೊತ್ತಿದ್ದರು. ಇದಾದ ಬಳಿಕ ಮನೋಹರ್ ಪರಿಕ್ಕರ್ ಈ ಖಾತೆ ಒಲಿದಿತ್ತು. ಗೋವಾ ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಿದ ಹಿನ್ನೆಲೆಯಲ್ಲಿ ರಕ್ಷಣಾ ಖಾತೆಗೆ 2017ರ ಮಾರ್ಚ್ ನಲ್ಲಿ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಈ ಖಾತೆಯನ್ನು ಮತ್ತೆ ಅರುಣ್ ಜೇಟ್ಲಿ ನೋಡಿಕೊಳ್ಳುತ್ತಿದ್ದರು.

    ರೈಲ್ವೇ ಸಚಿವಾಲಯನ್ನು ನೋಡಿಕೊಳ್ಳುತ್ತಿದ್ದ ಸುರೇಶ್ ಪ್ರಭು ಅವರಿಗೆ ವಾಣಿಜ್ಯ ಖಾತೆಯನ್ನು ನೀಡಲಾಗಿದೆ.

    `ಇಂದು ರಾಷ್ಟ್ರಪತಿ ಭವನದಲ್ಲಿ ಕೇಂದ್ರ ಸಂಪುಟ ಪುನಾರಚನೆಯಾಗಿದ್ದು ಹೊಸ ಖಾತೆ ಹೆಗಲಿಗೇರಿಸಿಕೊಂಡ ಎಲ್ಲಾ ಸಚಿವರುಗಳಿಗೂ ಅಭಿನಂದನೆಗಳು. ಅವರ ಅನುಭವ ಮಂತ್ರಿ ಮಂಡಲದ ಗೌರವವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಧರ್ಮೇಂದ್ರ ಪ್ರಧಾನ್, ನಿರ್ಮಲಾ ಸೀತರಾಮನ್, ಮುಕ್ತಲ್ ಅಬ್ಬಾಸ್ ನಖ್ವಿ ಹಾಗೂ ಪಿಯೂಷ್ ಗೋಯಲ್ ಅವರಿಗೆ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿಶೇಷ ಅಭಿನಂದನೆಯನ್ನು ಸಲ್ಲಿಸಿದ್ದಾರೆ.