Tag: decrease

  • ಕರ್ನಾಟಕಕ್ಕಿಂತ ಕಡಿಮೆ – ಆಂಧ್ರದಲ್ಲಿ ಮದ್ಯದ ದರ ಭಾರೀ ಇಳಿಕೆ

    ಕರ್ನಾಟಕಕ್ಕಿಂತ ಕಡಿಮೆ – ಆಂಧ್ರದಲ್ಲಿ ಮದ್ಯದ ದರ ಭಾರೀ ಇಳಿಕೆ

    – ಗ್ರಾಹಕರಿಗೆ ಮಾಸಿಕ 116 ಕೋಟಿ ರೂ. ಉಳಿತಾಯ

    ಅಮರಾವತಿ: ಕರ್ನಾಟಕದಲ್ಲಿ (Karnataka) ಅಬಕಾರಿ ತೆರಿಗೆ ಸಂಗ್ರಹಕ್ಕೆ ಮದ್ಯದ ದರ ಏರಿಕೆ ಮಾಡುತ್ತಿದ್ದರೆ ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರಪ್ರದೇಶ ಸರ್ಕಾರವು (Andhra Pradesh) ಇದೇ ಮೊದಲ ಬಾರಿ ಮದ್ಯದ ದರ ಇಳಿಸಿದ್ದು, ಪ್ರತಿ ಬಾಟಲ್‌ಗೆ 10 ರೂ.ಯಿಂದ 100 ರೂ.ವರೆಗೆ ಕಡಿತಗೊಳಿಸಿದೆ. ಈ ಮೂಲಕ ರಾಜ್ಯದಲ್ಲಿ ಮದ್ಯ ಗ್ರಾಹಕರಿಗೆ ಪ್ರತಿ ತಿಂಗಳು 116 ಕೋಟಿ ರೂ. ಉಳಿತಾಯ ಆಗಲಿದೆ.

    ಈ ಕುರಿತು ಅಧಿಕಾರಿಗಳ ಜೊತೆ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಿಎಂ ಚಂದ್ರಬಾಬು ನಾಯ್ಡು (Chandrababu Naidu), ಮದ್ಯ ನೀತಿಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಂಡು, ಕೈಗೆಟುಕುವ ದರದಲ್ಲಿ ಅದನ್ನು ಪೂರೈಕೆ ಮಾಡಿ. ಜೊತೆಗೆ ನಕಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಸೂಚಿಸಿದ್ದಾರೆ. ಈ ಹೊಸ ನೀತಿಯಿಂದ ರಾಜ್ಯದ ಆದಾಯ ಹೆಚ್ಚುವ ನಿರೀಕ್ಷೆಯಿದೆ ಎಂದಿದ್ದಾರೆ.ಇದನ್ನೂ ಓದಿ: ಶೈನ್ ಶೆಟ್ಟಿ, ಅಂಕಿತ ಅಮರ್ ಚಿತ್ರಕ್ಕೆ ಸೆನ್ಸಾರ್ ಅಸ್ತು

    ಇದೇ ವೇಳೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ಬ್ರ‍್ಯಾಂಡ್‌ಗಳನ್ನು ಮಾತ್ರ ರಾಜ್ಯಕ್ಕೆ ಅನುಮತಿಸುವಂತೆ ಮತ್ತು ಸುಂಕ ಪಾವತಿಸದ, ಅಕ್ರಮ ಅಥವಾ ನಕಲಿ ಮದ್ಯದ ಮಾರಾಟವನ್ನು ನಿಷೇಧಿಸುವಂತೆ ಹಾಗೂ ಸಾರ್ವಜನಿಕ ಆರೋಗ್ಯವನ್ನು ಕಾಪಾಡುವಂತೆ ತಿಳಿಸಿದರು.

    ಈ ಮೂಲಕ ಆಂಧ್ರಪ್ರದೇಶದಲ್ಲಿ 30 ಬ್ರಾಂಡ್‌ಗಳ ಬೆಲೆಯು ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡಿನ ಬೆಲೆಗಳಿಗಿಂತ ಕಡಿಮೆಯಾಗಿದೆ. ಪ್ರವಾಸಿ ತಾಣಗಳಲ್ಲಿ ದುರುಪಯೋಗವನ್ನು ತಡೆಗಟ್ಟಲು ಪರವಾನಗಿ ಇಲ್ಲದ ಅಂಗಡಿಗಳನ್ನು ನಿಷೇಧಿಸುವಂತೆ, ಡಿಜಿಟಲ್ ಪಾವತಿ, ಎಐ ಆಧಾರಿತ ಟ್ರ‍್ಯಾಕಿಂಗ್ ಜಾರಿಗೊಳಿಸಲು ನಿರ್ದೇಶನ ನೀಡಿದ್ದಾರೆ.ಇದನ್ನೂ ಓದಿ: ಬೆನ್ನಿ ಸಿನಿಮಾ ಮೂಲಕ ಜಿಂಕೆ ಮರಿ ಶ್ವೇತಾ ಸ್ಯಾಂಡಲ್‌ವುಡ್‌ಗೆ ಕಂಬ್ಯಾಕ್

  • ರಾಯಚೂರಿನಲ್ಲಿ ಮದ್ಯ ಮಾರಾಟ ಇಳಿಮುಖ – ಮದ್ಯಕ್ಕೂ ತಟ್ಟಿತು ಭೀಕರ ಬರಗಾಲ!

    ರಾಯಚೂರಿನಲ್ಲಿ ಮದ್ಯ ಮಾರಾಟ ಇಳಿಮುಖ – ಮದ್ಯಕ್ಕೂ ತಟ್ಟಿತು ಭೀಕರ ಬರಗಾಲ!

    ರಾಯಚೂರು: ಜಿಲ್ಲೆಯಲ್ಲಿ ಏಕಾಏಕಿ ಕುಡುಕರ ಸಂಖ್ಯೆ ಇಳಿಮುಖವಾಗಿದ್ದು, ಯಾವುದೇ ಮದ್ಯದ ಅಂಗಡಿಗೆ ಹೋದರೂ ಮದ್ಯದ ಸ್ಟಾಕ್ ಹಾಗೇ ಉಳಿದಿದೆ. ಮೊದಲೆಲ್ಲಾ ಶೇ.100ಕ್ಕೆ 110 ರಷ್ಟು ಗುರಿ ಮುಟ್ಟುತ್ತಿದ್ದ ಅಬಕಾರಿ ಇಲಾಖೆ ಈ ಬಾರಿ ಅರ್ಧದಷ್ಟು ಮದ್ಯ ಮಾರಾಟ ಮಾಡಲು ಸಾಧ್ಯವಾಗಿಲ್ಲ.

    ಹೌದು. ಬಿಸಿಲನಾಡು ರಾಯಚೂರಿನಲ್ಲಿ ಏನಿಲ್ಲವೆಂದರೂ ಕುಡುಕರ ಸಂಖ್ಯೆಗೇನು ಕಮ್ಮಿಯಿಲ್ಲ. ಆದ್ರೆ ಈ ವರ್ಷ ಅದ್ಯಾಕೋ ಮದ್ಯವ್ಯಸನಿಗಳು ಕುಡಿಯುವುದನ್ನೇ ಕಡಿಮೆ ಮಾಡಿದ್ದಾರೆ. ಹೀಗಾಗಿ ಅಬಕಾರಿ ಇಲಾಖೆಯ ಮದ್ಯದ ಸ್ಟಾಕ್ ಹಾಗೇ ಉಳಿದಿದೆ.

    ಮದ್ಯ ಮಾರಾಟದ ಪ್ರಮಾಣ ಕಡಿಮೆಯಾಗಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಆದ್ರೆ ಜಿಲ್ಲೆಗೆ ಕಾಡುತ್ತಿರುವ ಭೀಕರ ಬರಗಾಲದ ಪ್ರಭಾವ ಸಾಮಾನ್ಯ ಜನರ ಮೇಲೆ ಯಾವೆಲ್ಲಾ ರೀತಿ ಪರಿಣಾಮಗಳನ್ನ ಬೀರಿದೆ ಅನ್ನೊದಕ್ಕೆ ಇದೊಂದು ಉದಾಹರಣೆಯಾಗಿದೆ.

    ಕಳೆದ ಮಾರ್ಚ್ ತಿಂಗಳಲ್ಲಿ ಅತ್ಯಂತ ಕಡಿಮೆ ಮದ್ಯ ಮಾರಾಟವಾಗಿದೆ. ಅಬಕಾರಿ ಇಲಾಖೆಗೆ ನೀಡಲಾಗಿದ್ದ ಟಾರ್ಗೆಟ್‍ನಲ್ಲಿ ಕೇವಲ ಶೇ.58.90 ರಷ್ಟು ಮದ್ಯ ಮಾರಾಟವಾಗಿದೆ. ಅಂದರೆ 1,55,837 ಮದ್ಯದ ಕೇಸ್‍ಗಳಲ್ಲಿ ಕೇವಲ 91,785 ಕೇಸ್‍ಗಳು ಮಾತ್ರ ಮಾರಾಟವಾಗಿವೆ.

    ಈ ಹಿಂದೆ 2018 ಮೇ-ಜೂನ್ ನಲ್ಲಿ ಅಬಕಾರಿ ಇಲಾಖೆ ಶೇ.106 ರಷ್ಟು ಮದ್ಯ ಮಾರಾಟ ಮಾಡಿತ್ತು. ಏಪ್ರಿಲ್ 2018ರಿಂದ ಈವರೆಗೆ ಶೇ.86.55 ರಷ್ಟು ಮಾತ್ರ ಮದ್ಯ ಮಾರಾಟವಾಗಿದ್ದು, ಮದ್ಯ ಮಾರಾಟದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಜಿಲ್ಲೆಯಲ್ಲಿನ ಭೀಕರ ಬರಗಾಲ ಹಾಗೂ ಲೋಕಸಭಾ ಚುನಾವಣೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ಪ್ರಶಾಂತ್ ಕುಮಾರ್ ಹೇಳಿದ್ದಾರೆ.

    ಜಿಲ್ಲೆಗೆ ಕಾಡುತ್ತಿರುವ ಬರಗಾಲದಿಂದಾಗಿ ಸುಮಾರು 60 ಗ್ರಾಮಗಳ ಸಾವಿರಾರು ರೈತರು, ಕೂಲಿ ಕಾರ್ಮಿಕರು ಗುಳೆ ಹೋಗಿದ್ದಾರೆ. ಹೀಗಾಗಿ ಪಟ್ಟಣ, ಹೋಬಳಿ ಮಟ್ಟದಲ್ಲಿ ಮದ್ಯದ ಮಾರಾಟ ಇಳಿಮುಖವಾಗಿದೆ. ಇನ್ನೂ ಚುನಾವಣಾ ಆಯೋಗದ ಕಟ್ಟುನಿಟ್ಟಿನ ನಿಯಮಗಳಿಂದಾಗಿ ಲೋಕಸಭಾ ಚುನಾವಣೆಯಿದ್ದರೂ ಹೆಚ್ಚು ಮದ್ಯ ಓಡಾಡಿಲ್ಲ. ಹೀಗಾಗಿ ಮದ್ಯದ ವ್ಯಾಪಾರ ಕಡಿಮೆಯಾಗಿದೆ. ಚುನಾವಣೆ ವೇಳೆಗೂ ಮುನ್ನ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಪರವಾನಿಗೆ ಅಮಾನತ್ತಿನಲ್ಲಿಡಲಾಗಿದ್ದ ಹಾಗೂ ಪರವಾನಿಗೆ ರದ್ದು ಮಾಡಲಾಗಿದ್ದ ಜಿಲ್ಲೆಯ 37 ಮದ್ಯದಂಗಡಿಗಳನ್ನ ಪುನಃ ಆರಂಭಿಸಲು ಈಗ ಅನುವು ಮಾಡಿಕೊಡಲಾಗಿದೆ. ಆದರೂ ಕೂಡ ಮದ್ಯ ಮಾರಾಟದ ಪ್ರಮಾಣ ಮೊದಲ ಸ್ಥಿತಿಗೆ ಬಂದಿಲ್ಲ.