Tag: decoration

  • Bengaluru| ಅರಮನೆ ಮೈದಾನದಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ

    Bengaluru| ಅರಮನೆ ಮೈದಾನದಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ

    ಬೆಂಗಳೂರು: ಡೆಕೊರೇಷನ್ ವೇಸ್ಟ್ ವಸ್ತುಗಳು ಸ್ಟೋರ್ ಮಾಡಿದ್ದ ಜಾಗದಲ್ಲಿ ಏಕಾಏಕಿ ಬೆಂಕಿ (Fire) ಕಾಣಿಸಿಕೊಂಡ ಘಟನೆ ಪ್ಯಾಲೆಸ್ ಗ್ರೌಂಡ್‌ನಲ್ಲಿ (Palace Ground) ನಡೆದಿದೆ.

    ಡೆಕೊರೇಷನ್ (Decoration) ವೇಸ್ಟ್ ವಸ್ತುಗಳನ್ನು ಸಂಗ್ರಹ ಮಾಡುವ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಂಡ ತಕ್ಷಣವೇ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಇದನ್ನೂ ಓದಿ: ಮುಂಬೈ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ – ಇಬ್ಬರು ಕಾರ್ಮಿಕರು ಸಜೀವ ದಹನ

    ಮಾಹಿತಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಒಂದು ಅಗ್ನಿಶಾಮಕ ದಳ ದೌಡಾಯಿಸಿದೆ. ಇದನ್ನೂ ಓದಿ: ಸಿಎಂ ಬದಲಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟದ್ದು: ಬಿ.ಕೆ ಹರಿಪ್ರಸಾದ್

  • ವಿಜಯ ದಶಮಿ – ಲಕ್ಷ್ಮಿ ದೇವಿಗೆ ನೋಟುಗಳ ಅಲಂಕಾರ

    ವಿಜಯ ದಶಮಿ – ಲಕ್ಷ್ಮಿ ದೇವಿಗೆ ನೋಟುಗಳ ಅಲಂಕಾರ

    ಗದಗ: ಇಂದು ವಿಜಯ ದಶಮಿ (Vijaya Dashami) ಅಂಗವಾಗಿ ಗದಗ (Gadag) ನಗರದಲ್ಲಿ ಲಕ್ಷ್ಮಿ ದೇವಿಗೆ ನೋಟುಗಳಿಂದ (Note) ಅದ್ಭುತವಾಗಿ ಅಲಂಕಾರ ಮಾಡಲಾಗಿದೆ.

    ನಗರದ ಹುಡ್ಕೊ ಕಾಲೋನಿಯ ನೀಲಮ್ಮ ತಾಯಿ ಆಧ್ಯಾತ್ಮ ಆಶ್ರಮದಲ್ಲಿ ಲಕ್ಷ್ಮಿ ದೇವಿ ಪ್ರತಿಷ್ಠಾಪನೆ ಮಾಡಲಾಗಿದೆ. ನವರಾತ್ರಿ ಆರಂಭದಿಂದ ನಿತ್ಯ ವಿಭಿನ್ನವಾದ ರೀತಿಯಲ್ಲಿ ಅಲಂಕಾರ ಮಾಡಲಾಗುತ್ತಿತ್ತು. ಇಂದು 500, 100, 50, 20, 10 ರೂ. ನೋಟುಗಳಿಂದ ಅಲಂಕರಿಸಲಾಗಿದೆ. ಇದನ್ನೂ ಓದಿ: ಶಿವಮೊಗ್ಗ ದಸರಾ ಜಂಬೂ ಸವಾರಿಗೆ ಆಗಮಿಸಿದ್ದ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ

    ಚಕ್ರ, ಮಾಲೆ, ತೋರಣ, ಕಮಲ ಹೀಗೆ ಅನೇಕ ರೂಪದಲ್ಲಿ ನೋಟುಗಳನ್ನು ಜೋಡಿಸಿ ಅಲಂಕಾರ ಮಾಡಲಾಗಿದೆ. ಸುಮಾರು 2 ಲಕ್ಷ 50 ಸಾವಿರ ರೂ.ಗಳಿಂದ ದೇವಿಗೆ ಶೃಂಗಾರ ಮಾಡಿ ವಿಶೇಷ ಪೂಜೆ ಮಾಡಲಾಗಿದೆ. ಆಶ್ರಮಕ್ಕೆ ಬಂದ ಭಕ್ತರು ದೇವಿಯ ವಿಭಿನ್ನವಾದ ಅಲಂಕಾರ ಕಣ್ತುಂಬಿಕೊಂಡು, ಭಕ್ತಿಯಿಂದ ಬೇಡಿಕೊಂಡು ಪುನೀತರಾಗಿದ್ದಾರೆ. ಇದನ್ನೂ ಓದಿ: ಹಟ್ಟಿ ಚಿನ್ನದ ಗಣಿ ಸುತ್ತಮುತ್ತಲ ಪ್ರದೇಶದಲ್ಲಿ ಭೂಕಂಪನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಗಣಿ ಬಳಿದ ಕಾರಿನಲ್ಲಿ ಮಗಳನ್ನ ಪತಿಯ ಮನೆಗೆ ಕಳುಹಿಸಿದ ಡಾಕ್ಟರ್

    ಸಗಣಿ ಬಳಿದ ಕಾರಿನಲ್ಲಿ ಮಗಳನ್ನ ಪತಿಯ ಮನೆಗೆ ಕಳುಹಿಸಿದ ಡಾಕ್ಟರ್

    – ಸಂಪೂರ್ಣವಾಗಿ ಸಗಣಿಯಿಂದ ಕಾರು ಶೃಂಗಾರ

    ಮುಂಬೈ: ಸಾಮಾನ್ಯವಾಗಿ ಮದುವೆಯಾದ ಮಗಳನ್ನು ವಿವಿಧ ಹೂಗಳಿಂದ ಅಲಂಕಾರಗೊಂಡ ಕಾರಿನ ಮೂಲಕ ಪತಿಯ ಮನೆಗೆ ಪೋಷಕರು ಕಳುಹಿಸಿಕೊಡುತ್ತಾರೆ. ಆದರೆ ಇಲ್ಲೊಬ್ಬ ವೈದ್ಯ ತಮ್ಮ ಮಗಳನ್ನು ಸಗಣಿ ಬಳಿದ ಕಾರಿನಲ್ಲಿ ಪತಿಯ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

    ಮಹಾರಾಷ್ಟ್ರದ ಕೊಲ್ಲಾಪುರದ ವೈದ್ಯ ನವನಾಥ್ ದೂಧಾಲ್ ತನ್ನ ಮಗಳನ್ನು ಸಗಣಿ ಬಳಿದ ಕಾರಿನಲ್ಲಿ ಗಂಡನ ಮನೆಗೆ ಕಳುಹಿಸಿದ್ದಾರೆ. ದೂಧಾಲ್ ಅವರು ತಮ್ಮ ಟೊಯೊಟಾ ಕಾರನ್ನು ಸಂಪೂರ್ಣವಾಗಿ ಹಸುವಿನ ಸಗಣಿಯಿಂದ ವಿಭಿನ್ನವಾಗಿ ಅಲಂಕಾರಗೊಳಿಸಿದ್ದರು. ನಂತರ ಮಗಳನ್ನು ಅದರಲ್ಲಿಯೇ ಪತಿಯ ಮನೆಗೆ ಕಳುಹಿಸಿದ್ದಾರೆ.

    ವೈದ್ಯ ಸಗಣಿಯ ಪ್ರಯೋಜನದ ಬಗ್ಗೆ ಜನರಿಗೆ ತಿಳಿಸುವ ಕಾರಣದಿಂದ ತಮ್ಮ ಟೊಯೊಟಾ ಕಾರನ್ನು ಸಗಣಿಯಿಂದ ಅಲಂಕರಿಸಿದ್ದರು. ಸಗಣಿಯ ಜೊತೆಗೆ ಮೇಲೆ ಹೂಗಳಿಂದ ಕೂಡ ಅಲಂಕಾರ ಮಾಡಲಾಗಿದೆ. ಅಲ್ಲದೇ ಕಾರಿನ ಮೇಲೆ ನವದಂಪತಿ ಫೋಟೋ ಮತ್ತು ಹೆಸರನ್ನು ಕೂಡ ಬರೆಯಲಾಗಿದೆ. ನವದಂಪತಿ ಸಗಣಿ ಬಳಿದ ಕಾರಿನ ಮುಂದೆ ನಿಂತುಕೊಂಡು ಫೋಟೋ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ.

    ಮದುವೆಗೆ ಬಂದಿದ್ದವರು ಕಾರನ್ನು ಸಗಣಿಯಿಂದ ಅಲಂಕಾರ ಮಾಡಿರುವುದನ್ನು ನೋಡಿ ಮುಖ ಸಿಂಡರಿಸಿಕೊಂಡಿದ್ದರು. ಆದರೆ ವೈದ್ಯ ಸಗಣಿಯಿಂದ ಹಲವು ಔಷಧಿಯ ಗುಣಗಳಿವೆ. ಮೊದಲಿಗೆ ಸಗಣಿ ಕ್ಯಾನ್ಸರ್ ಅನ್ನು ಗುಣಪಡಿಸುತ್ತದೆ. ಜೊತೆಗೆ ಮನುಷ್ಯನ ದೇಹದಲ್ಲಿರುವ ಎಲ್ಲಾ ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯ ಸಗಣಿಗೆ ಇದೆ ಎಂದು ದೂಧಾಲ್‍ರವರು ತಿಳಿಸಿದ್ದಾರೆ.

    ಸಾಮಾನ್ಯವಾಗಿ ವಾತಾವರಣದಲ್ಲಿನ ತಾಪಮಾನ ಹೆಚ್ಚಾಗುತ್ತಿದೆ. ಆದರೆ ದೇಶಿಯ ಹಸುಗಳ ಸಗಣಿಯಿಂದ ತಾಪಮಾನವನ್ನು ಕಡಿಮೆ ಮಾಡಬಹುದು. ಹೀಗಾಗಿ ಕಾರಿನ ಹೊರ ಭಾಗಕ್ಕೆ ಸಗಣಿ ಬಳಿಯುವುದರಿಂದ ಕಾರಿನ ಒಳಭಾಗದಲ್ಲಿ ವಾತಾವರಣವು ತಣ್ಣಗಾಗಲಿದೆ. ಅಷ್ಟೇ ಅಲ್ಲದೇ ಸಗಣಿಯೂ ಕಾರಿನಲ್ಲಿರುವವರನ್ನು ರೇಡಿಯೇಷನ್‍ನಿಂದ ಕಾಪಾಡುತ್ತದೆ. ಕಾರಿಗೆ ಈ ರೀತಿ ಸಗಣಿಯನ್ನು ಮೆತ್ತುವುದರಿಂದ ಕೇವಲ ಮೂರು ಬಕೆಟ್ ನೀರಿನಲ್ಲಿ ಕಾರನ್ನು ತೊಳೆಯಬಹುದು. ಹೀಗಾಗಿ ನೀರನ್ನು ಸಹ ಉಳಿತಾಯ ಮಾಡಬಹುದಾಗಿದೆ ಎಂದು ವೈದ್ಯರು ಹೇಳಿದ್ದಾರೆ.

    ಕಾರಿಗೆ ಇದೇ ಮೊದಲ ಬಾರಿಗೆ ಸಗಣಿ ಬಳಿದಿಲ್ಲ. ಕಳೆದ ವರ್ಷದ ಬೇಸಿಗೆಯಲ್ಲಿ ಭಾರತದ ವಿವಿಧ ಭಾಗಗಳಲ್ಲಿ ತಾಪಮಾನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅನೇಕ ಕಾರುಗಳಿಗೆ ಸಗಣಿಯನ್ನು ಬಳಿಯಲಾಗಿತ್ತು. ಇದರಿಂದ ಕಾರಿನ ಕ್ಯಾಬಿನ್ ತಣ್ಣಗಿರುತ್ತಿತ್ತು. ಇದಕ್ಕೆ ಇದುವರೆಗೂ ಯಾರೂ ವೈಜ್ಞಾನಿಕ ಕಾರಣವನ್ನು ತಿಳಿಸಿಲ್ಲ. ಆದರೆ ವೈದ್ಯ ದೂಧಾಲ್‍ರವರು ಹೇಳಿರುವಂತೆ ಸಗಣಿಯು ರೇಡಿಯೇಷನ್‍ನಿಂದ ಕಾಪಾಡುವುದರ ಬಗ್ಗೆ ಇನ್ನಷ್ಟೇ ಸಾಬೀತಾಗಬೇಕಿದೆ.

  • ಹೊಸ ವರ್ಷದಲ್ಲಿ ಸಿಂಗಾರಗೊಂಡ ಧರ್ಮಸ್ಥಳ – ಬೆಂಗ್ಳೂರಿನ ಭಕ್ತರಿಂದ ವಿಶೇಷ ಸೇವೆ

    ಹೊಸ ವರ್ಷದಲ್ಲಿ ಸಿಂಗಾರಗೊಂಡ ಧರ್ಮಸ್ಥಳ – ಬೆಂಗ್ಳೂರಿನ ಭಕ್ತರಿಂದ ವಿಶೇಷ ಸೇವೆ

    ಮಂಗಳೂರು: ಹೊಸ ವರ್ಷದ ಪ್ರಯುಕ್ತ ಎಲ್ಲರು ಪಾರ್ಟಿ, ಸುತ್ತಾಟ ಮಾಡುತ್ತಿದ್ದರೆ, ಬೆಂಗಳೂರಿನ ಕುಟುಂಬವೊಂದು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ವಿಶೇಷ ಅಲಂಕಾರ ಮಾಡಿ ಮಂಜುನಾಥನ ಸೇವೆ ಸಲ್ಲಿಸಿದ್ದಾರೆ.

    ಹೊಸ ವರ್ಷಾಚರಣೆಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಾಡಿನೆಲ್ಲೆಡೆಯಿಂದ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಮಂಜುನಾಥ ಸ್ವಾಮಿಯ ದರ್ಶನ ಪಡೆಯುತ್ತಾರೆ. ಈ ಪ್ರಯುಕ್ತ ಬೆಂಗಳೂರಿನ ಕುಟುಂಬವೊಂದು ಕಳೆದ 12 ವರ್ಷಗಳಿಂದ ಸ್ವಾಮಿ ಸನ್ನಿಧಾನದಲ್ಲಿ ಹೂವಿನ ಅಲಂಕಾರ ಸೇವೆ ಮಾಡುತ್ತಿದ್ದು, ಈ ವರ್ಷವೂ ವಿಶೇಷವಾಗಿ ಅಲಂಕಾರ ಮಾಡಿದೆ.

    ಬೆಂಗಳೂರಿನ ಚಂದ್ರಲೇಔಟ್ ನಿವಾಸಿಗಳಾದ ಸಾಯಿ ಶರವಣ, ಎಸ್. ಗೋಪಾಲ್ ರಾವ್, ಮಂಜುನಾಥ ರಾವ್, ಆನಂದ್ ಜೊತೆಗೂಡಿ ಕಳೆದ 20 ವರ್ಷಗಳಿಂದ ಹೊಸ ವರ್ಷಕ್ಕೆ ಮಂಜುನಾಥನ ದರ್ಶನ ಪಡೆಯಲು ಆಗಮಿಸುತ್ತಿದ್ದರು. ಈ ನಡುವೆ ಕಳೆದ 12 ವರ್ಷದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹೂವಿನ ಅಲಂಕಾರ ಮಾಡಿ ಹೊಸ ವರ್ಷವನ್ನು ದೇವರ ಸೇವೆಗಾಗಿ ಮೀಸಲಿಡುತ್ತಿದ್ದಾರೆ.

    ಹಣ್ಣುಗಳಾದ ದಾಳಿಂಬೆ, ಅನಾನಸು ಸೇರಿದಂತೆ ಭತ್ತದ ತೆನೆ, ಕಬ್ಬು, ತೆಂಗಿನ ಗರಿ, ಬಾಳೆ ದಿಂಡು, ತಾವರೆ, ಲಿಲಿಯಂ, ಜಮೈಕಾನ್ ಎಲೆ, ಆಂತೂರಿಯಂ, ಕ್ರಿಸಾಂಟಮೊ ಸಹಿತ 6 ಲೋಡ್ ಅಲಂಕಾರಿಕ ಸಾಮಾಗ್ರಿಗಳನ್ನು ಬಳಸಿ ದೇವಸ್ಥಾನದ ಹೊರಾಂಗಣದ ದ್ವಾರ, ಸುತ್ತು ಪೌಳಿ, ಛಾವಣಿ ಸ್ತಂಭಗಳನ್ನು ವಿಭಿನ್ನವಾಗಿ ಆಕರ್ಷಕವಾಗಿ ಸಿಂಗರಿಸಲಾಗಿದೆ.

    ಹೊಸ ವರ್ಷವನ್ನು ಆಚರಿಸಲು ದೇವರ ಮೊರೆ ಹೋಗಬೇಕೆಂಬ ಸಂಕಲ್ಪದೊಂದಿಗೆ ಕಳೆದ 12 ವರ್ಷಗಳಿಂದ ಮಂಜುನಾಥ ಸ್ವಾಮಿಯ ಸೇವೆಯಲ್ಲಿ ತೊಡಗಿಕೊಂಡಿದ್ದೇವೆ ಎಂದು ಸೇವಾಕರ್ತರಾದ ಎಸ್ ಗೋಪಾಲ್ ರಾವ್ ಹೇಳಿದ್ದಾರೆ.

  • 10 ಲಕ್ಷ ಮೌಲ್ಯದ ನೋಟುಗಳಿಂದ ದೇವಿಗೆ ವಿಶೇಷ ಅಲಂಕಾರ

    10 ಲಕ್ಷ ಮೌಲ್ಯದ ನೋಟುಗಳಿಂದ ದೇವಿಗೆ ವಿಶೇಷ ಅಲಂಕಾರ

    ಮೈಸೂರು: ದೀಪಾವಳಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ನಾಡಿನೆಲ್ಲೆಡೆ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದ್ದು, ನಗರದ ಅಮೃತೇಶ್ವರ ದೇಗುಲದಲ್ಲಿ ಬರೋಬ್ಬರಿ ಹತ್ತು ಲಕ್ಷ ರೂಪಾಯಿಯ ವಿವಿಧ ಬಗೆಯ ನೋಟುಗಳಿಂದ ದೇವಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿದೆ.

    ದೀಪಾವಳಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ನಗರದ ಅಮೃತೇಶ್ವರಿ ದೇಗುಲದ ಶ್ರೀ ಬಾಲಾ ತ್ರಿಪುರ ಸುಂದರಿ ದೇವಿಗೆ ಒಂದು ರೂ.ನಿಂದ ಹಿಡಿದು ಎರಡು ಸಾವಿರ ರೂಪಾಯಿವರೆಗಿನ ನೋಟಿನ ಅಲಂಕಾರವನ್ನು ಮಾಡಲಾಗಿತ್ತು. ಸುಮಾರು 10 ಲಕ್ಷ ರೂ. ಮೌಲ್ಯದ 1, 5, 10, 20, 50, 100, 200, 500 ಹಾಗೂ 2,000 ಮುಖಬೆಲೆ ನೋಟುಗಳಿಂದ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಈ ಅಲಂಕಾರವನ್ನು ಭಕ್ತರು ಕಣ್ತುಂಬಿಕೊಂಡು ಪುನೀತರಾಗಿದ್ದಾರೆ.

    ದೀಪಾವಳಿಯ ದಿನ ಲಕ್ಷ್ಮೀ ದೇವಿಗೆ ವಿಶೇಷ ಅಲಂಕಾರ ಮಾಡುವುದು ಸರ್ವೇ ಸಾಮಾನ್ಯ. ಆದರೆ ಅಮೃತೇಶ್ವರ ದೇವಾಲಯದ ಸಿಬ್ಬಂದಿ ಶ್ರದ್ಧಾ-ಭಕ್ತಿಯಿಂದ ದೇವಿಗೆ ವಿಶಿಷ್ಟ ರೂಪದಲ್ಲಿ ನೋಟಿನ ಅಲಂಕಾರವನ್ನು ಮಾಡಿದ್ದಾರೆ. ಇವರ ಈ ಕಾರ್ಯಕ್ಕೆ ಭಕ್ತಾದಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ಇತ್ತೀಚೆಗೆ ಮಧ್ಯಪ್ರದೇಶದ ರತ್ಲಂ ನಗರದ ಮಹಾಲಕ್ಷ್ಮೀ ದೇವಾಲಯದ ದೇವಿಗೆ ನಗದು, ಚಿನ್ನಾಭರಣ ಮತ್ತು ವಜ್ರಾಭರಣ ಸೇರಿದಂತೆ ಒಟ್ಟು 100 ಕೋಟಿ ರೂ.ನಲ್ಲಿ ಅಲಂಕಾರ ಮಾಡಿದ್ದರು. ಮಹಾಲಕ್ಷ್ಮೀ ದೇಗುಲಕ್ಕೆ ಇದೇ ಮೊದಲ ಬಾರಿಗೆ ಅದ್ಧೂರಿಯಾಗಿ ಅಲಂಕಾರ ಮಾಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ನಿವಾಸಿ, ನಾನು ಹಲವು ವರ್ಷಗಳಿಂದ ಇಲ್ಲಿಯ ಆಚರಣೆಯನ್ನು ನೋಡಿಕೊಂಡು ಬಂದಿದ್ದೇನೆ. ಈ ಮೊದಲು 6 ರಿಂದ 7 ಲಕ್ಷ ರೂ. ಮಾತ್ರ ಬಳಸಿ ದೇಗುಲವನ್ನು ಅಲಂಕಾರ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ 100 ಕೋಟಿ ರೂ.ನಲ್ಲಿ ಆಲಯವನ್ನು ಅಲಂಕರಿಸಲಾಗಿದೆ ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಡಹಬ್ಬ ದಸರಾ ಆರಂಭಕ್ಕೆ ಕೆಲವೇ ಗಂಟೆ ಬಾಕಿ – ಚಾಮುಂಡೇಶ್ವರಿ ದೇಗುಲದಲ್ಲಿ ಸಕಲ ಸಿದ್ಧತೆ

    ನಾಡಹಬ್ಬ ದಸರಾ ಆರಂಭಕ್ಕೆ ಕೆಲವೇ ಗಂಟೆ ಬಾಕಿ – ಚಾಮುಂಡೇಶ್ವರಿ ದೇಗುಲದಲ್ಲಿ ಸಕಲ ಸಿದ್ಧತೆ

    ಮೈಸೂರು: ನಾಡಹಬ್ಬ ಮೈಸೂರು ದಸರಾಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇಗುಲ ಸಕಲ ರೀತಿಯಲ್ಲೂ ಸಿದ್ಧಗೊಳ್ಳುತ್ತಿದೆ. ದೇವಿಯನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ.

    ರಾಜ್ಯದ ಜನತೆ ಅತ್ಯಂತ ಕಾತುರದಿಂದ ಕಾಯುತ್ತಿದ್ದ ದಸರಾ ಹಬ್ಬಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದು, ಚಾಮುಂಡೇಶ್ವರಿ ದೇಗುಲ ಸಕಲ ರೀತಿಯಲ್ಲೂ ಸಿದ್ಧಗೊಳ್ಳುತ್ತಿದೆ. ಇಂದು ದೇವಾಲಯದ ಪ್ರಧಾನ ಅರ್ಚಕರಾದ ಶಶಿಶೇಖರ್ ದಿಕ್ಷೀತ್ ನೇತೃತ್ವದಲ್ಲಿ ದೇವಿಯನ್ನು ಶುದ್ಧಿಗೊಳಿಸಿ ಹೂವಿನ ಅಲಂಕಾರ ಮಾಡಲಾಯಿತು. ಹಾಗೇ ಉದ್ಘಾಟನಾ ಸಮಾರಂಭಕ್ಕೆ ವಿಶಾಲವಾದ ವೇದಿಕೆ ಕೂಡ ಸಿದ್ಧ ಮಾಡಲಾಗಿದೆ. ಭಕ್ತಾದಿಗಳಿಗೆ ಅಸನಾ ವ್ಯವಸ್ಥೆ ಕೂಡ ಮಾಡಲಾಗಿದೆ. ಚಾಮುಂಡೇಶ್ವರಿ ಸನ್ನಿಧಿ ತಳಿರು ತೋರಣ ಹಾಗೂ ಹೂವಿನಿಂದ ಶೃಂಗಾರಗೊಂಡಿದೆ.

    ಬುಧವಾರ ಬೆಳಗ್ಗೆ 7.05 ರಿಂದ 7.35 ತುಲಾ ಲಗ್ನದಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ಅಗ್ರ ಪೂಜೆಯನ್ನು ಸಲ್ಲಿಸುವ ಮೂಲಕ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ದಸರಾಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.

    ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಜಿಟಿ ದೇವೇಗೌಡ, ಸಚಿವ ಸಾರಾ ಮಹೇಶ್ ಸೇರಿದಂತೆ ಹಲವು ಸಚಿವರು ಹಾಗೂ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.

    ನಾಳೆಯಿಂದ ಅರಮನೆಯಲ್ಲಿ ಕೂಡ ವಿಶೇಷ ಕಾರ್ಯಕ್ರಮಗಳು ನಡೆಯಲಿದೆ. ಯದುವೀರ ಜಯಚಾಮರಾಜೇಂದ್ರ ಒಡೆಯರ್ ಒಂಭತ್ತು ದಿನಗಳ ಕಾಲ ಖಾಸಗಿ ದರ್ಬಾರ್ ನಡೆಸುತ್ತಾರೆ. 11 ಗಂಟೆಗೆ ಖಾಸಗಿ ದರ್ಬಾರ್ ಪ್ರಾರಂಭವಾಗಲಿದೆ. ಒಂಭತ್ತು ದಿನಗಳ ಕಾಲ ವಿವಿಧ ರಾಜ್ಯದ ಸಾಂಸ್ಕೃತಿಕ, ನಾಡಿನ ಪರಂಪರೆಗೆ ಸಂಬಂಧಿಸಿದ ಕಾರ್ಯಕ್ರಮ ನಡೆಯಲಿವೆ. ಸಾಕಷ್ಟು ಸಂಖ್ಯೆಯಲ್ಲಿ ದಸರಾ ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಮೈಸೂರಿಗೆ ಆಗಮಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 10 ವರ್ಷಗಳ ಹಿಂದೆ ಸೈಕಲ್ ಕೂಡ ಇರ್ಲಿಲ್ಲ, ಈಗ ಕೋಟಿ ಒಡೆಯ – 5 ವರ್ಷಗಳಿಂದ ಹೂವಿನ ಅಲಂಕಾರ ಸೇವೆ

    10 ವರ್ಷಗಳ ಹಿಂದೆ ಸೈಕಲ್ ಕೂಡ ಇರ್ಲಿಲ್ಲ, ಈಗ ಕೋಟಿ ಒಡೆಯ – 5 ವರ್ಷಗಳಿಂದ ಹೂವಿನ ಅಲಂಕಾರ ಸೇವೆ

    ಉಡುಪಿ: ವ್ಯಕ್ತಿಯೊಬ್ಬರು ದೇವರಿಗೆ ಹರಕೆ ಹೊತ್ತು ಕಳೆದ 5 ವರ್ಷದಿಂದ ಉಡುಪಿಯ ಅಂಬಲ್ಪಾಡಿ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನಗಳಿಗೆ ಹೂವಿನ ಅಲಂಕಾರದ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ.

    ರಮೇಶ್ ಬಾಬು ಅವರು ವಿಭಿನ್ನ ಹರಕೆ ಹೊತ್ತು, ಪ್ರತೀ ವರ್ಷ ದೇವರನ್ನು ನಂದನವನದಲ್ಲಿ ಕುಳ್ಳಿರಿಸುತ್ತಿದ್ದಾರೆ. ಮೂಲತಃ ಚಿಕ್ಕಬಳ್ಳಾಪುರದವರಾದ ರಮೇಶ್, 10 ವರ್ಷದ ಹಿಂದೆ ಇವರ ಬಳಿಯಲ್ಲಿ ಒಂದು ಸೈಕಲೂ ಇರಲಿಲ್ಲ. ಆದರೆ ಇವತ್ತಿಗೆ ಕೋಟಿಗಳ ಒಡೆಯರಾಗಿದ್ದಾರೆ. ಈ ಬೆಳವಣಿಗೆಗೆ ಉಡುಪಿಯ ಜನಾರ್ದನ ದೇವರು ಮತ್ತು ಮಹಾಕಾಳಿ ದೇವಿ ಕಾರಣ. ಆದ್ದರಿಂದ ಕಷ್ಟದಲ್ಲಿದ್ದಾಗ ಕೈ ಹಿಡಿದ ದೇವರನ್ನು ನಾನು ಪ್ರತೀ ವರ್ಷ ಹೂವಿನ ತೊಟ್ಟಿಲಿನಲ್ಲಿಟ್ಟು ಹರಕೆ ತೀರಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

    ಆಷಾಢ ಶುಕ್ರವಾರದಂದು ತಮ್ಮ 50 ಮಂದಿ ಯುವಕರ ತಂಡದ ಜೊತೆ ರಮೇಶ್ ಉಡುಪಿಗೆ ಬರುತ್ತಾರೆ. ಜೊತೆಗೆ ಲಕ್ಷಾಂತರ ರೂಪಾಯಿ ಹೂವುಗಳನ್ನು ಹೊತ್ತು ತರುತ್ತಾರೆ. ಅಂಬಲ್ಪಾಡಿ ಜನಾರ್ದನ- ಮಹಾಕಾಳಿ ದೇವಸ್ಥಾನಕ್ಕೆ ಬಂದು ಇಡೀ ದೇವಸ್ಥಾನವನ್ನು ಪುಷ್ಪಮಯ ಮಾಡುತ್ತಾರೆ. ಸಂಪೂರ್ಣ ದೇವಸ್ಥಾನವನ್ನು ಬಣ್ಣಬಣ್ಣದ ಹೂವುಗಳಿಂದ ಸಿಂಗಾರ ಮಾಡಿಸುತ್ತಾರೆ. ಶಿಲಾಮಯ ಕೆತ್ತನೆಗಳುಳ್ಳ ದೇವಸ್ಥಾನ ಹೂವಿನ ದೇವಳವಾಗಿ ಇಂದು ಪರಿವರ್ತನೆಗೊಂಡಿದೆ. ಈ ರೀತಿಯ ಹರಕೆ ನೀಡುತ್ತಿರುವುದು ಐದನೇ ಬಾರಿಯಾಗಿದೆ ಎಂದು ಭಕ್ತರಾದ ಮಂಜುಳಾ ಮತ್ತು ಶರಣ್ಯ ಹೇಳಿದ್ದಾರೆ.

    ಸುಮಾರು 3 ಲಕ್ಷ ರೂಪಾಯಿಯ ಹೂವಿನಿಂದ ದೇವಸ್ಥಾನವನ್ನು ಸಿಂಗಾರ ಮಾಡಲಾಗಿದೆ. 50 ಮಂದಿ ಯುವಕರು ಉಚಿತವಾಗಿ ಸಿಂಗಾರ ಸೇವೆಯನ್ನು ಮಾಡಿದ್ದರು.

  • 2 ಸಾವಿರ ಕೆ.ಜಿ ಹಣ್ಣುಗಳಿಂದ ಅಲಂಕೃತಗೊಂಡ ಅಮ್ಮ

    2 ಸಾವಿರ ಕೆ.ಜಿ ಹಣ್ಣುಗಳಿಂದ ಅಲಂಕೃತಗೊಂಡ ಅಮ್ಮ

    ಚೆನ್ನೈ: ತಮಿಳುನಾಡಿನ ಕೊಯಮತ್ತೂರು ನಗರದಲ್ಲಿ ಭಕ್ತಾದಿಗಳು `ಅಮ್ಮನ್’ ದೇವಸ್ಥಾನವನ್ನು ಬರೋಬ್ಬರಿ 2000 ಕಿಲೋಗ್ರಾಂಗಳಷ್ಟು ಹಣ್ಣುಗಳಿಂದ ಅಲಂಕಾರ ಮಾಡಿದ್ದಾರೆ.

    ಮಾವಿನ ಹಣ್ಣುಗಳು, ಅನಾನಸ್, ಪೇರಳೆ ಮತ್ತು ಬಾಳೆಹಣ್ಣುಗಳಿಂದ ತಾಯಿಗೆ ಅಲಂಕಾರ ಮಾಡಲಾಗಿದೆ. ಜೊತೆಗೆ 26 ಕ್ಕೂ ಹೆಚ್ಚು ವಿಧದ ಹಣ್ಣುಗಳನ್ನು ತಾಯಿ ಗರ್ಭಗುಡಿಯ ತುಂಬಾ ಅಲಂಕಾರ ಮಾಡಲಾಗಿದೆ. ಇದರಿಂದ ಅಮ್ಮ ವಿವಿಧ ರೀತಿಯ ಹಣ್ಣುಗಳ ಮಧ್ಯೆ ವೈಭವವಾಗಿ ನೋಡಲು ಆಕರ್ಷಕವಾಗಿ ಕಾಣುತ್ತಿದ್ದರು. ಈ ಅಲಂಕಾರವನ್ನು ನೋಡಲು ಭಕ್ತರು ನೆರದಿದ್ದರು.

    ತಮಿಳು ದೇವಸ್ಥಾನದ ಆಷಾಢ ತಿಂಗಳಲ್ಲಿ ಹಿಂದೂಗಳಿಗೆ ಮಂಗಳಕರವೆಂದು ನಂಬಿದ್ದಾರೆ. ಆದ್ದರಿಂದ ಮಹಾಳಿ ಅಮ್ಮನ್ ದೇವಸ್ಥಾನದಲ್ಲಿ ಭಕ್ತರು ಹೂ ಮಾಲೆಯನ್ನು ನೀಡಿದ್ದರು. ಭಕ್ತರು ನೀಡಿದ ಹೂಮಾಲೆಯಿಂದ ದೇವಿಯ ಮೂರ್ತಿಗಳನ್ನು ಅಲಂಕಾರ ಮಾಡಲಾಗಿದೆ.

    ದೇವಿಯ ಪ್ರಾರ್ಥನೆ ಮತ್ತು ವಿಶೇಷ ಪೂಜೆಯ ನಂತರ ಅಂದರೆ ಮರುದಿನ ನಗರದ ಭಕ್ತರಿಗೆ ಮತ್ತು ಬಡವರಿಗೆ ಈ ಹಣ್ಣುಗಳನ್ನು ವಿತರಿಸಲಾಗುತ್ತದೆ.

  • ಅಂಬಾನಿ ಪುತ್ರನ ನಿಶ್ಚಿತಾರ್ಥದಲ್ಲಿ ಬಲೂನ್ ಟ್ರೇಯಲ್ಲಿ ಅತಿಥಿಗಳಿಗೆ ಭಕ್ಷ್ಯ- ವಿಡಿಯೋ ನೋಡಿ

    ಅಂಬಾನಿ ಪುತ್ರನ ನಿಶ್ಚಿತಾರ್ಥದಲ್ಲಿ ಬಲೂನ್ ಟ್ರೇಯಲ್ಲಿ ಅತಿಥಿಗಳಿಗೆ ಭಕ್ಷ್ಯ- ವಿಡಿಯೋ ನೋಡಿ

    ಮುಂಬೈ: ಇತ್ತೀಚೆಗೆ ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಮುಖ್ಯಸ್ಥ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಪುತ್ರ ಆಕಾಶ್ ಅಂಬಾನಿ ನಿಶ್ಚಿತಾರ್ಥ ಸಮಾರಂಭದಲ್ಲಿ ಆಕಾಶದಿಂದ ಬಲೂನ್ ಟ್ರೇಗಳ ಮೂಲಕ ಊಟ ಬರುವ ವ್ಯವಸ್ಥೆ ಮಾಡಲಾಗಿತ್ತು.

    ಗುರುವಾರ ಮುಂಬೈನಲ್ಲಿ ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಮಹ್ತಾ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿದೆ. ನಿಶ್ಚಿತಾರ್ಥದಲ್ಲಿ ವರ್ಣ ರಂಜಿತವಾದ ಪುಷ್ಪಾಲಂಕಾರವನ್ನು ಮಾಡಲಾಗಿತ್ತು. ಇದು ಎಲ್ಲರ ಕಣ್ಮನವನ್ನು ಸೆಳೆಯುತ್ತಿತ್ತು. ಇದರ ಜೊತೆಗೆ ಬಂದಿದ್ದ ಅತಿಥಿಗಳಿಗೆ ಬಲೂನ್ ಗಳ ಮೂಲಕ ಆಹಾರದ ಟ್ರೇಗಳು ಗಾಳಿಯಲ್ಲಿ ಬಂದು ಅವರ ಕೈಗೆ ಸೇರುತ್ತಿದ್ದವು.

    ಈ ಆಹಾರದ ಟ್ರೇಗಳು ಗಾಳಿಯಲ್ಲಿ ಬಂದು ಬೀಳುತ್ತಿದ್ದ ವಿಡಿಯೋ ಬೆಳಕಿಗೆ ಬಂದಿದ್ದು, ಈಗ ವಿಡಿಯೋ ವೈರಲ್ ಆಗಿದೆ. ನಿಶ್ಚಿತಾರ್ಥದಲ್ಲಿ ಫ್ರೆಂಚ್ ಐಷಾರಾಮಿ ಆಹಾರದ ಬ್ರಾಂಡ್ `ಲಡುರೀ’ ಯನ್ನು ಪಾರ್ಟಿಯಲ್ಲಿದ್ದ ಅತಿಥಿಗಳಿಗೆ ನೀಡಲಾಯಿತು.

    ಇನ್ನು ನಿಶ್ಚಿತಾರ್ಥ ನಡೆದ ವೇದಿಕೆಯನ್ನು ವಿವಿಧ ರೀತಿಯ ವರ್ಣ ರಂಜಿತವಾದ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ನಿಶ್ಚಿತಾರ್ಥದ ಕೇಕ್ ಕೂಡ ಆಕರ್ಷಕವಾಗಿ ವಿನ್ಯಾಸ ಮಾಡಿಸಲಾಗಿತ್ತು. ಪಾರ್ಟಿಯಲ್ಲಿ ಎಲ್ಲೆಲ್ಲೂ ಹೂಗಳಿಂದ ಅಲಂಕೃತಗೊಂಡಿತ್ತು.

    ಆಕಾಶ್ ಹಾಗೂ ಶ್ಲೋಕಾ ನಿಶ್ಚಿತಾರ್ಥ ಮುಕೇಶ್ ಅಂಬಾನಿ ನಿಶ್ಚಿತಾರ್ಥದಲ್ಲಿ ಬಾಲಿವುಡ್ ತಾರೆಯರು, ಕ್ರಿಕೆಟರ್ ಹಾಗೂ ಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಚಿನ್ ತೆಂಡೂಲ್ಕರ್ ಹಾಗೂ ಅವರ ಪತ್ನಿ ಅಂಜಲಿ ಭಾಗಿಯಾಗಿದ್ದರು. ಇನ್ನೂ ಬಾಲಿವುಡ್ ತಾರೆಗಳಾದ ಶಾರೂಖ್ ಖಾನ್, ಪ್ರಿಯಂಕಾ ಚೋಪ್ರಾ, ನಿಕ್ ಜೋನಸ್, ಕರಣ್ ಜೋಹರ್, ಅಲಿಯಾ ಭಟ್ ಹಾಗೂ ರಣ್‍ಬೀರ್ ಕಪೂರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

    ಕಾರ್ಯಕ್ರಮಕ್ಕೆ ಅಭಿಷೇಕ್ ಬಚ್ಚನ್ ಪತ್ನಿ ಐಶ್ಚರ್ಯಾ ರೈ ಬಚ್ಚನ್ ಮತ್ತು ಮಗಳು ಆರಾಧ್ಯಳೊಂದಿಗೆ ಆಗಮಿಸಿದ್ದರು. ಅಮೀರ್ ಖಾನ್, ಕಿರಣ್ ರಾವ್, ಹಿರಿಯ ನಟಿ ರೇಖಾ, ಪರಿಣೀತಿ ಚೋಪ್ರಾ, ಆದಿತ್ಯ ರಾಯ್ ಕಪೂರ್, ಸಿದ್ದಾರ್ಥ್ ಮತ್ತು ಶ್ರದ್ಧಾ ಕಪೂರ್ ಇನ್ನು ಅನೇಕ ಇನ್ನು ಗಣ್ಯರು ಪಾಲ್ಗೊಂಡಿದ್ದರು.

    ಮುಕೇಶ್ ಹಾಗೂ ನೀತಾ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ನಿಶ್ಚಿತಾರ್ಥ ಕೂಡ ಉದ್ಯಮಿ ಅಜಯ್ ಪಿರಾಮಲ್ ಅವರ ಪುತ್ರ ಆನಂದ್ ಜೊತೆ ಮೇ ತಿಂಗಳಲ್ಲಿ ನಡೆದಿತ್ತು. ಸದ್ಯ ಈಗ ಆಕಾಶ್- ಶ್ಲೋಕಾ, ಇಶಾ ಹಾಗೂ ಆನಂದ್ ಮದುವೆ ಇದೇ ವರ್ಷ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.

    https://www.youtube.com/watch?v=opEIKlOe6CM

  • ಬರೋಬ್ಬರಿ 5 ಕೋಟಿ ರೂ. ನಲ್ಲಿ ಕಂಗೊಳಿಸುತ್ತಿದೆ ಮುತ್ತುಮಾರಿಯಮ್ಮ ದೇವಿ

    ಬರೋಬ್ಬರಿ 5 ಕೋಟಿ ರೂ. ನಲ್ಲಿ ಕಂಗೊಳಿಸುತ್ತಿದೆ ಮುತ್ತುಮಾರಿಯಮ್ಮ ದೇವಿ

    ಚೆನ್ನೈ: ತಮಿಳರಿಗೆ ಶನಿವಾರ ಹೊಸ ವರ್ಷದ ಸಂಭ್ರಮ. ಹೀಗಾಗಿ ತಮಿಳುನಾಡು ರಾಜ್ಯಾದ್ಯಂತ ಹೊಸ ವರ್ಷದ ಸಂಭ್ರಮ ಕಳೆಗಟ್ಟಿತ್ತು.

    ಹೊಸ ವರ್ಷವನ್ನು ಕೊಯಂಬತ್ತೂರಿನಲ್ಲಿ ವಿಭಿನ್ನವಾಗಿ ಆಚರಿಸಲಾಗಿದೆ. ಪ್ರಸಿದ್ಧ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬರೋಬ್ಬರಿ 4 ಕೋಟಿ ರೂ.ಮೌಲ್ಯದ ನೋಟುಗಳಿಂದ ಮುತ್ತು ಮಾರಿಯಮ್ಮನಿಗೆ ಅಲಂಕಾರ ಮಾಡಲಾಗಿತ್ತು.

    ಶ್ರೀ ಮುತ್ತುಮರಿಯಮ್ಮನ್ ದೇವಾಲಯವು ಪುರಾತನ ಕಾಲದ ಮಂದಿರವಾಗಿದೆ. ಇಲ್ಲಿಗೆ ದೂರದ ಪ್ರದೇಶಗಳಿಂದ ಸ್ಥಳೀಯರು ಮತ್ತು ಭಕ್ತರು ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ. ವಿಶೇಷವಾಗಿ ಉತ್ಸವಗಳಲ್ಲಿ ಪ್ರವಾಸಿಗರು ಬರುತ್ತಾರೆ. ಆದ್ದರಿಂದ ಹೊಸ ವರ್ಷದ ಆಚರಣೆ ಪ್ರಯುಕ್ತ ಅನೇಕ ಭಕ್ತರು ಮತ್ತು ಪ್ರವಾಸಿಗರು ಬಂದಿದ್ದರು.


    ಗರಿ ಗರಿಯ 2 ಸಾವಿರ 500 ಮತ್ತು 200 ರೂ. ನೋಟುಗಳಲ್ಲಿ ಮುತ್ತು ಮಾರಿಯಮ್ಮನನ್ನು ಅಲಂಕರಿಸಲಾಗಿತ್ತು. ಒಟ್ಟು 4 ಕೋಟಿ ರೂ. ಮೌಲ್ಯದ ನೋಟುಗಳ ಜೊತೆಗೆ 1 ಕೋಟಿ ಮೌಲ್ಯದ ವಜ್ರ ಹಾಗೂ ಮುತ್ತುಗಳನ್ನು ಅಲಂಕಾರದಲ್ಲಿ ಬಳಸಲಾಗಿತ್ತು.

    ಸಕಲ ಸಂಪನ್ನೆಯಾಗಿ ಮೈದಳೆದಿರುವ ನೋಟಿನ ದೇವಿಯನ್ನು ಕಣ್ತುಂಬಿಕೊಳ್ಳಲು ಭಕ್ತರ ದಂಡೇ ದೇವಸ್ಥಾನಕ್ಕೆ ಹರಿದು ಬಂದಿತ್ತು. ಭಕ್ತರಂತೂ ಬಿಟ್ಟ ಕಣ್ಣನ್ನು ಬಿಟ್ಟಂತೆ ದೇವಿಯನ್ನು ನೋಡಿ ಕೈ ಮುಗಿದಿದ್ದಾರೆ.