Tag: death

  • ವಿದ್ಯುತ್ ಕಂಬ ದುರಸ್ತಿ ವೇಳೆ ಶಾಕ್: ಮೆಸ್ಕಾಂ ಕಾರ್ಮಿಕ ಸಾವು

    ವಿದ್ಯುತ್ ಕಂಬ ದುರಸ್ತಿ ವೇಳೆ ಶಾಕ್: ಮೆಸ್ಕಾಂ ಕಾರ್ಮಿಕ ಸಾವು

    ಮಂಗಳೂರು: ಕಂಬ ಹತ್ತಿ ದುರಸ್ತಿ ಮಾಡುವ ವೇಳೆಯಲ್ಲಿ ವಿದ್ಯುತ್ ತಂತಿ ತಗುಲಿ ಮೆಸ್ಕಾಂ ಕಾರ್ಮಿಕ ಮೃತಪಟ್ಟಿರುವ ಘಟನೆ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಸೊರಕೆ ಪರಂಟೋಲು ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ.

    ಶ್ರೀಶೈಲ್ (28) ಸಾವನ್ನಪ್ಪಿದ ಕಾರ್ಮಿಕ. ಮೂಲತಃ ಬಾಗಲಕೋಟೆ ಜಿಲ್ಲೆಯ ನಿವಾಸಿಯಾದ ಶ್ರೀಶೈಲ್ ಕಳೆದ ಒಂದು ವರ್ಷಗಳಿಂದ ಪುತ್ತೂರು ಮೆಸ್ಕಾಂ ವಿಭಾಗದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

    ವಿದ್ಯುತ್ ಕಂಬದ ಮೇಲೆ ಹತ್ತಿ ದುರಸ್ತಿ ಮಾಡುವ ವೇಳೆಯಲ್ಲಿ ಪಕ್ಕದಲ್ಲಿ ಹಾದು-ಹೋಗಿದ್ದ ಎಚ್‍ಟಿ ಲೈನ್ ತಂತಿ ಸ್ಪರ್ಶಿಸಿ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಳಿಸದೇ ದುರಸ್ಥಿ ಕಾರ್ಯ ಮಾಡಿದ್ದರಿಂದಲೇ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಹೇಳುತ್ತಾರೆ.

    ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಹಾಗೂ ಪುತ್ತೂರು ಗ್ರಾಮಾಂತರ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ವಿಜಯಪುರ: ಬಾವಿಗೆ ಈಜಲು ಹೋದವ ಶವವಾಗಿ ಬಂದ

    ವಿಜಯಪುರ: ಬಾವಿಗೆ ಈಜಲು ಹೋದವ ಶವವಾಗಿ ಬಂದ

    ವಿಜಯಪುರ: ಬಾವಿಗೆ ಈಜಲು ಹೋಗಿದ್ದ ಬಾಲಕನೊಬ್ಬ ಮನೆಗೆ ಶವವಾಗಿ ಮನೆಗೆ ಹಿಂದಿರುಗಿದ ಘಟನೆ ವಿಜಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕದರಗುಂಡ ಗ್ರಾಮದಲ್ಲಿ ನಡೆದಿದೆ.

    ಫೈಜಲ್ (14) ಮೃತಪಟ್ಟ ಬಾಲಕ. ಫೈಜಲ್ ಇಂದು ಬೆಳಿಗ್ಗೆ ಗ್ರಾಮದ ಹೊರವಲಯದ ಬಾವಿಯಲ್ಲಿ ತನ್ನ ಗೆಳಯರೊಂದಿಗೆ ಈಜಲು ಹೋಗಿದ್ದಾನೆ. ಸುಮಾರು ಒಂದು ಗಂಟೆಗಳ ಕಾಲ ಎಲ್ಲರೂ ಬಾವಿಯಲ್ಲಿ ಈಜಲು ಹೋಗಿದ್ದಾರೆ. ಕೊನೆಗೆ ಫೈಜಲ್ ಹೊರಗೆ ಬರಲಾರದೇ ಸಾವನ್ನಪ್ಪಿದ್ದಾನೆ. ಬಾವಿಯಲ್ಲಿನ ಕೆಸರಿನಲ್ಲಿ ಸಿಕ್ಕಿದ್ದರಿಂದ ಮೇಲೆ ಬರಲಾರದೇ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

    ಈಜಲು ಹೋದ ಮಗ ಶವವಾಗಿ ಬಂದಿದ್ದರಿಂದ ಫೈಜಲ್ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಸ್ಥಳಕ್ಕೆ ಕಲಕೇರಿ ಠಾಣೆಯ ಪೊಲೀಸರು ಅಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

     

  • ಕಾಲು ಜಾರಿ ರಾಜಕಾಲುವೆಗೆ ಬಿದ್ದು ಬಾಲಕ ಸಾವು

    ಕಾಲು ಜಾರಿ ರಾಜಕಾಲುವೆಗೆ ಬಿದ್ದು ಬಾಲಕ ಸಾವು

    ಬೆಂಗಳೂರು: ಆ ಕುಟುಂಬ ದೂರದ ಊರಿನಿಂದ ಕೆಲಸ ಅರಸಿ ಬೆಂಗಳೂರಿಗೆ ಬಂದಿತ್ತು. ಅದರಂತೆ ಕೆಲಸ ಮಾಡಿ ತಮ್ಮ ಮಗನನ್ನು ಒಳ್ಳೆಯ ವಿದ್ಯಾವಂತನನ್ನಾಗಿ ಮಾಡಬೇಕು ಅಂತ ಕನಸು ಕಟ್ಟಿಕೊಂಡಿದ್ರು. ಅದರೆ ವಿಧಿಬರಹವೇ ಬೇರೆಯಾಗಿತ್ತು. ಅವರ ಮಗನನ್ನು ಸಾವಿನ ಮನೆ ಸೇರಿಸಿದೆ.

    ಗುಂಪು ಕಟ್ಟಿಕೊಂಡು ನಿಂತಿರೋ ಜನ. ಮಗುವನ್ನು ಅವಸರದಲ್ಲಿ ಎತ್ತಿಕೊಂಡು ಓಡುತ್ತಿರೋ ಅಗ್ನಿಶಾಮಕ ಸಿಂಬಂದಿ. ಮಗು ಬದುಕಿದ್ರೆ ಸಾಕು ಅಂತ ದೇವರನ್ನು ನೆನೆಯುತ್ತಿರೋ ಅಲ್ಲಿನ ಸ್ಥಳೀಯರು, ಈ ಎಲ್ಲ ದೃಶ್ಯಗಳು ಕಂಡುಬಂದಿದ್ದು ಬೆಂಗಳೂರಿನ ಕೆಂಗೇರಿ ಬಳಿಯ ನಾಗದೇವನಹಳ್ಳಿಯ ರಾಜ ಕಾಲುವೆ ಬಳಿ.

    ಬುಧವಾರ ಸಂಜೆ 4:30 ಸುಮಾರಿಗೆ ನಾಗದೇವನಹಳ್ಳಿ ರಾಜಾಕಾಲುವೆ ಬಳಿ 7 ವರ್ಷದ ಬಾಲಕ ರಾಕೇಶ್ ಮಲವಿಸರ್ಜನೆಗೆ ತೆರಳಿದ್ದ. ಇದೇ ವೇಳೆ ರಾಕೇಶ್ ಕಾಲು ಜಾರಿ ಕಾಲುವೆಗೆ ಬಿದ್ದು ಸಾವನಪ್ಪಿದ್ದ. ಮಲವಿಸರ್ಜನೆಗೆ ತೆರಳಿದ್ದ ಮಗ 1 ಗಂಟೆಯಾದ್ರೂ ಬರದ ಹಿನ್ನೆಲೆಯಲ್ಲಿ ರಾಕೇಶ್ ಕುಟುಂಬದವರು ಕಾಲುವೆ ಬಳಿ ಹೋಗಿ ನೋಡಿದಾಗ ರಾಕೇಶ್ ಕಾಲುವೆಗೆ ಬಿದ್ದಿರುವುದು ತಿಳಿಯಿತು. ಬಳಿಕ ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಂಬ್ಬಂದಿ ಮತ್ತು ಪೊಲೀಸರು ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನೆಡೆಸಿ ಕಾಲುವೆಯಲ್ಲಿ ಬಿದ್ದದ್ದ ರಾಕೇಶ್ ಮೃತ ದೇಹವನ್ನು ಹೊರತೆಗೆದ್ರು.

    ಮೃತ ಬಾಲಕ ರಾಕೇಶ್ ಮೂಲತಃ ಗುಲ್ಬರ್ಗ ಜಿಲ್ಲೆಯ ಹೊಡಗಿ ಗ್ರಾಮದ ನಿವಾಸಿಗಳಾದ ಭಿಮಾರಾಯ ಮತ್ತು ನಾಗಮ್ಮ ದಂಪತಿಯ ಮಗ. ಮೃತ ರಾಕೇಶ್ ತಂದೆ ಕುಟುಂಬ ಸಮೇತ ಬೆಂಗಳೂರಿನ ನಾಗದೇವನಹಳ್ಳಿಗೆ ಗಾರೆ ಕೆಲಸಕ್ಕಾಗಿ ಬಂದು ಕೆಲಸ ಮಾಡುತ್ತಿದ್ದರು.

    ಘಟನೆ ಕುರಿತು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೊತೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮೇಯರ್ ಪದ್ಮಾವತಿ ಮೃತ ರಾಕೇಶ್ ಕುಟುಂಬಕ್ಕೆ ಒಂದು ಸ್ಲಮ್ ಬೋರ್ಡ್ ಮನೆ ಮತ್ತು ಪರಿಹಾರ ನೀಡಿ ಕಾಲುವೆ ಒತ್ತುವರಿ ಮಾಡಿರುವವರ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳವುದಾಗಿ ಭರವಸೆ ನೀಡಿದ್ರು. ಸ್ಥಳದಲ್ಲೇ 1 ಲಕ್ಷ ರೂಪಾಯಿಯನ್ನು ತತ್ಕಾಲಿಕ ಪಾರಿಹಾರವಾಗಿ ಘೋಷಿಸಿದ್ರು.

  • ಭೂತ ಕೋಲದ ವೇಳೆ ದುರಂತ: ತೆಂಗಿನ ಮರದಿಂದ ದೈವ ಪಾತ್ರಿ ಬೀಳೋದನ್ನು ನೋಡಿ

    ಭೂತ ಕೋಲದ ವೇಳೆ ದುರಂತ: ತೆಂಗಿನ ಮರದಿಂದ ದೈವ ಪಾತ್ರಿ ಬೀಳೋದನ್ನು ನೋಡಿ

    ಮಂಗಳೂರು: ಭೂತ ಕೋಲದ ವೇಳೆ ತೆಂಗಿನ ಮರದಿಂದ ಬಿದ್ದು ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ದೈವ ಪಾತ್ರಿಯೊಬ್ಬರು ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

    ಸುಮೇಶ್(40) ಮೃತಪಟ್ಟ ದೈವ ಪಾತ್ರಿ. ಕೇರಳದ ಕಣ್ಣೂರು ಜಿಲ್ಲೆಯ ಅಳಿಕೋಡಿ ಎಂಬಲ್ಲಿ ಫೆಬ್ರವರಿ 21ರ ಮುಂಜಾನೆ ಈ ದುರ್ಘಟನೆ ಸಂಭವಿಸಿತ್ತು.

    ಆಗಿದ್ದೇನು? ಕೇರಳದಲ್ಲಿ ಬಪ್ಪರ್ಯನ್ ಭೂತ ಕೋಲದ ಸಂಪ್ರದಾಯದಂತೆ ತೆಂಗಿನ ಮರಕ್ಕೆ ಏರಿ ನರ್ತನ ಮಾಡುವ ಪದ್ದತಿ ಇದೆ. ದೈವ ಪಾತ್ರಿ ಸುಮೇಶ್, ತೆಂಗಿನ ಮರ ಏರಿ ನರ್ತನ ಮಾಡುವ ಸಂದರ್ಭದಲ್ಲಿ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ.

    ಸುಮೇಶ್ ನೇರವಾಗಿ ತೆಂಗಿನ ಮರ ಕೆಳಗೆ ಹಾಕಲಾಗಿದ್ದ ಬೆಂಕಿಯ ಕುಂಡಕ್ಕೆ ಬಿದ್ದಿದ್ದು, ಕೂಡಲೇ ಅವರನ್ನು ಕಣ್ಣೂರಿನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸುಮೇಶ್ ಇಂದು ಸಾವನ್ನಪ್ಪಿದ್ದಾರೆ.

     

    ತೆಂಗಿನ ಮರದಿಂದ ದೈವ ಪಾತ್ರಿ ಬಿದ್ದು ಮೃತಪಡುವ ಎರಡನೇ ಪ್ರಕರಣ ಇದಾಗಿದೆ. ಇಲ್ಲಿ ಪಾತ್ರಧಾರಿ ತೆಂಗಿನ ಮರದಿಂದ ಬೀಳುತ್ತಿರುವ ವಿಡಿಯೋ ಮತ್ತು ಈ  ಭೂತಕೋಲ ಹೇಗೆ ನಡೆಯುತ್ತದೆ ಎಂದು ತೋರಿಸುವ ಮತ್ತೊಂದು ವಿಡಿಯೋವನ್ನು ನೀಡಲಾಗಿದೆ.

    https://www.youtube.com/watch?v=-0-JdrxIBAo

     

     

  • ಯಾದಗಿರಿ: ಅಂತ್ಯಕ್ರಿಯೆ ಸಿದ್ಧತೆಯಲ್ಲಿದ್ದಾಗ ಎದ್ದು ಕುಳಿತ ಮನೆ ಯಜಮಾನ!

    ಯಾದಗಿರಿ: ಅಂತ್ಯಕ್ರಿಯೆ ಸಿದ್ಧತೆಯಲ್ಲಿದ್ದಾಗ ಎದ್ದು ಕುಳಿತ ಮನೆ ಯಜಮಾನ!

    ಯಾದಗಿರಿ: ಮನೆಯ ಯಜಮಾನ ಮೃತಪಟ್ಟಿದ್ದಾನೆಂದು ಕುಟುಂಬಸ್ಥರೆಲ್ಲರು ರೋದಿಸುತ್ತಾ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದಾಗ ಮನೆಯ ಯಜಮನ ಎದ್ದು ಕುಳಿತ ವಿಚಿತ್ರ ಘಟನೆ ಸೋಮವಾರ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮದಲಿಂಗನಾಳ ಗ್ರಾಮದಲ್ಲಿ ನಡೆದಿದೆ.

    ನಿಂಗಪ್ಪ (55) ಎನ್ನುವವರೇ ಎದ್ದು ಕುಳಿತ ವ್ಯಕ್ತಿ. ನಿಂಗಪ್ಪ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ನಿಂಗಪ್ಪ ಅವರನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿದ್ರು. ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ತುರ್ತು ಹೃದಯ ಶಸ್ತ್ರ ಚಿಕಿತ್ಸೆ ಮಾಡಬೇಕು ಇಲ್ಲದಿದ್ದರೆ ಬದುಕುವ ಸಾಧ್ಯತೆ ಕಡಿಮೆ ಎಂದಿದ್ದರು.

    ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ನಿಂಗಪ್ಪರನ್ನು ಅಂಬುಲೆನ್ಸ್ ಮುಖಾಂತರ ಊರಿಗೆ ತರಲಾಗಿತ್ತು. ಊರಿಗೆ ಬರುವ ಮಾರ್ಗ ಮಧ್ಯೆಯೇ ನಿಂಗಪ್ಪ ಸಾವನ್ನಪ್ಪಿದ್ದಾರೆಂದು ತಿಳಿದ ಕುಟುಂಬಸ್ಥರು ಸಂಬಂಧಿಕರಿಗೆ ಸುದ್ದಿ ತಿಳಿಸಿ ಅಂತ್ಯಕ್ರಿಯೆಗೆ ಸಿದ್ದತೆ ಮಾಡಿಕೊಂಡಿದ್ರು.

    ನಿಂಗಪ್ಪ ಅವರು ಎದ್ದು ಕುಳಿತಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಶೋಕಸಾಗರದಲ್ಲಿ ಮುಳಗಿದ್ದ ಕುಟುಂಬಸ್ಥರ ಮುಖದಲ್ಲಿ ಸಂತೋಷ ಮೂಡಿದೆ. ಈಗ ನಿಂಗಪ್ಪ ಅವರು ಕುಟುಂಬಸ್ಥರೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ.

     

     

  • ಕೊಪ್ಪಳ: ಮಗುವಿನ ಶವ ಸಾಗಿಸಲು ಅಂಬುಲೆನ್ಸ್ ಇದ್ದರೂ ಜಿಲ್ಲಾಸ್ಪತ್ರೆಯಲ್ಲಿ ಪರದಾಡಿದ ತಾಯಿ

    ಕೊಪ್ಪಳ: ಮಗುವಿನ ಶವ ಸಾಗಿಸಲು ಅಂಬುಲೆನ್ಸ್ ಇದ್ದರೂ ಜಿಲ್ಲಾಸ್ಪತ್ರೆಯಲ್ಲಿ ಪರದಾಡಿದ ತಾಯಿ

    ಕೊಪ್ಪಳ: ತೀವ್ರ ಜ್ವರದಿಂದ ಬಳಲಿ ಮೃತಪಟ್ಟಿದ್ದ ಮಗುವಿನ ಶವವನ್ನು ಸಾಗಿಸಲು ತಾಯಿ ಶ್ರದ್ಧಾಂಜಲಿ ವಾಹನಕ್ಕಾಗಿ ಜಿಲ್ಲಾಸ್ಪತ್ರೆಯಲ್ಲಿ ಪರದಾಡಿದ್ದಾರೆ.

    ಜಿಲ್ಲೆಯ ಗಂಗಾವತಿ ನಗರದ ನಿವಾಸಿಯಾಗಿರುವ ಮಮ್ತಾಜ್ ಜ್ವರದಿಂದ ಬಳಲುತ್ತಿದ್ದ ಒಂದು ವರ್ಷದ ಮಗು ಖಾಜಾವಲಿಯನ್ನ ಕೊಪ್ಪಳದ ಜಿಲ್ಲಾಸ್ಪತ್ರೆಗೆ ತಂದಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಮಗು ಸಾವನ್ನಪ್ಪಿದೆ ಅಂತ ಹೇಳಿದ್ದಾರೆ. ದಿಕ್ಕು ತೋಚದ ಪೋಷಕರು ಅಲ್ಲೆ ಅಳಲು ಆರಂಭಿಸಿದ್ದಾರೆ.

    ಕಡು ಬಡತನವಿರು ಮಮ್ತಾಜ್ ಮಗುವಿನ ಶವ ಸಾಗಿಸಲು ಹಣವಿಲ್ಲದೆ ಆಸ್ಪತ್ರೆಯ ವಾಹನ ಕೇಳಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ವಾಹನ ಇಲ್ಲದೇ ಮೂರು ಗಂಟೆಗೂ ಹೆಚ್ಚು ಶವವಿಟ್ಟುಕೊಂಡು ರೋಧಿಸುತ್ತಾ ಕುಳಿತಿದ್ದಾರೆ. ಮಮ್ತಾಜ್ ರೋಧಿಸುತ್ತಿದ್ದರೂ ಅವರ ಸಹಾಯಕ್ಕೆ ಆಸ್ಪತ್ರೆಯ ಯಾವ ಸಿಬ್ಬಂದಿಯೂ ಬರಲಿಲ್ಲ.

    ಈ ವಿಚಾರ ತಿಳಿದ ಪಬ್ಲಿಕ್ ಟಿವಿ ಮಗುವಿನ ಮೃತ ದೇಹವನ್ನು ಸಾಗಿಸಲು ವೈದ್ಯರನ್ನು ಸಂಪರ್ಕಿಸಿತ್ತು. ನಮ್ಮಲ್ಲಿ ಶವ ಸಾಗಿಸಲು ವಾಹನವಿದೆ. ಆದರೆ ಚಾಲಕ ಇಲ್ಲ ಎಂದು ಜಿಲ್ಲಾ ಸರ್ಜನ್ ಡಾ.ಎಸ್.ಬಿ.ದಾನರೆಡ್ಡಿ ಹೇಳಿದ್ದಾರೆ. ಕೊನೆಗೆ ಪಬ್ಲಿಕ್ ಟಿವಿಯೇ ಶವವನ್ನು ಸಾಗಿಸಲು ಮುಂದಾದಾಗ ಸರ್ಜನ್ ದಾನರೆಡ್ಡಿ ಖಾಸಗಿ ಆಸ್ಪತ್ರೆಯ ಅಂಬುಲೆನ್ಸ್ ತರಿಸಿ ಶವ ಸಾಗಿಸಿ ಕೊಟ್ಟಿದ್ದಾರೆ.

     

  • ನೀರಿಗಾಗಿ ಕಾಡಿನಿಂದ ನಾಡಿಗೆ ಬಂದ ಜಿಂಕೆ ನಾಯಿ ದಾಳಿಗೆ ಸಾವು

    ನೀರಿಗಾಗಿ ಕಾಡಿನಿಂದ ನಾಡಿಗೆ ಬಂದ ಜಿಂಕೆ ನಾಯಿ ದಾಳಿಗೆ ಸಾವು

    ಚಿಕ್ಕಮಗಳೂರು: ರಾಜ್ಯದಲ್ಲಿ ಭೀಕರ ಬರಗಾಲ ಎದುರಾದ ಹಿನ್ನೆಲೆ ಹನಿ ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಾಡಿನಲ್ಲೂ ನೀರಿಲ್ಲದೆ ಪ್ರಾಣಿಗಳು ನೀರಿಗಾಗಿ ಕಾಡಿನಿಂದ ನಾಡಿನ ಕಡೆಗೆ ಮುಖ ಮಾಡಿವೆ. ಕಳೆದ ಒಂದು ವಾರದಲ್ಲಿ ನಾಯಿಗಳ ದಾಳಿಯಿಂದ ಮೂರು ಜಿಂಕೆಗಳು ಸಾವನ್ನಪ್ಪಿವೆ.

    ಕಾಡಿನಲ್ಲಿ ಕುಡಿಯಲು ನೀರಿಲ್ಲದೇ ನಾಡಿನತ್ತ ಬಂದ ಜಿಂಕೆಯೊಂದು ನಾಯಿಗಳ ದಾಳಿಗೆ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸಾರಗೋಡು ಗ್ರಾಮದಲ್ಲಿ ನಡೆದಿದೆ.

    ನೀರು ಅರಸಿ ನಾಡಿನತ್ತ ಬರುತ್ತಿರುವ ಜಿಂಕೆ, ಕಡವೆ ಮುಂತದ ಪ್ರಾಣಿಗಳು ಗ್ರಾಮಗಳಲ್ಲಿಯ ನಾಯಿಗಳ ದಾಳಿಗೆ ಸಾವನ್ನಪ್ಪಿತ್ತಿರುವುದು ಆಂತಕಕಾರಿ ವಿಷಯವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಆಲ್ದೂರು ವಲಯದ ಅರಣ್ಯಾಧಿಕಾರಿಗಳು ಜಿಂಕೆ ಶವ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ಮಾಡಿದರು.

     

  • ಶಾಲಾ ಬಸ್ ಡಿಕ್ಕಿ ಹೊಡೆದು ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕ ಸಾವು

    ಶಾಲಾ ಬಸ್ ಡಿಕ್ಕಿ ಹೊಡೆದು ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕ ಸಾವು

    ಕೋಲಾರ: 6 ವರ್ಷದ ಬಾಲಕನಿಗೆ ಶಾಲಾ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಮಾಲೂರಿನ ನಂಬಿಗೇನಹಳ್ಳಿಯಲ್ಲಿ ನಡೆದಿದೆ.

    ಮೃತ ದುರ್ಧೈವಿ ಬಾಲಕನನ್ನು ಸಂತೋಷ್(6) ಎಂಬುವುದಾಗಿ ಗುರುತಿಸಲಾಗಿದೆ. ಈತ ರಸ್ತೆಬದಿಯಲ್ಲಿ ನಡೆದು ಹೋಗುತ್ತಿದ್ದ ವೇಳೆ ವ್ಕಕಲೇರಿ ಶ್ರೀರಾಮಕೃಷ್ಣ ವಿದ್ಯಾ ಸಂಸ್ಥಗೆ ಸೇರಿದ ಶಾಲಾ ಬಸ್ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಬಳಿಕ ಬಸ್ ಚಾಲಕ ಅಲ್ಲಿಂದ ಕಾಲ್ಕಿತ್ತಿದ್ದಾನೆ.

    ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಧಾರವಾಡ: ರೈಲ್ವೇ ಹಳಿಯಲ್ಲಿ ವ್ಯಕ್ತಿಯ ಶವ ಪತ್ತೆ: ಕೊಲೆ ಶಂಕೆ

    ಧಾರವಾಡ: ರೈಲು ಹಳಿಯ ಮೇಲೆ ವ್ಯಕ್ತಿಯ ಶವವೊಂದು ಪತ್ತೆಯಾಗಿರುವ ಘಟನೆ ಧಾರವಾಡದ ನವಲೂರು ಗ್ರಾಮದ ಹತ್ತಿರ ಸೋಮವಾರ ಪತ್ತೆಯಾಗಿದೆ.

    ಮಹ್ಮದ್ ರಸೂಲ್ (28) ಮೃತ ವ್ಯಕ್ತಿ. ಮಹ್ಮದ್ ರಸೂಲ್ ಧಾರವಾಡ ನಗರದ ಅಗಸಿ ಬಡಾವಣೆಯ ನಿವಾಸಿ ಎಂದು ತಿಳಿದು ಬಂದಿದೆ. ರವಿವಾರ ಮನೆಯಿಂದ ಹೊರ ಹೋಗಿದ್ದ ರಸೂಲ್ ಸೋಮವಾರ ರೈಲು ಹಳಿಯ ಮೇಲೆ ಶವವಾಗಿ ಪತ್ತಯಾಗಿದ್ದಾನೆ. ರಸೂಲ್ ಪಾಲಕರು ನಮ್ಮ ಮಗನನ್ನು ಕೊಲೆ ಮಾಡಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

    ರಸೂಲ್ ಮೇಲೆ ರೈಲುಗಳು ಹರಿದ ಪರಿಣಾಮ ದೇಹ ತುಂಡು ತುಂಡಾಗಿ ಬಿದ್ದಿದೆ. ರುಂಡ ಹಾಗೂ ಎರಡು ಕೈಗಳು ಕತ್ತರಿಸಿ ಹೋಗಿದ್ದು ಅವುಗಳು ಇನ್ನೊಂದು ಭಾಗದಲ್ಲಿ ಬಿದ್ದಿದ್ದವು. ಸಾವನ್ನಪ್ಪಿದ ರಸೂಲ್ ಧಾರವಾಡ ನಗರದಲ್ಲಿ ಪಾನ್ ಶಾಪ್ ನಡೆಸುತ್ತಿದ್ದು, ಕುಡಿತದ ದಾಸನಾಗಿದ್ದ ಎಂದು ತಿಳಿದು ಬಂದಿದೆ. ಹುಬ್ಬಳ್ಳಿ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

  • ತುಮಕೂರು: ತಾಳಿ ಕಟ್ಟುವ ಮುನ್ನವೇ ಕಲ್ಯಾಣ ಮಂಟಪದಲ್ಲಿ ವರನ ಸಾವು

    ತುಮಕೂರು: ತಾಳಿ ಕಟ್ಟಬೇಕಿದ್ದ ವರ ಕಲ್ಯಾಣ ಮಂಟಪದಲ್ಲೇ ಸಾವನ್ನಪಿರುವ ದಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ. ನಗರದ ಗವಿರಂಗ ಕಲ್ಯಾಣ ಮಂಟಪದಲ್ಲಿ ಇಂದು ಮುಹೂರ್ತ ನಡೆಯಬೇಕಿದ್ದ ವರ ಸಾವನ್ನಪ್ಪಿ ಕಲ್ಯಾಣಮಂಟಪ ಸಾವಿನ ಮನೆಯಾಗಿ ಕುಟುಂಬಸ್ಥರ ದುಃಖಕ್ಕೆ ಕಾರಣವಾಗಿದೆ.

    ಮಧುಗಿರಿ ಮೂಲದ ವಸಂತ್‍ಕುಮಾರ್ ಹಾಗೂ ತುಮಕೂರಿನ ಕಾತ್ಯಾಯಿನಿಗೆ ಇಂದು ಮದುವೆ ನಿಶ್ಚಯವಾಗಿತ್ತು. ಶನಿವಾರದಂದು ಆರತಕ್ಷತೆ ಮುಗಿಸಿದ್ದ ಜೋಡಿ ಇಂದು ಅರಶಿಣ ಶಾಸ್ತ್ರ ಮುಗಿಸಿದ್ದರು. ಮುಂಜಾನೆ ಶಾಸ್ತ್ರ ಮುಗಿಸಿ ಮುಹೂರ್ತಕ್ಕೆ ಸಿದ್ಧವಾಗ್ತಿದ್ದ ವಸಂತ್ ಕುಮಾರ್ ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪಿದ್ದಾರೆ.

    ಸದ್ಯ ಕಲ್ಯಾಣಮಂಟಪದಲ್ಲಿ ನೀರವ ಮೌನ ಆವರಿಸಿದ್ದು, ಕುಟುಂಬಸ್ಥರು ದುಃಖದ ಮಡುವಿನಲ್ಲಿ ಮುಳುಗಿದ್ದಾರೆ. ಕಾತ್ಯಾಯಿನಿ ಮತ್ತು ವಸಂತ್ ಕುಮಾರ್ ಇಬ್ಬರೂ ಎಂ.ಟೆಕ್ ಪದವೀಧದಾರಾಗಿದ್ದು, ವಸಂತ್ ಕುಮಾರ್ ಸಾವಿನಿಂದ ಇದೀಗ ಮದುವೆ ಮುರಿದುಬಿದ್ದಿದೆ.