Tag: Death Audit

  • ರಾಜ್ಯ ಆರೋಗ್ಯ ಇಲಾಖೆಯಿಂದ ಡೆಂಗ್ಯೂ ಡೆತ್ ಆಡಿಟ್

    ರಾಜ್ಯ ಆರೋಗ್ಯ ಇಲಾಖೆಯಿಂದ ಡೆಂಗ್ಯೂ ಡೆತ್ ಆಡಿಟ್

    – ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂಗೆ ಬಲಿಯಾದವರ ಮಾಹಿತಿ ನೀಡಲು ಸೂಚನೆ

    ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ (Dengue) ಆರ್ಭಟ ಹೆಚ್ಚಾಗುತ್ತಿದೆ. ಮತ್ತೊಂದು ಕಡೆ ಡೆಂಗ್ಯೂಗೆ ಸಾವು ಕೂಡ ಆತಂಕ ಮೂಡಿಸುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂಗೆ ಬಲಿಯಾದವರ ಮಾಹಿತಿ ನೀಡಲು ಆರೋಗ್ಯ ಸಚಿವರು (Dinesh Gundu Rao) ಸೂಚಿಸಿದ್ದಾರೆ. ಜೊತೆಗೆ ಡೆತ್ ಆಡಿಟ್ (Death Audit) ಮಾಡಲು ಮುಂದಾಗಿದ್ದಾರೆ.

    ಬೆಂಗಳೂರು (Bengaluru) ಸೇರಿದಂತೆ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಿದೆ. 5,374ಕ್ಕೂ ಹೆಚ್ಚು ಕೇಸ್ ದಾಖಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದೂವರೆ ಸಾವಿರ ಸನಿಹಕ್ಕೆ ತಲುಪಿದೆ. ಹೀಗಾಗಿ ಆತಂಕ ಮೂಡಿಸಿದೆ. ಕೇಸ್ ಒಂದು ಕಡೆ ಆದರೆ ಮತ್ತೊಂದು ಕಡೆ ಸಾವು ಕೂಡ ಸಂಭವಿಸುತ್ತಿದೆ. ಇದುವರೆಗೂ ರಾಜ್ಯದಲ್ಲಿ ಡೆಂಗ್ಯೂಗೆ ಏಳು ಸಾವಾಗಿದೆ. ಹೀಗಾಗಿ ಸಾವಿನ ಬಗ್ಗೆ ಡೆತ್ ಆಡಿಟ್ ಮಾಡೋದಕ್ಕೆ ಆರೋಗ್ಯ ಇಲಾಖೆ ಮುಂದಾಗಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್‌ – ಭಾರತದ ಪರ ವಿಶಿಷ್ಟ ದಾಖಲೆ ಬರೆದ ಹಿಟ್‌ಮ್ಯಾನ್‌

    ಖಾಸಗಿ ಆಸ್ಪತ್ರೆಗಳು ಕೂಡ ಡೆಂಗ್ಯೂ ಡೆತ್‌ಗಳನ್ನು ಮತ್ತು ಡೆಂಗ್ಯೂ ಕೇಸ್‌ಗಳನ್ನು ನೋಟಿಫೈ ಮಾಡಬೇಕಾಗುತ್ತದೆ. ಯಾವುದೇ ಖಾಸಗಿ ಆಸ್ಪತ್ರೆಗೆ ಬರುವ ಡೆಂಗ್ಯೂ ಪ್ರಕರಣದ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಜೊತೆಗೆ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಬೇಕು. ಡೆತ್ ಮಾಹಿತಿಯನ್ನು ಹಂಚಿಕೊಳ್ಳಲು ಸಚಿವರು ಸೂಚಿಸಿದ್ದು, ಖಾಸಗಿ ಆಸ್ಪತ್ರೆಯವರು ಡೆಂಗ್ಯೂ ಮಾಹಿತಿಯನ್ನು ಮುಚ್ಚಿಡುವಂತಿಲ್ಲ. ಇದನ್ನೂ ಓದಿ: ವಿಶ್ವಕಪ್‌ ಗೆದ್ದ ಬೆನ್ನಲ್ಲೇ ಟಿ20 ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಕೊಹ್ಲಿ

    ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಿದ್ದು, ಸಾಕಷ್ಟು ನಿಯಂತ್ರಣ ಕ್ರಮಗಳನ್ನು ಆರೋಗ್ಯ ಇಲಾಖೆ ಮಾಡುತ್ತಿದೆ. ಈಗ ಆಗಿರುವ ಸಾವುಗಳ ಬಗ್ಗೆ ಡೆತ್ ಆಡಿಟ್ ಮಾಡುತ್ತೇವೆ ಎಂದು ಹೇಳುತ್ತಿದ್ದು, ಆಡಿಟ್‌ನಲ್ಲಿ ಏನು ವರದಿ ಬರಲಿದೆಯೋ ಕಾದು ನೋಡಬೇಕಿದೆ. ಇದನ್ನೂ ಓದಿ: ವಿಶ್ವಕಪ್‌ ಜೊತೆ ವಿಶ್ವದಾಖಲೆ – ಟೀಂ ಇಂಡಿಯಾದ ಸಾಧನೆ ಮುರಿಯುವುದು ಬಲು ಕಷ್ಟ

  • ಬಿಹಾರದಂತೆ ರಾಜ್ಯದಲ್ಲೂ ಕೊರೊನಾ ಸಾವಿನ ಕಳ್ಳಾಟ ನಡೆದಿದ್ಯಾ?- ಹೆಲ್ತ್ ಬುಲೆಟಿನ್‍ನಲ್ಲಿ 20-30 ದಿನಗಳ ಲೆಕ್ಕ!

    ಬಿಹಾರದಂತೆ ರಾಜ್ಯದಲ್ಲೂ ಕೊರೊನಾ ಸಾವಿನ ಕಳ್ಳಾಟ ನಡೆದಿದ್ಯಾ?- ಹೆಲ್ತ್ ಬುಲೆಟಿನ್‍ನಲ್ಲಿ 20-30 ದಿನಗಳ ಲೆಕ್ಕ!

    – ಡೆತ್ ಆಡಿಟ್‍ಗೆ ತೀವ್ರಗೊಂಡ ಒತ್ತಾಯ

    ಬೆಂಗಳೂರು: ಅದು ಏಪ್ರಿಲ್ 30. ಬೆಳಗಾವಿಯಲ್ಲಿ ನಿತ್ಯ 18ರಿಂದ 20 ಮಂದಿ ಕೊರೊನಾಗೆ ಬಲಿ ಆಗ್ತಿದ್ರೂ ಹೆಲ್ತ್ ಬುಲೆಟಿನ್‍ನಲ್ಲಿ ಒಂದು-ಎರಡು ಸಾವು ಎಂದು ತೋರಿಸಲಾಗಿತ್ತು. ಅವತ್ತು ಸಹ ಪಬ್ಲಿಕ್ ಟಿವಿ ಸಾವಿನ ಸುಳ್ಳು ಲೆಕ್ಕದ ಬಗ್ಗೆ ವರದಿ ಮಾಡಿತ್ತು. ಇದೀಗ ಸಾವಿನ ಲೆಕ್ಕಗಳು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿವೆ.

    ಬಿಹಾರದಲ್ಲಿ ಡೆತ್ ಅಡಿಟ್ ನಡೆದ ಮೇಲೆ ಸಾವಿನ ಸಂಖ್ಯೆ ಸ್ಫೋಟವಾಗಿದೆ. ಹೀಗಾಗಿ ಕರ್ನಾಟಕದಲ್ಲೂ ಕೂಡ ಡೆತ್ ಅಡಿಟ್ ನಡೆದ್ರೆ, ನಿಖರ ಸಾವಿನ ಸಂಖ್ಯೆ ತಿಳಿಯಬಹುದು ಅನ್ನೋ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪೂರಕವಾಗಿ ಪ್ರತಿನಿತ್ಯ ಆರೋಗ್ಯ ಇಲಾಖೆ ನೀಡುತ್ತಿರುವ ಸಾವಿನ ಸಂಖ್ಯೆಯಲ್ಲಿ ಬಹಳಷ್ಟು ಅನುಮಾನ ಕಾಡುತ್ತಿದೆ. ದಿನದ ಸಾವಿಗಿಂತ 20-30 ದಿನಗಳ ಹಿಂದಿನ ಸಾವನ್ನು ಸೇರಿಸಿ ಹೆಲ್ತ್ ಬುಲೆಟಿನ್‍ನಲ್ಲಿ ಕೊಡಲಾಗುತ್ತಿದೆ.

    ಹಾಗಾದ್ರೆ ಇಷ್ಟು ದಿನ ಸರ್ಕಾರ ಕೊಟ್ಟ ಸಾವಿನ ಲೆಕ್ಕ ಸುಳ್ಳಾ? ಒಂದು ವೇಳೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು, ಹೋಂ ಐಸೋಲೇಷನ್‍ನಲ್ಲಿ ಮೃತಪಟ್ಟವರ ಮಾಹಿತಿ ತಡವಾಗಿ ಲಭ್ಯವಾಯಿತೆಂದು ಪರಿಗಣಿಸಿದ್ರೂ, 20, 30 ದಿನ ತಡವಾಗಿ ಮಾಹಿತಿ ಸಿಗುತ್ತಾ? ಅನ್ನೋದು ಯಕ್ಷಪ್ರಶ್ನೆ. ಇದುವರೆಗೆ ಕೋವಿಡ್ ಸಾವುಗಳ ಬಗ್ಗೆ ಸರ್ಕಾರ ಕೊಟ್ಟ ಮಾಹಿತಿ ಎಷ್ಟು ನೈಜತೆಯಿಂದ ಕೂಡಿದೆ ಅನ್ನೋ ಅನುಮಾನ ಸಹಜವಾಗಿಯೇ ಮೂಡುತ್ತದೆ. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಆದ ಸುಮಾರು 4,500 ಕೋವಿಡ್ ಸಾವುಗಳನ್ನು ಆಗ ಮುಚ್ಚಿಟ್ಟು, ಮೇ ಮತ್ತು ಜೂನ್ ತಿಂಗಳಲ್ಲಿ ರಾಜ್ಯ ಸರ್ಕಾರ ನೀಡುತ್ತಿದೆ ಎನ್ನಲಾಗುತ್ತಿದೆ.

    ಸಾವಿನ ಸುಳ್ಳು ಲೆಕ್ಕ, ಸರ್ಕಾರ ಹೇಳುವ ನೆಪ: ಖಾಸಗಿ ಆಸ್ಪತ್ರೆಗಳು ಸಕಾಲಕ್ಕೆ ಲೆಕ್ಕ ನೀಡಿಲ್ಲ. ಮನೆ ಸಾವುಗಳ ಲೆಕ್ಕ ತಡವಾಗಿ ಸಿಕ್ಕಿದೆ. ಅಂಕಿ ಅಂಶ ನೀಡಲು ಜಿಲ್ಲಾಡಳಿತಗಳ ವಿಳಂಬ ಧೋರಣೆಯೇ ಕಾರಣ ಮತ್ತು ಸಿಬ್ಬಂದಿ ಕೊರತೆ ಹಿನ್ನೆಲೆ ಪೋರ್ಟಲ್ ಗೆ ಅಪ್‍ಲೋಡ್ ತಡವಾಗಿದೆ. ಇನ್ನು ಕೆಲವು ಕಡೆ ತಾಂತ್ರಿಕ ದೋಷ ಕಾರಣ ಎಂದು ನೆಪಗಳನ್ನು ಸರ್ಕಾರ ಹೇಳುತ್ತಿದೆ.

    ಹಾಸನದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಯಾರು ಹೇಳಿದ್ದು ಕೋವಿಡ್ ಸುಳ್ಳು ಲೆಕ್ಕ ನೀಡ್ತಿದ್ದಾರೆ ಅಂತಾ? ಸುಳ್ಳು ಲೆಕ್ಕ ಕೊಡೋದ್ರಿಂದ ನಮಗೇನು ಪ್ರಯೋಜನ ಅಂತಾ ಪ್ರಶ್ನೆ ಮಾಡುತ್ತಾರೆ. ಸನ್ಮಾನ್ಯ ಆರೋಗ್ಯ ಮಂತ್ರಿಗಳಂತೂ, ನಾವು ಸಾವಿನ ಲೆಕ್ಕ ಮುಚ್ಚಿಟ್ಟಿಲ್ಲ. ಕರ್ನಾಟಕವನ್ನು ಬಿಹಾರಕ್ಕೆ ಹೋಲಿಸಿ ಮಾತಾಡೋದು ಸರಿಯಲ್ಲ ಎಂದರು. ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಸಾವಿನ ಲೆಕ್ಕ ಕೊಡುವಲ್ಲಿ ಯಾವುದೇ ಲೋಪ ಆಗಿಲ್ಲ ಅಂತಾರೆ. ಬಿಹಾರಕ್ಕೆ ನಮ್ಮ ರಾಜ್ಯವನ್ನು ಹೋಲಿಸಬೇಡಿ ಎಂದು ಕೋರುತ್ತಾರೆ. ಆದ್ರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತ್ರ, ರಾಜ್ಯದಲ್ಲಿ ಬಿಹಾರಕ್ಕಿಂತ ಹೆಚ್ಚು ಸಾವನ್ನು ಮುಚ್ಚಿಡಲಾಗಿದೆ. ಡೆತ್ ಆಡಿಟ್ ಆಗ್ಲೇಬೇಕು. ಸರ್ಕಾರ ಮಾಡಿಲ್ಲ ಅಂದ್ರೆ ನಾವು ಮಾಡಿಸುತ್ತೇವೆ. ಸದನದಲ್ಲಿ ಲೆಕ್ಕ ಇಡುತ್ತೇವೆ ಎಂದು ಎಚ್ಚರಿಸಿದ್ದಾರೆ.