Tag: dead body

  • ಬೆಂಗ್ಳೂರು ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಮಹಿಳೆಯ ಶವ 9 ದಿನಗಳ ನಂತ್ರ ಸಿಕ್ತು

    ಬೆಂಗ್ಳೂರು ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಮಹಿಳೆಯ ಶವ 9 ದಿನಗಳ ನಂತ್ರ ಸಿಕ್ತು

    ಬೆಂಗಳೂರು: ನಗರದಲ್ಲಿ ಕಳೆದ 13 ರ ರಾತ್ರಿ ಸುರಿದ ಭಾರೀ ಮಳೆಗೆ ಕುರುಬರಹಳ್ಳಿ ರಾಜ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ನಿಂಗಮ್ಮ ಅವರ ಶವ ಒಂಭತ್ತು ದಿನಗಳ ನಂತರ ಪತ್ತೆಯಾಗಿದೆ.

    ನಗರದ ಜ್ಞಾನಭಾರತಿ ಸಮೀಪದ ರಾಜಕಾಲುವೆಯಲ್ಲಿ ನಿಂಗಮ್ಮ ಅವರ ಶವ ಪತ್ತೆಯಾಗಿದ್ದು, ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ.

    ಅಕ್ಟೋಬರ್ 13 ರಾತ್ರಿ ಸುರಿದ ಮಳೆಗೆ ನಿಂಗಮ್ಮ ಹಾಗೂ ಅವರ ಪುತ್ರಿ ಪುಷ್ಪಾ ಅವರು ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದರು. ಪುಷ್ಪಾ ಅವರ ಶವ ನಗರದ ಕುಂಬಳಗೋಡು ಸೇತುವೆ ಬಳಿ ಘಟನೆ ನಡೆದ 3 ದಿನಗಳ ನಂತರ ಪತ್ತೆಯಾಗಿತ್ತು.

    ಪುಷ್ಪಾ ಅವರ ಶವ ಸಿಕ್ಕ ಬಳಿಕ ವೃಷಭಾವತಿ ಕಾಲುವೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿ (ಎನ್‍ಡಿಆರ್‍ಆಫ್) ಶೋಧಕಾರ್ಯ ನಡೆಸಿದ್ದರೂ ಅವರ ಮೃತ ದೇಹ ಪತ್ತೆಯಾಗಿರಲಿಲ್ಲ.

  • ಭಾರೀ ಮಳೆ ನಂತರ ಬೆಣ್ಣಿಹಳ್ಳದಲ್ಲಿ ತೇಲಿ ಬರುತ್ತಿವೆ ಶವಗಳು

    ಭಾರೀ ಮಳೆ ನಂತರ ಬೆಣ್ಣಿಹಳ್ಳದಲ್ಲಿ ತೇಲಿ ಬರುತ್ತಿವೆ ಶವಗಳು

    ಧಾರವಾಡ: ಕಳೆದ ಒಂದು ವಾರದಿಂದ ಸುರಿದ ಭಾರೀ ಮಳೆಯ ನಂತರ ಇಲ್ಲಿನ ಬೆಣ್ಣಿಹಳ್ಳದಲ್ಲಿ ಶವಗಳು ತೇಲಿಬರುತ್ತಿವೆ.

    ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ನವಲಗುಂದ ತಾಲೂಕಿನ ಬೆಣ್ಣಿಹಳ್ಳ ಹಾಗೂ ತುಪ್ರಿಹಳ್ಳಗಳು ಉಕ್ಕಿ ಹರಿಯುತ್ತಿವೆ. ಜಿಲ್ಲೆಯ ಕುಂದಗೋಳ ಹಾಗೂ ಹುಬ್ಬಳ್ಳಿ ತಾಲೂಕಿನಿಂದ ನೀರು ಹರಿದು ಬೆಣ್ಣಿಹಳ್ಳಕ್ಕೆ ಬರುತ್ತದೆ. ಮೂರು ದಿನಗಳ ಹಿಂದೆಯಷ್ಟೇ ಗದಗ ಜಿಲ್ಲೆಯ ಯಾವಗಲ್ ಬಳಿ ಎರಡು ಶವಗಳು ತೇಲಿ ಬಂದಿದ್ದವು. ಪೊಲೀಸರು ಒಂದು ಶವವನ್ನ ಹೊರ ತೆಗೆದಿದ್ದರು. ಆದರೆ ಇನ್ನೊಂದು ಶವ ಹೊಳೆ ಆಲೂರು ಬಳಿ ಕಂಡಿತ್ತು. ನಂತರ ಪೊಲೀಸರು ಹುಡುಕಾಟ ನಡೆಸಿದರೂ ಮೃತದೇಹ ಸಿಕ್ಕಿರಲಿಲ್ಲ.

    ಮೂರು ದಿನಗಳ ಹಿಂದೆ ನವಲಗುಂದ ತಾಲೂಕಿನ ನಾಗನೂರ ಗ್ರಾಮದ ಮಹಿಳೆ ಹೊಲದಿಂದ ಬರುವ ವೇಳೆ ಹಳ್ಳಕ್ಕೆ ಸಿಲುಕಿ ಸಾವನ್ನಪ್ಪಿದ್ದರು. ಕಳೆದ ರಾತ್ರಿ ಆ ಮಹಿಳೆಯ ಶವ ಬೆಣ್ಣಿಹಳ್ಳದಲ್ಲಿ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಗಂಗವ್ವ ಮಾಕನವರ್ ಎಂದು ಗುರುತಿಸಲಾಗಿದೆ.

  • ನಾಲೆಯಲ್ಲಿ ತೇಲಿ ಬಂತು ಕೈಕಾಲು ಕಟ್ಟಿ ಎಸೆದ ಮೃತದೇಹ

    ನಾಲೆಯಲ್ಲಿ ತೇಲಿ ಬಂತು ಕೈಕಾಲು ಕಟ್ಟಿ ಎಸೆದ ಮೃತದೇಹ

    ಮಂಡ್ಯ: ಜಿಲ್ಲೆಯ ಪಾಂಡವಪುರದ ನಾಲೆಯಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ತೇಲಿ ಬಂದಿರೋ ಘಟನೆ ಬೆಳಕಿಗೆ ಬಂದಿದೆ.

    ಪಟ್ಟಣದಲ್ಲಿ ಹರಿದು ಹೋಗುವ ವಿಶ್ವೇಶ್ವರಯ್ಯ ನಾಲೆಯಲ್ಲಿ ಈ ಅಪರಿಚಿತ ವ್ಯಕ್ತಿಯ ಶವ ತೇಲಿ ಬಂದಿದೆ. ಸುಮಾರು 42 ವರ್ಷದ ವ್ಯಕ್ತಿಯ ಕೈಕಾಲುಗಳನ್ನು ಕಟ್ಟಿದ ರೀತಿಯಲ್ಲಿ ಶವ ಪತ್ತೆಯಾಗಿದ್ದು, ಕೊಲೆ ಮಾಡಿ ನಾಲೆಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.

    ನಾಲೆಯಲ್ಲಿ ವ್ಯಕ್ತಿಯ ಮೃತದೇಹ ನೋಡಿ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

  • ರಕ್ತಮಯವಾಯ್ತು ತುರ್ತು ನಿಗಾ ಘಟಕ, ರಾತ್ರಿಯಿಡಿ ಮೃತವ್ಯಕ್ತಿಗಳ ಮೊಬೈಲ್‍ಗಳಿಗೆ ನಿರಂತರ ಕರೆ

    ರಕ್ತಮಯವಾಯ್ತು ತುರ್ತು ನಿಗಾ ಘಟಕ, ರಾತ್ರಿಯಿಡಿ ಮೃತವ್ಯಕ್ತಿಗಳ ಮೊಬೈಲ್‍ಗಳಿಗೆ ನಿರಂತರ ಕರೆ

    ಪಂಚಕುಲಾ: ಶುಕ್ರವಾರ ರಾತ್ರಿಯಿಡಿ ಮೊಬೈಲ್‍ಗಳ ರಿಂಗಣ. ಮೃತ ವ್ಯಕ್ತಿಗಳಿಗೆ ಬರುತ್ತಿರುವ ಮೊಬೈಲ್ ಕರೆಗಳಿಗೆ ಹೇಗೆ ಉತ್ತರಿಸಬೇಕು ಎಂದು ತಿಳಿಯದ ವೈದ್ಯರು. ತುರ್ತು ನಿಗಾ ಘಟಕದಲ್ಲಿ ಎಲ್ಲಿ ನೋಡಿದರಲ್ಲಿ ಕೆಂಪು ಕೆಂಪು ರಕ್ತ. ಸ್ಟ್ರೇಚರ್‍ನಲ್ಲಿ ನರಳಾಡುತ್ತಿರುವ ರೋಗಿಗಳು.

    ಇದು ಹರ್ಯಾಣದ ಪಂಚಕುಲಾ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಕಂಡುಬಂದ ದೃಶ್ಯ. ಬಾಬಾ ಗುರ್ಮಿತ್ ರಾಮ್ ರಹೀಂ ಸಿಂಗ್ ಮೇಲಿನ ಅತ್ಯಾಚಾರ ಆರೋಪ ಸಾಬೀತಾದ ಬಳಿನ ನಡೆದ ಘರ್ಷಣೆಯಲ್ಲಿ ಪಂಚಕುಲದಲ್ಲಿ ಮೂವತ್ತಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಬಾಬಾನ ಭಕ್ತರ ಮೃತದೇಹಗಳನ್ನು ಪಂಚಕುಲದ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಈ ವ್ಯಕ್ತಿಗಳಿಗೆ ರಾತ್ರಿಯಿಡಿ ಕರೆ ಬರುತಿತ್ತು ಎಂದು ಆಸ್ಪತ್ರೆಯ ಸಿಬ್ಬಂದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಘರ್ಷಣೆಯಲ್ಲಿ ಮೃತಪಟ್ಟ 17 ಮಂದಿ ಮೃತದೇಹಗಳನ್ನು ಪಂಚಕುಲಾ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಈ ಮೃತದೇಹಗಳು ಯಾರದ್ದು ಎನ್ನುವುದು ಇನ್ನೂ ತಿಳಿದಿಲ್ಲ. ಆದರೆ ಅವರ ಕಿಸೆಯಲ್ಲಿದ್ದ ಮೊಬೈಲ್ ಗಳಿಗೆ ನಿರಂತರ ಕರೆಗಳು ಬರುತಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

    ಕರೆ ಬರುತ್ತಿದ್ದರೂ ನಾವು ಸ್ವೀಕರಿಸಲಿಲ್ಲ. ಒಂದು ವೇಳೆ ಮಾಹಿತಿ ನೀಡಿದರೆ ರಾತ್ರಿಯೇ ಮೃತಪಟ್ಟವರ ಸಂಬಂಧಿಕರು ಆಸ್ಪತ್ರೆಗೆ ಬರುವ ಸಾಧ್ಯತೆ ಇತ್ತು, ಪಂಚಕುಲಾದಲ್ಲಿ ನಿಷೇಧಾಜ್ಞೆ ಜಾರಿಯಾದ ಹಿನ್ನೆಲೆಯಲ್ಲಿ ನಾವು ಫೋನ್ ಕರೆಗಳನ್ನು ಸ್ವೀಕರಿಸಿಲಿಲ್ಲ. ಶನಿವಾರ ಬೆಳಗ್ಗೆ ಕರೆಗಳನ್ನು ಸ್ವೀಕರಿಸಿ ಮಾಹಿತಿ ನೀಡುತ್ತೇವೆ ಎಂದು ವೈದ್ಯರು ತಿಳಿಸಿದರು.

    ಮೃತಪಟ್ಟ 17 ಮಂದಿಯ ದೇಹದಲ್ಲಿ ಬುಲೆಟ್ ಹೊಕ್ಕಿದ್ದು, ಗಾಯಗಳಾಗಿವೆ. ಕೆಲವು ಮಂದಿಗೆ ಕಲ್ಲೇಟು ಬದ್ದಿದೆ. ಮೃತಪಟ್ಟವರ ದೇಹಗಳಲ್ಲಿ ಯಾವುದೇ ಗುರುತು ಪತ್ರಗಳಿಲ್ಲ. ಗ್ರಾಮಗಳಿಂದ ಬಂದಿರುವ ವ್ಯಕ್ತಿಗಳಾಗಿದ್ದು, ಕುರ್ತಾ ಮತ್ತು ಪೈಜಾಮ ಧರಿಸಿದ್ದಾರೆ. ದೇಹವನ್ನು ಗುರುತಿಸಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರು ಮುಂದಾಗಿದ್ದಾರೆ.

    ತರ್ತು ನಿಗಾ ಘಟಕದಲ್ಲಿ ಭಯಾನಕ ಸ್ಥಿತಿ ನಿರ್ಮಾಣವಾಗಿತ್ತು. 100ಕ್ಕೂ ಹೆಚ್ಚು ಮಂದಿ ಸ್ಟ್ರೆಚರ್ ನಲ್ಲಿ ಮಲಗಿದ್ದರೆ, ಅದರಲ್ಲಿ ಹಲವು ಮಂದಿ ಮೃತಪಟ್ಟಿದ್ದರು. ತುರ್ತು ನಿಗಾ ಮಳಿಗೆಯಲ್ಲಿ ರಕ್ತದ ಕೋಡಿಯೇ ಹರಿದಿತ್ತು. ಮುಂದಿನ ಕೆಲ ದಿನಗಳ ವರೆಗೆ ಎಲ್ಲ ವೈದ್ಯರ ರಜೆಯನ್ನು ರದ್ದುಗೊಳಿಸಲಾಗಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ಪ್ರತಿಕ್ರಿಯಿಸಿದ್ದಾರೆ.

    ಕಲ್ಲು ತೂರಾಟದಿಂದಾಗಿ 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ದಾಖಲಾಗಿದ್ದು, ಕೆಲ ಐಪಿಎಸ್ ಅಧಿಕಾರಿಗಳು ಸಹ ದಾಖಲಾಗಿದ್ದಾರೆ. ದಾಖಲಾದವರ ಪೈಕಿ 55ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಅವರೆಲ್ಲರನ್ನು ಚಂಡೀಗಢದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅತ್ಯಾಚಾರ ಪ್ರಕರಣದಲ್ಲಿ ಸ್ವಯಂಘೋಷಿತ ದೇವಮಾನವ ಬಾಬಾ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿವರೆಗೂ ಹೊತ್ತಿ ಉರಿದ ಹರ್ಯಾಣದಲ್ಲಿ ಸದ್ಯ ಹಿಂಸಾಚಾರ ನಿಂತಿದೆ. ಆದ್ರೆ ಬೂದಿ ಮುಚ್ಚಿದ ಕೆಂಡದಂತಿದೆ ಪರಿಸ್ಥಿತಿ. ಹೀಗಾಗಿಯೇ ಸಿಎಂ ಖಟ್ಟರ್ ಸರ್ಕಾರ ಶಾಂತಿ ಭದ್ರತೆಗೆ ಕೇಂದ್ರದ ಮೊರೆ ಹೋಗಿದೆ. ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿಕೆಯಾಗಿದ್ದು, 350ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

     

  • ಸಂಬಂಧಿಗಳ ಕಣ್ಣೆದುರೇ ಸಮಾಧಿಯಿಂದ ಶವಗಳನ್ನ ಹೊರ ಹಾಕ್ತಾರೆ!

    ಸಂಬಂಧಿಗಳ ಕಣ್ಣೆದುರೇ ಸಮಾಧಿಯಿಂದ ಶವಗಳನ್ನ ಹೊರ ಹಾಕ್ತಾರೆ!

    ವಾಷಿಂಗ್ಟನ್: ನಮ್ಮವರನ್ನು ಕಳೆದುಕೊಂಡಾಗ ಆಗುವ ದುಃಖ ಪದಗಳಿಂದ ಹೇಳಲಾಗದು. ಅಂತಹ ದುಃಖದಲ್ಲಿ ಹೂತಿರುವ ಶವಗಳನ್ನು ಸಮಾಧಿಯಿಂದ ಹೊರತೆಗೆದು ಎಸೆಯುವುದು ಎಂತಹವರ ಕಣ್ಣಲ್ಲಿ ನೀರು ತರಿಸುತ್ತದೆ. ಆದರೆ ಅಮೆರಿಕದಲ್ಲಿ ಒಂದು ಕಡೆ ಪ್ರತಿನಿತ್ಯ ಸಮಾಧಿಯಿಂದ ತೆಗೆಯಲಾಗುತ್ತದೆ.

    ಹೌದು, ಗ್ವಾಟೆಮಾಲಾ ಎಂಬಲ್ಲಿ ಶವಗಳನ್ನು ಸಮಾಧಿಯಿಂದ ತೆಗೆಯಲಾಗುತ್ತದೆ. ಸುಂದರವಾದ ಸಮಾಧಿಗಳಲ್ಲಿ ನಮ್ಮ ಆತ್ಮೀಯರ ಶವಗಳು ಇರಬೇಕಾದ್ರೆ ಇಲ್ಲಿ ಪ್ರತಿವರ್ಷ ಹೂತಿರುವ ಸ್ಥಳಕ್ಕೆ ನಿರ್ಧಿಷ್ಟ ಹಣವನ್ನು ಪಾವತಿ ಮಾಡಬೇಕಾಗುತ್ತದೆ.

    ಒಪ್ಪಂದವಾಗಿರುತ್ತೆ: ಶವ ಹೂತಿರುವ ಮತ್ತು ಸಮಾಧಿ ಮಾಲೀಕರ ನಡುವೆ ಅಂತ್ಯ ಸಂಸ್ಕಾರದ ದಿನದಂದು ಒಪ್ಪಂದವಾಗಿರುತ್ತದೆ. ಇಲ್ಲಿ ಶವ ಹೂತ ಮೇಲೆ ಮೊದಲಿನ 6 ವರ್ಷ ಯಾವುದೇ ಬಾಡಿಗೆ ಇರುವುದಿಲ್ಲ. 6 ವರ್ಷಗಳ ನಂತರ ಪ್ರತಿ ವರ್ಷ ಆ ಶವದ ಸಂಬಂಧಿ ಅಥವಾ ಮಾಲೀಕ 24 ಡಾಲರ್ (1549 ರೂ.) ಹಣವನ್ನು ಪಾವತಿಸಬೇಕಾಗುತ್ತದೆ. ಇದು ಶವವನ್ನು ಹೂಳಿದ್ದ ದಿನದಿಂದ ಈ ಒಪ್ಪಂದ ಜಾರಿಯಲ್ಲಿರುತ್ತದೆ.

    ಶವ ಹೂತ ನಂತರ ಮೊದಲ ಉಚಿತ ಆರು ವರ್ಷ ಪೂರ್ಣವಾಗುತ್ತಲೇ ಅದಕ್ಕೆ ಸಂಬಂಧಪಟ್ಟವರು ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ಸ್ಮಶಾನದ ಸಿಬ್ಬಂದಿ ಹೂತಿರುವ ಶವಗಳನ್ನು ಹೊರ ತೆಗೀತಾರೆ. ಖಾಲಿಯಾದ ಸ್ಥಳದಲ್ಲಿ ಮತ್ತೊಮ್ಮೆ ಶವದ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಈ ಹಣ ಕೆಳವರ್ಗದ ಜನರಿಗೆ ದುಬಾರಿಯಾಗಿದೆ.

    ಶವಗಳನ್ನ ಪ್ಲಾಸ್ಟಿಕ್ ಹಾಳೆಯಲ್ಲಿ ಇಡ್ತಾರೆ: ಇನ್ನು ಹಣ ಪಾವತಿಯಾಗದ ಶವಗಳನ್ನು ಅವುಗಳ ಬಟ್ಟೆ ಸಹಿತ ಹೊರ ತೆಗೆದು ಪ್ಲಾಸ್ಟಿಕ್ ಕವರ್‍ಗಳಲ್ಲಿ ಸುತ್ತಿಡ್ತಾರೆ. ಶವಗಳನ್ನು ಸುತ್ತಿದ ಬಳಿಕ ಅವುಗಳನ್ನು ಸಾರ್ವಜನಿಕ ಸ್ಥಳವೊಂದರಲ್ಲಿ ಸಾಮೂಹಿಕವಾಗಿ ಹೂಳ್ತಾರೆ. ಹೀಗೆ ಸಾಮುಹಿಕವಾಗಿ ಹೂಳುವುದ್ರಿಂದ ಸತ್ತವರ ಆತ್ಮಗಳು ಅಳುತ್ತವೆ ಎಂಬುವುದು ಇಲ್ಲಿನ ಜನರ ನಂಬಿಕೆಯಾಗಿದೆ.

    ಇನ್ನು ಕೆಲ ಬಡವರ್ಗದ ಜನರು ಆರು ವರ್ಷ ಕಾಲಾವಧಿ ಮುಗಿದ ಬಳಿಕ ಸಮಾಧಿ ಆಗಮಿಸಿ ತಮ್ಮವರ ಶವದ ಅವಶೇಷಗಳನ್ನು ತೆಗೆದುಕೊಂಡು ಹೋಗಿ ಪ್ಲಾಸ್ಟಿಕ್ ನಲ್ಲಿ ಸುತ್ತಿ ಹೂಳುತ್ತಾರೆ.

    ಇದನ್ನೂ ಓದಿ: ಮೂರು ವರ್ಷಗಳ ನಂತರ ಸಮಾಧಿಯಿಂದ ಹೊರಬಂದು ನಡೆದಾಡಿದ ಮಹಿಳೆ!

     

     

  • ಸೈಕಲ್‍ನಲ್ಲೇ ತಮ್ಮನ ಶವ ಸಾಗಿಸಿದ ವ್ಯಕ್ತಿ!- ಬಿದಿರಿನ ಸೇತುವೆ ಕುಸಿದು ನದಿಗೆ ಬಿದ್ದ ತನಿಖಾ ತಂಡ

    ಸೈಕಲ್‍ನಲ್ಲೇ ತಮ್ಮನ ಶವ ಸಾಗಿಸಿದ ವ್ಯಕ್ತಿ!- ಬಿದಿರಿನ ಸೇತುವೆ ಕುಸಿದು ನದಿಗೆ ಬಿದ್ದ ತನಿಖಾ ತಂಡ

    ಗುವಾಹಾಟಿ: ಒಡಿಶಾದಲ್ಲಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ವ್ಯವಸ್ಥೆ ಸಿಗದ ಕಾರಣ ವ್ಯಕ್ತಿಯೊಬ್ಬರು ತನ್ನ ಹೆಂಡತಿಯ ಶವವನ್ನ ಹೆಗಲ ಮೇಲೆ ಹೊತ್ತು 10 ಕಿ.ಮೀ ದೂರ ನಡೆದ ಘಟನೆ ಮಾಸುವ ಮುನ್ನವೇ ಇದೀಗ ಅಂಥದ್ದೇ ಘಟನೆ ಅಸ್ಸಾಂನಲ್ಲಿ ನಡೆದಿದೆ.

    ಹೌದು. ಅಸ್ಸಾಂನಲ್ಲಿ ವ್ಯಕ್ತಿಯೊಬ್ಬರು ಗ್ರಾಮಕ್ಕೆ ವಾಹನ ಸಂಚರಿಸುವ ರಸ್ತೆ ಇಲ್ಲದ ಕಾರಣಕ್ಕೆ ತನ್ನ ತಮ್ಮನ ಶವವನ್ನ 8 ಕಿ.ಮಿ ದೂರ ಸೈಕಲ್‍ನಲ್ಲಿ ಕಟ್ಟಿ ಸಾಗಿಸಿದ್ದಾರೆ. ಈ ಘಟನೆ ಅಸ್ಸಾಂ ಸಿಎಂ ಸರ್ಬಾನಂದ ಸೋನೋವಾಲ್ ಅವರ ಸ್ವಕ್ಷೇತ್ರ ಮಂಜುಲಿ ಜಿಲ್ಲೆಯ ಬಲಿಜಾನ್ ಗ್ರಾಮದಲ್ಲಿ ಸೋಮವಾರದಂದು ನಡೆದಿದೆ.

    ಅನಾರೋಗ್ಯದಲ್ಲಿದ್ದ ಡಿಂಪಲ್ ದಾಸ್ ಎಂಬವರನ್ನ ಸೋಮವಾರ ಮಂಜುಲಿಯ ಗರಾಮುರ್‍ನ ಸರ್ಕಾರಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಆಸ್ಪತ್ರೆ ವ್ಯಾನ್‍ನ ಡ್ರೈವರ್ ಬರುವ ಮೊದಲೇ ಮೃತ ಡಿಂಪಲ್ ದಾಸ್ ಶವವನ್ನ ಅವರ ಅಣ್ಣ ಆಸ್ಪತ್ರೆಯಿಂದ 8 ಕಿ.ಮೀ ದೂರದಲ್ಲಿರೋ ತನ್ನ ಮನೆಗೆ ಸೈಕಲ್‍ನಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಮುಖ್ಯರಸ್ತೆಯಿಂದ ಬಲಿಜಾನ್ ಗ್ರಾಮಕ್ಕೆ ತೆರಳಲು ವಾಹನ ಸಂಚರಿಸುವಂತಹ ರಸ್ತೆ ಇಲ್ಲ. ಬಿದಿರಿನ ಸೇತುವೆ ದಾಟಿ ಊರಿಗೆ ಹೋಗಬೇಕು. ಹೀಗಾಗಿ ಶವವನ್ನ ಸೈಕಲ್‍ನಲ್ಲೇ ಸಾಗಿಸಿದ್ದಾರೆ.

    ಈ ಬಗ್ಗೆ ಮಂಜುಲಿ ಜಿಲ್ಲಾಡಳಿತ ಈಗಾಗಲೇ ತನಿಖೆ ಆರಂಭಿಸಿದೆ. ಮೃತ ವ್ಯಕ್ತಿಯ ಕುಟುಂಬಸ್ಥರು 108 ಅಂಬುಲೆನ್ಸ್‍ಗೆ ಕರೆ ಮಾಡಿರುವುದು ನಿಜವೇ ಹಾಗೂ ವ್ಯಕ್ತಿ ಶವವನ್ನು ಆಸ್ಪತ್ರೆ ಆವರಣದಲ್ಲೇ ಸೈಕಲ್‍ಗೆ ಕಟ್ಟುತ್ತಿರೋದನ್ನು ಆಸ್ಪತ್ರೆಯ ಸಿಬ್ಬಂದಿ ಯಾರೂ ನೋಡಿದ್ದಾರೆಯೇ ಎಂಬುವುದರ ಬಗ್ಗೆ ತನಿಖೆ ಅರಂಭವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ನದಿಗೆ ಬಿದ್ದ ತನಿಖಾ ತಂಡ: ಸಿಎಂ ಸೋನಾವಾಲಾ ಅವರ ಸೂಚನೆ ಮೇರೆಗೆ ಆರೋಗ್ಯ ಸೇವೆಗಳ ರಾಜ್ಯ ನಿರ್ದೇಶಕರ ನೇತೃತ್ವದಲ್ಲಿ ಮತ್ತೊಂದು ತಂಡ ಘಟನೆ ಬಗ್ಗೆ ತನಿಖೆ ಮಾಡಲು ಬುಧವಾರದಂದು ಆ ವ್ಯಕ್ತಿಯ ಗ್ರಾಮಕ್ಕೆ ಹೋಗುತ್ತಿತ್ತು. ಈ ವೇಳೆ ಬಿದಿರಿನ ಸೇತುವೆ ಮೇಲೆ ಭಾರ ಜಾಸ್ತಿಯಾಗಿ ಸೇತುವೆ ಕುಸಿದ ಕಾರಣ ತನಿಖಾ ತಂಡದ ಅಧಿಕಾರಿಗಳು ನದಿಗೆ ಬಿದ್ದಿದ್ದಾರೆ. ಸಹಾಯಕ ನಿರ್ದೇಶಕ ತಂಕೇಶ್ವರ್ ದಾಸ್ ಹಾಗೂ ಮಂಜುಲಿಯ ಸಹಾಯಕ ಉಪ ಆಯುಕ್ತರಾದ ನರೇನ್ ದಾಸ್ ಸೇರಿದಂತೆ ನಾಲ್ವರು ಅಧಿಕಾರಿಗಳು ನದಿಗೆ ಬಿದ್ದಿದ್ದಾರೆಂದು ವರದಿಯಾಗಿದೆ.

    https://youtu.be/3KcjfDB0THs

  • ಆಂಬುಲೆನ್ಸ್ ಇಲ್ಲದೆ ಟಿವಿಎಸ್‍ನಲ್ಲೇ ಮಗಳ ಶವ ಸಾಗಿಸಿದ್ರು!

    ಆಂಬುಲೆನ್ಸ್ ಇಲ್ಲದೆ ಟಿವಿಎಸ್‍ನಲ್ಲೇ ಮಗಳ ಶವ ಸಾಗಿಸಿದ್ರು!

    ತುಮಕೂರು: ಒಡಿಸ್ಸಾದಲ್ಲಿ ವ್ಯಕ್ತಿಯೊಬ್ಬರು ತನ್ನ ಪತ್ನಿಯ ಶವವನ್ನು ಹೆಗಲ ಮೇಲೆ ಸಾಗಿಸಿದ್ದಂತೆ ನಮ್ಮ ರಾಜ್ಯದಲ್ಲಿಯೂ ಅಂತದ್ದೇ ದುರಂತವೊಂದು ನಡೆದಿದೆ. ಅದೂ ಇಬ್ಬರು ಪ್ರಭಾವಿ ಸಚಿವರ ತವರು ಜಿಲ್ಲೆ, ದಕ್ಷ ಹಾಗೂ ಅಭಿವೃದ್ಧಿ ಪರ ಶಾಸಕ ಎಂಬ ಹೆಸರು ಪಡೆದಿರುವ ಕೆ.ಎನ್ ರಾಜಣ್ಣ ಅವರ ಕ್ಷೇತ್ರದಲ್ಲಿಯೇ ಈ ಘಟನೆ ನಡೆದಿರುವುದು ವಿಪರ್ಯಾಸ.

    ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ಭಾನುವಾರದಂದು ಈ ಘಟನೆ ನಡೆದಿದೆ. ತಿಮ್ಮಪ್ಪ ಎಂಬ ಬಡ ಕೂಲಿ ಕಾರ್ಮಿಕರ ಮಗಳು 20 ವರ್ಷದ ರತ್ನಮ್ಮ ತೀವ್ರ ಜ್ವರದಿಂದ ಬಳಲುತ್ತಿದ್ದರು. ಈ ಮಧ್ಯೆ ಅವರಿಗೆ ಉಸಿರಾಟದ ಸಮಸ್ಯೆ ಕೂಡ ಇತ್ತು. ಹೀಗಾಗಿ ಆಕೆಯನ್ನು ಮಧುಗಿರಿ ತಾಲೂಕಿನ ಕೊಡುಗೇನಹಳ್ಳಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ನಂತರ ರತ್ನಮ್ಮ ಪೋಷಕರು ಸರ್ಕಾರಿ ಆಸ್ಪತ್ರೆಗೆ ದೌಡಾಯಿಸಿದ್ರು. ಆದ್ರೆ ಅಷ್ಟರಲ್ಲಾಗಲೇ ರತ್ನಮ್ಮ ಸಾವನ್ನಪ್ಪಿದ್ದರು. ಮಗಳ ಶವವನ್ನು ತನ್ನ ಗ್ರಾಮ ವೀರಾಪುರಕ್ಕೆ ಸಾಗಿಸಲು ಹೋಬಳಿ ಕೇಂದ್ರದ ಈ ಸರ್ಕಾರಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಕೂಡ ಇರಲಿಲ್ಲ.

    ಇದರಿಂದ ತಿಮ್ಮಪ್ಪ ಪರಿಚಯಸ್ಥರೊಬ್ಬರ ಸಹಾಯ ಪಡೆದು ಟಿವಿಎಸ್ ಬೈಕ್‍ನಲ್ಲಿಯೇ ಶವವನ್ನು ಸಾಗಿಸಿದ್ದಾರೆ. ಖಾಸಗಿ ಕಾರ್ ಬಾಡಿಗೆಗೆ ಪಡೆದು ಶವವನ್ನು ತೆಗೆದುಕೊಂಡು ಹೋಗುವಂತೆ ಸ್ಥಳೀಯರು ಸಲಹೆ ನೀಡಿದರಾದ್ರೂ ರತ್ನಮ್ಮ ಪೋಷಕರ ಬಳಿ ಹಣವಿಲ್ಲದ ಕಾರಣ ಟಿವಿಎಸ್ ಹಿಂಭಾಗ ಶವವನ್ನು ಕೂರಿಸಿ ಅದನ್ನು ಮತ್ತೊಬ್ಬರು ಹಿಡಿದುಕೊಂಡು ಸಾಗಿಸಿದ್ದಾರೆ. ಈ ಹೃದಯವಿದ್ರಾವಕ ದೃಶ್ಯವನ್ನ ಪ್ರತ್ಯಕ್ಷದರ್ಶಿಯೊಬ್ಬರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.