Tag: DC G. Jagdish

  • ಪೋಷಕರಿಗೆ ವೇಟಿಂಗ್ ರೂಂ ವ್ಯವಸ್ಥೆ – ಉಡುಪಿಯಲ್ಲಿ 14034 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ರೆಡಿ

    ಪೋಷಕರಿಗೆ ವೇಟಿಂಗ್ ರೂಂ ವ್ಯವಸ್ಥೆ – ಉಡುಪಿಯಲ್ಲಿ 14034 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ರೆಡಿ

    ಉಡುಪಿ: ನಾಳೆಯಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯಲಿದ್ದು, ಉಡುಪಿಯ ಕೆಲ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಭೇಟಿ ನೀಡಿ, ಪರೀಕ್ಷಾ ವ್ಯವಸ್ಥೆ ಮೇಲ್ವಿಚಾರಣೆ ಮಾಡಿದರು. ನಗರದ ವಳಕಾಡು ಶಾಲೆಗೆ ಭೇಟಿ ನೀಡಿದ ಅವರು, ಸಿದ್ಧತೆ ಗಳ ಪರಿಶೀಲನೆ ಮಾಡಿದರು.

    ತರಗತಿಗಳಿಗೆ ಭೇಟಿಕೊಟ್ಟು, ಶಿಕ್ಷಕರು ಸಿಬ್ಬಂದಿಗಳ ಜೊತೆ ಸಮಾಲೋಚನೆ ಮಾಡಿದರು. ಸರ್ಕಾರಿ ಶಾಲೆಯಲ್ಲಿ ಶೆಲ್ಟರ್ ಇಲ್ಲ. ಅಕ್ಕಪಕ್ಕದ ಕಟ್ಟಡ, ಸಭಾಂಗಣದಲ್ಲಿ ಪೋಷಕರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿರುವ ಬಗ್ಗೆ ವೀಕ್ಷಣೆ ಮಾಡಿದರು. ಮಾಧ್ಯಮಗಳ ಜೊತೆ ಮಾತಮಾಡಿ, ಪರೀಕ್ಷೆ ನಿರ್ವಹಿಸೋದು ಜಿಲ್ಲಾಡಳಿತದ ಮುಂದಿರುವ ಮಹತ್ವದ ಜವಾಬ್ದಾರಿ. ಇಲಾಖೆ ಸರ್ಕಾರದ ಸಹಕಾರದಿಂದ ಅದನ್ನು ನಡೆಸುತ್ತೇವೆ. ಎಲ್ಲಾ ಪರೀಕ್ಷಾ ಕೇಂದ್ರ ಗಳಲ್ಲಿ ತಯಾರಿ ಮುಗಿದಿದೆ. ಬಹಳ ಚೆನ್ನಾಗಿ, ಸುರಕ್ಷಿತಾ ಕ್ರಮ ಕೈಗೊಂಡಿದ್ದೇವೆ. ಜಿಲ್ಲೆಯಲ್ಲಿ 14,034 ಮಕ್ಕಳು ಪರೀಕ್ಷೆ ಬರೆಯುತ್ತಾರೆ ಎಂದರು.

    ಸಾಮಾಜಿಕ ಅಂತರ, ಥರ್ಮಲ್ ಸ್ಕ್ಯಾನಿಂಗ್ ಗೆ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರ ಸ್ಯಾನಿಟೈಸ್ ಮಾಡಿದ್ದೇವೆ. ಪರೀಕ್ಷೆ ಸುಲಭವಾಗಿ ನಡೆಯುತ್ತದೆ ಅನ್ನೋ ಆಶಾಭಾವನೆ ಇದೆ. ಜಿಲ್ಲೆಯಲ್ಲಿ ಕ್ವಾರಂಟೈನ್ ಸೆಂಟರ್ ಆಗಿದ್ದ ಮೂರು ಶಾಲೆಗಳಿವೆ. ತಿಂಗಳ ಹಿಂದೆಯೇ ಕ್ವಾರಂಟೈನ್ ಕೇಂದ್ರ ತೆರವು ಮಾಡಿ ಸ್ಯಾನಿಟೈಸ್ ಮಾಡಿದ್ದೇವೆ. ಪ್ರತೀ ಪರೀಕ್ಷೆಯ ನಂತರ ಸ್ಯಾನಿಟೈಸ್ ಮಾಡಲಿದ್ದೇವೆ. ಮಳೆಗಾಲವಾದ ಕಾರಣ ಮಕ್ಕಳಿಗೆ ಶೆಲ್ಟರ್ ಅಗತ್ಯವಿದೆ. ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಶೆಲ್ಟರ್ ಇಲ್ಲ. ಮಕ್ಕಳು ಬಂದ ತಕ್ಷಣ ಜ್ವರ ಪರೀಕ್ಷೆ ಮಾಡಿ ತರಗತಿಯೊಳಗೆ ಕಳಿಸುತ್ತೇವೆ ಎಂದರು.

    ವಿದ್ಯಾರ್ಥಿಗಳಿಗೆ ಯಾವುದೇ ಆತಂಕ ಬೇಡ. ಮಕ್ಕಳು ಧೈರ್ಯವಾಗಿ ಬಂದು ಪರೀಕ್ಷೆ ಬರೆಯಿರಿ. ಯಾವುದೇ ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ನಾವು ಬಳಸೋದಿಲ್ಲ. ಖಾಸಗಿ ಶಾಲೆಯ 82 ಬಸ್ ಬಳಕೆ ಮಾಡುತ್ತೇವೆ. ಡೀಸೆಲ್ ವ್ಯವಸ್ಥೆ ಸರ್ಕಾರ ಮಾಡುತ್ತದೆ. ನಾಲ್ಕು ಮಕ್ಕಳು ಕಂಟೈನ್‍ಮೆಂಟ್ ಝೋನ್ ನಿಂದ ಬರುತ್ತಾರೆ. ಅವರಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ ಮಾಡಿದ್ದೇವೆ. ಹತ್ತು ಪರೀಕ್ಷಾ ಕೇಂದ್ರ ಹೆಚ್ಚುವರಿಯಾಗಿದೆ. ಹೊಸ ಕಂಟೈನ್ಮೆಂಟ್ ಝೋನ್ ಆದರೆ ಅದನ್ನು ಬಳಸುತ್ತೇವೆ ಎಂದು ಡಿಸಿ ಜಿ. ಜಗದೀಶ್ ಹೇಳಿದರು.

  • ದೆಹಲಿ ಸಮಾವೇಶಕ್ಕೆ ಉಡುಪಿಯ ಲಿಂಕ್ – ಪ್ರವಾಸ ಮಾಡಿದ್ದವರಿಗೆ ಹೈ ರಿಸ್ಕ್ ಕ್ವಾರಂಟೈನ್ ಎಂದ ಡಿಸಿ

    ದೆಹಲಿ ಸಮಾವೇಶಕ್ಕೆ ಉಡುಪಿಯ ಲಿಂಕ್ – ಪ್ರವಾಸ ಮಾಡಿದ್ದವರಿಗೆ ಹೈ ರಿಸ್ಕ್ ಕ್ವಾರಂಟೈನ್ ಎಂದ ಡಿಸಿ

    ಉಡುಪಿ: ಕೊರೊನಾ ಹಾಟ್ ಸ್ಪಾಟ್ ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಉಡುಪಿ ಜಿಲ್ಲೆಯಿಂದ 16 ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ ಎಂಬ ಮಾಹಿತಿಯಿದೆ. ಉಡುಪಿ, ಕುಂದಾಪುರ- ಬೈಂದೂರು, ಕಾರ್ಕಳ, ಪಡುಬಿದ್ರೆ ವ್ಯಾಪ್ತಿಯ ಯುವಕರು ಮತ್ತು ಮಧ್ಯವಯಸ್ಕರು ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆಂಬ ಮಾಹಿತಿ ರಾಜ್ಯದಿಂದ ಜಿಲ್ಲೆಗೆ ರವಾನೆಯಾಗಿದೆ.

    ಮಂಗಳವಾರ ರಾತ್ರಿ ಈ ಮಾಹಿತಿ ಬಂದಿದ್ದು, ಆಯಾ ಪೊಲೀಸ್ ಠಾಣೆಯ ಮೂಲಕ ಶಿಬಿರಾರ್ಥಿಗಳನ್ನು ಹಾಗೂ ಶಿಬಿರಾರ್ಥಿಗಳ ಸಂಪರ್ಕಕ್ಕೆ ಬಂದವರನ್ನು ಗುರುತಿಸುವ ಕೆಲಸ ನಡೆದಿದೆ. 16 ಮಂದಿಯನ್ನು ಕೂಡ ಸಂಪೂರ್ಣವಾಗಿ ಕ್ವಾರಂಟೈನ್ ಮಾಡಬೇಕು ಎಂದು ಕೇಂದ್ರದಿಂದ ಖಡಕ್ ಆದೇಶ ಪ್ರತಿ ಜಿಲ್ಲೆಗಳಿಗೆ ಬಂದಿದೆ. ಹೀಗಾಗಿ 16 ಮಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

    ಆದರೆ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಈ ಮಾಹಿತಿಯನ್ನು ಅಲ್ಲಗಳೆದಿದ್ದಾರೆ. ದೆಹಲಿಯ ಜಮಾತ್ ಸಮಾವೇಶಕ್ಕೆ ಉಡುಪಿ ಜಿಲ್ಲೆಯಿಂದ ಯಾರೂ ಪಾಲ್ಗೊಂಡಿಲ್ಲ. ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ಪ್ರವಾಸ ಮಾಡಿದವರೆಲ್ಲರ ಮಾಹಿತಿ ಸಿಕ್ಕಿದೆ. ನಿಜಾಮುದ್ದೀನ್‍ನಿಂದ ಬಂದವರ ಜೊತೆ ಪ್ರಯಾಣಿಸಿದ ಸಂದರ್ಭದಲ್ಲಿ ರೈಲು, ವಿಮಾನದಲ್ಲಿ ಓಡಾಡಿದವರ ತಪಾಸಣೆಗೆ ಆದೇಶಿಸಲಾಗಿದೆ. ರೈಲಿನಲ್ಲಿ ಸಂಚಾರ ಮಾಡಿದವರ ಮಾಹಿತಿಯ ಮೇರೆಗೆ ಹೈ ರಿಸ್ಕ್ ಪಟ್ಟಿ ಬಿಡುಗಡೆ ಮಾಡಿದ್ದು, ಅವರ ಮೇಲೂ ನಿಗಾ ಇಡಲಾಗಿದೆ ಎಂದರು.