Tag: Dasara Festival

  • ನವರಾತ್ರಿಯ 9ನೇ ದಿನ ಸಿದ್ಧಿದಾತ್ರೀ ಆರಾಧನೆ

    ನವರಾತ್ರಿಯ 9ನೇ ದಿನ ಸಿದ್ಧಿದಾತ್ರೀ ಆರಾಧನೆ

    ಗನ್ಮಾತೆ ದುರ್ಗಾದೇವಿಯ ಒಂಭತ್ತನೇ ಶಕ್ತಿಯ ಹೆಸರು ಸಿದ್ಧಿದಾತ್ರಿ. ಇವಳು ಎಲ್ಲ ಪ್ರಕಾರದ ಸಿದ್ಧಿಗಳನ್ನು ಕೊಡುವಂತಹವಳು. ಮಾರ್ಕಡೇಯ ಪುರಾಣದ ಅನುಸಾರ ಅಣಿಮಾ, ಮಾಹಿಮಾ, ಗರಿಮಾ, ಲಘಮಾ, ಪ್ರಾಪ್ತಿ, ಪ್ರಾಕಮ್ಯ, ಈಶಿತ್ವ ಮತ್ತು ವಶಿತ್ವ ಹೀಗೆ ಎಂಟು ಸಿದ್ಧಿಗಳು ಇವೆ.

    ದೇವೀಪುರಾಣಕ್ಕನುಸಾರ ಭಗವಾನ್ ಶಿವನು ಇವಳ ಕೃಪೆಯಿಂದ ಇವೆಲ್ಲ ಸಿದ್ಧಿಗಳನ್ನು ಪಡೆದುಕೊಂಡಿದ್ದನು. ಇವಳ ಅನುಕಂಪದಿಂದಲೇ ಭಗವಾನ್ ಶಿವನ ಅರ್ಧ ಶರೀರವು ದೇವಿಯಾಗಿತ್ತು. ಇದೇ ಕಾರಣದಿಂದ ಅವನು ಜಗತ್ತಿನಲ್ಲಿ ‘ಅರ್ಧನಾರೀಶ್ವರ’ ಹೆಸರಿನಿಂದ ಪ್ರಸಿದ್ಧನಾದನು. ಸಿದ್ಧಿದಾತ್ರಿಗೆ ನಾಲ್ಕು ಭುಜಗಳಿದ್ದು, ಇವಳ ವಾಹನ ಸಿಂಹವಾಗಿದೆ. ಇವಳು ಫಲಪುಷ್ಪದ ಮೇಲೆ ವಿರಾಜಮಾನವಾಗಿ ಕುಳಿತುಕೊಂಡಿರುತ್ತಾಳೆ. ಇವಳ ಕೆಳಗಿನ ಬಲಕೈಯಲ್ಲಿ ಚಕ್ರ, ಮೇಲಿನ ಕೈಯಲ್ಲಿ ಗದೆ ಇದೆ. ಎಡಗಡೆ ಕೆಳಗಿನ ಕೈಯಲ್ಲಿ ಶಂಖ ಮತ್ತು ಮೇಲಿನ ಕೈಯಲ್ಲಿ ಕಮಲವಿದೆ.

    ನವರಾತ್ರಿಯ 9ನೇ ದಿನ ಇವಳ ಉಪಾಸನೆ ಮಾಡಲಾಗುತ್ತದೆ. ಈ ದಿನ ಶಾಸ್ತ್ರೀಯ ವಿಧಿ-ವಿಧಾನದಿಂದ ಹಾಗೂ ಪೂರ್ಣನಿಷ್ಠೆಯಿಂದ ಸಾಧನೆ ಮಾಡುವ ಸಾಧಕರಿಗೆ ಸಿದ್ಧಿಗಳು ಪ್ರಾಪ್ತಿ ಆಗುತ್ತವೆ. ಬ್ರಹ್ಮಾಂಡದ ಮೇಲೆ ವಿಜಯವನ್ನು ಪಡೆಯುವ ಸಾಮಥ್ರ್ಯ ಅವನಲ್ಲಿ ಬಂದು ಬಿಡುತ್ತದೆ. ಪ್ರತಿಯೊಬ್ಬ ಮನುಷ್ಯನು ತಾಯಿ ಸಿದ್ಧಿದಾತ್ರಿಯ ಕೃಪೆಯನ್ನು ಪಡೆದುಕೊಳ್ಳಲು ನಿರಂತರ ಪ್ರಯತ್ನ ಮಾಡಬೇಕು. ಅವಳ ಆರಾಧನೆಯ ಕಡೆಗೆ ಮುಂದುವರಿಯಬೇಕು. ಇವಳ ಕೃಪೆಯಿಂದ ಅತ್ಯಂತ ದುಃಖರೂಪೀ ಸಂಸಾರದಿಂದ ನಿರ್ಲಿಪ್ತನಾಗಿದ್ದುಕೊಂಡು ಎಲ್ಲ ಸುಖವನ್ನು ಭೋಗಿಸುತ್ತಾ ಅವನು ಮೋಕ್ಷವನ್ನು ಪಡೆಯಬಲ್ಲನು.

    ನವದುರ್ಗೆಯಲ್ಲಿ ಸಿದ್ಧಿದಾತ್ರಿ ದೇವಿಯೂ ಕೊನೆಯವಳಾಗಿದ್ದಾಳೆ. ಬೇರೆ ಎಂಟು ದುರ್ಗೆಯರ ಪೂಜೆ ಉಪಾಸನೆಯನ್ನು ಶಾಸ್ತ್ರೀಯ ವಿಧಿ-ವಿಧಾನಕ್ಕನುಸಾರ ಮಾಡುತ್ತಾ ಭಕ್ತರು ನವರಾತ್ರಿಯ ಒಂಭತ್ತನೇ ದಿನ ಇವಳ ಉಪಾಸನೆಯಲ್ಲಿ ಪ್ರವೃತ್ತರಾಗುತ್ತಾರೆ. ಈ ಸಿದ್ಧಿದಾತ್ರೀ ದೇವಿಯ ಉಪಾಸನೆಯನ್ನು ಪೂರ್ಣಗೊಳಿಸಿದ ಬಳಿಕ ಭಕ್ತರ, ಸಾಧಕರ, ಲೌಕಿಕ-ಪಾರಲೌಕಿಕ ಎಲ್ಲ ಪ್ರಕಾರದ ಕಾಮನೆಯಗಳ ಪೂರ್ತಿ ಆಗಿ ಹೋಗುತ್ತದೆ ಎನ್ನುವ ನಂಬಿಕೆಯಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ದಸರಾ ಸುದ್ದಿಗಳು:

    1. ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    2. ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    3. ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

    4. ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ

    5. ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ

    6. ದಸರಾ ಹಬ್ಬಕ್ಕೆ ಸ್ಟೈಲಿಶ್ ಆಗಿ ಕಾಣ್ಬೇಕಾ ಹೀಗಿರಲಿ ನಿಮ್ಮ ಸೀರೆ ಆಯ್ಕೆ

    7. ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

    8.ದೇಶದ ವಿವಿಧ ರಾಜ್ಯಗಳಲ್ಲಿ ದಸರಾ ಹೇಗೆ ಆಚರಿಸುತ್ತಾರೆ? – ಇಲ್ಲಿದೆ ಮಾಹಿತಿ

    9.ನವರಾತ್ರಿ ಹಬ್ಬ ಹೆಣ್ಣು ಮಕ್ಕಳಿಗೆ ಇಷ್ಟ ಯಾಕೆ?

    10. ನವರಾತ್ರಿ ಮೊದಲ ದಿನ ಶೈಲಪುತ್ರಿಯ ಪೂಜೆ: ದಾಕ್ಷಾಯಿಣಿ ಶೈಲಪುತ್ರಿಯಾಗಿ ಶಿವನ ಕೈ ಹಿಡಿದ ಕಥೆ ಓದಿ

    11. ನವರಾತ್ರಿ ಎರಡನೇ ದಿನ ಇಷ್ಟಾರ್ಥ ಸಿದ್ಧಿಗಾಗಿ ಬ್ರಹ್ಮಚಾರಿಣಿಯನ್ನು ಪೂಜಿಸೋದು ಯಾಕೆ? ಪುರಾಣ ಕಥೆ ಓದಿ

    12. ಸಿಂಪಲ್ ಮೈಸೂರು ಬೋಂಡಾ ಮಾಡುವ ವಿಧಾನ

    13. ನವದುರ್ಗೆಯ 4ನೇ ರೂಪ ಕೂಷ್ಮಾಂಡ -ಇವಳ ಭಕ್ತಿಯಿಂದ ಆಯಸ್ಸು, ಬಲ, ಆರೋಗ್ಯ ವೃದ್ಧಿ

    14. ನವರಾತ್ರಿ ವಿಶೇಷ – ಸ್ಕಂದಮಾತೆಯನ್ನ ಪೂಜಿಸುವುದು ಏಕೆ?

    15. ಜನ್ಮ-ಜನ್ಮಾಂತರದ ಪಾಪಗಳನ್ನು ನಾಶಮಾಡುವ 6ನೇ ಅವತಾರ ಕಾತ್ಯಾಯನೀ

    16. ಮೈಸೂರಿನ ಸಿಹಿ ಮಾತ್ರವಲ್ಲ ಹಬ್ಬಕ್ಕಾಗಿ ಬಾದೂಷವನ್ನು ಮಾಡಿ-ಇಲ್ಲಿದೆ ಸರಳ ವಿಧಾನ

    17. 7ನೇ ದಿನ ಕಾಲರಾತ್ರಿಯನ್ನು ಪೂಜೆ ಮಾಡೋದು ಯಾಕೆ?

    18. ನವರಾತ್ರಿಯ 8ನೇ ದಿನ ಮಹಾಗೌರಿಯ ಪೂಜೆ!

  • ಸೌಹಾರ್ದದ ಮೈಸೂರು ಜಂಬೂಸವಾರಿ – ಆನೆಗೆ ಅಂಬಾರಿ ಕಟ್ತಾರೆ ಮುಸ್ಲಿಮರು!

    ಸೌಹಾರ್ದದ ಮೈಸೂರು ಜಂಬೂಸವಾರಿ – ಆನೆಗೆ ಅಂಬಾರಿ ಕಟ್ತಾರೆ ಮುಸ್ಲಿಮರು!

    ಮೈಸೂರು: ಕರ್ನಾಟಕದ ನಾಡಹಬ್ಬವಾಗಿರುವ ಮೈಸೂರು ದಸರಾ ಸೌಹಾರ್ದತೆಯ ಪ್ರತೀಕವೂ ಆಗಿದ್ದು, ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿಯ ವೇಳೆ ಆನೆಗೆ ಮುಸ್ಲಿಮರು ಅಂಬಾರಿ ಕಟ್ಟುವುದು ವಿಶೇಷ.

    ಹೌದು, ಸಾವಿರಾರು ಪ್ರವಾಸಿಗರನ್ನು ತನ್ನತ್ತಾ ಸೆಳೆಯುವ ದಸರಾ ಜಂಬೂಸವಾರಿಯ ಗಜಪಡೆಯನ್ನು ಸಿದ್ದಗೊಳಿಸುವಲ್ಲಿ ಮುಸ್ಲಿಂ ಸಮುದಾಯದ ಪಾತ್ರವು ಇದೆ. ಹೀಗಾಗಿ ಮೈಸೂರು ದಸರಾ ಸೌಹಾರ್ದತೆಯ ಪ್ರತೀಕವಾಗಿದೆ.

    ಗಜಪಡೆಯ ಆರೈಕೆಯಲ್ಲದೇ, ಜಂಬೂಸವಾರಿಗೆ ಅಂಬಾರಿಯನ್ನು ಕಟ್ಟುವಲ್ಲಿ ಅಕ್ರಂ, ನವೀದ್, ಕಲೀಂ, ಪಾಷಾ ಹಾಗೂ ಜಕಾವುಲ್ಲಾರವರು ಪ್ರಮುಖ ಪಾತ್ರ ವಹಿಸುತ್ತಾರೆ. ಧರ್ಮದ ಹಂಗಿಲ್ಲದೇ ಧಾರ್ಮಿಕ ಕಾರ್ಯಕ್ರಮಕ್ಕೆ ಇವರ ಶ್ರಮ ಎಲೆಮರೆ ಕಾಯಿಯಂತಿದೆ.

    ಮಾವುತರಾಗಿರುವ ಅಕ್ರಂ ಕಳೆದ 19 ವರ್ಷಗಳಿಂದ ಗಜಪಡೆಯ ಆರೈಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅರಮನೆಯಲ್ಲಿ ಬೀಡುಬಿಟ್ಟಿರುವ 12 ಆನೆಗಳಿಗೆ ಆಹಾರ ಸಿದ್ಧಪಡಿಸುವ ಜವಾಬ್ದಾರಿಯಿಂದ ಹಿಡಿದು ಅವುಗಳ ಆರೈಕೆ, ಅಲಂಕಾರ, ಹಗ್ಗ ನೇಯುವುದು, ಚಿಕಿತ್ಸೆ ನೀಡುವಾಗ ಪಶುವೈದ್ಯರಿಗೆ ಸಹಕರಿಸುತ್ತಾರೆ. ವಿಶೇಷವಾಗಿ ಆನೆಗಳ ಜೊತೆ ಆತ್ಮೀಯತೆಯನ್ನು ಬೆಳೆಸಿಕೊಂಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಅಕ್ರಂ, ನನ್ನ ಪಾಲಿಗೆ ದಸರೆಯೇ ದೊಡ್ಡ ಹಬ್ಬ. ಖುಷಿಯಿಂದ ದೇವರು ನೀಡಿದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ. ನನ್ನ ಮನೆಯ ಕೆಲಸವೆಂದು ತಿಳಿದು ದುಡಿಯುತ್ತಿದ್ದೇನೆ. ಇದಲ್ಲದೇ ನಾವೆಲ್ಲರೂ ಸೇರಿ ಧಾರ್ಮಿಕ ಕಾರ್ಯಕ್ರಮಗಳನ್ನು ಸಹ ಭಕ್ತಿ-ಭಾವದಿಂದ ನೆರವೇರಿಸುತ್ತೇವೆ. ಎಲ್ಲರೂ ಸೇರಿ ಕೆಲಸ ಮಾಡಿ ದಸರಾ ಯಶಸ್ವಿಯಾಗುವಂತೆ ಮಾಡುತ್ತೇವೆ. ಇದರಿಂದ ಮೈಸೂರಿಗೆ ಆಗಮಿಸುವ ಪ್ರವಾಸಿಗರು ಸಹ ಸಂತೋಷ ಪಡುತ್ತಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಅರ್ಜುನ ಆನೆಗೆ 750 ಕೆಜಿ ತೂಕದ ಚಿನ್ನದ ಅಂಬಾರಿ ಹಾಗೂ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಸರಾಗವಾಗಿ ಹೊರುವುದಕ್ಕೆ ಗಾದಿ ಹಾಗೂ ನಮ್ದಾ ಪ್ರಮುಖ ಪಾತ್ರ ವಹಿಸುತ್ತದೆ. ಈ ಗಾದಿ ಹಾಗೂ ನಾಮ್ದಾ ತಯಾರಿಕೆಯಲ್ಲಿ ದಸ್ತಗಿರಿ ಪಾಷಾ ಹಾಗೂ ಜಕಾವುಲ್ಲಾರ ಕೈಚಳಕ ಅಡಗಿದೆ. ಇವರು ಸಿದ್ಧಪಡಿಸಿದ ನಂತರ ಅಂಬಾರಿ ಕಟ್ಟುವ ಹೊಣೆಯನ್ನು ಅಕ್ರಂ ಚಾಣಾಕ್ಷತನದಿಂದ ನಿಭಾಯಿಸುತ್ತಾರೆ.

    ಇವರಲ್ಲದೇ ನವೀದ್ ಎಂಬವರು ಕಳೆದ ಎರಡು ವರ್ಷಗಳಿಂದ ಗೋಪಿಯ ಆನೆಯ ಮಾವುತರಾಗಿ ಕಾರ್ಯನಿರ್ವಹಿಸುತ್ತಿದ್ದರೆ, ದಸ್ತಗಿರಿ ಪಾಷಾ ಎಂಬವರು ಅರಮನೆಯ ಆನೆಗಳಾದ ಚಂಚಲಾ, ಸೀತಾ, ಜೆಮಿನಿ, ಪ್ರೀತಿ, ರಾಜೇಶ್ವರಿ ಹಾಗೂ ರೂಬಿ ಕಾಳಜಿಯನ್ನು ನೋಡಿಕೊಳ್ಳುತ್ತಾರೆ. ಇದರ ಜೊತೆ ಅರಮನೆಯ ಗಂಡಾನೆಗಳಾದ ವಿಕ್ರಂ ಹಾಗೂ ಗೋಪಿಯನ್ನು ಅರಮನೆಯ ಆವರಣದಲ್ಲಿ ರಾಜವಂಶಸ್ಥರು ನಡೆಸುವ ನವರಾತ್ರಿ ಕಾರ್ಯಕ್ರಮಗಳಲ್ಲಿ ಆನೆಗಳಿಗೆ 9 ದಿನವು ಅಲಂಕಾರ ಮಾಡಿ ಪೂಜೆಗೆ ಕರೆದುಕೊಂಡು ಹೋಗುವ ಜವಾಬ್ದಾರಿಯನ್ನು ಸಹ ಹೊತ್ತಿದ್ದಾರೆ.

    ಧಾರ್ಮಿಕ ಕಾರ್ಯಕ್ರಮಗಳಿಗೆ ರಕ್ತದ ಹಂಗಿಲ್ಲ. ಮನುಷ್ಯರ ಜಾತಿ, ಧರ್ಮದ ಬಗ್ಗೆ ಆನೆಗಳಿಗೆ ಗೊತ್ತಿಲ್ಲ. ಅನ್ನ ನೀಡುವ ಕೆಲಸವೇ ನನಗೆ ದೇವರು ಎಂದು ದಸ್ತಗಿರಿ ತಮ್ಮ ಕಾಯಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 10 ನಿಮಿಷದಲ್ಲಿ ಮಾಡಿ ಸವಿಯಿರಿ ಮೈಸೂರು ಸಿಂಪಲ್ ರಸಂ!

    10 ನಿಮಿಷದಲ್ಲಿ ಮಾಡಿ ಸವಿಯಿರಿ ಮೈಸೂರು ಸಿಂಪಲ್ ರಸಂ!

    ನಾಡಿನಾದ್ಯಂತ ಕಾತರದಿಂದ ಕಾಯುತ್ತಿರುವ ಮೈಸೂರು ಜಂಬು ಸವಾರಿ ಶುಕ್ರವಾರ ನಡೆಯಲಿದೆ. ಇಲ್ಲಿಯವರೆಗೂ ನವದುರ್ಗೆಯನ್ನು ಪೂಜೆ ಮಾಡಿ ಸಿಹಿ ಮಾಡಿ ಸಂಭ್ರಮಿಸಿದ್ದೀರಾ. ಈಗ ಹಬ್ಬಕ್ಕಾಗಿ ಆರೋಗ್ಯಕ್ಕೂ ಉತ್ತಮವಾದ ಮೈಸೂರು ಬಿಸಿಬಿಸಿ ರಸಂ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    ಪುಡಿ ಮಾಡಲು
    1. ದನಿಯಾ – 2 ಚಮಚ
    2. ಜೀರಿಗೆ – 1 ಚಮಚ
    3. ಕಡಲೆ ಬೇಳೆ – 1 ಚಮಚ
    4. ಮೆಣಸು – 1 ಚಮಚ
    5. ಕೆಂಪು ಒಳ ಮೆಣಸಿನ ಕಾಯಿ – 3 ರಿಂದ 4
    6. ಕೊಬ್ಬರಿ ತುರಿ – ಅರ್ಧ ಬಟ್ಟಲು

    ಪೌಡರ್ ಮಾಡುವ ವಿಧಾನ:
    * ಒಂದು ಫ್ರೈಯಿಂಗ್ ಪ್ಯಾನ್‍ಗೆ ದನಿಯಾ, ಜೀರಿಗೆ, ಕಡಲೆಬೇಳೆ, ಮೆಣಸು, ಕೆಂಪು ಒಣ ಮೆಣಸಿನಕಾಯಿ ಹಾಕಿ ಫ್ರೈ ಮಾಡಿ.
    * ಅದಕ್ಕೆ ಕೊಬ್ಬರಿ ತುರಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ಮಿಕ್ಸರ್ ಜಾರ್ ಗೆ ಹಾಕಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ.

    ರಸಕ್ಕೆ
    1. ಟೊಮೋಟೋ – 2 ರಿಂದ 3
    2. ಹುಣಸೆಹಣ್ಣು – ನಿಂಬೆ ಗಾತ್ರ
    3. ಅರಿಶಿನ ಪುಡಿ – ಅರ್ಧ ಚಮಚ
    4. ಉಪ್ಪು – ರುಚಿಗೆ ತಕ್ಕಷ್ಟು
    5. ಬೆಲ್ಲ – 1 ಚಮಚ
    6. ತೊಗರಿ ಬೇಳೆ – 1 ಬಟ್ಟಲು

    ಒಗ್ಗರಣೆಗೆ
    1. ಎಣ್ಣೆ – 3 ಚಮಚ
    2. ಸಾಸಿವೆ – ಅರ್ಧ ಚಮಚ
    3. ಕರಿಬೇವು – ಸ್ವಲ್ಪ
    4. ಇಂಗು – ಚಿಟಿಕೆ
    5. ಕೆಂಪು ಮೆಣಸಿನ ಕಾಯಿ -3 ರಿಂದ 4
    6. ಕೊತ್ತಂಬರಿ ಸೊಪ್ಪು


    ರಸಂ ಮಾಡುವ ವಿಧಾನ:
    * ಮೊದಲಿಗೆ ತೊಗರಿಬೇಳೆಯನ್ನು ಕುಕ್ಕರ್ ಗೆ  ಹಾಕಿ 2-3 ಕೂಗು ಕೂಗಿಸಿಟ್ಟುಕೊಳ್ಳಿ.
    * ಫ್ರೈಯಿಂಗ್ ಪ್ಯಾನಿಗೆ ಹೆಚ್ಚಿದ ಟೊಮೋಟೋ, ಹುಣಸೆ ರಸ, ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಹಾಕಿ ಲಿಡ್ ಮುಚ್ಚಿ 5 ರಿಂದ 10 ನಿಮಿಷ ಚೆನ್ನಾಗಿ ಕುದಿಸಿ.
    * ಬಳಿಕ ಅದಕ್ಕೆ ಈ ಮೊದಲೇ ಬೇಯಿಸಿಟ್ಟುಕೊಂಡ ತೊಗರಿ ಬೇಳೆಯನ್ನು ಸೇರಿಸಿ ಲಿಡ್ ಮುಚ್ಚಿ ಬೇಯಿಸಿ. ಚೆನ್ನಾಗಿ ಕುದಿಸಿ.
    * ಈಗ ರಸಂಗೆ ಬೇಕಾದಷ್ಟು ನೀರು ಸೇರಿಸಿ, ಹುರಿದು ಪುಡಿ ಮಾಡಿದ ಪೌಡರ್ ಅನ್ನು 2 ರಿಂದ 3 ಚಮಚ ಸೇರಿಸಿ ಕುದಿಸಿ.
    * ರಸ ಚೆನ್ನಾಗಿ ಕುದಿ ಬಂದು ಸುವಾಸನೆ ಬರುತ್ತದೆ.
    * ಅದಕ್ಕೀಗ ಒಗ್ಗರಣೆ ಸೇರಿಸಿ. ಮೇಲೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಸ್ಟೌವ್ ಆರಿಸಿದರೆ 10 ನಿಮಿಷದಲ್ಲಿ ರಸಂ ರೆಡಿ.
    * ಬಿಸಿ ಅನ್ನದೊಂದಿಗೆ ರಸಂ ಜೊತೆ ತುಪ್ಪ ಸೇರಿಸಿ ಊಟ ಮಾಡಿದರೆ ಅದರ ಮಜಾವೇ ಬೇರೆ.

    ಒಗ್ಗರಣೆ:
    * ಒಂದು ಒಗ್ಗರಣೆ ಬೌಲಿಗೆ ಎಣ್ಣೆ ಹಾಕಿ.
    * ಕಾದ ಮೇಲೆ ಸಾಸಿವೆ, ಕರಿಬೇವು, ಇಂಗು, ಕೆಂಪು ಮೆಣಸಿನ ಕಾಯಿ ಹಾಕಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ದರ್ಶನ್ ಪತ್ನಿ ವಿಜಯಲಕ್ಷ್ಮಿಯ ಖಡಕ್ ಮಾತು

    ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ದರ್ಶನ್ ಪತ್ನಿ ವಿಜಯಲಕ್ಷ್ಮಿಯ ಖಡಕ್ ಮಾತು

    ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಮಾಡಿರುವ ಟ್ವೀಟ್ ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

    ವಿಜಯಲಕ್ಷ್ಮಿ ಅವರು, “ಪ್ರತಿಯೊಬ್ಬ ಮಹಿಳೆಯಲ್ಲೂ ದುರ್ಗ ದೇವಿ ಇರುತ್ತಾಳೆ. ದೇಗುಲದಲ್ಲಿರುವ ದೇವಿಯನ್ನು ಪೂಜಿಸುವ ಮೊದಲು ಮಹಿಳೆಯರಿಗೆ ಗೌರವ ಕೊಡುವುದನ್ನು ಕಲಿಯಿರಿ” ಎಂದು ಟ್ವೀಟ್ ಮಾಡಿದ್ದಾರೆ. ಆದರೆ ಈಗ ವಿಜಯಲಕ್ಷ್ಮಿ ಅವರು ಮಾಡಿರುವ ಟ್ವೀಟ್ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

    ಸದ್ಯಕ್ಕೆ ಸ್ಯಾಂಡಲ್‍ವುಡ್ ನಲ್ಲಿ ತಮಗಾದ ಅನ್ಯಾಯವನ್ನ ಹೇಳಿಕೊಳ್ಳಲು ಮೀಟೂ ಒಂದೊಳ್ಳೆ ವೇದಿಕೆಯಾಗಿದೆ ಅಂತ ಬಹುತೇಕ ಎಲ್ಲಾ ಕ್ಷೇತ್ರಗಳ ಮಹಿಳೆಯರು ತಮಗಾದ ಲೈಂಗಿಕ ಶೋಷಣೆಯ ಅಳಲು ತೋಡಿಕೊಂಡಿದ್ದಾರೆ. ಈಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ಟ್ವೀಟ್ ಮಾಡಿರುವುದು ಮೀಟೂ ಅಭಿಯಾನದಲ್ಲಿ ಮಹಿಳೆಯರ ಪರವಾಗಿದ್ದೇನೆ ಎಂಬಂತಿದೆ. ವಿಜಯಲಕ್ಷ್ಮಿ ಅವರು ನೇರವಾಗಿ ಮೀಟೂ ಅಭಿಯಾನದ ಕುರಿತು ಮಾತನಾಡಿಲ್ಲ. ಬದಲಾಗಿ ನವರಾತ್ರಿಗೆ ಎಲ್ಲಾ ಮಹಿಳೆಯರಿಗೆ ಶುಭಾಶಯವನ್ನು ತಿಳಿಸಿದ್ದಾರೆ.

    ಈ ಹಿಂದೆ ಕಿಡಿಗೇಡಿಗಳು ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿ ಮಾಡಿ ಕಿರುಕುಳ ನೀಡುತ್ತಿದ್ದರು. ವಿಜಯಲಕ್ಷ್ಮಿ ಜೊತೆಯಿರುವ ಫೋಟೋಗೆ `ಮೈ ಲೈಫ್’ ಎಂದು ಕಿಡಿಗೇಡಿಯೊಬ್ಬ ಟ್ಯಾಗ್ ಮಾಡಿದ್ದನು. ಅಲ್ಲದೇ ಫೋಟೋ ಟ್ಯಾಗ್ ಮಾಡಿ ಕೀಳುಮಟ್ಟದ ಅಶ್ಲೀಲ ಪದವನ್ನು ಕೂಡ ಬಳಸಿದ್ದನು.

    ಈ ಬಗ್ಗೆ ನಕಲಿ ಖಾತೆ ಮೂಲಕ ನನ್ನ ಹಾಗೂ ಕುಟುಂಬಸ್ಥರ ಫೋಟೋಗಳನ್ನು ದುರ್ಬಳಕೆ ಆಗುತ್ತಿದೆ ಎಂದು ಆರೋಪಿಸಿ ವಿಜಯಲಕ್ಷ್ಮಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕಿಡಿಗೇಡಿ ವಿರುದ್ಧ ದೂರು ನೀಡಿದ್ದರು. ಐಪಿಸಿ ಸೆಕ್ಷನ್ 354(ಆ),354ಂ(1)(iv),(505)(507)(420)ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರಿನ ಸಿಹಿ ಮಾತ್ರವಲ್ಲ ಹಬ್ಬಕ್ಕಾಗಿ ಬಾದೂಷವನ್ನು ಮಾಡಿ-ಇಲ್ಲಿದೆ ಸರಳ ವಿಧಾನ

    ಮೈಸೂರಿನ ಸಿಹಿ ಮಾತ್ರವಲ್ಲ ಹಬ್ಬಕ್ಕಾಗಿ ಬಾದೂಷವನ್ನು ಮಾಡಿ-ಇಲ್ಲಿದೆ ಸರಳ ವಿಧಾನ

    ಜಂಬೂ ಸವಾರಿಗೆ ಜನರು ಕಾಯುತ್ತಿದ್ದು, ಇನ್ನು ನಾಲ್ಕು ದಿನಗಳ ಕಾಲ ದಸರಾ ಹಬ್ಬದ ಸಂಭ್ರಮ ನಾಡಿನಾದ್ಯಂತ ಕಳೆಕಟ್ಟುತ್ತದೆ. ಈಗಾಗಲೇ ದೇವಿಗಾಗಿ ಮೈಸೂರು ಪಾಕ್, ಜಿಲೇಬಿ, ಕಜ್ಜಾಯವನ್ನು ಮಾಡಿದ್ದೀರಿ, ಸಿಹಿ ಮಾತ್ರವಲ್ಲದೇ ಮೈಸೂರು ಬೋಂಡಾವನ್ನು ಕೂಡ ಮಾಡಿದ್ದೀರಿ, ಈಗ ಮತ್ತೊಂದು ಸಿಹಿ ಏನು ಮಾಡುವುದು ಎಂದು ಯೋಚಿಸುತ್ತಿದ್ದೀರಾ.. ನಿಮಗಾಗಿ ಸಿಂಪಲ್ ಆಗಿ ಸಿಹಿ ಬಾದೂಷ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    1. ಸಕ್ಕರೆ – 1 ಕೆಜಿ
    2. ಮೈದಾಹಿಟ್ಟು – ಅರ್ಧ ಕೆಜಿ
    3. ಬೆಣ್ಣೆ – 100 ಗ್ರಾಂ
    4. ಅಡುಗೆ ಸೋಡಾ -ಚಿಟಿಕೆ
    5. ಏಲಕ್ಕಿ ಪುಡಿ – ಚಿಟಿಕೆ
    6. ಎಣ್ಣೆ ಕರಿಯಲು

    ಮಾಡುವ ವಿಧಾನ
    * ಒಂದು ಪ್ಯಾನ್‍ಗೆ ಸಕ್ಕರೆ ಅದಕ್ಕೆ 2 ಕಪ್ ನೀರು ಹಾಕಿ ಕುದಿಸಿ.
    * ಅದಕ್ಕೆ ಏಲಕ್ಕಿ ಪುಡಿ ಹಾಕಿ ಒಂದು ಎಳೆ ಪಾಕ ಮಾಡಿಟ್ಟುಕೊಳ್ಳಿ.
    * ಬಳಿಕ ಒಂದು ಬೌಲ್‍ಗೆ ಜರಡಿ ಹಿಡಿದ ಮೈದಾ ಹಿಟ್ಟು, ಬೆಣ್ಣೆ, ಸೋಡಾ ಹಾಕಿ ಕಲಸಿ.
    * ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿಕೊಂಡು ಹಿಟ್ಟನ್ನು ನಾದಿಕೊಳ್ಳಿ. ಹಿಟ್ಟು ಆದಷ್ಟು ಸಾಫ್ಟ್ ಆಗಿದ್ದರೆ ಉತ್ತಮ.
    * ಈಗ ಹಿಟ್ಟನ್ನು ಚೆನ್ನಾಗಿ ನಾದಿ. ಸಣ್ಣ ಸಣ್ಣ ಉಂಡೆ ಮಾಡಿಟ್ಟುಕೊಳ್ಳಿ.
    * ಸಣ್ಣ ಉಂಡೆಯನ್ನು ಮತ್ತೆ ಎರಡೂ ಕೈಯಲ್ಲಿ ನಾದಿ ಎರಡು ಕಡೆಗಳಲ್ಲಿ ಮಧ್ಯದಲ್ಲಿ ಬೆರಳಿನಿಂದ ಒತ್ತಿ.


    * ಹೀಗೆ ಮಾಡಿಟ್ಟುಕೊಂಡ ಬಾದುಷಾವನ್ನು ಕಾದ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಆಗೋತನಕ ಡೀಪ್ ಪ್ರೈ ಮಾಡಿ.
    * ಬಿಸಿ ಇರುವಾಗಲೇ ಸಕ್ಕರೆ ಪಾಕಕ್ಕೆ ಹಾಕಿ ಅರ್ಧ ಗಂಟೆ ಬಿಟ್ಟು ಪಾಕದಿಂದ ಬಾದುಷಾವನ್ನು ತೆಗೆದು ಸವಿಯಿರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಿಹರ್ಸಲ್ ನೆಪದಲ್ಲಿ ದಸರಾ ಸಂಪ್ರದಾಯ ಮುರಿದ್ರಾ ಡಿಸಿಎಂ?

    ರಿಹರ್ಸಲ್ ನೆಪದಲ್ಲಿ ದಸರಾ ಸಂಪ್ರದಾಯ ಮುರಿದ್ರಾ ಡಿಸಿಎಂ?

    ಮೈಸೂರು: ಸಮ್ಮಿಶ್ರ ಸರ್ಕಾರದ ಉಪಮುಖ್ಯಮಂತ್ರಿ ಪರಮೇಶ್ವರ್ ರಿಹರ್ಸಲ್ ನೆಪದಲ್ಲಿ ಇದೂವರೆಗೂ ನಡೆಸಿಕೊಂಡು ಬಂದಿದ್ದ ದಸರಾ ಸಂಪ್ರದಾಯವನ್ನು ಮುರಿದ್ರಾ ಎನ್ನುವ ಪ್ರಶ್ನೆ ಎದ್ದಿದೆ.

    ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಿಹರ್ಸಲ್ ನೆಪದಲ್ಲಿ ಡಿಸಿಎಂ ಜಿ.ಪರಮೇಶ್ವರ್ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ್ದಾರೆ. ಪ್ರತೀ ವರ್ಷ ಜಂಬೂಸವಾರಿ ವೇಳೆ ಮಾತ್ರ ನಂದಿಧ್ವಜಕ್ಕೆ ಪೂಜೆ ಮತ್ತು ಗಜಪಡೆಗೆ ಪುಷ್ಪಾರ್ಚನೆ ಮಾಡುವುದು ವಾಡಿಕೆ. ಅಲ್ಲದೇ ಮೆರವಣಿಗೆಯ ಮೊದಲು ರಾಜ್ಯದ ಮುಖ್ಯಮಂತ್ರಿಗಳು ನಂದಿಧ್ವಜ ಹಾಗೂ ಜಂಬೂ ಸವಾರಿಗೆ ಪೂಜೆ ಸಲ್ಲಿಸಿದ ಬಳಿಕವೇ ಜಂಬೂಸವಾರಿ ಆರಂಭವಾಗುತ್ತಿತ್ತು. ಆದರೆ ಇಂದು ರಿಹರ್ಸಲ್ ರೂಪದಲ್ಲಿ ಡಿಸಿಎಂ ಪರಮೇಶ್ವರ್ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ಗಜಪಡೆಗೆ ಪುಷ್ಪಾರ್ಚನೆ ಮಾಡಿದ್ದಾರೆ.

    ಜನರೇ ಇಲ್ಲದಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗಳ ಸಮ್ಮುಖದಲ್ಲಿ ಡಿಸಿಎಂ ಜಂಬೂ ಸವಾರಿ ರಿರ್ಹಸಲ್ ನಡೆಸಿದ್ದಾರೆ. ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ರಿಹರ್ಸಲ್ ರೂಪದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಸಮ್ಮಿಶ್ರ ಸರ್ಕಾರ ಅನಾದಿಕಾಲದಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯಕ್ಕೆ ಎಳ್ಳು-ನೀರು ಬಿಟ್ಟಿದೆ ಎನ್ನುವ ಟೀಕೆಗೆ ಗುರಿಯಾಗಿದೆ.

    ಸಂಪ್ರದಾಯದ ಪ್ರಕಾರ ನಾಡಹಬ್ಬ ದಸರಾದಲ್ಲಿ ನಂದಿಧ್ವಜಕ್ಕೆ ವಿಶೇಷ ಮಹತ್ವವಿದೆ. ಅಲ್ಲದೇ ಶುಭ ಮುಹೂರ್ತದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಬೇಕೆಂಬ ಕಟ್ಟುನಿಟ್ಟಿನ ನಿಯಮವಿದೆ. ಆದರೆ ಇಂದು ಇವನ್ನೆಲ್ಲಾ ಗಾಳಿಗೆ ತೂರಿದ ಪರಮೇಶ್ವರ್ ಯಾವುದೇ ಮುಹೂರ್ತವಿಲ್ಲದೇ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ದಸರಾ ಸಂಪ್ರದಾಯಕ್ಕೆ ಅಪಮಾನ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ನಂದಿಧ್ವಜವನ್ನ ಸಾಂಪ್ರದಾಯಿಕವಾಗಿ ಪೂಜೆ ಮಾಡಿ ಪ್ರತಿಷ್ಠಾಪಿಸುತ್ತಿದ್ದರು. ಅಲ್ಲದೇ 9 ದಿನಗಳ ಕಾಲ ಪೂಜೆ ನಡೆಸಿ ನಂದಿಧ್ವಜ ಕಟ್ಟುತ್ತಿದ್ದರು. ಗೌರಿಶಂಕರ ನಗರದ ಉಡಿಗಾಲ ಮಹದೇವಪ್ಪರ ಕುಟುಂಬವೇ ಇಷ್ಟು ವರ್ಷ ನಂದಿಧ್ವಜ ಪೂಜೆ ನೆರವೇರಿಸುತ್ತಿದ್ದರು. ಆದರೆ ಇಂದು ಬೇರೆ ತಂಡಕ್ಕೆ ಮೈತ್ರಿ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಈ ಬಗ್ಗೆ ಖುದ್ದು ಡಿಸಿಎಂ ಪರಮೇಶ್ವರ್ ಅವರನ್ನು ಪ್ರಶ್ನಿಸಿದಾಗ ಅವರು ಸುಮ್ಮನೆ ನಕ್ಕು ತೆರಳಿದರು.

    ಕೇವಲ 45 ನಿಮಿಷದಲ್ಲಿ ರಿಹರ್ಸಲ್ ಮುಕ್ತಾಯವಾಗಿದ್ದು, ಪೊಲೀಸರ ಪಥ ಸಂಚಲನ ಕೇವಲ ಆವರಣಕ್ಕೆ ಸೀಮಿತವಾಗಿತ್ತು. ಜಂಬೂ ಸವಾರಿ ತಾಲೀಮಿನಲ್ಲಿ ಜನರು ಇಲ್ಲದ ಕಾರಣ ಹುಮ್ಮಸ್ಸು ಇರಲಿಲ್ಲ.

    ಸಿಎಂ ಕುಮಾರಸ್ವಾಮಿಯವರು ಡಿಸಿಎಂ ಪರಮೇಶ್ವರ್ ರವರಿಗೆ ಜಿರೋ ಟ್ರಾಫಿಕ್ ವ್ಯವಸ್ಥೆ ನೀಡಿದಂತೆ, ದಸರಾದ ನಂದಿ ಧ್ವಜ ಪೂಜೆಯನ್ನು ರಿಹರ್ಸಲ್ ಮಾದರಿಯಲ್ಲಿ ಪರೋಕ್ಷವಾಗಿ ಬಿಟ್ಟುಕೊಟ್ಟಿದ್ದಾರೆ. ಕೇವಲ ವೈಯಕ್ತಿಕ ಆಸೆ ಈಡೇರಿಕೆಗಾಗಿ ಮೈತ್ರಿ ಸರ್ಕಾರ ದಸರಾ ಸಂಪ್ರದಾಯವನ್ನೇ ಬದಲಾಯಿಸಿದ್ಯಾ ಎನ್ನುವ ಮಾತುಗಳು ಈಗ ಕೇಳಿಬರುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನವದುರ್ಗೆಯ 4ನೇ ರೂಪ ಕೂಷ್ಮಾಂಡ -ಇವಳ ಭಕ್ತಿಯಿಂದ ಆಯಸ್ಸು, ಬಲ, ಆರೋಗ್ಯ ವೃದ್ಧಿ

    ನವದುರ್ಗೆಯ 4ನೇ ರೂಪ ಕೂಷ್ಮಾಂಡ -ಇವಳ ಭಕ್ತಿಯಿಂದ ಆಯಸ್ಸು, ಬಲ, ಆರೋಗ್ಯ ವೃದ್ಧಿ

    ವರಾತ್ರಿಯ ನಾಲ್ಕನೇಯ ದಿನ ದೇವಿಯನ್ನು ಕೂಷ್ಮಾಂಡ ರೂಪದಲ್ಲಿ ಪೂಜಿಸಲಾಗುತ್ತದೆ. ತನ್ನ ಮಧುರ ನಗುವಿನಿಂದ ಅಂಡ ಅರ್ಥಾತ್ ಬ್ರಹ್ಮಾಂಡವನ್ನು ಉತ್ಪನ್ನವಾಗಿಸುವ ಕಾರಣ ಇವಳನ್ನು ಕೂಷ್ಮಾಂಡ ದೇವಿ ಎಂದು ಕರೆಯಲಾಗುತ್ತದೆ.

    ಇವಳಿಗೆ ಎಂಟು ಭುಜಗಳಿರುವ ಕಾರಣ ಅಷ್ಟಭುಜಾದೇವಿ ಎಂದು ಕರೆಯಲಾಗುತ್ತದೆ. ಇವಳ ಏಳು ಕೈಗಳಲ್ಲಿ ಕ್ರಮವಾಗಿ ಕಮಂಡಲ, ಧನಸ್ಸು, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ ಮತ್ತು ಗದೆ ಇದೆ. ಇವಳ ವಾಹನ ಸಿಂಹವಾಗಿದೆ. ಸಂಸ್ಕೃತದಲ್ಲಿ ಕುಂಬಳಕಾಯಿಯನ್ನು ಕೂಷ್ಮಾಂಡವೆಂದು ಹೇಳುತ್ತಾರೆ. ಬಲಿಯಲ್ಲಿ ಕುಂಬಳಕಾಯಿಯ ಬಲಿಯೇ ಇವಳಿಗೆ ಪ್ರಿಯವಾಗಿದೆ. ಈ ಕಾರಣದಿಂದಲೂ ಇವಳನ್ನು ಕೂಷ್ಮಾಂಡ ಎಂದು ಕರೆಯುತ್ತಾರೆ.

    ಸೃಷ್ಟಿಯ ಅಸ್ತಿತ್ವವೇ ಇಲ್ಲದಿರುವಾಗ, ಎಲ್ಲೆಡೆ ಅಂಧಕಾರವೇ-ಅಂಧಕಾರ ಪಸರಿಸಿತ್ತು. ಆಗ ಇದೇ ದೇವಿಯು ತನ್ನ ‘ಈಶತ್’ ಹಾಸ್ಯದಿಂದ ಬ್ರಹ್ಮಾಡವನ್ನು ರಚಿಸಿದ್ದಳು. ಆದ್ದರಿಂದ ಇವಳೇ ಸೃಷ್ಟಿಯ ಆದಿ-ಸ್ವರೂಪ ಆದಿಶಕ್ತಿಯಾಗಿದ್ದಾಳೆ. ಇವಳಿಂದ ಮೊದಲು ಬ್ರಹ್ಮಾಂಡದ ಅಸ್ತಿತ್ವವೇ ಇರಲಿಲ್ಲ.

    ಇವಳ ನಿವಾಸವು ಸುರ್ಯಮಂಡಲದೊಳಗಿನ ಲೋಕದಲ್ಲಿ ಇದೆ. ಸೂರ್ಯ ಲೋಕದಲ್ಲಿ ನಿವಾಸ ಮಾಡುವ ಅರ್ಹತೆ ಮತ್ತು ಶಕ್ತಿ ಇವಳಲ್ಲೇ ಇದೆ. ಇವಳ ಶರೀರದ ಕಾಂತಿ, ಪ್ರತಿಭೆಯೂ ಸೂರ್ಯನಿಗೆ ಸಮಾನವಾಗಿ ದೇವಿಪ್ಯಮಾನ ಹಾಗೂ ಹೊಳೆಯುವಂತಹುದು.

    ಬೇರೆ ಯಾವುದೇ ದೇವದೇವತೆಗಳು ಇವಳ ತೇಜ, ಪ್ರಭಾವಕ್ಕೆ ಸರಿಗಟ್ಟಲಾರರು. ಇವಳ ತೇಜ ಮತ್ತು ಪ್ರಕಾಶದಿಂದಲೇ ಹತ್ತೂ ದಿಕ್ಕುಗಳು ಪ್ರಕಾಶವಾಗಿದೆ. ಬ್ರಹ್ಮಾಂಡದ ಎಲ್ಲ ವಸ್ತುಗಳಲ್ಲಿ, ಪ್ರಾಣಿಗಳಲ್ಲಿ ಇರುವ ತೇಜ ಇವಳದೇ ಛಾಯೆಯಾಗಿದೆ.

    ನಾಲ್ಕನೇಯ ದಿನ ಸಾಧಕನ ಮನಸ್ಸು ‘ಅನಾಹುತ’ ಚಕ್ರದಲ್ಲಿ ನೆಲೆನಿಲ್ಲುತ್ತದೆ. ಆದ್ದರಿಂದ ಅಂದು ಅವನು ಅತ್ಯಂತ ಪವಿತ್ರ ಮತ್ತು ಅಚಂಚಲ ಮನಸ್ಸಿನಿಂದ ಕೂಷ್ಮಾಂಡ ದೇವಿಯ ಸ್ವರೂಪವನ್ನು ಧ್ಯಾನದಲ್ಲಿ ಧರಿಸಿಕೊಂಡು ಪೂಜೆ ಉಪಾಸನೆಯ ಕಾರ್ಯದಲ್ಲಿ ತೊಡಬೇಕು. ಜಗಜ್ಜನನೀ ಕೂಷ್ಮಾಂಡ ದೇವಿಯ ಉಪಾಸನೆಯಿಂದ ಭಕ್ತರ ಎಲ್ಲ ರೋಗ- ಶೋಕಗಳು ನಾಶವಾಗುತ್ತದೆ. ಇವಳ ಭಕ್ತಿಯಿಂದ ಆಯಸ್ಸು, ಯಶ, ಬಲ, ಆರೋಗ್ಯದ ವೃದ್ಧಿಯಾಗುತ್ತದೆ. ತಾಯಿ ಕೂಷ್ಮಾಂಡ ದೇವಿಯು ಸ್ವಲ್ಪ ಸೇವೆ-ಭಕ್ತಿಯಿಂದ ಪ್ರಸನ್ನಳಾಗುತ್ತಾಳೆ. ನಿಜವಾದ ಹೃದಯದಿಂದ ಮನುಷ್ಯನು ಇವಳಿಗೆ ಶರಣಾಗತನಾದರೆ ಬಳಿಕ ಅವನಿಗೆ ಅತ್ಯಂತ ಸುಲಭವಾಗಿ ಪರಮ ಪದದ ಪ್ರಾಪ್ತಿಯಾಗಬಲ್ಲದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ದಸರಾ ಸುದ್ದಿಗಳು:

    1. ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    2. ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    3. ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

    4. ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ

    5. ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ

    6. ದಸರಾ ಹಬ್ಬಕ್ಕೆ ಸ್ಟೈಲಿಶ್ ಆಗಿ ಕಾಣ್ಬೇಕಾ ಹೀಗಿರಲಿ ನಿಮ್ಮ ಸೀರೆ ಆಯ್ಕೆ

    7. ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

    8.ದೇಶದ ವಿವಿಧ ರಾಜ್ಯಗಳಲ್ಲಿ ದಸರಾ ಹೇಗೆ ಆಚರಿಸುತ್ತಾರೆ? – ಇಲ್ಲಿದೆ ಮಾಹಿತಿ

    9.ನವರಾತ್ರಿ ಹಬ್ಬ ಹೆಣ್ಣು ಮಕ್ಕಳಿಗೆ ಇಷ್ಟ ಯಾಕೆ?

    10. ನವರಾತ್ರಿ ಮೊದಲ ದಿನ ಶೈಲಪುತ್ರಿಯ ಪೂಜೆ: ದಾಕ್ಷಾಯಿಣಿ ಶೈಲಪುತ್ರಿಯಾಗಿ ಶಿವನ ಕೈ ಹಿಡಿದ ಕಥೆ ಓದಿ

    11. ನವರಾತ್ರಿ ಎರಡನೇ ದಿನ ಇಷ್ಟಾರ್ಥ ಸಿದ್ಧಿಗಾಗಿ ಬ್ರಹ್ಮಚಾರಿಣಿಯನ್ನು ಪೂಜಿಸೋದು ಯಾಕೆ? ಪುರಾಣ ಕಥೆ ಓದಿ

    12. ಸಿಂಪಲ್ ಮೈಸೂರು ಬೋಂಡಾ ಮಾಡುವ ವಿಧಾನ

  • ಗಮನಿಸಿ, ಮೈಸೂರು ದಸರಾ ವಾಹನಗಳ ಮಾರ್ಗ ಬದಲಾವಣೆ: ಎಲ್ಲಿ ನಿರ್ಬಂಧ? ಯಾವ ಮಾರ್ಗದಲ್ಲಿ ಸಂಚರಿಸಬೇಕು?

    ಗಮನಿಸಿ, ಮೈಸೂರು ದಸರಾ ವಾಹನಗಳ ಮಾರ್ಗ ಬದಲಾವಣೆ: ಎಲ್ಲಿ ನಿರ್ಬಂಧ? ಯಾವ ಮಾರ್ಗದಲ್ಲಿ ಸಂಚರಿಸಬೇಕು?

    ಮೈಸೂರು: ದಸರಾ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕಿನ ಮತ್ತು ಕೆಆರ್ ಎಸ್ ಸೇರಿದಂತೆ ಸುತ್ತಮುತ್ತ ವಾಹನಗಳ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಮಂಜುಶ್ರೀ ಆದೇಶ ಹೊರಡಿಸಿದ್ದಾರೆ.

    ಇಂದಿನಿಂದ ಮೈಸೂರಿನ ದಸರಾ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಆದ್ದರಿಂದ ಇಂದಿನಿಂದಲೇ ರಾತ್ರಿ 11 ಗಂಟೆವರೆಗೆ ಪಾಂಡವಪುರ ತಾಲೂಕಿನ ಕಟ್ಟೇರಿ ಕಡೆಯಿಂದ ಕೆಆರ್‍ಎಸ್ ಮಾರ್ಗವಾಗಿ ಬರುವ ಎಲ್ಲ ಸರಕು ವಾಹನಗಳ ಸಂಚಾರವನ್ನು ನಿರ್ಬಂಧ ಮಾಡಲಾಗಿದೆ.

    ಈ ವಾಹನಗಳು ಎಲೆಕೆರೆ ಹ್ಯಾಂಡ್ ಪೋಸ್ಟ್ ಮಾರ್ಗವಾಗಿ ಕೆ.ಆರ್.ಪೇಟೆ- ಮೈಸೂರು ರಸ್ತೆಯಲ್ಲಿ ಚಲಿಸಿ ಮೈಸೂರು ಕಡೆಗೆ ಅಥವಾ ಬೆಂಗಳೂರು ಕಡೆಗೆ ಏಕಮುಖವಾಗಿ ಸಂಚರಿಸುವಂತೆ ಸೂಚನೆ ನೀಡಿದ್ದಾರೆ.

    ಅಕ್ಟೋಬರ್ 17 ರಿಂದ 21ರವರೆಗೆ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆವರಗೆ ಮೈಸೂರು ಕಡೆಯಿಂದ ಬೃಂದಾವನ ಗಾರ್ಡನ್ ವೀಕ್ಷಿಸಲು ಬರುವ ಪ್ರವಾಸಿಗರ ಎಲ್ಲಾ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

    ಬೃಂದಾವನ ಗಾರ್ಡನ್ ವೀಕ್ಷಿಸಿದ ನಂತರ ವಾಪಸ್ ಹೊರಡುವಾಗ ಅಣೆಕಟ್ಟೆ ಬಳಿಯಿರುವ ಹೊಸ ಸೇತುವೆಯಿಂದ ಉತ್ತರಕ್ಕೆ ತಿರುಗಿ ನಾರ್ತ್ ಬ್ಯಾಂಕ್ ಕಟ್ಟೇರಿ, ಎಲೆಕೆರೆ ಹ್ಯಾಂಡ್‍ ಪೋಸ್ಟ್ ಮಾರ್ಗವಾಗಿ ಕೆ.ಆರ್.ಪೇಟೆ- ಮೈಸೂರು ರಸ್ತೆಯಲ್ಲಿ ಚಲಿಸಿ ಮೈಸೂರು, ಮಂಡ್ಯ, ಬೆಂಗಳೂರು ಹಾಗೂ ಇತರೆ ಕಡೆಗಳಿಗೆ ಏಕಮುಖವಾಗಿ ಸಂಚರಿಸುವಂತೆ ಸೂಚಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನವರಾತ್ರಿ ಹಬ್ಬ ಹೆಣ್ಣು ಮಕ್ಕಳಿಗೆ ಇಷ್ಟ ಯಾಕೆ?

    ನವರಾತ್ರಿ ಹಬ್ಬ ಹೆಣ್ಣು ಮಕ್ಕಳಿಗೆ ಇಷ್ಟ ಯಾಕೆ?

    ಬೆಂಗಳೂರು: ವಿಶ್ವವಿಖ್ಯಾತ ದಸರಾ ಹಬ್ಬ ಬಂತು ಎಂದರೆ ಎಲ್ಲೆಡೆ ಸಂಭ್ರಮ ಕಾಣಸಿಗುತ್ತದೆ. ದಸರಾ ಕರ್ನಾಟಕದ ನಾಡಹಬ್ಬ ಆಗಿದ್ದು 10 ದಿನಗಳ ನಡೆಯುವ ವಿಶೇಷ ಹಬ್ಬದಲ್ಲಿ 9 ದಿನಗಳ ಕಾಲ ವಿವಿಧ ಆಚರಣೆಗಳನ್ನು ಮಾಡಲಾಗುತ್ತದೆ. ಈ ಸಮಯದಲ್ಲಿ ನವರಾತ್ರಿಯ 9 ದಿನ ಆಚರಣೆ ಮಾಡುವುದರಿಂದ 9 ಮಹಡಿಯ ತರಹ ಮಾಡಿ ಗೊಂಬೆಗಳನ್ನು ಕೂರಿಸುವುದು ನಮ್ಮ ಕರ್ನಾಟಕದ ವಿಶಿಷ್ಟತೆಯಾಗಿದೆ.

    ಮೈಸೂರು ಭಾಗದಲ್ಲಿ `ಬೊಂಬೆ ಕೂಡಿಸುವ’ ಪದ್ಧತಿಯೂ ಸರಿಸುಮಾರು 500 ವರ್ಷಗಳಿಂದ ನಡೆದುಕೊಂಡು ಬರುತ್ತಿವೆ. ದಸರಾ ಹಬ್ಬದ ನವರಾತ್ರಿ ಹೆಣ್ಣು ಮಕ್ಕಳಿಗೆ ಇಷ್ಟವಾಗುವ ಹಬ್ಬವಾಗಿದ್ದು, ಈ ವೇಳೆ ಮನೆಯಲ್ಲಿ ಹೆಣ್ಣುಮಕ್ಕಳು ನವರಾತ್ರಿಯ ಅಷ್ಟು ದಿನಗಳು ಬೊ0ಬೆ ಕೂರಿಸಿ ಸಿಂಗಾರ ಮಾಡುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತಾರೆ. ಅಲ್ಲದೇ ಅವುಗಳಿಗೆ ಪ್ರತಿದಿನ ಪೂಜೆ ಮಾಡಿ ಆರತಿ ಬೆಳಗಿ ಪುಟ್ಟ ಮಕ್ಕಳನ್ನು ಕರೆದು ಅವರಿಗೆ ಬಾಗಿನ ಕೊಟ್ಟು ಕಳುಹಿಸುವ ಪದ್ಧತಿ ರೂಡಿಯಲ್ಲಿದೆ. ಇಲ್ಲಿ ಪ್ರಮುಖವಾಗಿ ಮದುವೆಯಾದ ಹೆಣ್ಣು ಮಕ್ಕಳು ತವರಿನಿಂದ ತಂದ ಪಟ್ಟದ ಗೊಂಬೆಗಳನ್ನು ಇಟ್ಟು ಪೂಜಿಸುತ್ತಾರೆ.

    ಪತ್ರಿ ಮನೆಯಲ್ಲಿ ಕೂರಿಸುವ ಒಂದೊಂದು ಬೊಂಬೆಗಳು ಒಂದೊಂದು ವಿಶೇಷ ಕಥೆ ಹೇಳುತ್ತವೆ. ನಮ್ಮ ಸಂಸ್ಕೃತ , ಧಾರ್ಮಿಕ ಪರಂಪರೆ, ಸಾಹಿತ್ಯ, ಆಚರಣೆ, ವೈಚಾರಿಕತೆ, ವಿಜ್ಞಾನ, ಪೌರಾಣಿಕ ಕಥೆ, ಹೀಗೆ ಕಾಲ, ವಿಷಯಕ್ಕೆ ತಕ್ಕಂತೆ ಗೊಂಬೆಗಳನ್ನು ಆಯ್ಕೆ ಮಾಡಿ ಸಿದ್ಧತೆ ಮಾಡಲಾಗಿರುತ್ತದೆ. ಅಲ್ಲದೇ ನಾಡಿನ ಸಂ ಸಂಸ್ಕೃತಿ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಸಾರುವ ಗೊಂಬೆಗಳು ಪ್ರಮುಖ ಸ್ಥಾನ ಪಡೆದಿರುತ್ತದೆ. ಮುಖ್ಯವಾಗಿ ಗ್ರಾಮೀಣ ಭಾಗದ ಬದುಕಿನ ಕಲೆಯನ್ನು ಸಾರುವ, ದರ್ಬಾರಿನಲ್ಲಿ ಕುಳಿತ ರಾಜ ಹೀಗೆ ಒಂದೊಂದು ನಯನ ಮನೋಹರವಾಗಿರುತ್ತದೆ.

    ಇಂತಹ ಬೊಂಬೆ ಹಬ್ಬಕ್ಕೆ ಗೊಂಬೆ ಕೂರಿಸುವ ಕಾರ್ಯಕ್ಕೆ ಪೂರಕವಾಗಿ ಗೊಂಬೆ ಮಾರಾಟ ಹಾಗೂ ಪ್ರದರ್ಶನಗಳು ನಡೆಸಲಾಗುತ್ತದೆ. ಕರ್ನಾಟಕದ ಮೈಸೂರು, ಬೆಂಗಳೂರು, ಚನ್ನಪಟ್ಟಣ, ಕಿನ್ನಾಳ ಮತ್ತು ಖಾನಾಪುರದಲ್ಲಿ ತಯಾರಾಗಿರುವ ಬೊಂಬೆಗಳ ಜೊತೆಗೆ ತಮಿಳುನಾಡು, ಆಂಧ್ರಪ್ರದೇಶ, ಉತ್ತರಪ್ರದೇಶದ, ಪಶ್ಚಿಮ ಬಂಗಾಳ, ರಾಜಸ್ಥಾನದಲ್ಲಿ ತಯಾರು ಮಾಡಲಾಗುವ ಗೊಂಬೆಗಳು ಕೂಡ ಈ ವೇಳೆ ಕಾಣಬಹುದಾಗಿದೆ.

    ಹವ್ಯಾಸವಾದ ಸಂಪ್ರದಾಯ ಪದ್ಧತಿ: ಬಹಳಷ್ಟು ಹೆಣ್ಣು ಮಕ್ಕಳಿಗೆ ಸಂಪ್ರದಾಯವಾಗಿ ಈ ಆಚರಣೆ ಸದ್ಯ ಒಂದು ಕಲೆಯ ಹವ್ಯಾಸವಾಗಿದೆ. ತಾವು ಪ್ರದರ್ಶಿಸುವ ಗೊಂಬೆಗಳಲ್ಲಿ ಒಂದು ವಿಶಿಷ್ಟ ಕಥೆಯನ್ನೇ ಹೇಳುವ ಸಾಮರ್ಥ್ಯ ಇಂದು ರೂಪುಗೊಂಡಿದೆ. ಇದರಲ್ಲಿ ಹಣದ ಜೊತೆಗೆ ಸಮಯವನ್ನು ಮೀಸಲಿಡುವ ಕೌಶಲ್ಯವೂ ಹೆಣ್ಣು ಮಕ್ಕಳಲ್ಲಿ ಬೆಳೆಯುತ್ತದೆ. ಅಲ್ಲದೇ ವರ್ಷದಿಂದ ವರ್ಷಕ್ಕೆ ಹೊಸ ಹೊಸ ಪರಿಕಲ್ಪನೆ ಮೂಡಿ ವಿಶಿಷ್ಟತೆ ಕಾರಣವಾಗುತ್ತದೆ. ದಸರಾ ಪ್ರಾರಂಭಕ್ಕೆ ಮುನ್ನವೇ ಆರಂಭವಾರುವ ಇದರ ಸಿದ್ಧತೆ ಕಾರ್ಯ ಸಿದ್ಧಪಡಿಸುವ ವ್ಯಕ್ತಿಯ ಕ್ರಿಯಾಶೀಲತೆಯನ್ನು ಪ್ರದರ್ಶಿಸುತ್ತದೆ.

    ಗೊಂಬೆಗಳ ವಿಶಿಷ್ಟತೆ: ಮೊದಲೇ ಹೇಳಿದಂತೆ ಕರ್ನಾಟಕ ಮಾತ್ರವಲ್ಲದೇ ದೇಶದ ವಿವಿಧ ಭಾಗದ ವಿಭಿನ್ನ ಶೈಲಿಯ ಹಾಗೂ ಗಾತ್ರದ, ಸನ್ನಿವೇಶಗಳ ಬೊಂಬೆಗಳು ಎಲ್ಲೆಡೆ ನೋಡುಗರನ್ನು ಸೆಳೆಯುತ್ತದೆ. ಇದು ನೋಡುಗರನ್ನು ಮತ್ತೊಂದು ಲೋಕಕ್ಕೆ ಕರೆದ್ಯೊಯುತ್ತದೆ. ಇಂತಹ ಕಲೆ ಕ್ಷಣ ಮಾತ್ರದಲ್ಲಿ ಎಂತಹರನ್ನು ಕ್ಷಣ ಮಾತ್ರದಲ್ಲಿ ಸೆಳೆಯುತ್ತದೆ.

    ದಸರಾ ಗೊಂಬೆ ನಿರ್ವಹಣೆ: 9 ದಿನಗಳ ನಡೆಯುವ ಪ್ರದರ್ಶನ ಮುಕ್ತಾಯ ವಾದ ಬಳಿಕ ಮುಂದಿನ ವರ್ಷಕ್ಕೆ ಅವುಗಳ ನಿರ್ವಹಣೆ ಮಾಡುವುದು ಪ್ರಮುಖವಾಗಿದ್ದು ಈ ಕುರಿತು ಸಲಹೆಗಳು ಇಂತಿದೆ. ಮುಖ್ಯವಾಗಿ ಗೊಂಬೆಗಳನ್ನು ಹತ್ತಿ ಬಟ್ಟೆಯಲ್ಲಿ ಸುತ್ತಿ ಇಡುವುದರಿಂದ ಅವುಗಳ ಬಣ್ಣ ಹಾಗೂ ಹೊಳಪು ಕೆಡದಂತೆ ರಕ್ಷಣೆ ಮಾಡಬಹುದು. ಅಲ್ಲದೇ ಮಣ್ಣಿನ ಗೊಂಬೆ ಇತರೇ ಗೊಂಬೆಗಳನ್ನು ಪ್ರತ್ಯೇಕವಾಗಿ ಇಡುವುದು ಒಳಿತು. ಮುಂದಿನ ವರ್ಷ ಅವುಗಳ ಬಳಕೆ ವೇಳೆ ಬಣ್ಣ ಮಾಸಿದ್ದರೆ, ಅಂತಹವುಗಳನ್ನು ವೃತ್ತಿಪರ ವ್ಯಕ್ತಿಗಳಿಗೆ ನೀಡುವುದು ಸೂಕ್ತ. ಇದರೊಂದಿಗೆ ಪ್ಯಾಕ್ ಮಾಡಿದ ಗೊಂಬೆಗಳನ್ನು ಸುರಕ್ಷಿತ ಸ್ಥಳದಲ್ಲಿ ಇಟ್ಟು ರಕ್ಷಣೆ ಮಾಡಬೇಕಾಗುತ್ತದೆ.

    ನಮಗೆ ಕಳುಹಿಸಿ: ನಾಡಿನಾದ್ಯಂತ ಹಲವು ಮನೆಗಳಲ್ಲಿ ಗೊಂಬೆಗಳನ್ನು ಕೂರಿಸಿದರೂ ಅದನ್ನು ನೋಡಲು ಎಲ್ಲರಿಗೂ ಸಾಧ್ಯವಿಲ್ಲ. ಅದ್ದರಿಂದ ನಿಮ್ಮ ಮನೆಯಲ್ಲಿರುವ ದಸರಾ ಬೊಂಬೆಯನ್ನು ಇಡೀ ಕರ್ನಾಟಕ ಜನತೆ ನೋಡವಂತೆ ಮಾಡಲು ನಮಗೆ ಕಳುಹಿಸಿ. ಏನ್ ಮಾಡ್ಬೇಕು? ನಿಮ್ಮ ಮನೆಯಲ್ಲಿ ದಸರಾ ಬೊಂಬೆಗಳನ್ನು ಕೂರಿಸಿದ್ದರೆ ಈಗಲೇ ನಿಮ್ಮ ಹೆಸರು ಮತ್ತು ವಿಳಾಸದೊಂದಿಗೆ ವಿಡಿಯೋ, ಫೋಟೋವನ್ನು 99000 60222 ಸೆಂಡ್ ಮಾಡಿ.

    ದಸರಾ ಸುದ್ದಿಗಳು:

    1. ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    2. ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    3. ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

    4. ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ

    5. ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ

    6. ದಸರಾ ಹಬ್ಬಕ್ಕೆ ಸ್ಟೈಲಿಶ್ ಆಗಿ ಕಾಣ್ಬೇಕಾ ಹೀಗಿರಲಿ ನಿಮ್ಮ ಸೀರೆ ಆಯ್ಕೆ

    7. ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರು ದಸರಾ – 5284 ಪೊಲೀಸ್ ಸಿಬ್ಬಂದಿ ಆಯೋಜನೆ, 76 ಸಿಸಿಟಿವಿ ಫಿಕ್ಸ್!

    ಮೈಸೂರು ದಸರಾ – 5284 ಪೊಲೀಸ್ ಸಿಬ್ಬಂದಿ ಆಯೋಜನೆ, 76 ಸಿಸಿಟಿವಿ ಫಿಕ್ಸ್!

    ಮೈಸೂರು: ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಸಮಾರಂಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಮೈಸೂರು ಪೊಲೀಸ್ ಇಲಾಖೆ ನಗರದ್ಯಾಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಂಡಿದೆ.

    ದಸರಾ ಸಮಾರಂಭದಲ್ಲಿ ಒಟ್ಟು 5,284 ಪೊಲೀಸ್ ಸಿಬ್ಬಂದಿ, 1,600 ಹೋಮ್ ಗಾರ್ಡ್ ಗಳು, 46 ಭದ್ರತಾ ತಪಾಸಣಾ ಪಡೆ, 57 ಪೊಲೀಸ್ ತುಕಡಿ ಸಿಬ್ಬಂದಿಗಳನ್ನ ನೇಮಕ ಮಾಡಲಾಗಿದೆ. ಇದಲ್ಲದೇ ಅಂಬಾರಿ ಹೋಗುವ ಜಾಗದಲ್ಲಿ ಮತ್ತು ಮೈಸೂರಿನ ಸ್ಮೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ, ಸಿಸಿಟಿಟಿ ಲಾಂಗ್ ಡಿಸ್ಟೆನ್ಸ್ ವಿಡಿಯೋಗ್ರಫಿಯನ್ನು ಹಾಕಲಾಗಿದೆ. ಇದಲ್ಲದೇ ಜಂಬೂ ಸವಾರಿ ಮೆರವಣಿಗೆ ರಸ್ತೆಯಲ್ಲಿ 76 ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಲಾಗಿದೆ.

    ಸಾರ್ವಜನಿಕರ ಹಾಗೂ ಪ್ರವಾಸಿಗರ ಅನುಕೂಲಕ್ಕೆ ಮೈಸೂರಿನಾದ್ಯಾಂತ 40 ಪೊಲೀಸ್ ಹೆಲ್ಪ್ ಡೆಸ್ಕ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಜನ ಸ್ನೇಹಿ ಪೊಲೀಸ್ ಉದ್ದೇಶದಿಂದ `ಮೇ ಐ ಹೆಲ್ಪ್ ಯು’ ಟ್ಯಾಗ್ ಬಳಸಿ ಪೊಲೀಸರು ಕಾರ್ಯನಿರ್ವಹಿಸಲಿದ್ದಾರೆ. ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಟ್ರಾಫಿಕ್ ಮತ್ತು ಪಾರ್ಕಿಂಗ್ ವ್ಯವಸ್ಥೆ ಗೊಂದಲಗಳಾಗಬಾರದೆಂದು ಬುಧವಾರದಿಂದ ಸೋಷಿಯಲ್ ಮೀಡಿಯಾಗಳನ್ನು ಬಳಕೆ ಮಾಡಿಕೊಂಡು ಟ್ರಾಫಿಕ್ ಮತ್ತು ಪಾರ್ಕಿಂಗ್ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ಅವರು ಹೇಳಿದ್ದಾರೆ.


    ಅಕ್ಟೋಬರ್ 14 ರಂದು ಜಂಬೂಸವಾರಿ ಮೆರವಣಿಗೆ ಮಾದರಿಯಲ್ಲಿ ಸಾಂಸ್ಕೃತಿಕ ಮೆರವಣಿಗೆಯನ್ನು ಸಹ ಮಾಡಲಾಗುತ್ತಿದ್ದು, ಈ ಮೆರವಣಿಗೆಗೂ ಸಹ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗುತ್ತಿದೆ. ಈ ಮೆರವಣಿಗೆಯಲ್ಲಿ ಅಂಬಾರಿಯನ್ನು ಹೊರತು ಪಡಿಸಿ ಮೆರವಣಿಗೆಯಲ್ಲಿ ದಸರಾ ಆನೆಗಳು, 40 ಜಾನಪದ ಕಲಾ ತಂಡಗಳು, ಯುವಸಂಭ್ರಮದಲ್ಲಿ ಭಾಗಿಯಾಗಿದ್ದ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕೆಎಸ್ ಆರ್ ಪಿ, ಸಿಎಆರ್, ಅಶ್ವಾರೋಹಿ ಪೊಲೀಸ್ ಪಡೆಗಳು ಸೇರಿದಂತೆ 2,000ಕ್ಕೂ ಅಧಿಕ ಮಂದಿ ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv