Tag: daniel balaji

  • ಕಣ್ಣುದಾನ ಮಾಡಿದ ನಟ ಡೇನಿಯಲ್ ಬಾಲಾಜಿ ಕುಟುಂಬ

    ಕಣ್ಣುದಾನ ಮಾಡಿದ ನಟ ಡೇನಿಯಲ್ ಬಾಲಾಜಿ ಕುಟುಂಬ

    ಶ್ ನಟನೆಯ ಕಿರಾತಕ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಖಳನಟರಾಗಿ ನಟಿಸಿರುವ ಡೇನಿಯಲ್ ಬಾಲಾಜಿ ಅವರ ಕಣ್ಣುಗಳನ್ನು ದಾನ ಮಾಡಲು ಅವರ ಕುಟುಂಬ ನಿರ್ಧರಿಸಿದೆ. ಕಣ್ಣುದಾನ ಮಾಡಬೇಕು ಎನ್ನುವುದು ನಟನ ಅಪೇಕ್ಷೆ ಕೂಡ ಆಗಿತ್ತಂತೆ. ಹಾಗಾಗಿ ಬಾಲಾಜಿ ನಿಧನಾ ನಂತರ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ.

    ನಟ ಡೇನಿಯಲ್ ಬಾಲಾಜಿ ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪ್ರಮುಖವಾಗಿ ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿದ್ದ ನಟ ಡೇನಿಯಲ್ ಬಾಲಾಜಿ ನಿನ್ನೆ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಎದೆನೋವಿನಿಂದ ಬಳಲುತ್ತಿದ್ದ ನಟನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎಂದು ವರದಿಯಾಗಿದೆ.

    48 ವರ್ಷದ ನಟನ ಹಠಾತ್ ಸಾವು ತಮಿಳು ಚಿತ್ರರಂಗ ಮತ್ತು ಅವರ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದೆ. ಬಾಲಾಜಿ ಅವರ ನಿಧನಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಲಾಗುತ್ತಿದೆ. ಡೇನಿಯಲ್ ಬಾಲಾಜಿ ಅವರು ಕಮಲ್ ಹಾಸನ್ ಅವರ ಅಪೂರ್ಣ ‘ಮರುದುನಾಯಗಂ’ನಲ್ಲಿ ಯುನಿಟ್ ಪ್ರೊಡಕ್ಷನ್ ಮ್ಯಾನೇಜರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು ರಾಧಿಕಾ ಶರತ್‌ಕುಮಾರ್ ಅವರ ‘ಚಿತ್ತಿ’ ಯೊಂದಿಗೆ ದೂರದರ್ಶನಕ್ಕೆ ತೆರಳಿದರು. ಅಲ್ಲಿನ ಪಾತ್ರದ ಮೂಲಕ ಡೇನಿಯಲ್ ಎಂದು ಜನಪ್ರಿಯತೆ ಗಳಿಸಿದರು.

     

    ‘ಕಾಕ್ಕ ಕಾಕ್ಕ’ ಮತ್ತು ‘ವೆಟ್ಟಾಯಡು ವಿಲಾಯಡು’ ಚಿತ್ರಗಳಲ್ಲಿನ ಮರೆಯಲಾಗದ ನಟನೆಯು ಸಿನಿ ಜಗತ್ತಿನಲ್ಲಿ ಅವರ ಜನಪ್ರಿಯತೆಗೆ ಕಾರಣವಾಯಿತು. ನಟ ಡೇನಿಯಲ್‌ ಬಾಲಾಜಿ ಅವರು ಮಲಯಾಳಂ, ತೆಲುಗು ಮತ್ತು ಕನ್ನಡ ಚಲನಚಿತ್ರಗಳಲ್ಲೂ ನಟಿಸಿದ್ದಾರೆ. ಅವರು ಅಭಿನಯಿಸಿದ ಕೊನೆಯ ಚಿತ್ರ ‘ಅರಿಯವನ್’.

  • ಕಿರಾತಕ ಸಿನಿಮಾದಲ್ಲಿ ಖಳನಟನಾಗಿ ನಟಿಸಿದ್ದ ಡೇನಿಯಲ್‌ ಬಾಲಾಜಿ ಹೃದಯಾಘಾತದಿಂದ ನಿಧನ

    ಕಿರಾತಕ ಸಿನಿಮಾದಲ್ಲಿ ಖಳನಟನಾಗಿ ನಟಿಸಿದ್ದ ಡೇನಿಯಲ್‌ ಬಾಲಾಜಿ ಹೃದಯಾಘಾತದಿಂದ ನಿಧನ

    ಚೆನ್ನೈ: ಕನ್ನಡದ ಕಿರಾತಕ ಸಿನಿಮಾದಲ್ಲಿ ಖಳ ನಟನಾಗಿ ಅಭಿನಯಿಸಿದ್ದ ನಟ ಡೇನಿಯಲ್ ಬಾಲಾಜಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

    ಪ್ರಮುಖವಾಗಿ ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿದ್ದ ನಟ ಡೇನಿಯಲ್ ಬಾಲಾಜಿ ನಿನ್ನೆ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಎದೆನೋವಿನಿಂದ ಬಳಲುತ್ತಿದ್ದ ನಟನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎಂದು ವರದಿಯಾಗಿದೆ.

    48 ವರ್ಷದ ನಟನ ಹಠಾತ್ ಸಾವು ತಮಿಳು ಚಿತ್ರರಂಗ ಮತ್ತು ಅವರ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದೆ. ಬಾಲಾಜಿ ಅವರ ನಿಧನಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಲಾಗುತ್ತಿದೆ.

    ಡೇನಿಯಲ್ ಬಾಲಾಜಿ ಅವರು ಕಮಲ್ ಹಾಸನ್ ಅವರ ಅಪೂರ್ಣ ‘ಮರುದುನಾಯಗಂ’ನಲ್ಲಿ ಯುನಿಟ್ ಪ್ರೊಡಕ್ಷನ್ ಮ್ಯಾನೇಜರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು ರಾಧಿಕಾ ಶರತ್‌ಕುಮಾರ್ ಅವರ ‘ಚಿತ್ತಿ’ ಯೊಂದಿಗೆ ದೂರದರ್ಶನಕ್ಕೆ ತೆರಳಿದರು. ಅಲ್ಲಿನ ಪಾತ್ರದ ಮೂಲಕ ಡೇನಿಯಲ್ ಎಂದು ಜನಪ್ರಿಯತೆ ಗಳಿಸಿದರು.

    ‘ಕಾಕ್ಕ ಕಾಕ್ಕ’ ಮತ್ತು ‘ವೆಟ್ಟಾಯಡು ವಿಲಾಯಡು’ ಚಿತ್ರಗಳಲ್ಲಿನ ಮರೆಯಲಾಗದ ನಟನೆಯು ಸಿನಿ ಜಗತ್ತಿನಲ್ಲಿ ಅವರ ಜನಪ್ರಿಯತೆಗೆ ಕಾರಣವಾಯಿತು. ನಟ ಡೇನಿಯಲ್‌ ಬಾಲಾಜಿ ಅವರು ಮಲಯಾಳಂ, ತೆಲುಗು ಮತ್ತು ಕನ್ನಡ ಚಲನಚಿತ್ರಗಳಲ್ಲೂ ನಟಿಸಿದ್ದಾರೆ. ಅವರು ಅಭಿನಯಿಸಿದ ಕೊನೆಯ ಚಿತ್ರ ‘ಅರಿಯವನ್’.

  • ತಮಿಳುನಾಡಿನಲ್ಲಿ ದೇವಸ್ಥಾನ ಕಟ್ಟಲು ಯಶ್ ಸಹಾಯ ನೆನೆದ ಡೇನಿಯಲ್ ಬಾಲಾಜಿ

    ತಮಿಳುನಾಡಿನಲ್ಲಿ ದೇವಸ್ಥಾನ ಕಟ್ಟಲು ಯಶ್ ಸಹಾಯ ನೆನೆದ ಡೇನಿಯಲ್ ಬಾಲಾಜಿ

    ನ್ಯಾಷನಲ್ ಸ್ಟಾರ್ ಯಶ್ (Yash) ತೆರೆಯ ಮೇಲೆ ಮಾತ್ರ ತಾವು ಹೀರೋ ಅಲ್ಲ, ತೆರೆ ಹಿಂದೆ ಕೂಡ ಹೀರೋನೇ ಅನ್ನೋದನ್ನ ಮತ್ತೆ ಪ್ರೂವ್ ಮಾಡಿದ್ದಾರೆ. ತೆರೆಮರೆಯಲ್ಲಿ ಸಹಾಯ ಮಾಡಿರೋದನ್ನ ಎಲ್ಲೂ ಹೇಳದಿರುವ ವಿಷ್ಯ ಇದೀಗ ರಿವೀಲ್ ಆಗಿದೆ. ಯಶೋಮಾರ್ಗ ಫೌಂಡೇಶನ್ ಮೂಲಕ ಸಹಾಯ ಮಾಡಿರುವ ಯಶ್, ತಮಿಳುನಾಡಿನ ದೇವಸ್ಥಾನ ಕಟ್ಟಲು ಸಾಥ್ ನೀಡಿರೋದರ ಬಗ್ಗೆ ಡೇನಿಯಲ್ ಬಾಲಾಜಿ (Daniel Balaji)  ಮಾತನಾಡಿದ್ದಾರೆ.

    ನಟ ಯಶ್ ಅವರ ಯಶೋಮಾರ್ಗ ಫೌಂಡೇಶನ್ (Yashomarga Foundation) ವತಿಯಿಂದ ಸಾಕಷ್ಟು ಕಾರ್ಯಗಳು ಕಾರ್ಯರೂಪಕ್ಕೆ ಬಂದಿದೆ. ಜನರಿಗೆ ನೆರವಾಗುವಂತಹ ಕೆಲಸಗಳ ಮೂಲಕ ಯಶ್ ಸಾಥ್ ನೀಡಿದ್ದಾರೆ. ಈಗ ಎಲ್ಲಿಯೂ ಸುದ್ದಿಯಾಗದೇ ಉಳಿದಿರುವ ವಿಷಯಗಳ ಪೈಕಿ ಯಶ್ ತಮಿಳುನಾಡಿನ ದೇವಸ್ಥಾನವೊಂದರ ನಿರ್ಮಾಣಕ್ಕೆ ಧನ ಸಹಾಯ ವಿಚಾರ ಹೊರಬಿದ್ದಿದೆ.

    ನಾಲ್ಕು ವರ್ಷಗಳ ಹಿಂದೆ ಯಶ್ ತಮಿಳುನಾಡಿನ ದೇವಸ್ಥಾನ (Temple) ನಿರ್ಮಾಣಕ್ಕೆ ಹಣ ದೇಣಿಗೆ ನೀಡಿದ್ದ ವಿಚಾರ ಈಗ ಬಹಿರಂಗವಾಗಿದೆ. `ಕಿರಾತಕ’ ಸಿನಿಮಾದಲ್ಲಿ ಖಳನಾಯಕನ ಪಾತ್ರ ನಿರ್ವಹಿಸಿದ್ದ ತಮಿಳು ನಟ ಡೇನಿಯಲ್ ಬಾಲಾಜಿ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿ ಈ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಮೊದಲ ಯುಗಾದಿ ಸಂಭ್ರಮದಲ್ಲಿ `ಸಿಂಹಪ್ರಿಯಾ’ ಜೋಡಿ

    ನಾಲ್ಕು ವರ್ಷಗಳ ಹಿಂದೆ ಕನ್ನಡದ ಚಿತ್ರವೊಂದರಲ್ಲಿ ನಟಿಸುವ ಆಫರ್ ತಿಳಿಸಲು ನನಗೆ ಕರೆ ಮಾಡಿದ್ದರು. ಆದರೆ ನಾನು ಇನ್ನೂ 20 ದಿನಗಳ ಕಾಲ ನನಗೊಂದು ಸಣ್ಣ ಕೆಲಸವಿದೆ ಎಂದು ಹೇಳಿದ್ದೆ. ಏನು ಕೆಲಸ ಎಂದು ಅವರು ಕೇಳಿದರು. ದೇವಸ್ಥಾನವೊಂದನ್ನು ನಿರ್ಮಿಸುತ್ತಿದ್ದೇನೆ, ಅದು ಮುಗಿಯುವವರೆಗೂ ನಾನು ಎಲ್ಲಿಗೂ ಬರಲು ಆಗುವುದಿಲ್ಲ ಎಂದು ಹೇಳಿದೆ. ಇದನ್ನು ಕೇಳಿ ಯಶ್, ನಿಮಗೆ ಒಳ್ಳೆದಾಗಲಿ ಎಂದು ಶುಭ ಕೋರಿದರು. ಕೆಲವೇ ಸೆಕೆಂಡುಗಳಲ್ಲಿ ನನಗೆ ಮೆಸೇಜ್‌ಗಳು ಬಂದವು. ಯಾವ ಮೆಸೇಜ್ ಎಂದು ನೋಡಿದರೆ ಯಶ್ ಹಣ ಕಳುಹಿಸಿದ್ದರು. ಅರೇ ಇನ್ನೂ ಸಿನಿಮಾ ಫೈನಲ್ ಆಗಿಲ್ಲ. ಈಗಲೇ ಅಡ್ವಾನ್ಸ್ ಹಾಕಿದ್ದೀರಲ್ಲ ಎಂದು ಪ್ರಶ್ನೆ ಮಾಡಿದೆ. ಅದಕ್ಕೆ ಯಶ್ ಇದು ನಿಮ್ಮ ದೇವಸ್ಥಾನಕ್ಕೆ ನಾನು ಕೊಡುತ್ತಿರುವ ದೇಣಿಗೆ ಎಂದಿದ್ದರು. ಸಂದರ್ಶನದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಮಾಡಿದ ಧನಸಹಾಯವನ್ನು ಡೇನಿಯಲ್ ನೆನೆದರು.