Tag: Dal

  • ಕುದಿಯುತ್ತಿರುವ ಸಾಂಬಾರ್‌ ಪಾತ್ರೆಗೆ ಬಿದ್ದು ಬಾಲಕ ಸಾವು

    ಕುದಿಯುತ್ತಿರುವ ಸಾಂಬಾರ್‌ ಪಾತ್ರೆಗೆ ಬಿದ್ದು ಬಾಲಕ ಸಾವು

    ಲಕ್ನೋ: ಕುದಿಯುತ್ತಿರುವ ಸಾಂಬಾರಿನ (Dal) ಪಾತ್ರೆಯೊಳಗೆ ಬಿದ್ದು ಐದು ವರ್ಷದ ಬಾಲಕನೊಬ್ಬ (Boy) ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶ (Uttar Pradesh) ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ.

    ಉತ್ತರ ಪ್ರದೇಶ ಕರಣ್‍ಪುರದ ಸುತಾರಿ ಗ್ರಾಮದ ನಿವಾಸಿ ಪ್ರಶಾಂತ್(5) ಮೃತ ಬಾಲಕ. ಈತ ತಂದೆ ದುಶೀಲ್ ಸಿಂಗ್. ವೃತ್ತಿಯಲ್ಲಿ ರೈತರಾಗಿದ್ದಾರೆ. ಮುಂಡನ್ ಕಾರ್ಯದ ಅಂಗವಾಗಿ ಅಡುಗೆ ಮಾಡಲಾಗುತ್ತಿತ್ತು. ಆದರೆ ಬಾಲಕ ಪ್ರಶಾಂತ್ ಬಿಸಿ ಪಾತ್ರೆ ಇಡುತ್ತಿದ್ದ ಜಾಗದಲ್ಲಿ ಆಟವಾಡುತ್ತಿದ್ದ. ಆಟವಾಡುತ್ತಾ ಪ್ರಶಾಂತ್ ಜಿಗಿದಿದ್ದಾನೆ. ಈ ವೇಳೆ ಕುದಿಯುತ್ತಿದ್ದ ಸಾಂಬಾರ್ ಪಾತ್ರೆಯೊಳಗೆ ಬಿದ್ದಿದ್ದಾನೆ. ಇದನ್ನೂ ಓದಿ: ಧಮ್, ತಾಕತ್ ಇದ್ರೆ ಉತ್ತರ ಕೊಡಿ – ರಾಜ್ಯಕ್ಕೆ ಆಗಮಿಸುತ್ತಿರುವ ಮೋದಿಗೆ ಕಾಂಗ್ರೆಸ್ ಸರಣಿ ಪ್ರಶ್ನೆ

    crime

    ಪ್ರಶಾಂತ್‍ನ ಕಿರುಚಾಟ ಕೇಳಿ ಹತ್ತಿರದಲ್ಲಿದ್ದವರು ಬಂದು ಕೂಡಲೇ ಆತನನ್ನು ಮೀರತ್‍ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆತ ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾನೆ. ಈ ಘಟನೆ ಸೈದಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯ ಕರಣ್‍ಪುರ ಸ್ಕುಟಾರಿ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ನನ್ನ ತೇಜೋವಧೆ ಆಗ್ತಿದೆ – ವಿವಾದಿತ ಹೇಳಿಕೆಯನ್ನು ಹಿಂಪಡೆದ ಸತೀಶ್ ಜಾರಕಿಹೊಳಿ

    Live Tv 
    [brid partner=56869869 player=32851 video=960834 autoplay=true]

  • ಪರ್ಫೆಕ್ಟ್ ಸ್ಟೈಲ್‌ನಲ್ಲಿ ದಾಲ್ ತೋವೆ ಮಾಡುವ ವಿಧಾನ

    ಪರ್ಫೆಕ್ಟ್ ಸ್ಟೈಲ್‌ನಲ್ಲಿ ದಾಲ್ ತೋವೆ ಮಾಡುವ ವಿಧಾನ

    ತೊಗರಿ ಬೇಳೆ ಬಳಸಿ ಮಾಡಲಾಗುವ ದಾಲ್ ತೋವೆ (Dal Tovve) ಸಾಂಪ್ರದಾಯಿಕ ಅಡುಗೆಗಳಲ್ಲಿ ಒಂದು. ಮುಖ್ಯವಾಗಿ ದಕ್ಷಿಣ ಭಾರತ ಹಾಗೂ ಉತ್ತರ ಕೆನರಾ ಪ್ರದೇಶದಲ್ಲಿ ಇದು ಅತ್ಯಂತ ಫೇಮಸ್. ದಾಲ್ ಫ್ರೈ ಅಥವಾ ದಾಲ್ ತಡ್ಕಾಗೆ ಹೋಲಿಸಿದರೆ ದಾಲ್ ತೋವೆ ತುಂಬಾ ವಿಭಿನ್ನವಾದ ಸ್ವಾದ ನೀಡುತ್ತದೆ. ಅನ್ನ ಮಾತ್ರವಲ್ಲದೇ ಇಡ್ಲಿಯೊಂದಿಗೂ ಇದರ ಟೇಸ್ಟ್ ಸೂಪರ್ ಎನಿಸಿಕೊಳ್ಳುತ್ತದೆ. ಸುಲಭವಾಗಿ ಮಾಡಬಹುದಾದ ದಾಲ್ ತೋವೆಯನ್ನು ಒಮ್ಮೆ ನೀವು ಕೂಡಾ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಬೇಯಿಸಲು:
    ತೊಗರಿಬೇಳೆ – ಅರ್ಧ ಕಪ್
    ಸೀಳಿದ ಮೆಣಸಿನಕಾಯಿ – 2
    ಎಣ್ಣೆ – 1 ಟೀಸ್ಪೂನ್
    ನೀರು – ಒಂದೂವರೆ ಕಪ್
    ಇತರ ಪದಾರ್ಥಗಳು:
    ಉಪ್ಪು – ಅರ್ಧ ಟೀಸ್ಪೂನ್
    ಹಿಂಗ್ – ಕಾಲು ಟೀಸ್ಪೂನ್
    ನೀರು – ಅರ್ಧ ಕಪ್ ಇದನ್ನೂ ಓದಿ: ರುಚಿಕರವಾದ ಗೋಡಂಬಿ ತೊಂಡೆಕಾಯಿ ಪಲ್ಯ ಮಾಡಿ

    ಒಗ್ಗರಣೆಗೆ:
    ತೆಂಗಿನ ಎಣ್ಣೆ – 3 ಟೀಸ್ಪೂನ್
    ಸಾಸಿವೆ – 1 ಟೀಸ್ಪೂನ್
    ಕರಿಬೇವಿನ ಎಲೆ – ಕೆಲವು
    ಒಣ ಕೆಂಪು ಮೆಣಸಿನಕಾಯಿ – 2
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ ಪ್ರೆಶರ್ ಕುಕ್ಕರ್‌ನಲ್ಲಿ ತೊಗರಿ ಬೇಳೆ, ಸೀಳಿದ ಮೆಣಸಿನಕಾಯಿ ಮತ್ತು 1 ಟೀಸ್ಪೂನ್ ಎಣ್ಣೆಯನ್ನು ಹಾಕಿ, ಒಂದೂವರೆ ಕಪ್ ನೀರನ್ನು ಸೇರಿಸಿ, 5 ಸೀಟಿ ಬರುವವರೆಗೆ ಬೇಯಿಸಿ.
    * ಬೆಂದ ಬೇಳೆಯನ್ನು ಸ್ವಲ್ಪ ಹಿಸುಕಿ ಮೃದು ಮಾಡಿ.
    * ಈಗ ಅದಕ್ಕೆ ಉಪ್ಪು, ಹಿಂಗ್ ಮತ್ತು ಅರ್ಧ ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಕುದಿಸಿ.
    * ಈಗ ಒಗ್ಗರಣೆ ತಯಾರಿಸಲು ಸಣ್ಣ ಕಡಾಯಿಯಲ್ಲಿ 3 ಟೀಸ್ಪೂನ್ ತೆಂಗಿನ ಎಣ್ಣೆ ಬಿಸಿ ಮಾಡಿ, ಅದಕ್ಕೆ ಸಾಸಿವೆ, ಕೆಲವು ಕರಿಬೇವಿನ ಎಲೆಗಳು ಹಾಗೂ ಒಣ ಕೆಂಪು ಮೆಣಸಿನಕಾಯಿಯನ್ನು ಸೇರಿಸಿ, ಸಾಸಿವೆ ಒಡೆಯುವವರೆಗೆ ಬಿಸಿ ಮಾಡಿ.
    * ಈಗ ಒಗ್ಗರಣೆಯನ್ನು ದಾಲ್ ಮಿಶ್ರಣದ ಮೇಲೆ ಸುರಿಯಿರಿ.
    * ಕೊತ್ತಂಬರಿ ಸೊಪ್ಪನ್ನು ಸೇರಿಸಿ.
    * ಇದೀಗ ದಾಲ್ ತೋವೆ ತಯಾರಾಗಿದ್ದು, ಇಡ್ಲಿ ಅಥವಾ ಅನ್ನದೊಂದಿಗೆ ಬಡಿಸಿ. ಇದನ್ನೂ ಓದಿ: ರುಚಿಕರವಾದ ಆಲೂಗಡ್ಡೆ ಮಂಚೂರಿಯನ್ ಮಾಡಿ ನೋಡಿದ್ದೀರಾ?

    Live Tv
    [brid partner=56869869 player=32851 video=960834 autoplay=true]

  • ಡಾಬಾ ಶೈಲಿಯ ದಾಲ್ ಚಪಾತಿ ಜೊತೆಗೆ ಸೂಪರ್

    ಡಾಬಾ ಶೈಲಿಯ ದಾಲ್ ಚಪಾತಿ ಜೊತೆಗೆ ಸೂಪರ್

    ನಿಮಗೂ ಮನೆಯಲ್ಲಿ ನಿತ್ಯ ಒಂದೇ ರೀತಿಯ ದಾಲ್ ತಿಂದು ಬೋರ್ ಆದಾಗ ವಿಭಿನ್ನ ಶೈಲಿಯ ದಾಲ್ ಮಾಡಬೇಕು ಎಂದರೆ ಈ ದಾಲ್ ಮಾಡಬಹುದು. ನಾವು ಈ ಕೆಳಗೆ ಹೇಳಲಿರುವ ಶೈಲಿಯಲ್ಲಿ ದಾಲ್ ಮಾಡಿದರೆ ಮನೆಯಲ್ಲೇ ಡಾಬಾ ಶೈಲಿಯ ದಾಲ್ ಅನ್ನು ಜೀರಾ ರೈಸ್, ಚಪಾತಿ, ಪರೋಟ ಜೊತೆ ಸವಿಯಬಹುದು.

    ಬೇಕಾಗುವ ಸಾಮಗ್ರಿಗಳು:
    * ಕಡಲೇಬೇಳೆ- ಅರ್ಧ ಕಪ್
    * ತೊಗರಿ ಬೇಳೆ ಅರ್ಧ ಕಪ್
    * ಮಸೂರ್ ದಾಲ್ ಅರ್ಧ ಕಪ್
    * ಹೆಸರು ಬೇಳೆ ಅರ್ಧ ಕಪ್
    * ಉದ್ದಿನ ಬೇಳೆ- ಅರ್ಧ ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ – ಅರ್ಧ ಕಪ್
    * ಜೀರಿಗೆ 1 ಚಮಚ
    * ತುಪ್ಪ 1 ಚಮಚ
    * ಒಣ ಮೆಣಸಿನಕಾಯಿ 2
    * ಈರುಳ್ಳಿ-1
    * ಬೆಳ್ಳುಳ್ಳಿ-1
    * ಶುಂಠಿ
    * ಹಸಿ ಮೆಣಸಿನಕಾಯಿ -2
    * ಟೊಮೆಟೊ -2
    * ಕಸೂರಿ ಮೇತಿ- ಅರ್ಧ ಚಮಚ
    * ಮೆಣಸಿನ ಪುಡಿ -1 ಚಮಚ
    * ಅರಿಶಿನ ಪುಡಿ – ಅರ್ಧ ಚಮಚ
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಚಮಚ ನಿಂಬೆ ಹಣ್ಣು- ಅರ್ಧ ಇದನ್ನೂ ಓದಿ:  ಬಾಯಲ್ಲಿ ನೀರೂರಿಸುವ ದೊನ್ನೆ ಬಿರಿಯಾನಿ ಮನೆಯಲ್ಲಿ ಮಾಡಿ

    ಮಾಡುವ ವಿಧಾನ:
    * ಎಲ್ಲಾ ಬೇಳೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಮತ್ತು ಒಂದೆರಡು ಬಾರಿ ನೀರಿನಿಂದ ತೊಳೆದು ಅರ್ಧ ಗಂಟೆ ನೆನೆಸಿಡಿ.
    * ಪ್ರೆಶರ್ ಕುಕ್ಕರ್‍ನಲ್ಲಿ ಬೇಳೆಗಳು, ನೀರು, ಅರಿಶಿನ ಪುಡಿ ಸೇರಿಸಿ ಮುಚ್ಚಳವಿಲ್ಲದೆ ಒಲೆಯ ಮೇಲೆ ಇಡಿ, ಮೊದಲ ಕುದಿಯ ನಂತರ ಮುಚ್ಚಳವನ್ನು ಹಾಕಿ. 3-5 ಸೀಟಿಗಳಿಗೆ ಬೇಯಿಸಿ.


    * ಪ್ರೆಶರ್ ಕುಕ್ಕರ್ ತಣ್ಣಗಾಗಲು ಬಿಡಿ ನಂತರ ಬೇಯಿಸಿದ ದಾಲ್ ಅನ್ನು ಮ್ಯಾಶ್ ಮಾಡಿ.
    * ಬಾಣಲೆ ಎಣ್ಣೆ ಹಾಕಿ ನಂತರ ಜೀರಿಗೆ, ಹಿಂಗು,ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಸೇರಿಸಿ.

    * ಮಿಶ್ರಣವನ್ನು ಒಂದೆರಡು ನಿಮಿಷ ಹುರಿದು ನಂತರ ಹಸಿ ಮೆಣಸಿನಕಾಯಿ, ಟೊಮೆಟೊ, ಕಸೂರಿ ಮೇತಿ ಸೇರಿಸಿ ಮತ್ತು ಸಂಪೂರ್ಣವಾಗಿ ಬೇಯಿಸಿ.
    * ನಂತರ ಈ ಮಿಶ್ರಣಕ್ಕೆ ಬೇಯಿಸಿದ ದಾಲ್ ಸೇರಿಸಿ ಸ್ವಲ್ಪ ನೀರು ಹಾಕಿ.
    * ಉಪ್ಪು ಸೇರಿಸಿ 10-12 ನಿಮಿಷಗಳ ಕಾಲ ಕುದಿಸಲು ಬಿಡಿ.
    * ಈಗ ಬೇಯಿಸಿದ ದಾಲ್‍ಗೆ ನಿಂಬೆ ರಸ, ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಬಿಸಿಬಿಸಿ ದಾಲ್ ಸಿದ್ಧವಾಗುತ್ತದೆ.

  • ಮದ್ವೆ ಆಗ್ತಿರೋ ಪುತ್ರನಿಗೆ ಅಮ್ಮನಿಂದ ಬೇಳೆಗಳ ಅಲ್ಬಂ ಗಿಫ್ಟ್

    ಮದ್ವೆ ಆಗ್ತಿರೋ ಪುತ್ರನಿಗೆ ಅಮ್ಮನಿಂದ ಬೇಳೆಗಳ ಅಲ್ಬಂ ಗಿಫ್ಟ್

    -ತಾಯಿಯ ಜಾಣ್ಮೆಗೆ ನೆಟ್ಟಿಗರು ಫುಲ್ ಫಿದಾ

    ಬೆಂಗಳೂರು: ಮದುವೆ ಆಗುತ್ತಿರುವ ಮಗನಿಗೆ ತಾಯಿ ಬೇಳೆಗಳ ಅಲ್ಬಂ ಗಿಫ್ಟ್ ನೀಡಿದ್ದಾರೆ. ಬೇಳೆಗಳ ಅಲ್ಬಂ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ನೀವು ಬೆಸ್ಟ್ ಮದರ್ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

    ಮನೆಯಿಂದ ಹೊರಗೆ ಇರುವ ಯುವಕರಿಗೆ ಅಡುಗೆ ಮಾಡಿಕೊಳ್ಳುವುದು ದೊಡ್ಡ ಸವಾಲು. ಕೆಲವರು ಹೋಟೆಲ್ ಮೊರೆ ಹೋದ್ರೆ ಬಹುತೇಕರು ಮನೆಯ ಊಟವನ್ನು ಇಷ್ಟಪಡುತ್ತಾರೆ. ಹಾಗಾಗಿ ಮನೆಯಲ್ಲಿಯೇ ಅಡುಗೆ ತಯಾರಿಸಿಕೊಳ್ಳಲು ನಿರ್ಧರಿಸುತ್ತಾರೆ. ಇನ್ನು ಮೊದಲ ಬಾರಿಗೆ ಅಡುಗೆ ಮನೆಗೆ ಎಂಟ್ರಿ ಕೊಟ್ಟಿದ್ರೆ ಹೊಸ ಲೋಕಕ್ಕೆ ಬಂದ ಅನುಭವ ಆಗೋದು ಸತ್ಯ. ಅದರಲ್ಲಿ ಕೆಲ ಬೇಳೆಗಳು ನೋಡಲು ಒಂದೇ ರೀತಿ ಕಾಣಿಸುತ್ತವೆ. ಹಾಗಾಗಿ ಯಾವ ಬೇಳೆ ಎಂಬುದನ್ನು ಕಂಡು ಹಿಡಿಯಲು ಕಷ್ಟ ಆಗುತ್ತದೆ. ಹಾಗಾಗಿ ಮಗನಿಗೆ ಸಮಸ್ಯೆ ಆಗದಿರಲಿ ಎಂದು ತಾಯಿ ಎಲ್ಲ ಬೇಳೆಗಳ ಸ್ಯಾಂಪಲ್ ಪುಸ್ತಕದಲ್ಲಿ ಅಂಟಿಸಿ ಕೆಳಗೆ ಹೆಸರು ಬರೆದಿದ್ದಾರೆ.

    ಈ ಫೋಟೋವನ್ನು ಐಪಿಎಸ್ ಅಧಿಕಾರಿ ದಿಪಾಂಶು ಕಾಬ್ರಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ಮದುವೆ ಆಗುತ್ತಿರೋ ಮಗನಿಗೆ ತಾಯಿ ನೀಡುತ್ತಿರುವ ಗಿಫ್ಟ್ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಒಂದು ಸಾವಿರಕ್ಕೂ ಅಧಿಕ ಲೈಕ್ಸ್ ಗಳನು ಪಡೆದುಕೊಂಡಿದ್ದು, ನೂರಕ್ಕೂ ಅಧಿಕ ಬಾರಿ ರಿಟ್ವೀಟ್ ಆಗಿದೆ. ಆದ್ರೆ ಮಗನಿಗೆ ಅಲ್ಬಂ ನೀಡಿದ ತಾಯಿಯ ಮಾಹಿತಿ ಲಭ್ಯವಾಗಿಲ್ಲ.

    ಕಾಬ್ರಾ ಟ್ವೀಟಿಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಮಗನಿಗೆ ಒಳ್ಳೆಯ ಟ್ರೈನಿಂಗ್ ಅಂತಾ ಕಮೆಂಟ್ ಮಾಡಿದ್ರೆ, ಬೇಳೆಗಳ ಬಗ್ಗೆ ಮಗ ಮತ್ತು ಮಗಳಿಗೂ ತಿಳಿದಿರಬೇಕು. ಹಲವರು ಬೆಸ್ಟ್ ಮದರ್ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಗುಡ್ ಮದರ್, ಮಗನಿಗೆ ಏನು ಹೇಳಿಕೊಡಬೇಕು ಎಂಬುವುದು ತಾಯಿಗೆ ಗೊತ್ತಿದೆ. ಪತ್ನಿ ಲೈಫ್ ಪಾರ್ಟ್‍ನರ್ ಹೊರತು, ಸಂಬಳ ರಹಿತ ಅಡುಗೆ ಮಾಡುವಳಲ್ಲ. ಆಕೆಯ ಮೇಲೆ ಹೆಚ್ಚು ಒತ್ತಡ ಹಾಕೋದು ತಪ್ಪು. ಸಂತೋಷದ ಜೊತೆ ಜವಾಬ್ದಾರಿಗಳನ್ನು ಹಂಚಿಕೊಳ್ಳೋಣ ಎಂದು ಶಶಾಂಕ್ ಶೇಖರ್ ನಾಯಕ್ ಟ್ವೀಟ್ ಮಾಡಿದ್ದಾರೆ.

  • ಮಕ್ಕಳು ಬಿಸಿಯೂಟ ತಿಂದು ಅಸ್ವಸ್ಥರಾಗೋದು ಯಾಕೆ?- ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲಾಯ್ತು ಭಯಾನಕ ಸತ್ಯ

    ಮಕ್ಕಳು ಬಿಸಿಯೂಟ ತಿಂದು ಅಸ್ವಸ್ಥರಾಗೋದು ಯಾಕೆ?- ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲಾಯ್ತು ಭಯಾನಕ ಸತ್ಯ

    ಗದಗ: ಜಿಲ್ಲೆಯ ಅಕ್ಷರದಾಸೋಹಕ್ಕೆ ಸರ್ಕಾರ ಪೂರೈಸುವ ಆಹಾರ ಪದಾರ್ಥಗಳು ಹೇಗೆಲ್ಲಾ ಇರುತ್ತೆ ಎಂಬುದನ್ನ ನೋಡಿದ್ರೆ ಒಂದು ಕ್ಷಣ ಬೆಚ್ಚಿಬಿಳ್ತಿರಾ. ಯಾಕಂದ್ರೆ ಈ ಬಗ್ಗೆ ಸ್ಟಿಂಗ್ ಆಪರೇಷನ್ ಮೂಲಕ ಪಬ್ಲಿಕ್ ಟಿವಿ ಎಲ್ಲವನ್ನೂ ಬಯಲು ಮಾಡಿದೆ.

    ಕಳಪೆ ಗುಣಮಟ್ಟದ ತೊಗರಿ ಬೇಳೆಗಳನ್ನ ಮಕ್ಕಳ ಬಿಸಿ ಊಟಕ್ಕೆ ಸಪ್ಲೈ ಮಾಡ್ತಾರೆ. ಏನೂ ಅರಿಯದ ಮುದ್ದುಮಕ್ಕಳು ಈ ಆಹಾರ ಸೇವಿಸಿ ಅನಾರೋಗ್ಯಕ್ಕೆ ಈಡಾಗ್ತಿದ್ದಾರೆ. ಗೋದಾಮುನಲ್ಲಿ ಕೊಳೆತು ನಾರುವ ಕಲ್ಲುಬಂಡೆಯಂತೆ ಗಟ್ಟಿಯಾದ ತೊಗರಿಬೇಳೆಯನ್ನ ಲಾರಿನಲ್ಲಿ ತಂದು ಹೇಗೆ ಸಂಸ್ಕರಣೆ ಮಾಡ್ತಾರೆ? ಎಲ್ಲಿ ಸಪ್ಲಾಯ್ ಮಾಡ್ತಾರೆ? ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ರೂ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರಾ ಎಂಬುದನ್ನ ಅನಾವರಣ ಮಾಡಲಾಗಿದೆ.


    ಇತ್ತೀಚೆಗಷ್ಟೇ ಬಾಗಲಕೋಟೆಯಲ್ಲಿ ಬಿಸಿಯೂಟ ಸೇವಿಸಿದ 40 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದರು. ಬಳ್ಳಾರಿ ಜಿಲ್ಲೆಯ ಅಗಲೂರಿನಲ್ಲೂ ಬಿಸಿಯೂಟ ಸೇವಿಸಿ ಮಕ್ಕಳು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ನರಳಾಡಿದ ದೃಶ್ಯ ನಮ್ಮ ಕಣ್ಣ ಮುಂದೇಯೇ ಇದೆ. ಈ ಮಧ್ಯೆ ಬಿಸಿಯೂಟಕ್ಕೆ ಪೂರೈಸೋ ಅಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ಆಗಾಗ್ಗೇ ದೂರುಗಳು ಬರ್ತಾನೇ ಇರ್ತಾವೆ. ಮಕ್ಕಳ ಊಟದಲ್ಲಿ ನುಸಿ, ಜಿರಲೆಗಳು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿಬಿಟ್ಟಿದೆ. ಎಷ್ಟೇ ದೂರು ನೀಡಿದ್ರೂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ತಿಲ್ಲ. ಹೀಗಾಗಿ ಪಬ್ಲಿಕ್ ಟಿವಿ ಅಸಲಿ ಸತ್ಯ ಏನೆಂದು ಹುಡುಕಲು ಗದಗ ಜಿಲ್ಲೆಯಲ್ಲಿ ರಹಸ್ಯ ಕಾರ್ಯಾಚರಗೆ ಇಳಿದಾಗ ಘನ ಘೋರ ಸತ್ಯ ಬಯಲಾಗಿದೆ.


    ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಸರ್ಕಾರಿ ಗೋದಾಮು ಬಳಿ ಶಾಕಿಂಗ್ ದೃಶ್ಯ ಕಾದಿತ್ತು. ಸಗಟು ಮಳಿಗೆ ಬಳಿ ಅನ್ನಭಾಗ್ಯದ ಬೋರ್ಡ್ ಹೊತ್ತ ಲಾರಿ ನಿಂತಿತ್ತು. ಈ ಲಾರಿಯಲ್ಲಿ ಗಂಟು ಕಟ್ಟಿದ್ದ ರಾಶಿ ರಾಶಿ ತೊಗರಿ ಬೇಳೆ ಕಂಡುಬಂದಿದೆ. ಬೇಳೆಯ ಬಣ್ಣವೇ ಬದಲಾಗಿತ್ತು. ಇಂತಹ ಕೆಟ್ಟ ಆಹಾರ ಪದಾರ್ಥವನ್ನ ಲಾರಿನಲ್ಲಿ ತಂದು ನಿರ್ಜನ ಪ್ರದೇಶದಲ್ಲಿರುವ ಸರ್ಕಾರಿ ಉಗ್ರಾಣದ ಮುಂಭಾಗ ನಿಂತಿದ್ದ ಪಾಲೀಶ್ ಮಷಿನ್‍ಗೆ ಹಾಕಿ ಪಾಲೀಶ್ ಮಾಡೋ ಕೆಲಸ ತಣ್ಣಗೆ ನಡೆಯುತ್ತಿತ್ತು. ಥಳ ಥಳ ಹೊಳೆಯುವ ಪಾಲೀಶ್ ಮಾಡಿದ ತೊಗರಿ ಬೇಳೆಯನ್ನು ಶಾಲೆಗಳಿಗೆ ಕಳಿಸಲು ಚೀಲಗಳಿಗೆ ತುಂಬಿಸೋ ಪ್ರಕ್ರಿಯೆ ನಡೆಯುತ್ತಿತ್ತು.

    ಈ ವೇಳೆ ನಮ್ಮ ರಹಸ್ಯ ಕಾರ್ಯಾಚರಣೆ ತಂಡದ ಓರ್ವ ಸದಸ್ಯ, ಅಪರಿಚಿತರಂತೆ ಹೋಗಿ ಅಲ್ಲಿರುವ ಸಿಬ್ಬಂದಿ ಮಾತನಾಡಿಸಿದಾಗ, ಸರ್ಕಾರದಿಂದ ಮೂರು ತಿಂಗಳಿಗೊಮ್ಮೆ ಟೆಂಡರ್ ಆಗಿರುತ್ತೆ. ಎರಡು-ಮೂರು ತಿಂಗಳು ಸ್ಟಾಕ್ ಇರೋದ್ರಿಂದ ಹೀಗಾಗಿದೆ ಅಷ್ಟೇ ಎಂಬ ಬೇಜವಾಬ್ದಾರಿಯುತವಾಗಿ ಉತ್ತರಿಸಿದ್ದಾನೆ.

    ಕೇಂದ್ರ ಸರ್ಕಾರದ ನಾಫೆಡ್ ಸಂಸ್ಥೆಯಿಂದ ಈ ರೀತಿಯಾದ ಹುಳು-ಹೆಂಟೆಗಟ್ಟಿರೋ ತೊಗರಿ ಬೇಳೆ ಬರುತ್ತದೆ. ಟೆಂಡರ್ ಮೂಲಕ ಬಂದ ಬೇಳೆಗಳನ್ನ ಪರೀಕ್ಷೆ ಮಾಡದೇ ಅವುಗಳನ್ನ ರಿಸೀವ್ ಮಾಡಿಕೊಳ್ಳುತ್ತಾರೆ. ಇವನ್ನೇ ಪಾಲೀಶ್ ಮಷಿನ್‍ಗೆ ಕಳಿಸಿ ಪಾಲೀಶ್ ಮಾಡಿಸುತ್ತಾರೆ. ವಿಷಾದವೆಂದರೆ ಶಾಲೆಯಲ್ಲಿ ಅಡುಗೆ ಮಾಡೋ ಸಿಬ್ಬಂದಿಗೆಲ್ಲಾ ಗೊತ್ತಿದ್ರೂ ಏನು ಹೇಳಲಾಗದ ಸ್ಥಿತಿ. ಏನಾದ್ರೂ ಕೇಳಿದ್ರೆ ಬೆದರಿಕೆ ಮಾತುಗಳು ಕೇಳಿಬರುತ್ತವೆ. ಒಳ್ಳೆದೋ ಕೆಟ್ಟದ್ದೋ, ಒಟ್ಟಿನಲ್ಲಿ ಮಕ್ಕಳಿಗೆ ಮಾಡಿ ಹಾಕಬೇಕು ಅನ್ನುವ ಧೋರಣೆಯಿಂದ ಅಡುಗೆ ಮಾಡಿ ಬಡಿಸ್ತಾರೆ. ಆದ್ರೆ ಮಕ್ಕಳು ಮಾತ್ರ ಇಲ್ಲಿ ಶಿಕ್ಷೆ ಅನುಭವಿಸುತ್ತಾರೆ.

    ಇಂತಹ ಪದಾರ್ಥಗಳಿಂದ ತಯಾರು ಮಾಡಿದ ಬಿಸಿಯೂಟದಿಂದ ಶಾಲಾ ಮಕ್ಕಳು ಇತ್ತೀಚೆಗೆ ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಇಷ್ಟೆಲ್ಲಾ ಅಕ್ರಮ ಅನ್ಯಾಯ ಆ ಅಧಿಕಾರಿಗಳು ಮಾತ್ರ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳು, ಸಿಬ್ಬಂದಿ ಚೆನ್ನಾಗಿರುವ ಬೇಳೆ ಪ್ಯಾಕೆಟ್‍ಗಳನ್ನ ಕಾಳಸಂತೆನಲ್ಲಿ ಮಾರಾಟಮಾಡುವ ಮೂಲಕ ಅಧಿಕಾರಿಗಳು ತಮ್ಮ ಬೇಳೆ ಬೇಯಿಸಿಕೊಳ್ತಾರೆ. ಇದು ಹೀಗೆ ಮುಂದುವರಿದ್ರೆ ಉಗ್ರವಾದ ಹೋರಾಟ ಮಾಡುವುದಾಗಿ ಸಾರ್ವಜನಿಕರು ಎಚ್ಚರಿಕೆ ನೀಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುದಿಯುತ್ತಿದ್ದ ಬೇಳೆ ಸಾರಿನ ಪಾತ್ರೆಗೆ ಬಿದ್ದು 5ರ ಬಾಲೆ ಸಾವು!

    ಕುದಿಯುತ್ತಿದ್ದ ಬೇಳೆ ಸಾರಿನ ಪಾತ್ರೆಗೆ ಬಿದ್ದು 5ರ ಬಾಲೆ ಸಾವು!

    ಭೋಪಾಲ್: ಕುದಿಯುತ್ತಿದ್ದ ಬೇಳೆ ಸಾರಿನ ಪಾತ್ರೆಗೆ ಜಾರಿ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ 5 ವರ್ಷದ ಬಾಲಕಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ಶಾಹೆದೊಲ್ ಜಿಲ್ಲೆಯ ಅಂಗನವಾಡಿಯೊಂದರಲ್ಲಿ ನಡೆದಿದೆ.

    ಸುಹಾಸಿನಿ ಬೈಗಾ ಮೃತಪಟ್ಟ ಬಾಲಕಿ. ಘಟನೆ ನಡೆದು 5 ದಿನಗಳಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಬಾಲಕಿಯು ಜಬಲ್ಪುರ್ ಖಾಸಗಿ ಆಸ್ಪತೆಯಲ್ಲಿ ಮೃತಪಟ್ಟಿದ್ದಾಳೆ.

    ನಡೆದದ್ದು ಏನು?
    ನಾನು ಪಕ್ಕದ ಕೊಠಡಿಯಲ್ಲಿ ಇದ್ದ ಅಕ್ಕಿಯನ್ನು ತರಲು ಹೋಗಿದ್ದೆ. ಆಗ ಯಾರೋ ಕಿರುಚಿದ ಶಬ್ಧ ಕೇಳಿಸಿತು. ತಕ್ಷಣವೇ ಬಂದು ನೋಡಿದಾಗ ಬಾಲಕಿ ಸಾರ್ ಪಾತ್ರೆಯ ಒಳಗಡೆ ಬಿದ್ದಿದ್ದಳು. ತಕ್ಷಣವೇ ಆಕೆಯನ್ನು ಹೊರ ತೆಗೆದು, ಬಾಲಕಿಯ ತಂದೆಗೆ ಮಾಹಿತಿ ನೀಡಿದೆ. ಅವರು ಶಾಹೆದೊಲ್ ಜಿಲ್ಲಾಸ್ಪತ್ರೆಗೆ ದಾಖಲಿಸಿದರು ಎಂದು ಅಂಗನವಾಡಿ ಸಹಾಯಕಿ ಬೈಗಾ ತಿಳಿಸಿದ್ದಾರೆ.

    ಬಾಲಕಿಯ ಚಿಕಿತ್ಸೆಗೆ ಅಡುಗೆ ಸಹಾಯಕಿ 250 ರೂ. ನೀಡಿದ್ದರು. ನಾಲ್ಕು ದಿನಗಳ ಕಾಲ ಚಿಕಿತ್ಸೆ ನೀಡಿದ್ದರೂ, ಪ್ರಕರಣದ ಕುರಿತು ಶಾಹೆದೊಲ್ ಜಿಲ್ಲಾಸ್ಪತ್ರೆ ವೈದ್ಯರು ಪೊಲೀಸರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಆದರೆ ಮಂಗಳವಾರ ಬಾಲಕಿ ಸ್ಥಿತಿ ಗಂಭೀರವಾಗಿದ್ದರಿಂದ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದರು. ಇತ್ತ ಬಾಲಕಿ ಪೋಷಕರು ಆಕೆಯನ್ನು ಜಿಲ್ಲಾಸ್ಪತ್ರೆಯಿಂದ ಜಬಲ್ಪುರ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪ್ರಕರಣದ ಕುರಿತ ತನಿಖೆ ನಡೆಸುವಂತೆ ಮತ್ತು ನಿಷ್ಕಾಳಜಿ ತೋರಿದ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೇಳೆ ಕಾಳು ಖರೀದಿಸ್ತಿದ್ರೆ ಗಮನಿಸಿ – ಬ್ರ್ಯಾಂಡೆಡ್ ಬೇಳೆ ದರ ಏರಿಕೆ

    ಬೇಳೆ ಕಾಳು ಖರೀದಿಸ್ತಿದ್ರೆ ಗಮನಿಸಿ – ಬ್ರ್ಯಾಂಡೆಡ್ ಬೇಳೆ ದರ ಏರಿಕೆ

    ಬೆಂಗಳೂರು: ಜಿ.ಎಸ್.ಟಿ ಜಾರಿಯಾದ ಮೇಲೆ ಬೇಳೆ ಕಾಳುಗಳ ಬೆಲೆ ಇಳಿಕೆಯಾಗಲಿದೆ ಎಂಬ ಗ್ರಾಹಕರ ನಿರೀಕ್ಷೆ ಉಲ್ಟಾ ಆಗಿದೆ.

    ಈ ಮೂಲಕ ದಿನಸಿ ಅಂಗಡಿಗಳು ಗ್ರಾಹಕರಿಗೆ ಜಿ.ಎಸ್.ಟಿ ಶಾಕ್ ನೀಡಿದೆ. ಬ್ರಾಂಡೆಡ್ ಬೇಳೆ ಕಾಳುಗಳ ಬೆಲೆ ಕೆಜಿಗೆ ಐದು ರೂ. ಏರಿಕೆಯಾಗಿದೆ, ಬ್ರಾಂಡೆಡ್ ಅಲ್ಲದೇ ಇರುವ ಬೇಳೆ ಕಾಳುಗಳ ದರ ಇಳಿಕೆಯಾಗಿದೆ, ಇನ್ನು ಕೇಶ ತೈಲ, ಸೋಪು, ಕಾಸ್ಮೆಟಿಕ್ಸ್ ಸೇರಿದಂತೆ ಕೆಲ ಹೆಚ್ಚು ಬೆಲೆ ಏರಿಕೆಯಾದ ಐಟಂಗಳ ಸರಬರಾಜು ಸದ್ಯಕ್ಕೆ ಸ್ಥಗಿತಗೊಂಡಿದೆ.

    ಇದನ್ನೂ ಓದಿ: ಟೀ, ಕಾಫಿ, ತಿಂಡಿ ತಿನ್ನೋಕೆ ಹೋಗ್ತಿದೀರಾ..? ನಿಮಗೆ ಕೊಡೋ ಬಿಲ್ ಗಳಲ್ಲಿ ಈ ಬದಲಾವಣೆ ಗಮನಿಸಿ!

    ಹೊಸ ಎಂ.ಆರ್.ಪಿ ಬರುವವರೆಗೆ ಹಳೆ ಸ್ಟಾಕ್ ಗಳನ್ನು ಹಳೆ ದರದಲ್ಲಿಯೇ ಮಾರಾಟ ಮಾಡಲಾಗುತ್ತದೆ. ಇನ್ನು ಅಕ್ಕಿ, ಸಕ್ಕರೆ ಧನಿಯಾ ಸೇರಿದಂತೆ ನಾನಾ ದಿನಸಿ ವಸ್ತುಗಳ ಬೆಲೆ ಕೊಂಚ ಏರಿಕೆಯಾಗಿದೆ.

    ಇದನ್ನೂ ಓದಿ: ಜಿಎಸ್‍ಟಿಯಿಂದ ಯಾವ್ಯಾವ ವಸ್ತುಗಳು ದುಬಾರಿಯಾಗಲಿವೆ? ಇಲ್ಲಿದೆ ಪೂರ್ಣ ಮಾಹಿತಿ

    ಜಿ.ಎಸ್.ಟಿ.ಯಿಂದ ಎಲೆಕ್ಟ್ರಾನಿಕ್ಸ್ ಐಟಂ ದುಬಾರಿಯಾಗಿದೆ. 2000 ರೂ.ನ ಸ್ಟೆಬಿಲೈಸರ್ ಗೆ ಗ್ರಾಹಕರು 14% ಸಿ.ಜಿ.ಎಸ್.ಟಿ ಹಾಗೂ ಎಸ್.ಜಿ.ಎಸ್.ಟಿ.ಯಂತೆ ತಲಾ 218 ರೂ.ಗಳಂತೆ ಒಟ್ಟು 437 ರೂ. ಟ್ಯಾಕ್ಸ್ ಪಾಲಾಗುತ್ತದೆ.