Tag: Daisy Shah

  • ಕನ್ನಡ ಸಿನಿಮಾ ಹಾಡಿನಲ್ಲಿ ಹೀರೋಯಿನ್ ಹೊಕ್ಕಳಿನ ಮೇಲೆ ಹಣ್ಣಿನ ಸಲಾಡ್ ಮಾಡಲಾಗುತ್ತಿತ್ತು: `ಆ’ ನಟಿಯ ಹೇಳಿದ್ಯಾರಿಗೆ?

    ಕನ್ನಡ ಸಿನಿಮಾ ಹಾಡಿನಲ್ಲಿ ಹೀರೋಯಿನ್ ಹೊಕ್ಕಳಿನ ಮೇಲೆ ಹಣ್ಣಿನ ಸಲಾಡ್ ಮಾಡಲಾಗುತ್ತಿತ್ತು: `ಆ’ ನಟಿಯ ಹೇಳಿದ್ಯಾರಿಗೆ?

    ನ್ನಡ ಚಿತ್ರ ಸೇರಿದಂತೆ ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಬಹುಭಾಷಾ ನಟಿ ವಿವಾದಾತ್ಮಕ ಹೇಳಿಕೆಯೊಂದನ್ನ ಕೊಟ್ಟಿದ್ದಾರೆ. ಕನ್ನಡ ಚಿತ್ರಗಳ ಮೂಲಕವೇ ನಾಯಕಿಯಾಗಿ ಎಂಟ್ರಿ ಕೊಟ್ಟ ಈ ನಟಿ ಬಳಿಕ ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸಿದ್ದರು. ಅವರೇ ನಟಿ ಡೈಸಿ ಶಾ. ಇದೀಗ ಡೈಸಿ ಶಾ ದಕ್ಷಿಣ ಭಾರತದ ಚಿತ್ರರಂಗ ಹಾಗೂ ಕನ್ನಡ ಸಿನಿಮಾಗಳಲ್ಲಿ ನಾಯಕಿಯನ್ನ ಹೇಗೆ ಫೋಕಸ್ ಮಾಡಲಾಗುತ್ತದೆ ಅನ್ನೋದ್ರ ಕುರಿತು ವಿವಾದಾತ್ಮಕವಾಗಿ ಮಾತನಾಡಿದ್ದಾರೆ.

    ಖಾಸಗಿ ಯೂಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಡೈಸಿ ಶಾ ಸಂದರ್ಶಕರ ಜೊತೆ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕಿಯನ್ನ ತೋರಿಸುವ ವಿಧಾನದ ಕುರಿತು ಮಾತನಾಡುವ ವೇಳೆ ವಿಚಿತ್ರ ವಿಕ್ಷಿಪ್ತ ಹೇಳಿಕೆಯನ್ನ ಕೊಟ್ಟಿದ್ದಾರೆ. ಒಂದೆರಡು ಹಾಡನ್ನ ನೋಡಿರುವ ಮಾತ್ರಕ್ಕೆ ಇಡೀ ಕನ್ನಡ ಸಿನಿಮಾ ಇಂಡಸ್ಟ್ರಿಯ ಇತಿಹಾಸವನ್ನೇ ತಿರುಚುವ ಪ್ರಯತ್ನ ಮಾಡಿದ್ದಾರೆ ಈ ನಟಿ. ಬಹುಶಃ ಈ ವಿಚಾರ ಮುಂದಿನ ದಿನ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಚರ್ಚೆಯಾಗೋದ್ರಲ್ಲಿ ಅನುಮಾನವಿಲ್ಲ.

    ಡೈಸಿ ಶಾ ಹೇಳಿದ್ದೇನು..?
    ಕನ್ನಡ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾಗ, ಪುರುಷ ನಟರಿಗೆ ಸರಿಯಾದ ಹಿನ್ನೆಲೆ ಮತ್ತು ಉಪಪಠ್ಯದೊಂದಿಗೆ ನಿರ್ದೇಶನ ನೀಡಲಾಗುತ್ತಿತ್ತು. ಆದರೆ ನಾಯಕಿಯರಾದ ನಮಗೆ ಇಲ್ಲಿ ನಗಬೇಕು, ಇಲ್ಲಿ ಅಳಬೇಕು, ಇಲ್ಲಿ ಹೀಗಿರಬೇಕು ಎಂದಷ್ಟೇ ಹೇಳಲಾಗುತ್ತಿತ್ತು. ಭಾಷೆಯಲ್ಲಿ ಚೆನ್ನಾಗಿ ಪರಿಣತಿ ಇಲ್ಲದಿರುವುದು ಇದಕ್ಕೆ ಕಾರಣ ಇರಬಹುದು.

    ನಟಿ ಹೇಳಿದ ವಿವಾದಾತ್ಮಕ ಮಾತೇನು..?
    ‘ನಾನು ಕನ್ನಡ ಸಿನಿಮಾದಲ್ಲಿ ಕೆಲಸ ಮಾಡುವಾಗ, ನನ್ನ ಬಿಡುವಿನ ಸಮಯದಲ್ಲಿ ನಾನು ಟಿವಿ ನೋಡುತ್ತಿದ್ದೆ. ಮತ್ತು ನಾನು ನೋಡಿದ ಎಲ್ಲಾ ಕನ್ನಡ ಹಾಡುಗಳಲ್ಲಿ… ಒಬ್ಬ ನಿರ್ದಿಷ್ಟ ನಟನಿದ್ದರು. ಅವರ ಎಲ್ಲಾ ಹಾಡುಗಳಲ್ಲಿ, ನಾಯಕಿಯ ಹೊಕ್ಕುಳಿನ ಮೇಲೆ ಹಣ್ಣಿನ ಸಲಾಡ್ ಅಥವಾ ತರಕಾರಿ ಸಲಾಡ್‌ನ್ನು ಕ್ಲೋಸ್-ಅಪ್ ಶಾಟ್‌ಗಳೊಂದಿಗೆ ಚಿತ್ರೀಕರಣ ಮಾಡಲಾಗುತ್ತಿತ್ತು. ಕೆಲವೊಮ್ಮೆ ಹೊಕ್ಕುಳಿನ ಮೇಲೆ ಐಸ್ ಅಥವಾ ನೀರನ್ನು ಸುರಿಯಲಾಗುತ್ತಿತ್ತು.’

    ಹೀಗೆ ನಟಿ ಡೈಸಿ ಶಾ ಕನ್ನಡದ ಕೆಲವೇ ಹಾಡುಗಳನ್ನ ನೋಡಿ ಇಡೀ ಇಂಡಸ್ಟ್ರಿ ಮೇಲಿರುವ ಅಭಿಪ್ರಾಯವನ್ನ ಬೇರೆ ರೀತಿಯಲ್ಲಿ ಕೊಂಡೊಯ್ಯುವ ಪ್ರಯತ್ನ ಮಾಡಿರುವುದು ಕಾಣುತ್ತದೆ. ಕನ್ನಡ ಸಿನಿಮಾ ಇಂಡಸ್ಟ್ರಿಯ ಹಿರಿಮೆ ಪ್ರೌಢಿಮೆ ಇತಿಹಾಸವನ್ನ ಪ್ರಶ್ನೆ ಮಾಡುವಂತಿದೆ ಡೈಸಿ ಮಾತು. ಹಾಟರ್‌ಫ್ಲೈ ಯೂಟ್ಯೂಬ್ ವಾಹಿನಿಗೆ ಡೈಸಿ ಶಾ ನೀಡಿರುವ ಸಂದರ್ಶನದಲ್ಲಿ ವಿವಾದಾತ್ಮಕ ಮಾತನಾಡಿದ್ದಾರೆ.

    ಅಂದಹಾಗೆ ಈ ಡೈಸಿ ಶಾ ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರ ಸಹಾಯಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಟನೆಗೆ ಕಾಲಿಡುವ ಮೊದಲು ಹಲವಾರು ಬಾಲಿವುಡ್ ಹಾಡುಗಳಲ್ಲಿ ಹಿನ್ನೆಲೆ ನರ್ತಕಿಯಾಗಿ ಕಾಣಿಸಿಕೊಂಡರು. ಬಳಿಕ ಮಹೇಶ್ ರಾವ್ ನಿರ್ದೇಶನದಲ್ಲಿ ಪ್ರಜ್ವಲ್ ದೇವರಾಜ್ ನಟನೆಯ ಭದ್ರ ಚಿತ್ರದ ಮೂಲಕ ನಟಿಯಾಗಿ ಭಡ್ತಿ ಪಡೆದವರು. ಬಳಿಕ ಜಗ್ಗೇಶ್ ಅಭಿನಯದ ಬಾಡಿಗಾರ್ಡ್ ಚಿತ್ರದಲ್ಲಿ ನಟಿಸಿದ್ದರು. ಬಳಿಕ ಸಲ್ಮಾನ್ ಖಾನ್ ಅವರ ಜೈ ಹೋ ಚಿತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್ ನಟಿಯಾಗಿ ಖ್ಯಾತಿ ಪಡೆದಿದ್ರು. ಇದೀಗ ರಿಯಾಲಿಟಿ ಶೋ ಹೇಟ್‌ಸ್ಟೋರಿ ಸೇರಿದಂತೆ ಅಲ್ಲಿ ಇಲ್ಲಿ ಪಾತ್ರ ಮಾಡ್ತಿರುವ ಈ ಅವಕಾಶ ವಂಚಿತ ನಟಿ ತಮ್ಮ ಅಪ್ರಬುದ್ಧ ಹೇಳಿಕೆಯಿಂದ ಸುದ್ದಿಗೆ ಬಂದಿದ್ದಾರೆ.

  • ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಐರಾವತ, ಭದ್ರ ಚೆಲುವೆಯರು

    ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಐರಾವತ, ಭದ್ರ ಚೆಲುವೆಯರು

    ಮುಂಬೈ: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಹಾಗೂ ಡೈಸಿ ಶಾ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.

    urvashi rautela

    ವೈಟ್ ಆ್ಯಂಡ್ ವೈಟ್ ಡ್ರೆಸ್‍ನಲ್ಲಿ ವಿಮಾನ ನಿಲ್ದಾಣಕ್ಕೆ ಎಂಟ್ರಿ ಕೊಟ್ಟ ಊರ್ವಶಿ ರೌಟೇಲಾ ಬ್ಲಾಕ್ ಕಲರ್ ಮಾಸ್ಕ್ ತೊಟ್ಟಿದ್ದರು. ಇದೇ ವೇಳೆ ಅಭಿಮಾನಿಯೊಬ್ಬರಿಗೆ ಊರ್ವಶಿ ರೌಟೇಲಾ ಸೆಲ್ಫಿ ನೀಡಿದ್ದಾರೆ. ಇದನ್ನು ಕಂಡು ಕೈಯಲ್ಲಿ ಐಸ್ ಕ್ರೀಮ್ ಹಿಡಿದುಕೊಂಡಿದ್ದ ಬಾಲಕಿ ತಾನು ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕೆಂದು ಹಠ ಮಾಡಿ ಊರ್ವಶಿ ಪಕ್ಕ ಬರುತ್ತಾಳೆ. ಆದರೆ ಆದ್ಯಗೋ ನಾಚಿಕೆಯಿಂದ ಮತ್ತೆ ಹಿಂದಿರುಗಿದ್ದಾಳೆ.

    urvashi rautela

    ನಂತರ ಬಾಲಕಿಗೆ ಬಾಯ್ ಹೇಳಿ ಮುಂದೆ ನಡೆದ ಊರ್ವಶಿ ರೌಟೇಲಾ ಕ್ಯಾಮೆರಾಗಳಗೆ ಮಾಸ್ಕ್ ತೆಗೆದು ಪೋಸ್ ನೀಡಿದರು. ಇದನ್ನೂ ಓದಿ: ಮಹಿಳೆಯರಿಗೆ ಸೂಟ್ ಆಗುವಂತಹ ಸ್ಯಾಟಿನ್ ಬೆಸ್ಟ್ ಪಾರ್ಟಿ ವೇರ್‌ಗಳು

    urvashi rautela

    ಕೊನೆಗೆ ಮೊಬೈಲ್ ಕೈಯಲ್ಲಿ ಹಿಡಿದುಕೊಂಡು ಮುಂದೆ ಸಾಗಿದರು. ಸ್ಯಾಂಡಲ್‍ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಜೋಡಿಯಾಗಿ ಊರ್ವಶಿ ರೌಟೇಲಾ ಐರಾವತ ಸಿನಿಮಾದಲ್ಲಿ ಅಭಿನಯಿಸಿದ್ದರು. ಇದನ್ನೂ ಓದಿ: ಗದ್ದೆಗೆ ಹೋಗೋ ನೆಪದಲ್ಲಿ ಬಾವಿಗೆ ತಳ್ಳಿ ಹೆಂಡ್ತಿ ಕೊಲೆ – ಅಪರಾಧಿಗೆ ಜೀವಾವಧಿ ಶಿಕ್ಷೆ

    ಸ್ಯಾಂಡಲ್‍ವುಡ್ ನಟ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್‍ಗೆ ಜೋಡಿಯಾಗಿ ಭದ್ರ ಸಿನಿಮಾದಲ್ಲಿ ಅಭಿನಯಿಸಿದ್ದ ಡೈಸಿ ಶಾ ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ.

    daisy shah (7)

    ಇಂದು ಮುಂಬೈ ವಿಮಾನ ನಿಲ್ದಾಣಕ್ಕೆ ಕಾರಿನಿಂದ ಲಾಗೇಜ್ ಸಮೇತ ಬಂದಿಳಿದ ಅವರು ಅಭಿಮಾನಿಯೊಟ್ಟಿಗೆ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ: ಕಾರಂಜಾ ಜಲಾಶಯದಿಂದ 5050 ಕ್ಯೂಸೆಕ್ ನೀರು ಬಿಡುಗಡೆ- ನಾಲೆಗಳಿಗೆ ಇಳಿಯದಂತೆ ಜನರಿಗೆ ಎಚ್ಚರಿಕೆ

     daisy shah (7)

    ಬಳಿಕ ಅಭಿಮಾನಿಗಳೊಂದಿಗೆ ಮಾತನಾಡುತ್ತಾ ಮುಗುಳು ನಗೆ ಬೀರಿ ಮಾಸ್ಕ್ ಧರಿಸಿಕೊಂಡು ಮುಂದೆ ನಡೆದರು. ಗ್ರೀನ್ ಕಲರ್ ಡ್ರೆಸ್ ಜೊತೆ ವೈಟ್ ಶೂ ಧರಿಸಿದ್ದ ಡೈಸಿ ಸಾ ಸಖತ್ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದರು.

    daisy shah (7)

    ಅಲ್ಲದೇ ಸ್ಯಾಂಡಲ್‍ವುಡ್ ನಟ ನವರಸ ನಾಯಕ ಜಗ್ಗೇಶ್‍ಗೆ ಡೈಸಿ ಶಾ ಬಾಡಿಗಾರ್ಡ್ ಸಿನಿಮಾದಲ್ಲಿ ಈ ಹಿಂದೆ ಜೋಡಿಯಾಗಿ ಅಭಿನಯಿಸಿದ್ದರು.

     daisy shah (7)

    https://www.youtube.com/watch?v=tz8BRe599Ew

  • ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ಸಲ್ಮಾನ್ ಖಾನ್ ಗೆ ನಟಿಯರು ವೆಲ್‍ಕಮ್!

    ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ಸಲ್ಮಾನ್ ಖಾನ್ ಗೆ ನಟಿಯರು ವೆಲ್‍ಕಮ್!

    ಮುಂಬೈ: ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಧ್‍ಪುರ್ ಸಿಜೆಎಂ ನ್ಯಾಯಾಲಯ ನಟ ಸಲ್ಮಾನ್ ಖಾನ್ ಗೆ 5 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡವನ್ನು ವಿಧಿಸಿತ್ತು. ಈ ಸಂಬಂಧ ಎರಡು ದಿನಗಳ ಕಾಲ ಜೈಲಿನಲ್ಲಿದ್ದ ಸಲ್ಮಾನ್ ಗೆ ನ್ಯಾಯಾಲಯ ಶನಿವಾರ ಷರತ್ತು ಬದ್ಧ ಜಾಮೀನು ನೀಡಿತ್ತು.

    ಈ ಸಂಬಂಧ ಜೋಧ್‍ಪುರದಿಂದ ಸಂಜೆ ಮುಂಬೈನತ್ತ ಪ್ರಯಾಣ ಬೆಳೆಸಿದ್ದರು. ಈ ವೇಳೆ ಸಲ್ಮಾನ್ ಮುಂಬೈನ ಗ್ಯಾಲೆಕ್ಸಿ ಅಪಾರ್ಟ್ ಮೆಂಟ್ ನತ್ತ ಮಾಜಿ ಗೆಳತಿ ಕತ್ರಿನಾ ಕೈಫ್, ಜೈ ಹೋ ಬೆಡಗಿ ಡೈಸಿ ಶಾ, ಜಾಕ್ವೇಲಿನ್ ಫರ್ನಾಂಡೀಸ್ ಹೆಜ್ಜೆ ಹಾಕಿದ್ರು.

    ಸಲ್ಮಾನ್ ದೋಷಿ ಅಂತಾ ನ್ಯಾಯಾಲಯ ಆದೇಶಿಸುತ್ತಿದ್ದಂತೆ ಬಾಲಿವುಡ್‍ನ ಯಾವ ನಟಿಯರೂ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ಇತ್ತ ಸಲ್ಮಾನ್‍ಗೆ ಬೇಲ್ ಸಿಗುತ್ತಿದ್ದಂತೆ ಕತ್ರಿನಾ ಭೇಟಿ ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಮುಂಬೈ ನಿವಾಸಕ್ಕೆ ಆಗಮಿಸುತ್ತಿದ್ದಂತೆಯೇ ಸಲ್ಮಾನ್ ಖಾನ್ ಬಾಲ್ಕನಿಗೆ ಬಂದು ಮನೆಯ ಮುಂದೆ ನೆರೆದಿದ್ದ ಅಭಿಮಾನಿಗಳತ್ತ ಕೈ ಬೀಸಿ ಧನ್ಯವಾದ ಸಲ್ಲಿಸಿದ್ರು.

    ಈ ಹಿಂದೆ ಪ್ರೀತಿಯಲ್ಲಿದ್ದ ಸಲ್ಲು ಮತ್ತು ಕ್ಯಾಟ್ ಮಧ್ಯೆ ಕೆಲ ಕಾರಣಗಳಿಂದಾಗಿ ಬ್ರೇಕಪ್ ಉಂಟಾಗಿತ್ತು. ಸಲ್ಮಾನ್ ಜೊತೆಗಿನ ಬ್ರೇಕಪ್ ಬಳಿಕ ಕತ್ರಿನಾ ಹೆಸರು ಚಾಕ್ಲೇಟ್ ಬಾಯ್ ರಣ್‍ಬೀರ್ ಕಪೂರ್ ಜೊತೆ ಬಲವಾಗಿ ಕೇಳಿ ಬಂದಿತ್ತು. 2017ರಲ್ಲಿ ತೆರೆಕಂಡ ‘ಟೈಗರ್ ಜಿಂದಾ ಹೈ’ ಸಿನಿಮಾದಲ್ಲಿ ಕತ್ರಿನಾ ಮತ್ತು ಸಲ್ಮಾನ್ ಜೊತೆಯಾಗಿ ನಟಿಸಿದ್ದರು. ಈ ವೇಳೆ ಇಬ್ಬರ ಮಧ್ಯೆ ಮತ್ತೆ ಪ್ರೀತಿಯ ಅಲೆ ಹುಟ್ಟುಕೊಂಡಿದೆ ಅಂತಾ ಹೇಳಲಾಗುತ್ತಿದೆ.

    https://www.instagram.com/p/BhSoy7NAf_S/?hl=en&taken-by=bollywood

    https://www.instagram.com/p/BhRv245gniC/?hl=en&taken-by=bollywood

    https://www.instagram.com/p/BhNs8gvAAB1/?hl=en&taken-by=bollywood

    https://www.instagram.com/p/BhMXIIEHbEo/?hl=en&taken-by=bollywood

  • ರೇಸ್-3ರಲ್ಲಿ ಒಂದಾಗಲಿದ್ದಾರೆ ಹಾಟ್ ಜೋಡಿ ಇಮ್ರಾನ್ ಹಶ್ಮಿ-ಡೈಸಿ ಶಾ

    ರೇಸ್-3ರಲ್ಲಿ ಒಂದಾಗಲಿದ್ದಾರೆ ಹಾಟ್ ಜೋಡಿ ಇಮ್ರಾನ್ ಹಶ್ಮಿ-ಡೈಸಿ ಶಾ

    ಮುಂಬೈ: ರೇಸ್-3 ಚಿತ್ರದಲ್ಲಿ ಸಲ್ಮಾನ್ ಖಾನ್ ಹಾಗೂ ಜಾಕ್ವೇಲಿನ್ ಫರ್ನಾಂಡಿಸ್ ಒಟ್ಟಿಗೆ ನಟಿಸುವುದು ನಿಮಗೆಲ್ಲಾ ಗೊತ್ತೆಯಿದೆ. ಈ ಚಿತ್ರದ ಮತ್ತೊಬ್ಬ ನಟನಾಗಿ ಇಮ್ರಾನ್ ಹಶ್ಮಿಯರನ್ನು ಆಯ್ಕೆ ಮಾಡಲಾಗಿದೆ.

    ರೇಸ್-3 ಚಿತ್ರದಲ್ಲಿ ಮತ್ತೊಬ್ಬ ನಟರನ್ನಾಗಿ ಸಿದ್ಧಾರ್ಥ್ ಮಲ್ಹೋತ್ರ ಮತ್ತು ಆದಿತ್ಯ ರಾಯ್ ಕಪೂರ್ ಅವರ ಹೆಸರನ್ನು ಸೂಚಿಸಲಾಗಿತ್ತು. ಆದರೆ ಇಬ್ಬರು ನಟರು ಈ ಚಿತ್ರವನ್ನು ನಿರಾಕರಿಸಿದ್ದಾರೆ. ಈಗ ಈ ಚಿತ್ರ ಇಮ್ರಾನ್ ಹಶ್ಮಿಗೆ ಒಲಿದಿದೆ.

    ಇಮ್ರಾನ್ ಹಶ್ಮಿ ಜೊತೆ ನಾಯಕಿಯಾಗಿ ಹೇಟ್ ಸ್ಟೋರಿ-3 ಚಿತ್ರದ ನಾಯಕಿ ಡೈಸಿ ಶಾ ಕಾಣಿಸಿಕೊಳ್ಳಲಿದ್ದಾರೆ. ರೇಸ್-3 ಚಿತ್ರದ ನಟ-ನಟಿಯರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ತಿಳಿದು ಬಂದಿಲ್ಲ. ಸಲ್ಮಾನ್ ಖಾನ್ ನಟನೆಯ ‘ಟೈಗರ್ ಜಿಂದಾ ಹೇ’ ಚಿತ್ರ ಮುಗಿದ ನಂತರ ರೇಸ್-3 ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.