Tag: cyber Fraud

  • ಸೈಬರ್ ಮೋಸದ ಜಾಲದಕ್ಕೆ ಸಿಕ್ಕಿ 1.48 ಲಕ್ಷ ಕಳೆದುಕೊಂಡ ನಟಿ!

    ಸೈಬರ್ ಮೋಸದ ಜಾಲದಕ್ಕೆ ಸಿಕ್ಕಿ 1.48 ಲಕ್ಷ ಕಳೆದುಕೊಂಡ ನಟಿ!

    ಮುಂಬೈ: ಸೈಬರ್ ಮೋಸಕ್ಕೆ ಹಲವು ಜನರು ಸಿಕ್ಕಿ ತಮ್ಮ ಆಸ್ತಿಯನ್ನೆ ಕಳೆದುಕೊಂಡಿರುವ ಸುದ್ದಿಯನ್ನು ನೋಡಿದ್ದೇವೆ. ಈಗ ನಟಿಯೊಬ್ಬರು ಸೈಬರ್ ಮೋಸದ ಜಾಲಕ್ಕೆ ಸಿಕ್ಕಿ, 1.48 ಲಕ್ಷ ಕಳೆದುಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    64 ವರ್ಷದ ಪಾರ್ಲೆಯ ಮರಾಠಿ ಸಿನಿಮಾ ನಟಿಯೊಬ್ಬರು ಟೆಲಿಕಾಂ ಆಪರೇಟರ್ ಏರ್‍ಟೆಲ್ ಕಳುಹಿಸಿದ ಸಂದೇಶವನ್ನು ಸ್ವೀಕರಿಸಿದ್ದಾರೆ. ಈ ವೇಳೆ ನಟಿಗೆ ಕರೆ ಬಂದಿದ್ದು, ವಂಚಕರು ಎಟಿಎಂ ಕಾರ್ಡ್‍ನ ಪೂರ್ತಿ ವಿವರವನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಈ ನಟಿ ವಂಚಕರಿಗೆ ತನ್ನ ಕೆವೈಸಿ ನಂಬರ್ ಸಹ ಕೊಟ್ಟಿದ್ದಾರೆ. ಪರಿಣಾಮ ಆಕೆಯ ಖಾತೆಯಿಂದ ವಂಚಕರು 1.48 ಲಕ್ಷ ರೂ. ವಂಚಿಸಿದ್ದಾರೆ. ಇದನ್ನೂ ಓದಿ: ಆಹಾರ ಇಲ್ಲದೇ ಚಾಕೊಲೇಟ್ ತಿನ್ನುತ್ತ ದಿನ ಕಳೆಯುತ್ತಿದ್ದೇವೆ: ವಿದ್ಯಾರ್ಥಿಗಳ ಅಳಲು

    Representative Image 
 | Pixabay

    ಏನಿದು ಘಟನೆ?
    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ, ನನ್ನ ಗಂಡನ ಫೋನ್‍ಗೆ ಒಂದು ಸಂದೇಶ ಬಂತು. ಏರ್‍ಟೆಲ್‍ನಿಂದ ನನಗೆ ಕರೆ ಸಹ ಬಂದ್ದಿತ್ತು. ಆಗ ನಾನು ಅವರು ಕೇಳಿದ ಎಲ್ಲ ವಿವರಗಳನ್ನು ಕೊಟ್ಟಿದ್ದು, ಕೆವೈಸಿ ಸಹ ಹೇಳಿದ್ದೇನೆ ಎಂದು ವಿವರಿಸಿದ್ದಾರೆ.

    ನಂತರ ಅವರು ನನಗೆ ಅಪ್ಲಿಕೇಶನ್‍ವೊಂದನ್ನು ಡೌನ್‍ಲೋಡ್ ಮಾಡಲು ತಿಳಿಸಿದರು. ಅದರಂತೆ ನಾನು ಸಹ ಮಾಡಿದೆ. ಬೇರೊಬ್ಬರಿಗೂ ಅಪ್ಲಿಕೇಶನ್‍ನಲ್ಲಿ ಅನುವು ಮಾಡಿಕೊಡುವಂತೆ ತಿಳಿಸಿದರು. ನಾನು ಒಪ್ಪಿಗೆ ಕೊಟ್ಟೆ. ಅವರು ಹೇಳಿದಂತೆ ನನ್ನ ಬ್ಯಾಂಕಿಂಗ್ ವಿವರಗಳನ್ನು ನಮೂದಿಸಿ, 10 ರೂ. ಪಾವತಿಸಬೇಕು ಎಂದರು. ನಾನು ಅದೇ ರೀತಿ ಮಾಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಏಳು ಗಂಟೆಯಲ್ಲಿ 28 ಟನ್ ಕಬ್ಬು ಲೋಡ್ ಮಾಡಿದ ಯುವಕ!

    ಪೊಲೀಸರು ಈ ಕುರಿತು ಪ್ರತಿಕ್ರಿಯಿಸಿದ್ದು, ನಟಿ ತನ್ನ ಬ್ಯಾಂಕಿಂಗ್ ವಿವರಗಳನ್ನು ನಮೂದಿಸಿದ್ದು, ಅಪ್ಲಿಕೇಶನ್ ಸಹಾಯದಿಂದ ವಂಚಕರು ಎಲ್ಲ ವಿವರಗಳನ್ನು ನೋಡಿಕೊಂಡಿದ್ದಾರೆ. ನಂತರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಹಣ ವರ್ಗಾವಣೆಯಾಗಿರುವುದನ್ನು ನೋಡಿ ನಟಿ ಶಾಕ್ ಆಗಿದ್ದಾರೆ. ತಕ್ಷಣ ಆ ನಟಿ ಹತ್ತಿರದಲ್ಲಿದ್ದ ಏರ್‍ಟೆಲ್ ಶಾಪ್ ಗೆ ಭೇಟಿ ಕೊಟ್ಟಿದ್ದು, ನಟಿಗೆ ಯಾವುದೇ ಕರೆಯನ್ನು ಏರ್‍ಟೆಲ್ ಮಾಡಿಲ್ಲ ಎಂಬುದನ್ನು ತಿಳಿದುಕೊಂಡಿದ್ದಾರೆ ಎಂದು ವಿವರಿಸಿದರು.

    ನಂತರ ನಟಿ ಬ್ಯಾಂಕಿಗೂ ಹೋಗಿ ಮಾಹಿತಿ ತಿಳಿಸಿದ್ದು, 1.48 ಲಕ್ಷ ರೂ. ವರ್ಗಾವಣೆಯಾಗಿರುವುದು ಸತ್ಯ ಎಂಬುದು ತಿಳಿದುಬಂದಿದೆ. ತಕ್ಷಣ ನಟಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು, ತನಿಖೆ ನಡೆಯುತ್ತಿದೆ ಎಂದರು.

  • ಎಂಜಿನಿಯರಿಂಗ್ ಸೀಟ್ ಕೊಡಿಸ್ತೀನೆಂದು ವಿದ್ಯಾರ್ಥಿನಿಗೆ 1,27,500 ರೂ. ವಂಚನೆ!

    ಎಂಜಿನಿಯರಿಂಗ್ ಸೀಟ್ ಕೊಡಿಸ್ತೀನೆಂದು ವಿದ್ಯಾರ್ಥಿನಿಗೆ 1,27,500 ರೂ. ವಂಚನೆ!

    ಬೆಂಗಳೂರು: ಎಂಜಿನಿಯರಿಂಗ್ ಸೀಟ್ ಕೊಡಿಸುತ್ತೇನೆ ಅಂತಾ ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

    ರಾಜೇಶ್ವರ್ ಬಂಧಿತ ಆರೋಪಿ. ಸೈಬರ್ ಖದೀಮನು ರೇವಾ ಕಾಲೇಜ್‍ನಲ್ಲಿ ಮಿಸ್ ಆಗಿದ್ದ ಎಂಜಿನಿಯರಿಂಗ್ ಸೀಟ್ ಕೊಡಿಸುತ್ತೇನೆ ಅಂತಾ ವಂಚಿಸಿದ್ದನು. ದೂರುದಾರರ ಮಗಳು ಕಾಲೇಜ್‍ನಲ್ಲಿ (ಇಸಿಎಮ್) ಇಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ಬ್ರಾಂಚ್ ಪಡೆದಿದ್ದರು. ಆದರೆ (ಸಿಎಸ್) ಕಂಪ್ಯೂಟರ್ ಸೈನ್ಸ್ ಬ್ರಾಂಚ್ ಬದಲಾವಣೆಗಾಗಿ ಕಾಯುತ್ತಿದ್ದರು. ಈ ವೇಳೆ ಖದೀಮನು ಮೆಸೇಜ್ ಮೂಲಕ ಕೆಲ ಬ್ರಾಂಚ್‍ಗಳ ಸೀಟ್ ಖಾಲಿಯಾಗಿದ್ದು, ಸಿಎಸ್ ಬ್ರಾಂಚ್‍ಗೆ ಬದಲಾಯಿಸಿ ಸೀಟ್ ಕೊಡಿಸುವುದಾಗಿ ಮೆಸೇಜ್ ಮಾಡಿದ್ದನು. ಈ ವೇಳೆ ವಿದ್ಯಾರ್ಥಿನಿ ತಂದೆಗೆ ಮೆಸೇಜ್ ಬಂದಿದ್ದೇ ತಡ ನಂಬರ್‍ಗೆ ಕರೆ ಮಾಡಿ ಮಾತನಾಡಿದ್ದರು. ಇದನ್ನೂ ಓದಿ: ಮತ್ತೆ ಸಚಿವರ ವಿರುದ್ಧ ತಿರುಗಿ ಬಿದ್ದ ರೇಣುಕಾಚಾರ್ಯ – ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು

    ನಂತರ ವಂಚಕನು ಅವರಿಂದ ಸಿಎಸ್ ಸೀಟ್ ಕೊಡಿಸುತ್ತೇನೆ ಅಂತಾ 1 ಲಕ್ಷದ 27 ಸಾವಿರದ 500 ರೂಪಾಯಿಗಳನ್ನು ತನ್ನ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದನು. ಅಕೌಂಟ್‍ಗೆ ಹಣ ಬರುತ್ತಿದ್ದಂತೆಯೇ ಅವನು ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಇತ್ತ ವಿದ್ಯಾರ್ಥಿನಿ ತಂದೆ ಆರೋಪಿ ಮೊಬೈಲ್‍ಗೆ ಕರೆ ಮಾಡಿ ಬೇಸತ್ತಿದ್ದರು. ಇದನ್ನೂ ಓದಿ: ಸಿ.ಎಂ.ಇಬ್ರಾಹಿಂ ಬೆನ್ನಿಗೆ ಚೂರಿ ಹಾಕಿದ್ರು ಸಿದ್ದರಾಮಯ್ಯ: ಶ್ರೀರಾಮುಲು ಟೀಕೆ

    ನಂತರ ಅವರು ತಾವು ಮೋಸ ಹೋಗಿದ್ದು ಗೊತ್ತಾಗಿ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ಸಂಬಂಧ ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತನಿಂದ 3 ಮೊಬೈಲ್, 4 ಲ್ಯಾಪ್ ಟಾಪ್, 7 ಸಿಮ್, 21 ಗ್ರಾಂ ಚಿನ್ನ, 3 ಚಿನ್ನದ ನಾಣ್ಯಗಳು ಹಾಗೂ 1 ಲಕ್ಷದ 72 ಸಾವಿರದ 500 ಹಣವನ್ನು ಜಪ್ತಿ ಮಾಡಿದ್ದಾರೆ. ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.