Tag: cutting

  • ಜೆಡಿಎಸ್ ಅಭ್ಯರ್ಥಿಗೆ ವೋಟ್ ಮಾಡಿದ್ರೆ ಉಚಿತ ಕಟ್ಟಿಂಗ್ , ಶೇವಿಂಗ್ – ಅಭಿಮಾನಿಯಿಂದ ಆಫರ್

    ಜೆಡಿಎಸ್ ಅಭ್ಯರ್ಥಿಗೆ ವೋಟ್ ಮಾಡಿದ್ರೆ ಉಚಿತ ಕಟ್ಟಿಂಗ್ , ಶೇವಿಂಗ್ – ಅಭಿಮಾನಿಯಿಂದ ಆಫರ್

    ಕೋಲಾರ: ಚುನಾವಣೆ ಸಂದರ್ಭದಲ್ಲಿ ವೋಟ್‍ಗಾಗಿ ನಾಯಕರು ಭರ್ಜರಿ ಗಿಫ್ಟ್ ಅಥವಾ ಹಣ ಕೊಡುವುದನ್ನು ನೋಡಿರುತ್ತೇವೆ. ಆದರೆ ಕೋಲಾರದ ಜೆಡಿಎಸ್ ಅಭ್ಯರ್ಥಿಗೆ ವೋಟ್ ಹಾಕಿದರೆ  ಕಟ್ಟಿಂಗ್ , ಶೇವಿಂಗ್ ಫ್ರೀಯಾಗಿ ಮಾಡುವುದಾಗಿ ತಿಳಿಸುವ ಮೂಲಕ ವ್ಯಕ್ತಿಯೋರ್ವ ಭಾರೀ ಸುದ್ದಿಯಲ್ಲಿದ್ದಾರೆ.

    ಹೌದು, ಮಾಲೂರು ಜೆಡಿಎಸ್ ಅಭ್ಯರ್ಥಿ ರಾಮೇಗೌಡರಿಗೆ ವೋಟ್ ಹಾಕಿದರೆ, ಉಚಿತವಾಗಿ ಕಟ್ಟಿಂಗ್ ಮಾಡುವುದಾಗಿ ಕ್ಷೌರ ಅಂಗಡಿ ಮಾಲೀಕರೊಬ್ಬರು ಆಫರ್ ನೀಡಿದ್ದಾನೆ. ಮಾಲೂರು ತಾಲೂಕಿನ ಕುಡಿಯನೂರು ಗ್ರಾಮದಲ್ಲಿರುವ ಈ ಕ್ಷೌರ ಅಂಗಡಿಯಲ್ಲಿ ಜೆಡಿಎಸ್ ಹಾಗೂ ಅವರ ಬೆಂಬಲಿಗರಿಗೆ ಉಚಿತ ಕಟಿಂಗ್ ಮಾಡಲಾಗುತ್ತದೆ ಎಂಬ ಅನೌನ್ಸ್‌ಮೆಂಟ್ ಮಾಡುವ ಮೂಲಕ ಒಂದು ರೀತಿ ವಿಚಿತ್ರವಾಗಿ ಕ್ಯಾಂಪೇನ್ ಮಾಡಲಾಗಿದೆ. ಇದನ್ನೂ ಓದಿ: ಹೌದು ನಾವು ಗಾಂಧಿ ಕುಟುಂಬದ ಗುಲಾಮರು, ಬಿಜೆಪಿಯವ್ರು ಸತ್ಯವನ್ನೇ ಹೇಳಿದ್ದಾರೆ: ಡಿಕೆಶಿ

    ಮಾಜಿ ಸೈನಿಕರು, ವೃದ್ಧರು, ಜೆಡಿಎಸ್‍ಗೆ ವೋಟ್ ಹಾಕುವವರಿಗೆ ಉಚಿತವಾಗಿ ಕ್ಷೌರ ಕೆಲಸ ಮಾಡುವುದಾಗಿ ಕ್ಷೌರ ಅಂಗಡಿ ಮಾಲೀಕ ತಿಳಿಸಿದ್ದಾರೆ. ಅಲ್ಲದೇ ಅಂಗಡಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ರಾಮೇಗೌಡ ಅವರ ಭಾವಚಿತ್ರ ಹಾಕಿದ್ದು, ಗೋಡೆಗಳ ಮೇಲೆ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ಸಾಧನೆಗಳನ್ನು ಉಲ್ಲೇಖಿಸಿ ಜೆಡಿಎಸ್ ಅಭಿಮಾನ ಮೆರೆದಿದ್ದಾನೆ. ಇನ್ನೂ ಅಂಗಡಿಗೆ ಬರುವವರಿಗೆ ಜೆಡಿಎಸ್ ಪಕ್ಷದ ಬಗ್ಗೆ ಪ್ರಚಾರ ಮಾಡುವುದು, ಸೇರಿದಂತೆ ತನಗಿರುವ ಪಕ್ಷದ ಅಭಿಮಾನವನ್ನು ತಮ್ಮ ವೃತ್ತಿ ಮೂಲಕ ಪ್ರದರ್ಶಿಸಿದ್ದಾರೆ. ಇದನ್ನೂ ಓದಿ: ಏಷ್ಯಾದಲ್ಲಿ ಭಾರತ ಹೊರತುಪಡಿಸಿ 13 ದೇಶಗಳಲ್ಲಿ ಆರ್ಥಿಕ ಹಿಂಜರಿತ ಸಾಧ್ಯತೆ

    Live Tv
    [brid partner=56869869 player=32851 video=960834 autoplay=true]

  • ಹೆಣ್ಣು ಮಗುವಿಗೆ ತಂದೆಯಾದ ಕ್ಷೌರಿಕ- ಫ್ರೀ ಕಟ್ಟಿಂಗ್

    ಹೆಣ್ಣು ಮಗುವಿಗೆ ತಂದೆಯಾದ ಕ್ಷೌರಿಕ- ಫ್ರೀ ಕಟ್ಟಿಂಗ್

    – ಮೂರು ಸಲೂನ್ ಗಳಲ್ಲಿ ಉಚಿತ ಸೇವೆ
    – ಕ್ಷೌರಿಕನ ಕೆಲಸಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ

    ಭೋಪಾಲ್ : ಹೆಣ್ಣು ಮಗುವಿನ ತಂದೆಯಾದ ಸಂಭ್ರಮವನ್ನು ವಿಶೇಷವಾಗಿ ಆಚರಿಸುವ ಮೂಲಕ ಕ್ಷೌರಿಕರೊಬ್ಬರು ಗಮನ ಸೆಳೆದಿದ್ದಾರೆ. ಹೆಣ್ಣು ಮಗು ಹುಟ್ಟಿದ ಕಾರಣಕ್ಕಾಗಿ ತನ್ನ ಕ್ಷೌರದ ಅಂಗಡಿಗೆ ಬರುವ ಗ್ರಾಹಕರಿಗೆ ಒಂದು ದಿನದ ಕಟ್ಟಿಂಗ್‍ನ್ನು ಉಚಿತವಾಗಿ ಮಾಡಿದ್ದಾರೆ.

    ಮಧ್ಯಪ್ರದೇಶದ ಗ್ವಾಲಿಯರ್‍ನಲ್ಲಿ 3 ಸಲೂನ್‍ಗಳನ್ನು ನಡೆಸುತ್ತಿರುವ ಸಲ್ಮಾನ್ ಎಂಬವರು ತಮಗೆ ಹೆಣ್ಣು ಮಗುವಾದ ಸಂಭ್ರಮಾಚರಣೆಯನ್ನು ಮಾಡಿ ಸಮಾಜಕ್ಕೆ ವಿಶೇಷವಾದ ಸಂದೇಶ ರವಾನಿಸಿದ್ದಾರೆ.

    ಸಲ್ಮಾನ್ ಅವರಿಗೆ ಡಿಸೆಂಬರ್ 26 ರಂದು ಹೆಣ್ಣು ಮಗು ಜನಿಸಿತ್ತು. ಈ ಸಂಭ್ರಮವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದ ಇವರು ತಮ್ಮ ಸಲೂನ್‍ಗಳಲ್ಲಿ ಉಚಿತವಾಗಿ 1 ದಿನದ ಸೇವೆ ಸಲ್ಲಿಸಿದ್ದಾರೆ. ಮೂರು ಸಲೂನ್‍ಗಳ ಮಾಲೀಕರಾಗಿರುವ ಸಲ್ಮಾನ್ ತಮ್ಮ ಎಲ್ಲ ಶಾಪ್ ಗಳಲ್ಲೂ ಉಚಿತವಾಗಿ ಗ್ರಾಹಕರಿಗೆ ಕಟ್ಟಿಂಗ್ ಮಾಡಿದ್ದಾರೆ.

    ಹೆಣ್ಣು ಮಕ್ಕಳು ಹುಟ್ಟಿದ ತಕ್ಷಣ ಕೆಲ ಜನರು ದುಃಖಿತರಾಗುತ್ತಾರೆ. ಇವರ ಮಧ್ಯೆ ನಾನು ಗಂಡು ಹೆಣ್ಣು ಎಂಬ ಲಿಂಗವನ್ನು ಲೆಕ್ಕಿಸದೆ ಮಗುವಿನ ಜನನದ ಬಗ್ಗೆ ಜನರು ಸಂತೋಷವಾಗಿರಬೇಕೆಂದು ತೋರಿಸುವ ಉದ್ದೇಶದಿಂದ ನಮ್ಮ ಮೂರು ಅಂಗಡಿಗಳಲ್ಲಿ ಈ ರೀತಿಯ ಸೇವೆಗೆ ನಿರ್ಧಾರ ಮಾಡಿರುವುದಾಗಿ ಸಲ್ಮಾನ್ ಸಂತೋಷ ಹಂಚಿಕೊಂಡರು.

    ಸಾಂದರ್ಭಿಕ ಚಿತ್ರ

    ಮಗಳ ಜನನವನ್ನು ಆಚರಿಸಲು ನಿರ್ಧಾರ ಮಾಡಿದ ಸಲ್ಮಾನ್ ತಮ್ಮ ಅಂಗಡಿಯ ಮುಂಭಾದಲ್ಲಿ ಪೋಸ್ಟರ್ ಒಂದನ್ನು ಹಾಕಿಕೊಂಡಿದ್ದರು. ನಮ್ಮ ಮನೆಯಲ್ಲಿ ಹೆಣ್ಣು ಮಗುವಿನ ಜನನವನ್ನು ಸ್ವಾಗತಿಸಲು ಜನವರಿ 4 ರಂದು ಗ್ರಾಹಕರಿಗೆ ಉಚಿತವಾಗಿ ಸೇವೆ ಲಭ್ಯವಿರುತ್ತದೆ ಎಂದು ಪೋಸ್ಟರ್ ನಲ್ಲಿ ನಮೂದಿಸಿದ್ದರು. ಅದರಂತೆ ಜನವರಿ 4 ರಂದು 70 ರಿಂದ 80 ಜನರಿಗೆ ಉಚಿತವಾಗಿ ಸೇವೆ ಸಲ್ಲಿಸಿದ್ದೇವೆ. ಇದರ ಮೌಲ್ಯ 3 ಸಾವಿರ ದಿಂದ 3 ಸಾವಿರದ ಐನೂರು ರೂಪಾಯಿ ಆಗಿದೆ ಎಂದರು.

    ನಾವೆಲ್ಲರೂ ಹೆಣ್ಣು ಮಗುವಿನ ಜನನವನ್ನು ಆಚರಿಸಬೇಕು. ಇದು ಸಮಾಜಕ್ಕೆ ಸಕಾರಾತ್ಮಕ ಸಂದೇಶವನ್ನು ನೀಡುತ್ತದೆ ಎಂದು ಗ್ರಾಹಕರೊಬ್ಬರು ಸಲ್ಮಾನ್ ಕಾರ್ಯಕ್ಕೆ ಬೆಂಬಲ ಸೂಚಿಸಿದರು.

    ಹೆಣ್ಣು ಮಗು ಜನಿಸಿದರೆ ಹೆಚ್ಚಾಗಿ ಇಷ್ಟಪಡದೆ ಇರುವ ಜನಗಳ ಮಧ್ಯೆ ಸಲ್ಮಾನ್ ಅವರು ಖುಷಿ ಪಟ್ಟು ಸಮಾಜಕ್ಕೆ ಹೆಣ್ಣು ಮಗುವಿನ ಜನನದ ಸಿಹಿ ಈ ರೀತಿ ಹಂಚಿರುವುದನ್ನು ಕಂಡು ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರ ಹರಿದುಬಂದಿದೆ.

  • ಮೋದಿ ಗೆದ್ದಿದ್ದಕ್ಕೆ ಗ್ರಾಹಕರಿಗೆ ಕಟಿಂಗ್, ಶೇವಿಂಗ್ ಉಚಿತ

    ಮೋದಿ ಗೆದ್ದಿದ್ದಕ್ಕೆ ಗ್ರಾಹಕರಿಗೆ ಕಟಿಂಗ್, ಶೇವಿಂಗ್ ಉಚಿತ

    ಬಾಗಲಕೋಟೆ: ಲೋಕಸಮರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷ ಪ್ರಚಂಡ ಗೆಲುವು ಸಾಧಿಸಿದ ಬೆನ್ನಲ್ಲೇ ಬಾಗಲಕೋಟೆಯ ಕ್ಷೌರಿಕರೊಬ್ಬರು ಉಚಿತವಾಗಿ ಗ್ರಾಹಕರಿಗೆ ಕಟಿಂಗ್, ಶೇವಿಂಗ್ ಮಾಡುವುದರ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ.

    ನಗರದ ಲಕ್ಕಿ ಹೇರ್ ಕಟಿಂಗ್ ಸೆಲೂನ್ ಮಾಲೀಕ ಸುನೀಲ್ ಶಹಪೂರ್ ಹಾಗೂ ಸಹೋದರರ ತಂಡ ಉಚಿತವಾಗಿ ಕಟಿಂಗ್, ಶೇವಿಂಗ್ ಮಾಡುವುದರ ಮೂಲಕ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಶಹಪೂರ್ ಬ್ರದರ್ಸ್, ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1.30ರ ವರೆಗೆ ಉಚಿತ ಕಟಿಂಗ್, ಶೇವಿಂಗ್ ಮಾಡುವುದಾಗಿ ತಮ್ಮ ಅಂಗಡಿಯ ಮುಂದೆ ಬ್ಯಾನರ್ ಕೂಡ ಹಾಕಿದ್ದಾರೆ.

    ಮೋದಿ ಹಾಗೂ ಬಿಜೆಪಿ ಪಕ್ಷ ದೇಶದಲ್ಲಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸುನೀಲ್ ಶಹಪೂರ್ ಈ ರೀತಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಶಹಪೂರ್ ಅವರ ಈ ಅಭಿಮಾನದ ಕಾರ್ಯ ಸಾರ್ವಜನಿಕರ ಗಮನಕ್ಕೆ ಬರುತ್ತಿದ್ದಂತೆ ಬೆಳಗ್ಗೆಯಿಂದಲೇ ಗ್ರಾಹಕರು ಉಚಿತ ಕ್ಷೌರ ಮಾಡಿಕೊಳ್ಳಲು ಮುಗಿ ಬಿದ್ದಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ 349 ಸ್ಥಾನ ಗಳಿಸಿದ್ದರೆ, ಯುಪಿಎ 82 ಹಾಗೂ ಇತರೇ 111 ಸ್ಥಾನವನ್ನು ಗೆದ್ದಿದೆ. ಹಾಗೆಯೇ ಕರ್ನಾಟಕದಲ್ಲಿ 28 ಕ್ಷೇತ್ರಗಳಲ್ಲಿ ಬಿಜೆಪಿ 25 ಕ್ಷೇತ್ರದಲ್ಲಿ ಭರ್ಜರಿ ಜಯ ಗಳಿಸಿದೆ. ಸದ್ಯ ರಾಜ್ಯದಲ್ಲಿ ಆಡಳಿತದಲ್ಲಿರುವ ಮೈತ್ರಿ ಸರ್ಕಾರದ ಅಭ್ಯರ್ಥಿಗಳು 2 ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಅದರಲ್ಲಿ ಕಾಂಗ್ರೆಸ್ 1 ಹಾಗೂ ಜೆಡಿಎಸ್ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.