Tag: Cuttack

  • IND vs ENG: ಕಟಕ್‌ನಲ್ಲಿ ಬೆಳಗದ ಫ್ಲಡ್ ಲೈಟ್ – ಸ್ಥಗಿತಗೊಂಡ ಪಂದ್ಯ!

    IND vs ENG: ಕಟಕ್‌ನಲ್ಲಿ ಬೆಳಗದ ಫ್ಲಡ್ ಲೈಟ್ – ಸ್ಥಗಿತಗೊಂಡ ಪಂದ್ಯ!

    ಟಕ್‌ನಲ್ಲಿ (Cuttack) ನಡೆಯುತ್ತಿರುವ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್‌ (IND vs ENG) ನಡುವಿನ ಪಂದ್ಯದ ವೇಳೆ ಫ್ಲಡ್ ಲೈಟ್​ಗಳ ಮಂದ ಬೆಳಕಿನಿಂದಾಗಿ ಅಂಪೈರ್​ಗಳು ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.

    ಸಮಸ್ಯೆ ಬಗೆಹರಿಯಬಹುದೆಂಬ ನಿರೀಕ್ಷೆಯಲ್ಲಿ ಉಭಯ ತಂಡಗಳ ಆಟಗಾರರು 10 ನಿಮಿಷ ಮೈದಾನದಲ್ಲೇ ಕಳೆದರು. ಆದರೆ ಫ್ಲಡ್ ಲೈಟ್​ಗಳು ಆನ್​ ಆಗದ ಕಾರಣ ಉಭಯ ತಂಡಗಳ ಆಟಗಾರರು ಮೈದಾನದಿಂದ ಹೊರನಡೆದಿದ್ದಾರೆ.

    ಭಾರತದ ಇನ್ನಿಂಗ್ಸ್​ನ 7ನೇ ಓವರ್​ ನಡೆಯುವ ವೇಳೆ ಇದಕ್ಕಿದ್ದಂತೆ ಒಂದು ಟವರ್​ನ ಎಲ್ಲಾ ಫ್ಲಡ್​ ಲೈಟ್​ಗಳು ಆಫ್ ಆದವು. ಹೀಗಾಗಿ ಸ್ವಲ್ಪ ಸಮಯ ಕಾಯ್ದ ಬಳಿಕ ಕ್ರೀಸ್​ನಲ್ಲಿದ್ದ ರೋಹಿತ್ ಶರ್ಮಾ ಅಸಮಾಧಾನಗೊಂಡು ಅಂಪೈರ್‌ಗಳೊಂದಿಗೆ ಚರ್ಚಿಸಿದ್ದಾರೆ.



    ಚರ್ಚೆಯ ಬಳಿಕ ಅಂಪೈರ್‌ಗಳು ಎಲ್ಲಾ ಆಟಗಾರರನ್ನು ಪೆವಿಲಿಯನ್‌ಗೆ ಹಿಂತಿರುಗುವಂತೆ ಸೂಚಿಸಿದರು. ಅಂತಿಮವಾಗಿ, ಸುಮಾರು 35 ನಿಮಿಷಗಳ ನಂತರ ಪಂದ್ಯವನ್ನು ಪುನರಾರಂಭಿಸಲಾಯಿತು.

  • ಹರ್ಷ ಬೋಗ್ಲೆಯನ್ನು ಟ್ರೋಲ್ ಮಾಡಿದ ಜಡೇಜಾ

    ಹರ್ಷ ಬೋಗ್ಲೆಯನ್ನು ಟ್ರೋಲ್ ಮಾಡಿದ ಜಡೇಜಾ

    ಕಟಕ್: ವೆಸ್ಟ್ ಇಂಡೀಸ್ ವಿರುದ್ಧ ಅಂತಿಮ ಏಕದಿನ ಪಂದ್ಯದಲ್ಲಿ ಆಲ್‍ರೌಂಡರ್ ರವೀಂದ್ರ ಜಡೇಜಾ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಇದೇ ವೇಳೆ ಪಂದ್ಯದ ಬಳಿಕ ನಡೆದ ಕಿರು ಸಂದರ್ಶನದ ವೇಳೆ ವಿವರಣೆಗಾರ ಹರ್ಷ ಭೋಗ್ಲೆ ಅವರನ್ನು ಟ್ರೋಲ್ ಮಾಡಿದ್ದಾರೆ ಎಂಬರ್ಥದ ಕಮೆಂಟ್‍ಗಳು ಸಾಮಾಜಿಕ ಜಾಲತಾಣದಲ್ಲಿ ಬರತೊಡಗಿದೆ.

    ಪಂದ್ಯದ ಬಳಿಕ ಶಾರ್ದೂಲ್ ಠಾಕೂರ್ ಮತ್ತು ಜಡೇಜಾ ಇಬ್ಬರನ್ನು ಹರ್ಷ ಭೋಗ್ಲೆ ಕಿರು ಸಂದರ್ಶನ ಮಾಡಿದ್ದರು. ಈ ವೇಳೆ ಶಾರ್ದೂಲ್ ಅವರಿಗೆ ಇಂಗ್ಲೀಷ್‍ನಲ್ಲಿ ಪ್ರಶ್ನೆ ಕೇಳಿದ್ದ ಭೋಗ್ಲೆ, ಜಡೇಜಾ ಅವರಲ್ಲಿ ಹಿಂದಿಯಲ್ಲಿ ಪ್ರಶ್ನಿಸಿದ್ದರು. ಇದನ್ನು ಓದಿ: ಜಡೇಜಾ ಬಳಿ ಕ್ಷಮೆ ಕೋರಿದ ಸಂಜಯ್ ಮಂಜ್ರೇಕರ್

    ಭೋಗ್ಲೆ ಅವರ ಪ್ರಶ್ನೆಗೆ ಹಿಂದಿಯಲ್ಲೇ ತಾಳ್ಮೆಯಿಂದ ಉತ್ತರಿಸಿದ್ದ ಜಡೇಜಾ, ಕೊಹ್ಲಿ ಔಟಾದ ಬಳಿಕ ತಮ್ಮ ಮನಸ್ಸಿನಲ್ಲಿ ಯಾವ ರೀತಿ ಬ್ಯಾಟ್ ಮಾಡಬೇಕೆಂದು ಯೋಚಿಸುತ್ತಿದ್ದಾಗಿ ವಿವರಿಸಿದರು. ಅಲ್ಲದೇ ಹಿಂದಿಯಲ್ಲಿ ಮಾತು ಆರಂಭಿಸಿದ್ದ ಜಡೇಜಾ, ಇಂಗ್ಲೀಷ್ ನಲ್ಲಿ ಅಂತ್ಯಗೊಳಿಸಿದ್ದರು. ಕೂಡಲೇ ಎಚ್ಚೆತ್ತ ಭೋಗ್ಲೆ ತಮ್ಮ 2ನೇ ಪ್ರಶ್ನೆಯನ್ನು ಇಂಗ್ಲೀಷ್‍ನಲ್ಲಿ ಕೇಳಿದರು. ಅಲ್ಲದೇ ಮೈದಾನದಲ್ಲಿರುವ ವೇಳೆ ಬಾಲ್, ರನ್ ಲೆಕ್ಕಾಚಾರ ನಡೆಸುತ್ತೀರಾ ಎಂದು ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ಜಡೇಜಾ, ದೊಡ್ಡ ಸ್ಕ್ರೀನ್ ಮೇಲೆ ಅವರು ರನ್, ಬಾಲ್ ಅಂತರದ ಬಗ್ಗೆ ತೋರಿಸುತ್ತಾರೆ. ಆದ್ದರಿಂದ ಈ ಲೆಕ್ಕಾಚಾರ ಮಾಡಲು ಸಹಾಯಕವಾಗುತ್ತದೆ ಎಂದು ಟ್ರೋಲ್ ಮಾಡಿದ್ದರು.

    ಈ ಕುರಿತು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿರುವ ಹರ್ಷ ಭೋಗ್ಲೆ, ಆಟಗಾರರು ಯಾವ ಭಾಷೆಯಲ್ಲಿ ಮಾತನಾಡಲು ಇಷ್ಟಪಡುತ್ತಾರೆ ಆದೇ ಭಾಷೆಯಲ್ಲಿ ನಾನು ಅವರೊಂದಿಗೆ ಮಾತನಾಡುತ್ತೇನೆ. ಜಡೇಜಾ ಅವರನ್ನು ಕಳೆದ 10 ವರ್ಷಗಳಿಂದ ತಿಳಿದಿರುವ ಕಾರಣ ಅವರದ್ದೇ ಭಾಷೆಯಲ್ಲಿ ನಾನು ಮಾತನಾಡಿದೆ. ಆದರೆ ಅವರು ಇಂಗ್ಲೀಷ್‍ನಲ್ಲಿ ಉತ್ತಮ ಎಂದು ಸೂಚಿಸಿದ ಕೂಡಲೇ ನಾನು ಕೂಡ ಇಂಗ್ಲೀಷ್ ನಲ್ಲೇ ಮಾತನಾಡಿದೆ ಎಂದು ತಿಳಿಸಿದ್ದಾರೆ.

    https://twitter.com/sn_sumanth/status/1209053609502986240

     

  • ಕೊನೆಯಲ್ಲಿ ಶಾರ್ದೂಲ್ ಸ್ಫೋಟಕ ಆಟ: ಭಾರತಕ್ಕೆ ಸರಣಿ, 22 ವರ್ಷದ ದಾಖಲೆ ಮುರಿದ ರೋಹಿತ್

    ಕೊನೆಯಲ್ಲಿ ಶಾರ್ದೂಲ್ ಸ್ಫೋಟಕ ಆಟ: ಭಾರತಕ್ಕೆ ಸರಣಿ, 22 ವರ್ಷದ ದಾಖಲೆ ಮುರಿದ ರೋಹಿತ್

    – ವಿಂಡೀಸ್ ವಿರುದ್ಧ ಸತತ 10ನೇ ಸರಣಿ‌ ಗೆದ್ದ ಭಾರತ
    – ಕೊಹ್ಲಿ ಪಂದ್ಯ ಶ್ರೇಷ್ಠ, ರೋಹಿತ್ ಸರಣಿ ಶ್ರೇಷ್ಠ

    ಕಟಕ್ : ವಿಂಡೀಸ್ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು 4 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಭಾರತ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಭಾರತ ವಿಂಡೀಸ್ ವಿರುದ್ಧ ಸತತ 10 ಏಕದಿನ ಸರಣಿ ಗೆದ್ದ ಸಾಧನೆ ಮಾಡಿದೆ.

    ಬಾರಾಬತಿ ಸ್ಟೇಡಿಯಂನಲ್ಲಿ ನಾಯಕ ವಿರಾಟ್ ಕೊಹ್ಲಿ ಔಟಾದಾಗ ಭಾರತ ಗೆಲ್ಲುತ್ತಾ ಎನ್ನುವ ಪ್ರಶ್ನೆ ಎದ್ದಿತ್ತು. ಆದರೆ ಕೊನೆಯ ಸ್ಲಾಗ್ ಓವರ್ ಗಳಲ್ಲಿ ಶಾರ್ದೂಲ್ ಠಾಕೂರ್  ಎರಡು ಬೌಂಡರಿ, ಒಂದು ಸಿಕ್ಸರ್ ಚಚ್ಚಿ ಪಂದ್ಯಕ್ಕೆ ತಿರುವುಕೊಟ್ಟರು. ಕೊನೆಯಲ್ಲಿ ಜಡೇಜಾ ಉತ್ತಮವಾಗಿ ಆಡಿದ್ದರಿಂದ ಭಾರತ ವಿಂಡೀಸ್ ನೀಡಿದ್ದ 316 ರನ್ ಗಳ ಗುರಿಯನ್ನು ಇನ್ನೂ 8 ಎಸೆತ ಇರುವಂತೆಯೇ ಜಯಗಳಿಸಿತು.

    46.1 ಓವರಿನಲ್ಲಿ ವಿರಾಟ್ ಕೊಹ್ಲಿ 85 ರನ್ (81ಎಸೆತ, 9 ಬೌಂಡರಿ,)ಗಳಿಸಿ ಆರನೇಯವರಾಗಿ ಔಟಾದಾಗ ಭಾರತದ ಸ್ಕೋರ್ 286 ಆಗಿತ್ತು. ಈ ವೇಳೆ ಕ್ರೀಸಿಗೆ ಆಗಮಿಸಿದ ಶಾರ್ದೂಲ್ ಠಾಕೂರ್ ಮೊದಲ ಎಸೆತವನ್ನೇ ಬೌಂಡರಿಗೆ ಅಟ್ಟಿ ನಂತರ 17 ರನ್( 6 ಎಸೆತ, 2 ಬೌಂಡರಿ, 1 ಸಿಕ್ಸರ್)ಹೊಡೆದರು. ಜಡೇಜಾ ಮತ್ತು ಶಾರ್ದೂಲ್ 7ನೇ ವಿಕೆಟಿಗೆ 15 ಎಸೆತಗಳಲ್ಲಿ 30 ರನ್ ಹೊಡೆಯುವ ಮೂಲಕ ಜಯವನ್ನು ತಂದಿಟ್ಟರು. ಜಡೇಜಾ ಔಟಾಗದೇ 39ರನ್(31 ಎಸೆತ, 4 ಬೌಂಡರಿ) ಹೊಡೆದರು.

    ಭಾರತ ತಂಡಕ್ಕೆ ಆರಂಭಿಕರಾದ ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ಉಪನಾಯಕ ರೋಹಿತ್ ಶರ್ಮಾ ಅವರು ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‍ಗೆ ಶತಕದ ಜೊತೆಯಾಟವಾಡಿದ ಈ ಜೋಡಿ ತಂಡಕ್ಕೆ 122 ರನ್‍ಗಳ ಕಾಣಿಕೆ ನೀಡಿತು. ತಲಾ ಅರ್ಧಶತಕ ಸಿಡಿಸಿ ಮಿಂಚಿದ ಈ ಜೋಡಿ 63 ರನ್ (63 ಎಸೆತ, 8 ಬೌಂಡರಿ, 1 ಸಿಕ್ಸರ್) ಸಿಡಿಸಿದ್ದ ರೋಹಿತ್ ಶರ್ಮಾ ಹೋಲ್ಡರ್ ಅವರಿಗೆ ವಿಕೆಟ್ ಒಪ್ಪಿಸಿದಾಗ ಬೇರ್ಪಟಿತು. ಉತ್ತಮವಾಗಿ ಬ್ಯಾಟ್ ಬೀಸಿದ ರಾಹುಲ್ 77 ರನ್ (89 ಎಸೆತ, 8 ಬೌಂಡರಿ, 1 ಸಿಕ್ಸರ್) ಸಿಡಿಸಿ ಅಲ್ಜಾರಿ ಜೋಸೆಫ್ ಅವರಿಗೆ ವಿಕೆಟ್ ಒಪ್ಪಿಸಿದರು.

    ಎಡವಿದ ಪಂತ್, ಕೊಹ್ಲಿ ಭರ್ಜರಿ ಬ್ಯಾಟಿಂಗ್:
    ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡ ಭಾರತಕ್ಕೆ ಅಸರೆಯಾದ ನಾಯಕ ವಿರಾಟ್ ಕೊಹ್ಲಿ 85 ರನ್ (81 ಎಸೆತ, 9 ಬೌಂಡರಿ) ಸಿಡಿಸಿ ಮಿಂಚಿದರು. ಆದರೆ ಇವರಿಗೆ ತಕ್ಕ ಸಾಥ್ ನೀಡುವಲ್ಲಿ ವಿಫಲರಾದ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳಾದ ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಮತ್ತು ಕೇದರ್ ಜಾಧವ್ ಅವರು, ಒಂದಕ್ಕಿಗೆ ಔಟ್ ಅಗುವ ಮೂಲಕ ಪೆವಿಲಿಯನ್ ಪರೆಡ್ ನಡೆಸಿದರು. ಮೊದಲ ಪಂದ್ಯದಲ್ಲಿ ಅರ್ಧಶತಕ ಹೊಡೆದು ಮಿಂಚಿದ್ದ ರಿಷಭ್ ಪಂತ್ ಕೇವಲ 7 ರನ್ ಸಿಡಿಸಿ ಕೀಮೋ ಪೌಲ್ ಅವರಿಗೆ ಬೌಲ್ಡ್ ಅದರು.

    ನಾಯಕ ಕೊಹ್ಲಿ ಅವರ ನಿರ್ಗಮನದ ನಂತರ ಜೊತೆಯಾದ ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ಭರ್ಜರಿಯಾಗಿ ಬ್ಯಾಟ್ ಬೀಸಿ ಭಾರತವನ್ನು ಗೆಲುವಿನ ದಡ ಸೇರಿಸಿತು. ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ ರೋಹಿತ್ ಶರ್ಮಾ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

    ಟಾಸ್ ಗೆದ್ದ ಭಾರತ ಮೊದಲಿಗೆ ವೆಸ್ಟ್ ಇಂಡೀಸ್ ತಂಡವನ್ನು ಬ್ಯಾಂಟಿಂಗ್ ಆಹ್ವಾನಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಗೆ ಎವಿನ್ ಲೆವಿಸ್ ಮತ್ತು ಶಾಯ್ ಹೋಪ್ ಅವರು ಉತ್ತಮ ಆರಂಭ ನೀಡಿದರು. ಮೊದಲ ಹತ್ತು ಓವರ್ ಯಾವುದೇ ವಿಕೆಟ್ ಕಳೆದುಕೊಳ್ಳದೇ ಆಟವಾಡಿದ ಆರಂಭಿಕ ಜೋಡಿ ಮೊದಲ ವಿಕೆಟ್‍ಗೆ 57 ರನ್‍ಗಳ ಜೊತೆಯಾಟವಾಡಿತು. ಇದರಲ್ಲಿ ಎವಿನ್ ಲೆವಿಸ್ ಅವರು 21 ರನ್ ಸಿಡಿಸಿ (50 ಎಸೆತ, 3 ಬೌಂಡರಿ) ಜಡೇಜಾ ವಿಕೆಟ್ ಒಪ್ಪಿಸಿದರೆ, 50 ಎಸೆತಗಳಲ್ಲಿ 42 ರನ್ (5, ಬೌಂಡರಿ) ಸಿಡಿಸಿ ಆಡುತ್ತಿದ್ದ ಶಾಯ್ ಹೋಪ್ ಅವರನ್ನು ಮೊಹಮ್ಮದ್ ಶಮಿ ಕ್ಲೀನ್ ಬೌಲ್ಡ್ ಮಾಡಿದರು.

    ಇದಾದ ನಂತರ ಜೊತೆಯಾದ ರೋಸ್ಟರ್ ಚೇಸ್ ಮತ್ತು ಶಿಮ್ರನ್ ಹೆಟ್ಮೇಯರ್ ಅವರು 62 ರನ್ ಗಳ ತಾಳ್ಮೆಯ ಜೊತೆಯಾಟವಾಡಿದರು. ಆದರೆ ಈ ಇಬ್ಬರು ಆಟಗಾರರನ್ನು ಕಟ್ಟಿ ಹಾಕಿದ ಭಾರತದ ಬೌಲರ್ ನವ್‍ದೀಪ್ ಸೈನಿ ಇಬ್ಬರಿಗೂ ಪೆವಿಲಿಯನ್ ದಾರಿ ತೋರಿಸಿದರು. ಈ ಜೋಡಿಯ ನಿರ್ಗಮನದ ಬಳಿಕ ಜೊತೆಯಾದ ನಾಯಕ ಕೀರನ್ ಪೊಲ್ಲಾರ್ಡ್ ಮತ್ತು ನಿಕೋಲಸ್ ಪೂರನ್ ಅವರು ಅಬ್ಬರದ ಬ್ಯಾಟಿಂಗ್ ಮಾಡಿ ವೆಸ್ಟ್ ಇಂಡೀಸ್ ತಂಡವನ್ನು 300 ರ ಗಡಿದಾಟಿಸಿದರು.

    ಇನ್ನಿಂಗ್ಸ್ ನ 40ನೇ ಓವರ್ ಮುಕ್ತಾಯಕ್ಕೆ ವೆಸ್ಟ್ ಇಂಡೀಸ್ 197 ರನ್ ಗಳಿಸಿತ್ತು. ಬಳಿಕ ಪೋಲಾರ್ಡ್ ಹಾಗೂ ನಿಕೊಲಸ್ ಪೂರನ್ ಭರ್ಜರಿ ಬ್ಯಾಟಿಂಗ್‍ನಿಂದ ತಂಡದ ಮೊತ್ತ ಏರಿಕೆ ಕಂಡಿತು. ಈ ಜೋಡಿಯು 5ನೇ ವಿಕೆಟ್‍ಗೆ 135 ಗಳಿಸಿತು. 89 ರನ್ (64 ಎಸೆತ, 10 ಬೌಂಡರಿ, 3 ಸಿಕ್ಸರ್) ಗಳಿಸಿದ್ದ ಪೂರನ್ ಇನ್ನಿಂಗ್ಸ್ ನ 47ನೇ ಓವರ್ ನಲ್ಲಿ ಶಾರ್ದೂಲ್ ಠಾಕೂರ್ ಅವರಿಗೆ ವಿಕೆಟ್ ಒಪ್ಪಿಸಿದರು. ಆದರೆ ಕ್ರಿಸ್ ನಲ್ಲಿದ್ದ ಪೋಲಾರ್ಡ್ ತಮ್ಮ ಅಬ್ಬರದ ಬ್ಯಾಟಿಂಗ್ ಮಾಡಿದರು. ವೆಸ್ಟ್ ಇಂಡೀಸ್ ತಂಡ ಇನ್ನಿಂಗ್ಸ್ ನ ಕೊನೆಯ ಐದು ಓವರ್ ಗಳಲ್ಲಿ 8 ಬೌಂಡರಿ, 5 ಸಿಕ್ಸರ್ ಸಿಡಿಸಿತು. ಈ ಮೂಲಕ 5 ವಿಕೆಟ್ ನಷ್ಟಕ್ಕೆ 315 ರನ್ ಸಿಡಿಸಿತ್ತು.

    22 ವರ್ಷದ ದಾಖಲೆ ಉಡೀಸ್
    ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು, ಮೊದಲ 9 ರನ್ ಸಿಡಿಸಿ 22 ವರ್ಷದ ಹಳೆಯ ದಾಖಲೆಯನ್ನು ಉಡೀಸ್ ಮಾಡಿದರು. ಒಂದು ವರ್ಷದಲ್ಲಿ ಆರಂಭಿಕನಾಗಿ ಅತೀ ಹೆಚ್ಚು ರನ್ ಸಿಡಿಸಿದ್ದ ಶ್ರೀಲಂಕಾದ ಲೆಜೆಂಡ್ ಸನತ್ ಜಯಸೂರ್ಯ ಅವರ ದಾಖಲೆಯನ್ನು ಮುರಿದು ಹಾಕಿದ್ದಾರೆ. 1997 ರಲ್ಲಿ ಉತ್ತಮವಾಗಿ ಆಟವಾಡಿದ್ದ ಜಯಸೂರ್ಯ ಅವರು 2387 ರನ್ ಸಿಡಿಸಿದ್ದರು. ಅವರ ಈ ದಾಖಲೆಯನ್ನು ಮುರಿದಿರುವ ರೋಹಿತ್ ಶರ್ಮಾ ಅವರು 2019 ರಲ್ಲಿ ಆರಂಭಿಕನಾಗಿ 2434 ಸಿಡಿಸಿದ್ದಾರೆ. ಇವರನ್ನು ಬಿಟ್ಟರೆ ಮೂರನೇ ಸ್ಥಾನದಲ್ಲಿ 2008 ರಲ್ಲಿ 2355 ಸಿಡಿಸಿದ್ದ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಇದ್ದಾರೆ.

  • ಕಟಕ್‍ನಲ್ಲಿ ಮೂರು ದಾಖಲೆ ನಿರ್ಮಿಸಿದ ಧೋನಿ

    ಕಟಕ್‍ನಲ್ಲಿ ಮೂರು ದಾಖಲೆ ನಿರ್ಮಿಸಿದ ಧೋನಿ

    ಕಟಕ್: ಭಾರತ ಲಂಕಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಧೋನಿ 39 ರನ್ ಗಳಿಸುವುದರ ಜೊತೆಗೆ ಮೂರು ದಾಖಲೆಯನ್ನು ನಿರ್ಮಿಸಿದ್ದಾರೆ.

    ಹೌದು, ಪಂದ್ಯದ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ನೀಡಿದ ಧೋನಿ, 22 ಎಸೆತಗಳಲ್ಲಿ 4 ಬೌಂಡರಿ, ಒಂದು ಸಿಕ್ಸರ್ ನೆರವಿನೊಂದಿಗೆ 177.27 ರ ಸರಾಸರಿಯಲ್ಲಿ ಔಟಾಗದೇ 39 ರನ್ ಗಳಿಸಿದರು. ಅಲ್ಲದೇ ಕೀಪಿಂಗ್ ನಲ್ಲಿ 4 ಬಲಿ ಪಡೆದರು. ಈ ಮೂಲಕ ಭಾರತದ ಪರ ಟಿ20 ಮಾದರಿಯ ಪಂದ್ಯವೊಂದರಲ್ಲಿ 39 ರನ್ ಹೊಡೆದು 4 ಮಂದಿಯನ್ನು ಔಟ್ ಮಾಡಿದ ಟೀಂ ಇಂಡಿಯಾದ ಮೊದಲ ಕೀಪರ್ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ (2 ಬಾರಿ) ಮತ್ತು ಪಾಕಿಸ್ತಾನದ ಕಮ್ರಾನ್ ಅಕ್ಮಲ್ ಈ ಸಾಧನೆ ನಿರ್ಮಿಸಿದ್ದರು.

    ಟಿ20 ಮಾದರಿಯಲ್ಲಿ ಶ್ರೀಲಂಕಾ ವಿರುದ್ಧ ನಾಲ್ಕು ಬಲಿ ಪಡೆಯುವ ಮೂಲಕ ತಮ್ಮ ವೃತ್ತಿ ಜೀವನದ ಎಲ್ಲಾ ಮಾದರಿಯ 272 ಟಿ 20 ಪಂದ್ಯಗಳಿಂದ ಒಟ್ಟು 201 ಮಂದಿಯನ್ನು ಔಟ್ ಮಾಡುವ ಮೂಲಕ ಅತಿ ಹೆಚ್ಚು ಬಲಿ ಪಡೆದ ವಿಶ್ವದ ಎರಡನೇ ವಿಕೆಟ್ ಕೀಪರ್ ಎನಿಸಿಕೊಂಡರು. ಮೊದಲ ಸ್ಥಾನದಲ್ಲಿ ಪಾಕ್ ನ ಕಮ್ರಾನ್ ಆಕ್ಮಲ್ ಇದ್ದು, 211 ಪಂದ್ಯಗಳಿಂದ 207 ವಿಕೆಟ್ ಪಡೆದಿದ್ದಾರೆ.

    ಈ ಪಂದ್ಯದಲ್ಲಿ ನಾಲ್ಕು ಮಂದಿಯನ್ನು ಔಟ್ ಮಾಡುವ ಮೂಲಕ ಲಂಕಾ ವಿರುದ್ಧದ ಟಿ 20 ಯಲ್ಲಿ ನಾಲ್ಕು ಮಂದಿಯನ್ನು ಬಲಿ ಪಡೆದ ಭಾರತದ ಮೊದಲ ವಿಕೆಟ್ ಕೀಪರ್ ಎನ್ನುವ ಮತ್ತೊಂದು ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ.

    ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಧೋನಿ ಅವರಿಗೆ ಮುಂಬಡ್ತಿ ನೀಡಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಂಟಿಂಗ್ ನಡೆಸುವ ಅವಕಾಶ ನೀಡಿದ್ದರು.

    ನಾಲ್ಕನೇ ಕ್ರಮಾಂಕದಲ್ಲಿ ಹನ್ನೊಂದು ಇನ್ನಿಂಗ್ಸ್ ಆಡಿರುವ ಧೋನಿ 244 ರನ್ ಗಳಿಸಿ 7 ಬಾರಿ ನಾಟೌಟ್ ಆಗಿ ಉಳಿದಿದ್ದಾರೆ. 2017 ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ 134.1 ಸರಾಸರಿಯಲ್ಲಿ 56 ರನ್ ಸಿಡಿಸಿ ಅರ್ಧ ಶತಕ ಗಳಿಸಿದ್ದರು.

    <

  • ಶ್ರೀಲಂಕಾದ 100ನೇ ಟಿ20 ಪಂದ್ಯದಲ್ಲಿ ಬಂದಿದ್ದು ಕೇವಲ 4 ಬೌಂಡರಿ, 2 ಸಿಕ್ಸ್ ಮಾತ್ರ!

    ಶ್ರೀಲಂಕಾದ 100ನೇ ಟಿ20 ಪಂದ್ಯದಲ್ಲಿ ಬಂದಿದ್ದು ಕೇವಲ 4 ಬೌಂಡರಿ, 2 ಸಿಕ್ಸ್ ಮಾತ್ರ!

    ಕಟಕ್: ಟೀಂ ಇಂಡಿಯಾ – ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯದ ಭಾರತದ ಇನ್ನಿಂಗ್ಸ್ ಹೊಡಿ ಬಡಿ ಆಟಕ್ಕೆ ಸಾಕ್ಷಿಯಾದರೆ ಶ್ರೀಲಂಕಾದ ಇನ್ನಿಂಗ್ಸ್ ಎಲ್ಲೂ ಇದು ಟಿ20 ಪಂದ್ಯವೆಂದು ಅನ್ನಿಸಲೇ ಇಲ್ಲ. ಈ ಪಂದ್ಯ ಶ್ರೀಲಂಕಾದ 100ನೇ ಪಂದ್ಯವಾಗಿತ್ತು. ಆದರೆ ಇದರ ಸವಿ ಶ್ರೀಲಂಕನ್ನರಿಗೆ ಸಿಗಲೇ ಇಲ್ಲ. ಕಾರಣ 100ನೇ ಪಂದ್ಯದಲ್ಲಿ ಶ್ರೀಲಂಕಾ 93 ರನ್ ಗಳಿಂದ ಸೋಲನ್ನಪ್ಪಿದೆ.

    ಶ್ರೀಲಂಕಾ ಆಟಗಾರರು ಬ್ಯಾಟ್ ಮಾಡಿದ 16 ಓವರಲ್ಲಿ ಕೇವಲ 4 ಬೌಂಡರಿ ಹಾಗೂ 2 ಸಿಕ್ಸರ್ ಮಾತ್ರ ಬಂತು. ಇಂದಿನ ಪಂದ್ಯದಲ್ಲಿ ಭಾರತದ ಪರವಾಗಿ ಸ್ಪಿನ್ನರ್ ಯಜುವೇಂದ್ರ ಚಾಹಲ್ ಒಟ್ಟು 4 ವಿಕೆಟ್ ಪಡೆದು ಪಂದ್ಯಕ್ಕೆ ಮಹತ್ವದ ತಿರುವು ತಂದುಕೊಟ್ಟರು. ಅಲ್ಲದೇ ಚಾಹಲ್ 2017ರಲ್ಲಿ 19 ವಿಕೆಟ್ ಪಡೆದು, ಈ ವರ್ಷ ಗರಿಷ್ಠ ವಿಕೆಟ್ ಪಡೆದ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.

    ರೋಹಿತ್ ದಾಖಲೆ!: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಂಜೆಲೋ ಮ್ಯಾಥ್ಯೂಸ್ ಬೌಲಿಂಗಲ್ಲಿ 10ನೇ ಬಾರಿಗೆ ಔಟಾದರು. 2010ರ ಬಳಿಕ ಭಾರತದ ಯಾವುದೇ ಆಟಗಾರ ಒಬ್ಬನೇ ಬೌಲರ್ ಗೆ 10 ಬಾರಿ ಔಟಾದ ದಾಖಲೆಗಳಿರಲಿಲ್ಲ.

    ಧೋನಿ ಸ್ಪೆಷಲ್: ಯಾರು ಏನೇ ಹೇಳಿದರೂ ನನ್ನ ನೆಮ್ಮದಿಗೆ ಭಂಗವಿಲ್ಲ ಎಂಬಂತೆ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈ ಪಂದ್ಯದಲ್ಲೂ ತನ್ನ ಮ್ಯಾಜಿಕ್ ಮುಂದುವರೆಸಿದರು. ಬ್ಯಾಟಿಂಗಲ್ಲಿ 22 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 39 ರನ್ ಗಳಿಸಿದರೆ, ಕೀಪಿಂಗಲ್ಲಿ ಶ್ರೀಲಂಕಾದ ನಾಲ್ವರು ಆಟಗಾರರು ಔಟಾಗುವಲ್ಲಿ ಪ್ರಧಾನ ಪಾತ್ರ ವಹಿಸಿದರು. ಇಬ್ಬರು ಆಟಗಾರರನ್ನು ಸ್ಟಂಪಿಂಗ್ ಮಾಡಿದರೆ, ಇನ್ನಿಬ್ಬರು ಆಟಗಾರರು ಧೋನಿಗೆ ಕ್ಯಾಚಿತ್ತು ಪೆವಿಲಿಯನ್ ನತ್ತ ಮುಖ ಮಾಡಿದರು.