Tag: CSK

  • 2019ರ ಐಪಿಎಲ್ ಬಳಿಕ ಧೋನಿ ನಿವೃತ್ತಿ? ಕುತೂಹಲ ಮೂಡಿಸಿದ ರೈನಾ ಹೇಳಿಕೆ

    2019ರ ಐಪಿಎಲ್ ಬಳಿಕ ಧೋನಿ ನಿವೃತ್ತಿ? ಕುತೂಹಲ ಮೂಡಿಸಿದ ರೈನಾ ಹೇಳಿಕೆ

    ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಂಗಾಮಿ ನಾಯಕ ಸುರೇಶ್ ರೈನಾ ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕೊಡುಗೆ ನೀಡಿದ್ದರು. ಪಂದ್ಯದ ಬಳಿಕ ಮಾತನಾಡಿದ ರೈನಾ, ತಂಡದ ನಾಯಕತ್ವದ ಕುರಿತ ಪ್ರಶ್ನೆಗೆ ನೀಡಿದ ಉತ್ತರ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

    ಧೋನಿ ನಾಯಕತ್ವದ ಸಿಎಸ್‍ಕೆ ತಂಡ ಐಪಿಎಲ್ ಟೂರ್ನಿಗಳಲ್ಲಿ ಭರ್ಜರಿ ಪ್ರದರ್ಶನವನ್ನೇ ತೋರಿದೆ. ಆದರೆ ಧೋನಿ ಅವರ ಅನುಪಸ್ಥಿತಿಯಲ್ಲಿ ತಂಡ ಸೋಲುಂಡು ನಿರಾಸೆ ಮೂಡಿಸುತ್ತಿದೆ. ಈ ಬಾರಿ ಟೂರ್ನಿಯಲ್ಲಿ ಧೋನಿ ಅನುಪಸ್ಥಿತಿಯಲ್ಲಿ ತಂಡವನ್ನು ಸುರೇಶ್ ರೈನಾ ಮುನ್ನಡೆಸಿದ್ದರು. ಈ ಕುರಿತು ರೈನಾ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು.

    ಧೋನಿ ತಂಡಕ್ಕೆ ಕೇವಲ ನಾಯಕರಾಗಿ ಮಾತ್ರವಲ್ಲದೇ ಒಬ್ಬ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಾರೆ. ಅವರ ನಾಯಕತ್ವದ ಅನುಪಸ್ಥಿತಿಗಿಂತ ಬ್ಯಾಟ್ಸ್ ಆಗಿ ತಂಡಕ್ಕೆ ಗೈರಾಗುವುದು ಹೆಚ್ಚಿನ ಪ್ರಭಾವ ಉಂಟುಮಾಡುತ್ತದೆ ಎಂದರು. ಇದೇ ವೇಳೆ ಮುಂದಿನ ಅವಧಿಗಳಲ್ಲಿ ತಮಗೆ ತಂಡ ನಾಯಕತ್ವ ವಹಿಸುವ ಬಗ್ಗೆಯೂ ಸುಳಿವು ನೀಡಿದರು. ಹಲವು ವರ್ಷಗಳಿಂದ ತಂಡದ ನಾಯಕತ್ವವನ್ನು ಧೋನಿ ಉತ್ತಮವಾಗಿ ನಿರ್ವಹಿಸಿದ್ದಾರೆ. ಮುಂದಿನ ಅವಧಿಯಲ್ಲಿ ನೀವು ನನ್ನನ್ನು ಹೆಚ್ಚಾಗಿ ನೋಡುತ್ತೀರಿ. ಮತ್ತಷ್ಟು ಪರಿಪಕ್ವತೆ ಗಳಿಸುವ ಅಗತ್ಯ ನನಗಿದೆ. ಆದರೆ ಧೋನಿ ತಮಗೆ ಇಷ್ಟವಿರುಷ್ಟು ದಿನ ಐಪಿಎಲ್ ನಲ್ಲಿ ಮುಂದುವರಿಯಲಿದ್ದಾರೆ ಎಂದರು.

    ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಯಶಸ್ವಿ ತಂಡವಾಗಿ ಮುನ್ನುಗುತ್ತಿರುವ ಚೆನ್ನೈ ನಾಯಕತ್ವ ಕುರಿತು ರೈನಾ ಅವರ ಹೇಳಿಕೆ ಕುತೂಹಲ ಮೂಡಿಸಿದ್ದು, 36 ವರ್ಷದ ಧೋನಿ 2019 ಆವೃತ್ತಿ ಬಳಿಕ ನಿವೃತ್ತಿ ಘೋಷಣೆ ಮಾಡಲಿದ್ದರಾ ಎಂಬ ಅನುಮಾನಕ್ಕೆ ಕಾರಣವಾಗಿದೆ. ಐಪಿಎಲ್ ಬಳಿಕ ಆರಂಭವಾಗುವ ವಿಶ್ವಕಪ್ ಕ್ರಿಕೆಟ್ ಟೂರ್ನಿ ಬಳಿಕ ಧೋನಿ ನಿವೃತ್ತಿ ಹೇಳುತ್ತಾರೆ ಎಂಬ ಮಾತು ಕೇಳಿಬಂದಿದೆ.

  • ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳಿಗೆ ಧೋನಿಯಿಂದ ವಿಶೇಷ ಗಿಫ್ಟ್!

    ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳಿಗೆ ಧೋನಿಯಿಂದ ವಿಶೇಷ ಗಿಫ್ಟ್!

    ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅವರ ಮೇಲೆ ಅಭಿಮಾನಿಗಳು ವಿಶೇಷ ಅಭಿಮಾನ ಹೊಂದಿದ್ದಾರೆ ಎಂಬುವುದು ಎಲ್ಲರಿಗೂ ತಿಳಿದ ಸಂಗತಿ. ಧೋನಿ ಕೂಡ ತಮ್ಮ ಅಭಿಮಾನಿಗಳಿಗೆ ಅಷ್ಟೇ ಗೌರವವನ್ನು ನೀಡುತ್ತಾರೆ. ಈ ಮಾತಿಗೆ ಪೂರಕ ಎಂಬಂತೆ ಡೆಲ್ಲಿ ಪಂದ್ಯದ ಬಳಿಕ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಧೋನಿ ವಿಶೇಷ ಗಿಫ್ಟ್ ನೀಡಿದ್ದಾರೆ.

    ಟೆನ್ನಿಸ್ ಬಾಲ್ ಗಳನ್ನು ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳತ್ತ ಬೀಸುವ ಮೂಲಕ ಧೋನಿ ಅಷ್ಟು ಅಭಿಮಾನಿಗಳ ಮನಗೆಲ್ಲುವ ಪ್ರಯತ್ನ ನಡೆಸಿದ್ದಾರೆ. ಸಿಎಸ್‍ಕೆ ತಂಡ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದೆ.

    ಪಂದ್ಯದ ವೇಳೆ ಧೋನಿ ಮೈದಾನ ಪ್ರವೇಶ ಮಾಡುತ್ತಿದಂತೆ ನೆರೆದಿದ್ದ ಅಭಿಮಾನಿಗಳ ಅವರ ಘೋಷಣೆ ಕೂಗಿ ಸ್ವಾಗತ ಕೋರಿದ್ದು ವಿಶೇಷವಾಗಿತ್ತು. ಸ್ಟೇಡಿಯಂ ಮೇಲೆ ಕುಳಿತ್ತಿದ್ದ ಅಭಿಮಾನಿಗಳಿಗೂ ಟೆನ್ನಿಸ್ ರಾಕೆಟ್ ನಿಂದ ಚೆಂಡನ್ನು ಹೊಡೆದಿದ್ದರು. ಈ ವಿಡಿಯೋವನ್ನು ಸುಮಾರು 17 ಸಾವಿರ ಮಂದಿ ಲೈಕ್ ಮಾಡಿದ್ದಾರೆ.

    ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಗೆಲ್ಲುವ ಮೂಲಕ ಸಿಎಸ್‍ಕೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಆಡಿರುವ 13 ಪಂದ್ಯಗಳಲ್ಲಿ ಸಿಎಸ್‍ಕೆ 9ರಲ್ಲಿ ಜಯ ಪಡೆದು 18 ಅಂಕಗಳಿಸಿದೆ. 8 ಪಂದ್ಯಗಳಲ್ಲಿ ಗೆಲುವು ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್ 16 ಅಂಕ ಗಳಿಸಿ ಎರಡನೇ ಸ್ಥಾನದಲ್ಲಿದೆ.

  • ಗಾಯದ ಸಮಸ್ಯೆ ಬಗ್ಗೆ ಧೋನಿ ಪ್ರತಿಕ್ರಿಯೆ

    ಗಾಯದ ಸಮಸ್ಯೆ ಬಗ್ಗೆ ಧೋನಿ ಪ್ರತಿಕ್ರಿಯೆ

    ಚೆನ್ನೈ: ಹಲವು ಸಮಯದಿಂದ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿರುವ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿಶ್ವಕಪ್‍ಗೆ ಹೆಚ್ಚಿನ ಜಾಗೃತಿ ವಹಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

    ತಾವು ಫಿಟ್ ಆಗಿದ್ದರೂ ಕೂಡ ಸಮಸ್ಯೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಿದೆ. ವಿಶ್ವಕಪ್‍ಗೆ ಕೆಲ ದಿನಗಳಷ್ಟೇ ಬಾಕಿ ಇರುವುದರಿಂದ ಈ ತಯಾರಿ ಬಹುಮುಖ್ಯ. ಒಂದೊಮ್ಮೆ ಸಮಸ್ಯೆ ಉಂಟಾದರೆ ಖಂಡಿತವಾಗಿಯೂ ಕೂಡ ವಿರಾಮ ತೆಗೆದುಕೊಳ್ಳುತ್ತೇನೆ ಎಂದು ಹೈದರಾಬಾದ್ ಪಂದ್ಯದ ಬಳಿಕ ಮಾತನಾಡಿದ ಧೋನಿ ಹೇಳಿದ್ದಾರೆ.

    ಇತ್ತೀಚೆಗೆ ಧೋನಿ ಚೆನ್ನೈ ತಂಡದ ಪರ ಒಂದು ಪಂದ್ಯದಲ್ಲಿ ಅಲಭ್ಯರಾಗಿದ್ದರು. 2010ರ ಬಳಿಕ ಚೆನ್ನೈ ತಂಡದ ಪರ ಧೋನಿ ಮೊದಲ ಬಾರಿಗೆ ಪಂದ್ಯದಲ್ಲಿ ಭಾಗವಹಿಸಿರಲಿಲ್ಲ ಎಂಬುವುದು ಇಲ್ಲಿ ಗಮನಾರ್ಹವಾಗಿತ್ತು. ಹೈದರಾಬಾದ್ ವಿರುದ್ಧ ಆಡಿದ್ದ ಈ ಪಂದ್ಯದಲ್ಲಿ ತಂಡವನ್ನು ರೈನಾ ಮುನ್ನಡೆಸಿದ್ದರು. ಆದರೆ ಪಂದ್ಯದಲ್ಲಿ ಸಿಎಸ್‍ಕೆ 6 ವಿಕೆಟ್‍ಗಳ ಅಂತರದಿಂದ ಸೋಲುಂಡಿತ್ತು.

    ಗಾಯದ ಸಮಸ್ಯೆಯಿಂದಲೇ ಧೋನಿ ಮುನ್ನೆಚ್ಚರಿಕೆ ವಹಿಸಿ ಪಂದ್ಯದಿಂದ ದೂರ ಉಳಿದಿದ್ದರು. ಈ ವೇಳೆ ಅಭಿಮಾನಿಗಳಲ್ಲಿ ಧೋನಿ ಅವರ ಬಗ್ಗೆ ಸಾಕಷ್ಟು ಆತಂಕ ಎದುರಾಗಿತ್ತು. ವಿಶ್ವಕಪ್ ಸಂದರ್ಭದಲ್ಲಿ ಧೋನಿ ಗಾಯದ ಸಮಸ್ಯೆಗೆ ಸಿಲುಕಿದರೆ ತಂಡಕ್ಕೆ ನಷ್ಟವಾಗುತ್ತದೆ ಎಂಬುವುದು ಹಲವು ಅಭಿಮಾನಿಗಳ ಅಭಿಪ್ರಾಯವಾಗಿದೆ. ಅದ್ದರಿಂದಲೇ ಮತ್ತೆ ಸಮಸ್ಯೆ ಉಲ್ಬಣಿಸಬಹುದು ಎಂಬ ಚರ್ಚೆ ಹೆಚ್ಚು ಕೇಳಿ ಬಂದಿತ್ತು.

  • ಒಂಟಿ ರನ್ ಕದಿಯಲು ನಿರಾಕರಿಸಿದ್ದು ಏಕೆ – ಧೋನಿ ಸ್ಪಷ್ಟನೆ

    ಒಂಟಿ ರನ್ ಕದಿಯಲು ನಿರಾಕರಿಸಿದ್ದು ಏಕೆ – ಧೋನಿ ಸ್ಪಷ್ಟನೆ

    ಬೆಂಗಳೂರು: ಆರ್ ಸಿಬಿ ವಿರುದ್ಧ ಪಂದ್ಯದಲ್ಲಿ ಧೋನಿ ಮತ್ತೊಮ್ಮೆ ನಾಯಕತ್ವದ ಹಿಂದಿನ ಭಿನ್ನ ಲೆಕ್ಕಾಚಾರಗಳನ್ನು ತೆರೆದಿಟ್ಟಿದ್ದು, ಬ್ಯಾಟಿಂಗ್ ವೇಳೆ ಒಂಟಿ ರನ್ ಕದಿಯಲು ನಿರಾಕರಿಸಿದ್ದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ಏಕಾಂಗಿಯಾಗಿ ಪಂದ್ಯದ ಜವಾಬ್ದಾರಿಯನ್ನ ವಹಿಸಿಕೊಂಡ ಧೋನಿ ಕ್ಯಾಪ್ಟನ್ ಆಗಿ ಅಭಿಮಾನಿಗಳ ಮನಗೆದ್ದಿದ್ದಾರೆ. ಗೆಲ್ಲಲು ಕಷ್ಟಸಾಧ್ಯ ಎಂಬ ಸಂದರ್ಭದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳದ ಧೋನಿ ಆ ಸಂದರ್ಭದಲ್ಲಿ ತಮ್ಮ ಚಿಂತನೆ ಏನಿತ್ತು ಎಂಬುವುದನ್ನು ತಿಳಿಸಿದ್ದಾರೆ.

    ಪಂದ್ಯದ ಬಳಿಕ ಮಾತನಾಡಿದ ಧೋನಿ, ಪಂದ್ಯದಲ್ಲಿ ಅತಿ ಹೆಚ್ಚು ರನ್ ಬೇಕಾಗಿರುವುದರಿಂದ ಸ್ಟ್ರೈಕ್ ನಾನೇ ಎದುರಿಸಲು ನಿರ್ಧರಿಸಿದ್ದೆ. ಏಕೆಂದರೆ ಇಂತಹ ಸಂದರ್ಭದಲ್ಲಿ ಹೊಸ ಬ್ಯಾಟ್ಸ್ ಮನ್‍ಗೆ ಕ್ರಿಸ್‍ಗೆ ಹೊಂದಿಕೊಳ್ಳುವುದು ಕಷ್ಟಸಾಧ್ಯವಾಗುತ್ತದೆ. ಆ ವೇಳೆಗೆ ಕೆಲ ಎಸೆತಗಳು ವ್ಯರ್ಥವಾಗುವ ಸಂಭವ ಹೆಚ್ಚು. ಆದ್ದರಿಂದ ಈ ಜವಾಬ್ದಾರಿಯನ್ನು ನಾನು ತೆಗೆದುಕೊಂಡೆ. ಅಂತಿಮವಾಗಿ ಕೆಲವೇ ರನ್ ಗಳ ಅಂತರದಿಂದ ಸೋಲುಂಡ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡುವುದು ಹೆಚ್ಚು. ಆದರೆ ಒಮ್ಮೆ ಬ್ಯಾಟ್ಸ್ ಮನ್ ಆಡುತ್ತಿದ್ದರೆ ಆತ ತಂಡದ ಗೆಲುವಿಗಾಗಿ ಮಾತ್ರ ಚಿಂತಿಸುತ್ತಾನೆ ಎಂದಿದ್ದಾರೆ.

    ಧೋನಿ ಅವರ ಈ ನಿರ್ಧಾರವನ್ನು ಸಿಎಸ್‍ಕೆ ಕೋಚ್ ಸ್ಟಿಫನ್ ಫ್ಲೆಮಿಂಗ್ ಕೂಡ ಪ್ರಶ್ನೆ ಮಾಡುವುದಿಲ್ಲ ಎಂದು ತಿಳಿಸಿದ್ದು, ಧೋನಿ ಹೆಚ್ಚು ಬೌಂಡರಿ, ಸಿಕ್ಸರ್ ಸಿಡಿಸಲು ಚಿಂತಿಸಿದ್ದರು. ಇದಕ್ಕೆ ಅವರದ್ದೇ ಆದ ಕೆಲ ಚಿಂತನೆಗಳು ಇರುತ್ತವೆ. ಅವರು ತುಂಬಾ ಚಿಂತನೆ ನಡೆಸಿಯೇ ಆಡುತ್ತಾರೆ. ಯಾವುದೇ ಕಾರಣಕ್ಕೂ ಇದನ್ನ ಪ್ರಶ್ನೆ ಮಾಡಲ್ಲ ಎಂದಿದ್ದಾರೆ.

    ಪ್ರಶ್ನೆ ಎದ್ದಿದ್ದು ಯಾಕೆ?
    ಆರ್‍ಸಿಬಿ 1 ರನ್ ಅಂತರದಲ್ಲಿ ಪಂದ್ಯವನ್ನು ಗೆದ್ದಿದ್ದರೂ ಕೊನೆಯ ಸ್ಲಾಗ್ ಓವರ್ ನಲ್ಲಿ ಮೂರು ಒಂಟಿ ರನ್ ಗಳನ್ನು ಪಡೆಯಲು ಧೋನಿ ಮುಂದಾಗಿರಲಿಲ್ಲ. ಒಂದು ವೇಳೆ ಧೋನಿ ರನ್ ಗಳಿಸಿದ್ದರ ಪಂದ್ಯವನ್ನು ಚೆನ್ನೈ ಗೆದ್ದುಕೊಳ್ಳುವ ಸಾಧ್ಯತೆ ಇತ್ತು ಎನ್ನುವುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ.

    ಕೊನೆಯ ಓವರ್ ಹೀಗಿತ್ತು:
    ಕೊನೆಯ 6 ಎಸೆತದಲ್ಲಿ ಚೆನ್ನೈ ತಂಡ 26 ರನ್ ಗಳಿಸಬೇಕಿತ್ತು. ಉಮೇಶ್ ಯಾದವ್ ಎಸೆದ ಮೊದಲ ಎಸೆತವನ್ನು ಧೋನಿ ಬೌಂಡರಿಗೆ ಅಟ್ಟಿದರೆ ನಂತರದ ಎರಡು ಎಸೆತಗಳನ್ನು ಸಿಕ್ಸರ್‍ಗೆ ಅಟ್ಟಿದರು. ನಾಲ್ಕನೇಯ ಎಸೆತದಲ್ಲಿ 2 ರನ್ ಓಡಿದ ಧೋನಿ 5ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು. ಕೊನೆಯ ಎಸೆತದಲ್ಲಿ ಎರಡು ಬೇಕಿತ್ತು. ಧೋನಿ ಸ್ಟ್ರೈಕ್ ನಲ್ಲಿದ್ದ ಕಾರಣ ಚೆನ್ನೈ ಪಂದ್ಯ ಗೆಲ್ಲುತ್ತದೆ ಎನ್ನುವ ನಿರೀಕ್ಷೆ ಇತ್ತು. ಆದರೆ ಕೊನೆಯ ಎಸೆತ ಧೋನಿ ಬ್ಯಾಟಿಗೆ ಸಿಗದೇ ಬಾಲ್ ಕೀಪರ್ ಪಾರ್ಥಿವ್ ಪಟೇಲ್ ಕೈಗೆ ಸಿಕ್ಕಿತು. ಆದರೂ ಒಂದು ರನ್ ಓಡಲು ಪ್ರಯತ್ನಿಸುತ್ತಿದ್ದಾಗ ಪಾರ್ಥಿವ್ ಪಟೇಲ್ ಶಾರ್ದೂಲ್ ಠಾಕೂರ್ ಅವರನ್ನು ರನೌಟ್ ಮಾಡಿದರು. ಈ ಮೂಲಕ ಬೆಂಗಳೂರು ತಂಡ 1 ರನ್‍ನಿಂದ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡಿತು.

  • ಐಪಿಎಲ್‍ನಲ್ಲಿ ದಾಖಲೆ ಬರೆದ ಧೋನಿ

    ಐಪಿಎಲ್‍ನಲ್ಲಿ ದಾಖಲೆ ಬರೆದ ಧೋನಿ

    ಬೆಂಗಳೂರು: ಅಂತಿಮ ಎಸೆತದವರೆಗೂ ಭಾರೀ ಕುತೂಹಲದಿಂದ ನಡೆದ ಚೆನ್ನೈ, ಆರ್ ಸಿಬಿ ಪಂದ್ಯದಲ್ಲಿ ಧೋನಿ ಸ್ಫೋಟಕ 84 ರನ್ ಸಿಡಿಸಿದ್ದು, ಐಪಿಎಲ್ ನಲ್ಲಿ ಇದು ಅವರ ವೈಯಕ್ತಿಕ ಅಧಿಕ ರನ್ ಮೊತ್ತವಾಗಿದೆ. ಆ ಮೂಲಕ ಐಪಿಎಲ್ ನಲ್ಲಿ 4 ಸಾವಿರ ರನ್ ಪೂರೈಸಿದ ಮೊದಲ ನಾಯಕ ಹಾಗೂ ಭಾರತೀಯ ಆಟಗಾರ ಆಗಿದ್ದಾರೆ.

    ಒಬ್ಬಂಟಿಯಾಗಿ ತಂಡವನ್ನು ಜಯದ ಹೊಸ್ತಿನಲ್ಲಿ ತಂದಿಟ್ಟಿದ್ದ ಧೋನಿ, ಪಂದ್ಯದಲ್ಲಿ 48 ಎಸೆತಗಳಲ್ಲಿ 5 ಬೌಂಡರಿ, 7 ಸಿಕ್ಸರ್ ಸಿಡಿಸಿ 84 ರನ್ ಗಳಿಸಿದ್ದರು. ಆದರೆ ತಂಡಕ್ಕೆ ಜಯ ತಂದುಕೊಡಲು ವಿಫಲರಾದರು. ಅಂತಿಮ ಓವರಿನಲ್ಲಿ 26 ರನ್ ಗುರಿ ಪಡೆದ ಸಿಎಸ್‍ಕೆ 24 ರನ್ ಗಳಿಸಿ 1 ರನ್ ಅಂತರದಲ್ಲಿ ಸೋಲು ಕಂಡಿತು.

    ಧೋನಿ ಸಿಕ್ಸರ್: ಪಂದ್ಯದಲ್ಲಿ ಧೋನಿ 7 ಸಿಕ್ಸರ್ ಸಿಡಿಸಿದ್ದು ಆ ಮೂಲಕ ಐಪಿಎಲ್ ನಲ್ಲಿ 203 ಸಿಕ್ಸರ್ ಸಿಡಿಸಿದ ಸಾಧನೆಯನ್ನು ಮಾಡಿದರು. ಈ ಪಟ್ಟಿಯಲ್ಲಿ ಕ್ರಿಸ್ ಗೇಲ್ 323 ಸಿಕ್ಸರ್ ಗಳೊಂದಿಗೆ ಮೊದಲ ಸ್ಥಾನದಲ್ಲಿ ಇದ್ದು, ಎಬಿಡಿ 214 ಸಿಕ್ಸರ್ ಸಿಡಿಸಿ 2ನೇ ಸ್ಥಾನದಲ್ಲಿದ್ದಾರೆ. ರೋಹಿತ್ ಹಾಗೂ ಸುರೇಶ್ ರೈನಾ 190 ಸಿಕ್ಸರ್ ಗಳೊಂದಿಗೆ ನಾಲ್ಕನೇಯ ಸ್ಥಾನ ಪಡೆದಿದ್ದಾರೆ.

    ಪಂದ್ಯದಲ್ಲಿ ಧೋನಿ ಮತ್ತೊಂದು ಸಾಧನೆಯನ್ನು ಮಾಡಿದ್ದು, ಆರ್ ಸಿಬಿ ಬೌಲರ್ ಉಮೇಶ್ ಯಾದವ್ ಬೌಲಿಂಗ್ ನಲ್ಲಿ 111 ಮೀಟರ್ ದೂರ ಸಿಕ್ಸರ್ ಸಿಡಿಸಿದ್ದಾರೆ. 2019ರ ಐಪಿಎಲ್ ನಲ್ಲಿ ಇದು ಅತೀ ದೊಡ್ಡ ಸಿಕ್ಸರ್ ಆಗಿದೆ. ಇದುವರೆಗೂ 2019ರ ಟೂರ್ನಿಯಲ್ಲಿ ಧೋನಿ 17 ಸಿಕ್ಸರ್ ಸಿಡಿಸಿದ್ದಾರೆ.

    ಕೊಹ್ಲಿ ಹೇಳಿದ್ದೇನು?
    ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ಅಂತಿಮ ಎಸೆತವರೆಗೂ ಕಾಡಿದ ಧೋನಿ ನಮ್ಮನ್ನು ಭಯ ಪಡುವಂತೆ ಮಾಡಿದ್ದರು. ಅಂತಿಮ ಎಸೆತದವರೆಗೂ ಹೋರಾಟ ನಡೆಸಿದ ಕಾರಣದಿಂದ ಜಯ ಲಭಿಸಿತು. ಬೆಂಗಳೂರು ಪಿಚ್‍ನಲ್ಲಿ 160 ರನ್ ಗಳೊಂದಿಗೆ ಪಂದ್ಯವನ್ನ ಕಾಪಾಡಿಕೊಳ್ಳುವುದು ಕಷ್ಟಸಾಧ್ಯವಾಗಿತ್ತು ಎಂದು ಅಭಿಪ್ರಾಯಪಟ್ಟರು.

    ಕೊನೆಯ ಓವರ್ ಹೀಗಿತ್ತು:
    ಕೊನೆಯ 6 ಎಸೆತದಲ್ಲಿ ಚೆನ್ನೈ ತಂಡ 26 ರನ್ ಗಳಿಸಬೇಕಿತ್ತು. ಉಮೇಶ್ ಯಾದವ್ ಎಸೆದ ಮೊದಲ ಎಸೆತವನ್ನು ಧೋನಿ ಬೌಂಡರಿಗೆ ಅಟ್ಟಿದರೆ ನಂತರದ ಎರಡು ಎಸೆತಗಳನ್ನು ಸಿಕ್ಸರ್‍ಗೆ ಅಟ್ಟಿದರು. ನಾಲ್ಕನೇಯ ಎಸೆತದಲ್ಲಿ 2 ರನ್ ಓಡಿದ ಧೋನಿ 5ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು. ಕೊನೆಯ ಎಸೆತದಲ್ಲಿ ಎರಡು ಬೇಕಿತ್ತು. ಧೋನಿ ಸ್ಟ್ರೈಕ್ ನಲ್ಲಿದ್ದ ಕಾರಣ ಚೆನ್ನೈ ಪಂದ್ಯ ಗೆಲ್ಲುತ್ತದೆ ಎನ್ನುವ ನಿರೀಕ್ಷೆ ಇತ್ತು. ಆದರೆ ಕೊನೆಯ ಎಸೆತ ಧೋನಿ ಬ್ಯಾಟಿಗೆ ಸಿಗದೇ ಬಾಲ್ ಕೀಪರ್ ಪಾರ್ಥಿವ್ ಪಟೇಲ್ ಕೈಗೆ ಸಿಕ್ಕಿತು. ಆದರೂ ಒಂದು ರನ್ ಓಡಲು ಪ್ರಯತ್ನಿಸುತ್ತಿದ್ದಾಗ ಪಾರ್ಥಿವ್ ಪಟೇಲ್ ಶಾರ್ದೂಲ್ ಠಾಕೂರ್ ಅವರನ್ನು ರನೌಟ್ ಮಾಡಿದರು. ಈ ಮೂಲಕ ಬೆಂಗಳೂರು ತಂಡ 1 ರನ್‍ನಿಂದ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡಿತು.

  • ಧೋನಿ ಸಹ ಮನುಷ್ಯರೇ ಅಲ್ವಾ? – ಎಂಎಸ್‍ಡಿ ಪರ ಬ್ಯಾಟ್ ಬೀಸಿದ ಗಂಗೂಲಿ

    ಧೋನಿ ಸಹ ಮನುಷ್ಯರೇ ಅಲ್ವಾ? – ಎಂಎಸ್‍ಡಿ ಪರ ಬ್ಯಾಟ್ ಬೀಸಿದ ಗಂಗೂಲಿ

    ಕೋಲ್ಕತ್ತಾ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೈದಾನದಲ್ಲಿ ಅಂಪೈರ್ ಗಳೊಂದಿಗೆ ವಾಗ್ವಾದ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ಎಲ್ಲರೂ ಮನುಷ್ಯರೇ ಎಂದು ಹೇಳುವ ಮೂಲಕ ಬೆಂಬಲ ನೀಡಿದ್ದಾರೆ.

    ಡೆಲ್ಲಿ, ಕೋಲ್ಕತ್ತಾ ಪಂದ್ಯದ ಬಳಿಕ ಪ್ರತಿಕ್ರಿಯೆ ನೀಡಿದ್ದ ಗಂಗೂಲಿ, ಪ್ರತಿಯೊಬ್ಬರು ಮನುಷ್ಯರೇ. ಅವರ ಸ್ಪಧಾತ್ಮಕತೆ ಏನು? ಎಂಬುದು ಮಾತ್ರ ಇಲ್ಲಿ ಗಮನಾರ್ಹವಾಗಿರುತ್ತದೆ. ಕೆಲ ಸಂದರ್ಭಗಳಲ್ಲಿ ಭಾವನಾತ್ಮಕ ಪರಿಸ್ಥಿತಿಗೆ ಸಿಲುಕಿದಾಗ ಇಂತಹ ಘಟನೆಗಳು ನಡೆಯುತ್ತದೆ ಎಂದಿದ್ದಾರೆ. ಇದೇ ವೇಳೆ ಡೆಲ್ಲಿ ತಂಡದ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಗಂಗೂಲಿ, ತಂಡ ಕೋಲ್ಕತ್ತಾ ವಿರುದ್ಧ ತೋರಿದ ಪ್ರದರ್ಶನ ತೃಪ್ತಿ ತಂದಿದೆ ಎಂದು ಹೇಳಿದ್ದಾರೆ.

    ಇತ್ತ ಧೋನಿ ಮೈದಾನಕ್ಕೆ ಪ್ರವೇಶ ಮಾಡಿದ್ದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಹಲವು ಹಿರಿಯ ಆಟಗಾರರು ಧೋನಿ ನಡೆ ವಿರುದ್ಧ ಕಿಡಿಕಾರಿದ್ದರು. ಧೋನಿ ಕ್ರಿಕೆಟಿನಲ್ಲಿ ತನ್ನ ಬಲ ಎಷ್ಟಿದೆ ಎಂದು ತೋರಿಸಿದ್ದಾರೆ. ಇಂತಹ ವರ್ತನೆ ತೋರಿದ್ದರೂ ಕೂಡ ಪಂದ್ಯದ ಶೇ..50 ರಷ್ಟು ಸಂಭಾವನೆಯನ್ನು ಮಾತ್ರ ದಂಡವಾಗಿ ವಿಧಿಸಿ ಬಿಸಿಸಿಐ ಉದಾರತೆಯನ್ನು ತೋರಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಟೀಕೆ ಮಾಡಿದ್ದಾರೆ.

    ಏನಿದು ವಿವಾದ?
    ಐಪಿಎಲ್ 12ನೇ ಆವೃತ್ತಿಯ ಭಾಗವಾಗಿ ಗುರುವಾರ ಚೆನ್ನೈ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ನಡೆದ ಪಂದ್ಯದಲ್ಲಿ ಘಟನೆ ನಡೆದಿತ್ತು. ಪಂದ್ಯದ ಅಂತಿಮ ಓವರಿನಲ್ಲಿ ಅಂಪೈರ್ ನೋಬಾಲ್ ನೀಡಿ ಬಳಿಕ ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದರು. ಈ ವೇಳೆ ಬೌಂಡರಿ ಲೈನ್ ಬಳಿ ಕುಳಿತಿದ್ದ ಧೋನಿ ಮೈದಾನಕ್ಕೆ ಆಗಮಿಸಿ ಅಂಪೈರ್ ಜೊತೆ ಚರ್ಚೆ ನಡೆಸಿದ್ದರು. ಬ್ಯಾಟಿಂಗ್ ನಡೆಸುತ್ತಿದ್ದ ಜಡೇಜಾ ಕೂಡ ಅಂಪೈರ್ ರೊಂದಿಗೆ ಮಾತುಕತೆ ನಡೆಸಿದ್ದರು. ಯಾವುದೇ ಸಮಯದಲ್ಲೂ ತಾಳ್ಮೆ ಕಳೆದುಕೊಳ್ಳದೇ ಇರುತ್ತಿದ್ದ ಧೋನಿ ಮಾತ್ರ ಐಪಿಎಲ್ ನಿಯಮಗಳನ್ನು ಮೀರಿ ಮೈದಾನಕ್ಕೆ ನುಗ್ಗಿದ್ದು ವಿಶೇಷವಾಗಿತ್ತು.

  • ಅಂಪೈರ್ ಜೊತೆ ವಾಗ್ವಾದ – ಧೋನಿ ನಡೆಗೆ ಹಿರಿಯ ಆಟಗಾರರು ಗರಂ

    ಅಂಪೈರ್ ಜೊತೆ ವಾಗ್ವಾದ – ಧೋನಿ ನಡೆಗೆ ಹಿರಿಯ ಆಟಗಾರರು ಗರಂ

    ಜೈಪುರ: ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಟಿ20 ಪಂದ್ಯದ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ, ಮೈದಾನ ಪ್ರವೇಶ ಮಾಡಿ ಅಂಪೈರ್ ಜೊತೆ ವಾಗ್ವಾದ ನಡೆಸಿದ ಘಟನೆ ಬಗ್ಗೆ ಹಲವು ಹಿರಿಯ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಐಪಿಎಲ್ 12ನೇ ಆವೃತ್ತಿಯ ಭಾಗವಾಗಿ ಗುರುವಾರ ನಡೆದ ಪಂದ್ಯದ ಅಂತಿಮ ಓವರಿನಲ್ಲಿ ಅಂಪೈರ್ ನೋಬಾಲ್ ನೀಡಿ ಬಳಿಕ ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದರು. ಈ ವೇಳೆ ಬೌಂಡರಿ ಲೈನ್ ಬಳಿ ಕುಳಿತಿದ್ದ ಧೋನಿ ಮೈದಾನಕ್ಕೆ ಆಗಮಿಸಿ ಅಂಪೈರ್ ಜೊತೆ ಚರ್ಚೆ ನಡೆಸಿದ್ದರು. ಬ್ಯಾಟಿಂಗ್ ನಡೆಸುತ್ತಿದ್ದ ಜಡೇಜಾ ಕೂಡ ಅಂಪೈರ್ ರೊಂದಿಗೆ ಮಾತುಕತೆ ನಡೆಸಿದ್ದರು. ಯಾವುದೇ ಸಮಯದಲ್ಲೂ ತಾಳ್ಮೆ ಕಳೆದುಕೊಳ್ಳದೇ ಇರುತ್ತಿದ್ದ ಧೋನಿ ಮಾತ್ರ ಐಪಿಎಲ್ ನಿಯಮಗಳನ್ನು ಮೀರಿ ಮೈದಾನಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.

    ಧೋನಿ ಅವರ ನಡೆಗೆ ಮ್ಯಾಚ್ ರೆಫ್ರಿ ಪಂದ್ಯದ ಸಂಭಾವನೆಯ ಶೇ.50 ಮೊತ್ತವನ್ನ ದಂಡವಾಗಿ ವಿಧಿಸಿದ್ದಾರೆ. ಇದರ ಬೆನ್ನಲ್ಲೇ ತಂಡದ ಅನುಭವಿ ನಾಯಕರಾಗಿ ಧೋನಿ ಮೈದಾನ ಪ್ರವೇಶ ಮಾಡಿ ಅಂಪೈರ್ ಜೊತೆ ಚರ್ಚೆ ನಡೆಸಿದ್ದು ಸರಿಯಲ್ಲ ಎಂದು ಆಸ್ಟ್ರೇಲಿಯಾ ಮಾಜಿ ಆಟಗಾರ ಮಾರ್ಕ್ ವೋ ಹೇಳಿದ್ದಾರೆ. ಅಲ್ಲದೇ ಟೀಂ ಇಂಡಿಯಾ ಮಾಜಿ ಆಟಗಾರರದ ಆಕಾಶ್ ಚೋಪ್ರಾ, ಹೇಮಂಗ್ ಬದನಿ ಸೇರಿದಂತೆ ಹಲವು ಆಟಗಾರರು ಧೋನಿ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

    ಇತ್ತ ಟೂರ್ನಿಯಲ್ಲಿ ಅಂಪೈರ್ ಗಳ ಪ್ರದರ್ಶನವೂ ಕೆಟ್ಟದಾಗಿದೆ ಎಂದು ತಿಳಿಸಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂತಿಮ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಮಿಚೆಲ್ ಸ್ಯಾಂಟ್ನರ್ ಸಿಎಸ್‍ಕೆ ಗೆ ಗೆಲುವು ತಂದರು. ಈ ಪಂದ್ಯದಲ್ಲಿ ಚೆನ್ನೈ ತಂಡದ ಮೂಲಕ ಐಪಿಎಲ್ ಟೂರ್ನಿಯಲ್ಲಿ 100 ಗೆಲುವುಗಳಲ್ಲಿ ಜಯಗಳಿಸಿದ ಮೊದಲ ತಂಡದ ನಾಯಕ ಎಂಬ ಹೆಗ್ಗಳಿಕೆ ಧೋನಿ ಪಾತ್ರರಾಗಿದ್ದಾರೆ. ಅಂತಿಮ ಓವರಿನ 6 ಎಸೆತಗಳಲ್ಲಿ 18 ರನ್ ಗಳಿಸಬೇಕಾದ ಒತ್ತಡದಲ್ಲಿ ಇದ್ದ ವೇಳೆ ಓವರಿನ ಎಸೆತ ಎದುರಿಸಿದ ಜಡೇಜಾ ಸಿಕ್ಸರ್ ಸಿಡಿಸಿದ್ದರು. ಆದರೆ ಈ ವೇಳೆ ಬ್ಯಾಲೆನ್ಸ್ ತಪ್ಪಿ ಕೆಳಕ್ಕೆ ಬಿದ್ದರು. ಇತ್ತ ಬೌಲರ್ ಕೂಡ ಆಯತಪ್ಪಿ ಕೆಳಕ್ಕೆ ಬಿದ್ದರು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಐಪಿಎಲ್ 2019: ಡ್ವೇನ್ ಬ್ರಾವೋ ಔಟ್

    ಐಪಿಎಲ್ 2019: ಡ್ವೇನ್ ಬ್ರಾವೋ ಔಟ್

    ಚೆನ್ನೈ: 2019ರ ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಂಜಾಬ್ ತಂಡವನ್ನು ಎದುರಿಸುತ್ತಿದೆ. ಆದರೆ ಇದೇ ವೇಳೆ ಗಾಯದ ಸಮಸ್ಯೆಯಿಂದ ಡ್ವೇನ್ ಬ್ರಾವೋ ಎರಡು ವಾರಗಳ ಕಾಲ ಐಪಿಎಲ್ ನಿಂದ ಹೊರಬಿದ್ದಿದ್ದಾರೆ.

    ಈ ಕುರಿತು ಸಿಎಸ್‍ಕೆ ತಂಡದ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ ಸ್ಪಷ್ಟಪಡಿಸಿದ್ದು, ಬ್ರಾವೋ ಮುಂದಿನ ಪಂದ್ಯಕ್ಕೆ ಲಭ್ಯವಾಗುವುದು ತಂಡಕ್ಕೆ ನಷ್ಟವಾಗಿದೆ. ಆದರೆ ಉತ್ತಮ ಕಾಂಬಿನೇಷನ್ ರೂಪಿಸಿ ಬಲಿಷ್ಠ ತಂಡವನ್ನು ಕಣಕ್ಕೆ ಇಳಿಸಲಾಗುವುದು ಎಂದಿದ್ದಾರೆ.

    ಬ್ರಾವೋ ಸಿಎಸ್‍ಕೆ ತಂಡದ ಪರ ಪ್ರಮುಖ ಬೌಲರ್ ಆಗಿದ್ದು, ಅದರಲ್ಲೂ ಪಂದ್ಯದ ಡೆತ್ ಓವರ್ ಗಳಲ್ಲಿ ಉತ್ತಮ ದಾಳಿ ನಡೆಸುತ್ತಿದ್ದರು. ಸದ್ಯ ತಂಡ ಬೇರೆ ಆಟಗಾರರ ಬಗ್ಗೆ ಗಮನ ಹರಿಸಬೇಕಿದೆ. ಶರ್ದೂಲ್ ಠಾಕೂರ್, ಮೋಹಿತ್ ಶರ್ಮಾ ಸಿಎಸ್‍ಕೆ ಹೆಚ್ಚಿನ ಬೌಲಿಂಗ್ ಆಯ್ಕೆ ಆಗಿದ್ದಾರೆ.

    ಈ ಬಾರಿಯ ಟೂರ್ನಿಯಲ್ಲಿ ಸಿಎಸ್‍ಕೆ ತಂಡ ಆಟಗಾರರ ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದು, ದಕ್ಷಿಣ ಆಫ್ರಿಕಾದ ಲುಂಗಿ ಎನ್ಗಿ, ನ್ಯೂಜಿಲೆಂಡ್ ತಂಡದ ಡೇವಿಡ್ ವಿಲ್ಲೆ ವೈಯಕ್ತಿಕ ಕಾರಣಗಳಿಂದ ಟೂರ್ನಿಯ ಆರಂಭದಲ್ಲೇ ಹಿಂದೆ ಸರಿದಿದ್ದರು.

  • ಅಂತಿಮ ಸೆಕೆಂಡಿನಲ್ಲಿ ಡಿಆರ್‌ಎಸ್‌ ಮನವಿ : ಮತ್ತೊಮ್ಮೆ ಧೋನಿ ಮೋಡಿ – ವಿಡಿಯೋ ನೋಡಿ

    ಅಂತಿಮ ಸೆಕೆಂಡಿನಲ್ಲಿ ಡಿಆರ್‌ಎಸ್‌ ಮನವಿ : ಮತ್ತೊಮ್ಮೆ ಧೋನಿ ಮೋಡಿ – ವಿಡಿಯೋ ನೋಡಿ

    ಚೆನ್ನೈ: ಸಿಎಸ್‍ಕೆ ತಂಡ ನಾಯಕ ಎಂಎಸ್ ಧೋನಿ ಮತ್ತೊಮ್ಮೆ ಡಿಆರ್‍ಎಸ್ ನಿಯಮ ಪಡೆಯುವಲ್ಲಿ ಚಾಣಾಕ್ಷತೆ ತೋರಿದ್ದು, ಅಂತಿಮ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರ ತಂಡಕ್ಕೆ ಲಾಭ ತಂದುಕೊಟ್ಟಿದೆ.

    ಐಪಿಎಲ್ 12 ಆವೃತ್ತಿಯ ಮೊದಲ ಪಂದ್ಯದಲ್ಲಿ ಧೋನಿ ಬಾಯ್ಸ್ ಗೆದ್ದು ಶುಭಾರಂಭ ಮಾಡಿದ್ದಾರೆ. ಪಂದ್ಯದ 11ನೇ ಓವರ್ ನಲ್ಲಿ ಸ್ಟ್ರೇಕ್ ನಲ್ಲಿದ್ದ ನವದೀಪ್ ಸೈನಿರನ್ನ ತಾಹಿರ್ ಎಲ್‍ಬಿ ಬಲೆಗೆ ಕೆಡವಿದ್ದರು. ಆದರೆ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದರು. ಈ ವೇಳೆ ಬೌಲರ್‍ರೊಂದಿಗೆ ಚರ್ಚೆ ನಡೆಸಿದ ಧೋನಿ ನಿಗದಿತ 10 ಸೆಕೆಂಡ್‍ನ ಅಂತಿಮ ಕ್ಷಣದಲ್ಲಿ ಡಿಆರ್ ಎಸ್‍ಗೆ ಮನವಿ ಮಾಡಿದರು.

    ಡಿಆರ್ ಎಸ್ ಪಡೆಯುತ್ತಿದಂತೆ ಆಟಗಾರರು ಕೂಡ ಧೋನಿಯ ಟೈಮಿಂಗ್ ಕಂಡು ಅಚ್ಚರಿಗೊಂಡಿದ್ದರು. ಮನವಿ ಸ್ವೀಕರಿಸಿ ಪರಿಶೀಲನೆ ನಡೆಸಿದ ವೇಳೆ ಚೆಂಡು ಬ್ಯಾಟಿಗೆ ಸ್ಪರ್ಶಿಸದೇ ಇರುವುದು ಖಚಿತವಾಗಿದ್ದ ಕಾರಣ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಆ ಬಳಿಕ ಪಂದ್ಯದಲ್ಲಿ ರವೀಂದ್ರ ಜಡೇಜಾ ಮನವಿ ಮೇರೆಗೆ ಧೋನಿ ಮತ್ತೊಂದು ರಿವ್ಯೂ ಪಡೆದಿದ್ದರು. ಆದರೆ ನೇರ ಬೌಲರ್ ಬಳಿ ತೆರಳಿದ ಧೋನಿ ಅದು ನಾಟೌಟ್ ಎಂದು ತಿಳಿಸಿದ್ದರು. ಅಂತೆಯೇ ಅಂಪೈರ್ ಕೂಡ ಪರಿಶೀಲನೆ ನಡೆಸಿ ಧೋನಿಯ ತೀರ್ಮಾನವನ್ನು ಬೆಂಬಲಿಸಿದ್ದರು.

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್ ಸಿಬಿ 17.1 ಓವರ್ ಗಳಲ್ಲಿ ಅಲೌಟ್ ಆಯ್ತು. ತಂಡದ ಪರ ಪಾರ್ಥಿವ್ ಪಟೇಲ್ 35 ಎಸೆತಗಳಲ್ಲಿ 29 ರನ್ ಗಳಿಸಿದರೆ, ಉಳಿದ ಎಲ್ಲಾ 10 ಆಟಗಾರರು ಎರಡಂಕಿ ದಾಟಲು ವಿಫರಾದರು. ಚೆನ್ನೈ ತಂಡ 17.4 ಓವರ್ ಗಳಲ್ಲಿ ಗುರಿ ಬೆನ್ನಟ್ಟಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

  • ಅಭ್ಯಾಸಕ್ಕಿಳಿದ ಧೋನಿ, ಸಿಎಸ್‍ಕೆ – ಮೊದಲ ಪಂದ್ಯದಲ್ಲೇ ಭರ್ಜರಿ ಫೈಟ್ ನಿರೀಕ್ಷೆ

    ಅಭ್ಯಾಸಕ್ಕಿಳಿದ ಧೋನಿ, ಸಿಎಸ್‍ಕೆ – ಮೊದಲ ಪಂದ್ಯದಲ್ಲೇ ಭರ್ಜರಿ ಫೈಟ್ ನಿರೀಕ್ಷೆ

    ಚೆನ್ನೈ: 2019ರ ಐಪಿಎಲ್ ಆರಂಭಕ್ಕೆ ದಿನಗಣನೇ ಆರಂಭವಾಗಿದ್ದು, ಟೀಂ ಇಂಡಿಯಾ ಮಾಜಿ ನಾಯಕ, ಸಿಎಸ್‍ಕೆ ತಂಡವನ್ನು ಮುನ್ನಡೆಸುತ್ತಿರುವ ಧೋನಿ ತಂಡದೊಂದಿಗೆ ಅಭ್ಯಾಸಕ್ಕೆ ಇಳಿದಿದ್ದಾರೆ.

    ಐಪಿಎಲ್ ಆರಂಭಕ್ಕೆ 1 ವಾರವಷ್ಟೇ ಬಾಕಿ ಇದ್ದು, ಮೊದಲ ಪಂದ್ಯದಲ್ಲೇ ಆರ್ ಸಿಬಿ, ಚೆನ್ನೈ ತಂಡಗಳು ಮುಖಾಮುಖಿ ಆಗುತ್ತಿರುವುದರಿಂದ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.

    ಚೆನ್ನೈ ಸೂಪರ್ ಕಿಂಗ್ಸ್ ಟ್ವಿಟ್ಟರ್ ಖಾತೆಯಲ್ಲಿ ಧೋನಿ ಅಭ್ಯಾಸದಲ್ಲಿ ತೊಡಗಿರುವ ವಿಡಿಯೋವನ್ನು ಟ್ವೀಟ್ ಮಾಡಿದೆ. ವಿಡಿಯೋದಲ್ಲಿ ಧೋನಿ ಬಿಗ್ ಶಾಟ್ ಸಿಡಿಸಲು ಅಭ್ಯಾಸ ನಡೆಸುತ್ತಿರುವುದು ಕಾಣಬಹುದಾಗಿದೆ. ಧೋನಿಯೊಂದಿಗೆ ತಂಡದ ಸದಸ್ಯರಾದ ಸುರೇಶ್ ರೈನಾ, ರಾಯುಡು, ಜಾಧವ್, ಮರಳಿ ವಿಜಯ್, ಕರಣ್ ಶರ್ಮಾ ಸೇರಿದಂತೆ ಹಲವು ಆಟಗಾರರು ಅಭ್ಯಾಸದಲ್ಲಿ ತೊಡಗಿದ್ದಾರೆ. ತಂಡದೊಂದಿಗೆ ದಕ್ಷಿಣ ಆಫ್ರಿಕಾ ಆಟಗಾರ ಡುಪ್ಲೆಸಿಸ್, ಇಮ್ರಾನ್ ತಹೀರ್ ಇನ್ನಷ್ಟೇ ಸೇರಿಕೊಳ್ಳಬೇಕಿದೆ.

    ಮಾರ್ಚ್ 23 ರಂದು ಮೊದಲ ಪಂದ್ಯ ನಡೆಯಲಿದ್ದು, ತವರು ಕ್ರೀಡಾಂಗಣದಲ್ಲಿ ಧೋನಿ ತಂಡ ಆರ್ ಸಿಬಿ ವಿರುದ್ಧ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಎರಡು ವರ್ಷಗಳ ಬಳಿಕ ಐಪಿಎಲ್ ಗೆ ಕಮ್ ಬ್ಯಾಕ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳೆದ ವರ್ಷ ಟ್ರೋಫಿ ಗೆಲ್ಲುವ ಮೂಲಕ ಭರ್ಜರಿ ಕಮ್ ಬ್ಯಾಕ್ ಮಾಡಿತ್ತು.