Tag: CSK

  • ಸಿಎಸ್‍ಕೆ ಪರ ಧೋನಿಗಿಂತಲೂ ಹೆಚ್ಚು ಪಂದ್ಯ ಆಡಿದ್ದಾರೆ ರೈನಾ

    ಸಿಎಸ್‍ಕೆ ಪರ ಧೋನಿಗಿಂತಲೂ ಹೆಚ್ಚು ಪಂದ್ಯ ಆಡಿದ್ದಾರೆ ರೈನಾ

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಅತ್ಯಂತ ಸ್ಥಿರವಾದ ಫ್ರ್ಯಾಂಚೈಸ್‍ಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ) ಇದುವರೆಗೂ ಒಬ್ಬ ನಾಯಕನನ್ನು ಮಾತ್ರ ಹೊಂದಿದೆ. ಎಂ.ಎಸ್ ಧೋನಿ ಅವರು ಮೊದಲು 9.5 ಕೋಟಿ ರೂ.ಗೆ ತಂಡವನ್ನು ಸೇರಿಕೊಂಡಿದ್ದರು. ಅವರು ಪ್ರತಿ ಬಾರಿಯ ಐಪಿಎಲ್‍ನಲ್ಲಿ ಸಿಎಸ್‍ಕೆ ತಂಡವನ್ನು ಮುನ್ನಡೆಸಿದ್ದಾರೆ. ಅವರ ನೇತೃತ್ವದಲ್ಲಿ ಸಿಎಸ್‍ಕೆ ತಂಡವು ಪ್ರತಿ ಬಾರಿಯೂ ಪ್ಲೇಆಫ್‍ನಲ್ಲಿ ಸ್ಥಾನ ಪಡೆಯುತ್ತಾ ಬಂದಿದೆ. ಅಷ್ಟೇ ಅಲ್ಲದೆ ಮತ್ತು ಇದುವರೆಗೂ ಮೂರು ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದಿದೆ.

    190 ಐಪಿಎಲ್ ಪಂದ್ಯಗಳನ್ನು ಆಡಿದ ಧೋನಿ, ಸಿಎಸ್‍ಕೆ ಪರ ಹೆಚ್ಚು ಪಂದ್ಯ ಆಡಿದ ಆಟಗಾರರಲ್ಲಿ ಒಬ್ಬರು. ಆದರೆ ಅವರು ಸಿಎಸ್‍ಕೆ ಪರ ಹೆಚ್ಚು ಪಂದ್ಯ ಆಡಿದ ಆಟಗಾರರಲ್ಲ. ಹೌದು, ಸಿಎಸ್‍ಕೆ ಪರ 160 ಪಂದ್ಯಗಳನ್ನು ಆಡಿರುವ ಧೋನಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಹಾಗಾದರೆ ಯಾರು ಪಟ್ಟಿಯ ಅಗ್ರಸ್ಥಾನದಲ್ಲಿದ್ದಾರೆ ಅಂತ ನಿಮಗೆ ಗೊತ್ತಾ?

    ಸುರೇಶ್ ರೈನಾ ಅವರು ಸಿಎಸ್‍ಕೆ ಪರ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಐಪಿಎಲ್‍ನಲ್ಲಿ ಸಿಎಸ್‍ಕೆ ಇದುವರೆಗೂ 165 ಪಂದ್ಯಗಳನ್ನು ಆಡಿದ್ದು, ಈ ಪೈಕಿ 164 ಪಂದ್ಯಗಳಲ್ಲಿ ಎಡಗೈ ಬ್ಯಾಟ್ಸ್‍ಮನ್ ರೈನಾ ಆಡಿದ್ದಾರೆ. ಸ್ನಾಯು ಸೆಳೆತದ ಹಿನ್ನೆಲೆಯಲ್ಲಿ ರೈನಾ ಅವರು ಸಿಎಸ್‍ಕೆ ಪರ ಆಡುವುದನ್ನು ಮೊದಲ ಬಾರಿಗೆ ತಪ್ಪಿಸಿಕೊಂಡಿದ್ದರು.

    ರೈನಾ ಸಿಎಸ್‍ಕೆಗೆ ಮಾತ್ರವಲ್ಲ ಐಪಿಎಲ್ ಇತಿಹಾಸದಲ್ಲಿ ಹೆಚ್ಚು ಪಂದ್ಯವನ್ನು ಆಡಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಅವರು ಐಪಿಎಲ್‍ನಲ್ಲಿ 193 ಪಂದ್ಯಗಳನ್ನು ಆಡಿದ್ದಾರೆ. ಧೋನಿ 190 ಪಂದ್ಯಗಳನ್ನು ಆಡಿ ಎರಡನೇ ಸ್ಥಾನದಲ್ಲಿದ್ದಾರೆ. ಇವರಿಬ್ಬರ ನಂತರ ಸ್ಥಾನದಲ್ಲಿರುವ ರೋಹಿತ್ ಶರ್ಮಾ 188 ಪಂದ್ಯ, ದಿನೇಶ್ ಕಾರ್ತಿಕ್ 182 ಪಂದ್ಯ ಮತ್ತು ವಿರಾಟ್ ಕೊಹ್ಲಿ 177 ಪಂದ್ಯ ಆಡಿದ್ದಾರೆ.

    ಧೋನಿ 2010ರಲ್ಲಿ ಸಿಎಸ್‍ಕೆ ಪರ ಆಡುವುದನ್ನು ಮೊದಲ ಬಾರಿಗೆ ತಪ್ಪಿಸಿಕೊಂಡಿದ್ದರು. ಆ ಬಳಿಕ 2011ರಿಂದ 2015 ರವರೆಗೆ ಮತ್ತು 2017 ಮತ್ತು 2018ರಲ್ಲಿ ಅವರು ಒಂದೇ ಒಂದು ಪಂದ್ಯವನ್ನು ತಪ್ಪಿಸಲಿಲ್ಲ. ಬೆನ್ನು ನೋವಿನಿಂದಾಗಿ ಐಪಿಎಲ್ 2019ರಲ್ಲಿ ಎರಡು ಪಂದ್ಯಗಳಿಂದ ಹೊರಗುಳಿದಿದ್ದರು. ಟೀಂ ಇಂಡಿಯಾ ಮಾಜಿ ನಾಯಕ 2019ರ ವಿಶ್ವಕಪ್‍ಗೆ ಸ್ವಲ್ಪ ಮುಂಚಿತವಾಗಿ ಬೆನ್ನಿನ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದರು. ಆಗ ಎರಡು ಪಂದ್ಯಗಳಿಗೆ ಅವರು ಅಲಭ್ಯವಾಗಿದ್ದರು.

  • ಅಂದು ಕೊಹ್ಲಿ ಏಕೆ ಬೌಲಿಂಗ್ ಮಾಡಿದರೆಂದು ಇಂದಿಗೂ ತಿಳಿದಿಲ್ಲ: ಅಲ್ಬಿ ಮಾರ್ಕೆಲ್

    ಅಂದು ಕೊಹ್ಲಿ ಏಕೆ ಬೌಲಿಂಗ್ ಮಾಡಿದರೆಂದು ಇಂದಿಗೂ ತಿಳಿದಿಲ್ಲ: ಅಲ್ಬಿ ಮಾರ್ಕೆಲ್

    ಮುಂಬೈ: ದಕ್ಷಿಣ ಆಫ್ರಿಕಾ ಆಲ್‍ರೌಂಡರ್ ಅಲ್ಬಿ ಮಾರ್ಕೆಲ್ ಐಪಿಎಲ್ ನಲ್ಲಿ ಚೆನ್ನೈ ತಂಡದ ಪರ ಆಡಿದ ಪಂದ್ಯದ ಬಗ್ಗೆ ಮಾತನಾಡಿದ್ದು, ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಬೌಲಿಂಗ್ ಮಾಡಿದ್ದೇಕೆ ಎಂದು ಇಂದಿಗೂ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

    2012ರಲ್ಲಿ ಸಿಎಸ್‍ಕೆ ಪರ ಮಾರ್ಕೆಲ್ ಆಡಿದ್ದರು. ಆರ್ ಸಿಬಿ ವಿರುದ್ಧ ಪಂದ್ಯದಲ್ಲಿ 7 ಎಸೆತಗಳಲ್ಲಿ 28 ರನ್ ಗಳಿಸಿ ಪಂದ್ಯ ಗೆಲ್ಲಿಸಿಕೊಟ್ಟು ತಂಡದ ಪರ ಹೀರೋ ಆಗಿ ಹೊರಹೊಮ್ಮಿದ್ದರು. ಬಹುಮುಖ್ಯವಾಗಿ ಅಂದು ವಿರಾಟ್ ಕೊಹ್ಲಿ ಎಸೆದ 19ನೇ ಓವರಿನಲ್ಲಿ ಮಾರ್ಕೆಲ್ 28 ರನ್ ಸಿಡಿಸಿದ್ದರು.

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಬೆಂಗಳೂರು ತಂಡ 20 ಓವರ್ ಗಳಲ್ಲಿ 205 ರನ್ ಗಳಿಸಿತ್ತು. ಆ ಬಳಿಕ ಬ್ಯಾಟಿಂಗ್ ಮಾಡಿದ್ದ ಚೆನ್ನೈ ಬಹುಬೇಗ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಂತಿಮ 2 ಓವರ್ ಗಳಲ್ಲಿ ಚೆನ್ನೈ ತಂಡಕ್ಕೆ 43 ರನ್‍ಗಳ ಅಗತ್ಯವಿತ್ತು. ಆದರೆ ಈ ಸಂದರ್ಭದಲ್ಲಿ ಯಾರು ಊಹಿಸಿದಂತೆ ಆರ್ ಸಿಬಿ ನಾಯಕರಾಗಿದ್ದ ಡೇನಿಲ್ ವೆಕ್ಟೋರಿ 19ನೇ ಓವರ್ ಎಸೆಯಲು ವಿರಾಟ್ ಕೊಹ್ಲಿ ಅವರಿಗೆ ಚೆಂಡು ನೀಡಿದ್ದರು. ಕೊಹ್ಲಿ ಎಸೆದ ಓವರಿನಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಅಲ್ಬಿ ಮಾರ್ಕೆಲ್ 3 ಸಿಕ್ಸರ್, 2 ಬೌಂಡರಿ ಸಿಡಿಸಿ ಮಿಂಚಿದ್ದರು. ಆದರೆ ಕೊಹ್ಲಿ ಏಕೆ ಬೌಲಿಂಗ್ ಮಾಡಿದ್ದರು ಎಂದು ಇಂದಿಗೂ ಯಾವುದೇ ಐಡಿಯಾ ಇಲ್ಲ ಎಂದು ಮಾರ್ಕೆಲ್ ಹೇಳಿದ್ದಾರೆ.

    ನಾನು ಬ್ಯಾಟಿಂಗ್ ಆಗಮಿಸುವ ವೇಳೆಗೆ 2 ಓವರ್ ಮಾತ್ರ ಬಾಕಿ ಇತ್ತು. 43 ರನ್ ಗೆಲುವಿಗೆ ಅಗತ್ಯವಿತ್ತು. ಆ ವೇಳೆ 2 ಭರ್ಜರಿ ಹೊಡೆತ ಸಿಡಿಸಿದರೆ ಗೆಲುವಿನ ಕುರಿತು ಚಿಂತಿಸಬಹುದು ಎಂದು ಕೊಂಡು ಬ್ಯಾಟಿಂಗ್ ಆರಂಭಿಸಿದ್ದೆ. ಅಂತಹ ಸಂದರ್ಭದಲ್ಲಿ ಕೊಹ್ಲಿ ಬೌಲಿಂಗ್ ಮಾಡಿದ್ದು, ನನ್ನ ಕೆಲಸವನ್ನ ಸುಲಭ ಮಾಡಿತ್ತು ಎಂದು ಮಾರ್ಕೆಲ್ ಅಂದಿನ ಸನ್ನಿವೇಶವನ್ನು ಸ್ಮರಿಸಿಕೊಂಡಿದ್ದಾರೆ. ಪಂದ್ಯದಲ್ಲಿ ಅಲ್ಬಿ ಮಾರ್ಕೆಲ್ ಔಟಾದ ಬಳಿಕ ಬ್ರಾವೋ ಚೆನ್ನೈ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಅಂತಿಮವಾಗಿ 5 ವಿಕೆಟ್ ಕಳೆದುಕೊಂಡಿದ್ದ ಚೆನ್ನೈ 208 ರನ್ ಗಳಿಸಿ ಗೆಲುವು ಪಡೆದಿತ್ತು.

  • ಸಿಎಸ್‍ಕೆ ಕರೆಗಾಗಿ ಎದುರು ನೋಡ್ತಿರೋ ಕೆಕೆಆರ್ ಕ್ಯಾಪ್ಟನ್!

    ಸಿಎಸ್‍ಕೆ ಕರೆಗಾಗಿ ಎದುರು ನೋಡ್ತಿರೋ ಕೆಕೆಆರ್ ಕ್ಯಾಪ್ಟನ್!

    ಮುಂಬೈ: ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕರೆಗಾಗಿ 13 ವರ್ಷಗಳಿಂದ ಎದುರು ನೋಡುತ್ತಿರುವುದಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ದಿನೇಶ್ ಕಾರ್ತಿಕ್ ಹೇಳಿದ್ದಾರೆ.

    2008ರಲ್ಲಿ ನಡೆದಿದ್ದ ಮೊದಲ ಐಪಿಎಲ್ ಆವೃತ್ತಿಯ ಹರಾಜು ಪ್ರಕ್ರಿಯೆ ವೇಳೆ ಸಿಎಸ್‍ಕೆ ತನ್ನನ್ನು ಫಸ್ಟ್ ಖರೀದಿ ಮಾಡುತ್ತೆ ಎಂದು ಯೋಚಿಸಿದ್ದೆ. ಆದರೆ ಎಂಎಸ್ ಧೋನಿ ಅವರನ್ನು ಆಯ್ಕೆ ಮಾಡಿದ್ದು ನನಗೆ ಅಚ್ಚರಿ ಮೂಡಿಸಿತ್ತು ಎಂದು ದಿನೇಶ್ ಕಾರ್ತಿಕ್ ತಿಳಿಸಿದ್ದಾರೆ.

    2008ರ ಮೊದಲ ಐಪಿಎಲ್ ಆವೃತ್ತಿಯಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಡೆಲ್ಲಿ ತಂಡ ಖರೀದಿ ಮಾಡಿತ್ತು. ಮೂರು ಆವೃತ್ತಿಗಳ ಬಳಿಕ ಮುಂಬೈ ಇಂಡಿಯನ್ಸ್ ತಂಡದ ಕಾರ್ತಿಕ್‍ರನ್ನು ಖರೀದಿ ಮಾಡಿತ್ತು. ಉಳಿದಂತೆ ಐಪಿಎಲ್‍ನಲ್ಲಿ ಆರು ತಂಡಗಳನ್ನು ಪ್ರತಿನಿಧಿಸಿರುವ ಕಾರ್ತಿಕ್, ಸದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿದ್ದಾರೆ. ಇದುವರೆಗೂ ತವರಿನ ತಂಡವನ್ನು ಪ್ರತಿನಿಧಿಸಲು ಸಾಧ್ಯವಾಗಲಿಲ್ಲ ಎಂಬ ಕೊರಗು ಕಾರ್ತಿಕ್ ಅವರನ್ನು ಕಾಡುತ್ತಿದೆ.

    2008ರ ಐಪಿಎಲ್ ಆವೃತ್ತಿಯ ಹರಾಜು ಪ್ರಕ್ರಿಯೆ ವೇಳೆ ನಾನು ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತಮಿಳುನಾಡಿಗೆ ಸೇರಿದ ಕಾರಣದಿಂದ ಅದೇ ರಾಜ್ಯದ ಫ್ರಾಂಚೈಸಿ ನನ್ನನ್ನು ಖರೀದಿ ಮಾಡುತ್ತೆ ಎಂದು ಭಾವಿಸಿದ್ದೆ. ಅಲ್ಲದೇ ಅಂದು ಟೀಂ ಇಂಡಿಯಾ ತಂಡದಲ್ಲಿ ಆಡುತ್ತಿದ್ದ ಕಾರಣ ನನ್ನನ್ನು ಖರೀದಿ ಮಾಡುತ್ತಾರೆ ಎಂಬ ಆಸೆಯೊಂದಿಗೆ ತಂಡದ ಕ್ಯಾಪ್ಟನ್ ಸ್ಥಾನ ನೀಡುತ್ತಾರಾ ಎಂಬ ಸಂದೇಹ ಎದುರಾಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಧೋನಿರನ್ನು ಫ್ರಾಂಚೈಸಿ ಮೊದಲು ಖರೀದಿ ಮಾಡಿತ್ತು. ಆ ವೇಳೆಗೆ ಧೋನಿ ಕೂಡ ನನ್ನ ಪಕ್ಕದಲ್ಲೇ ಇದ್ದರು. ಇದನ್ನು ಧೋನಿ ಕೂಡ ಊಹೆ ಮಾಡಿರುವುದಿಲ್ಲ. ಕಳೆದ 13 ವರ್ಷಗಳಿಂದ ಚೆನ್ನೈ ಫ್ರಾಂಚೈಸಿ ಕರೆಗಾಗಿ ಎದುರು ನೋಡುತ್ತಿದ್ದೇನೆ ಎಂದು ಕಾರ್ತಿಕ್ ಹೇಳಿದ್ದಾರೆ.

    2018ರ ಐಪಿಎಲ್ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವದಿಂದ ಗೌತಮ್ ಗಂಭೀರ್ ದೂರ ಉಳಿದ ಕಾರಣ ದಿನೇಶ್ ಕಾರ್ತಿಕ್ ಜವಾಬ್ದಾರಿ ವಹಿಸಿಕೊಂಡಿದ್ದರು. ಆದರೆ ಕಳೆದ 2 ವರ್ಷಗಳಲ್ಲಿ ದಿನೇಶ್ ಕಾರ್ತಿಕ್ ನಾಯತ್ವದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗದ ಕಾರಣ ಅಭಿಮಾನಿಗಳಿಂದ ನಾಯಕತ್ವ ಬದಲಾವಣೆ ಕೂಗು ಕೇಳಿ ಬರುತ್ತಿದೆ. ನಾಯಕತ್ವದಲ್ಲಿ ರೇಸ್‍ನಲ್ಲಿ ಶುಬ್‍ಮನ್ ಗಿಲ್ ಮೊದಲ ಸ್ಥಾನದಲ್ಲಿದ್ದಾರೆ.

  • ಪೆರ್ರಿ ತುಂಬ ಚೆನ್ನಾಗಿದ್ದಾರೆ, ಅವ್ರ ಜೊತೆ ಡಿನ್ನರ್ ಹೋಗಬೇಕು: ಮುರಳಿ ವಿಜಯ್

    ಪೆರ್ರಿ ತುಂಬ ಚೆನ್ನಾಗಿದ್ದಾರೆ, ಅವ್ರ ಜೊತೆ ಡಿನ್ನರ್ ಹೋಗಬೇಕು: ಮುರಳಿ ವಿಜಯ್

    ಮುಂಬೈ: ಭಾರತದ ಕ್ರಿಕೆಟ್ ಆಟಗಾರ ಮುರಳಿ ವಿಜಯ್ ಅವರು ಆಸ್ಟ್ರೇಲಿಯಾದ ಮಹಿಳಾ ಆಟಗಾರ್ತಿ ಎಲ್ಲಿಸ್ ಪೆರ್ರಿ ಅವರು ನೋಡಲು ಬಹಳ ಸುಂದರವಾಗಿ ಇದ್ದಾರೆ ಅವರ ಜೊತೆ ಡಿನ್ನರ್ ಗೆ ಹೋಗಲು ಬಯಸುತ್ತೇನೆ ಎಂದು ಹೇಳಿದ್ದಾರೆ.

    ಕೊರೊನಾ ಭಯದಿಂದ 60 ವರ್ಷದ ನಂತರ ಕ್ರಿಕೆಟ್ ತನ್ನೆಲ್ಲ ಚುಟುವಟಿಗಳನ್ನು ನಿಲ್ಲಿಸಿದೆ. ಹೀಗಾಗಿ ಮನೆಯಲ್ಲೇ ಉಳಿದಿರುವ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಇದ್ದು, ಕೊರೊನಾ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಇನ್ನೂ ಕೆಲವರು ಇನ್‍ಸ್ಟಾ, ಫೇಸ್‍ಬುಕ್‍ಗಳಲ್ಲಿ ಲೈವ್ ಬಂದು ತಮ್ಮ ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದಾರೆ.

    https://www.instagram.com/p/BqG-b4GBeQQ/

    ಸದ್ಯ ಮನೆಯಲ್ಲೇ ಇರುವ ಮುರಳಿ ವಿಜಯ್ ಕೂಡ ಲೈವ್ ಬಂದಿದ್ದು, ತಮ್ಮ ಅಭಿಮಾನಿಗಳ ಜೊತೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ನೀವು ಯಾರಿಬ್ಬರ ಜೊತೆ ಡಿನ್ನರ್ ಹೋಗಲು ಇಷ್ಟಪಡುತ್ತೀರಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿ ಮತ್ತು ಭಾರತದ ಆಟಗಾರ ಶಿಖರ್ ಧವನ್ ಅವರ ಜೊತೆ ಊಟಕ್ಕೆ ಹೋಗಲು ಬಯಸುತ್ತೇನೆ ಎಂದು ಹೇಳಿದ್ದಾರೆ.

    ಈ ವೇಳೆ ಅಭಿಮಾನಿಯೋರ್ವ ಯಾಕೆ ಈ ಇಬ್ಬರರನ್ನು ಆಯ್ಕೆ ಮಾಡಿಕೊಂಡ್ರಿ ಎಂದು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಉತ್ತರಿಸಿದ ವಿಜಯ್ ಎಲ್ಲಿಸ್ ಪೆರ್ರಿ ಅವರು ನೋಡಲು ಬಹಳ ಸುಂದರವಾಗಿ ಇದ್ದಾರೆ. ಜೊತೆಗೆ ಅವರು ಎಂದರೆ ನನಗೆ ತುಂಬ ಇಷ್ಟ ಅದಕ್ಕೆ ಅವರ ಜೊತೆ ಹೋಗಬೇಕು ಎಂದು ಹೇಳಿದೆ. ಜೊತೆಗೆ ಶಿಖರ್ ಧವನ್ ಅವರು ನನಗೆ ಒಳ್ಳೆಯ ಸ್ನೇಹಿತ ಮತ್ತು ಬಹಳ ತಮಾಷೆ ಮಾಡುತ್ತಾರೆ ಈ ಕಾರಣಕ್ಕೆ ಈ ಇಬ್ಬರ ಜೊತೆ ಹೋಗಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

    https://www.instagram.com/p/Bmx4j84n1eC/

    ಈ ವೇಳೆ ತಾವು ಐಪಿಎಲ್ ಆಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಗ್ಗೆ ಮಾತನಾಡಿದ ಮುರುಳಿ ವಿಜಯ್, ಸಿಎಸ್‍ಕೆ ಒಂದು ಉತ್ತಮ ತಂಡ. ಈ ತಂಡದಲ್ಲಿ ಇರುವ ಕೆಲ ಆಟಗಾರರು ಮೊದಲಿನಿಂದಲೂ ಇದೇ ತಂಡಕ್ಕಾಗಿ ಆಡಿದ್ದಾರೆ. ಅವರೆಲ್ಲರು ಕ್ರಿಕೆಟಿನ ದಂತಕಥೆಗಳು. ಅವರು ಯುವ ಆಟಗಾರರನ್ನು ಡ್ರೆಸ್ಸಿಂಗ್ ರೂಮ್‍ನಲ್ಲಿ ಹುರಿದುಂಬಿಸುತ್ತಾರೆ. ಅವರನ್ನು ನೋಡಿ ಕಲಿಯುವುದೇ ನಮಗೆ ಬೇಕಾದಷ್ಟು ಇದೆ ಎಂದು ಮುರಳಿ ವಿಜಯ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    https://www.instagram.com/p/BhqnWYlg2D_/

    ಒಂದು ಕಾಲದಲ್ಲಿ ಟೀಂ ಇಂಡಿಯಾ ಟೆಸ್ಟ್ ತಂಡದ ಖಾಯಂ ಆರಂಭಿಕ ಆಟಗಾರನಾಗಿದ್ದ ವಿಜಯ್, ಇದ್ದಕ್ಕಿದಂತೆ ಫಾರ್ಮ್ ಕಳೆದುಕೊಂಡ ಕಾರಣ ಟೀಂ ಇಂಡಿಯಾದಿಂದ ಹೊರಗೆ ಉಳಿದಿದ್ದಾರೆ. ಆದರೆ ಐಪಿಎಲ್ 13ನೇ ಅವೃತ್ತಿಯಲ್ಲಿ ಚೆನ್ನೈ ತಂಡದ ಪರ ಆಡಲು ಮುರಳಿ ವಿಜಯ್ ಅವರು ಸಕಲ ಸಿದ್ಧತೆಗಳನ್ನು ನಡೆಸಿದ್ದರು. ಆದರೆ ಕೊರೊನಾ ವೈರಸ್ ಭೀತಿಯಿಂದ ಮುಂದೂಡಿಕೆಯಾಗಿದೆ.

  • ಎಂಎಸ್‍ಡಿ ನಿವೃತ್ತಿ ಘೋಷಿಸಿದ್ರೆ ಸಿಎಸ್‍ಕೆ ಮುಂದಿನ ನಡೆ ಏನು?

    ಎಂಎಸ್‍ಡಿ ನಿವೃತ್ತಿ ಘೋಷಿಸಿದ್ರೆ ಸಿಎಸ್‍ಕೆ ಮುಂದಿನ ನಡೆ ಏನು?

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‍ನ 13ನೇ ಆವೃತ್ತಿಯಲ್ಲಿ ಎಂ.ಎಸ್.ಧೋನಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ) ತಂಡವನ್ನು ಮುನ್ನಡೆಸಬೇಕಿತ್ತು. ಆದರೆ ಕೊರೊನಾ ವೈರಸ್ ಭೀತಿಯಿಂದಾಗಿ ಈ ಬಾರಿಯ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಲಾಕ್‍ಡೌನ್ ಅವಧಿಯಲ್ಲಿ ಕೆಲ ಕ್ರಿಕೆಟಿಗರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಅಂತೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟರ್ ಮೈಕೆಲ್ ಹಸ್ಸಿ ಅವರು, ಒಂದು ವೇಳೆ ಧೋನಿ ನಿವೃತ್ತಿ ಘೋಷಿಸಿದರೆ ಸಿಎಸ್‍ಕೆ ಮುಂದಿನ ನಡೆ ಏನು ಎಂಬುದರ ಬಗ್ಗೆ ವಿವರಿಸಿದ್ದಾರೆ.

    2019ರ ಐಸಿಸಿ ವಿಶ್ವಕಪ್ ಟೂರ್ನಿಯ ಬಳಿಕ ಎಂ.ಎಸ್. ಧೋನಿ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಭವಿಷ್ಯವು ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನದೊಂದಿಗೆ ಎಂಎಸ್‍ಡಿ ಟೀಂ ಇಂಡಿಯಾಗೆ ಮರಳಲಿದ್ದಾರೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಆದರೆ ಕೊರೊನಾ ಭೀತಿಯಿಂದಾಗಿ ಐಪಿಎಲ್ ಮುಂದೂಡಲ್ಪಟ್ಟಿದೆ.

    ಧೋನಿ ಅಂತಿಮವಾಗಿ ಎಲ್ಲಾ ರೀತಿಯ ಆಟಗಳಿಂದ ನಿವೃತ್ತಿ ಘೋಷಿಸುವ ಸನ್ನಿವೇಶವನ್ನು ವಿವರಿಸಿದ ಹಸ್ಸಿ, ಸಿಎಸ್‍ಕೆ ಧೋನಿ ಅವರನ್ನು ವಿಶೇಷ ಸ್ಥಾನದೊಂದಿಗೆ ತಂಡದಲ್ಲಿ ಉಳಿಸಿಕೊಳ್ಳಬಹುದು ಎಂದು ನಿರೀಕ್ಷಿಸುತ್ತೇನೆ ಎಂದು ಹೇಳಿದ್ದಾರೆ.

    ”ಎಂ.ಎಸ್.ಧೋನಿ ನಿವೃತ್ತಿಯ ನಿರ್ಧಾರದ ಬಗ್ಗೆ ನಾನು ಕುತೂಹಲದಿಂದ ನೋಡುತ್ತಿರುವೆ. ಧೋನಿ ಅವರನ್ನು ತಂಡದಲ್ಲಿ ತೊಡಗಿಸಿಕೊಳ್ಳಲು ಸಿಎಸ್‍ಕೆ ಮಾಲೀಕರು ಬಯಸುತ್ತಾರೆ ಎಂಬ ನಂಬಿಕೆ ಇದೆ” ಎಂದು ಹಸ್ಸಿ ವಿಡಿಯೋ ಕಾಲ್ ಮೂಲಕ ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಸಂಜಯ್ ಮಂಜ್ರೇಕರ್ ಅವರೊಂದಿಗೆ ಹಂಚಿಕೊಂಡಿದ್ದಾರೆ.

    ”ಆದಾಗ್ಯೂ ಆಟಗಾರರ ಬದಲಾವಣೆಯು ಸಂಭವಿಸಿದಾಗ, ಸಿಎಸ್‍ಕೆ ಹೊಸ ತಂಡವನ್ನು ಕಟ್ಟಲು ಬಯಸಬಹುದು. ಮುಂದಿನ ದಶಕದಲ್ಲಿ ಐಪಿಎಲ್ ಪ್ರವೇಶಿಸುವಾಗ ಧೋನಿ ಪ್ಲಾನ್‍ಗಳನ್ನು ಸಿಎಸ್‍ಕೆ ಬಳಸಿಕೊಳ್ಳಬಹುದು. ಇದು ಖಂಡಿತವಾಗಿಯೂ ಪ್ರಸ್ತುತ ಹೆಚ್ಚು ಸವಾಲಿನ ಸಂಗತಿಯಾಗಿದೆ” ಎಂದು ಹಸ್ಸಿ ಹೇಳಿದ್ದಾರೆ.

    ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಒಟ್ಟಿಗೆ ಕಾರ್ಯನಿರ್ವಹಿಸಿದಾಗ ಎಂಎಸ್‍ಡಿಯಿಂದ ಕಲಿತ ಕೆಲವು ವಿಚಾರಗಳನ್ನು ಹಸ್ಸಿ ಬಹಿರಂಗಪಡಿಸಿದ್ದಾರೆ. ”ಪಂದ್ಯದ ಆರಂಭದಲ್ಲಿ ಒಂದು ಓವರಿನಲ್ಲಿ 12 ಅಥವಾ 13 ರನ್‍ಗಳ ಚಚ್ಚಲು ನಾನು ಪ್ರಯತ್ನಿಸಲಿಲ್ಲ. ಇದನ್ನು ಎಂ.ಎಸ್. ಧೋನಿ ಅವರಿಂದ ಕಲಿತಿದ್ದೇನೆ. ರನ್ ಗಳಿಸುವುದರಲ್ಲಿಯೇ ಹೆಚ್ಚು ಗಮನಹಸಿರಿದರೆ ಬ್ಯಾಟ್ಸ್‌ಮನ್‌ ಭಯಭೀತರಾಗುತ್ತಾರೆ. ಹೀಗಾಗಿ ಪಂದ್ಯವನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ ಎಂದು ಧೋನಿ ನಂಬಿಸಿದ್ದಾರೆ. ಆದ್ದರಿಂದ ಧೋನಿ ಕೂಲ್ ಆಗಿರುತ್ತಾರೆ ಮತ್ತು ಬೌಲರ್ ಗಳ ಮೇಲೂ ಒತ್ತಡ ಬೀಳದಂತೆ ನೋಡಿಕೊಳ್ಳುತ್ತಾರೆ” ಎಂದು ಹಸ್ಸಿ ತಿಳಿಸಿದ್ದಾರೆ.

  • ಗಂಡು ಮಗುವಿನ ತಂದೆಯಾದ ಸುರೇಶ್ ರೈನಾ

    ಗಂಡು ಮಗುವಿನ ತಂದೆಯಾದ ಸುರೇಶ್ ರೈನಾ

    -‘ಕುಟ್ಟಿ ತಲಾ’ಗೆ ವೆಲ್‍ಕಮ್ ಎಂದ ಸಿಎಸ್‍ಕೆ

    ಮುಂಬೈ: ಟೀಂ ಇಂಡಿಯಾ ಅನುಭವಿ ಆಟಗಾರ ಸುರೇಶ್ ರೈನಾ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದ್ದು, ರೈನಾ ಪತ್ನಿ ಪ್ರಿಯಾಂಕಾ ಅವರು 2ನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕುಟ್ಟಿ ತಲಾಗೆ ಸ್ವಾಗತ ಕೋರಿದೆ.

    ರೈನಾ ದಂಪತಿಗೆ 2016ರಲ್ಲಿ ಹೆಣ್ಣು ಮಗುವಾಗಿತ್ತು. ಈಗ ರೈನಾ ಪತ್ನಿ ಪ್ರಿಯಾಂಕಾ ಗಂಡು ಮಗುವಿಗೆ ಜನ್ಮ ನೀಡಿದ್ದು, ರೈನಾ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಭಿಮಾನಿಗಳು ರೈನಾ ದಂಪತಿಗೆ ಶುಭಕೋರಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

    ಸುರೇಶ್ ರೈನಾ ಸ್ವತಃ ತಾವು 2ನೇ ಬಾರಿ ತಂದೆಯಾಗಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಹಂಚಿಕೊಂಡಿದ್ದು, ಗಂಡು ಮಗುವಾಗಿದೆ ಎಂದಿದ್ದಾರೆ. ಅಲ್ಲದೇ ಪುತ್ರನ ಹೆಸರನ್ನು ರೈನಾ ರಿವೀಲ್ ಮಾಡಿದ್ದಾರೆ. ಗ್ರೇಸಿಯಾ ರೈನಾಗೆ ಸಹೋದರ ರಿಯೊ ರೈನಾ ಎಂದು ತಿಳಿಸಿದ್ದಾರೆ. ರೈನಾ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಹರ್ಭಜನ್ ಸಿಂಗ್ ದಂಪತಿಗೆ ಶುಭ ಕೋರಿ ಟ್ವೀಟ್ ಮಾಡಿದ್ದಾರೆ.

    ರೈನಾಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇತ್ತ ಶುಭಕೋರಿರುವ ಪತ್ರಕರ್ತ ಬೋರಿಯ ಮಜುಂದಾರ್, ರೈನಾ ತಂದೆಯಾಗಿರುವುದಕ್ಕೆ ಅಭಿನಂದನೆಗಳು. ದೇವರ ದಯೆಯಿಂದ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

    2018ರ ಜುಲೈನಲ್ಲಿ ಟೀಂ ಇಂಡಿಯಾ ಪರ ಕೊನೆಯ ಪಂದ್ಯವಾಡಿರುವ ರೈನಾ 2020ರ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಕಮ್‍ಬ್ಯಾಕ್ ಮಾಡುವ ಭರವಸೆಯಲ್ಲಿದ್ದರು. 2011ರ ವಿಶ್ವಕಪ್ ಗೆದ್ದ ತಂಡದಲ್ಲಿ ಭಾಗಿದ್ದ ರೈನಾ, 2019ರಲ್ಲಿ ಗಾಯದ ಸಮಸ್ಯೆಯಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. 2020ರ ಐಪಿಎಲ್ ಆವೃತ್ತಿಯ ಸಿಎಸ್‍ಕೆ ತರಬೇತಿಗೆ ಹಾಜರಾಗಿದ್ದ ರೈನಾ ಕೊರೊನಾದಿಂದ ಟೂರ್ನಿ ರದ್ದಾಗುತ್ತಿದ್ದಂತೆ ತವರಿಗೆ ವಾಪಸ್ ಆಗಿದ್ದರು. ಕೋವಿಡ್-18 ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿರುವ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರಿಗೆ ಭಾನುವಾರ ಧನ್ಯವಾದ ತಿಳಿಸಿ ರೈನಾ ಟ್ವೀಟ್ ಮಾಡಿದ್ದರು.

  • ‘ನಿಮ್ಮ ಪ್ರೀತಿ ಎಂದಿಗೂ ಕಡಿಮೆಯಾಗಲ್ಲ’: ಧೋನಿಯನ್ನ ಕಳುಹಿಸಿಕೊಟ್ಟ ಸಿಎಸ್‍ಕೆ ಅಭಿಮಾನಿಗಳು

    ‘ನಿಮ್ಮ ಪ್ರೀತಿ ಎಂದಿಗೂ ಕಡಿಮೆಯಾಗಲ್ಲ’: ಧೋನಿಯನ್ನ ಕಳುಹಿಸಿಕೊಟ್ಟ ಸಿಎಸ್‍ಕೆ ಅಭಿಮಾನಿಗಳು

    ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಏಪ್ರಿಲ್ 15ಕ್ಕೆ ಮುಂದೂಡಿದ್ದರಿಂದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ರಾಂಚಿಗೆ ಮರಳಿದ್ದಾರೆ.

    ಎಂ.ಎಸ್.ಧೋನಿ ಅವರು ಸಿಎಸ್‍ಕೆ ಸಿಬ್ಬಂದಿ ಮತ್ತು ಅಭಿಮಾನಿಗಳನ್ನು ಭೇಟಿಯಾಗುವ ವಿಡಿಯೋವನ್ನು ಫ್ರ್ಯಾಂಚೈಸ್ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದೆ. ಧೋನಿ ಮೈದಾನದಿಂದ ಹೊರ ಬರುವಾಗ ತಮ್ಮ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಿದರು. ಈ ಕುರಿತು ಪ್ರತಿಕ್ರಿಯಿಸಿದ ನೆಟ್ಟಿಗರು ಧೋನಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

    https://twitter.com/ChennaiIPL/status/1238810892789153795

    ‘ಧೋನಿ ಅವರ ಮೇಲಿನ ಪ್ರೀತಿ ಎಂದಿಗೂ ಕಡಿಮೆಯಾಗುವುದಿಲ್ಲ’ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮತ್ತೊಬ್ಬರು ರಿಟ್ವೀಟ್ ಮಾಡಿ, ‘ದಯವಿಟ್ಟು ಜನರು ಧೋನಿ ಅವರ ಕೈಯನ್ನು ಕುಲುಕುವುದನ್ನು ತಪ್ಪಿಸಿ’ ಎಂದು ಕೊರೊನಾ ಭೀತಿಯನ್ನು ವ್ಯಕ್ತಪಡಿಸಿದ್ದಾರೆ.

    ಐಪಿಎಲ್ ಹಿನ್ನೆಲೆಯಲ್ಲಿ ಸಿಎಸ್‍ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮಾರ್ಚ್ 3ರಂದು ಚೆನ್ನೈಗೆ ಆಗಮಿಸಿ, ಅಭ್ಯಾಸ ಆರಂಭಿಸಿದ್ದರು. ಜೊತೆಗೆ ತಂಡದ ಅನುಭವಿ ಆಟಗಾರ ಸುರೇಶ್ ರೈನಾ ಸೇರಿದಂತೆ ಕೆಲ ಆಟಗಾರರು ಈಗಾಗಲೇ ಚೆನ್ನೈನ ಚಿದಂಬರಂ ಮೈದಾನದಲ್ಲಿ ಕ್ರಿಕೆಟ್ ಅಭ್ಯಾಸ ನಡೆಸಿದ್ದರು. ಆದರೆ ಕೊರೊನಾ ವೈರಸ್ ಭೀತಿಯಿಂದಾಗಿ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿದೆ. ಹೀಗಾಗಿ ಧೋನಿ ಭಾನುವಾರ ತವರಿಗೆ ಮರಳಿದ್ದಾರೆ.

  • ಸತತ 5 ಸಿಕ್ಸರ್ ಚಚ್ಚಿದ ಧೋನಿ – ವೈರಲ್ ವಿಡಿಯೋ ನೋಡಿ

    ಸತತ 5 ಸಿಕ್ಸರ್ ಚಚ್ಚಿದ ಧೋನಿ – ವೈರಲ್ ವಿಡಿಯೋ ನೋಡಿ

    ಚೆನ್ನೈ: ಇಂಡಿಯನ್ ಪ್ರಿಮಿಯರ್ ಲೀಗ್ 13ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡ ಭರ್ಜರಿ ಅಭ್ಯಾಸ ನಡೆಸಿದೆ. ಅದರಲ್ಲೂ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸ್ಫೋಟಕ ಬ್ಯಾಟಿಂಗ್‍ಗೆ ಕಠಿಣ ಅಭ್ಯಾಸ ನಡೆಸಿದ್ದಾರೆ. ಅಭ್ಯಾಸದ ವೇಳೆ ಎಂ.ಎಸ್.ಧೋನಿ ಸತತ ಐದು ಸಿಕ್ಸರ್ ಸಿಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಚೆನ್ನೈ ಸೂಪರ್ ಸಿಕ್ಸ್ ತಂಡದ ಅನುಭವಿ ಆಟಗಾರ ಸುರೇಶ್ ರೈನಾ, ಕ್ಯಾಪ್ಟನ್ ಎಂ.ಎಸ್.ಧೋನಿ ಸೇರಿದಂತೆ ಕೆಲ ಆಟಗಾರರು ಈಗಾಗಲೇ ಚೆನ್ನೈನಲ್ಲಿ ಕ್ರಿಕೆಟ್ ಅಭ್ಯಾಸ ಆರಂಭಿಸಿದ್ದಾರೆ. ನೆಟ್ ಒಳಗೆ ಬ್ಯಾಟಿಂಗ್ ನಡೆಸಿದ್ದ ಎಂಎಸ್‍ಡಿ ಸತತ ಐದು ಎಸೆತಗಳನ್ನು ಸಿಕ್ಸರ್ ಸಿಡಿಸಿದರು. ಈ ವೇಳೆ ನೆಟ್ ಹಿಂದೆ ನಿಂತಿದ್ದ ಸುರೇಶ್ ರೈನಾ ಫುಲ್ ಖುಷ್ ಆಗಿ ಧೋನಿ ಅಬ್ಬರ ನೋಡುತ್ತಿದ್ದರು. ಇದನ್ನೂ ಓದಿ: 37 ಎಸೆತಗಳಲ್ಲಿ ಸ್ಫೋಟಕ ಶತಕ- ಹಾರ್ದಿಕ್ ಪಾಂಡ್ಯ ಕಮ್‍ಬ್ಯಾಕ್

    2019ರ ವಿಶ್ವಕಪ್‍ನಲ್ಲಿ ಸೆಮಿಫೈನಲ್‍ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋತ ನಂತರ ಧೋನಿ ಅವರು ಕ್ರಿಕೆಟ್‍ನಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಮಾರ್ಚ್ ನಲ್ಲಿ ಆರಂಭವಾಗುತ್ತಿರುವ ಐಪಿಲ್‍ನಲ್ಲಿ ಅವರನ್ನು ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

    ಮಾರ್ಚ್ ನಲ್ಲಿ ಆರಂಭವಾಗುವ ಐಪಿಎಲ್‍ನಲ್ಲಿ ಧೋನಿ ಅಬ್ಬರಿಸಲು ಸಿದ್ಧತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಮಾರ್ಚ್ 3 ರಂದು ಚೆನ್ನೈಗೆ ಬಂದಿದ್ದು, ಚಿದಂಬರಂ ಮೈದಾನದಲ್ಲಿ ಸುರೇಶ್ ರೈನಾ ಅವರ ಜೊತೆಗೆ ಅಭ್ಯಾಸ ನಡೆಸಿದ್ದಾರೆ. ಇದನ್ನೂ ಓದಿ: ಪರಿವರ್ತನೆಯೊಂದೇ ಶಾಶ್ವತವಾದದ್ದು ಎಂದ ವಿರಾಟ್

    ಧೋನಿ ಇತ್ತೀಚೆಗಷ್ಟೇ ತಮ್ಮ ಹುಟ್ಟೂರು ರಾಂಚಿಯ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಿಚ್ ಅನ್ನು ಸಮತಟ್ಟಾಗಿಸಲು ಇರುವ ಪಿಚ್ ರೋಲರ್ ವಾಹನವನ್ನು ಓಡಿಸಿದ್ದರು. ಇದನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಧೋನಿ ಸರಳತೆಗೆ ಅವರ ಫ್ಯಾನ್ಸ್ ಫಿದಾ ಆಗಿದ್ದರು.

  • ಸುರೇಶ್ ರೈನಾ ಪ್ರಶ್ನೆಗೆ ಕಾಲಿವುಡ್ ಸ್ಟಾರ್ ಸೂರ್ಯ ಉತ್ತರ

    ಸುರೇಶ್ ರೈನಾ ಪ್ರಶ್ನೆಗೆ ಕಾಲಿವುಡ್ ಸ್ಟಾರ್ ಸೂರ್ಯ ಉತ್ತರ

    ಚೆನ್ನೈ: ಮೂರು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಭಿಮಾನಿಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದೆ. ಈ ಬಾರಿಯ ಟೂರ್ನಿ ಫೈನಲ್ ನಲ್ಲಿ ಚೆನ್ನೈ ಸೋತರೂ ಕೂಡ ಅಭಿಮಾನಿಗಳ ಬೆಂಬಲ ಮಾತ್ರ ಕಡಿಮೆ ಆಗಿಲ್ಲ. ಸದ್ಯ ಚೆನ್ನೈ ತಂಡದ ಆಟಗಾರರ ರೈನಾ ಅವರು ನಟ ಸೂರ್ಯ ಅವರಿಗೆ ಪ್ರಶ್ನೆಯೊಂದನ್ನು ಕೇಳಿದ್ದು, ಈ ಪ್ರಶ್ನೆಗೆ ಕಾಲಿವುಡ್ ಸ್ಟಾರ್ ಉತ್ತರಿಸಿದ್ದಾರೆ.

    ಟ್ವಿಟ್ಟರ್ ನಲ್ಲಿ ಸೂರ್ಯ ಅವರ ಮುಂದಿನ ಸಿನಿಮಾ ‘ಎನ್‍ಜಿಕೆ’ ಪ್ರಚಾರದ ಕುರಿತು ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಈ ವೇಳೆ ರೈನಾ, ಚೆನ್ನೈ ತಂಡ ನಿಮ್ಮ ನೆಚ್ಚಿನ ಆಟಗಾರ ಯಾರು? ಮತ್ತು ಏಕೆ? ಎಂದು ಪ್ರಶ್ನೆ ಮಾಡಿದ್ದರು. ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ನಟ ಸೂರ್ಯ, ಧೋನಿ ಹಾಗೂ ನೀವು ನಮ್ಮ ಆಟಗಾರರು. ಏಕೆಂದರೆ ನಿಮ್ಮ ಹಾಡುಗರಿಕಾ ಕೌಶಲ್ಯ ಹಾಗೂ ಧೋನಿ ಅವರ ಡ್ರಾಯಿಂಗ್ ಸ್ಕಿಲ್ ಕಾರಣ ಎಂದಿದ್ದಾರೆ.

    ಟ್ವಿಟ್ಟರ್ ನಲ್ಲಿ ಅನಿರೀಕ್ಷತವಾಗಿ ರೈನಾ ಅವರ ಟ್ವೀಟ್ ಎದುರಾಗುತ್ತಿದಂತೆ ಸಂತಸ ವ್ಯಕ್ತಪಡಿಸಿದ ಸೂರ್ಯ, ರೈನಾ ಪುತ್ರಿ ಸೇರಿದಂತೆ ಇಡೀ ಕುಟುಂಬಕ್ಕೆ ಶುಭ ಕೋರಿದರು. ಈ ಹಿಂದೆ ಇಬ್ಬರು ಭೇಟಿ ಆಗಿ ಫೋಟೋ ತೆಗೆದುಕೊಂಡಿದ್ದ ಘಟನೆಯನ್ನ ನೆನಪಿಸಿಕೊಂಡು, ‘ನಾನು ಯಾವಾಗಲೂ ಸಿಎಸ್‍ಕೆ ಅಭಿಮಾನಿಯಾಗಿರುತ್ತೇನೆ’ ಎಂದಿದ್ದಾರೆ.

  • ಸೋತಿದ್ದಕ್ಕೆ ಕಣ್ಣೀರಿಟ್ಟು ಒದ್ದಾಡಿದ ಸಿಎಸ್‍ಕೆ ಅಭಿಮಾನಿ – ವಿಡಿಯೋ ನೋಡಿ

    ಸೋತಿದ್ದಕ್ಕೆ ಕಣ್ಣೀರಿಟ್ಟು ಒದ್ದಾಡಿದ ಸಿಎಸ್‍ಕೆ ಅಭಿಮಾನಿ – ವಿಡಿಯೋ ನೋಡಿ

    ಬೆಂಗಳೂರು: 2019 ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಮ್ಯಾಚ್ ಸೋತಿದ್ದಕ್ಕೆ ಮನೆಯಲ್ಲಿ ಕೂತು ಪಂದ್ಯ ನೋಡುತ್ತಿದ್ದ ಸಿಎಸ್‍ಕೆ ತಂಡದ ಅಭಿಮಾನಿಯೊಬ್ಬ ಕಣ್ಣೀರಿಟ್ಟು, ಕೆಳಗೆ ಬಿದ್ದು ಒದ್ದಾಡಿದ್ದಾನೆ.

    ಫೈನಲ್ ಪಂದ್ಯದಲ್ಲಿ ಚೆನ್ನೈ ತಂಡ ಮುಂಬೈ ವಿರುದ್ಧ ಸೋಲುತ್ತಿದ್ದಂತೆ ಮಮ್ಮಿ ಮಮ್ಮಿ ಅಂತಾ ಅಳುವ ಬಾಲಕ, ನಂತರ ಕೆಳಗೆ ಬಿದ್ದು ಒದ್ದಾಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾಲಕನ ಅಳುವಿನ ವಿಡಿಯೋ ವೈರಲ್ ಆಗಿದೆ.

    ಈ ವಿಡಿಯೋ ಬಗ್ಗೆ ಎಲ್ಲಿ ಚಿತ್ರೀಕರಿಸಲಾಗಿದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಇತ್ತೀಚೆಗೆ ತಮ್ಮ ತಂಡದ ಅಭಿಮಾನಿಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದ ಧೋನಿ, ನನಗೆ ‘ತಾಲಾ’ ಎಂಬ ಬಿರುದು ನೀಡಿದ್ದು ಅಪಾರ ಸಂತಸ ತಂದಿದೆ. ಅಭಿಮಾನಿಗಳು ನಾನು ಆಡುವಾಗ ತಾಲಾ ಎಂದೇ ಕರೆಯುತ್ತಾರೆ. ಟಿವಿ ಮೂಲಕ ಸಾಕಷ್ಟು ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸುತ್ತಾರೆ. ಅವರಿಂದ ನನಗೆ ಸಿಕ್ಕ ಗೌರವ ಇದಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು.

    https://www.youtube.com/watch?v=BLEeoj8hGJw