Tag: CSK

  • 1 ಓವರ್‌ನಲ್ಲಿ 5 ಸಿಕ್ಸ್ ಸಿಡಿಸಿ 36 ರನ್ ಚಚ್ಚಿದ ಜಡೇಜಾ

    1 ಓವರ್‌ನಲ್ಲಿ 5 ಸಿಕ್ಸ್ ಸಿಡಿಸಿ 36 ರನ್ ಚಚ್ಚಿದ ಜಡೇಜಾ

    ಮುಂಬೈ: ರವೀಂದ್ರ ಜಡೇಜಾ ಇಂದು ಒಂದೇ ಓವರ್‌ನಲ್ಲಿ  5 ಸಿಕ್ಸರ್ ಚಚ್ಚಿದರೆ, ಆರ್‌ಸಿಬಿಯ ಹರ್ಷಲ್ ಪಟೇಲ್ ದುಬಾರಿ ರನ್ ನೀಡಿದ ಬೌಲರ್ ಎಂಬ ಕುಖ್ಯಾತಿಗೆ ಪಾತ್ರರಾದರು.

    19ನೇ ಓವರ್ ಅಂತ್ಯಕ್ಕೆ ಚೆನ್ನೈ 4 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತ್ತು. ಜಡೇಜಾ 26 ರನ್ ಗಳಿಸಿದ್ದರೆ ಧೋನಿ 2 ರನ್ ಹೊಡೆದಿದ್ದರು. ಕೊನೆಯ ಓವರ್ ಎಸೆಯಲು ಹರ್ಷಲ್ ಪಟೇಲ್ ಬಂದಿದ್ದರೆ ಜಡೇಜಾ ಸ್ಟ್ರೈಕ್‍ನಲ್ಲಿದ್ದರು.

    ಮೊದಲ ಮೂರು ಎಸೆತವನ್ನು ಜಡೇಜಾ ಸಿಕ್ಸರ್‍ಗೆ ಅಟ್ಟಿದರು. ಮೂರನೇ ಎಸೆತ ನೋಬಾಲ್ ಆಗಿದ್ದ ಕಾರಣ ಫ್ರಿ ಹಿಟ್ ಸಿಕ್ಕಿತು. ಈ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದರೆ 4ನೇ ಎಸೆತದಲ್ಲಿ 2 ರನ್ ಬಂತು. 5ನೇ ಎಸೆತದಲ್ಲಿ ಸಿಕ್ಸರ್ ಬಂದರೆ 6ನೇ ಎಸೆತದಲ್ಲಿ 4 ರನ್ ಬಂತು.

    5 ಸಿಕ್ಸ್, 1 ಬೌಂಡರಿ, 2 ರನ್ ಹೊಡೆಯುವ ಮೂಲಕ ಜಡೇಜಾ 36 ರನ್ ಹೊಡೆದರೆ ಒಂದು ನೋಬಾಲ್ ಹಾಕಿದ ಕಾರಣ 37 ರನ್ ಬಂತು. ಈ ಹಿಂದೆ 2011ರಲ್ಲಿ ಕೊಚ್ಚಿನ್ ಟಸ್ಕರ್ಸ್ ತಂಡದ ಪರಮೇಶ್ವರನ್ ಆರ್‍ಸಿಬಿ ವಿರುದ್ಧದ ಪಂದ್ಯದಲ್ಲಿ 37 ರನ್ ನೀಡಿದ್ದರು.

    ಹರ್ಷಲ್ ಪಟೇಲ್ 4 ಓವರ್ ಎಸೆದು 3 ವಿಕೆಟ್ ಕಿತ್ತು 51 ರನ್ ನೀಡಿದರೆ ಚಹಲ್ 24 ರನ್ ನೀಡಿ 1 ವಿಕೆಟ್ ಕಿತ್ತರು. ಜಡೇಜಾ ಔಟಾಗದೇ 62 ರನ್(28 ಎಸೆತ, 4 ಬೌಂಡರಿ, 5 ಸಿಕ್ಸರ್) ಹೊಡೆದರೆ ಡು ಪ್ಲೆಸಿಸ್ 50 ರನ್(41 ಎಸೆತ, 5 ಬೌಂಡರಿ, 1 ಸಿಕ್ಸರ್, ಋತುರಾಜ್ ಗಾಯಕ್ವಾಡ್ 33 ರನ್(25 ಎಸೆತ, 4 ಬೌಂಡರಿ, 1ಸಿಕ್ಸರ್) ಹೊಡೆದು ಔಟಾದರು.

  • ಮೋಯಿನ್ ಅಲಿಯಿಂದ ಯಾವುದೇ ವಿಶೇಷ ಮನವಿ ಬಂದಿಲ್ಲ – ಸಿಎಸ್‍ಕೆ ಸ್ಪಷ್ಟನೆ

    ಮೋಯಿನ್ ಅಲಿಯಿಂದ ಯಾವುದೇ ವಿಶೇಷ ಮನವಿ ಬಂದಿಲ್ಲ – ಸಿಎಸ್‍ಕೆ ಸ್ಪಷ್ಟನೆ

    ಚೆನ್ನೈ: ಇಂಗ್ಲೆಂಡ್ ಆಟಗಾರ ಮೋಯಿನ್ ಅಲಿ ಅವರಿಂದ ಜೆರ್ಸಿಗೆ ಸಂಬಂಧಿಸಿದಂತೆ ಯಾವುದೇ ವಿಶೇಷ ಮನವಿ ಬಂದಿಲ್ಲ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೇಳಿದೆ.

    ಈ ಬಾರಿಯ ಸಿಎಸ್‍ಕೆ ತಂಡದ ಜೆರ್ಸಿಯಲ್ಲಿ ಬೀರ್ ಬ್ರ್ಯಾಂಡ್ ಎಸ್‍ಎನ್‍ಜೆ 10000ದ ಲೋಗೋ ಇರಲಿದೆ. ಧರ್ಮದ ಕಾರಣ ನೀಡಿ ಎಸ್‍ಎನ್‍ಜೆ ಡಿಸ್ಟಿಲರೀಸ್ ಕಂಪನಿಯ ಬೀರ್ ಬ್ರ್ಯಾಂಡ್ ಜೆರ್ಸಿಯನ್ನು ಧರಿಸುವುದಕ್ಕೆ ಮೋಯಿನ್ ಅಲಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿತ್ತು.

    ಅಷ್ಟೇ ಅಲ್ಲದೇ ಅಲಿ ಅವರ ಈ ವಿಶೇಷ ಮನವಿಯನ್ನು ಸಿಎಸ್‍ಕೆ ತಂಡ ಪುರಸ್ಕರಿಸಿತ್ತು ಎಂದು ವರದಿಯಾಗಿತ್ತು. ಈ ವರದಿಗೆ ಸಂಬಂಧಿಸಿ ಸಿಎಸ್‍ಕೆ ಮ್ಯಾನೇಜ್‍ಮೆಂಟ್ ಪ್ರತಿಕ್ರಿಯಿಸಿ ಮೊಯಿನ್ ಅಲಿ ಅವರಿಂದ ಈ ರೀತಿಯ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದೆ.

    ಸಿಎಸ್‍ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಸಿ ವಿಶ್ವನಾಥನ್ ಪ್ರತಿಕ್ರಿಯಿಸಿ, ಯಾವುದೇ ಲೋಗೋವನ್ನು ತೆಗೆಯುವಂತೆ ಮೊಯಿನ್ ಅಲಿ ಅವರಿಂದ ಯಾವುದೇ ಮನವಿ ಬಂದಿಲ್ಲ ಎಂದು ತಿಳಿಸಿದ್ದಾರೆ.

    ಕಳೆದ ವರ್ಷ ಅಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು. ಆದರೆ ಈ ಬಾರಿ ಆರ್‍ಸಿಬಿ ಅವರನ್ನು ಕೈ ಬಿಟ್ಟ ಹಿನ್ನೆಲೆಯಲ್ಲಿ ಚೆನ್ನೈ ತಂಡ 7 ಕೋಟಿ ರೂ. ಬಿಡ್ ಮಾಡಿ ಮಿನಿ ಹರಾಜಿನಲ್ಲಿ ಖರೀದಿಸಿತ್ತು.

    ಬರ್ಮಿಂಗ್‍ಹ್ಯಾಮ್‍ನಲ್ಲಿ ಜನಿಸಿದ ಅಲಿ ಒಟ್ಟು 19 ಐಪಿಎಲ್ ಪಂದ್ಯಗಳಿಂದ 20.6 ಸರಾಸರಿಯಲ್ಲಿ 309 ರನ್ ಗಳಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಒಟ್ಟು 3 ಪಂದ್ಯಗಳನ್ನು ಆಡಿದ್ದರು.

    2010ರ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆಲ್‍ರೌಂಡರ್ ಯೂಸೂಫ್ ಪಠಾಣ್ ಅವರು ಕಿಂಗ್‍ಫಿಶರ್ ಲೋಗೋಗೆ ಟೇಪ್ ಸುತ್ತಿದ ಜೆರ್ಸಿ ಧರಿಸಿ ಆಡಿದ್ದರು.

  • ಸೇನೆಗೆ ವಿಶೇಷ ಗೌರವ ಸಲ್ಲಿಸಿದ ಸಿಎಸ್‍ಕೆ

    ಸೇನೆಗೆ ವಿಶೇಷ ಗೌರವ ಸಲ್ಲಿಸಿದ ಸಿಎಸ್‍ಕೆ

    – ಸೇನೆಯ ಬಣ್ಣ ಮಿಶ್ರಿತ ಸಿಎಸ್‍ಕೆಯ ನೂತನ ಜೆರ್ಸಿ ಬಿಡುಗಡೆ ಮಾಡಿದ ಎಂ.ಎಸ್ ಧೋನಿ

    ಚೆನ್ನೈ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‍ಗೆ ಕೆಲವೇ ದಿನಗಳು ಬಾಕಿ ಇರುವಂತೆ ಕೆಲ ತಂಡಗಳು ತಯಾರಿಯಲ್ಲಿ ತೊಡಗಿಕೊಂಡಿದೆ. ಇತ್ತ ಮೂರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ತಂಡದ ಸೇನೆಯ ಬಣ್ಣ ಮಿಶ್ರಿತ ನೂತನ ಜೆರ್ಸಿಯನ್ನು ಅನಾವರಣಗೊಳಿಸಿದ್ದಾರೆ.

    2008 ರಿಂದ ಒಂದೇ ಮಾದರಿಯ ಜರ್ಸಿಯಲ್ಲಿ ಐಪಿಎಲ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಿಎಸ್‍ಕೆ ತಂಡ ಈ ಬಾರಿ ಜೆರ್ಸಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದೆ. ಭುಜದ ಭಾಗಗಳಲ್ಲಿ ಸೇನೆಯ ಬಣ್ಣ ಮಿಶ್ರಿತ ನೂತನ ಜೆರ್ಸಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ ತಂಡದ ನಾಯಕ ಧೋನಿಯ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿರುವ ಸಿಎಸ್‍ಕೆ ಫ್ರಾಂಚೈಸಿ, ಇದು ಸಿಎಸ್‍ಕೆ ತಂಡ ಸೇನೆಗೆ ನೀಡುವ ಗೌರವ ಎಂದು ಬರೆದುಕೊಂಡಿದೆ.

    ಕೆಲ ಸಮಯಗಳಿಂದ ಇಂತಹ ಅಲೋಚನೆ ನಮ್ಮಲ್ಲಿತ್ತು. ಇದೀಗ ಜೆರ್ಸಿಯಲ್ಲಿ ಸೇನೆಯ ಬಣ್ಣವನ್ನು ಬೆರೆಸುವ ಮೂಲಕ ಜನರಲ್ಲಿ ಭಾರತದ ಸೇನೆಯ ಬಗ್ಗೆ ಗೌರವ ಭಾವ ಮೂಡುವಂತೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದೇವೆ. ಸೇನೆಯ ಬಣ್ಣವನ್ನು ಬೆರೆಸುವ ಮೂಲಕ ಸೈನಿಕರಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ಅವರೇ ನಮ್ಮ ನಿಜವಾದ ಹೀರೋಗಳು ಎಂದು ತಂಡದ ಸಿಇಒ ಕೆ.ಎಸ್ ವಿಶ್ವನಾಥನ್ ಅಭಿಪ್ರಾಯಪಟ್ಟಿದ್ದಾರೆ.

    ಸಿಎಸ್‍ಕೆಯ ನೂತನ ಜೆರ್ಸಿಯ ಭುಜ ಭಾಗದಲ್ಲಿ 3 ಸ್ಟಾರ್‌ಗಳನ್ನು ಚಿತ್ರಿಸಲಾಗಿದ್ದು. ಈ ಸ್ಟಾರ್‌ಗಳು ಸಿಎಸ್‍ಕೆ ತಂಡ ಮೂರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವುದರ ದ್ಯೋತಕವಾಗಿದೆ. ಎದೆಯ ಭಾಗದಲ್ಲಿ ಸಿಎಸ್‍ಕೆ ತಂಡದ ಲಾಂಛನ ಇದೆ. ನೂತನ ಸಮವಸ್ತ್ರದಲ್ಲಿ ಮಿಂತ್ರಾ, ಗಲ್ಫ್, ನಿಪ್ಪಾನ್ ಪೇಂಟ್ಸ್, ಆಸ್ಟ್ರಲ್ ಪೈಪ್ಸ್ ಮತ್ತು ಎಸ್‍ಎನ್‍ಜೆ ಕಂಪನಿಗಳ ಹೆಸರಿದ್ದು ಇವುಗಳು ಸಿಎಸ್‍ಕೆ ತಂಡದ ಪ್ರಮುಖ ಪ್ರಯೋಜಕತ್ವವನ್ನು ಪಡೆದುಕೊಂಡಿದೆ.

    ಸಿಎಸ್‍ಕೆ ತಂಡ ಈ ವರೆಗೆ 11 ಬಾರಿ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಿದ್ದು ಇದರಲ್ಲಿ 2010, 2011 ಮತ್ತು 2018 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಹಾಗೆ 10 ಬಾರಿ ನಾಕ್‍ಔಟ್ ಪ್ರವೇಶಿಸಿ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿದೆ. ಆದರೆ ಕಳೆದ ಬಾರಿ ಯುಎಇಯಲ್ಲಿ ನಡೆದ ಐಪಿಎಲ್‍ನಲ್ಲಿ ಲೀಗ್ ಹಂತದಲ್ಲೇ ಹೊರ ಬಿದ್ದು ನಿರಾಸೆ ಮೂಡಿಸಿತ್ತು ಈ ಬಾರಿ ಮತ್ತೆ ಹೊಸ ಹುರುಪಿನೊಂದಿಗೆ ಮೈದಾನಕ್ಕಿಳಿಯಲು ತಯಾರಿ ಮಾಡಿಕೊಳ್ಳುತ್ತಿದೆ.

  • ಧೋನಿ ವಿರುದ್ಧ 3 ಸಿಕ್ಸ್‌ ಚಚ್ಚಿ ಸೇಡು ತೀರಿಸಿಕೊಂಡ ಅಕ್ಷರ್‌ ಪಟೇಲ್‌

    ಧೋನಿ ವಿರುದ್ಧ 3 ಸಿಕ್ಸ್‌ ಚಚ್ಚಿ ಸೇಡು ತೀರಿಸಿಕೊಂಡ ಅಕ್ಷರ್‌ ಪಟೇಲ್‌

    ಶಾರ್ಜಾ: ಕೊನೆಯ ಓವರ್‌ನಲ್ಲಿ ಮೂರು ಸಿಕ್ಸರ್‌ ಚಚ್ಚುವ ಮೂಲಕ ಅಕ್ಷರ್‌ ಪಟೇಲ್‌ ಅವರು ಧೋನಿ ವಿರುದ್ಧ ಸೇಡನ್ನು ತೀರಿಸಿಕೊಂಡಿದ್ದಾರೆ.

    ಹೌದು. ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಜಯವನ್ನು ತಂದಿಟ್ಟ ಅಕ್ಷರ್‌ ಪಟೇಲ್‌ ಮೂರು ಸಿಕ್ಸ್‌ ಸಿಡಿಸುವ ಮೂಲಕ ಧೋನಿ ವಿರುದ್ಧ ಸೇಡನ್ನು ತೀರಿಸಿಕೊಂಡಿದ್ದಾರೆ ಎಂಬ ಅಭಿಪ್ರಾಯವನ್ನು ನೆಟ್ಟಿಗರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

    2016 ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಐಪಿಎಲ್‌ನಿಂದ ಅಮಾನತುಗೊಂಡಿದ್ದ ಹಿನ್ನೆಲೆಯಲ್ಲಿ ಧೋನಿ ರೈಸಿಂಗ್‌ ಪುಣೆ ಸೂಪರ್‌ ಜೈಂಟ್ಸ್‌ ತಂಡವನ್ನು ಮುನ್ನಡೆಸುತ್ತಿದ್ದರು. ಈ ವೇಳೆ ಅಕ್ಷರ್‌ ಪಟೇಲ್‌ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಪರ ಆಡುತ್ತಿದ್ದರು.

    ವಿಶಾಖಪಟ್ಟಣದಲ್ಲಿ ಮೇ 21 ರಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡ 7 ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸಿತ್ತು.

    173 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಪುಣೆ ತಂಡಕ್ಕೆ ಕೊನೆಯ ಓವರ್‌ನಲ್ಲಿ 23 ರನ್‌ಗಳು ಬೇಕಿತ್ತು. ಅಕ್ಷರ್‌ ಪಟೇಲ್‌ ಎಸೆದ ಈ ಓವರ್‌ನಲ್ಲಿ 3 ಸಿಕ್ಸ್‌, ಒಂದು ಬೌಂಡರಿ ಹೊಡೆಯುವ ಮೂಲಕ ಧೋನಿ 23 ರನ್‌ ಚಚ್ಚಿದ್ದರು. ಕೊನೆಯ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು. ಧೋನಿ ಔಟಾಗದೇ 64 ರನ್‌(32 ಎಸೆತ, 4 ಬೌಂಡರಿ, 5 ಸಿಕ್ಸರ್‌) ಹೊಡೆದು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

    https://twitter.com/Romeo_theboss/status/1317547044068679682

    ಅಂದು ಮೂರು ಧೋನಿ 3 ಸಿಕ್ಸ್‌ ಹೊಡೆದಿದ್ದರೆ ಶನಿವಾರದ ಪಂದ್ಯದಲ್ಲಿ ಅಕ್ಷರ್‌ ಪಟೇಲ್‌ ಕೊನೆಯ ಓವರಿನಲ್ಲಿ 3 ಸಿಕ್ಸ್‌ ಹೊಡೆದಿದ್ದರು. 180 ರನ್‌ ಗಳ ಗುರಿಯನ್ನು ಪಡೆದ ಡೆಲ್ಲಿ ಕೊನೆಯ 12 ಎಸೆತಗಳಲ್ಲಿ 21 ರನ್‌ ಬೇಕಿತ್ತು. 19ನೇ ಓವರ್‌ ಎಸೆದ ಕರ್ರನ್‌ 4 ರನ್‌ ನೀಡಿ 1 ವಿಕೆಟ್‌ ಪಡೆದರು. ಕೊನೆಯ 6 ಎಸೆತದಲ್ಲಿ 17 ರನ್‌ ಬೇಕಿತ್ತು.

    ಕೊನೆಯ ಓವರ್‌ ಎಸೆದ ಜಡೇಜಾ ಮೊದಲ ಎಸೆತವನ್ನು ವೈಡ್‌ ಹಾಕಿದರು. ನಂತರದ ಎಸೆತದಲ್ಲಿ ಒಂದು ರನ್‌ ಬಂತು. ಸ್ಟ್ರೈಕ್‌ಗೆ ಅಕ್ಷರ್‌ ಪಟೇಲ್‌ ಬಂದರು. ನಂತರ 2 ಎಸೆತಗಳನ್ನು ಅಕ್ಷರ್‌ ಪಟೇಲ್‌ ಸಿಕ್ಸರ್‌ಗೆ ಅಟ್ಟಿದರು. 4ನೇ ಎಸೆತದಲ್ಲಿ 2 ರನ್‌ ಬಂತು. ಐದನೇಯ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ಪರಿಣಾಮ ಡೆಲ್ಲಿ ತಂಡ 5 ವಿಕೆಟ್‌ಗಳ ಜಯವನ್ನು ಪಡೆದು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

    29 ಎಸೆತಗಳಲ್ಲಿ 50 ರನ್‌ ಹೊಡೆದ ಶಿಖರ್‌ ಧವನ್‌ ಅಜೇಯ 101 ರನ್‌(58 ಎಸೆತ, 14 ಬೌಂಡರಿ, 1ಸಿಕ್ಸರ್‌) ಚಚ್ಚಿದರು. ಸ್ಫೋಟಕ ಬ್ಯಾಟಿಂಗ್‌ ಮಾಡಿ ಪಂದ್ಯದ ದಿಕ್ಕನ್ನೇ ಬದಲಾಯಿಸಿದ ಅಕ್ಷರ್‌ ಪಟೇಲ್‌ 21 ರನ್‌(5 ಎಸೆತ, 3 ಸಿಕ್ಸರ್‌) ಹೊಡೆದರು.

  • ಧೋನಿ ಮೇಲಿನ ಅಭಿಮಾನ – ಮನೆಗೆ ಮಹಿ ಚಿತ್ರ ಸಮೇತ ಹಳದಿ ಬಣ್ಣ

    ಧೋನಿ ಮೇಲಿನ ಅಭಿಮಾನ – ಮನೆಗೆ ಮಹಿ ಚಿತ್ರ ಸಮೇತ ಹಳದಿ ಬಣ್ಣ

    ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿಯವರ ಮೇಲಿರುವರ ಅಭಿಮಾನಕ್ಕೆ ಅವರ ಫ್ಯಾನ್ ಒಬ್ಬ ಮನೆಗೆ ಪೂರ್ತಿ ಹಳದಿ ಬಣ್ಣ ಹೊಡೆಸಿದ್ದಾನೆ.

    ಕಡಲೂರು ಜಿಲ್ಲೆಯ ತಿಟ್ಟಕುಡಿ ಬಳಿಯ ಅರಂಗೂರ್ ಗ್ರಾಮದ ದುಬೈನಲ್ಲಿ ಕೆಲಸ ಮಾಡುತ್ತಿರುವ ಆರ್. ಗೋಪಿಕೃಷ್ಣನ್ ಅವರು 2008ರಿಂದ ಧೋನಿಯವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಐಪಿಎಲ್ ಪಂದ್ಯಗಳನ್ನು ಆಡುತ್ತಿರುವ ದುಬೈನ ಕ್ರೀಡಾಂಗಣದ ಸಮೀಪದಲ್ಲಿಯೇ ಇವರು ಕೆಲಸ ಮಾಡುತ್ತಿದ್ದರು. ಕೊರೊನಾ ಕಾರಣದಿಂದ ಪಂದ್ಯಗಳನ್ನು ನೋಡಲು ಪ್ರೇಕ್ಷಕರಿಗೆ ಅನುಮತಿ ಇಲ್ಲದ ಸಲುವಾಗಿ ಈ ಬಾರಿ ಹೋಗಿಲ್ಲ.

    ದುಬೈನಲ್ಲಿ ಕೆಲಸ ಮಾಡುತ್ತಿದ್ದ ಗೋಪಿಕೃಷ್ಣನ್ ಅವರು, ಕೊರೊನಾ ಸಮಯದಲ್ಲಿ ತಮಿಳುನಾಡಿನಲ್ಲಿರುವ ತಮ್ಮ ಮನೆಗೆ ಬಂದಿದ್ದರು. ಇದೇ ವೇಳೆ ತಮ್ಮ ಮನೆಗೆ ಬಣ್ಣ ಹೊಡೆಸುವ ಕೆಲಸವನ್ನು ಇಟ್ಟುಕೊಂಡಿದ್ದರು. ಅದೇ ಸಮಯದಲ್ಲಿ ಐಪಿಎಲ್ ಆರಂಭವಾಗಿತ್ತು. ಜೊತೆಗೆ ಧೋನಿಯವರು ಉತ್ತಮ ಪ್ರದರ್ಶನ ನೀಡದೇ ಟೀಕೆಗೆ ಒಳಾಗುತ್ತಿದ್ದರು. ಹೀಗಾಗಿ ಅವರ ಮೇಲಿನ ಅಭಿಮಾನ ತೋರಿಸಲು 1.5 ಲಕ್ಷ ಖರ್ಚು ಮಾಡಿ ಧೋನಿಯವರ ಚಿತ್ರ ಮತ್ತು ಸಿಎಸ್‍ಕೆ ಲೋಗೋ ಸಮೇತ ಮನೆಗೆ ಹಳದಿ ಬಣ್ಣ ಹೊಡೆಸಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಗೋಪಿಯವರು, ಈ ಬಾರಿ ನನ್ನ ನೆಚ್ಚಿನ ತಂಡಕ್ಕೆ ಮೈದಾನದಲ್ಲಿ ಹೋಗಿ ಚೀಯರ್ ಮಾಡಲು ಆಗುತ್ತಿಲ್ಲ ಎಂದು ಬೇಸರವಾಗುತ್ತಿದೆ. ಆದರೆ ಮನೆಗೆ ಈ ರೀತಿ ಪೈಂಟ್ ಮಾಡಿಸಿದ್ದು, ಖುಷಿಕೊಟ್ಟಿದೆ. ನಮ್ಮ ಅಪ್ಪ-ಅಮ್ಮ ಮತ್ತು ಮನೆಯವರೆಲ್ಲರೂ ಕ್ರಿಕೆಟ್ ಪ್ರೇಮಿಗಳಾಗಿದ್ದು, ನಾನು ಈ ರೀತಿಯ ಬಣ್ಣ ಹೊಡೆಸುತ್ತೇನೆ ಎಂದಾಗ ಅವರು ಕೂಡ ಸಂತೋಷದಿಂದ ಒಪ್ಪಿಕೊಂಡರು ಎಂದು ಹೇಳಿದ್ದಾರೆ.

    ಜೊತೆಗೆ ಈ ಧೋನಿ ಬಗ್ಗೆ ಕೇಳಿ ಬರುತ್ತಿರುವ ಟೀಕೆಗಳ ಬಗ್ಗೆ ಮಾತನಾಡಿ, ಈಗ ನಡೆಯುತ್ತಿರುವ ಐಪಿಎಲ್‍ನಲ್ಲಿ ಧೋನಿ ಉತ್ತಮ ಪ್ರದರ್ಶನ ತೋರುತ್ತಿಲ್ಲ ಎಂದು ಕೆಲವರು ಟೀಕೆ ಮಾಡುತ್ತಾರೆ. ಈ ಋಣತ್ಮಾಕ ವಿಚಾರಗಳನ್ನು ಹೊಡೆದೊಡಿಸಲೆಂದೇ ನಾನು ಮನೆಗೆ ಈ ರೀತಿ ಪೈಂಟ್ ಮಾಡಿಸಿದ್ದೇನೆ. ಈಗ ಜನರು ಧೋನಿಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಆದರೆ ಅವರು ಒಂದು ಕಾಲದಲ್ಲಿ ಬೆಸ್ಟ್ ಫಿನಿಶರ್ ಎಂಬುದನ್ನು ಮರೆತ್ತಿದ್ದಾರೆ ಎಂದಿದ್ದಾರೆ.

    ಗೋಪಿಕೃಷ್ಣನ್ ಅವರು ಮೊದಲು ಪೈಂಟ್ ಮಾಡಿಸಲು ತೀರ್ಮಾನ ಮಾಡಿದಾಗ, ಧೋನಿ ಚಿತ್ರವನ್ನು ಬಿಡಿಸುವ ಪೈಂಟರ್ ಸಿಗದೇ ಹುಡುಕಿದ್ದಾರೆ. ನಂತರ ಅವರು ತಮ್ಮ ಎಲ್ಲ ಸ್ನೇಹಿತರಿಗೂ ಹೇಳಿದ್ದಾರೆ. ಬಳಿಕ ತಿಟ್ಟಕುಡಿ ಜಿಲ್ಲೆಯಲ್ಲೇ ಪೈಂಟರ್ ಸಿಕ್ಕಿದ್ದು, ಆನ್‍ಲೈನ್‍ನಲ್ಲಿ ಧೋನಿ ಮತ್ತು ಸಿಎಸ್‍ಕೆ ತಂಡದ ಲೋಗೋವನ್ನು ಡೌನ್‍ಲೋಡ್ ಮಾಡಿಕೊಟ್ಟು ಪೇಟಿಂಗ್ ಮಾಡಿಸಿದ್ದಾರೆ. ಮನೆಗೆ ಹೋಮ್ ಆಫ್ ಧೋನಿ ಫ್ಯಾನ್ ಎಂದು ಹೆಸರಿಡಲಾಗಿದೆ. ಜೊತೆಗೆ ಮನೆಯ ಮುಂದೆ ಧೋನಿ ಚಿತ್ರವನ್ನು ಬಿಡಿಸಲಾಗಿದೆ.

    ಗೋಪಿಕೃಷ್ಣನ್ ಅವರ ಅಭಿಮಾನಕ್ಕೆ ಮೆಚ್ಚಿಕೊಂಡು ಟ್ವೀಟ್ ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ, ತಮಿಳುನಾಡಿನ ಅರಂಗೂರ್‍ನಲ್ಲಿರುವ ಸೂಪರ್ ಫ್ಯಾನ್ ಗೋಪಿ ಕೃಷ್ಣನ್ ಮತ್ತು ಅವರ ಕುಟುಂಬವು ತಮ್ಮ ನಿವಾಸವನ್ನು ಧೋನಿ ಫ್ಯಾನ್‍ನ ಮನೆ ಎಂದು ಹೆಸರಿಟ್ಟಿದ್ದಾರೆ. ನಮ್ಮ ಹೃದಯವನ್ನು ತುಂಬುವ ಸೂಪರ್ ಡೂಪರ್ ಗೌರವ ಎಂದು ಬರೆದುಕೊಂಡಿದ್ದಾರೆ.

  • ಚೆನ್ನೈಗೆ 20 ರನ್‍ಗಳ ಜಯ – ಮತ್ತೆ ಮರುಕಳಿಸಿದ ಇತಿಹಾಸ

    ಚೆನ್ನೈಗೆ 20 ರನ್‍ಗಳ ಜಯ – ಮತ್ತೆ ಮರುಕಳಿಸಿದ ಇತಿಹಾಸ

    ದುಬೈ: ಚೆನ್ನೈ ಬೌಲರ್ ದಾಳಿಗೆ ತತ್ತರಿಸಿದ ಸನ್‍ರೈಸರ್ಸ್ ಹೈದರಾಬಾದ್ ತಂಡ ಮಹತ್ವದ ಪಂದ್ಯದಲ್ಲಿ ಸೋಲುಂಡಿದ್ದು, ಧೋನಿ ಪಡೆ 20 ರನ್ ಗೆಲುವು ಪಡೆದಿದೆ. ಅಲ್ಲದೇ 6 ಅಂಕಗಳೊಂದಿಗೆ ಅಂಕಪಪಟ್ಟಿಯಲ್ಲಿ ಚೆನ್ನೈ 6ನೇ ಸ್ಥಾನಕ್ಕೇರಿದೆ.

    ಚೆನ್ನೈ ಇಂದಿನ ಪಂದ್ಯದಲ್ಲಿ ಗೆಲುವು ಪಡೆಯುವದರೊಂದಿಗೆ ಇತಿಹಾಸ ಮರುಕಳಿಸಿದೆ. ಐಪಿಎಲ್ 2010ರ ಆವೃತ್ತಿಯಲ್ಲಿ ಮೊದಲ 7 ಪಂದ್ಯಗಳು ಮುಕ್ತಾಯವಾದ ಸಂದರ್ಭದಲ್ಲಿ 7ನೇ ಸ್ಥಾನದಲ್ಲಿದ್ದ ಚೆನ್ನೈ ತಂಡ ಆ ಬಳಿಕ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಚಾಂಪಿಯನ್ ಆಗಿತ್ತು. ಈ ವೇಳೆಯೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 8ನೇ ಸ್ಥಾನದಲ್ಲಿತ್ತು. ಅಲ್ಲದೇ ಮುಂಬೈ ತಂಡ ಕೂಡ ಅಂಕಪಟ್ಟಿಯಲ್ಲಿ ಟಾಪ್ ನಂ.1 ಸ್ಥಾನದಲ್ಲಿತ್ತು. ಸದ್ಯ ಹೈದರಾಬಾದ್ ವಿರುದ್ಧ ಗೆಲುವಿನೊಂದಿಗೆ ಇತಿಹಾಸ ಮರುಕಳಿಸುವ ಮುನ್ಸೂಚನೆಯನ್ನ ನೀಡಿದೆ.

    ಚೆನ್ನೈ ನೀಡಿದ್ದ 168 ರನ್ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 147 ರನ್ ಗಳಿಸಲಷ್ಟೇ ಶಕ್ತವಾಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿತ್ತು.

    168 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ಆರಂಭಿಕರಾದ ವಾರ್ನರ್, ಬೈರ್ ಸ್ಟೋವ್ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ವಾರ್ನರ್ 9 ರನ್, ಬೈರ್ ಸ್ಟೋವ್ 23 ರನ್, ಮನೀಷ್ ಪಾಂಡೆ 4 ರನ್ ಗಳಸಿ ವಿಕೆಟ್ ಪೆವಿಲಿಯನ್ ತೆರಳಿದರು. 10 ಓವರ್ ಗಳಲ್ಲಿ 59 ರನ್ ಗಳಿಸಿದ್ದ ಎಸ್‍ಆರ್ ಎಚ್ ಪ್ರಮುಖ 3 ವಿಕೆಟ್ ಕಳೆದುಕೊಂದು ಸಂಕಷ್ಟಕ್ಕೆ ಸಿಲುಕಿತ್ತು.

    ವಿಕೆಟ್ ಉರುಳುತ್ತಿದ್ದರೂ ಭರವಸೆಯ ಬ್ಯಾಟಿಂಗ್‍ನೊಂದಿಗೆ ವಿಲಿಯಮ್ಸ್ ಸನ್ 39 ಎಸೆತಗಳಲ್ಲಿ 7 ಬೌಂಡರಿ ಗಳೊಂದಿಗೆ 57 ರನ್ ಗಳಿಸಿ ತಂಡವನ್ನು ಗೆಲುವಿನ ಸನಿಹ ತರುವ ಪ್ರಯತ್ನ ಮಾಡಿದರು. ಆದರೆ ಕರಣ್ ಶರ್ಮಾ ಬೌಲಿಂಗ್‍ನಲ್ಲಿ ಭಾರೀ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದರು. ಉಳಿದಂತೆ ಬೇರೆಯಾವುದೇ ಆಟಗಾರಿಂದ ಉತ್ತಮ ಪ್ರದರ್ಶನ ಬರಲಿಲ್ಲ. ಗರ್ಗ್ 16 ರನ್, ವಿಜಯ್ ಶಂಕರ್ 12 ರನ್, ನದೀಮ್ 5 ರನ್ ಗಳಿಸಿ ಔಟಾದರೆ, ರಶೀದ್ ಖಾನ್ ಹಿಟ್ ವಿಕೆಟ್ ಆಗುವ ಪೆವಿಲಿಯನ್ ಸೇರಿದರು.

    ಚೆನ್ನೈ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಕರಣ್ ಶರ್ಮಾ, ಬ್ರಾವೋ ತಲಾ 2 ವಿಕೆಟ್ ಹಾಗೂ ಕರ್ರನ್, ಜಡೇಜಾ, ಠಾಕೂರ್ ತಲಾ 1 ವಿಕೆಟ್ ಪಡೆದು ಚೆನ್ನೈ ಗೆಲುವಿಗೆ ಕಾರಣರಾದರು.

    ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಟಾಪ್ ಅರ್ಡರ್ ಆಟಗಾರರು ಉತ್ತಮ ಪ್ರದರ್ಶನ ನೀಡಿದ ಕಾರಣದಿಂದ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು.

    ಡುಪ್ಲೆಸಿಸ್ ಇನ್ನಿಂಗ್ಸ್ ನಲ್ಲಿ ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರೆ, ಕರ್ರನ್ 21 ಎಸೆತಗಳಲ್ಲಿ 31 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಬಳಿಕ ಬಂದ ರಾಯುಡು 34 ಎಸೆತಗಳಲ್ಲಿ 41 ರನ್, ವ್ಯಾಟ್ಸನ್ 38 ಎಸೆತಗಳಲ್ಲಿ 42 ರನ್ ಗಳಿಸಿದರು. ಈ ಜೋಡಿ 3ನೇ ವಿಕೆಟ್‍ಗೆ 81 ರನ್ ಜೊತೆಯಾಟ ನೀಡಿತ್ತು. ಧೋನಿ 13 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರೆ, ಬ್ರಾವೋ ಶೂನ್ಯ ಸಾಧನೆ ಮಾಡಿದರು. ಅಂತಿಮವಾಗಿ ಜಡೇಜಾ 25 ರನ್, ಚಹರ್ 2 ರನ್ ಗಳಿಸಿ ಅಜೇಯರಾಗಿ ಉಳಿದರು.

    ಹೈದರಾವಾದ್ ಪರ ಸಂದೀಪ್ ಶರ್ಮಾ, ಖಲೀಲ್ ಅಹ್ಮದ್, ನಟರಾಜನ್ ತಲಾ 2 ವಿಕೆಟ್ ಪಡೆದರು. ಪಂದ್ಯದಲ್ಲಿ ಯಾವುದೇ ವಿಕೆಟ್ ಪಡೆಯದೆ ರಶೀದ್ ಖಾನ್ ನಿರಾಸೆ ಮೂಡಿಸಿದ್ದರು.

  • ಕೆಲ ಸಿಎಸ್‍ಕೆ ಆಟಗಾರರು ತಂಡದಲ್ಲಿ ತಮ್ಮ ಸ್ಥಾನವನ್ನು ಸರ್ಕಾರಿ ಕೆಲಸ ಅಂದ್ಕೊಂಡಿದ್ದಾರೆ: ಸೆಹ್ವಾಗ್

    ಕೆಲ ಸಿಎಸ್‍ಕೆ ಆಟಗಾರರು ತಂಡದಲ್ಲಿ ತಮ್ಮ ಸ್ಥಾನವನ್ನು ಸರ್ಕಾರಿ ಕೆಲಸ ಅಂದ್ಕೊಂಡಿದ್ದಾರೆ: ಸೆಹ್ವಾಗ್

    ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಸದಾ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಸಿಎಸ್‍ಕೆ ಆಟಗಾರರ ವಿರುದ್ಧ ಗಂಭೀರ ಟೀಕೆ ಮಾಡಿದ್ದಾರೆ.

    2020ರ ಐಪಿಎಲ್ ಆವೃತ್ತಿಯಲ್ಲಿ ನಾಲ್ಕು ಸೋಲುಗಳನ್ನು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ 6ನೇ ಸ್ಥಾನವನ್ನು ಪಡೆದುಕೊಂಡಿದೆ. ಅದರಲ್ಲೂ ಕೋಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಗೆಲುವ ಅವಕಾಶವನ್ನು ಕೈಚೆಲ್ಲಿದ್ದ ಸಿಎಸ್‍ಕೆ ಆಟಗಾರರ ವಿರುದ್ಧ ಭಾರೀ ಟೀಕೆ ಕೇಳಿಬಂದಿತ್ತು. ಇದರ ನಡುವೆಯೇ ಸೆಹ್ವಾಗ್ ಕೂಡ ತಂಡದ ಆಟಗಾರರ ಕುರಿತು ಟೀಕೆ ಮಾಡಿದ್ದಾರೆ. ಇದನ್ನೂ ಓದಿ: ಮುಂದಿನ ಪಂದ್ಯದಲ್ಲಿ ಗ್ಲುಕೋಸ್ ತೆಗೆದುಕೊಂಡು ಬನ್ನಿ- ಸಿಎಸ್‍ಕೆಗೆ ಸೆಹ್ವಾಗ್ ಸಲಹೆ

    ಕೋಲ್ಕತ್ತಾ ತಂಡ ನೀಡಿದ್ದ ಗೆಲುವಿನ ಗುರಿಯನ್ನು ಚೆನ್ನೈ ಸುಲಭವಾಗಿ ಗಳಿಸಬಹುದಿತ್ತು. ಆದರೆ ಕೇದರ್ ಜಾದವ್, ರವೀಂದ್ರ ಜಡೇಜಾ ಆಡಿದ ಡಾಟ್ ಬಾಲ್ಸ್ ತಂಡಕ್ಕೆ ಯಾವುದೇ ಪ್ರಯೋಜನ ಆಗಲಿಲ್ಲ. ನನ್ನ ಪ್ರಕಾರ ಚೆನ್ನೈ ತಂಡದ ಕೆಲ ಬ್ಯಾಟ್ಸ್ ಮನ್ಸ್ ತಮಗೆ ಸಿಕ್ಕಿರುವ ಸ್ಥಾನವನ್ನು ಸರ್ಕಾರಿ ಉದ್ಯೋಗ ಎಂದು ಭಾವಿಸಿದ್ದಾರೆ. ಉತ್ತಮ ಪ್ರದರ್ಶನ ನೀಡಿದರೂ, ನೀಡದಿದ್ದರೂ ಅವರಿಗೆ ತಲುಪಬೇಕಾದ ವೇತನ ತಲುಪತ್ತದೆ ಎಂದು ಅವರಿಗೆ ತಿಳಿದಿದೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಧೋನಿ ನಾಲ್ಕನೇ ಕ್ರಮಾಂಕದಲ್ಲಿ ಆಡುವಷ್ಟರಲ್ಲಿ ಭಾರತಕ್ಕೆ ಬುಲೆಟ್ ಟ್ರೈನ್ ಬರುತ್ತೆ: ಸೆಹ್ವಾಗ್

    ಇತ್ತ ತಮ್ಮ ಫೇಸ್‍ಬುಕ್ ಸೀರಿಸ್ ವಿರು ಕೀ ಬೈಟಕ್‍ನಲ್ಲಿಯೂ ಜಾದವ್ ಬ್ಯಾಟಿಂಗ್ ಕುರಿತು ಟೀಕೆ ಮಾಡಿರುವ ಸೆಹ್ವಾಗ್, ಜಾದವ್ ಉಪಯೋಗಕ್ಕೆ ಬಾರದ ಅಲಂಕಾರಿಕ ವಸ್ತುವಂತೆ ಇದ್ದಾರೆ. 12 ಎಸೆತಗಳಲ್ಲಿ 7 ರನ್ ಗಳಿಸಿದ ಜಾದವ್‍ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಬೇಕಿತ್ತು ಎಂದು ಟೀಕೆ ಮಾಡಿದ್ದಾರೆ.

    ಈಗಾಗಲೇ ಐಪಿಎಲ್‍ನಲ್ಲಿ 8 ಬಾರಿ ಪೈನಲ್ ಪ್ರವೇಶ ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಆವೃತ್ತಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡುತ್ತಿಲ್ಲ. ಇದುವರೆಗೂ ಆಡಿರುವ 6 ಪಂದ್ಯಗಳಲ್ಲಿ 4ರಲ್ಲಿ ಸೋಲುಂಡಿರುವ ಸಿಎಸ್‍ಕೆ, ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.

  • ‘ರಾಹುಲ್, ನಾಮ್ ತೋ ಸುನಾ ಹೋಗಾ’- ತ್ರಿಪಾಠಿಗೆ ಶಾರುಖ್ ಖಾನ್ ಮೆಚ್ಚುಗೆ

    ‘ರಾಹುಲ್, ನಾಮ್ ತೋ ಸುನಾ ಹೋಗಾ’- ತ್ರಿಪಾಠಿಗೆ ಶಾರುಖ್ ಖಾನ್ ಮೆಚ್ಚುಗೆ

    ಅಬುಧಾಬಿ: ಕೋಲ್ಕತ್ತಾ ನೈಟ್ ರೈಡರ್ಸ್ ಸಹ ಮಾಲೀಕ ಶಾರುಖ್ ಖಾನ್ ತಮ್ಮ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಡೆದ 10 ರನ್ ಗಳ ಜಯವನ್ನು ಸಿನಿಮಾ ಡೈಲಾಗ್ ಹೇಳುವ ಮೂಲಕ ಸಂಭ್ರಮಿಸಿದ್ದಾರೆ.

    ಪಂದ್ಯದಲ್ಲಿ 81 ರನ್ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದ ರಾಹುಲ್ ತ್ರಿಪಾಠಿಗೆ ಮೆಚ್ಚುಗೆ ಸೂಚಿಸಿದ ಶಾರುಖ್ ಕಾನ್, ಕುಚ್ ಕುಚ್ ಹೋತಾ ಹೈ ಸಿನಿಮಾದ ನಾಮ್ ತೋ ಸುನಾ ಹೋಗಾ ಎಂಬ ಡೈಲಾಗ್ ಹೇಳುವ ಮೂಲಕ ಶಹಭಾಸ್ ಗಿರಿ ನೀಡಿದ್ದಾರೆ.

    ರಾಹುಲ್ ಹೆಸರು ಶಾರುಖ್ ಖಾನ್ ಅವರ ಚಲನಚಿತ್ರ ವೃತ್ತಿಜೀವನದಲ್ಲಿ ಹಲವು ಸಿನಿಮಾಗಳಲ್ಲಿ ಬಳಸಿದ ಸ್ಕ್ರೀನ್ ನೇಮ್‍ಗಳಲ್ಲಿ ಒಂದು. 1197 ರಲ್ಲಿ ತೆರೆಕಂಡಿದ್ದ ‘ದಿಲ್ ತೋ ಪಾಗಲ್ ಹೈ’ ಸಿನಿಮಾದಲ್ಲಿ ಮೊದಲ ಬಾರಿಗೆ ರಾಹುಲ್ ಹೆಸರು ಬಳಸಲಾಗಿತ್ತು.

    ಇತ್ತ ನಿನ್ನೆಯ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಶುಭ್‍ಮನ್ ಗಿಲ್ ಅವರೊಂದಿಗೆ ರಾಹುಲ್ ತ್ರಿಪಾಠಿರನ್ನು ಕಣಕ್ಕಿಳಿಸುವ ಮೂಲಕ ಹೊಸ ಆರಂಭಿಕ ಜೋಡಿಗೆ ಅವಕಾಶ ನೀಡಿತ್ತು. ಸಿಕ್ಕ ಅವಕಾಶವನ್ನು ಜವಾಬ್ದಾರಿಯುತವಾಗಿ ಬಳಿಸಿಕೊಂಡ ತ್ರಿಪಾಠಿ ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದ್ದರು. 51 ಎಸೆತಗಳಲ್ಲಿ 81 ಸಿಡಿಸಿ ಮಿಂಚಿದ 29 ವರ್ಷದ ತ್ರಿಪಾಠಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಇದುವರೆಗೂ ರಾಹುಲ್ ತ್ರಿಪಾಠಿ 20 ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದಿದ್ದು, 34.61ರ ಸರಾಸರಿಯಲ್ಲಿ 650 ಪ್ಲಸ್ ರನ್ ಗಳಿಸಿದ್ದಾರೆ.

  • ಚರ್ಚೆಗೆ ಕಾರಣವಾಯ್ತು ಧೋನಿ ವಯಸ್ಸಿನ ಕುರಿತ ಇರ್ಫಾನ್ ಪಠಾಣ್ ಕಾಮೆಂಟ್

    ಚರ್ಚೆಗೆ ಕಾರಣವಾಯ್ತು ಧೋನಿ ವಯಸ್ಸಿನ ಕುರಿತ ಇರ್ಫಾನ್ ಪಠಾಣ್ ಕಾಮೆಂಟ್

    ಮುಂಬೈ: ಐಪಿಎಲ್ 2020ರ ಆವೃತ್ತಿಯಲ್ಲಿ ಧೋನಿ ಹೆಚ್ಚು ಅನುಭವ ಹೊಂದಿರುವ ಆಟಗಾರನಾಗಿದ್ದು, 39ನೇ ವಯಸ್ಸಿನಲ್ಲೂ ಭರ್ಜರಿಯಾಗಿ ರನ್ ಓಡುವ ಮೂಲಕ ತಮ್ಮ ಫಿಟ್ನೆಸ್ ಸಾಬೀತು ಪಡಿಸುತ್ತಿದ್ದಾರೆ. ಇದರ ನಡುವೆಯೇ ಟೀಂ ಇಂಡಿಯಾ ಮಾಜಿ ಆಟಗಾರ ಇರ್ಫಾನ್ ಪಠಾಣ್ ಮಾಡಿರುವ ಒಂದು ಟ್ವೀಟ್ ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ.

    ಕಳೆದ ಪಂದ್ಯದಲ್ಲಿ ಧೋನಿ 36 ಎಸೆತಗಳಲ್ಲಿ 4 ಬೌಂಡರಿ, ಸಿಕ್ಸರ್ ನೆರವಿನಿಂದ 47 ರನ್ ಗಳಿಸಿದ್ದರು. ಧೋನಿ ಕ್ರಿಸ್‍ನಲ್ಲಿದ್ದರೂ ಚೆನ್ನೈ ತಂಡ 7 ರನ್ ಅಂತರದಲ್ಲಿ ಸೋಲುಂಡಿತ್ತು. ಇದಾದ ಬಳಿಕ ಧೋನಿ ವಯಸ್ಸಿನ ಕುರಿತು ಚರ್ಚೆ ಜೋರಾಗಿತ್ತು. ಈ ನಡುವೆ ಟ್ವೀಟ್ ಮಾಡಿರುವ ಇರ್ಫಾನ್ ಪಠಾಣ್, ಕೆಲವರಿಗೆ ವಯಸ್ಸು ಕೇವಲ ನಂಬರ್ ಅಷ್ಟೇ. ಆದರೆ ಮತ್ತೊಬ್ಬರಿಗೆ ತಂಡದಿಂದ ತೆಗೆದು ಹಾಕಲು ಕಾರಣವಾಗುತ್ತದೆ ಎಂದು ಧೋನಿ ಹೆಸರನ್ನು ಪ್ರಸ್ತಾಪ ಮಾಡದೇ ಪರೋಕ್ಷವಾಗಿ ಕಾಮೆಂಟ್ ಮಾಡಿದ್ದಾರೆ.

    ಸದ್ಯ ಇರ್ಫಾನ್ ಮಾಡಿರುವ ಕಾಮೆಂಟ್ ಟಾಕ್ ಆಫ್ ದಿ ಟೌನ್ ಆಗಿ ಮಾರ್ಪಾಡಾಗಿದ್ದು, ಹಲವರು ಪರ-ವಿರೋಧ ಪ್ರತಿಕ್ರಿಯೆಗಳನ್ನು ನೀಡಿ ರೀ ಟ್ವೀಟ್ ಮಾಡುತ್ತಿದ್ದಾರೆ. ಟೀಂ ಇಂಡಿಯಾ ತಂಡದಲ್ಲಿ ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಯುವರಾಜ್ ಸಿಂಗ್, ಯೂಸಫ್ ಪಠಾಣ್, ಇರ್ಫಾನ್ ಪಠಾಣ್ ಸೇರಿದಂತೆ ಹಲವು ಆಟಗಾರನನ್ನು ವಯಸ್ಸಿನ ಕಾರಣದಿಂದಲೇ ಕೈಬಿಡಲಾಗಿತ್ತು. ಹಲವು ಆಟಗಾರರಿಗೆ ವಿದಾಯ ಪಂದ್ಯ ಆಡಲು ಸಹ ಅವಕಾಶ ನೀಡದೆ ಕ್ರಿಕೆಟ್‍ನಿಂದ ದೂರ ಮಾಡಲಾಗಿತ್ತು ಎಂದು ಹಲವು ಸಾಮಾಜಿಕ ಜಾಲತಾಣದಲ್ಲಿ ಇರ್ಫಾನ್ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಐಪಿಎಲ್ 2020ರ ಆವೃತ್ತಿಯಲ್ಲಿ ಹೈದರಾಬಾದ್ ವಿರುದ್ಧ ಸೋಲುಂಡ ಚೆನ್ನ ತಂಡ 6 ವರ್ಷಗಳ ಬಳಿಕ ಸಸತವಾಗಿ ಮೂರು ಪಂದ್ಯಗಳನ್ನು ಸೋಲುಂಡ ಕೆಟ್ಟ ದಾಖಲೆ ಬರೆದಿದೆ. ಟೂರ್ನಿಯ ಅಂಕಪಟ್ಟಿಯಲ್ಲಿ 2 ಅಂಕಗಳೊಂದಿಗೆ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಚೆನ್ನೈ ವಿರುದ್ಧ ಗೆಲುವು ಪಡೆದ ಹೈದರಾಬಾದ್ ತಂಡ 4 ಅಂಕಗಳೊಂದಿಗೆ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ.

  • ಸ್ಟೇಡಿಯಂ ಹೊರಕ್ಕೆ ಧೋನಿ ಸಿಕ್ಸರ್- ಚೆಂಡನ್ನು ಮನೆಗೆ ಕೊಂಡೊಯ್ದ ಲಕ್ಕಿ ಮ್ಯಾನ್

    ಸ್ಟೇಡಿಯಂ ಹೊರಕ್ಕೆ ಧೋನಿ ಸಿಕ್ಸರ್- ಚೆಂಡನ್ನು ಮನೆಗೆ ಕೊಂಡೊಯ್ದ ಲಕ್ಕಿ ಮ್ಯಾನ್

    ಶಾರ್ಜಾ: ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೋಲುಂಡರೂ, ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಅಭಿಮಾನಿಗಳ ಬೇಸರವನ್ನು ದೂರ ಮಾಡಲು ಧೋನಿ ಯಶಸ್ವಿಯಾಗಿದ್ದಾರೆ.

    ರಾಯಲ್ಸ್ ವಿರುದ್ಧ ಟಾಮ್ ಕರ್ರನ್ ಎಸೆದ ಅಂತಿಮ ಓವರಿನಲ್ಲಿ ಧೋನಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ್ದರು. ಓವರಿನ 3ನೇ ಎಸೆತದಲ್ಲಿ ಮಿಡ್ ವಿಕೆಟ್‍ನತ್ತ ಸಿಕ್ಸರ್ ಬಾರಿಸಿದರೆ, 4ನೇ ಎಸೆತದಲ್ಲಿ ಬರೋಬ್ಬರಿ 92 ಮೀಟರ್ ದೂರಕ್ಕೆ ಸಿಕ್ಸರ್ ಸಿಡಿದ್ದರು.

    ಧೋನಿ ಸಿಡಿಸಿದ ಸಿಕ್ಸರ್‌ಗೆ ಚೆಂಡು ಕ್ರೀಡಾಂಗಣದ ಹೊರಕ್ಕೆ ಬಿದ್ದಿತ್ತು. ಕೂಡಲೇ ವ್ಯಕ್ತಿಯೊಬ್ಬ ಚೆಂಡನ್ನು ಮನೆಗೆ ಕೊಂಡೊಯ್ದಿದ್ದಾನೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ವೀಕ್ಷಕ ವಿವರಣೆಕಾರರು, ಈ ಚೆಂಡನ್ನು ಅಭಿಮಾನಿ ಖಂಡಿತ ಕೊಡುವುದಿಲ್ಲ. ಜೀವಮಾನದಲ್ಲಿ ಆತನಿಗೆ ಸಿಕ್ಕ ಅತ್ಯಮೂಲ್ಯ ಬಹುಮಾನವಿದು ಎಂದು ಹೇಳಿದ್ದಾರೆ.

    https://www.instagram.com/p/CFcvaJpFsD2/?utm_source=ig_web_copy_link

    ಪಂದ್ಯದಲ್ಲಿ ಧೋನಿ 17 ಎಸೆತಗಳಲ್ಲಿ 3 ಸಿಕ್ಸರ್ ಗಳೊಂದಿಗೆ 29 ರನ್ ಗಳಿಸಿದ್ದರು. ಅಂತಿ ಓವರ್ ವೇಳೆಗೆ ಚೆನ್ನೈ ಗೆಲುವಿಗೆ 6 ಎಸೆತಗಳಲ್ಲಿ 38 ರನ್ ಬೇಕಾಗಿತ್ತು. ಸೋಲು ಖಚಿತವಾದರೂ ತಂಡದ ರನ್ ರೇಟ್ ಕಡಿಮೆಯಾಗದಂತೆ ನೋಡಿಕೊಂಡ ಧೋನಿ, ಹ್ಯಾಟಿಕ್ ಸಿಕ್ಸರ್ ಸಿಡಿಸಿದ್ದರು. ಧೋನಿಯ ಸಿಕ್ಸರ್ ಗಳು ಚೆನ್ನೈ ಅಭಿಮಾನಿಗಳ ಸೋಲಿನ ಬೇಸರವನ್ನು ಸ್ವಲ್ಪ ಕಡಿಮೆ ಮಾಡಿದೆ.

    ಉಳಿಂತೆ ಚೆನ್ನೈ, ರಾಜಸ್ಥಾನ ನಡುವಿನ ಪಂದ್ಯದಲ್ಲಿ ಬರೋಬ್ಬರಿ 33 ಸಿಕ್ಸರ್ ಗಳನ್ನು ಇತ್ತಂಡಗಳ ಬ್ಯಾಟ್ಸ್ ಮನ್ಸ್ ಸಿಡಿಸಿದ್ದು ಹೊಸ ದಾಖಲೆಯಾಗಿದೆ. ಆರ್‍ಆರ್ ತಂಡ 17 ಸಿಕ್ಸರ್ ಸಿಡಿಸಿದರೇ, ಸಿಎಸ್‍ಕೆ ತಂಡ 16 ಸಿಕ್ಸರ್ ಬಂದಿದ್ದವು. ಈ ಹಿಂದೆ 2018ದಲ್ಲಿ ಚೆನ್ನೈ ಹಾಗೂ ಆರ್.ಸಿ.ಬಿ ನಡುವಿನ ಪಂದ್ಯದಲ್ಲಿ 33 ಸಿಕ್ಸರ್ ಗಳನ್ನು ಸಿಡಿಸಲಾಗಿದ್ದು, ಇದೇ ಆವೃತ್ತಿಯ ಚೆನ್ನೈ ಮತ್ತು ಕೋಲ್ಕತ್ತಾ ನಡುವಿನ ಪಂದ್ಯದಲ್ಲಿ 31 ಸಿಕ್ಸರ್ ಸಿಡಿಸಲಾಗಿತ್ತು.