Tag: crying

  • ಬಿಜೆಪಿ ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ ಬಿಎಸ್‍ವೈ ಕಣ್ಣೀರು!

    ಬಿಜೆಪಿ ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ ಬಿಎಸ್‍ವೈ ಕಣ್ಣೀರು!

    ಧಾರವಾಡ: ಜಿಲ್ಲೆಯ ಉಪ್ಪಿನಬೆಟಗೇರಿ ನಡೆದ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಕಣ್ಣೀರು ಹಾಕಿದ್ದಾರೆ.

    ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಬಿಎಸ್‍ವೈ ಅವರು ತನ್ನ ತಾಯಿಯನ್ನು ನೆನೆದು ಭಾವುಕರಾಗಿದ್ದಾರೆ. `ಬಹಳ ಚಿಕ್ಕವಯಸ್ಸಿನಲ್ಲಿದ್ದಾಗಲೇ ನಾನು ನನ್ನ ತಾಯಿಯನ್ನು ಕಳೆದುಕೊಂಡೆ. ತಾಯಿ ಪ್ರೀತಿ-ವಿಶ್ವಾಸ ನನಗೆ ಗೊತ್ತಿಲ್ಲ. ಆದರೆ ತಾಯಿಯ ಹೃದಯ ಏನು ಅಂತಾ ನನಗೆ ಗೊತ್ತಿದೆ. ನಮ್ಮ ಅಜ್ಜ-ಅಜ್ಜಿಯರು ನೆಮ್ಮದಿಯಿಂದ ಇರಬೇಕು ಅನ್ನೊದು ನಮ್ಮ ಆಸೆ. ಅದಕ್ಕಾಗಿ ತಾಯಂದಿರು, ಹೆಣ್ಣುಮಕ್ಕಳಿಗಾಗಿ ಅನೇಕ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ನೀಡಿದ್ದೇನೆ ಅಂತ ಕಣ್ಣೀರು ಸುರಿಸಿದ್ರು.

    ಬಡವರ ಮನೆಯಲ್ಲಿ ಮದುವೆಯಾದಾಗ 3ಗ್ರಾಂ ತಾಳಿ ಹಾಗೂ ಬಡವರ ಮದುವೆಗೆ 25ಸಾವಿರ ರೂಪಾಯಿ ಸಹಾಯಧನ ಕೊಡುವ ಯೋಜನೆ ಕೂಡ ಹಾಕಿಕೊಂಡಿದ್ದೇವೆ ಅಂತ ಅವರು ಹೇಳಿದ್ರು.

  • ಮದುವೆಯುದ್ದಕ್ಕೂ ಗಳಗಳನೆ ಕಣ್ಣೀರು ಹಾಕಿದ ವರ!

    ಮದುವೆಯುದ್ದಕ್ಕೂ ಗಳಗಳನೆ ಕಣ್ಣೀರು ಹಾಕಿದ ವರ!

    ಪಾಟ್ನಾ: ಮದುವೆ ಅಂದ್ರೆ ವಧು ವರರಿಗೆ ಸಂತೋಷದ ದಿನವಾಗಿರುತ್ತೆ. ತಾಳಿ ಕಟ್ಟುವ ಸಂದರ್ಭದಲ್ಲಿ ವಧು ಭಾವುಕಳಾಗಿ ಅಳೋದನ್ನ ನೋಡಿರ್ತೀರ. ಆದ್ರೆ ಇಲ್ಲೊಬ್ಬ ವರ ಮದುವೆಯಾಗುವಾಗ ಗಳಗಳನೆ ಅತ್ತಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

    ಬಿಹಾರದಲ್ಲಿ ಈ ಘಟನೆ ನಡೆದಿದ್ದು, ವರನನ್ನು ಕಿಡ್ನಾಪ್ ಮಾಡಿ ಬಲವಂತವಾಗಿ ಮದುವೆ ಮಾಡಿಸಲಾಗಿದೆ. ಈ ರೀತಿ ಬಲವಂತವಾಗಿ ಮದುವೆ ಮಾಡಿಸುವುದು ಬಿಹಾರದಲ್ಲಿ ಕಾಮನ್. ಇತ್ತೀಚೆಗೆ ಇದರ ಬಲಿಪಶುವಾಗಿದ್ದು ವಿನೋದ್ ಯಾದವ್.

    ವಿನೋದ್ ಬೊಕಾರೋ ಸ್ಟೀಲ್ ಪ್ಲಾಂಟ್‍ನಲ್ಲಿ ಕಿರಿಯ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದಾರೆ. ವಿನೋದ್‍ಗೆ ಎಲ್ಲಿ ಬೇಕೋ ಅಲ್ಲಿಗೆ ವರ್ಗಾವಣೆ ಮಾಡಿಸುವ ವ್ಯವಸ್ಥೆ ಮಾಡಲು ಸಚಿವರೊಬ್ಬರನ್ನು ಭೇಟಿ ಮಾಡಿಸುವುದಾಗಿ ಹೇಳಿ ಮೊಕಾಮಾಗೆ ಕರೆದುಕೊಂಡು ಹೋಗಲಾಗಿತ್ತು. ನಂತರ ಅಲ್ಲಿಂದ ವಿನೋದ್‍ರನ್ನು ಕಿಡ್ನಾಪ್ ಮಾಡಿದ್ದಾರೆ.

    ಕಿಡ್ನಾಪರ್‍ಗಳು ಶಸ್ತ್ರಾಸ್ತ್ರಗಳನ್ನ ಹೊಂದಿದ್ದು, ವಿನೋದ್‍ಗೆ ಹೊಡೆದಿದ್ದಾರೆ. ಇದಕ್ಕೆ ವಿನೋದ್ ವಿರೋಧ ವ್ಯಕ್ತಪಡಿಸಿದಾಗ, ನಿನಗೆ ಮದುವೆ ಮಾಡಿಸ್ತಿದ್ದೀವಿ ಅಷ್ಟೇ, ನೇಣು ಹಾಕ್ತಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆಯೂ ಸಾಕಷ್ಟು ಜನ ಇದೇ ರೀತಿ ಮದುವೆ ಆಗಿದ್ದಾರೆ. ಇದೇನು ಹೊಸದಲ್ಲ ಎಂದು ಹೇಳಿದ್ದಾರೆ.

     

    ಮದುವೆಗೆ ಎಲ್ಲಾ ಸಿದ್ಧತೆಗಳನ್ನ ಮಾಡಿ ವಿನೋದ್‍ರನ್ನ ಅಲ್ಲಿಗೆ ಕರೆದೊಯ್ದು ಬಲವಂತವಾಗಿ ಮದುವೆ ಮಾಡಿಸಿದ್ದಾರೆ. ಜೊತೆಗೆ ಬಲವಂತದ ಮದುವೆಯ ವಿಡಿಯೋವನ್ನೂ ಮಾಡಿದ್ದಾರೆ. ವಿನೋದ್ ತನ್ನನ್ನು ಬಿಟ್ಟುಬಿಡುವಂತೆ ಗೋಗರೆಯುತ್ತಿದ್ದು, ಅಳುತ್ತಿರೋದನ್ನ ವಿಡಿಯೋದಲ್ಲಿ ಕಾಣಬಹುದು. ಇಷ್ಟಾದರೂ ಪ್ರತ್ಯಕ್ಷದರ್ಶಿಗಳು ಮಾತ್ರ ವಿನೋದ್ ಸ್ಥಿತಿಯ ಬಗ್ಗೆ ಕ್ಯಾರೇ ಅಂದಿಲ್ಲ. ಅಲ್ಲೇ ಇದ್ದವರೊಬ್ಬರು ವಿನೋದ್ ಧರಿಸಿದ್ದ ಶಲ್ಯವನ್ನೇ ತೆಗೆದುಕೊಂಡು ಅವರ ಕಣ್ಣೀರು ಒರೆಸಿದ್ದಾರೆ.