ಗಾಂಧಿನಗರ: ಸಿಆರ್ಪಿಎಫ್ ಯೋಧನೊಬ್ಬ (CRPF Soldier) ಪ್ರಿಯತಮೆಯನ್ನು ಕೊಂದು ಪೊಲೀಸರಿಗೆ ಶರಣಾದ ಘಟನೆ ಗುಜರಾತ್ನ (Gujarat) ಕಚ್ ಜಿಲ್ಲೆಯ ಅಂಜಾರ್ನಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಅರುಣಾಬೆನ್ ನಟುಭಾಯಿ ಜಾದವ್ (25) ಎಂದು ಗುರುತಿಸಲಾಗಿದೆ. ಅವರು ಅಂಜಾರ್ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್-ಇನ್ಸ್ಪೆಕ್ಟರ್ (ಎಎಸ್ಐ) ಆಗಿ ಸೇವೆ ಸಲ್ಲಿಸುತ್ತಿದ್ದರು. ಇನ್ನೂ ಹತ್ಯೆಗೈದ ಆರೋಪಿ ದಿಲೀಪ್ ಡಾಂಗ್ಚಿಯಾ ಸಿಆರ್ಪಿಎಫ್ ಯೋಧನಾಗಿದ್ದು, ಇಬ್ಬರೂ ಹಲವು ವರ್ಷಗಳಿಂದ (Live In Partner) ಲಿವ್ ಇನ್ನಲ್ಲಿದ್ದರು. ಹತ್ಯೆಯ ಬಳಿಕ ಆರೋಪಿ ಆಕೆ ಕೆಲಸ ಮಾಡುತ್ತಿದ್ದ ಅಂಜಾರ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಇದನ್ನೂ ಓದಿ: Chitradurga | ಮದುವೆಯಾಗಲು ಹೆಣ್ಣು ಸಿಕ್ಕಿಲ್ಲವೆಂದು ಹೋಂ ಗಾರ್ಡ್ ನೇಣಿಗೆ ಶರಣು
ಶುಕ್ರವಾರ ರಾತ್ರಿ ಅರುಣಾಬೆನ್ ಮತ್ತು ಆರೋಪಿ ಮನೆಯಲ್ಲಿ ಜಗಳವಾಡಿದ್ದಾರೆ. ಈ ಸಮಯದಲ್ಲಿ ತಾಯಿಯ ಬಗ್ಗೆ ಅವಹೇಳನಕಾರಿ ಮಾತಾಡಿದ್ದಕ್ಕೆ ಕೊಲೆ ಮಾಡಿರುವುದಾಗಿ ಆರೋಪಿ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.
2021ರಲ್ಲಿ ಇನ್ಸ್ಟಾಗ್ರಾಮ್ ಮೂಲಕ ಇಬ್ಬರು ಪರಿಚಯ ಆಗಿದ್ದರು. ಬಳಿಕ ಪರಿಚಯ ಪ್ರೇಮಕ್ಕೆ ತಿರುಗಿ, ಒಟ್ಟಿಗೆ ವಾಸವಾಗಿದ್ದರು. ಇಬ್ಬರು ಮದುವೆಯಾಗಲು ನಿರ್ಧರಿಸಿದ್ದರು ಎಂದು ತಿಳಿದು ಬಂದಿದೆ.
– ಮೇ 1 ರಂದು ಮದುವೆಯಾಗಿ ಊಟಿಗೆ ಹನಿಮೂನ್ಗೆ ಹೋಗಿದ್ದ ಯೋಧ ಜಯಂತ್ ದಂಪತಿ
ಕಾರವಾರ: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತ ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆ ನಡೆಸಿದ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ತೀವ್ರಗೊಂಡಿದೆ. ಈ ಹೊತ್ತಿನಲ್ಲಿ ಉತ್ತರ ಕನ್ನಡ (Uttara Kannada) ಜಿಲ್ಲೆಯ ಯೋಧನೊಬ್ಬ ದೇಶದ ಕರೆಗೆ ಹನಿಮೂನ್ ಮೊಟಕಗೊಳಿಸಿ ಸೇವೆಗೆ ತೆರಳಿದ್ದಾರೆ.
ಮೇ 1 ರಂದು ಮದುವೆಯಾಗಿ ಜಯಂತ್ ದಂಪತಿ ಊಟಿಗೆ ಹನಿಮೂನ್ಗೆ ತೆರಳಿದ್ದರು. ಮೈಸೂರಿಗೆ ತೆರಳಿದ್ದ ಸಂದರ್ಭದಲ್ಲಿ ಸೈನ್ಯದಿಂದ ಕರೆ ಬಂದಿತು. ಒಂದು ಕರೆಗೆ ಹನಿಮೂನ್ ಮೊಟಕುಗೊಳಿಸಿ ದೇಶಸೇವೆಗೆ ಯೋಧ ಹಾಜರಾಗಿದ್ದಾರೆ.
– ಪರಾರಿ ವೇಳೆ ಪೊಲೀಸರಿಗೂ ಗುಂಡು ಹಾರಿಸಿದ್ದ ಯೋಧ
– 11 ವರ್ಷದ ಕೇಸ್ ಗೆ ಇಂದು ಮುಕ್ತಿ
ಹುಬ್ಬಳ್ಳಿ: ಆಸ್ತಿ ಕಲಹದ ಹಿನ್ನೆಲೆಯಲ್ಲಿ ಹನ್ನೊಂದು ವರ್ಷಗಳ ಹಿಂದೆ ಕುಂದಗೋಳ ತಾಲೂಕು ಬೆಟದೂರು ಗ್ರಾಮದ ಒಂದೇ ಕುಟುಂಬದ ಮೂವರನ್ನು ಗುಂಡಿಟ್ಟು ಹತ್ಯೆಗೈದಿದ್ದ ಸಿಆರ್ ಪಿಎಫ್ ಯೋಧನಿಗೆ ಜೀವಾವಧಿ ಶಿಕ್ಷೆ ಹಾಗೂ 2.20 ಲಕ್ಷ ರೂ. ದಂಡ ವಿಧಿಸುವಂತೆ ಇಲ್ಲಿಯ 1ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಆದೇಶಿಸಿದೆ.
ಬೆಟದೂರು ಗ್ರಾಮದ ಶಂಕ್ರಪ್ಪ ತಿಪ್ಪಣ್ಣ ಜೀವಾವಧಿ ಶಿಕ್ಷೆಗೀಡಾದ ಅಪರಾಧಿ. ಇದೇ ಗ್ರಾಮದ ಯಲ್ಲಪ್ಪ ಭಜಂತ್ರಿ(38), ಮಕ್ಕಳಾದ ಸೋಮಪ್ಪ ಭಜಂತ್ರಿ(11) ಹಾಗೂ ಐಶ್ವರ್ಯ ಭಜಂತ್ರಿ(9)ಯನ್ನು ಹತ್ಯೆ ಮಾಡಿದ್ದು, ಈ ಗುಂಡಿನ ಚಕಮಕಿಯಲ್ಲಿ ಮದನಕುಮಾರ್ ಗಾಯಗೊಂಡಿದ್ದರು.
2010 ರಲ್ಲಿ ನಡೆದಿದ್ದ ಭೀಕರ ಹತ್ಯೆ ಘಟನೆ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಕುಂದಗೋಳ ಠಾಣೆಯ ಅಂದಿನ ಇನ್ಸ್ಪೆಕ್ಟರ್ ಅರುನ್ ಕುಮಾರ್ ಹಪ್ಪಳಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಇದನ್ನೂ ಓದಿ: ಓಟದ ಮೂಲಕ ಅಪ್ಪು ಸಮಾಧಿಗೆ ಹೊರಟ ಮಹಿಳೆಯ ಆರೋಗ್ಯ ವಿಚಾರಿಸಿದ್ರು ರಾಘಣ್ಣ
ಈ ಕುರಿತು ವಿಚಾರಣೆ ನಡೆಸಿದ 1ನೇ ಅಧಿಕ ಮತ್ತು ಜಿಲ್ಲಾ ಸತ್ತ ನ್ಯಾಯಾಲಯದ ನ್ಯಾಯಾಧೀಶ ದೇವೇಂದ್ರಪ್ಪ ಎನ್.ಬಿರಾದಾರ್ ಅವರು ಯೋಧನಿಗೆ 24 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಸೇರಿದಂತೆ ಜೀವಾವಧಿ ಶಿಕ್ಷೆ ಹಾಗೂ 2.20 ಲಕ್ಷ ರೂ. ದಂಡ ವಿಧಿಸಲು ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಗಿರಿಜಾ ಎಸ್, ತಮ್ಮಿನಾಳ ವಾದ ಮಂಡಿಸಿದ್ದರು.
ಪ್ರಕರಣದ ವಿವರ: ಸಿಆರ್ಪಿಎಫ್ ಯೋಧ ಶಂಕ್ರಪ್ಪ 2010 ರಲ್ಲಿ ಮದುವೆಯಾಗಿದ್ದರು. ನಾಲ್ಕೈದು ತಿಂಗಳಲ್ಲೇ ಗಂಡ – ಹೆಂಡತಿ ನಡುವೆ ಜಗಳವಾಗಿ, ಹೆಂಡತಿ ತವರು ಸೇರಿದ್ದಳು. ಇದಕ್ಕೆ ತನ್ನ ಸಂಬಂಧಿಕರಾದ ಯಲ್ಲಪ್ಪ ಭಜಂತ್ರಿ ಕುಟುಂಬದವರೇ ಕಾರಣ ಎಂದು ಶಂಕ್ರಪ್ಪ ತಿಳಿದುಕೊಂಡಿದ್ದನು. ಇದರ ಜೊತೆಗೆ ಹುಬ್ಬಳ್ಳಿಯಲ್ಲಿರುವ ತಾಯಿಯ ಆಸ್ತಿಯೂ ತಮ್ಮ ಹೆಸರಿಗೆ ಬರುವಂತೆ ಮಾಡಲು ಸಂಬಂಧಿಗಳು ನೆರವಾಗಲಿಲ್ಲ ಎಂದು ತಿಳಿದುಕೊಂಡಿದ್ದು, ಈ ದ್ವೇಷದಿಂದ ಯಲ್ಲಪ್ಪನ ಕುಟುಂಬವನ್ನು ಸರ್ವನಾಶ ಮಾಡಬೇಕೆಂದು ಹೊಂಚು ಹಾಕಿದ್ದ.
ಅಕ್ರಮವಾಗಿ ತಂದಿದ್ದ ಪಿಸ್ತೂಲ್ ಇಟ್ಟುಕೊಂಡು 20 ಆಗಸ್ಟ್ 2010 ರಂದು ಮಧ್ಯರಾತ್ರಿ ಯಲ್ಲಪ್ಪನ ಮನೆಗೆ ಶಂಕ್ರಪ್ಪ ತೆರಳಿದ್ದರು. ಅವರ ಮನೆಯಲ್ಲಿಯೇ ಊಟ ಮಾಡಿ ನಂತರ ಏಕಾಏಕಿ ಪಿಸ್ತೂಲ್ ತೆಗೆದು ಯಲ್ಲಪ್ಪನ ಹಣಿಗೆ ಹಾರಿಸಿದ್ದ. ಇದರಿಂದ ಗಾಬರಿಗೊಂಡ ಯಲ್ಲಪ್ಪನ ಪತ್ನಿ ಗೀತಾ ಹಾಗೂ ಮಕ್ಕಳು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಯಲ್ಲಪ್ಪನ ಮಕ್ಕಳಾದ ಸೋಮಪ್ಪ ಹಾಗೂ ಐಶ್ವರ್ಯಳಿಗೂ ಗುಂಡು ಹಾರಿಸಿ ಅವರನ್ನು ಕೊಲೆ ಮಾಡಿದ್ದ. ಮದನಕುಮಾರನಿಗೂ ಗುಂಡು ಹಾರಿಸಿ ಗಾಯಪಡಿಸಿ ಪರಾರಿಯಾಗಿದ್ದು, ಅದೃಷ್ಟವಶಾತ್ ಯಲ್ಲಪ್ಪನ ಪತ್ನಿ ಗೀತಾ ಗುಂಡೇಟಿನಿಂದ ಪಾರಾಗಿದ್ದಳು. ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ 418 ಸ್ಥಾನಗಳಿಸುತ್ತೆ: ಚಂದ್ರಕಾಂತ್ ಪಾಟೀಲ್
ಪೊಲೀಸರಿಗೂ ಗುಂಡು ಹಾರಿಸಿದ್ದ!
ಬೆಟದೂರು ಗ್ರಾಮದಲ್ಲಿ ಯಲ್ಲಪ್ಪ ಭಜಂತ್ರಿ ಸೇರಿ ಮೂವರ ಹತ್ಯೆಗೈದ ನಂತರ ಶಂಕ್ರಪ್ಪ ಯಾರದ್ದೋ ಬೈಕ್ ಹತ್ತಿ ದಾವಣಿಗೆರೆ ಕಡೆಗೆ ತೆರಳಿದ್ದ. ಈತನ ಸಂಶಯಾಸ್ಪದ ನಡೆ ಕಂಡ ಪೊಲೀಸರು ಆತನನ್ನು ಹಿಡಿಯಲು ಬೆನ್ನಟ್ಟಿದ್ದರು. ಈ ವೇಳೆ ಟ್ರಾಫಿಕ್ ಪೊಲೀಸರೊಬ್ಬರ ಹೊಟ್ಟೆಗೆ ಗುಂಡು ಹಾರಿಸಿ ಗಾಯಪಡಿಸಿದ್ದ. ಬಳಿಕ ದಾವಣಗೆರೆ ಪೊಲೀಸರು ಸಾರ್ವಜನಿಕರ ಸಹಕಾರದಿಂದ ಶಂಕ್ರಪ್ಪನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಬೆಟದೂರು ಶೂಟೌಟ್ ಪ್ರಕರಣದ ಬಗ್ಗೆಯೂ ಬಾಯಿ ಬಿಟ್ಟಿದ್ದ. ಈ ವೇಳೆ ಶಂಕ್ರಪ್ಪ ಅಕ್ರಮವಾಗಿ ಇಟ್ಟುಕೊಂಡಿದ್ದ ಪಿಸ್ತೂಲ್, 28 ಸಜೀವ ಗುಂಡುಗಳನ್ನು ಪೆÇಲೀಸರು ವಶಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲೂ ಶಂಕ್ರಪ್ಪ 8 ವರ್ಷ ಶಿಕ್ಷೆ ಅನುಭವಿಸಿದ್ದಾನೆ.
ಮಡಿಕೇರಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯಿಂದ ಪ್ರಭಾವಿತರಾದ ಸಿಆರ್ಪಿಎಫ್ನ ಸಬ್ ಇನ್ಸ್ಪೆಕ್ಟರ್ ಮರ್ವಿನ್ ಅವರು ಸುಮಾರು 21 ವರ್ಷದ ಸೇವೆ ಬಾಕಿ ಇದ್ದರೂ ಸ್ವಯಂ ನಿವೃತ್ತಿ ಪಡೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ನಂತರ ಸಿಆರ್ಪಿಎಫ್ ಮೂಲಕ ದೇಶ ಸೇವೆಗೆ ಸೇರ್ಪಡೆಯಾದ ಇವರು ಸುಮಾರು 20 ವರ್ಷ ಯೋಧರಾಗಿ ಕಾರ್ಯನಿರ್ವಹಿಸಿದ್ದಾರೆ. ಚತ್ತೀಸಗಢದ ಸುಕ್ಕಾ ಜಿಲ್ಲೆಯ ಅಟಲ್ ಸದನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಆರ್ಪಿಎಫ್ನ ನಿವೃತ್ತ ಸಬ್ ಇನ್ಸ್ಪೆಕ್ಟರ್ ಮೆರ್ವಿನ್ ಕೊರಿಯಾ ಅವರು ಚತ್ತೀಡಗಢ ರಾಜ್ಯ ಯುವಮೋರ್ಚಾ ಉಪಾಧ್ಯಕ್ಷೆ ದೀಪಿಕಾ ಶೋರಿ ಮತ್ತು ವಿಭಾಗೀಯ ಅಧ್ಯಕ್ಷ ವಿನೋದ್ ಬೈಸ್ ಅವರ ಸಮ್ಮುಖದಲ್ಲಿ ಬಿಜೆಪಿ ಸದಸ್ಯತ್ವವನ್ನು ವಿಧಿವತ್ತಾಗಿ ಸ್ವೀಕರಿಸಿದರು.
ಈ ಸಂದರ್ಭ ಮಾತನಾಡಿದ ಅವರು, 2001ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಆರ್ಪಿಎಫ್ಗೆ ಸೇರಿದ ನಂತರ ಅಸ್ಸಾಂ, ತಮಿಳುನಾಡು, ಮಣಿಪುರದಲ್ಲಿ ತದನಂತರ ಸುಕ್ಕಾದಲ್ಲಿ ಸೇವೆ ಸಲ್ಲಿಸಿದ್ದೇನೆ. ಪ್ರಧಾನಿ ನರೇಂದ್ರ ಅವರ ಕಾರ್ಯಶೈಲಿಯಿಂದ ಪ್ರಭಾವಿತನಾಗಿ ಬಿಜೆಪಿಗೆ ಸೇರ್ಪಡೆಯಾಗಿ ಸದಾ ಜನಸೇವೆ ಮಾಡುತ್ತೇನೆ ಹೇಳಿದರು. ಇದನ್ನೂ ಓದಿ: ಕರ್ನಾಟಕಕ್ಕೆ ಕಾಲಿಟ್ಟ ಡೆಡ್ಲಿ ವೈರಸ್- ಬೆಂಗಳೂರಿನ ಇಬ್ಬರಲ್ಲಿ ಓಮಿಕ್ರಾನ್ ಪತ್ತೆ!
ಇಂದು ಬಿಜೆಪಿಗೆ ಕಾಲಿಟ್ಟಿರುವ ಮೆರ್ವಿನ್ ಕೊರಿಯಾ ಅವರು ತಮ್ಮ ಅತ್ಯುತ್ತಮ ಕೆಲಸಕ್ಕಾಗಿ ಚತ್ತೀಸಗಢದ ಸುಕ್ಕಾ ಪೊಲೀಸ್ ವರಿಷ್ಠಾಧಿಕಾರಿ ಕಮಾಂಡೇಷನ್, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಮಾಂಡೇಷನ್, ಇತ್ತೀಚೆಗಷ್ಟೇ ಸಿಆರ್ಪಿಎಫ್ನ ಉತ್ಕೃಷ್ಟ ಸೇವಾ ಪದಕವನ್ನೂ ಪಡೆದಿದ್ದಾರೆ.
ಬೆಳಗಾವಿ: ಸಿಆರ್ ಪಿಎಫ್ ಯೋಧ ಸಚಿನ್ ಸಾವಂತ್ ವಿರುದ್ಧ ಪ್ರಕರಣ ದಾಖಲಿಸಿರುವುದು ಹಾಗೂ ಸಮಸ್ಯೆ ಸರಿಯಾಗಿ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದ್ದಾರೆ ಎಂಬ ಆರೋಪದ ಮೇರೆಗೆ ಸಬ್ ಇನ್ಸ್ ಪೆಕ್ಟರ್ ಅಮಾನತು ಮಾಡಲಾಗಿದೆ.
ಈ ಕುರಿತು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಮಾಹಿತಿ ನೀಡಿದ್ದು, ಕರ್ತವ್ಯ ಲೋಪ ಆರೋಪದಡಿ ಸದಲಗಾ ಸಬ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಅಮಾನತು ಮಾಡಲಾಗಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರೆದಿದೆ. ಯೋಧನ ಪ್ರಕರಣವನ್ನು ನಿರ್ವಹಿಸುವಲ್ಲಿ ಪಿಎಸ್ಐ ವಿಫಲರಾಗಿದ್ದಾರೆ. ಯೋಧ ಸಚಿನ್ ಬಿಡುಗಡೆಯಾದ ಬಳಿಕ ಅವರಿಂದಲೂ ಹೇಳಿಕೆ ಪಡೆದಿದ್ದು, ಪ್ರಾಥಮಿಕ ತನಿಖೆಯಲ್ಲಿ ಪಿಎಸ್ಐ ಅನಿಲಕುಮಾರ್ ಕರ್ತವ್ಯ ಲೋಪ ಕಂಡುಬಂದಿದೆ. ಹೀಗಾಗಿ ಅವಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆ ನಡೆದ ದಿನವೇ ಸಿಆರ್ ಪಿಎಪ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಅಲ್ಲದೆ ಮಾರನೇ ದಿನ ಪತ್ರ ಸಹ ಬರೆಯಲಾಗಿತ್ತು. ಇದೀಗ ತನಿಖೆ ಮುಂದುವರೆದಿದ್ದು, ಪೇದೆಗಳು ತಪ್ಪು ಮಾಡಿರುವ ಕುರಿತು ಕೂಡ ವಿಚಾರಣೆ ನಡೆದಿದೆ ಎಂದು ರಾಘವೇಂದ್ರ ಅವರು ವಿವರಿಸಿದ್ದಾರೆ.
ಪ್ರಕರಣ ಹಿಂಪಡೆಯಲು ಚಿಂತನೆ
ಬೆಳಗಾವಿಯಲ್ಲಿ ಪೊಲೀಸರಿಂದ ಯೋಧನಿಗೆ ಥಳಿತ ಹಾಗೂ ಪ್ರಕರಣ ದಾಖಲಿಸಿರುವ ಕುರಿತು ದೆಹಲಿಯ ಸಿಆರ್ ಪಿಎಫ್ ಡಿಜಿ ಎ.ಪಿ.ಮಹೇಶ್ವರಿ ಜೊತೆ ಗೃಹ ಸಚಿವ ಬಸವರಾಜ್ ಬೊಮ್ಮಯಿ ಚರ್ಚೆ ನಡೆಸಿದ್ದು, ಪ್ರಕರಣವನ್ನು ಕೂಲಂಕುಶವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ಪ್ರಕರಣ ವಾಪಸ್ ಪಡೆಯಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ತನಿಖೆ ಬಳಿಕ ಕೇಸ್ ವಾಪಸ್ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಯೋಧ ಸಚಿನ್ ಸಾವಂತ್ ಅವರಿಗೆ ಬಾಸುಂಡೆ ಬರುವ ಹಾಗೆ ಸದಲಗಾ ಪೊಲೀಸರು ಥಳಿಸಿರುವ ಆರೋಪಗಳು ಕೇಳಿ ಬಂದಿದೆ. ಯೋಧನಿಗೆ ಬಾಸುಂಡೆ ಬಂದಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಪೊಲೀಸರ ನಡೆಗೆ ಕಿಡಿಕಾರಿದ್ದಾರೆ.
ಏಪ್ರಿಲ್ 23ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಪೊಲೀಸರು ಮತ್ತು ಯೋಧನ ನಡುವೆ ಗಲಾಟೆ ನಡೆದಿತ್ತು. ತದನಂತರ ಪೊಲೀಸರು ಯೋಧನನ್ನು ಠಾಣೆಗೆ ಕರೆದುಕೊಂಡು ಬಂದು ಕೈಗೆ ಕೋಳ ಹಾಕಿದ್ದರು. ದೇಶ ಕಾಯುವ ಯೋಧನ ಕೈಗೆ ಕೋಳ ಹಾಕಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಕೈಗೆ ಕೋಳ ಹಾಕಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಂಗಳವಾರ ಯೋಧ ಸಚಿನ್ ಸಾವಂತ್ ಅವರಿಗೆ ಜಾಮೀನು ದೊರಕ್ಕಿದ್ದು, ಜೈಲಿನಿಂದ ಹೊರ ಬಂದಿದ್ದರು. ಖುದ್ದು ಸಿಆರ್ ಪಿಎಫ್ ಅಧಿಕಾರಿಗಳೇ ಸಚಿನ್ ಅವರನ್ನು ಕರೆತರಲು ಹೋಗಿದ್ದರು.
ರಾಯ್ಪುರ: ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಯೋಧರೊಬ್ಬರು ಹುತಾತ್ಮರಾಗಿರುವ ಘಟನೆ ಛತ್ತೀಸ್ಗಢದ ದಂತೇವಾಡದ ಬೊಡ್ಲಿ ಬಳಿ ನಡೆದಿದೆ.
ಹುತಾತ್ಮರಾದ ಯೋಧ ಬಿಹಾರದ ನವಾಡಾ ಮೂಲದ ರೋಶನ್ ಕುಮಾರ್ ಎಂದು ಗುರುತಿಸಲಾಗಿದೆ. ಅವರು ಸಿಆರ್ಪಿಎಫ್ ನ 195 ಬೆಟಾಲಿಯನ್ನ ಭಾಗವಾಗಿದ್ದರು. ಮಂಗಳವಾರ ಬೆಳಿಗ್ಗೆ 6:15 ರ ಸುಮಾರಿಗೆ ದಂತೇವಾಡ-ಜಗದಾಲ್ಪುರ ಗಡಿಯಲ್ಲಿ ಈ ಸ್ಫೋಟ ಸಂಭವಿಸಿದೆ. ಗಡಿಯಲ್ಲಿದ್ದ ಮಾಲೆವಾಹಿ ಸಿಆರ್ಪಿಎಫ್ ಶಿಬಿರದಿಂದ ಸುಮಾರು 700 ಮೀಟರ್ ದೂರದಲ್ಲಿ ಈ ಸ್ಫೋಟ ಸಂಭವಿಸಿದೆ.
ಸ್ಫೋಟಗೊಂಡ ಐಇಡಿ ಬಾಂಬ್ನಲ್ಲಿ ಒತ್ತಡದ ಕಾರ್ಯವಿಧಾನವನ್ನು ಬಳಸಲಾಗಿದೆ ಎಂದು ವರದಿಯಾಗಿದ್ದು, ಸ್ಫೋಟಗೊಂಡ ಪ್ರದೇಶದಲ್ಲಿ ಯೋಧ ಕಾರ್ಯನಿರ್ವಹಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಸದ್ಯ ಮೃತ ಜವಾನ್ ರೋಶನ್ ಕುಮಾರ್ ಅವರ ಮೃತದೇಹವನ್ನು ಛತ್ತೀಸ್ಗಢದ ಬರ್ಸೂರ್ ಗೆ ತಂದು ಬಳಿಕ ಸ್ವಗ್ರಾಮಕ್ಕೆ ಮೃತದೇಹವನ್ನು ರವಾನಿಸಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಕೇಂದ್ರೀಯ ಮೀಸಲು ಪಡೆಯ ಯೋಧರೊಬ್ಬರು ಇಲ್ಲಿನ ಸ್ಥಳೀಯ ಗರ್ಭಿಣಿಗೆ ರಕ್ತದಾನ ಮಾಡಿ ತಾಯಿಯೊಂದಿಗೆ ಮಗುವಿನ ಜೀವವನ್ನೂ ಉಳಿಸಿ ಎಲ್ಲರ ಮನ ಗೆದ್ದಿದ್ದಾರೆ.
25 ವರ್ಷದ ಮಹಿಳೆಯೊಬ್ಬರಿಗೆ ಡೆಲಿವರಿ ಸಮಯದಲ್ಲಿ ಸಮಸ್ಯೆಯಾಗಿ, ಅವರ ದೇಹದಲ್ಲಿ ರಕ್ತದ ಕೊರತೆ ಉಂಟಾಗಿತ್ತು. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ 53ನೇ ಬೆಟಾಲಿಯನ್ನ ಸಿಆರ್ಪಿಎಫ್ ಯೋಧ ಗೋಯಲ್ ಶೈಲೇಶ್ ಅವರು ಮಹಿಳೆಗೆ ರಕ್ತ ನೀಡಿ, ತಾಯಿ ಮತ್ತು ಮಗುವಿನ ಪ್ರಾಣವನ್ನು ಉಳಿಸಿದ್ದಾರೆ.
ಡೆಲಿವರಿ ಸಮಯದಲ್ಲಿ ಮಹಿಳೆಯ ದೇಹದಲ್ಲಿ ರಕ್ತದ ಅಭಾವ ಉಂಟಾದಾಗ ಗುಲ್ಶಾನ್ ನಿವಾಸಿಗಳಾದ ಆಕೆಯ ಕುಟುಂಬಸ್ಥರು ‘ಮದಾದ್ಗರ್’ ಮೂಲಕ ಸಿಆರ್ಪಿಎಫ್ ಸಿಬ್ಬಂದಿಯನ್ನು ಸಂಪರ್ಕಿಸಿದ್ದಾರೆ. ‘ಮದಾದ್ಗರ್’ ಕಾಶ್ಮೀರದ ಜನತೆಗೆ ವೈದ್ಯಕೀಯ ತುರ್ತು ಸೇವೆ ಒದಗಿಸಲು ಸಿಆರ್ಪಿಎಫ್ ಸ್ಥಾಪಿಸಿದ ಸಹಾಯವಾಣಿಯಾಗಿದ್ದು, ಕರೆ ಬಂದ ತಕ್ಷಣ ಯೋಧ ಆಸ್ಪತ್ರೆಗೆ ತೆರಳಿ ಸಹಾಯ ಮಾಡಿ ಎರಡು ಜೀವಗಳಿಗೆ ಪುನರ್ಜನ್ಮ ನೀಡಿದ್ದಾರೆ.
The relation of blood.
Constable Gohil Shailesh of #53Bn donated blood to 25 yr old lady of #Kashmir who urgently needed blood due to complications during delivery.
ಈ ಬಗ್ಗೆ ಸಿಆರ್ಪಿಎಫ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿ ಯೋಧನಿಗೆ ಅಭಿನಂದನೆ ಅರ್ಪಿಸಿದೆ. ಇದು ರಕ್ತದ ಸಂಬಂಧ. 53ನೇ ಬೆಟಾಲಿಯನ್ ಕಾನ್ಸ್ಟೇಬಲ್ ಗೋಹಿಲ್ ಶೈಲೇಶ್ ಅವರು ಡೆಲಿವರಿ ಸಮಯದಲ್ಲಿ ತೊಂದರೆ ಅನಿಭವಿಸುತ್ತಿದ್ದ 25 ವರ್ಷದ ಮಹಿಳೆಗೆ ರಕ್ತದಾನ ಮಾಡಿದ್ದಾರೆ. ಅವರ ರಕ್ತವು ತಾಯಿ ಹಾಗೂ ಮಗು ಇಬ್ಬರ ಜೀವವನ್ನು ಉಳಿಸಿ ಒಂದು ಬಂಧವನ್ನು ಸೃಷ್ಟಿಸಿದೆ ಎಂದು ಬರೆದು ಯೋಧ ರಕ್ತ ನೀಡುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದೆ.
We are proud of our soldiers and their sacrifice for Humanity.They feel proud to DONATE each and every drop of their bodys blood for the service of the Nation and for UNIVERSAL PEACE. Their thoughts are beyond IMAGINATION. Jai hind. https://t.co/4w21yxjjZk