Tag: crime

  • ಕರ್ನಾಟಕದಲ್ಲಿ ಫಸ್ಟ್: ಅವಹೇಳನಕಾರಿ ಪೋಸ್ಟ್ ಪ್ರಕಟವಾಗಿದ್ದಕ್ಕೆ ವಾಟ್ಸಪ್ ಅಡ್ಮಿನ್ ಅರೆಸ್ಟ್

    ಕರ್ನಾಟಕದಲ್ಲಿ ಫಸ್ಟ್: ಅವಹೇಳನಕಾರಿ ಪೋಸ್ಟ್ ಪ್ರಕಟವಾಗಿದ್ದಕ್ಕೆ ವಾಟ್ಸಪ್ ಅಡ್ಮಿನ್ ಅರೆಸ್ಟ್

    ಕಾರವಾರ: ವಾಟ್ಸಪ್ ನಲ್ಲಿ ನೀವು ಅಡ್ಮಿನ್ ಆಗಿದ್ದೀರಾ? ಹಾಗಾದ್ರೆ ಹುಷಾರಾಗಿರಿ. ಗ್ರೂಪಿನಲ್ಲಿ ಬೇರೆಯವರು ಅವಹೇಳನಕಾರಿ ಸಂದೇಶ ಕಳುಹಿಸಿದ್ರೆ ನೀವು ಜೈಲಿಗೆ ಹೋಗಬೇಕಾದಿತು.

    ಹೌದು. ವಾಟ್ಸಪ್ ಗ್ರೂಪ್ ನಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕಟವಾಗಿದ್ದಕ್ಕೆ ಗ್ರೂಪ್ ಅಡ್ಮಿನ್ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ ಮೊದಲ ಪ್ರಕರಣ ಉತ್ತರಕನ್ನಡ ಜಿಲ್ಲೆಯ ಮುರ್ಡೇಶ್ವರದ ಬೈಲೂರಿನಲ್ಲಿ ನಡೆದಿದೆ.

    ಮುರ್ಡೇಶ್ವರದ ಬೈಲೂರು ವ್ಯಾಪ್ತಿಯ ದೊಡ್ಡಬಲ್ಸೆ ನಿವಾಸಿ ಕೃಷ್ಣ ಸಣ್ಣತಮ್ಮ ನಾಯ್ಕ(30) ಬಂಧಿತ ಆರೋಪಿ. ರಿಕ್ಷಾ ಚಾಲಕನಾಗಿದ್ದ ಈತ `ಡಿ ಬಲ್ಸೆ ಬಾಯ್ಸ್’ ಎಂಬ ವಾಟ್ಸಪ್ ಗ್ರೂಪಿನ ಅಡ್ಮಿನ್ ಆಗಿದ್ದ.

    ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ತಿರುಚಿ ಅಶ್ಲೀಲಗೊಳಿಸಿ ಅವಹೇಳನ ಮಾಡಿದ್ದ ಫೋಟೋ ಈ ಗ್ರೂಪ್ ನಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ಆನಂದ ಮಂಜುನಾಥ ನಾಯ್ಕ ಎಂಬುವರು ಮುರುಡೇಶ್ವರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಗಣೇಶ ನಾಯ್ಕ ಎಂಬಾತನನ್ನೂ ಪೊಲೀಸರು ಬಂಧಿಸಿದ್ದು ಆತನಿಗೆ ನ್ಯಾಯಾಲಯದಲ್ಲಿ ಜಾಮೀನು ದೊರೆತಿದೆ. ಬಾಲಕೃಷ್ಣ ನಾಯ್ಕ ಎಂಬಾತ ತಲೆ ಮರೆಸಿಕೊಂಡಿದ್ದು ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಏಪ್ರಿಲ್ ಕೊನೆಯ ವಾರದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಗಲಭೆಗಳಿಗೆ ಪ್ರಚೋದನೆ ನೀಡುವಂತಹ ವಿಚಾರಗಳನ್ನು ಹಾಕುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಉತ್ತರಪ್ರದೇಶದ ವಾರಣಾಸಿ ಜಿಲ್ಲೆಯ ಪೊಲೀಸರು ಮುಂದಾಗಿದ್ದರು.

    ಈ ವಿಚಾರವಾಗಿ ವಾರಣಾಸಿಯ ಜಿಲ್ಲಾಧಿಕಾರಿ ಯೋಗೇಶ್ವರ್ ರಾಮ್ ಮಿಶ್ರಾ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿತಿನ್ ತಿವಾರಿ ಜಂಟಿ ಆದೇಶವನ್ನು ಹೊರಡಿಸಿದ್ದರು. ಈ ಆದೇಶದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ, ವದಂತಿಯನ್ನು ಹರಡಿದರೆ ಆ ಗ್ರೂಪಿನ ಅಡ್ಮಿನ್ ಮೇಲೆ ಸೈಬರ್ ಕ್ರೈಮ್ ಕಾನೂನು, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗುವುದು ಎಂದು ತಿಳಿಸಿದ್ದರು.

    ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ನ್ಯೂಸ್ ಹೆಸರಿನಲ್ಲಿ ಗ್ರೂಪ್‍ಗಳು ಕ್ರಿಯೇಟ್ ಆಗಿವೆ. ಆದರೆ ಈ ಗ್ರೂಪ್‍ಗಳಲ್ಲಿ ಸುಳ್ಳು ಸುದ್ದಿಗಳು ಪ್ರಕಟವಾಗುತ್ತಿದ್ದು, ಕ್ರಾಸ್ ಚೆಕ್ ಮಾಡದೇ ಸುದ್ದಿಗಳನ್ನು ಶೇರ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲು ಮುಂದಾಗಿದ್ದೇವೆ ಎಂದು ಜಿಲ್ಲಾಡಳಿತ ತಿಳಿಸಿತ್ತು.

    ಗ್ರೂಪಿನಲ್ಲಿ ಸದಸ್ಯನೊಬ್ಬ ಸುಳ್ಳು ಸುದ್ದಿ ಅಥವಾ ಧಾರ್ಮಿಕ ಸೌಹಾರ್ದತೆಗೆ ಅಡ್ಡಿ ತರುವಂತಹ ವಿಚಾರ, ವದಂತಿಯನ್ನು ಹಾಕಿದ್ರೆ ಅಡ್ಮಿನ್ ಆದವನು ಕೂಡಲೇ ಆತನನ್ನು ಗ್ರೂಪ್‍ನಿಂದ ಕಿತ್ತು ಹಾಕಬೇಕು. ಈ ರೀತಿಯ ಸಂದೇಶಗಳು ಹರಿದಾಡಿದರೆ ಜನರು ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ನೀಡಬಹುದು. ಬುಧವಾರ ಈ ಆದೇಶ ಪ್ರಕಟವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ವ್ಯಕ್ತಪಡಿಸಲು ಅವಕಾಶವಿದೆ. ಇದರ ಜೊತೆಗೆ ಜವಾಬ್ದಾರಿಯೂ ಇದೆ ಎಂದು ತಿಳಿಸಲಾಗಿತ್ತು.

    ಇದನ್ನೂ ಓದಿ:ವಾಟ್ಸಪ್‍ನಲ್ಲಿ ಸ್ಮೈಲೀ ಕಳುಹಿಸಿದ್ರೆ ಬೀಳುತ್ತೆ ಕೇಸ್!

  • ಬೆಂಗಳೂರಿನ ಸಾರ್ವಜನಿಕ ರಸ್ತೆಯಲ್ಲಿ ರಾತ್ರಿ ನಟಿಯನ್ನು ಎಳೆದಾಡಿ ಅಸಭ್ಯ ವರ್ತನೆ

    ಬೆಂಗಳೂರಿನ ಸಾರ್ವಜನಿಕ ರಸ್ತೆಯಲ್ಲಿ ರಾತ್ರಿ ನಟಿಯನ್ನು ಎಳೆದಾಡಿ ಅಸಭ್ಯ ವರ್ತನೆ

    ಬೆಂಗಳೂರು: ಕನ್ನಡ ಚಿತ್ರ ನಟಿಯನ್ನು ಇಬ್ಬರು  ಯುವಕರು ಭಾನುವಾರ ರಾತ್ರಿ ಎಳೆದಾಡಿ ಅಸಭ್ಯವಾಗಿ ವರ್ತಿಸಿರುವ ಘಟನೆ ಹೆಗ್ಗನಹಳ್ಳಿಯಲ್ಲಿ ನಡೆದಿದೆ.

    ಸಚಿನ್, ಪ್ರವೀಣ್ ವಿರುದ್ಧ ಈಗ ಚಿತ್ರ ನಟಿ ದೂರು ನೀಡಿದ್ದು, ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಸ್ತುತ ಆರೋಪಿಗಳಿಬ್ಬರೂ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

    ನಿನ್ನೆ ಶೂಟಿಂಗ್ ಮುಗಿಸಿ ಮನೆಗೆ ಕಾರಿನಲ್ಲಿ ಬರುತ್ತಿದ್ದಾಗ ಪ್ರವೀಣ್ ಕರೆ ಮಾಡಿ ಮದುವೆಯಾಗುವಂತೆ ಪೀಡಿಸಿದ್ದಾನೆ. ಹೆಗ್ಗನಹಳ್ಳಿಯಲ್ಲಿ ಕಾರು ನಿಲ್ಲಿಸಿದ್ದಾಗ ನನ್ನ ಮೇಲೆ ಇವರಿಬ್ಬರು ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ನೊಂದು ನಾನು ದೂರು ನೀಡಿದ್ದೇನೆ ಎಂದು ನಟಿ ಹೇಳಿದ್ದಾರೆ.

    ಚಿತ್ರ ನಟಿ ಈ ಹಿಂದೆ ಪೋಷಕರ ಜೊತೆ ಕೆ.ಟಿ.ಜಿ.ರಸ್ತೆಯಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ವೇಳೆ ಸಚಿನ್ ಹಾಗೂ ಪ್ರವೀಣ್ ಪರಿಚಯ ನಟಿಗೆ ಆಗಿದ್ದು ಮೂವರು ಸ್ನೇಹಿತರಾಗಿದ್ದರು. ಮೂರು ವರ್ಷದ ಹಿಂದೆ ನಟಿ ತಂದೆ, ತಾಯಿ ಜೊತೆ ವಿಜಯನಗಕ್ಕೆ ಶಿಫ್ಟ್ ಆಗಿದ್ದರು.

    ಶಿಫ್ಟ್ ಆದ ಬಳಿಕ ಪ್ರವೀಣ್ ಅಲಿಯಾಸ್ ಪುಟ್ಟ ನಟಿಗೆ ಫೋನ್ ಮಾಡಿ ನನ್ನನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದ. ಒಂದು ವೇಳೆ ಲವ್ ಮಾಡದೇ ಇದ್ದರೆ ನಿನಗೆ ಒಂದು ಗತಿ ಕಾಣಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಈ ವೇಳೆ ನಟಿ, ನಿನ್ನನ್ನು ನಾನು ಪ್ರೀತಿ ಮಾಡುವುದಿಲ್ಲ ಎಂದು ಪರಿ ಪರಿಯಾಗಿ ಹೇಳಿದ್ದರೂ ಆತ ಪದೇ ಪದೇ ಪೀಡಿಸುತ್ತಿದ್ದ. ಅಷ್ಟೇ ಅಲ್ಲದೇ ತನ್ನ ಮೊಬೈಲ್‍ನಿಂದ ಅಸಭ್ಯವಾಗಿ ಅಶ್ಲೀಲ ಪದಗಳನ್ನು ಬಳಸಿ ಎಸ್‍ಎಂಎಸ್ ಮಾಡುತ್ತಿದ್ದ. ಎಷ್ಟೇ ಕೇಳಿಕೊಂಡು ಆತನು ನನ್ನನ್ನು ಚುಡಾಯಿಸುತ್ತಿದ್ದಿದ್ದನ್ನು ನಿಲ್ಲಿಸಿರಲಿಲ್ಲ ಎಂದು ನಟಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  • ಹೈಟೆಕ್ ವೇಶ್ಯಾವಾಟಿಕೆಗೆ ಕಾವಲು ನಿಲ್ತಿದ್ದ ಪರಪ್ಪನ ಅಗ್ರಹಾರದ ಪೊಲೀಸ್ ಪೇದೆ ಅರೆಸ್ಟ್

    ಹೈಟೆಕ್ ವೇಶ್ಯಾವಾಟಿಕೆಗೆ ಕಾವಲು ನಿಲ್ತಿದ್ದ ಪರಪ್ಪನ ಅಗ್ರಹಾರದ ಪೊಲೀಸ್ ಪೇದೆ ಅರೆಸ್ಟ್

    ಬೆಂಗಳೂರು: ನಗರದ ಬಿಟಿಎಂ ಲೇಔಟ್‍ನ ಬಂಗಲೆಯೊಂದರಲ್ಲಿ ಹೈಟೆಕ್ ವೇಶ್ಯಾವಾಟಿಕೆಗೆ ಪೊಲೀಸ್ ಪೇದೆಯೇ ಕಾವಲು ನಿಲ್ಲತ್ತಿದ್ದ ವಿಚಾರ ಈಗ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದ ಪೊಲೀಸ್ ಪೇದೆ ಕರಿಬಸಪ್ಪನನ್ನು ಮೈಕೋ ಲೇಔಟ್ ಪೊಲೀಸರು ಈಗ ಬಂಧಿಸಿದ್ದಾರೆ.

    ಕಳೆದವಾರ ಮೈಕೋಲೇಔಟ್ ಪೊಲೀಸರು ಬಂಗಲೆ ಮೇಲೆ ದಾಳಿ ನಡೆಸಿ ಉಸ್ಮಾನ್, ನರೇಶ್ ಸಿಂಗ್, ಪರ್ವೇಜ್ ಖಾನ್ ಮತ್ತು ಶರವಣನನ್ನು ಬಂಧಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ ತಮ್ಮ ದಂಧೆಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಮುಖ್ಯ ಪೇದೆಯೊಬ್ಬರು ಸಹಾಯ ಮಾಡುತ್ತಿದ್ದರು ಎಂದು ಆರೋಪಿಗಳು ಹೇಳಿದ್ದರು. ಹೇಳಿಕೆಯ ಆಧಾರದಲ್ಲಿ ಈಗ ಕರಿಬಸಪ್ಪನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿ ಬಂಧಿಸಿದ್ದಾರೆ.

    ತಿಂಗಳಿಗೆ 5ಲಕ್ಷ ರೂ:
    ವೇಶ್ಯಾವಾಟಿಕೆಗೆ ಕಾವಲು ನಿಲ್ಲುತ್ತಿದ್ದ ಪೇದೆ ಕರಿಬಸಪ್ಪನಿಗೆ ತಿಂಗಳಿಗೆ 5 ಲಕ್ಷ ರೂ. ಮಾಮುಲು ಕೊಡಬೇಕಿತ್ತು. ಹಣ ಕೊಡದೇ ಇದ್ದರೆ ಇವನೇ ನಿಂತು ರೇಡ್ ಮಾಡಿಸುತ್ತಿದ್ದ. ಕ್ರೆಡಿಟ್ ಕಾರ್ಡ್ ನಲ್ಲಿ ಪಿಂಪ್‍ಗಳ ಹತ್ತಿರ ಕರಿಸಬಸಪ್ಪ ಹಣ ವಸೂಲಿ ಮಾಡುತ್ತಿದ್ದ.

    ತಿಂಗಳಿಗೆ 5 ಲಕ್ಷಕ್ಕೂ ಹೆಚ್ಚು ಮಾಮೂಲಿ ನೆಟ್‍ಬ್ಯಾಕಿಂಗ್‍ನಲ್ಲೇ ತೆಗೆದುಕೊಳ್ಳುತ್ತಿದ್ದ ಈತ ಎಸಿಪಿ ಕೂಡ ನನ್ನ ಕೈಯಲ್ಲಿ ಇದ್ದಾರೆ. ಇನ್ಸ್ ಪೆಕ್ಟರ್‍ಗೂ ನಾನೇ ಮಾಮೂಲಿ ಕೊಡುತ್ತೇನೆ ಎಂದು ಹೇಳುತ್ತಿದ್ದ ಎನ್ನುವ ವಿಚಾರ ಪೊಲೀಸ್ ತನಿಖೆಯಲ್ಲಿ ಈಗ ಬೆಳಕಿಗೆ ಬಂದಿದೆ.

    ಏನಿದು ಪ್ರಕರಣ?
    ಪ್ರಕರಣದ ಪ್ರಮುಖ ಆರೋಪಿ ಉಸ್ಮಾನ್ ವೆಬ್‍ಸೈಟ್ ತೆರೆದು ಈ ದಂಧೆ ನಡೆಸುತ್ತಿದ್ದ. ದಂಧೆಗೆ ಮುಂಬೈಯಿಂದ ಹುಡುಗಿಯರನ್ನು ವಿಮಾನದಲ್ಲಿ ಕರೆತರಲಾಗುತಿತ್ತು. ವೆಬ್‍ಸೈಟ್ ನಲ್ಲಿ ಹುಡುಗಿಯರ ಭಾವಚಿತ್ರವನ್ನು ಹಾಕಿ ಗಿರಾಕಿಗಳಿಗೆ ಆನ್‍ಲೈನ್ ನಲ್ಲಿ ಹಣವನ್ನು ಪಾವತಿ ಮಾಡುವಂತೆ ಹೇಳುತ್ತಿದ್ದ.

    ವಾರಾಂತ್ಯಗಳಲ್ಲಿ ಉಸ್ಮಾನ್ ಮುಂಬೈನಿಂದ ಮಹಿಳೆಯರನ್ನು ಕರೆತರುತ್ತಿದ್ದ. ವಿಮಾನದ ಟಿಕೆಟ್ ಗಳನ್ನು ಈತನೇ ಬುಕ್ ಮಾಡುತ್ತಿದ್ದ. ಸಿಇಒಗಳು, ಕಂಪನಿಯ ಅತಿಥಿಗಳು ಮಾತ್ರ ಮನೆಗೆ ಬರುತ್ತಾರೆಂದು ಹೇಳಿದ್ದ ಆರೋಪಿ ಉದ್ಯಮಿಯೊಬ್ಬರಿಂದ ಮನೆಯನ್ನು ಬೋಗ್ಯಕ್ಕೆ ಪಡೆದುಕೊಂಡಿದ್ದ. ಬಂಗಲೆ ವೇಶ್ಯಾವಾಟಿಕೆಗೆ ಬಳಕೆಯಾಗುತ್ತಿರುವ ವಿಚಾರ ಮನೆಯ ಮಾಲೀಕರಿಗೆ ತಿಳಿದಿರಲಿಲ್ಲ.

    ಶ್ರೀಮತರು, ದೊಡ್ಡ ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು, ಟೆಕ್ಕಿಗಳನ್ನು ಸಂಪರ್ಕಿಸುತ್ತಿದ್ದ ಈತನ ತಂಡ ಗ್ರಾಹಕರಿಂದ 25 ಸಾವಿರ ರೂ., 30 ಸಾವಿರ ರೂ. ಚಾರ್ಜ್ ಮಾಡುತ್ತಿದ್ದರು. ದಾಳಿ ವೇಳೆ ನಾಲ್ಕು ಸ್ವೈಪಿಂಗ್ ಯಂತ್ರಗಳು ಸಿಕ್ಕಿತ್ತು. ಪ್ರತಿನಿತ್ಯ ಬರುವ ಗ್ರಾಹಕರಿಗೆ ವಾಟ್ಸಪ್‍ನಲ್ಲಿ ಯುವತಿಯರ ಭಾವಚಿತ್ರವನ್ನು ಕಳುಹಿಸಿ ಡೀಲ್ ನಡೆಸುತ್ತಿದ್ದರು.

  • ಬಾವಿಗೆ ಹಾರಿ ವಿವಾಹಿತ ಮಹಿಳೆ ಆತ್ಮಹತ್ಯೆ

    ಬಾವಿಗೆ ಹಾರಿ ವಿವಾಹಿತ ಮಹಿಳೆ ಆತ್ಮಹತ್ಯೆ

    ಮಂಗಳೂರು: ಮೂಡುಬಿದಿರೆಯ ಅಳಿಯೂರು ಎಂಬಲ್ಲಿ ಬಾವಿಗೆ ಹಾರಿ ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಸಂಧ್ಯಾ (32) ಆತ್ಮಹತ್ಯೆಗೆ ಶರಣಾದ ಮಹಿಳೆ. ಆರು ತಿಂಗಳ ಹಿಂದೆ ಸಂಧ್ಯಾ ಅವರು ವಕೀಲರೊಬ್ಬರನ್ನು ವಿವಾಹವಾಗಿದ್ದರು.

    ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ತೀರ್ಥಹಳ್ಳಿ ಮೂಲದ ಸಂಧ್ಯಾ ಈ ಹಿಂದೆ ಉಜಿರೆಯ ಎಸ್‍ಡಿಎಂ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

    ಸದಾ ನಗುಮುಖವನ್ನು ಹೊಂದಿದ್ದ ಸಂಧ್ಯಾ ಅವರು ಕಾಲೇಜಿನಲ್ಲಿ ವಿದ್ಯಾರ್ಥಿಗಳ, ಶಿಕ್ಷಕರ, ಆಡಳಿತ ಮಂಡಳಿಯವರ ಮೆಚ್ಚುಗೆಗೆ ಪಾತ್ರರಾಗಿದ್ದರು.

  • ನಾಲ್ವರಿಂದ ಬರೋಬ್ಬರಿ 5 ಕೋಟಿ ರೂ. ಹಳೆ ನೋಟು ವಶ

    ನಾಲ್ವರಿಂದ ಬರೋಬ್ಬರಿ 5 ಕೋಟಿ ರೂ. ಹಳೆ ನೋಟು ವಶ

    ಬೆಂಗಳೂರು: ನೋಟ್ ಬ್ಯಾನ್ ಆದ ಬಳಿಕ ಕೋಟಿ ಕೋಟಿ ಹಣ ಮಾಡಿಕೊಂಡಿದ್ದ ಕಪ್ಪು ಕುಳಗಳನ್ನು ಸದ್ದಿಲ್ಲದೆ ಐಟಿ ಅಧಿಕಾರಿಗಳು ಹಿಡಿದ ಬಳಿಕ ಬ್ಲ್ಯಾಕ್ ಆಂಡ್ ವೈಟ್ ಮನಿ ದಂಧೆ ತಣ್ಣಗೆ ಆಗಿತ್ತು. ಆದರೆ ಈಗ ಮತ್ತೆ ಈ ದಂಧೆ ಶುರುವಾಗಿದ್ದು ಈಗ ಬರೋಬ್ಬರಿ ಐದು ಕೋಟಿ ರೂ. ಮೌಲ್ಯದ ಹಳೆ ನೋಟು ಸಿಕ್ಕಿದೆ.

    ಕಳೆದ ಒಂದು ವಾರದಿಂದ 10 ಕೋಟಿ ರೂ. ಮೌಲ್ಯದ ಹಳೆಯ ನೋಟುಗಳು ಸಿಕ್ಕಿದ್ದು ಈಗ ಮತ್ತೆ 5 ಕೋಟಿ ರೂ. ಮೌಲ್ಯದ ಹಳೆಯ ನೋಟುಗಳನ್ನು ವಶ ಪಡಿಸಿಕೊಂಡು ನಾಲ್ವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

    ಅಂಬ್ರೋಸ್, ಆರೀಫ್ ಪಾಷ, ಫೇಲಿಕ್ಸ್ ಮತ್ತು ನಂಜುಂಡ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳ ಪೈಕಿ ನಂಜುಂಡ ವೆಸ್ಟ್ ಆಫ್ ಕಾರ್ಡ್ ರೋಡ್‍ನ ಬಳಿಯ ಶಿವಾಲಿ ಲಾಡ್ಜ್ ಒಂದರಲ್ಲಿ ಹಣ ಬದಲಾವಣೆ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಈತನೊಬ್ಬನಿಂದಲೇ 3 ಕೋಟಿ ರೂ. ಮೌಲ್ಯದ ಹಳೆಯ ನೋಟುಗಳು ಸಿಕ್ಕಿವೆ.

    ಅಂಬ್ರೋಸ್, ಆರೀಫ್ ಪಾಷ, ಫೇಲಿಕ್ಸ್ ಬೇರೊಂದು ಗ್ಯಾಂಗ್‍ನಲ್ಲಿ ಹಣ ಬದಲಾವಣೆ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ. ಈ ಗ್ಯಾಂಗ್‍ನಲ್ಲಿ 2 ಕೋಟಿ ಹಣವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ತನಿಖೆ ಮುಂದುವರೆಯುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಜನರ ಬಂಧನವಾಗುವ ಸಾಧ್ಯತೆಯಿದೆ.

    ಇದನ್ನೂ ಓದಿ: ನಿಷೇಧವಾಗಿದ್ದ ನೋಟುಗಳು ನಿಮ್ಮಲ್ಲಿದ್ದರೆ ದಂಡ ಕಟ್ಟಲು ರೆಡಿಯಾಗಿ!  ದಂಡ  ಎಷ್ಟು?

  • 10 ರೂ. ಸ್ಕೇಲ್ ಬಳಸಿ ಕಾರುಗಳ ಕಳವು – ನಂತ್ರ ಅದೇ ಕಾರಲ್ಲಿ ಕುರಿ ಕಳ್ಳತನ ಮಾಡ್ತಿದ್ದ!

    10 ರೂ. ಸ್ಕೇಲ್ ಬಳಸಿ ಕಾರುಗಳ ಕಳವು – ನಂತ್ರ ಅದೇ ಕಾರಲ್ಲಿ ಕುರಿ ಕಳ್ಳತನ ಮಾಡ್ತಿದ್ದ!

    ನೆಲಮಂಗಲ: ಚಾಣಾಕ್ಷ ಕಳ್ಳನೊಬ್ಬ 10 ರೂಪಾಯಿ ಸ್ಕೇಲ್ ಖರೀದಿಸಿ, ಲಕ್ಷಾಂತರ ಮೌಲ್ಯದ ಕಾರನ್ನೇ ಕಳ್ಳತನ ಮಾಡುತ್ತಿದ್ದ ಎಂದರೆ ನೀವು ನಂಬುತ್ತೀರಾ..?

    ಹೌದು, ಚಾಣಾಕ್ಷತೆಯಿಂದ ಮನೆ ಮುಂದೆ ನಿಲ್ಲಿಸಿದ್ದ ಐಷಾರಾಮಿ ಕಾರುಗಳನ್ನು ಕಳವು ಮಾಡುತ್ತಿದ್ದ ಕಳ್ಳನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸರು ಆರೋಪಿ ಮಂಜ ಅಲಿಯಾಸ್ ಕ್ವಾಲಿಸ್ ಮಂಜ, ಕುರಿ ಮಂಜನನ್ನು ವಶಕ್ಕೆ ಪಡೆದಿದ್ದಾರೆ.

    ಮೂಲತಃ ಹಾಸನ ಜಿಲ್ಲೆಯ ಮಟ್ಟನವಿಲೆ ಗ್ರಾಮದ ನಿವಾಸಿಯಾಗಿರುವ ಮಂಜ, ಕೆಲ ದಿನದ ಹಿಂದೆ ನೆಲಮಂಗಲದ ದಾಸನಪುರ ತೋಟದಗುಡ್ಡದಹಳ್ಳಿಯಲ್ಲಿ ಕಾರುಗಳನ್ನ ಕದ್ದು ಪರಾರಿಯಾಗಿದ್ದ. ಆದರೆ ಈತ ಕಾರುಗಳನ್ನು ಚಾಣಾಕ್ಷತೆಯಿಂದ ಕದಿಯುವ ದೃಶ್ಯ ಸಿಸಿಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ. ತನ್ನ ಬುದ್ಧಿ ಉಪಯೋಗಿಸಿ ಕೇವಲ 10 ರೂಪಾಯಿ ಸ್ಕೇಲ್ ಸಹಾಯದಿಂದ, ಮನೆ ಮುಂದೆ ನಿಂತಿರುವ ಲಕ್ಷಾಂತರ ರೂಪಾಯಿ ಕಾರುಗಳನ್ನ ಕಳ್ಳತನ ಮಾಡುತ್ತಿದ್ದ. ಅಲ್ಲದೆ ಈ ಕದ್ದ ಕಾರಿನಲ್ಲಿ ಕುರಿಗಳನ್ನ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

    ಕಳ್ಳತನ ಹೇಗೆ?
    10 ರೂ. ಸ್ಕೇಲ್ ಮೂಲಕ ಕಾರಿನ ಡೋರನ್ನು ಓಪನ್ ಮಾಡುತ್ತಿದ್ದ. ಡೋರ್ ಓಪನ್ ಆದ ಬಳಿಕ ಮೆಕಾನಿಕ್ ಬುದ್ಧಿಯಿಂದ ಸ್ಟೇರಿಂಗ್ ಲಾಕನ್ನು ಒಡೆದು, ವಯರ್‍ಗಳನ್ನು ಜೋಡಿಸಿ ಆನ್ ಮಾಡಿ ಗೇರ್ ಬದಲಾಯಿಸಿ ಕಾರನ್ನು ಚಲಾಯಿಸಿ ಕಳ್ಳತನ ಎಸಗುತ್ತಿದ್ದ.

    ಮಾದನಾಯಕನಹಳ್ಳಿ ಪೊಲೀಸರು ಈತನನ್ನು ಬಂಧಿಸಿದ್ದು, ಎರಡು ಕ್ವಾಲಿಸ್ ಹಾಗೂ ಒಂದು ಟಾಟಾ ಇಂಡಿಕಾ ಕಾರನ್ನ ವಶಪಡಿಸಿಕೊಂಡಿದ್ದಾರೆ.

    https://www.youtube.com/watch?v=eI-KypOKPF8

  • ಹುಡುಗ, ಹುಡುಗಿಯ ಲವ್ ಕೇಸ್‍ನಲ್ಲಿ ಉಪ್ಪಿಯ ಡಾ. ಮೋದಿ ಸ್ಕ್ರಿಪ್ಟ್ ಹೋಯ್ತು!

    ಹುಡುಗ, ಹುಡುಗಿಯ ಲವ್ ಕೇಸ್‍ನಲ್ಲಿ ಉಪ್ಪಿಯ ಡಾ. ಮೋದಿ ಸ್ಕ್ರಿಪ್ಟ್ ಹೋಯ್ತು!

    ಬೆಂಗಳೂರು: ಹುಡುಗ, ಹುಡುಗಿಯ ಲವ್, ಥಳಿತ ಕೇಸ್‍ನಲ್ಲಿ ನಟ ಉಪೇಂದ್ರ ಅವರ ಮುಂದಿನ ‘ಡಾಕ್ಟರ್ ಮೋದಿ’ ಸ್ಕ್ರಿಪ್ಟ್ ಕಾಪಿಯನ್ನು ಯುವತಿಯ ಪೋಷಕರು ಕದ್ದುಕೊಂಡು ಹೋಗಿದ್ದಾರೆಂಬ ಆರೋಪ ಕೇಳಿ ಬಂದಿದೆ.

    ಈ ಪ್ರಕರಣದ ಸಂಬಂಧ ಪ್ರಿಯಕರ ರಮೇಶ್ ತಾನು ಪ್ರೀತಿಸುತ್ತಿದ್ದ ಯುವತಿಯ ತಾಯಿ ವೇದಾವತಿ ಮತ್ತು ಮಾವ ರಮೇಶ್ ಮೇಲೆ ಎಚ್‍ಎಸ್‍ಆರ್ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಏನಿದು ಲವ್ ಸ್ಟೋರಿ?
    ತೀರ್ಥಹಳ್ಳಿ ಮೂಲದ ಎಂಕಾಂ ಓದಿರುವ ಶ್ರೀಕರ ಹಾಗೂ ಕೋಲಾರದ ಬಿಇ ಪದವೀಧರೆ ಶ್ವೇತಾಗೆ ಶಾದಿ ಡಾಟ್ ಕಾಂನಲ್ಲಿ ಪರಿಚಯವಾಗಿದೆ. ಈ ಪರಿಚಯ ಕೆಲ ದಿನಗಳ ಬಳಿಕ ಪ್ರೀತಿಗೆ ತಿರುಗಿದೆ. ನಗರದ ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗ ಮಾಡಿಕೊಂಡಿದ್ದ ಇವರು ಕಳೆದ ಒಂದು ವರ್ಷ 8 ತಿಂಗಳಿನಿಂದ ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು.

    ಈ ಮಧ್ಯೆ ಶ್ವೇತಾ ಎರಡು ಭಾರಿ ಗರ್ಭವತಿಯಾಗಿದ್ದು, ತಾಯಿ ಅಬಾರ್ಷನ್ ಮಾಡಿಸಿದ್ದರಂತೆ. ಇದಾದ ಬಳಿಕ ಶ್ವೇತಾ ತಾಯಿ ವೇದಾವತಿ ಮತ್ತು ಮಾವ ರಮೇಶ್, ಕದ್ದು ಮುಚ್ಚಿ ಮದುವೆಯಾಗಿರುವುದು ಸರಿಯಲ್ಲ, ಅದ್ಧೂರಿಯಾಗಿ ಸಾರ್ವಜನಿಕವಾಗಿ ನಿಮ್ಮಿಬ್ಬರಿಗೂ ಮದುವೆ ಮಾಡಿಸುವುದಾಗಿ ಭರವಸೆ ನೀಡಿ ಮಗಳನ್ನು ಕೋಲಾರಕ್ಕೆ ಕರೆದೊಯ್ದಿದ್ದಾರೆ.

    ರಮೇಶ್ ಆರೋಪ ಏನು?
    ಊರಿಗೆ ಕರೆದೊಯ್ದ ನಂತರ ಶ್ವೇತಾ ಪೋಷಕರು ಮದುವೆ ವಿಚಾರ ಮಾತನಾಡಬೇಕು ಕೋಲಾರಕ್ಕೆ ಬಾ ಎಂದು ನನಗೆ ಫೋನ್ ಮಾಡಿ ತಿಳಿಸಿದ್ದರು. ಫೋನ್ ಕರೆಯ ಹಿನ್ನೆಲೆಯಲ್ಲಿ ಭಾನುವಾರ ಕೋಲಾರಕ್ಕೆ ಬಂದಾಗ ನನ್ನ ಮೇಲೆ ಮೇಲೆ ಶ್ವೇತಾ ತಾಯಿ ವೇದಾವತಿ ತಮ್ಮ ರಮೇಶ್ ಕೆಲ ಗೂಂಡಾಗಳನ್ನು ಕರೆಸಿ ಹಲ್ಲೆ ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ ತಮ್ಮದೇ ಕಾರಿನಲ್ಲಿ ನನ್ನನ್ನು ಬೆಂಗಳೂರಿನ ಹೆಚ್‍ಎಸ್‍ಆರ್ ಲೇಔಟ್‍ನ ಮನೆಗೆ ಕರೆ ತಂದು ನನ್ನ ಮತ್ತು ಶ್ವೇತಾ ಮದುವೆಗೆ ಸಂಬಂಧಿಸಿದ ಫೋಟೋಗಳು, ಲವ್ ಲೆಟರ್ ಗಳು ಮತ್ತು ನನ್ನ ಆಫೀಸ್‍ಗೆ ಸಂಬಂಧಿಸಿದ ಕೆಲ ಡಾಟಾ ಮತ್ತು ಮಾರ್ಕ್ಸ್ ಕಾರ್ಡ್‍ಗಳನ್ನು ಕದ್ದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.

    ಮೋದಿ ಸ್ಕ್ರಿಪ್ಟ್ ಹೋಯ್ತು:
    ನಿರ್ದೇಶಕ ಉದಯ್ ಪ್ರಕಾಶ್ ಅವರಿಗೆ ಸಹಾಯಕನಾಗಿ ನಾನು ಕೆಲಸ ಮಾಡುತ್ತಿದ್ದು, ನಟ ಉಪೇಂದ್ರ ಅವರ ಮುಂದಿನ ಚಿತ್ರ ಡಾಕ್ಟರ್ ಮೋದಿಗೆ ಸ್ಕ್ರಿಪ್ಟ್ ಮಾಡಿದ್ದೆ. ಆ ಸ್ಕ್ರಿಪ್ಟ್ ಹಾರ್ಡ್ ಕಾಪಿಯನ್ನೂ ಶ್ವೇತಾ ಪೋಷಕರು ಕದ್ದುಕೊಂಡು ಹೋಗಿದ್ದಾರೆ. ಹೀಗಾಗಿ ನನಗೆ ಈ ಪ್ರಕರಣದಲ್ಲಿ ನ್ಯಾಯ ಒದಗಿಸಬೇಕೆಂದು ಎಚ್‍ಎಸ್‍ಆರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

  • ಬ್ಲ್ಯಾಕ್ ಆಂಡ್ ವೈಟ್ ದಂಧೆ: 1 ಕೋಟಿಗೆ 30 ಲಕ್ಷ ಕಮಿಷನ್ ಪಡೆಯುತ್ತಿದ್ದ ಇಬ್ಬರು ಅರೆಸ್ಟ್

    ಬ್ಲ್ಯಾಕ್ ಆಂಡ್ ವೈಟ್ ದಂಧೆ: 1 ಕೋಟಿಗೆ 30 ಲಕ್ಷ ಕಮಿಷನ್ ಪಡೆಯುತ್ತಿದ್ದ ಇಬ್ಬರು ಅರೆಸ್ಟ್

    ಬೆಂಗಳೂರು: ಬ್ಲ್ಯಾಕ್  ಅಂಡ್ ವೈಟ್ ದಂಧೆ ನಡೆಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಜಿಮ್ಮಿ ರಾಹುಲ್ ಮತ್ತು ಅಜಯ್ ಬಂಧಿತ ಆರೋಪಿಗಳು. ಬಂಧಿತರಿಂದ 1 ಕೋಟಿ 28 ಲಕ್ಷ ರೂ. ಮೌಲ್ಯದ ಹಳೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಒಂದು ಕೋಟಿಗೆ ಮೂವತ್ತು ಲಕ್ಷ ಕಮಿಷನ್ ಆಧಾರದ ಮೇಲೆ ಹಣ ಬದಲಾವಣೆ ಮಾಡುತ್ತಿದ್ದರು. ಒಟ್ಟು 53 ಲಕ್ಷ ರೂ. ಮೌಲ್ಯದ ಒಂದು ಸಾವಿರ ರೂಪಾಯಿಯ ನೋಟುಗಳು ವಶಪಡಿಸಿಕೊಳ್ಳಲಾಗಿದೆ. ಉಳಿದವು 500 ರೂಪಾಯಿಯ ನೋಟುಗಳಾಗಿದೆ.

    ಜಿಮ್ಮಿ ರಾಹುಲ್ ಮೂಲತಃ ಮಂಗಳೂರಿನ ನಿವಾಸಿಯಾಗಿದ್ದು, ಅಜಯ್ ಮೂಲತಃ ಕೊಡಗು ನಿವಾಸಿಯಾಗಿದ್ದಾನೆ. ಇವರಿಬ್ಬರು ನಗರದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಅಕ್ರಮವಾಗಿ ಹಳೆಯ ನೋಟುಗಳಿಗೆ ಸೈಟ್ ಗಳನ್ನು ಮಾರಾಟ ಮಾಡುತ್ತಿದ್ದರು. ಇದೇ ರೀತಿ ಎರಡು ಕೋಟಿಗೂ ಹೆಚ್ಚು ಹಣ ಸಂಗ್ರಹ ಮಾಡಿದ್ದ ಇವರು ಸ್ಥಳೀಯವಾಗಿ ಹಣ ಬದಲಾವಣೆ ಮಾಡಲು ಹೋಗಿ ಮೂರು ಬಾರಿ  ಪೊಲೀಸರಿಂದ ಪರಾರಿಯಾಗಿದ್ದರು.

    ಬೆಂಗಳೂರಲ್ಲಿ ಸುಲಭವಾಗಿ ಹಣ ಬದಲಾವಣೆ ಮಾಡಬಹುದು ಎಂದು ತಿಳಿದು ನಗರಕ್ಕೆ ಬಂದಿದ್ದರು. ಚೀಟಿಂಗ್ ಗ್ಯಾಂಗ್ ನ ಜೊತೆ ಹಣ ಬದಲಾವಣೆ ಮಾಡುವುದಕ್ಕೆ ನಗರಕ್ಕೆ ಬಂದಿದ್ದರು. ಇವರ ಬಳಿ ಹಣ ಇದೆ ಎನ್ನುವ ಖಚಿತ ಮಾಹಿತಿಯನ್ನು ಆಧಾರಿಸಿ ಸಿಸಿಸಿ ಪೊಲೀಸರು ಇಂದು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.

  • ಬೈಕ್ ನಿಲ್ಲಿಸಿ ಎಳೆದಾಡಿ, ಕಪಾಳಕ್ಕೆ ಹೊಡೆದು ಎದೆ ಮುಟ್ಟಿ ನನ್ನನ್ನು ತಳ್ಳಿದ್ರು!

    ಬೈಕ್ ನಿಲ್ಲಿಸಿ ಎಳೆದಾಡಿ, ಕಪಾಳಕ್ಕೆ ಹೊಡೆದು ಎದೆ ಮುಟ್ಟಿ ನನ್ನನ್ನು ತಳ್ಳಿದ್ರು!

    – ಕಾಲೇಜು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ

    ಬೆಂಗಳೂರು: ಕಾಲೇಜು ವಿದ್ಯಾರ್ಥಿನಿ ಮೇಲೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯ ಬ್ಯಾಂಕ್ ಬಳಿ ಭಾನುವಾರ ರಾತ್ರಿ ಲೈಂಗಿಕ ದೌರ್ಜನ್ಯ ನಡೆದಿದೆ.

    ವಿದ್ಯಾರ್ಥಿನಿ ತನ್ನ ಸ್ನೇಹಿತನ ಜೊತೆ ಬೈಕಿನಲ್ಲಿ ಬರುತ್ತಿದ್ದಾಗ ದೌರ್ಜನ್ಯ ನಡೆದಿದ್ದು, ಲೀಸರು ಮಂಜುನಾಥ್, ರವಿ, ಕೃಷ್ಣಾ, ಪ್ರವೀಣ್ ರನ್ನು ಬಂಧಿಸಿದ್ದಾರೆ.

    ವಿದ್ಯಾರ್ಥಿನಿಯ ದೂರಿನಲ್ಲಿ ಏನಿದೆ?
    19ರ ರಾತ್ರಿ 9 ಗಂಟೆಯ ವೇಳೆ ನಾನು ಸ್ನೇಹಿತನ ಜೊತೆ ದ್ವಿಚಕ್ರ ವಾಹನದಲ್ಲಿ ವಿಮಾನ ನಿಲ್ದಾಣದಿಂದ ಬೆಂಗಳೂರು ಕಡೆಗೆ ಸರ್ವಿಸ್ ರಸ್ತೆಯಲ್ಲಿ ಬರುತ್ತಿದ್ದೆವು. ಈ ವೇಳೆ ಎ2ಬಿ ಮತ್ತು ವಿದ್ಯಾನಗರ ಕ್ರಾಸ್ ನಡುವೆ ಬರಬೇಕಾದರೆ ಆಕ್ಟೀವಾದಲ್ಲಿ ಬಂದಂತಹ ವ್ಯಕ್ತಿಯೊಬ್ಬ ನಮ್ಮ ಬೈಕಿಗೆ ಅಡ್ಡವಾಗಿ ನಿಲ್ಲಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ.

    ಈ ವೇಳೆ ನಾವು ಆತನನ್ನು ನೀನು ವಿರುದ್ಧ ದಿಕ್ಕಿನಿಂದ ಬರುತ್ತಿದ್ದೀಯ ಎಂದು ಪ್ರಶ್ನಿಸಿದ್ದಕ್ಕೆ ಆತನು ಬೈಕಿನಿಂದ ಕೆಳಗಡೆ ಇಳಿದು ನಮ್ಮ ವಾಹನದ ಕೀಯನ್ನು ತೆಗೆದುಕೊಂಡನು. ಈ ವೇಳೆ ಸ್ಥಳದಲ್ಲಿ ಆಟೋ ಡ್ರೈವರ್‍ಗಳು ಮತ್ತು ಇತರೇ 40-45 ಮಂದಿ ಸ್ಥಳೀಯರು ಸುತ್ತುವರೆದರು. ಸೇರಿದ ವ್ಯಕ್ತಿಗಳಲ್ಲಿ ಕೆಲವರು ನನ್ನ ಕಪಾಳಕ್ಕೆ ಹೊಡೆದರು. ಅಷ್ಟೇ ಅಲ್ಲದೇ ನನ್ನ ಸ್ನೇಹಿತನ ಮೇಲೂ ಹಲ್ಲೆ ನಡೆಸಿದರು. ಇವರು ನನ್ನ ದೇಹದ ಎಲ್ಲ ಭಾಗಗಳನ್ನು ಮುಟ್ಟಿದರು. ನನ್ನ ಎದೆಯ ಭಾಗವನ್ನು ಮುಟ್ಟಿ ನೀವು ಬೆಂಗಳೂರಿನವರಲ್ಲ ಎಂದು ಬೆದರಿಕೆ ಹಾಕಿ ಕೆಳಗಡೆ ದೂಡಿದರು. ನಂತರ ನಾವು ಬೇಡಿಕೊಂಡು ಗಾಡಿ ಕೀಯನ್ನು ಪಡೆದು ಅಲ್ಲಿಂದ ಹೊರಟೆವು. ಇದಾದ ಬಳಿಕ ತಾಯಿಗೆ ಕರೆ ಮಾಡಿ ತಿಳಿಸಿದೆ. ನಮ್ಮನ್ನು ಅವಾಚ್ಯ ಶಬ್ಧಗಳಿಂದ ಬೈದು ಹಲ್ಲೆ ಮಾಡಿ, ಬೆದರಿಕೆ ಹಾಕಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಗಳನ್ನು ಜರಗಿಸಬೇಕೆಂದು ಕೇಳಿಕೊಳ್ಳುತ್ತೇನೆ.

  • ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪ್ರಿಯಕರನೊಂದಿಗೆ ಮಗನನ್ನೇ ಕೊಂದ ತಾಯಿ!

    ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪ್ರಿಯಕರನೊಂದಿಗೆ ಮಗನನ್ನೇ ಕೊಂದ ತಾಯಿ!

    – ತಾಯಿ, ಪ್ರಿಯಕರನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು

    ಚಿಕ್ಕೋಡಿ: ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ ತಾಯಿ ಮತ್ತು ಪ್ರಿಯಕರನನ್ನು ಕಂಬಕ್ಕೆ ಕಟ್ಟಿ ಥಳಿಸಿರುವ ಘಟನೆ ಅಥಣಿ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ನಡೆದಿದೆ.

    ಕಿರಣ ಕೆಂಗೇರಿ(14) ಶವ ಇಂದು ಮಧ್ಯಾಹ್ನ ನೇಣು ಬಿಗಿದ ಸ್ಥಿತಿಯಲ್ಲಿ ಜಮೀನಿನಲ್ಲಿ ಪತ್ತೆಯಾಗಿತ್ತು. ಈತನ ಶವದ ಬಳಿ ತಾಯಿ ರೇಶ್ಮಾ ಕೆಂಗೇರಿ ಮತ್ತು ಪ್ರಿಯಕರ ದಿಲೀಪ್ ಜೋಗೆ ಇರುವುದನ್ನು ನೋಡಿದ ಗ್ರಾಮಸ್ಥರು ಇವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.

    ಇವರಿಬ್ಬರು ನಾವು ಕಿರಣನನ್ನು ಕೊಲೆ ಮಾಡಿಲ್ಲ ಎಂದು ಹೇಳುತ್ತಿದ್ದು, ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ.

    ಕಳೆದ ಹಲವು ವರ್ಷಗಳಿಂದ ಇವರಿಬ್ಬರು ಅಕ್ರಮ ಸಂಬಂಧ ಹೊಂದಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ತಾಯಿ ರೇಷ್ಮಾ, ಪ್ರಿಯಕರ ಜೊತೆ ಸೇರಿ ಕೊಲೆ ಮಾಡಿದ್ದಾಳೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಸ್ಥಳಕ್ಕೆ ಕಾಗವಾಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಾಯಿ ಮತ್ತು ಪ್ರಿಯಕರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಇದೀಗ ಪೊಲೀಸ್ ಠಾಣೆಗೆ ರೇಷ್ಮಾಳ ಗಂಡ ಆಗಮಿಸಿದ್ದು ಪಿಎಸ್‍ಐ ಸಮೀರ್ ಮುಲ್ಲಾ ವಿಚಾರಣೆ ನಡೆಸುತ್ತಿದ್ದಾರೆ.

    https://www.youtube.com/watch?v=8rm2wE2TQDM