Tag: crime

  • ನೀರಿಗಾಗಿ ಹೊತ್ತಿ ಉರಿದವು ನೂರಕ್ಕೂ ಹೆಚ್ಚು ಅಂಗಡಿಗಳು

    ನೀರಿಗಾಗಿ ಹೊತ್ತಿ ಉರಿದವು ನೂರಕ್ಕೂ ಹೆಚ್ಚು ಅಂಗಡಿಗಳು

    ಮುಂಬೈ: ನೀರಿಗಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ್ದು, ಈಡೀ ನಗರವೇ ಹೊತ್ತಿ ಉರಿದ ಘಟನೆ ಶುಕ್ರವಾರ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ.

    ಧಾರ್ಮಿಕ ಸ್ಥಳವೊಂದಕ್ಕೆ ಅಕ್ರಮವಾಗಿ ನೀರಿ ಸಂಪರ್ಕ ಕಲ್ಪಿಸಲಾಗಿತ್ತು. ಸಂಪರ್ಕವನ್ನು ಕಡಿತಗೊಳಿದ್ದರಿಂದ ಮಾತಿನ ಚಕಮಕಿ ಸಂಭವಿಸಿದೆ. ನಂತರ ಇದು ತಿರುವು ಪಡೆದುಕೊಂಡ ಪರಿಣಾಮ ಎರಡು ಗುಂಪುಗಳು ಘರ್ಷಣೆಗೆ ಮುಂದಾಗಿದೆ ಎಂದು ವರದಿಯಾಗಿದೆ.

    ನಂತರ, ನಗರದ ಈ ಎರಡೂ ಗುಂಪಿನ ಯುವಕರು ಬೀದಿಗಿಳಿದು ಪರಸ್ಪರ ಕಲ್ಲು ತುರಾಟ ನಡೆಸಿದ್ದಾರೆ. ಕೆಲವು ಕಿಡಿಗೇಡಿಗಳು ವಾಹನಗಳಿಗೂ ಬೆಂಕಿ ಹಚ್ಚಿದ್ದು, ಈ ವೇಳೆ ಸುಮಾರು 100 ಅಂಗಡಿಗಳಿಗೂ ಬೆಂಕಿ ಹತ್ತಿಕೊಂಡಿದೆ. ತಡರಾತ್ರಿಯವರೆಗೆ ಪರಿಸ್ಥಿತಿ ಗಂಭೀ ಸ್ವರೂಪ ಪಡೆದುಕೊಂಡಿತ್ತು. ಅಲ್ಲದೇ, ಘಟನಾ ಸ್ಥಳದಲ್ಲಿದ್ದ ಅಂಗಡಿಗಳು ಹಾಗೂ ಕೆಲವು ವಾಹನಗಳು ಸುಟ್ಟು ಭಷ್ಮವಾಗಿವೆ.

    ಎರಡು ಗುಂಪುಗಳ ನಡುವಿನ ಘರ್ಷಣೆ ಹಾಗೂ ಗುಂಪು ಚದುರಿಸಲು ಪೊಲೀಸರು ಕೈಗೊಂಡ ಕಾರ್ಯಾಚರಣೆ ದೃಶ್ಯವು ಘಟನಾ ಸ್ಥಳದಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೇಳೆ 10 ಜನ ಪೊಲೀಸರು ಗಾಯಗೊಂಡಿದ್ದಾರೆ. ಸದ್ಯ ನಗರದಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ.

  • ಕೀನ್ಯಾದಲ್ಲಿ ಭಾರತೀಯ ನಿರ್ಮಿಸಿದ್ದ ಡ್ಯಾಮ್ ಒಡೆದು 47 ಜನ ಸಾವು

    ಕೀನ್ಯಾದಲ್ಲಿ ಭಾರತೀಯ ನಿರ್ಮಿಸಿದ್ದ ಡ್ಯಾಮ್ ಒಡೆದು 47 ಜನ ಸಾವು

    ನೈರೋಬಿ: ಕೀನ್ಯಾದ ರಿಫ್ಟ್ ವ್ಯಾಲಿಯ ಸೊಲೈ ಪಟ್ಟಣದ ಬಳಿ ಭಾರತೀಯ ಮೂಲದ ಮನ್ಸೂಕಲ್ ಪಟೇಲ್ ನಿರ್ಮಿಸಿದ್ದ ಅಣೆಕಟ್ಟು ಒಡೆದು 47 ಮಂದಿ ಮೃತಪಟ್ಟಿದ್ದಾರೆ.

    ಮನ್ಸೂಕಲ್ ಪಟೇಲ್ ಅವರ ಒಡೆತನದ ಮೂರು ಜಲಾಶಯಗಳಲ್ಲಿ ಇದು ಒಂದಾಗಿದೆ. ಈ ಜಲಾಶಯದ ನೀರನ್ನು ಮೀನುಗಾರಿಕೆ ಹಾಗೂ ಕೃಷಿಗಾಗಿ ಬಳಸಲಾಗುತ್ತಿತ್ತು. ಕೀನ್ಯಾದಿಂದ ಯುರೋಪ್‍ಗೆ ಹೆಚ್ಚಿನ ಪ್ರಮಾಣದಲ್ಲಿ ಹೂವುಗಳು ರಫ್ತಾಗುತ್ತಿತ್ತು. ಅಲ್ಲದೇ ಪಟೇಲ್ ಅವರು ಜರ್ಮನಿ ಹಾಗೂ ನೆದರ್ಲೆಂಡ್‍ಗೆ ಹೂವುಗಳನ್ನು ರಫ್ತು ಮಾಡುತ್ತಿದ್ದರು ಎನ್ನಲಾಗುತ್ತಿದೆ.

    ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಡ್ಯಾಮ್ ಒಡೆದಿದ್ದು, ನೀರು ಹಾಗೂ ಕೆಸರು ಸಮೀಪದ ಎರಡು ಹಳ್ಳಿಗಳಿಗೆ ನುಗ್ಗಿದೆ. ಹೀಗಾಗಿ ಅಲ್ಲಿನ ನೂರಾರು ಮನೆಗಳು ಹಾನಿಯಾಗಿವೆ. ಅಲ್ಲದೇ ವಿದ್ಯುತ್ ವ್ಯತ್ಯಯವಾಗಿದ್ದು, ನೀರಿನಲ್ಲಿ ಕಾಣೆಯಾದ ವ್ಯಕ್ತಿಗಳಿಗಾಗಿ ಹುಡುಕಾಟ ನಡೆದಿದೆ. 47 ಜನರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದ್ದು, ಇನ್ನೂ ಅನೇಕ ಜನರು ಕಾಣೆಯಾಗಿದ್ದಾರೆ.

    ಕೀನ್ಯಾ ರೆಡ್ ಕ್ರಾಸ್ ಮತ್ತು ನಾಯಕರು, ದೇಶದ ವಿಪತ್ತು ನಿರ್ವಹಣಾ ತಂಡ ಗುರುವಾರ ಬೆಳಿಗ್ಗೆಯಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ರೋಂಗೈ ಪೊಲೀಸ್ ಮುಖ್ಯಸ್ಥ ಜೋಸೆಫ್ ಕಿಯಾಕೊ ತಿಳಿಸಿದ್ದಾರೆ.

    36ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು ಎರಡು ಕಿ.ಮೀ. ವಿಸ್ತೀರ್ಣದವೆರೆಗೆ ನೀರು ಆವರಿಸಿದ್ದು, ಅಲ್ಲಿನ ಬೆಳೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಾರ್ಚ್‍ನಿಂದ ಇಲ್ಲಿಯವರೆಗೂ ಕೀನ್ಯಾದಲ್ಲಿ ನಡೆದ ಪ್ರವಾಹ ಮತ್ತು ಜಲ ಸಂಬಂಧಿ ದುರಂತದಲ್ಲಿ 170 ಮಂದಿ ಮೃತಪಟ್ಟಿದ್ದಾರೆ. ಪ್ರವಾಹದ ಹಿನ್ನೆಲೆಯಲ್ಲಿ 2,25,436 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಸೇನಾ ಹೆಲಿಕಾಪ್ಟರ್‍ಗಳು ಮತ್ತು ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಕೀನ್ಯಾ ಸರಕಾರ ತಿಳಿಸಿದೆ.

    ಸಂತ್ರಸ್ತರಿಗೆ 4 ಮಿಲಿಯನ್ ಯುರೋಗಳನ್ನು ಪರಿಹಾರವಾಗಿ ನೀಡಬೇಕು ಎಂದು ರೆಡ್ ಕ್ರಾಸ್ ಸಂಸ್ಥೆ ಮನವಿ ಮಾಡಿದೆ.

  • ಮತ್ತೆ ಯಾವ ಅಪರಾಧ ಮಾಡಲ್ಲ, ಪ್ಲೀಸ್ ನನ್ನನ್ನು ಶೂಟ್ ಮಾಡ್ಬೇಡಿ: ಸಿನಿ ಮಾದರಿಯಲ್ಲಿ ಪೊಲೀಸರಿಗೆ ಶರಣಾದ ಯುಪಿ ಪಾತಕಿ

    ಮತ್ತೆ ಯಾವ ಅಪರಾಧ ಮಾಡಲ್ಲ, ಪ್ಲೀಸ್ ನನ್ನನ್ನು ಶೂಟ್ ಮಾಡ್ಬೇಡಿ: ಸಿನಿ ಮಾದರಿಯಲ್ಲಿ ಪೊಲೀಸರಿಗೆ ಶರಣಾದ ಯುಪಿ ಪಾತಕಿ

    ಲಕ್ನೋ: ದಯವಿಟ್ಟು ನನ್ನನ್ನು ಕೊಲ್ಲಬೇಡಿ, ನಾನು ಇನ್ನು ಮುಂದೆ ಯಾವುದೇ ಅಪರಾಧ ಮಾಡಲ್ಲ ಎಂದು ಉತ್ತರ ಪ್ರದೇಶದ ಪಾತಕಿ ಖನ್ನಾ ಉತ್ತರಪ್ರದೇಶದ ಆಮ್‍ರೋಹಾ ಜಿಲ್ಲೆಯ ಪೊಲೀಸರಿಗೆ ಬುಧವಾರ ಶರಣಾಗಿದ್ದಾನೆ.

    ತನ್ನ ಕತ್ತಿಗೆ ಫಲಕವನ್ನು ನೇತು ಹಾಕಿಕೊಂಡು ಬಂದ ಆತ ಅದರಲ್ಲಿ ದಯವಿಟ್ಟು ನನ್ನನ್ನು ಕೊಲ್ಲಬೇಡಿ, ನಾನು ಇನ್ನು ಮುಂದೆ ಯಾವುದೇ ಅಪರಾಧ ಮಾಡಲ್ಲ ಎಂದು ಬರೆದುಕೊಂಡಿದ್ದಾನೆ. ಇದನ್ನೂ ಓದಿ:ಜಾಮೀನು ಸಿಕ್ಕರೂ 5,500 ಕ್ರಿಮಿನಲ್‍ಗಳು ಯುಪಿ ಜೈಲಿನಿಂದ ಹೊರಬರುತ್ತಿಲ್ಲ!

    ಫಲಕ ಹಾಕಿಕೊಂಡು ಶರಣಾದ ಆರೋಪಿಯು ಫೈಜಾನ್ ಅಹ್ಮದ್ ಅಲಿಯಾಸ್ ಖನ್ನಾ ಸಂಭಾಲ್ ಜಿಲ್ಲೆಯ ನಖಾನಾ ಪೊಲೀಸ್ ಠಾಣೆ ವ್ಯಾಪ್ತಿಯ ದೀಪ್ ಸರಾಯ್ ಗ್ರಾಮದ ನಿವಾಸಿ. ಇವನ ವಿರುದ್ಧ ಕೊಲೆ ಮತ್ತು ದರೋಡೆ ಯತ್ನ ಸೇರಿದಂತೆ ಹಲವು ಅಪರಾಧ ಪ್ರಕರಣಗಳು ದಾಖಲಾಗಿದ್ದವು. 2014 ರಿಂದಲೂ ತಲೆಮರೆಸಿಕೊಂಡು ಪೊಲೀಸರಿಂದ ಬಜಾವ್ ಆಗಿದ್ದ ಇವನ ತಲೆಗೆ 12 ಸಾವಿರ ರೂ. ಬಹುಮಾನ ಘೋಷಣೆಯಾಗಿತ್ತು. ಇದನ್ನೂ ಓದಿ: ಯೋಗಿ ಸರ್ಕಾರದ ಎನ್‍ಕೌಂಟರ್ ಎಫೆಕ್ಟ್- ಸೈಕಲ್ ಶಾಪ್, ಹಣ್ಣಿನ ವ್ಯಾಪಾರ, ರಿಕ್ಷಾ ಚಾಲನೆ ಆರಂಭಿಸಿದ ರೌಡಿಶೀಟರ್ ಗಳು

    ಸದ್ಯ ಈತ ತನ್ನನ್ನು ಪೊಲೀಸರು ಎನ್‍ಕೌಂಟರ್ ಮಾಡುತ್ತಾರೆ ಎಂಬ ಭಯದಿಂದಾಗಿ ಹೀಗೆ ಮಾಡಿದ್ದಾನೆ ಎನ್ನಲಾಗಿದೆ. ಶರಣಾಗುವ ಮುನ್ನ ಅವನು ಮಾಧ್ಯಮಗಳೊಂದಿಗೆ ಮಾತನಾಡಿ ನಾನು ಪೊಲೀಸರಿಗೆ ಶರಣಾಗುವುದಾಗಿ ತಿಳಿಸಿದ್ದ. ಪೊಲೀಸರು ಆತನನ್ನು ಬಂಧಿಸಿ ಈಗ ಜೈಲಿಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ನನ್ನ ಅರೆಸ್ಟ್ ಮಾಡಿ, ಎನ್‍ಕೌಂಟರ್ ನಲ್ಲಿ ಸಾಯಲು ಇಷ್ಟವಿಲ್ಲ- ಯುಪಿ ಪೊಲೀಸರಿಗೆ ಕೊಲೆ ಆರೋಪಿ ಶರಣು

  • ನಲಪಾಡ್ ವಿರುದ್ಧ ಕೋರ್ಟ್ ಗೆ 600 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

    ನಲಪಾಡ್ ವಿರುದ್ಧ ಕೋರ್ಟ್ ಗೆ 600 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

    ಬೆಂಗಳೂರು: ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ಶಾಸಕ ಹ್ಯಾರೀಸ್ ಮಗ ನಲಪಾಡ್ ಹಾಗೂ ಆತನ ಸ್ನೇಹಿತರ ವಿರುದ್ಧ ಸಿಸಿಬಿ ತನಿಖಾಧಿಕಾರಿಗಳು ಕೋರ್ಟ್ ಗೆ 600 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

    ಫೆಬ್ರವರಿ 17ರಂದು ನಗರದ ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಶಾಸಕ ಹ್ಯಾರೀಸ್ ಪುತ್ರ ನಲಪಾಡ್ ಗ್ಯಾಂಗ್ ಗಂಭೀರವಾಗಿ ಹಲ್ಲೆ ಮಾಡಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಸಿಸಿಬಿ ತನಿಖಾಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

    ಚಾರ್ಜ್ ಶೀಟ್‍ನಲ್ಲಿ ಏನಿದೆ?: ಆರೋಪಿಗಳ ಮತ್ತು ವಿದ್ವತ್ ವೈದ್ಯಕೀಯ ವರದಿ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಹಾಗೂ ಕೆಫೆ, ಆಸ್ಪತ್ರೆಯ ಸಿಸಿಟಿವಿ ದೃಶ್ಯಗಳನ್ನು ಲಗತ್ತಿಸಲಾಗಿದೆ. ಆರೋಪಕ್ಕೆ ಸಂಬಂಧಿಸಿದಂತೆ ವಿದ್ವತ್ ಆತನ ಸ್ನೇಹಿತರು, ಫರ್ಜಿ ಕೆಫೆ ಸಿಬ್ಬಂದಿ, ಮಲ್ಯ ಆಸ್ಪತ್ರೆ ಸಿಬ್ಬಂದಿ ಸೇರಿದಂತೆ 60 ಸಾಕ್ಷಿಗಳಿಂದ ಹೇಳಿಕೆಗಳನ್ನು ಚಾರ್ಜ್ ಶೀಟ್‍ನಲ್ಲಿ ದಾಖಲಿಸಲಾಗಿದೆ ಎಂದು ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

    ನಲಪಾಡ್, ಅರುಣ್ ಬಾಬು, ಶ್ರೀಕೃಷ್ಣ, ಮಂಜುನಾಥ್, ಅಶ್ರಫ್, ಬಾಲಕೃಷ್ಣ, ಅಭಿಷೇಕ್ ಮತ್ತು ನಾಸಿರ್ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಸದ್ಯ ಎಲ್ಲ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿದೆ. ಆರೋಪಿ ಕೃಷ್ಣ 2004 ರಿಂದಲೂ ಮೊಬೈಲ್ ಬಳಕೆ ಮಾಡುತ್ತಿಲ್ಲ. ಅವನು ವಿದೇಶಕ್ಕೆ ಹೋಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ ಎಂದು ಹೇಳಲಾಗ್ತಿದೆ.

  • ಮದ್ವೆಯಾದ ಹತ್ತೇ ದಿನಕ್ಕೆ ಪತ್ನಿಗೆ ಗುಂಡಿಟ್ಟು, 100ಗೆ ಕಾಲ್ ಮಾಡ್ದ!

    ಮದ್ವೆಯಾದ ಹತ್ತೇ ದಿನಕ್ಕೆ ಪತ್ನಿಗೆ ಗುಂಡಿಟ್ಟು, 100ಗೆ ಕಾಲ್ ಮಾಡ್ದ!

    ಲಕ್ನೋ: ಹತ್ತು ದಿನಗಳ ಹಿಂದೆ ಮದುವೆಯಾಗಿದ್ದ ವ್ಯಕ್ತಿಯೊಬ್ಬ ವರದಕ್ಷಿಣೆಗಾಗಿ ಪತ್ನಿಯನ್ನು ಗುಂಡಿಕ್ಕಿ ಕೊಲೆ ಮಾಡಿದ ದಾರುಣ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಪಿಂಕಿ ಗಂಡನಿಂದಲೇ ಕೊಲೆಯಾದ ಪತ್ನಿ. ಆರೋಪಿ ಪತಿ ರವಿಕಾಂತ್ ಗಿರಿ ಉತ್ತರಪ್ರದೇಶದ ದಕ್ಷಿಣ ಭಾಗದ ಬುಲಂದಷಹಾರ್ ನಗರದ ವ್ಯಾಪಾರಿಯಾಗಿದ್ದಾನೆ. ಮದುವೆ ಬಳಿಕ ಪತ್ನಿಗೆ ತವರು ಮನೆಯಿಂದ 15 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದನು. ಹೀಗಾಗಿ ಆತನೇ ನಮ್ಮ ಮಗಳನ್ನು ಕೊಲೆ ಮಾಡಿದ್ದಾನೆ ಅಂತಾ ಪಿಂಕಿ ಪೋಷಕರು ಆರೋಪಿಸಿದ್ದಾರೆ.

    ಕೊಲೆಗೈದು 100ಗೆ ಕಾಲ್ ಮಾಡಿದ್ದ: ತಡರಾತ್ರಿ ದೇವಸ್ಥಾನದಿಂದ ಹಿಂದಿರುಗುವಾಗ ದರೋಡೆಕೋರರು ನಮ್ಮ ಕಾರ್ ಅಡ್ಡಗಟ್ಟಿದ್ರು. ಆದ್ರೆ ಪತ್ನಿ ದರೋಡೆಕೋರರ ವಿರುದ್ಧ ವಾಗ್ವಾದಕ್ಕೆ ಇಳಿದಿದ್ದಳು. ಇದ್ರಿಂದ ಕೋಪಗೊಂಡ ದರೋಡೆಕೋರರು ಪತ್ನಿಗೆ ಗುಂಡಿಟ್ಟು ಕೊಲೆಗೈದು ಪರಾರಿಯಾದ್ರು. ನಂತರ ನಾನು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದೆ ಅಂತಾ ರವಿಕಾಂತ್ ಕುಟುಂಬಸ್ಥರ ಮುಂದೆ ಹೇಳಿದ್ದನು.

    ಘಟನೆ ಸಂಬಂಧ ಪೊಲೀಸರು ಪತಿಯನ್ನು ವಶಪಡಿಸಿಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಯಲ್ಲಿ ಪತಿ ತಾನೇ ಪತ್ನಿಯನ್ನು ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ ಅಂತಾ ಬುಲಂದಷಹಾರ್ ಠಾಣೆಯ ಪೊಲೀಸ್ ಅಧಿಕಾರಿ ಪ್ರವೀಣ್ ರಂಜನ್ ಸಿಂಗ್ ಹೇಳಿದ್ದಾರೆ.

    ಮೃತ ಪಿಂಕಿ ಮೂಲತಃ ದೆಹಲಿಯವರು. ಪಿಂಕಿ ಮದುವೆಗಾಗಿ ಆಕೆಯ ಕುಟುಂಬ 20 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಮದುವೆಯಾದ ಎರಡು ದಿನಗಳ ನಂತರ ಆರೋಪಿ ರವಿಕಾಂತ್ 15 ಲಕ್ಷ ರೂಪಾಯಿ ವರದಕ್ಷಿಣೆ ನೀಡುವಂತೆ ಒತ್ತಾಯಿಸುತ್ತಿದ್ದನು. ಈ ವಿಚಾರಕ್ಕೆ ಆಕೆಯನ್ನು ಕೊಲೆಗೈದಿದ್ದಾನೆ ಎಂಬುದಾಗಿ ವರದಿಯಾಗಿದೆ.

  • ನನ್ನನ್ನು ಸುತ್ತಮುತ್ತ ಇದ್ದೋರು ದಿನಾ ಅತ್ಯಾಚಾರ ಮಾಡ್ತಾರೆ!

    ನನ್ನನ್ನು ಸುತ್ತಮುತ್ತ ಇದ್ದೋರು ದಿನಾ ಅತ್ಯಾಚಾರ ಮಾಡ್ತಾರೆ!

    ಮನೆಯ ಪಡಸಾಲೆಯಲ್ಲಿ ಕೂತು ದಿನಾ ಕಣ್ಣೀರಲ್ಲಿ ಕೈ ತೊಳೆಯೋ ಮಾನಿಕಾ ಅನ್ನೋ ಹೆಣ್ಣಿನ ಕಥೆಯಲ್ಲ, ಜೀವನ ಇದು. ಈಗಂತೂ ಮಾನಿಕಾಳ ಕಣ್ಣಾಲಿಗಳು ಅತ್ತು ಅತ್ತು ಸಂಪೂರ್ಣವಾಗಿ ಬತ್ತಿ ಹೋಗಿವೆ. 14ರ ಹರೆಯದಲ್ಲಿ ಮದುವೆಯಾಗಿ ಸುಂದರ ಕನಸುಗಳನ್ನು ಕಾಣುತ್ತಾ ಗಂಡನ ಮನೆಗೆ ಕಾಲಿಟ್ಟಾಗ ಮಾನಿಕಾಗೆ ಈಗ ಕೇವಲ 21ರ ಹರೆಯ. ಈಗಂತೂ ಮಾನಿಕಾಗೆ ಈಗ ಗಂಡನ ಮನೆ ಹಾಗೂ ತನ್ನ ತವರು ಮನೆ ಅಕ್ಷರಶಃ ನರಕವಾಗಿಬಿಟ್ಟಿದೆ. ಶೌಚಾಲಯಕ್ಕೆ ಹೋಗಬೇಕೆಂದರೂ ಮನೆಯವರ ಅನುಮತಿ ಇಲ್ಲದೆ ಹೊರಹೋಗುವಂತಿಲ್ಲ.

    ಹೊರಗಿನವರು ಬಿಡಿ ಮಾನಿಕಾಳ ಮನೆಯವರೇ ಆಕೆಯನ್ನು ಅಸ್ಪೃಶ್ಯಳಂತೆ ಕಾಣತೊಡಗಿದ್ದಾರೆ. ಮದುವೆಯಾಗಿ ಸರಿಯಾಗಿ ಎರಡು ವರ್ಷ ತುಂಬುತ್ತಿದ್ದಂತೆ ಮಾನಿಕಾ 5 ಜನ ಗಂಡಸರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಳು. ಹರಿಯಾದ ಪಾನಿಪತ್, ಸೋನೇಪತ್, ಕುರುಕ್ಷೇತ್ರ ಹೀಗೆ ನಾನಾ ಕಡೆಗಳಲ್ಲಿ ಸತತ ನಾಲ್ಕು ದಿನಗಳ ಕಾಲ ಮಾನಿಕಾ ದೈಹಿಕ ದೌರ್ಜನ್ಯವನ್ನು ಅನುಭವಿಸಿದ್ದಳು. ಹೀಗಾಗಿ ಆಕೆಯ ಮನೆಯವರ ಪ್ರಕಾರ ಇಂತಹಾ ಘಟನೆ ನಡೆಯಲು ಮಾನಿಕಾಳೇ ನೇರ ಕಾರಣ ಎಂದಾಗಿತ್ತು. ಆರೋಪಿಗಳಿಗೇನೋ ಸಜೆಯಾಯಿತು. ಆದ್ರೆ, ಮಾನಿಕಾ ಇಂದಿಗೂ ಮನೆಯವರ ಅಮಾನವೀಯ ವರ್ತನೆಯಿಂದಾಗಿ ಬೇಸತ್ತು ಹೋಗಿದ್ದಾಳೆ.

    ಹೇಳಿ ಕೇಳಿ ಮಾನಿಕಾ ವಾಸವಾಗಿದ್ದದ್ದು ಪುಟ್ಟ ಹಳ್ಳಿಯೊಂದರಲ್ಲಿ. ಅನಕ್ಷರಸ್ಥರೇ ಹೆಚ್ಚಿರುವ ಹಳ್ಳಿಯಲ್ಲಿ ಮಾನಿಕಾಳ ಸ್ಥಿತಿ ಕಂಡು ಮರುಗುವವರಿಗಿಂತ ದೂಷಿಸುವವರೇ ಹೆಚ್ಚಿದ್ದರು. ಹೀಗಾಗಿ ಸಾಯೋಕೂ ಆಗದೆ ಬದುಕೋಕೂ ಆಗದೆ ಇಂದಿಗೂ ಕಣ್ಣೀರಲ್ಲಿ ಕೈ ತೊಳೀತಿದ್ದಾಳೆ. ಇದು ಕೇವಲ ಮಾನಿಕಾಳ ಕಥೆಯಲ್ಲ. ಆಕೆಯ ಮೇಲೆ ಗ್ಯಾಂಗ್ ರೇಪ್ ಆಗಿದ್ದು 2012ರ ಸೆಪ್ಟೆಂಬರ್ 28 ರಂದು. ಅದೇ ತಿಂಗಳಲ್ಲಿ ಒಟ್ಟು 12 ಅತ್ಯಾಚಾರ ಪ್ರಕರಣಗಳು ಹರಿಯಾಣದಲ್ಲಿ ದಾಖಲಾಗಿತ್ತು. ಇದು ಕೇವಲ ಒಂದು ನಿದರ್ಶನ ಅಷ್ಟೇ. ಕೆಳ ವರ್ಗದ, ಭೂ ರಹಿತ ಸಮುದಾಯದ ಒಬ್ಬ ಹೆಣ್ಣು ಮಗಳು ಇಂದಿಗೂ ಈ ರೀತಿಯ ಕಷ್ಟ ಅನುಭವಿಸ್ತಾ ಇದ್ದಾಳೆ ಅಂದ್ರೆ ಭಾರತದಲ್ಲಿ ಇನ್ನು ಅತ್ಯಾಚಾರಕ್ಕೆ ಒಳಗಾದ ಅದೆಷ್ಟೋ ಹೆಣ್ಣು ಮಕ್ಕಳ ಸ್ಥಿತಿ ಹೇಗಿರಬೇಡ ಯೋಚಿಸಿ.

    ಅತ್ಯಾಚಾರಕ್ಕೆ ಒಳಗಾದ ಹೆಣ್ಣಿಗೆ ಮಾನಸಿಕ ಆಸರೆ, ಆರೈಕೆ ಬೇಕಾಗುತ್ತದೆ ಅನ್ನೋ ಕನಿಷ್ಠ ಸೌಜನ್ಯವೂ ನಮ್ಮ ಜನಕ್ಕೆ ಯಾಕೆ ಬಂದಿಲ್ಲ? ಇಂಡಿಯಾಸ್ ಡಾಟರ್ ಅನ್ನೋ ಶೀರ್ಷಿಕೆ ಅಡಿ ದೆಹಲಿ ನಿರ್ಭಯಾ ಅತ್ಯಾಚಾರಕ್ಕೆ ಸಂಬಂಧಿಸಿದ ಸಾಕ್ಷ್ಯಚಿತ್ರ ಬಿಡುಗಡೆಯಾಗಿ ಸಾಕಷ್ಟು ವಿವಾದ ಎದ್ದಿದ್ದು ನಿಮಗೆಲ್ಲ ನೆನಪಿರಬಹುದು. ಆ ನಿರ್ಭಯಾ ಈಗ ನಮ್ಮ ನಡುವೆ ಇಲ್ಲ. ಒಂದು ವೇಳೆ ಆಕೆ ಬದುಕಿದ್ದಿದ್ರೆ ನಮ್ಮ ಸಮಾಜ ಆಕೆಯನ್ನು ಯಾವ ರೀತಿ ನೋಡುತ್ತಿತ್ತು? ಎಲ್ಲೋ ಒಂದೋ ಎರಡೋ ಉದಾರ ಮನಸ್ಥಿತಿಯವರು ಇರಬಹುದು. ಆದ್ರೆ, ಎಲ್ಲರೂ ಆಕೆಯನ್ನು ಮುಕ್ತ ಮನಸ್ಸಿನಿಂದ ನಮ್ಮಲ್ಲಿ ಆಕೆಯೂ ಒಬ್ಬಳು ಅನ್ನೋದಾಗಿ ಸ್ವೀಕಾರ ಮಾಡುತ್ತಿದ್ದರಾ ಗೊತ್ತಿಲ್ಲ. ಬಹುಶಃ ಅತ್ಯಾಚಾರ ಸಂತ್ರಸ್ತೆ ಅನ್ನೋ ಹಣೆ ಪಟ್ಟಿ ಕೊನೆಯವರೆಗೂ ಆಕೆಯ ಹಿಂದೆ ಭೂತದಂತೆ ಕಾಡ್ತಾನೇ ಇರ್ತಾ ಇತ್ತೇನೋ.

    ಇನ್ನು ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರದಲ್ಲಿ ಅಪರಾಧಿ ಮುಖೇಶ್ ಅತ್ಯಾಚಾರ ಮಾಡುವುದಕ್ಕೆ ನಿರ್ಭಯಾಳೇ ಕಾರಣವಾಗಿದ್ದಳು ಅಂತಾ ಏನೊಂದೂ ಪಶ್ಚಾತಾಪವಿಲ್ಲದೇ ಹೇಳಿಕೆ ಕೊಟ್ಟಿದ್ದ. ಹಾಗಾದ್ರೆ, ಶೌಚಕ್ಕೆ ಹೋಗಿದ್ದ ಸಂದರ್ಭದಲ್ಲಿ ಮಾನಿಕಾಳ ಮೇಲೆ ಅತ್ಯಾಚಾರವಾಗಿತ್ತು. ನಮ್ಮ ಹೆಣ್ಣು ಮಕ್ಕಳಿಗೆ ಶೌಚಕ್ಕೆ ಹೋಗುವುದಕ್ಕೂ ಅನುಮತಿ ಇಲ್ಲವೇ? ಇನ್ನು ನಿರ್ಭಯಾ ರಾತ್ರಿ ಹೊತ್ತಲ್ಲಿ ತಿರುಗಾಡುತ್ತಿದ್ದದ್ದು, ಸಿನಿಮಾ ಹೋಗುತ್ತಿದ್ದದ್ದು ತಪ್ಪು ಎಂದಾದರೆ ಚಿಕ್ಕ ಚಿಕ್ಕ ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ನಡೆಯುತ್ತದಲ್ಲಾ? ಅವರೆಲ್ಲಾ ಆಟ ಆಡುವುದು, ಶಾಲೆಗೆ ಹೋಗುವುದು, ಅಂಕಲ್ ಅಂತಾ ಎಳೆ ತೋಳಲ್ಲಿ ಬಂದು ಆಲಂಗಿಸುತ್ತವಲ್ಲಾ ಅವೆಲ್ಲವನ್ನೂ ಕೆಟ್ಟ ದೃಷ್ಟಿಯಲ್ಲಿ ನೋಡಬೇಕೇ ಅನ್ನುವ ಪ್ರಶ್ನೆ ಕೂಡಾ ಕಾಡುತ್ತೆ.

    ಅತ್ಯಾಚಾರಕ್ಕೆ ಒಳಗಾಗೋ ಹೆಣ್ಣು ತನಗಾಗುವ ದೈಹಿಕ ಹಾಗೂ ಮಾನಸಿಕ ಆಘಾತಕ್ಕಿಂತ ಅದರ ನಂತರದಲ್ಲಿ ಬಚಾವಾಗಿ ಇದೇ ಸಮಾಜವನ್ನು ಎದುರಿಸಬೇಕಾಗುತ್ತದಲ್ಲಾ ಅದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ತನ್ನನ್ನು ನೋಡುವ ಸಾವಿರಾರು ಕಣ್ಣುಗಳು ಕುಟುಕೋ ಭಯ, ಮೊನಚು ಮಾತುಗಳಿಂದಾಗುವ ನೋವು, ಯಾರೋ ಆಡಿಕೊಂಡು ನಗುವ ಸಂದರ್ಭ, ಹೀಗೆ ಹೆಣ್ಣು ದಿನಾ ಒಂದಲ್ಲಾ ಒಂದು ರೀತಿಯಲ್ಲಿ ಅತ್ಯಾಚಾರಕ್ಕೆ ಒಳಗಾಗುತ್ತಲೇ ಇರುತ್ತಾಳೆ. ಬೆಂಕಿಯಿಂದ ಬಾಣಲೆಗೆ ಬೀಳುವ ಸ್ಥಿತಿ ಆಕೆಯದ್ದು. ಆಕೆಯ ದುಗುಡ, ಆತಂಕವನ್ನು ಯಾರಾದರೂ ಪರಿಹರಿಸಬಲ್ಲರಾ? ಇನ್ನು ಮಾನಿಕಾಳ ಈಗಿನ ಸ್ಥಿತಿಯ ಬಗ್ಗೆ ಮಾತನಾಡುವುದಾದರೆ, ಆಕೆ ಏನಾದರೂ ಬನ್ನಿ ನನ್ನ ಮೇಲೆ ಅತ್ಯಾಚಾರ ಎಸಗಿ, ನಾನು ನಿಮ್ಮ ದೈಹಿಕ ವಾಂಛೆಗಳನ್ನು ಈಡೇರಿಸುತ್ತೇನೆ ಅನ್ನೋದಾಗಿ ಹೇಳಿದ್ದಳಾ? ಇಲ್ಲವಲ್ಲಾ? ಅಂದ ಮೇಲೆ ಆಕೆಗೆ ಮನೆಯಿಂದ ಹೊರ ಹೋಗದ ಸ್ಥಿತಿ ಯಾಕೆ ಬಂತು? ಗಂಡನೊಡನೆ ಸೇರಿ ಅದೆಷ್ಟೋ ತಿಂಗಳುಗಳೇ ಇರುಳಿದವು. ಹಾಗಾದ್ರೆ, ಜೀವನ ಪೂರ್ತಿ ಇದೇ ರೀತಿ ಇರಬೇಕಾ?

    ಹೆಣ್ಣು ಅಂದ್ರೆ ನಮ್ಮ ಸುಖಕ್ಕೆ ಅನ್ನೋ ಧೋರಣೆ ಏನಾದರೂ ಈ ಸಮಾಜದಲ್ಲಿ ಇದೆಯಾ? ಅಥವಾ ಹೆಣ್ಣಿಗೆ ನಮ್ಮ ಸಮಾಜದಲ್ಲಿ ಸ್ವಾತಂತ್ರ್ಯ ಅನ್ನೋದು ಮರೀಚಿಕೆಯಾಯಿತೇ? ಇಲ್ಲಾ ತನ್ನ ಸ್ವಾತಂತ್ರ್ಯವನ್ನು ಅನುಭವಿಸುವ ಹಕ್ಕು ಆಕೆಗಿಲ್ಲವೇ? ಒಬ್ಬ ಹೆಣ್ಣಾಗಿ ಇಂತಹಾ ಅನೇಕ ಪ್ರಶ್ನೆಗಳು ದಿನಾ ಮನಸ್ಸಿನಲ್ಲಿ ಕೊರೆಯುತ್ತಲೇ ಇರುತ್ತದೆ. ದಾಖಲೆಗಳ ಪ್ರಕಾರ ಭಾರತದಲ್ಲಿ ಪ್ರತೀ 1 ನಿಮಿಷಕ್ಕೊಂದು ಲೈಂಗಿಕ ದೌರ್ಜನ್ಯ, ಪ್ರತೀ 20 ನಿಮಿಷಕ್ಕೊಂದು ಅತ್ಯಾಚಾರ, 150 ನಿಮಿಷಕ್ಕೊಂದು 16 ವರ್ಷದ ಒಳಗಿನ ಹೆಣ್ಣು ಮಗುವಿನ ಮೇಲೆ ರೇಪ್ ಆಗುತ್ತದೆ. ಇದರಲ್ಲಿ ದಾಖಲಾಗದ ಪ್ರಕರಣಗಳು ಅದೆಷ್ಟು ಅನ್ನೋದು ಇದುವರೆಗೂ ಕಂಡುಕೊಳ್ಳಲಾಗಿಲ್ಲ. ಹಾಗಾದರೆ ನಾವು ಎಂಥಾ ಹೇಸಿಗೆಯಲ್ಲಿದ್ದೇವೆ? ನಾವು ಮನೆಯಿಂದ ಹೊರಗೆ ಹೊರಟಾಗ ಅದೆಷ್ಟು ಕಾಮಾಲೆ ಕಣ್ಣುಗಳು ನಮ್ಮನ್ನು ಅದೆಂತೆಂಥಾ ಭಾವನೆಯಿಂದ ನೋಡಬಹುದು ಅನ್ನೋದನ್ನು ಊಹಿಸಿಕೊಳ್ಳೋಕೂ ಸಾಧ್ಯವಿಲ್ಲ. ನಮಗೂ ಬದುಕುವ ಹಕ್ಕಿದೆ, ಇಷ್ಟ ಕಷ್ಟಗಳ ಪರಿವೆ ಇದೆ. ಹೆಣ್ಣು ದೈಹಿಕವಾಗಿ ಪುರುಷರಷ್ಟು ಶಕ್ತಳಲ್ಲ ಅನ್ನೋ ಒಂದು ಅಂಶವನ್ನು ಬಳಸಿಕೊಂಡು ಸರಕಾಗಿ ನೋಡುವ ಪ್ರವೃತ್ತಿ ಯಾವಾಗ ದೂರವಾಗುತ್ತದೆ.

    ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತ ಮಹಿಳೆಯ ದನಿಯಾಗಿ ಬೆಂಬಲ ಕೊಡುವ ಮನಸ್ಥಿತಿ ಈ ಸಮಾಜಕ್ಕೆ ಯಾಕಿಲ್ಲ? ಅದೆಷ್ಟೋ ಸಂತ್ರಸ್ತರು ಮರ್ಯಾದೆಗೆ ಅಂಜಿ ಸುಮ್ಮನೆ ಇದ್ದು ಬಿಡ್ತಾರೆ. ಕಾಮುಕರ ಬೆದರಿಕೆಗಳಿಗೆ ಹೆದರಿ ಅದೆಷ್ಟೋ ಪ್ರಕರಣಗಳು ಮುಚ್ಚಿಹೋಗುತ್ತದೆ. ಇನ್ನೂ ಕೆಲವಷ್ಟು ಕಡೆ ಅತ್ಯಾಚಾರಿಗೇ ಮದುವೆ ಮಾಡಿಕೊಡುವ ಪ್ರವೃತ್ತಿಯೂ ಇದೆ. ಅತ್ಯಾಚಾರಿಯನ್ನು ದಂಡಿಸುವ ಕಾನೂನುಗಳು ಇದೆ ಅನ್ನೋ ಜ್ಞಾನವೂ ಅದೆಷ್ಟೋ ಜನರಿಗೆ ಇರುವುದಿಲ್ಲ. ಹೀಗಾಗಿ ಅನ್ಯಾಯದ ವಿರುದ್ಧ ದನಿ ಎತ್ತಲೂ ಸಾಧ್ಯವಾಗದ ಅಸಹಾಯಕ ಪರಿಸ್ಥಿತಿಯಲ್ಲಿರುತ್ತಾರೆ. ಇವಕ್ಕೆಲ್ಲಾ ಕೊನೆ ಯಾವಾಗ ಬರುವುದೋ ಗೊತ್ತಿಲ್ಲ. ಆದರೆ ರಕ್ತ ಬೀಜಾಸುರರ ಥರ ಒಂದಾದ ನಂತರ ಮತ್ತೊಬ್ಬರಂತೆ ಹುಟ್ಟಿಕೊಳ್ಳುತ್ತಿರುವ ಕಾಮಾಂಧರ ಕೃತ್ಯಗಳಿಗೆ ಬ್ರೇಕ್ ಹಾಕೋ ಅಸ್ತ್ರ ಅಂದ್ರೆ ಒಂದು ಕಾನೂನು. ಇನ್ನೊಂದು ಸಮಾಜ ಮಾತ್ರ. ಹಾಗಾಗಿ ಸಮಾಜ ಬದಲಾಗಲಿ. ನೋಡುವ ಹಳದಿ ಕಣ್ಣುಗಳು ತಿಳಿಯಾಗಲಿ ಅನ್ನೋದು ಪ್ರತೀ ಹೆಣ್ಣಿನ ಹೆಬ್ಬಯಕೆ.

    ಕ್ಷಮಾ ಭಾರದ್ವಾಜ್

  • ಪಬ್ ದಾಳಿ ಪ್ರಕರಣಕ್ಕೆ ಇತಿಶ್ರೀ – ಎಲ್ಲ 26 ಆರೋಪಿಗಳು ಖುಲಾಸೆ

    ಪಬ್ ದಾಳಿ ಪ್ರಕರಣಕ್ಕೆ ಇತಿಶ್ರೀ – ಎಲ್ಲ 26 ಆರೋಪಿಗಳು ಖುಲಾಸೆ

    ಮಂಗಳೂರು: 2009ರ ಪಬ್ ದಾಳಿ ಪ್ರಕರಣಕ್ಕೆ ಇತಿಶ್ರೀ ಬಿದ್ದಿದ್ದು, ಎಲ್ಲ 26 ಮಂದಿ ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿದೆ.

    ಸುದೀರ್ಘ ವಿಚಾರಣೆ ಬಳಿಕ ಸಾಕ್ಷ್ಯಾಧಾರ ಕೊರತೆಯಿಂದ ದಕ್ಷಿಣ ಕನ್ನಡ 3ನೇ ಜಿಲ್ಲಾ ಸೆಷನ್ಸ್ ಕೋರ್ಟ್ ನ್ಯಾಯಾಧೀಶರು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದರು.

    2009, ಜನವರಿ 24ರಂದು ನಡೆದಿದ್ದ ಪಬ್ ದಾಳಿ ಪ್ರಕರಣ ದೇಶಾದ್ಯಂತ ಸುದ್ದಿ ಮಾಡಿತ್ತು. ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಪ್ರಸಾದ್ ಅತ್ತಾವರ, ಸುಭಾಸ್ ಪಡೀಲ್, ದಿನಕರ ಶೆಟ್ಟಿ ಸೇರಿ 26 ಮಂದಿ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 27 ಮಂದಿ ಸಾಕ್ಷ್ಯ ಹೇಳಿದ್ದರು.

  • ಪ್ರಿಯಕರನ ಜೊತೆ ಸುತ್ತಾಡಿದ್ದಕ್ಕೆ 13ರ ಮಗಳನ್ನೇ ಕೊಂದೇಬಿಟ್ಟ!

    ಪ್ರಿಯಕರನ ಜೊತೆ ಸುತ್ತಾಡಿದ್ದಕ್ಕೆ 13ರ ಮಗಳನ್ನೇ ಕೊಂದೇಬಿಟ್ಟ!

    ನವದೆಹಲಿ: ಹುಡುಗನ ಜೊತೆ ಸುತ್ತಾಡಿದ್ದಕ್ಕೆ 7ನೇ ತರಗತಿ ಓದುತ್ತಿದ್ದ ಮಗಳನ್ನೇ ಕೊಂದ ತಂದೆಯನ್ನು ದೆಹಲಿಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.

    ಸುದೇಶ್ ಕುಮಾರ್ ಬಂಧನಕ್ಕೆ ಒಳಗಾದ ವ್ಯಕ್ತಿ. ನೆರೆ ಮನೆಯವನ ಜೊತೆ ಪ್ರೇಮ ಸಂಬಂಧವನ್ನು ಹೊಂದಿದ್ದಕ್ಕೆ ನಾನೇ ಮಗಳನ್ನು ಕೊಲೆ ಮಾಡಿದ್ದೇನೆ ಎಂದು  ಸುದೇಶ್ ಕುಮಾರ್ ತಪ್ಪೊಪ್ಪಿಕೊಂಡಿದ್ದಾನೆ.

    ಏನಿದು ಪ್ರಕರಣ?
    13 ವರ್ಷದ ಅಪ್ರಾಪ್ತ ಹುಡುಗಿಯು ಬುಧವಾರದಂದು ಕಾಣೆಯಾಗಿದ್ದಳು. ಮಗಳು ಕಾಣೆಯಾದ ಹಿನ್ನೆಲೆಯಲ್ಲಿ ತಂದೆ ಸುದೇಶ್ ಕುಮಾರ್ ದೆಹಲಿಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರನ್ನು ದಾಖಲಿಸಿದ್ದ. ನಾಪತ್ತೆ ದೂರಿನ ಆಧಾರದಲ್ಲಿ ತನಿಖೆ ಆರಂಭಿಸಿದ ಪೊಲೀಸರಿಗೆ ಹುಡುಗಿಯ ಮೃತದೇಹ ಉತ್ತರ ಪ್ರದೇಶದ ಟ್ರೋನಿಕಾ ನಗರದಲ್ಲಿ ಶುಕ್ರವಾರ ಸಿಕ್ಕಿತ್ತು.

    ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಗಿಯ ತಂದೆ ಸುದೇಶ್ ಕುಮಾರ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೇ ಮಗಳನ್ನ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ತನ್ನ ಮಗಳು ನೆರೆ ಮನೆಯ ಹುಡುಗನ ಜೊತೆ ಪ್ರೇಮ ಸಂಬಂಧವನ್ನ ಬೆಳೆಸಿದ ಕಾರಣಕ್ಕೆ ಈ ಕೃತ್ಯವನ್ನ ಎಸಗಿರುವುದಾಗಿ ಹೇಳಿದ್ದಾನೆ.

    ಪೊಲೀಸರಿಗೆ ಹೇಳಿದ್ದು ಏನು?
    ಮಗಳು ಹತ್ತಿರದ ಅಂಗಡಿಯಿಂದ ತಿಂಡಿ ತರುವುದಾಗಿ ಹೇಳಿ ಮನೆಯಿಂದ ಹೊರ ಹೋಗಿದ್ದಳು. ಈ ಸಮಯಕ್ಕೆ ಆಕೆಯನ್ನು ನಾನು ಹಿಂಬಾಲಿಸಿದೆ. ಈ ವೇಳೆ ಆಕೆ ಪ್ರಿಯಕರನೊಡನೆ ಮಾತನಾಡುವುದನ್ನ ಕಂಡು ಆಕ್ರೋಶಕ್ಕೆ ಒಳಗಾಗಿ, ಆಕೆಗೆ ಸರಿಯಾದ ಪಾಠ ಕಲಿಸಬೇಕು ಎಂದು ನಿರ್ಧರಿಸಿದೆ. ಬಳಿಕ ಮಗಳನ್ನು ತನ್ನ ಬೈಕ್‍ನಲ್ಲಿ ಕೂರಿಸಿಕೊಂಡು ಲೋನಿ ರಸ್ತೆಯ ನಗರಕ್ಕೆ ಕರೆದೊಯ್ದು ಗಂಟಲನ್ನು ಚಾಕುವಿನಿಂದ ಸೀಳಿ ಕೊಲೆ ಮಾಡಿದೆ. ಕೊಲೆ ಮಾಡಿದ ನಂತರ ಪ್ರಕರಣದ ದಿಕ್ಕನ್ನು ತಪ್ಪಿಸಲು ಮಗಳು ಕಾಣೆಯಾಗಿದ್ದಾಳೆ ಎಂದು  ದೂರನ್ನು ದಾಖಲಿಸಿದ್ದೆ ಎಂದಿದ್ದಾನೆ.

    ಅನುಮಾನ ಬಂದಿದ್ದು ಹೇಗೆ?
    ವಿಚಾರಣೆ ಪ್ರಾರಂಭಿಸಿದ ಪೊಲೀಸರಿಗೆ, ರಸ್ತೆ ಬಳಿಯ ಸಿಸಿಟಿವಿಯಲ್ಲಿ ಆ ಹುಡುಗಿಯನ್ನ ವ್ಯಕ್ತಿಯೊಬ್ಬ ಬೈಕ್‍ನಲ್ಲಿ ಕೂರಿಸಿಕೊಂಡು ಹೋಗುವ ದೃಶ್ಯ ಸೆರೆಯಾಗಿತ್ತು. ಸುದೇಶ್ ಬಳಿ ಅದೇ ರೀತಿಯ ಬೈಕ್ ಮತ್ತು ಹೆಲ್ಮೆಟ್ ಇರುವುದನ್ನು ಗಮನಿಸಿದ ಪೊಲೀಸರು ಶಂಕೆಯ ಆಧಾರದಲ್ಲಿ ವಶಕ್ಕೆ ಪಡೆದು ಮತ್ತಷ್ಟು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

  • ಚಿತ್ರ ನಟಿಗೆ ಡ್ರಾಪ್ ನೀಡುವದಾಗಿ ಹೇಳಿ ಬೈಕ್ ನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸೆಗಿದ

    ಚಿತ್ರ ನಟಿಗೆ ಡ್ರಾಪ್ ನೀಡುವದಾಗಿ ಹೇಳಿ ಬೈಕ್ ನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸೆಗಿದ

    ಮುಂಬೈ: ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ ತಿಂಗಳು ಚಿತ್ರ ನಟಿಯೊಬ್ಬರನ್ನ ಅತ್ಯಾಚಾರ ಎಸಗಿದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

    31 ವರ್ಷದ ನಟಿ ಜನವರಿ 12 ರಂದು ರಾತ್ರಿ ತನ್ನ ಫೊಟೋ ಶೂಟ್ ಮುಗಿಸಿಕೊಂಡು ವಾಸೈನಲ್ಲಿ ಆಟೋ ರಿಕ್ಷಾಗೆ ಕಾಯುತಿದ್ದರು. ಅದೇ ಸಮಯಕ್ಕೆ ಬೈಕ್‍ನಲ್ಲಿ ಬಂದ ಪ್ರದೀಪ್ ತಿವಾರಿ (27) ಅಲಿಯಾಸ್ ಚಿಂಟು ನಟಿಯನ್ನು ದಹಿಸಾರ್ ರೈಲ್ವೆ ನಿಲ್ದಾಣಕ್ಕೆ ಕರೆದುಕೊಂಡು ಹೊಗುತ್ತೇನೆ ಎಂದು ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.

    ನಟಿ ಜನವರಿ 12 ರಂದು ವಾಸೈನಲ್ಲಿ ಫೊಟೋ ಶೂಟ್ ಮುಗಿಸುಕೊಂಡು ದಹಿಸಾರ್ ರೈಲ್ವೆ ನಿಲ್ದಾಣಕ್ಕೆ ಹೋಗಲು ಆಟೋ ರಿಕ್ಷಾಗೆ ಕಾಯುತ್ತಿದ್ದರು. ಈ ಸಮಯಕ್ಕೆ ಕಾಯುತ್ತಿದ್ದ ಕಾಮುಕ ತಿವಾರಿ ನಟಿಗೆ ಡ್ರಾಪ್ ಕೊಡುತ್ತೇನೆ ಎಂದು ಪುಸಲಾಯಿಸಿ ಆಕೆಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ ಪರಾರಿಯಾಗಿದ್ದ. ಪೊಲೀಸರ ಪ್ರಕಾರ ಆರೋಪಿ ತಿವಾರಿಯ ವಿರುದ್ಧ 2003 ರಿಂದ 9 ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.

    ಘಟನೆ ನಂತರ ನಟಿಯನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ತಪಾಸಣೆ ವೇಳೆ ನಟಿಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ನಟಿ ಜನವರಿ 14ರಂದು ತಿವಾರಿ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಾರಿಯನ್ನ ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ.

  • ಸ್ವಲ್ಪ ಮಿಸ್ ಆಗಿದ್ರೆ ರೌಡಿ ನಲಪಾಡ್ ಸೌದಿಗೆ ಪರಾರಿ!

    ಸ್ವಲ್ಪ ಮಿಸ್ ಆಗಿದ್ರೆ ರೌಡಿ ನಲಪಾಡ್ ಸೌದಿಗೆ ಪರಾರಿ!

    ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ನಡೆಸಿದ್ದ ಶಾಂತಿನಗರದ ಕಾಂಗ್ರೆಸ್  ಶಾಸಕ ಹ್ಯಾರಿಸ್ ಮಗ ನಲಪಾಡ್ ಪರಾರಿಯಾಗಲು ಸೌದಿ ವಿಮಾನ ಹತ್ತಲು ಮುಂದಾಗಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ಪ್ರಕರಣ ನಡೆದ ಕೂಡಲೇ ಪರಾರಿಯಾಗಲು ಸೌದಿಗೆ ಹೋಗಲು ನಲಪಾಡ್ ಮತ್ತು ಆತನ ಗೆಳೆಯರು ಮುಂದಾಗಿದ್ದರು. ಇಲ್ಲಿ ಇದ್ದರೆ ಕಷ್ಟ ಎಂದು ಭಾವಿಸಿ ಕೆಲ ದಿನ ಅಲ್ಲೇ ತಲೆ ಮರೆಸಿಕೊಂಡಿರಲು ತೀರ್ಮಾನ ಮಾಡಿದ್ದ ವಿಚಾರ ಪೊಲೀಸ್ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    40 ಗಂಟೆಗಳ ಕಾಲ ನಲಪಾಡ್ ನಾಪತ್ತೆ ಆಗಿದ್ದರೂ ಆತ ಎಲ್ಲಿದ್ದ ಎನ್ನುವ ವಿಚಾರ ಪೊಲೀಸರಿಗೆ ತಿಳಿದಿತ್ತು. ಆದರೆ ಪೊಲೀಸರು ಈ ಪ್ರಕರಣ ಇಷ್ಟು ದೊಡ್ಡದಾಗುತ್ತದೆ ಎಂದು ಊಹಿಸಿರಲಿಲ್ಲ. ಯಾವಾಗ ಪ್ರಕರಣ ದೊಡ್ಡದಾಗತೊಡಗಿತೋ ಆಗ ನಲಪಾಡ್ ಬಂಧಿಸದೇ ಇದ್ದರೆ ಕಷ್ಟ ಎನ್ನುವುದು ಅರಿವಾಗತೊಡಗಿತು.

    ಈ ಕಾರಣಕ್ಕೆ ಸೌದಿಗೆ ಹೋಗಲು ಸಿದ್ಧತೆ ನಡೆಸುತ್ತಿದ್ದಾಗ ತಂದೆ ಹ್ಯಾರಿಸ್ ಮಗನಿಗೆ ಶರಣಾಗುವಂತೆ ಸೂಚಿಸಿದ್ದಾರೆ. ತಂದೆಯ ಮಾತಿಗೆ ಒಪ್ಪಿ ನಲಪಾಡ್ ರಿಕ್ಷಾದಲ್ಲಿ ಬಂದು ಕಬ್ಬನ್ ಪಾರ್ಕ್ ಪೊಲೀಸರಿಗೆ ಶರಣಾಗಿದ್ದ.

     

     

     

    https://www.youtube.com/watch?v=VzvxyFBQypc