Tag: crime

  • ಅವ್ಳು ನನ್ನ ಹುಡ್ಗಿ ಎಂದ ಗೆಳೆಯನನ್ನ ಕೊಂದ ಸ್ನೇಹಿತ

    ಅವ್ಳು ನನ್ನ ಹುಡ್ಗಿ ಎಂದ ಗೆಳೆಯನನ್ನ ಕೊಂದ ಸ್ನೇಹಿತ

    -ರಾತ್ರಿ ಗೆಳೆಯರಿಬ್ಬರ ಎಣ್ಣೆ ಪಾರ್ಟಿ

    ಬೆಂಗಳೂರು: ಇದೊಂದು ತ್ರಿಕೋನ ಪ್ರೇಮಕಥೆಯಾಗಿದ್ದು, ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದ ಇಬ್ಬರು ಯುವಕರು ತಡರಾತ್ರಿವರೆಗೆ ಒಟ್ಟಿಗೆ ಪಾರ್ಟಿ ಮಾಡಿದ್ದಾರೆ. ಕುಡಿದ ಮತ್ತಿನಲ್ಲಿ ಗಲಾಟೆ ಶುರುವಾಗಿ, ಕೊಲೆಯಲ್ಲಿ ಅಂತ್ಯವಾಗಿದೆ.

    ಹೆಣ್ಣೂರಿನ ಜಾನಕಿರಾಮ ಲೇಔಟ್ ನಲ್ಲಿ ಘಟನೆ ನಡೆದಿದ್ದು, ಮೊರೋಡೆ (29) ಕೊಲೆಯಾದ ನೈಜೀರಿಯನ್ ಪ್ರಜೆ, ಸ್ಯಾಮ್ಯೂಯಲ್ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಆರೋಪಿ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ನೈಜೀರಿಯಾದಿಂದ ವಿದ್ಯಾಭ್ಯಾಸಕ್ಕೆಂದು ಬೆಂಗಳೂರಿಗೆ ಬಂದ ವೆರೋಡೆ ಮತ್ತು ಸ್ಯಾಮ್ಯೂಯಲ್, ಕೆಲ ವರ್ಷಗಳಿಂದ ಜೊತೆಯಲ್ಲಿಯೇ ವಾಸವಾಗಿದ್ದರು. ವೀಕ್ ಎಂಡ್ ಬಂದರೆ ಸಾಕು ಭರ್ಜರಿ ಪಾರ್ಟಿ ಮಾಡುತ್ತಿದ್ದರು. ಶನಿವಾರ ಸಹ ತಡರಾತ್ರಿವರೆಗೆ ಪಾರ್ಟಿ ಮಾಡಿದ್ದು, ಇದೇ ವೇಳೆ ಇಬ್ಬರ ಮಧ್ಯೆ ಹುಡುಗಿ ವಿಚಾರ ಹೊರಬಂದಿತ್ತು.

    ಅವಳು ನನ್ನ ಹುಡುಗಿ, ಎಂದು ವೆರೂಡೆ ಅಂದ್ರೆ, ಇಲ್ಲ ಅವಳು ನನ್ನ ಹುಡುಗಿ ಎಂದು ಸ್ಯಾಮ್ಯೂಯಲ್ ಅಂತಿದ್ದ. ಇದೇ ವಿಚಾರ ಸಂಬAಧ ಇಬ್ಬರ ಮಧ್ಯೆ ಜೋರು ಗಲಾಟೆ ಆಗಿದೆ. ಎಣ್ಣೆ ಏಟಲ್ಲಿ ಒಂದೇ ಯುವತಿಗಾಗಿ ನಡೆದ ಈ ಗಲಾಟೆ ಮುಂಜಾನೆವರೆಗೂ ಮುಂದುವರಿದಿದೆ. ಕೊನೆಗೆ ಬೆಳಗಿನ ಜಾವ ಸುಮಾರು ನಾಲ್ಕು ಗಂಟೆ ಮತ್ತೆ ಜಗಳ ಶುರುಮಾಡಿದ ಸ್ಯಾಮ್ಯೂಯಲ್, ವೆರೋಡೆಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾದ ಕಾರಣ, ವೆರೋಡೆ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾನೆ.

    ವಿಚಾರ ತಿಳಿದ ಹೆಣ್ಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಸ್ಯಾಮ್ಯೂಯಲ್ ನನ್ನು ಬಂಧಿಸಿದ್ದಾರೆ. ಒಂದೇ ಹುಡುಗಾಗಿ ಇಬ್ಬರ ನಡುವಿನ ಗಲಾಟೆಯಲ್ಲಿ ಜೊತೆಗಿದ್ದ ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ.

  • ಕಾರಾಗೃಹದಲ್ಲಿ ಅಕ್ಷರ ಜ್ಞಾನಾರ್ಜನೆ- ಸಾಕ್ಷರ ಕೈದಿಗಳಿಂದ ಅನಕ್ಷರಸ್ಥ ಕೈದಿಗಳಿಗೆ ಪಾಠ

    ಕಾರಾಗೃಹದಲ್ಲಿ ಅಕ್ಷರ ಜ್ಞಾನಾರ್ಜನೆ- ಸಾಕ್ಷರ ಕೈದಿಗಳಿಂದ ಅನಕ್ಷರಸ್ಥ ಕೈದಿಗಳಿಗೆ ಪಾಠ

    ಕೊಪ್ಪಳ: ಜೀವನದ ಯಾವುದೋ ಒಂದು ಸಮಯದಲ್ಲಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಜೈಲು ಸೇರಿದ ಕೈದಿಗಳ ಜೀವನದಲ್ಲಿ ಹೊಸ ಪುಟವನ್ನು ತೆರೆಯುವ ಕೆಲಸವನ್ನು ಕೊಪ್ಪಳದ ಜಿಲ್ಲಾ ಕಾರಾಗೃಹದಲ್ಲಿ ಮಾಡಲಾಗುತ್ತಿದೆ.

    ಜಿಲ್ಲಾ ಕಾರಾಗೃಹದಲ್ಲಿ ಅಕ್ಷರ ಕಲಿಕೆಯ ವಿಶೇಷ ಕಾರ್ಯಕ್ರಮವನು ಹಮ್ಮಿಕೊಳ್ಳಲಾಗಿದೆ. ವಿಶೇಷ ಎಂದರೆ ಕಾರಾಗೃಹದಲ್ಲಿರುವ ಅಕ್ಷರಸ್ಥ ಕೈದಿಗಳಿಂದಲೇ ಅನಕ್ಷರಸ್ಥ ಕೈದಿಗಳಿಗೆ ಪಾಠ ಮಾಡಲಾಗುತ್ತಿದೆ. ನಿತ್ಯ ಅನಕ್ಷರಸ್ಥ ಕೈದಿಗಳಿಗೆ 1 ಗಂಟೆ ಅಕ್ಷರಗಳ ಸಾಮಾನ್ಯ ಜ್ಞಾನ ಹೇಳಿಕೊಡಲಾಗುತ್ತಿದೆ.

    ಜಿಲ್ಲಾ ಕಾರಾಗೃಹದಲ್ಲಿ ಸುಮಾರು 300 ಜನ ವಿಚಾರಣಾಧೀನ ಕೈದಿಗಳಿದ್ದಾರೆ. ಅದರಲ್ಲಿ ಸುಮಾರು 90 ಕ್ಕೂ ಹೆಚ್ಚು ಜನರಿಗೆ ಅಕ್ಷರ ಜ್ಞಾನ ಇಲ್ಲ. ಹೀಗಾಗಿ ಅನಕ್ಷರಸ್ಥ ಕೈದಿಗಳಿಗೆ ಜೈಲಿನಲ್ಲಿರುವ ಅಕ್ಷರಸ್ಥ ಕೈದಿಗಳಿಂದ ಪಾಠ ಮಾಡಿಸಲಾಗುತ್ತಿದೆ. ಪ್ರತಿ 10 ಅನಕ್ಷರಸ್ಥರನ್ನು ಒಂದು ತಂಡ ಮಾಡಿ ನಿತ್ಯ 1 ಗಂಟೆ ಅವರಿಗೆ ಪಾಠ ಮಾಡಲಾಗುತ್ತಿದೆ.

    ಕೈದಿಗಳಿಗೆ ಶಿಕ್ಷಣ ನೀಡುವ ಈ ಕಾರ್ಯಕ್ಕೆ ಜಿಲ್ಲಾ ವಯಸ್ಕ ಶಿಕ್ಷಣ ಇಲಾಖೆ ಕೂಡಾ ಸಾಥ್ ನೀಡಿದ್ದು, ಕೈದಿಗಳಿಗೆ ಅಗತ್ಯ ಪುಸ್ತಕಗಳನ್ನು ನೀಡಿದೆ. ವಿವಿಧ ಅಪರಾಧದಲ್ಲಿ ಭಾಗಿಯಾದ ಬಂದ ಕೈದಿಗಳು ಇಲ್ಲಿಂದ ಹೊರಗಡೆ ಹೋದಾಗ ಅಕ್ಷರ ಕಲಿತು ಹೋಗಲಿ ಎಂಬುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಕಾರಾಗೃಹ ಅಧೀಕ್ಷಕರಾದ ಬಿ.ಎಮ್.ಕೊಟ್ರೇಶ್ ತಿಳಿಸಿದ್ದಾರೆ.

    ಮೊದಲಿಗೆ ಅಕ್ಷರ ಜ್ಞಾನ ಹೊಂದಿರುವ ಕೈದಿಗಳಿಗೆ ಕೆಲ ಮಾರ್ಗದರ್ಶನಗಳನ್ನು ನೀಡಿ ಆ ಬಳಿಕ ಇತರೇ ಕೈದಿಗಳಿಗೆ ಕಲಿಸಲು ಕಾರ್ಯಕ್ರಮ ರೂಪಿಸಿದ್ದೇವೆ. ಈ ಕಾರ್ಯಕ್ರಮ ಮೊದಲ ಭಾಗವಾಗಿ 6 ತಿಂಗಳ ಕಾಲ ನಡೆಯಲಿದೆ. ಇದು ಕೈದಿಗಳ ಜೀವನಕ್ಕೆ ನೆರವಾಗಲಿ. ಅಕ್ಷರ ಕಲಿತ ಕೈದಿಗಳು ಮನ ಪರಿವರ್ತನೆ ಮಾಡಿಕೊಂಡು ಹೊಸ ದಾರಿ ರೂಪಿಸಿಕೊಳ್ಳಿ ಎಂಬುವುದು ನಮ್ಮ ಗುರಿಯಾಗಿದೆ ಎಂದರು. ಅಧಿಕಾರಿಗಳ ಈ ಕಾರ್ಯಕ್ಕೆ ಸಾರ್ವಜನಿಕರ ವಲಯದಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

  • ಅಶ್ಲೀಲ ಫೋಟೋಗಳನ್ನ ಇಟ್ಟುಕೊಳ್ಳೋದು ಅಪರಾಧವಲ್ಲ: ಕೇರಳ ಹೈಕೋರ್ಟ್

    ಅಶ್ಲೀಲ ಫೋಟೋಗಳನ್ನ ಇಟ್ಟುಕೊಳ್ಳೋದು ಅಪರಾಧವಲ್ಲ: ಕೇರಳ ಹೈಕೋರ್ಟ್

    ತಿರುವನಂತಪುರಂ: ಅಶ್ಲೀಲ ಫೋಟೋಗಳನ್ನು ಇಟ್ಟುಕೊಳ್ಳುವುದು ಅಪರಾಧವಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ.

    ಮಹಿಳೆಯರ ಅಸಭ್ಯ ಪ್ರದರ್ಶನ ತಡೆ ಕಾಯಿದೆ ಅಡಿ ಮಹಿಳೆಯ ಅಶ್ಲೀಲ ಫೋಟೋಗಳನ್ನು ಹೊಂದಿದ ಮಾತ್ರಕ್ಕೆ ಅದು ಶಿಕ್ಷಾರ್ಹ ಅಪರಾಧವಾಗುವುದಿಲ್ಲ. ಆದರೆ ಮಹಿಳೆಯ ಅಶ್ಲೀಲ ಫೋಟೋಗಳನ್ನು ಪ್ರಕಟಿಸುವುದು ಮತ್ತು ವಿತರಿಸುವುದು ಕಾನೂನನಿನಡಿ ಶಿಕ್ಷಾರ್ಹವಾಗಿರುತ್ತದೆ ಎಂದು ಹೈಕೋರ್ಟ್ ಹೇಳಿದೆ.

    ಈ ಮೂಲಕ 2008ರಲ್ಲಿ ಓರ್ವ ಪುರುಷ ಮತ್ತು ಮಹಿಳೆಯ ವಿರುದ್ಧದ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿದೆ.

    ಏನಿದು ಪ್ರಕರಣ?:
    ಕೊಲ್ಲಂ ಪೊಲೀಸರು ಬಸ್ ನಿಲ್ದಾಣದಲ್ಲಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಶಂಕಿತ ಓರ್ವ ಮಹಿಳೆ ಹಾಗೂ ಪುರುಷನನ್ನು ವಿಚಾರಣೆ ನಡೆಸಿ, ಬ್ಯಾಗ್‍ನಲ್ಲಿದ್ದ ಕ್ಯಾಮೆರಾವನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಪುರುಷನ ಕ್ಯಾಮೆರಾದಲ್ಲಿ ಮಹಿಳೆಯ ಅಶ್ಲೀಲ ಫೋಟೋಗಳಿದ್ದವು. ಹೀಗಾಗಿ ಇಬ್ಬರನ್ನೂ ಬಂಧಿಸಿ, ಕ್ಯಾಮೆರಾವನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದರು.

    ಈ ಕುರಿತು ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಕ್ಯಾಮೆರಾದಲ್ಲಿರುವ ಫೋಟೋಗಳನ್ನು ಪ್ರಕಟಿಸಿದ್ದಾರೆ ಎಂಬುದಕ್ಕೆ ಯಾವುದೇ ಸೂಕ್ತ ದಾಖಲೆಗಳಿಲ್ಲ. ಅಶ್ಲೀಲ ಫೋಟೋಗಳನ್ನು ಇಟ್ಟುಕೊಳ್ಳುವುದು ಅಪರಾಧವಲ್ಲ. ಹೀಗಾಗಿ ಆರೋಪಿಗಳ ವಿರುದ್ಧ ಪ್ರಕರಣವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ.

  • ರಾತ್ರೋರಾತ್ರಿ ಪುಂಡರಿಗೆ ಪೊಲೀಸರಿಂದ ಖಡಕ್ ವಾರ್ನಿಂಗ್

    ರಾತ್ರೋರಾತ್ರಿ ಪುಂಡರಿಗೆ ಪೊಲೀಸರಿಂದ ಖಡಕ್ ವಾರ್ನಿಂಗ್

    ಬೆಂಗಳೂರು: ನಗರದ ಉತ್ತರ ವಿಭಾಗದ ಪೊಲೀಸರು ಪುಂಡ ಪೋಕರಿಗಳಿಗೆ ರಾತ್ರೋರಾತ್ರಿ ವಾರ್ನಿಂಗ್ ನೀಡಿದ್ದಾರೆ.

    ರಸ್ತೆ ಬದಿ ಸಿಗರೇಟ್ ಸೇದಿ, ಮದ್ಯ ಸೇವಿಸಿ ಗುಂಪಾಗಿ ನಿಂತು ಹೆಣ್ಣು ಮಕ್ಕಳನ್ನು ರೇಗಿಸುವ ವ್ಯಕ್ತಿಗಳನ್ನು ಕರೆಸಿ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ನೇತೃತ್ವದಲ್ಲಿ ಎಚ್ಚರಿಕೆ ನೀಡಿದ್ದಾರೆ.

    ಡಿಸಿಪಿ ಶಶಿಕುಮಾರ್ ಅವರ ಜೊತೆ ಮಲ್ಲೇಶ್ವರಂ ಉಪವಿಭಾಗದ ಎಸಿಪಿ ಧನಂಜಯ್ ಹಾಗೂ ಇನ್ಸ್ ಪೆಕ್ಟರ್ ಭಾಗಿಯಾಗಿದ್ದರು. ಪೊಲೀಸರು ಪುಂಡರನ್ನು ಓಕಳಿಪುರದ ಕಲ್ಯಾಣ ಮಂಟಪವೊಂದಕ್ಕೆ ಕರೆಸಿ ಬುದ್ಧಿವಾದ ಹೇಳಿದ್ದಾರೆ.

    ಬುದ್ಧಿವಾದ ಹೇಳಿದ ನಂತರ ಗುರುತಿನ ಚೀಟಿ ಪಡೆದು ಅಪರಾಧ ಕೃತ್ಯದಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದ್ದಾರೆ.

  • ಕ್ರೈಂ ಡಿಟೆಕ್ಷನ್ ನಲ್ಲಿ ದಾಖಲೆ ಬರೆದ ಪೊಲೀಸ್ ಕಮೀಷನರ್ ಸುನೀಲ್ ಕುಮಾರ್

    ಕ್ರೈಂ ಡಿಟೆಕ್ಷನ್ ನಲ್ಲಿ ದಾಖಲೆ ಬರೆದ ಪೊಲೀಸ್ ಕಮೀಷನರ್ ಸುನೀಲ್ ಕುಮಾರ್

    ಬೆಂಗಳೂರು: ಸ್ಯಾಂಡಲ್ ವುಡ್ ನಟ ದಿವಂಗತ ಅಂಬರೀಷ್ ಅಂತ್ಯಕ್ರಿಯೆಯಲ್ಲಿ ಒಂಚೂರು ಗಲಾಟೆಯಾಗದಂತೆ ಬಂದೋಬಸ್ತ್ ಮಾಡಿದ್ದ ಬೆಂಗಳೂರು ಪೊಲೀಸ್ ಕಮೀಷನರ್ ಹೀರೋ ಆಗಿ ಮಿಂಚಿದ್ದರು. ಇದೀಗ ಮತ್ತೊಮ್ಮೆ ಪೊಲೀಸ್ ಆಯುಕ್ತರ ಮುಡಿಗೆ ಕಿರೀಟವೊಂದು ಬಂದು ಸೇರಿದೆ.

    ಅಂಬಿ ಅಂತ್ಯಕ್ರಿಯೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟಿದ್ದ ಬೆಂಗಳೂರು ಪೊಲೀಸ್ ಆಯುಕ್ತ ಇದೀಗ ಕ್ರೈಂ ಡಿಟೆಕ್ಷನ್‍ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಹಿಂದಿನ ಯಾವ ಕಮೀಷನರ್ ಗಳ ಅವಧಿಯಲ್ಲೂ ಆಗದಷ್ಟು ಹೆಚ್ಚಿನ ಕ್ರೈಂ ಡಿಟೆಕ್ಷನ್ ಸುನೀಲ್ ಕುಮಾರ್ ಅವಧಿಯಲ್ಲಿ ಆಗಿದೆ.

    ಈ ವರ್ಷ ನವೆಂಬರ್ ಅಂತ್ಯದ ತನಕ ನಗರದಲ್ಲಿ ಒಟ್ಟು 202 ಕೊಲೆಗಳಾಗಿದೆ. ಇದರಲ್ಲಿ 194 ಕೇಸ್ ಡಿಟೆಕ್ಟ್ ಆಗಿದ್ದು, ಕೊಲೆ ಹಂತಕರನ್ನು ಜೈಲಿಗಟ್ಟಿದ್ದಾರೆ. 636 ದರೋಡೆ ಪ್ರಕರಣಗಳು ದಾಖಲಾಗಿದ್ದು, 411 ರಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ. ಅಲ್ಲದೇ ಪೊಲೀಸರ ನಿದ್ದೆ ಕೆಡಿಸಿದ ಸರಗಳ್ಳತನ ಪ್ರಕರಣಗಳ 289 ಕೇಸ್ ವರದಿಯಾಗಿದ್ದು, ಅದರಲ್ಲಿ 206 ಕೇಸ್ ಪತ್ತೆ ಮಾಡಲಾಗಿದೆ. ಈ ವರ್ಷದಲ್ಲಿ 5023 ಮೋಟಾರ್ ವಾಹನಗಳು ಕಳವಾಗಿದ್ದು, 1296 ವಾಹನಗಳನ್ನ ಪತ್ತೆ ಮಾಡಲಾಗಿದೆ. ಈ ವರ್ಷ 2701 ಚೀಟಿಂಗ್ ಕೇಸ್ ಗಳು ದಾಖಲಾಗಿದ್ದು, 1015 ಕೇಸ್ ಗಳಲ್ಲಿ ನ್ಯಾಯ ಕೊಡಿಸಲಾಗಿದೆ.

    ದುರಂತ ಅಂದರೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗದೇ ಇರುವುದು. ಈ ವರ್ಷ ಬರೋಬ್ಬರಿ 350 ಪೋಕ್ಸೋ ಕೇಸ್ ಗಳು ದಾಖಲಾಗಿದ್ದು, 339 ಮಂದಿ ಆರೋಪಿಗಳನ್ನ ಜೈಲಿಗಟ್ಟಲಾಗಿದೆ. 750 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿ 560 ಕೇಸ್ ಗಳನ್ನು ಪರಿಹರಿಸಲಾಗಿದೆ. ಸ್ವಾರಸ್ಯದ ಸಂಗತಿ ಅಂದರೆ ದಾಖಲಾದ 98 ರೇಪ್ ಕೇಸ್ ಗಳಲ್ಲಿ ಅಷ್ಟು ಮಂದಿಗೂ ನ್ಯಾಯ ಕೊಡಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.

    ಒಟ್ಟಿನಲ್ಲಿ ಈ ಬಾರಿ ಕ್ರೈಂ ಡಿಟೆಕ್ಷನ್ ಮೇಲುಗತಿಯಲ್ಲಿ ಸಾಗಿದೆ. ಹಗಲು ರಾತ್ರಿ ದುಡಿದು ಸಾಕಷ್ಟು ಕೇಸ್ ಗಳನ್ನ ಪತ್ತೆ ಹಚ್ಚುವಲ್ಲಿ ಎಲ್ಲಾ ಪೊಲೀಸರು ಶ್ರಮಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೂರು ನೀಡಲು ಬಂದಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಸಿಪಿಐಗೆ ಗೂಸಾ!

    ದೂರು ನೀಡಲು ಬಂದಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಸಿಪಿಐಗೆ ಗೂಸಾ!

    – ಹೆಚ್ಚುವರಿ ಎಸ್‍ಪಿಯಿಂದ ತನಿಖೆಗೆ ಆದೇಶ

    ಹಾವೇರಿ: ದೂರು ನೀಡಲು ಬಂದಿದ್ದ ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿದ ಆರೋಪದ ಮೇಲೆ ಕರ್ತವ್ಯದಲ್ಲಿದ್ದ ಸಿಪಿಐರನ್ನು ಹಿಡಿದು ಎಳೆದಾಡಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ನಡೆದಿದೆ.

    ಬ್ಯಾಡಗಿ ಪೊಲೀಸ್ ಠಾಣೆಯ ಸಿಪಿಐ ಚಿದಾನಂದ ಠಾಣೆಗೆ ದೂರು ನೀಡಲು ಬಂದಿದ್ದ ಶೇಖವ್ವ ಲಮಾಣಿ ಎಂಬವರ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನು ಆರೋಪ ಕೇಳಿ ಬಂದಿದೆ. ಈ ಕುರಿತು ಮಹಿಳೆ ತಮ್ಮ ಸಂಬಂಧಿಕರಿಗೆ ಮಾಹಿತಿ ನೀಡಿದ್ದರು. ಇದನ್ನು ತಿಳಿದ ಸಂಬಂಧಿಕರು ಸಿಪಿಐ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಎಸ್‍ಪಿ ಕಚೇರಿಗೆ ತೆರಳಿ ಸಿಪಿಐ ಚಿದಾನಂದ ವಿರುದ್ಧ ದೂರು ನೀಡಿದ್ದಾರೆ.

    ಏನಿದು ಪ್ರಕರಣ?:
    ಶೇಖವ್ವ ಲಮಾಣಿ ಸಹೋದರ ಮಾಲತೇಶ್ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಮಾಲತೇಶ್ ಅಕ್ಕನ ಕುರಿತಾಗಿ ಮಾವನಿಗೆ ಚಾಡಿ ಹೇಳುತ್ತಿದ್ದ. ಅದನ್ನು ನಂಬುತ್ತಿದ್ದ ಪತಿ ಆಕೆಯ ಜೊತೆಗೆ ಜಗಳವಾಡಿ ಹಲ್ಲೆ ಮಾಡುತ್ತಿದ್ದ. ಇಬ್ಬರ ಕಿರುಕುಳದಿಂದ ಬೇಸತ್ತ ಶೇಖವ್ವ ನವೆಂಬರ್ 11ರಂದು ಬ್ಯಾಡಗಿ ಪೊಲೀಸ್ ಠಾಣೆಗೆ ತೆರಳಿ ಪತಿ ಹಾಗೂ ತಮ್ಮನಿಗೆ ಬುದ್ಧಿ ಹೇಳುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಅಂದು ಸಿಪಿಐ ಚಿದಾನಂದ ಅಸಭ್ಯವಾಗಿ ವರ್ತಸಿದ್ದಾರೆ.

    ಪೊಲೀಸ್ ಅಧಿಕಾರಿಯ ವರ್ತನೆಯಿಂದ ಬೇಸತ್ತ ಶೇಖವ್ವ ಮತ್ತೆ ಠಾಣೆಗೆ ತೆರಳಿರಲಿಲ್ಲ. ಆದರೆ ಭಾನುವಾರ ಸಹೋದರ ಹಾಗೂ ಪತಿಯ ಜೊತೆಗೆ ರಾಜಿ ಪಂಚಾಯತಿ ನಡೆಸಲಾಗಿತ್ತು. ಈ ವೇಳೆ ಅಲ್ಲಿಗೆ ಬಂದಿದ್ದ ಸಿಪಿಐ ಚಿದಾನಂದ ಅವರನ್ನು ನೋಡಿದ ಶೇಖವ್ವ, ಠಾಣೆಗೆ ಹೋಗಿದ್ದಾಗ ದೂರು ಆಲಿಸಿದ ಸಿಪಿಐ, ನಿನಗೆ ಎಲ್ಲಿ ಹಲ್ಲೆ ಮಾಡಿದ್ದಾರೆ ತೋರಿಸು. ಹೇಗೆ ಹೊಡೆದಿದ್ದಾರೆ? ಯಾವ ಭಾಗಕ್ಕೆ ಹೊಡೆದರು ಎಂದು ಪ್ರಶ್ನಿಸಿ ಅಸಭ್ಯವಾಗಿ ವರ್ತಿಸಿದ್ದರು ಎಂದು ದೂರಿದ್ದಾರೆ.

    ಶೇಖವ್ವ ಆರೋಪ ಮಾಡುತ್ತಿದ್ದಂತೆ ಸಂಬಂಧಿಕರು ಚಿದಾನಂದ ಅವರ ಸುತ್ತ ನಿಂತು ಎಳೆದಾಡಿ ಹಲ್ಲೆ ಮಾಡಿದ್ದಾರೆ. ಬಳಿಕ ಎಸ್‍ಪಿ ಕಚೇರಿಗೆ ತೆರಳಿ ಚಿದಾನಂದ ವಿರುದ್ಧ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಹೆಚ್ಚುವರಿ ಎಸ್‍ಪಿ ಜಗದೀಶ್ ತನಿಖೆಗೆ ನಡೆಸುವುದಾಗಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮೂರು ಗಂಟು, 6 ಮದುವೆಗಳು: ಕೊನೆಗೆ ಸಿಕ್ಕಿಬಿದ್ದಳು ಖತರ್ನಾಕ್ ಸುಂದರಿ!

    ಮೂರು ಗಂಟು, 6 ಮದುವೆಗಳು: ಕೊನೆಗೆ ಸಿಕ್ಕಿಬಿದ್ದಳು ಖತರ್ನಾಕ್ ಸುಂದರಿ!

    ಹೈದರಾಬಾದ್: ನೋಡೋಕೆ ಸುಂದರವಾಗಿದ್ದ ಐನಾತಿ ಸುಂದರಿಯೊಬ್ಬಳು ಬರೋಬ್ಬರಿ ಆರು ಬಾರಿ ಮದುವೆಯಾಗಿ, ಈಗ ಪೊಲೀಸರಿಗೆ ಅತಿಥಿಯಾಗಿದ್ದಾಳೆ.

    ಪ್ರಕಾಶಂ ಜಿಲ್ಲೆಯ ಮಾದಿನಿಪುರಂ ಗ್ರಾಮದ ನಿವಾಸಿಯಾಗಿರುವ ಅನಂತರೆಡ್ಡಿ ಮಗಳು ಮೌನಿಕಾ ಆರು ಮದುವೆಗಳನ್ನ ಮಾಡಿಕೊಂಡ ಐನಾತಿ ಸುಂದರಿ.

    ಈಕೆ ಮೂರು ತಿಂಗಳ ಹಿಂದೆ ಖಾಜಿಪೇಟದ ಕೊಮ್ಮಲೂರು ಗ್ರಾಮದ ನಿವಾಸಿ ರಾಮಕೃಷ್ಣಾರೆಡ್ಡಿ ಎಂಬುವವರ ಜೊತೆ ಮದುವೆಯಾಗಿದ್ದಳು. ಅವಳ ಅಂದಕ್ಕೆ ಮನಸೋತಿದ್ದ ರಾಮಕೃಷ್ಣಾರೆಡ್ಡಿ ಆಕೆಯ ಕುಟುಂಬಸ್ಥರ ಬಳಿ ವರದಕ್ಷಿಣೆ ತೆಗೆದುಕೊಳ್ಳದೆ ಮತ್ತು ವಧುದಕ್ಷಿಣೆ ನೀಡಿ ಮದುವೆ ಮಾಡಿಕೊಂಡಿದ್ದರು.

    ದಾಂಪತ್ಯದಲ್ಲಿ ಏನೂ ಕೊರತೆಯಿಲ್ಲದೆ ಇಬ್ಬರು ಸುಖವಾಗಿ ಜೀವನ ನಡೆಸುತ್ತಿದ್ದರು. ಆದರೆ ಆಗಸ್ಟ್ 25 ರಂದು ಮೌನಿಕಾಳ ತಂದೆ ಅನಂತರೆಡ್ಡಿ ಮಗಳನ್ನು ಊರಿಗೆ ಕರೆದೊಯ್ಯುವುದಾಗಿ ಹೇಳಿ, ಗಂಡನನ್ನ ಬಿಟ್ಟು ತಂದೆಯ ಜೊತೆ ಸ್ವಗ್ರಾಮಕ್ಕೆ ತೆರಳದೇ ಬೇರೆಡೆ ಹೊರಟಿದ್ದರು.

    ಈಗಷ್ಟೆ ಮದುವೆಯಾಗಿದ್ದ ರಾಮಕೃಷ್ಣನಿಗೆ ಹೆಂಡತಿಯನ್ನ ಬಿಟ್ಟಿರಲು ಸಾಧ್ಯವಾಗದ ಕಾರಣ, ಅವಳ ತವರು ಮನೆಗೆ ಕರೆ ಮಾಡಿ ವಿಚಾರಿಸುತ್ತಾರೆ. ಆದರೆ ಅಪ್ಪ-ಮಗಳು ಊರಿನ ಬಾರದೇ ಇರುವ ವಿಷಯವನ್ನ ತಿಳಿದ ಪತಿ ಗಾಬರಿಗೊಂಡು ಎಲ್ಲೆಡೆ ಹುಡುಕಾಟ ನಡೆಸುತ್ತಾರೆ.

    ಪತ್ನಿಯನ್ನ ಎಷ್ಟು ಹುಡುಕಿದರೂ ಪತ್ತೆಯಾಗದ ಕಾರಣ ಕೊನೆಯಲ್ಲಿ ಪೊಲೀಸರ ಬಳಿ ತನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರನ್ನ ನೀಡುತ್ತಾರೆ. ಈ ಸಂಬಂಧ ತನಿಖೆಯನ್ನ ಆರಂಭಿಸಿದ ಪೊಲೀಸರಿಗೆ ಪತ್ನಿ ಮೌನಿಕಳಾ ನಿಜವಾದ ರೂಪ ಬಯಲಾಗಿದೆ.

    ಮೌನಿಕಾ ಪತ್ತೆಯಾಗಿದ್ದು ಹೇಗೆ?
    ತನಿಖೆ ಆರಂಭಿಸಿದ ಪೊಲೀಸರು ಮೌನಿಕಾಳ ಮೊಬೈಲ್ ಫೋನ್ ಟ್ರಾಕ್ ಮಾಡುವ ಮೂಲಕ ಆಕೆಯನ್ನ ಪತ್ತೆಹಚ್ಚಿದ್ದಾರೆ. ಮೊದಲು ವಿಜಯವಾಡದಲ್ಲಿದ್ದ ಅಪ್ಪ-ಮಗಳು ನಂತರ ವಿಶಾಖಪಟ್ಟಣಂಗೆ ತೆರಳಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗುತ್ತದೆ. ವಿಶಾಖಪಟ್ಟಣಂನಿಂದ ಹೈದರಾಬಾದ್‍ಗೆ ಬಂದಿದ್ದ ಮೌನಿಕಾ, ಒಬ್ಬ ಯುವಕನ ಜೊತೆ ಇದ್ದಾಳೆಂಬ ಮಾಹಿತಿ ಮೇರೆಗೆ ಪೊಲೀಸರು ಆಕೆಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಆರು ಮದುವೆಯ ಜಾಲ ಪತ್ತೆ!
    ತೀವ್ರ ವಿಚಾರಣೆಯನ್ನ ನಡೆಸಿದ ಪೊಲೀಸರಿಗೆ ಮೌನಿಕಾಳಿಂದ ಆಶ್ಚರ್ಯಕರ ಮಾಹಿತಿ ಹೊರಬಿದ್ದಿದೆ. ಈಕೆ ಪ್ರಕಾಶಂ ಜಿಲ್ಲಾ ಮಾರ್ಕಾಪುರಕ್ಕೆ ಸೇರಿದ ವ್ಯಕ್ತಿಯ ಜೊತೆ ಮೊದಲ ಮದುವೆ ಮಾಡಿಕೊಂಡಿದ್ದು, ವಿವಾಹವಾದ ಸ್ವಲ್ಪ ದಿನದ ನಂತರ ಪ್ರಕಾಶಂ ಜಿಲ್ಲಾ ಪಂದಿಲ್ಲಪಲ್ಲೆ ಗ್ರಾಮದ ವ್ಯಕ್ತಿಯ ಜೊತೆ ಎರಡನೇ ಮದುವೆ ಮಾಡಿಕೊಂಡಿದ್ದಾಳೆ.

    ಇನ್ನೂ ಮೂರನೇ ಮದುವೆಯನ್ನು ಗಿದ್ದಲೂರು ಗ್ರಾಮದ ವ್ಯಕ್ತಿಯ ಜೊತೆ ಮಡಿಕೊಂಡಿದ್ದು, ತೆನಾಲಿ ಗ್ರಾಮದ ವ್ಯಕ್ತಿಯ ಜೊತೆ ನಾಲ್ಕನೇ ವಿವಾಹವಾಗಿ ಕೆಲ ದಿನ ಅವನ ಜತೆ ಸಂಸಾರ ನಡೆಸಿದ್ದಾಳೆ. ಅದಾದ ಬಳಿಕ ಅಲ್ಲಿಂದಲೂ ಕಾಲ್ಕಿತ್ತಿದ್ದ ಮೌನಿಕಾ ರಾಮಕೃಷ್ಣರೆಡ್ಡಿ ಜೊತೆ ಐದನೇ ಮದುವೆಯಾಗಿದ್ದಾಳೆ. ಈತನಿಗೂ ಕೈಕೊಟ್ಟು ಕೊನೆಯಲ್ಲಿ ವಿಜಯವಾಡಕ್ಕೆ ಹಾರಿ, ಅಲ್ಲಿಯ ಹೈದರಾಬಾದ್ ಯುವಕನನ್ನು ಬುಟ್ಟಿಗೆ ಬೀಳಿಸಿಕೊಂಡು ಅನ್ನಾವರಂನಲ್ಲಿ ಆರನೇ ಮದುವೆ ಆಗಿದ್ದಾಳೆ.

    ಖತರ್ನಾಕ್ ಸುಂದರಿ!
    ಈ ಸುಂದರಿ ಈ ಆರು ವ್ಯಕ್ತಿಗಳೊಂದಿಗೆ ಮದುವೆಯಾಗಿ, ಕೆಲ ದಿನಗಳು ಹಾಗೂ ಕೆಲ ತಿಂಗಳುಗಳ ಕಾಲ ಸಂಸಾರ ನಡೆಸುತ್ತಿದ್ದಳು. ಬಳಿಕ ಅವರ ತಂದೆ ಆಕೆಯನ್ನು ಕರೆದೊಯ್ಯುತ್ತಿದ್ದನು. ಕರೆದೊಯ್ಯುವ ಹಿಂದಿನ ದಿನ ಮನೆಯಲ್ಲಿದ್ದ ನಗದು, ಬಂಗಾರವನ್ನು ಲಪಾಟಾಯಿಸಿ ಅಲ್ಲಿಂದ ಪರಾರಿಯಾಗುತ್ತಿದ್ದಳು. ಈ ರೀತಿ ಆರು ಜನರ ಕುಟುಂಬಸ್ಥರನ್ನ ನಂಬಿಸಿ ನಂತರ ಅವರ ಮನೆಗೆ ಕನ್ನ ಹಾಕುತ್ತಿದ್ದಳು.

    ಈ ಸಂಬಂಧ ಪ್ರಕರಣವನ್ನ ಪೊಲೀಸರು ಐಪಿಸಿ ಸೆಕ್ಷನ್ 420 ಯ ಅಡಿಯಲ್ಲಿ ಮೌನಿಕಾಳಾ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದು, ವಿಚಾರಣೆಯನ್ನ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಎಸ್‍ಐಗೆ ಮನಬಂದಂತೆ ಥಳಿಸಿದ ಬಿಜೆಪಿ ಮುಖಂಡ- ವಿಡಿಯೋ ವೈರಲ್

    ಎಸ್‍ಐಗೆ ಮನಬಂದಂತೆ ಥಳಿಸಿದ ಬಿಜೆಪಿ ಮುಖಂಡ- ವಿಡಿಯೋ ವೈರಲ್

    ಲಕ್ನೋ: ಪೊಲೀಸ್ ಸಬ್-ಇನ್‍ಸ್ಪೆಕ್ಟರ್ ಒಬ್ಬರನ್ನು ಉತ್ತರ ಪ್ರದೇಶದ ಬಿಜೆಪಿ ಮುಖಂಡನೊಬ್ಬ ಮನಬಂದಂತೆ ಥಳಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮೀರತ್ ರೆಸ್ಟೋರೆಂಟ್‍ವೊಂದರಲ್ಲಿ ಎಸ್‍ಐ ಮತ್ತು ಬಿಜೆಪಿ ಕೌನ್ಸಿಲರ್ ಮನೀಶ್ ಕುಮಾರ್ ನಡುವೆ ಮಾತಿನ ಚಕಮಕಿ ನಡೆದು, ಮನೀಶ್ ಎಸ್‍ಐಗೆ ಮನ ಬಂದಂತೆ ಥಳಿಸಿದ್ದಾನೆ.

    ಏನಿದು ಘಟನೆ?
    ಶುಕ್ರವಾರ ರಾತ್ರಿ ಮೋಹಿಯುದ್ದಿನ್ ಪುರ್ ಠಾಣೆಯ ಉಸ್ತುವಾರಿಯಾದ ಎಸ್‍ಐ ಸುಖ್‍ಪಾಲ್ ಸಿಂಗ್ ಪವಾರ್, ಅದೇ ನಗರದ ವಕೀಲೆಯ ಜೊತೆಗೆ ರೆಸ್ಟೋರೆಂಟ್‍ಗೆ ಬಂದಿದ್ದಾರೆ. ಆರ್ಡರ್ ಮಾಡಿ ಹಲವು ಸಮಯ ಕಳೆದರೂ ಊಟವನ್ನ ತಂದುಕೊಡದ ಕಾರಣ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆದಿದೆ.

    ಸಿಬ್ಬಂದಿ ಜೊತೆ ಜಗಳವಾಡುತ್ತಿದ್ದನ್ನು ಗಮನಿಸಿದ ರೆಸ್ಟೋರೆಂಟ್ ಮಾಲೀಕನಾದ ಮನೀಶ್ ಕುಮಾರ್, ಎಸ್‍ಐ ಸುಖ್‍ಪಾಲ್ ಜೊತೆ ಮಾತಿಗಿಳಿದಿದ್ದಾನೆ. ನೋಡ ನೋಡುತ್ತಿದ್ದಂತೆ ಎಸ್‍ಐಗೆ ಹಿಗ್ಗಾ-ಮುಗ್ಗಾ ಥಳಿಸಿದ ಮನೀಶ್, ಎಸ್‍ಐ ಅವರನ್ನ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬಿಜೆಪಿ ಕೌನ್ಸಿಲರ್ ಮನೀಶ್ ವಿರುದ್ಧ ಪೊಲೀಸರು ಸೆಕ್ಷನ್ 395 (ಗೂಂಡಾಗಿರಿ) 354 (ಮಹಿಳೆಯ ಮೇಲೆ ಹಲ್ಲೆ) ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಮಾಲೀಕನನ್ನು ಬಂಧಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಓರಿಜಿನಲ್ ಡಾಕ್ಟರ್ ಮನೆಯಲ್ಲಿ, ನಕಲಿ ಡಾಕ್ಟರ್ ಐಸಿಯುನಲ್ಲಿ ಕೊಡ್ತಾನೆ ಚಿಕಿತ್ಸೆ

    ಓರಿಜಿನಲ್ ಡಾಕ್ಟರ್ ಮನೆಯಲ್ಲಿ, ನಕಲಿ ಡಾಕ್ಟರ್ ಐಸಿಯುನಲ್ಲಿ ಕೊಡ್ತಾನೆ ಚಿಕಿತ್ಸೆ

    ಚಿತ್ರದುರ್ಗ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಕಲಿ ಡಾಕ್ಟರ್ ಐಸಿಯುನಲ್ಲಿ ಕೆಲಸ ಮಾಡುತ್ತಿದ್ದರೇ, ಓರಿಜಿನಲ್ ಡಾಕ್ಟರ್ ಮನೆಯಲ್ಲಿ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ.

    ಚಿತ್ರದುರ್ಗ ಜಿಲ್ಲೆಯ ಆರು ತಾಲೂಕುಗಳಿಗೆ ಒಂದೇ ದೊಡ್ಡ ಆಸ್ಪತ್ರೆ. ಜಿಲ್ಲಾಸ್ಪತ್ರೆಯಲ್ಲಿ 32 ಮಂದಿ ಸರ್ಕಾರಿ ವೈದ್ಯರಿದ್ದಾರೆ. ಎಲ್ಲ ವೈದ್ಯರಿಗೂ ಕೈ ತುಂಬ ಸಂಬಳ ನೀಡಲಾಗುತ್ತದೆ. ಆದ್ರೆ ದಿನೇಶ್ ಎಂಬ ನಕಲಿ ವೈದ್ಯ ಕಳೆದ ಆರು ತಿಂಗಳನಿಂದ ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ರಾತ್ರಿ ಪಾಳಯದಲ್ಲಿ ರೋಗಿಗಳಿಗೆ ಚಿಕಿತ್ಸೆಯನ್ನ ನೀಡುತ್ತಿದ್ದಾನೆ. ಕೇವಲ ಹೆಲ್ತ್ ಇನ್ಸ್ ಪೆಕ್ಟರ್ ತರಬೇತಿಯನ್ನ ಪಡೆದಿರುವ ದಿನೇಶ್ ಮಾತ್ರ ತಾನೇ ವೈದ್ಯ ಎಂಬಂತೆ ಚಿಕಿತ್ಸೆ ಕೊಡುತ್ತಾನೆ.

    ರಾತ್ರಿ ಪಾಳಯದಲ್ಲಿ ಕೆಲಸ ಮಾಡಬೇಕಾದ ವೈದ್ಯರು ಮಾತ್ರ ಮನೆಯಲ್ಲಿ ಹಾಯಾಗಿ ನಿದ್ರೆಗೆ ಜಾರುತ್ತಾರೆ. ಅಸಲಿ ವೈದ್ಯರ ಬದಲಾಗಿ ದಿನೇಶ್ ಆ ಪಾಳಿಯಲ್ಲಿ ಐಸಿಯುನಲ್ಲಿ ಡಾಕ್ಟರ್ ಆಗಿ ಆರು ತಿಂಗಳಿನಿಂದಲೂ ಅದೆಷ್ಟೋ ಅಮಾಯಕ ಜೀವಗಳ ಜೊತೆಗೆ ಚೆಲ್ಲಾಟವಾಡಿದ್ದಾನೆ.

    ರಾತ್ರಿ ವೇಳೆ ತುರ್ತು ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಬರುತ್ತಿದ್ದ ರೋಗಿಗಳನ್ನ ದಾವಣಗೆರೆ ಮತ್ತು ಬೆಂಗಳೂರಿಗೆ ರೆಫರ್ ಮಾಡಲಾಗುತ್ತಿದೆ. ಇದಕ್ಕೆ ಕಾರಣ ಸರ್ಕಾರಿ ಡಾಕ್ಟರ್ ನೈಟ್ ಡ್ಯೂಟಿಗೆ ಬಾರದೇ ನಕಲಿ ಡಾಕ್ಟರ್ ಇರೋದು. ಈ ಅಕ್ರಮ ಜನರಿಗೆ ಗೊತ್ತಾಗುತ್ತಿದ್ದಂತೆ ನಕಲಿ ಡಾಕ್ಟರ್ ದಿನೇಶ್, ಸಾಮಾಜಿಕ ಹೋರಾಟಗಾರ ಷಫೀವುಲ್ಲಾ ಎಂಬವರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ರೋಗಿಗಳ ಜೀವದ ಜೊತೆಗೆ ಚೆಲ್ಲಾಟವಾಡಿರೋ ನಕಲಿ ಡಾಕ್ಟರ್ ಮತ್ತು ಅಕ್ರಮಕ್ಕೆ ಸಾಥ್ ಕೊಟ್ಟವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಷಫೀವುಲ್ಲಾ ಆಗ್ರಹಿಸಿದ್ದಾರೆ.

    ಈ ಅಕ್ರಮಕ್ಕೆ ಜಿಲ್ಲಾ ಸರ್ಜನ್ ಡಾಕ್ಟರ್ ಜಯಪ್ರಕಾಶ್ ಮತ್ತು ಆರ್‍ಎಂಒ ಡಾಕ್ಟರ್ ಆನಂದಪ್ರಕಾಶ್ ಸಾಥ್ ಕೊಟ್ಟಿದ್ದಾರೆ ಅನ್ನೋ ಆರೋಪವಿದ್ದು, ಈ ಅಕ್ರಮವನ್ನ ಮುಚ್ಚಿಹಾಕಲು ಆರ್‍ಟಿಐ ಅಡಿ ಸಿಸಿಟಿವಿ ಫೂಟೇಜ್ ಕೇಳಿ ಅಲ್ಲಿರುವ ದೃಶ್ಯ ಕಾಣದಂತೆ ಬ್ಲರ್ ಮಾಡಿಸಿದ್ದಾರೆ. ಈ ವಿಚಾರವಾಗಿ ಪೊಲೀಸರು ತನಿಖೆಯನ್ನ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

    ಸಾಮಾಜಿಕ ಹೋರಾಟಗಾರ ಷಫೀವುಲ್ಲಾ ಮತ್ತು ನಕಲಿ ವೈದ್ಯನ ಫೋನ್ ಸಂಭಾಷಣೆ ಹೀಗಿದೆ.

    ಸಾಮಾಜಿಕ ಹೋರಾಟಗಾರ: ಯಾಕಪ್ಪ ಮಾಡೋಕೆ ಹೋದೆ ನೀನು..?
    ನಕಲಿ ಡಾಕ್ಟರ್: ಏನೋ ತಪ್ಪಾಗಿದೆ ಸರ್
    ಹೋರಾಟಗಾರ: ತಪ್ಪಲ್ಲ. ಒಂದು ತಿಂಗಳಲ್ಲ, ಎಷ್ಟು ದಿನಗಳಿಂದ ಮಾಡ್ತಿದ್ಯಾ..? ಕರೆಕ್ಟಾಗಿ ಹೇಳಪ್ಪ. ಸರಿನಾ ನೀ ಮಾಡೋದು…? ಏನ್ ಮಾಡ್ಬೇಕಂತಿದಿರಾ ಮತ್ತೆ…? ಎಷ್ಟು ಜನ ಪೇಷೆಂಟ್‍ಗಳು ಹಾಳಾಗೋಗಿದಾರೆ. ಅದೇನೇನಾಗಿದೆ ಆರೇಳು ತಿಂಗಳುಗಳಿಂದ ಹೇಳು. ನಿಂದು ಕಂಪ್ಲೀಟ್ ಆಗಿದ್ಯಾ, ಇಲ್ಲಪ್ಪ ಹೇಳು.
    ನಕಲಿ ಡಾಕ್ಟರ್: ಸಾರ್…
    ಹೋರಾಟಗಾರ: ಎಷ್ಟು ಜನ ಡಾಕ್ಟರ್..? ಎಷ್ಟು ದುಡ್ಡು ಕೊಟ್ಟಿರಬಹುದು…? ಏನು 500 ಅಥವಾ 1000 ನಾ ಕೊಟ್ಟಿರಬಹುದಾ ನಿನಗೆ…?
    ನಕಲಿ ಡಾಕ್ಟರ್: ಇಲ್ಲ ಅಣ್ಣ, ಏನು ಇಸ್ಕೊಂಡಿಲ್ಲ..
    ಹೋರಾಟಗಾರ: ಅದನ್ನೂ ಕೊಟ್ಟಿಲ್ವಾ…?
    ನಕಲಿ ಡಾಕ್ಟರ್: ಇಲ್ಲಣ್ಣ..ವ್ಯಾಲೆಂಟ್ರಿಯಾಗಿಯೇ ಮಾಡಿದ್ದೀನಿ..
    ಹೋರಾಟಗಾರ: ಅಯ್ಯೋ ಕರ್ಮವೇ..
    ನಕಲಿ ಡಾಕ್ಟರ್: ಒಂದು ರೂಪಾಯಿ ಇಸ್ಕೊಂಡಿಲ್ಲಣ್ಣ

    ಹೋರಾಟಗಾರ: ಮತ್ತೆ ಹಿಂಗಾಗಿ ಬಿಟ್ರೆ ಏನ್ ಕಥೇನಪ್ಪ. ಈಗ ಅವರೆಲ್ಲ ನಿನ್ನ ತಳ್ಳಿದಾರೆ ಮುಂದಕ್ಕೆ. ಸಿಗಾಕ್ಕೊಂಡ್ರೆ ದಿನೇಶ ಸಿಗಾಕ್ಕೊತ್ತಾನೆ ಬಿಡು ಅನ್ನೋ ಮನೋಭಾವ ಆರೇಳು ಜನ ಡಾಕ್ಟರ್‍ಗಳಿಗಿದೆ. ಹೌದಾ…? ಸತ್ಯಾನಾ..?
    ನಕಲಿ ಡಾಕ್ಟರ್: ಗೊತ್ತಿಲ್ಲಣ್ಣ…ಅದಕ್ಕೆ ನಿಮ್ ಹತ್ತಿರ ಬಂದಿದಿನಿ
    ಹೋರಾಟಗಾರ: ಅವರೆಲ್ಲಾ ಸೇಫ್ ಸೈಡ್ ಆಗಿ ನಿನ್ನ ತಳ್ಳಿದಾರೆ ಗೊತ್ತಾ..?
    ನಕಲಿ ಡಾಕ್ಟರ್: ಗೊತ್ತಿಲ್ಲಣ್ಣ… ಒಂದು ರೂಪಾಯಿ ಯಾರತ್ರಾನೂ ಇಸ್ಕೊಂಡಿಲ್ಲಣ್ಣ..
    ಹೋರಾಟಗಾರ: ನಾ ಹಾಗೆ ತಿಳ್ಕೊಂಡೆ. ಏನೋ 500-1000 ಕೊಟ್ಟಿರಬೇಕು. ಏನೋ ಪಾಪ ಡೈಲಿ ಕೆಲಸ ಮಾಡಿದಾನೆ ಹುಡುಗ. ಈಗ ಕೂಲಿ ಕೆಲಸ ಮಾಡೋರು ಇನ್ಯಾವ ಮಟ್ಟಕ್ಕೆ ಇರ್ತಾತರಪ್ಪ. ಅದಕ್ಕೆ ತಾನೆ ಹೋಗೋದು. ಪಾಪ ಇವನು ಅಮಾಯಕ. ಅವರನ್ನೆಲ್ಲ ಮನೆಗೆ ಮಲಗಿಕೊಳ್ಳೋಕೆ ಬಿಟ್ಟು, ಅವರ ಬಗ್ಗೆ ಬಾರಿ ಅನುಮಾನವಿದೆ.

    ನಕಲಿ ಡಾಕ್ಟರ್: ಇಲ್ಲ ಸರ್ ನಾ ಯಾರತ್ರಾನೂ..
    ಹೋರಾಟಗಾರ: ನಾ ಹಾಗೆ ತಿಳ್ಕೊಂಡಿದ್ದೆ. ಸರ್ ಖಂಡಿತ. ಸರ್.. (ಮೂರನೇ ವ್ಯಕ್ತಿ ಜೊತೆ ಮಾತು. ನೀವ್ಯಾರು ಗೊತ್ತಾಗಲಿಲ್ಲ..)
    ಮೂರನೇ ವ್ಯಕ್ತಿ: ನಾ ಲ್ಯಾಬ್ ಟೆಕ್ನಿಷೀಯನ್ ಸರ್..
    ಹೋರಾಟಗಾರ: ಲ್ಯಾಬ್ ಟೆಕ್ನೇಷಿಯನ್ ಏನು.. ಎಲ್ಲಾ ನಿಮ್ ಡಿಪಾರ್ಟ್ಮೆಂಟ್… ಹಹಹ
    ನಕಲಿ ಡಾಕ್ಟರ್: ಒಂದು ರೂಪಾಯಿ ಯಾರತ್ರ ಇಸ್ಕೊಂಡಿಲ್ಲ. ಪೇಷೇಂಟ್ ಹತ್ತಿರ ಆಗಲಿ…
    ಹೋರಾಟಗಾರ: ನಾ ಯಾವತ್ತಾದ್ರೂ ನಿಮ್ ಆಸ್ಪತ್ರೆಗೆ ಬಂದಿದಿನಾ..ನಾ ಹಾಗೆ ಅನ್ಕೊಂಡಿದ್ದೆ.. ಅಲ್ಲ ಪೇಷೆಂಟ್ ನಿನಗೆ ಕೊಡಲ್ಲ. ನೀ ಡಾಕ್ಟರ್ ಅಲ್ಲ, ಪೇಷೆಂಟ್ ಹೇಗೆ ಕೊಡ್ತಾರೆ ನಿನಗೆ..
    ನಕಲಿ ಡಾಕ್ಟರ್: ಇಲ್ಲ ಅಣ್ಣ ಒಂದು ರೂ..
    ಹೋರಾಟಗಾರ: ನಾ ಏನ್ ತಿಳ್ಕೊಂಡಿದ್ದೆ. ಮನೇಲಿ ಮಲ್ಕೋತಾರಲ್ಲ ಡ್ಯೂಟಿ ಡಾಕ್ಟರ್..

    ನಕಲಿ ಡಾಕ್ಟರ್: ಇಲ್ಲಣ್ಣ ಮನೇಲಿ ಮಲಗಲ್ಲಣ್ಣ
    ಹೋರಾಟಗಾರ: ಒಟ್ನಲ್ಲಿ ಅಧಿಕೃತ ಡಾಕ್ಟರ್ ನೀನೆ ಅಲ್ಲಪ್ಪ. ಅಲ್ಲಿ ಅ..
    ನಕಲಿ ಡಾಕ್ಟರ್: ಇಲ್ಲ ಅಣ್ಣ..ರೂಪಾಯಿ…
    ಹೋರಾಟಗಾರ: ಅಲ್ಲ.. ದುಡ್ಡಿಸ್ಕೊಂಡಿಲ್ಲ ಅಂದ್ರೆ ಬೇಡ. ಸುಮ್ನೆ ಯಾಕೆ ನೀ ಅಲ್ಲಿ ಡ್ಯೂಟಿ ಮಾಡಿದೆ…?
    ನಕಲಿ ಡಾಕ್ಟರ್: ಏನೋ ತಪ್ಪು ಮಾಡಿದ್ದೀನಿ ಅಣ್ಣ.. ಸುಮ್ನೆ ವ್ಯಾಲೆಂಟ್ರಿ ಸರ್ವೀಸ್ ಕೊಡೋಣ ಅಂತ ಮಾಡಿದೆ ಅಣ್ಣ…

    ಹೋರಾಟಗಾರ: ಡಾಕ್ಟರ್ ಕೋಟ್ ಎಲ್ಲಾ ಹಾಕ್ಕೊಂಡು ಕೂತಿದ್ದೀಯಾ..?
    ನಕಲಿ ಡಾಕ್ಟರ್: ಕೋಟ್ ಹಾಕಿಲ್ಲಣ್ಣ
    ಹೋರಾಟಗಾರ: ಡಾಕ್ಟರ್ ಕೋಟ್ ಹಾಕಿದ್ಯಾ..? ಸೆಟ್ ಹಾಕ್ಕೊಂಡಿಯ..?
    ನಕಲಿ ಡಾಕ್ಟರ್: ಅಣ್ಣ ಸೆಟ್ ಹಾಕ್ಕೊಂಡಿರಬಹುದು… ಕೋಟ್ ಹಾಕಿಲ್ಲಣ್ಣ..
    ಹೋರಾಟಗಾರ: ಏನಪ್ಪ ನೀನು, ನಾ ಸುಮ್ ಸುಮ್ನೆ ಹೇಳ್ತಿನಾ ನಿನಗೆ. ನನಗೆ ನಿಂದೇನು ಗೊತ್ತಿಲ್ಲ. ನಾ ಸುಮ್ನೆ ಹೇಳ್ತೀನಾ.. ನೀ ಡಾಕ್ಟರ್ ಸೀಟ್‍ನಲ್ಲಿ ಕುಂತಿಲ್ವಾ..?

    ನಕಲಿ ಡಾಕ್ಟರ್: ಹು ಅಣ್ಣ… ಕೂತಿದಿನಿ
    ಹೋರಾಟಗಾರ: ಹು. ನೀ ಡಾಕ್ಟರ್ ಮಾಡಿದಂಗೆ ಮಾಡಿದ್ಯಪ್ಪ..
    ನಕಲಿ ಡಾಕ್ಟರ್: ಇಲ್ಲ ಅಣ್ಣ
    ಹೋರಾಟಗಾರ: ನನಗೆ ಈಗ ಗೊತ್ತಾಗ್ತಿದೆ. ನಾ ಬೇರೆ ತರ ಅನ್ಕೊಂಡಿದ್ದೆ. ನಿನಗೆ ಗೊತ್ತಿಲ್ಲ. ನೀನು ಏನು ಓದಿದಿಯ. ಚಳ್ಳಕೆರೆಲಿ ಓದಿದ್ದು. ನಿನ್ ಬಗ್ಗೆ ನಿಂದೆಲ್ಲಾ ಮಾಹಿತಿ ತಗೊಂಡಿದಿವಿ. ಒಳಗಿಂದು ನಿನಗೇನು ಮಾಹಿತಿ ಇಲ್ಲ. ಮೂರು ಜನ ಟಿವಿಯವರು ನಾನು ಸೇರಿ ನಿನ್ ರಿಪೋರ್ಟ್ ಕಲೆಕ್ಟ್ ಮಾಡರೋದು. ಬೆಂಕಿ ಅದು.ನೀ ಈಗ ಕೊನೆಗೆ ಬಂದಿದಿಯ.

    ಲ್ಯಾಬ್ ಟೆಕ್ನೇಷಿಯನ್: ಇಲ್ಲ ಸಾಹೇಬ್ರು ಬೆಳಿಗ್ಗೆ ಹೇಳಿದ್ರಣ್ಣ.. ಅದಕ್ಕೆ
    ಹೋರಾಟಗಾರ: ಅಲ್ಲ.. ಈಗ ಎಂಡ್‍ಗೆ ಬಂದಿದಿರಿ. ನಾ ಮಾಹಿತಿ ಕೇಳಿ ಇಪ್ಪತ್ತು ದಿನಗಳಾಯ್ತು. ಅವರು ಉದ್ದೇಶ ಪೂರ್ವಕವಾಗಿ ನನಗೆ ಮಾಹಿತಿ ನೀಡಲ್ಲ ಅಂತ ಗೊತ್ತಾಯ್ತು. ಇರಲಿ… ಯಾರೋ ಬಾಳೆಹಣ್ಣು ತಿನ್ನೋದು ಯಾರ್ನೋ ಬಲಿ ಕೊಡೋದು. ಗೊತ್ತಿತ್ತು ನನಗೆ. ಪಾಪ.. ಹು. ಹೇಳಪ್ಪ. ಮತ್ತೆ ಏನ್ ಮಾಡೋಣ.
    ನಕಲಿ ಡಾಕ್ಟರ್: ಏನಾದರೂ ಮಾಡಣ್ಣ..ನ್ಯೂಸ್..
    ಹೋರಾಟಗಾರ: ನನ್ನ ಕೈ ಮೀರೋಗಿದೆ..ನಿಜವಾಗಿಯೋ ಮೀರೋಗಿದೆ. ಟಿವಿಯವ್ರ ಕೈನಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗನ್ ತೋರಿಸಿ ಬೆದರಿಸಿ, ಸಿಬ್ಬಂದಿ ಕೂಡಿಹಾಕಿ ದರೋಡೆ- ಕ್ಯಾಷಿಯರ್‌ಗೆ ಗುಂಡಿಟ್ಟು 3 ಲಕ್ಷದೊಂದಿಗೆ ಪರಾರಿ

    ಗನ್ ತೋರಿಸಿ ಬೆದರಿಸಿ, ಸಿಬ್ಬಂದಿ ಕೂಡಿಹಾಕಿ ದರೋಡೆ- ಕ್ಯಾಷಿಯರ್‌ಗೆ ಗುಂಡಿಟ್ಟು 3 ಲಕ್ಷದೊಂದಿಗೆ ಪರಾರಿ

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹಾಡಹಗಲೇ ಸಿನಿಮಾ ಶೈಲಿಯಲ್ಲಿ 6 ಜನ ಮುಸುಕು ಧರಿಸಿದ ದುಷ್ಕರ್ಮಿಗಳು ಕಾರ್ಪೊರೇಶನ್ ಬ್ಯಾಂಕ್‍ಗೆ ನುಗ್ಗಿ ಕ್ಯಾಷಿಯರ್ ಅನ್ನು ಗುಂಡಿಟ್ಟು ಹತ್ಯೆಗೈದು 3 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದಾರೆ.

    ದೆಹಲಿಯ ಚಾವ್ಲಾ ಟೌನ್ ನಲ್ಲಿ ಈ ಘಟನೆ ನಡೆದಿದ್ದು, ಹಣ ನೀಡದ್ದಕ್ಕೆ ದುಷ್ಕರ್ಮಿಗಳು ಬ್ಯಾಂಕ್ ಕ್ಯಾಶಿಯರ್ ಅನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಈ ದಶಕದ ಮೊದಲ ಬ್ಯಾಂಕ್ ದರೋಡೆ ಎಂಬ ಕುಖ್ಯಾತಿ ಪಡೆದುಕೊಂಡಿದೆ.

    ದರೋಡೆ ಎಸಗಿದ್ದು ಹೇಗೆ?
    ಶುಕ್ರವಾರ ಸಂಜೆ 5.55ರ ಸುಮಾರಿಗೆ ದೆಹಲಿಯ ನೈಋತ್ಯ ಭಾಗದಲ್ಲಿರುವ ಕಾರ್ಪೊರೇಶನ್ ಬ್ಯಾಂಕ್ ಗೆ 6 ದುಷ್ಕರ್ಮಿಗಳು ನುಗ್ಗಿದ್ದಾರೆ. ಅದರಲ್ಲಿ 5 ಮಂದಿ ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದರೆ ಮತ್ತೋರ್ವ ಹೆಲ್ಮೆಟ್ ಧರಿಸಿದ್ದ. ಬ್ಯಾಂಕಿಗೆ ನುಗ್ಗಿದ್ದ ಇವರು ಭದ್ರತಾ ಸಿಬ್ಬಂದಿಯಿಂದ ಬಂದೂಕನ್ನ ಕಿತ್ತುಕೊಂಡು ಒಳಗಡೆ ಪ್ರವೇಶಿಸಿದ್ದಾರೆ. ಈ ವೇಳೆ ಅಲ್ಲಿದ್ದ ಗ್ರಾಹಕರು ಮತ್ತು ಸಿಬ್ಬಂದಿಯನ್ನು ಎಳೆತಂದು, ಅವರೆಲ್ಲರನ್ನು ಬೆದರಿಸಿ ಒಂದು ಕಡೆ ಕೂರಿಸಿದ್ದಾರೆ.

    ಕೊನೆಯಲ್ಲಿ ಕ್ಯಾಷಿಯರ್ ಕೌಂಟರ್ ಹೋಗಿ ಅಲ್ಲಿದ್ದ ಹಣವನ್ನ ದೋಚಲು ಮುಂದಾಗಿದ್ದರು. ಆದರೆ ದರೋಡೆಗೆ ಅಡ್ಡ ಪಡಿಸಿದ ಕ್ಯಾಷಿಯರ್ ಸಂತೋಷ್ ಮೇಲೆ 2 ಸುತ್ತು ಗುಂಡನ್ನು ಹಾರಿಸಿ ಅವರನ್ನ ಕೊಂದು ಹಣದೊಂದಿಗೆ ಪರಾರಿಯಾಗಿದ್ದಾರೆ.

    ಗುಂಡೇಟು ತಿಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂತೋಷ್ ಅವರನ್ನು ಸ್ಥಳೀಯರು ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮಾರ್ಗಮಧ್ಯೆಯೇ ಸಂತೋಷ್ ಮೃತಪಟ್ಟಿದ್ದರು. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದ ಆಧಾರದ ಮೇಲೆ ಪೊಲೀಸರಿಗೆ ದುಷ್ಕರ್ಮಿಗಳ ಗುರುತು ಪತ್ತೆಯಾಗಿದ್ದು, ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv