Tag: cow

  • ಬಿಡಾಡಿ ದನಗಳನ್ನು ಕಾರಿನಲ್ಲಿ ತುಂಬಿ ಕಳ್ಳತನ- ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

    ಬಿಡಾಡಿ ದನಗಳನ್ನು ಕಾರಿನಲ್ಲಿ ತುಂಬಿ ಕಳ್ಳತನ- ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

    ಕಾರವಾರ: ಬಿಡಾಡಿ ದನಗಳನ್ನು ಕಾರಿನಲ್ಲಿ ತುಂಬಿ ಕಳ್ಳತನ ಮಾಡಿದ ಘಟನೆ ಶಿರಸಿ ನಗರದ ಮರಾಠಿಕೊಪ್ಪದಲ್ಲಿ ಇಂದು ಬೆಳಗ್ಗೆ ನಡೆದಿದೆ.

    ವಾಹನದಲ್ಲಿ ಬಂದ ಮುಸುಕುದಾರಿಗಳು ಬೀದಿಯಲ್ಲಿ ಮಲಗಿದ್ದ ದನಗಳನ್ನು ಹಿಡಿದು ವಾಹನಕ್ಕೆ ತುಂಬಿ ಹೊತ್ತೊಯ್ಯುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಈ ವೀಡಿಯೋ ಪೊಲೀಸರಿಗೆ ದೊರತಿದೆ.

    ಈ ಹಿಂದೆ ಸಹ ಶಿರಸಿ ನಗರ ಭಾಗದಲ್ಲಿದ್ದ ಬೀದಿ ದನಗಳನ್ನು ಗೋವು ಕಳ್ಳರು ವಾಹನದಲ್ಲಿ ಬಂದು ಸೆರೆಹಿಡಿದು ಪರಾರಿಯಾಗುತಿದ್ದರು. ಈ ಸಂಬಂಧ ಶಿರಸಿ ಪೊಲೀಸರು ಕಳ್ಳರನ್ನು ಹಿಡಿಯುವ ಪ್ರಯತ್ನವನ್ನು ಮುಂದುವರೆಸಿದ್ದರು. ಅಂಕೋಲ, ಭಟ್ಕಳ ಭಾಗದಲ್ಲಿ ಪೊಲೀಸರು ವಾಹನದ ಸಮೇತ ಗೋವು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇದೀಗ ಕಳ್ಳರು ಶಿರಸಿ ಭಾಗದಲ್ಲಿ ಗೋವು ಕಳ್ಳತನಕ್ಕೆ ಮುಂದಾಗಿದ್ದು, ಬೀದಿ ಬದಿ ಇರುವ ಗೋವುಗಳನ್ನು ಹಿಡಿದು ಮುಂಜಾನೆ ವೇಳೆ ಕದ್ದು ಪರಾರಿಯಾಗುತಿದ್ದಾರೆ.

  • ಪ್ರತಿ ಮನೆಯಲ್ಲಿ ಗೋವು ಪಾಲನೆಯಾಗಲಿ: ಪ್ರಭು ಚವ್ಹಾಣ್

    ಪ್ರತಿ ಮನೆಯಲ್ಲಿ ಗೋವು ಪಾಲನೆಯಾಗಲಿ: ಪ್ರಭು ಚವ್ಹಾಣ್

    ಬೀದರ್: ನಮ್ಮ ಪರಂಪರೆಯಲ್ಲಿ ತಾಯಿಯ ಸ್ಥಾನಮಾನ ಹೊಂದಿರುವ ಗೋವನ್ನು ಪ್ರತಿ ಮನೆಯಲ್ಲಿಯೂ ಪಾಲನೆ ಮಾಡಬೇಕೆನ್ನುವ ಸದಾಶಯ ಹೊಂದಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದರು.

    ಔರಾದ್ ತಾಲೂಕಿನ ಬೋಂತಿ ತಾಂಡಾದಲ್ಲಿ ಜುಲೈ 6ರಂದು ಕೋವಿಡ್ ಲಸಿಕಾಕರಣ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗೋವು ಅತ್ಯಂತ ಪೂಜ್ಯನೀಯ ಪ್ರಾಣಿಯಾಗಿದೆ. ಹಾಲು, ಗೋಮೂತ್ರ ಹಾಗೂ ಸಗಣಿ ಹೀಗೆ ಗೋವಿನ ಪ್ರತಿ ಉತ್ಪನ್ನವೂ ಉಪಯೋಗಕ್ಕೆ ಬರುತ್ತದೆ. ಇವುಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಿ ಗೋಪಾಲನೆಯನ್ನು ಇನ್ನಷ್ಟು ಲಾಭದಾಯಕ ಕೆಲಸವನ್ನಾಗಿ ಮಾಡುವ ಪ್ರಯತ್ನಗಳು ನಡೆದಿವೆ. ಯೋಗ ಗುರು ಬಾಬಾ ರಾಮ್‍ದೇವ್ ಅವರೊಂದಿಗೆ ಮಾತುಕತೆಯೂ ನಡೆದಿದೆ ಎಂದರು.

    ಪಶು ಸಂಗೋಪನೆ ಇಲಾಖೆಯನ್ನು ಇಷ್ಟಪಟ್ಟು ಆಯ್ಕೆ ಮಾಡಿಕೊಂಡಿದ್ದೇನೆ. ಧರ್ಮ ಗುರು ಸಂತ ಸೇವಾಲಾಲ ಮಹಾರಾಜರ ಆಶಯದಂತೆ ಗೋವುಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಹಿಂದೆ ಎಲ್ಲರೂ ತಾತ್ಸಾರದಿಂದ ನೋಡುತ್ತಿದ್ದ ಪಶು ಸಂಗೋಪನೆ ಇಲಾಖೆಯನ್ನು ಸಚಿವನಾದ ನಂತರ ಎಲ್ಲರೂ ಕಣ್ಣೆತ್ತಿ ನೋಡುವಂತೆ ಬದಲಾವಣೆ ತರಲಾಗಿದೆ ಎಂದರು.

  • ಆಟೋದಲ್ಲಿ ಗೋಮಾಂಸ ಸಾಗಾಟ – ಇಬ್ಬರ ಬಂಧನ

    ಆಟೋದಲ್ಲಿ ಗೋಮಾಂಸ ಸಾಗಾಟ – ಇಬ್ಬರ ಬಂಧನ

    ಚಿಕ್ಕಮಗಳೂರು: ಹಸುವನ್ನ ಕೊಂದು ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಆಟೋ ಸಮೇತ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.

    ಬಾಳೆಹೊನ್ನೂರು ಸಮೀಪದ ದೇವದಾನ ಗ್ರಾಮದಿಂದ ವಿಜಯಗಿರಿ ಎಸ್ಟೇಟ್ ಹೋಗುವ ಮಾರ್ಗ ಮಧ್ಯೆ ಹಸುವನ್ನ ಕೊಂದು ಮಾಂಸ ಮಾರಾಟಕ್ಕೆ ಯತ್ನಿಸುತ್ತಿದ್ದರು. ದೇವದಾನ ಸಮೀಪದ ಕಡ್ಲೆಮಕ್ಕಿ ಗ್ರಾಮದ ಇಬ್ರಾಹಿಂ ಹಾಗೂ ಷರೀಫ್ ಎಂಬುವರು ಅಕ್ರಮವಾಗಿ ಹಸುವನ್ನ ಕೊಂಡು ಕಾಡಿನಲ್ಲಿ ಮಾಂಸ ಮಾಡಿಕೊಂಡು ಮಾರಾಟಕ್ಕೆ ಯತ್ನಿಸುತ್ತಿದ್ದರು. ಮಾಂಸವನ್ನ ಲಗೇಜ್ ಆಟೋದಲ್ಲಿ ತಂದು ಮಾರ್ಗ ಮಧ್ಯೆ ಸಿಗುವ ಹಳ್ಳಿಗಳಲ್ಲಿ ಮಾರಾಟಕ್ಕೆ ಮುಂದಾಗಿದ್ದರ. ವಿಷಯ ತಿಳಿದ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಸ್ಥಳಕ್ಕೆ ಬಂದ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಿಂದ ಆಟೋ ಹಾಗೂ ಗೋಮಾಂಸವನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಮಲೆನಾಡು ಭಾಗದಲ್ಲಿ ಗೋಕಳ್ಳತನ ಯಥೇಚ್ಛವಾಗಿದ್ದು, ಮೇಯಲು ಹೋದ ರಾಸುಗಳು ಮನೆಗೆ ಬಂದಾಗಲೇ ಬಂದವು ಎಂದು ಗ್ಯಾರಂಟಿ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಮಲೆನಾಡು ಭಾಗದಲ್ಲಿ ಗೋಕಳ್ಳತನ ಕೂಡ ಹೆಚ್ಚಾಗಿದ್ದು ರೈತರು ರಾಸುಗಳನ್ನ ಸಾಕುವುದಕ್ಕಿಂತ ಅವುಗಳನ್ನ ರಕ್ಷಣೆ ಮಾಡಿಕೊಳ್ಳುವುದೇ ದೊಡ್ಡ ತಲೆನೋವಾಗಿದೆ. ಬಂಧಿತರಿಬ್ಬರ ವಿರುದ್ಧ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 2 ತಿಂಗಳಲ್ಲಿ 20 ಹಸುಗಳ ಕಾಣೆ – ರೈತರಲ್ಲಿ ಆತಂಕ

    2 ತಿಂಗಳಲ್ಲಿ 20 ಹಸುಗಳ ಕಾಣೆ – ರೈತರಲ್ಲಿ ಆತಂಕ

    ಚಿಕ್ಕಮಗಳೂರು: ಕಳೆದ ಎರಡು ತಿಂಗಳಲ್ಲಿ 20ಕ್ಕೂ ಹೆಚ್ಚು ಹಸುಗಳು ಕಾಣೆಯಾಗಿದ್ದು, ಮಲೆನಾಡಲ್ಲಿ ಗೋ ಕಳ್ಳತನ ಸಕ್ರಿಯವಾಗಿದೆಯಾ ಎಂಬ ಅನುಮಾನ ರೈತರನ್ನ ಕಾಡುತ್ತಿದೆ. ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಗೋವುಗಳು ಕಾಣೆಯಾಗುತ್ತಿವೆ.

    ತಾಲೂಕಿನ ಮರಿತೊಟ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮಲಾಪುರ ಗ್ರಾಮದ ಸುತ್ತಮುತ್ತ ರಾಸುಗಳ ಕಳ್ಳತನ ಹೆಚ್ಚಾಗಿದೆ. ಈ ಭಾಗದಲ್ಲಿ ಕಳೆದ ಎರಡು ತಿಂಗಳಿನಿಂದ ರಾಸುಗಳು ಕಾಣೆಯಾಗುತ್ತಿದ್ದು, ಅಪರಿಚಿತರು ಕಳವು ಮಾಡುತ್ತಿರಬಹುದು ಎಂಬ ಅನುಮಾನ ಸ್ಥಳೀಯರನ್ನ ಕಾಡುತ್ತಿದೆ. ಸೋಮಾಲಾಪುರ ಗ್ರಾಮದ ನಿಲುಗುಳಿ, ಕುಂಬ್ರಿಹಬ್ಬು, ಹಬ್ಬಿಗದ್ದೆ, ಕಾಚಗಲ್ಲು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರಾಸುಗಳ ಕಳ್ಳತನ ಹೆಚ್ಚಾಗಿದೆ.

    ನಾಲ್ಕೈದು ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ 2 ತಿಂಗಳಲ್ಲಿ 20ಕ್ಕೂ ಹೆಚ್ಚು ದನಗಳು ಕಾಣೆಯಾಗಿವೆ. ದನಗಳ್ಳರ ಹಾವಳಿ ಹೆಚ್ಚಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮೇಯಲು ಬಿಟ್ಟ ಹಸುಗಳು ಮರಳಿ ಮನೆಗೆ ಬಾರದೆ ಇರುವುದರಿಂದ ಹೈನುಗಾರರು ಕಂಗಾಲಾಗಿದ್ದಾರೆ. ರೈತರು ಮೇಯಲು ಬಿಟ್ಟ ರಾಸುಗಳು ಸಂಜೆ ಮನೆಗೆ ಬಂದ ಮೇಲೆ ಬಂದವು ಎಂಬುದು ಖಾತ್ರಿಯಾಗುವಂತಹಾ ಸ್ಥಿತಿ ನಿರ್ಮಾಣವಾಗಿದೆ.

    ಹಾಲು ಕೊಡುವ ದನವೊಂದು ವಾರದ ಹಿಂದೆ ಕಣ್ಮರೆಯಾಗಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ನಮ್ಮ ಮನೆಯ ನಾಲ್ಕು ಹಸುಗಳು ಕಾಣೆಯಾಗಿವೆ ಎಂದು ನಿಲುಗುಳಿ ಗ್ರಾಮದ ರೈತ ಮಹಿಳೆ ಪ್ರೇಮಾ ನೋವು ತೋಡಿಕೊಂಡಿದ್ದಾರೆ. ನಾಲ್ಕೈದು ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳಿಂದ ಹಲವರ ಜಾನುವಾರುಗಳು ಕಾಣೆಯಾಗಿವೆ. ರಾಸುಗಳ ಕಣ್ಮರೆ, ಕಳ್ಳತನ ಪ್ರಕರಣಗಳು ಆಗಾಗ್ಗೆ ನಡೆಯುತ್ತಿದ್ದು, ಹಳ್ಳಿಗರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಉಡುಪಿ ಶೀರೂರು ಮಠದಿಂದ ಹಸು ಕಳ್ಳತನ- ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

    ಅಪರಿಚಿತರು ರಾಸುಗಳನ್ನ ಕಳ್ಳತನ ಮಾಡಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಮಲೆನಾಡಲ್ಲಿ ಗೋಕಳ್ಳತನ ಮಿತಿ ಮೀರಿದೆ. ಮೂಡಿಗೆರೆ ತಾಲೂಕಿನಲ್ಲೂ ಕಳೆದ 15 ದಿನಗಳ ಹಿಂದಷ್ಟೆ ರೈತ ಮಹಿಳೆಯ ಎರಡು ರಾಸುಗಳು ಕಳ್ಳತನವಾಗಿದ್ದವು. ರಾಸುಗಳನ್ನೇ ನಂಬಿ ಬದುಕು ಸಾಗಿಸುತ್ತಿದ್ದ ರೈತ ಮಹಿಳೆ ಒಂದು ಲಕ್ಷ ಮೌಲ್ಯದ ಎರಡು ರಾಸುಗಳನ್ನ ಕಳೆದುಕೊಂಡು ಕಂಗಾಲಾಗಿದ್ದರು. ಜಿಲ್ಲೆಯ ಮೂಡಿಗೆರೆ, ಕೊಪ್ಪ, ಬಾಳೆಹೊನ್ನೂರು, ಶೃಂಗೇರಿಯಲ್ಲಿ ಗೋಕಳ್ಳತನ ನಡೆಯುತ್ತಿದ್ದು, ಪೊಲೀಸರು ಗೋಕಳ್ಳರ ಹೆಡೆಮುರಿ ಕಟ್ಟಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಎರಡೇ ತಿಂಗಳಲ್ಲಿ ಲಕ್ಷ ಮೌಲ್ಯದ ಎರಡು ಹಸು ಕಳವು- ಕಣ್ಣೀರಿಟ್ಟ ರೈತ ಮಹಿಳೆ

  • ರಸ್ತೆಯಲ್ಲಿ ಎತ್ತು, ಎಮ್ಮೆ, ಹಸುಗಳ ಮಾರಾಟ ಜೋರು

    ರಸ್ತೆಯಲ್ಲಿ ಎತ್ತು, ಎಮ್ಮೆ, ಹಸುಗಳ ಮಾರಾಟ ಜೋರು

    ಹಾವೇರಿ: ಕೊರೊನಾ ಲಾಕ್‍ಡೌನ್ ಅನ್‍ಲಾಕ್‍ಗೊಳಿಸಿದ ಹಿನ್ನೆಲೆ ಹಾವೇರಿಯ ಶಿವಲಿಂಗೇಶ್ವರ ಮಾರುಕಟ್ಟೆಯಲ್ಲಿ ಜಾನುವಾರುಗಳ ಮಾರಾಟ ಜೋರಾಗಿ ನಡೆದಿದೆ.

    ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ ಸರ್ಕಾರ ಅನ್ ಲಾಕ್ ಘೋಷಣೆ ಮಾಡಿದೆ. ಇನ್ನು ಅನ್ ಲಾಕ್ ಘೋಷಣೆ ಮಾಡಿ ಹನ್ನೇರಡು ದಿನಗಳು ಆಗಿಲ್ಲ, ಜನರು ಮಾಸ್ಕ್ ಧರಿಸದೇ ಓಡಾಡುವ ಸಂಖ್ಯೆ ಹೆಚ್ಚಾಗಿದೆ.

    ಇಂದು ಹಾವೇರಿಯ ಶಿವಲಿಂಗೇಶ್ವರ ಮಾರುಕಟ್ಟೆಯ ಮುಂದೆ ಎತ್ತು, ಎಮ್ಮೆ ಹಾಗೂ ಹಸುಗಳ ಮಾರಾಟ ಜೋರಾಗಿತ್ತು. ಕೊರೊನಾ ಎರಡನೇ ಅಲೆಯಿಂದಾಗಿ ಬಂದ್ ಆಗಿದ್ದ ಮಾರುಕಟ್ಟೆಯನ್ನು ಎಪಿಎಂಸಿ ಸಿಬ್ಬಂದಿ ಇಂದು ಬೆಳಗ್ಗೆ ಓಪನ್ ಮಾಡಿರಲಿಲ್ಲ. ಹೀಗಾಗಿ ಎತ್ತು, ಎಮ್ಮೆ ಹಾಗೂ ಹಸು ಮಾರಾಟಕ್ಕೆ ಬಂದ ಜನರು ಮಾರುಕಟ್ಟೆಯ ಮುಂದೆ ನಿಲ್ಲಿಸಿ ವ್ಯಾಪಾರ ವಹಿವಾಟು ನಡೆಸಿದ್ದರು.

    ಯಾವುದೇ ಸಾಮಾಜಿಕ ಅಂತರ ಇಲ್ಲದೆ, ಕೆಲವು ಜನರು ಮಾತ್ರ ಮಾಸ್ಕ್ ಧರಿಸಿದ್ದು ಬಿಟ್ಟರೆ, ಇನ್ನೂ ಕೆಲವರು ಮೈಮರೆತು ಓಡಾಡಿದವರ ಸಂಖ್ಯೆ ಹೆಚ್ಚಾತ್ತು. ವ್ಯಾಪಾರಸ್ಥರನ್ನು ಹಾಗೂ ರೈತರನ್ನು ನಿಯಂತ್ರಣ ಮಾಡಲು ಪೊಲೀಸ್ ಸಿಬ್ಬಂದಿ ಕೂಡ ಇರಲಿಲ್ಲ. ಇದನ್ನೂ ಓದಿ: ಕೆಐಎಡಿಬಿ ಕಚೇರಿ ಮೇಲೆ ಎಸಿಬಿ ದಾಳಿ – 70 ಸಾವಿರ ನಗದು, ದಾಖಲೆ ಜಪ್ತಿ

  • ಕಸಾಯಿಖಾನೆಗೆ ಕಳ್ಳಸಾಗಣೆಯಾಗುತ್ತಿದ್ದ 18 ಗೋವುಗಳ ರಕ್ಷಣೆ

    ಕಸಾಯಿಖಾನೆಗೆ ಕಳ್ಳಸಾಗಣೆಯಾಗುತ್ತಿದ್ದ 18 ಗೋವುಗಳ ರಕ್ಷಣೆ

    – ಸೈದಾಪುರ ಪಿಎಸ್‍ಐ ಭೀಮರಾಯ ಕಾರ್ಯಾಚರಣೆ

    ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕಿನ ಜೊಳದಡಗಿ ಗ್ರಾಮದಿಂದ ಸೈದಾಪುರ ಮೂಲಕ ಹೈದರಾಬಾದ್ ಕಸಾಯಿಖಾನೆಗೆ ಕಳ್ಳಸಾಗಣೆಯಾಗುತ್ತಿದ್ದ ಗೋವುಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

    ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ, ಜಿಲ್ಲೆಯಿಂದ ಟ್ರಕ್ ಮೂಲಕ 18 ಗೋವುಗಳನ್ನು ಹೈದರಾಬಾದ್ ಗೆ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸೈದಾಪುರ ಪೊಲೀಸರು, ವಾಹನವನ್ನು ಮಾರ್ಗ ಮಧ್ಯೆ ತಡೆಗಟ್ಟಿ ಗೋವುಗಳ ರಕ್ಷಣೆ ಮಾಡಿದ್ದಾರೆ.

    ರಕ್ಷಣೆಯಾದ ಗೋವುಗಳನ್ನು ಗುರು ರಾಘವೇಂದ್ರ ಗೋ ಶಾಲೆಗೆ ಒಪ್ಪಿಸಲಾಗಿದೆ. ಪಿಎಸ್‍ಐ ಭೀಮರಾಯ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದು, ಗೋಹತ್ಯೆ ನಿಷೇಧ ಕಾನೂನಿನಡಿ ಪ್ರಕರಣ ದಾಖಲು ಮಾಡಲಾಗಿದೆ.

  • 25 ಅಡಿ ಆಳದ ಪಾಳು ಕೊಳಕ್ಕೆ ಬಿದ್ದ ಹಸು-ಕ್ರೇನ್ ಮೂಲಕ ಎತ್ತಿದ ಗ್ರಾಮಸ್ಥರು

    25 ಅಡಿ ಆಳದ ಪಾಳು ಕೊಳಕ್ಕೆ ಬಿದ್ದ ಹಸು-ಕ್ರೇನ್ ಮೂಲಕ ಎತ್ತಿದ ಗ್ರಾಮಸ್ಥರು

    ತುಮಕೂರು: ಮೇಯುತ್ತಿದ್ದಾಗ 25 ಅಡಿ ಆಳದ ಕೊಳಕ್ಕೆ ಉರುಳಿಬಿದ್ದು ಒದ್ದಾಡುತ್ತಿದ್ದ ಹಸುವನ್ನು, ಕ್ರೇನ್ ಸಹಾಯದಿಂದ ಮೇಲಕ್ಕೆ ಎತ್ತಿ ಪಾರು ಮಾಡಿರುವ ಘಟನೆ ಜಿಲ್ಲೆಯ ಪಾವಗಡ ತಾಲೂಕು ಅರೆಕ್ಯಾತನಹಳ್ಳಿಯಲ್ಲಿ ನಡೆದಿದೆ.

    ರಂಗಧಾಮಯ್ಯ ಅವರು ಹಸು ಮೇಯಿಸಲು ತೋಟಕ್ಕೆ ಕರೆದುಕೊಂಡು ಬಂದಿದ್ದರು. ಈ ಹಸು ವೇಳೆ ಆಯತಪ್ಪಿ ಪಾಳು ಕೊಳ ಕ್ಕೆ ಬಿದ್ದಿದೆ. ನಂತರ ಎದ್ದು ಹೊರಬರಲಾಗದೆ ನರಳಾಡುತ್ತಿತ್ತು. ಹಸುವಿನ ಮಾಲೀಕನಿಗೂ ದಿಕ್ಕೆ ತೋಚದಂತಾಗಿತ್ತು. ಇದೀಗ ಹಸುವನ್ನು ಮೇಲಕ್ಕೆ ಎತ್ತಲಾಗಿದೆ. ಇದನ್ನೂ ಓದಿ:ಯಗಚಿ ನದಿಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ

    ಹಸು ಪಳು ಕೊಳ್ಳಕ್ಕೆ ಬಿದ್ದಿರುವ ವಿಷಯ ತಿಳಿದು ಬಂದ ಪಾವಗಡ ಸಮಗ್ರ ಸೇವಾಭಿವೃದ್ಧಿ ಟ್ರಸ್ಟ್ ಸದಸ್ಯರು ಹಸುವನ್ನು ಬಾವಿಯಿಂದ ಮೇಲೆತ್ತಲು ಯೋಜನೆ ರೂಪಿಸಿದರು. ನಂತರ ಬೃಹತ್ ಕ್ರೇನ್ ಅನ್ನು ಸ್ಥಳಕ್ಕೆ ತರಿಸಿ ಅದರ ಸಹಾಯದಿಂದ ಹಸುವಿನ ಜೀವ ರಕ್ಷಿಸಿದ್ದಾರೆ. ಕೊಳಕ್ಕೆ ಬಿದ್ದ ರಭಸಕ್ಕೆ ಹಸುವಿನ ಕಾಲು ಮುರಿದುಹೋಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

  • ನೀರು ಕುಡಿಯಲು ಹೋದ ಹಸು ಮೊಸಳೆ ದಾಳಿಗೆ ಬಲಿ

    ನೀರು ಕುಡಿಯಲು ಹೋದ ಹಸು ಮೊಸಳೆ ದಾಳಿಗೆ ಬಲಿ

    ರಾಯಚೂರು: ತಾಲೂಕಿನ ಡೊಂಗರಾಂಪೂರ ಬಳಿ ಕೃಷ್ಣಾ ನದಿ ದಡದಲ್ಲಿ ಮೊಸಳೆ ದಾಳಿಗೆ ಹಸು ಬಲಿಯಾಗಿರುವ ಘಟನೆ ನಡೆದಿದೆ.

    ನೀರು ಕುಡಿಯಲು ಹೋದ ಹಸುವನ್ನು ಎಳೆದೊಯ್ದು ಮೊಸಳೆ ತಿಂದು ಹಾಕಿದೆ. ರೈತ ಆಂಜನೇಯ ಎಂಬವರಿಗೆ ಸೇರಿದ ಹಸು ಮೊಸಳೆ ದಾಳಿಗೆ ಬಲಿಯಾಗಿದೆ. ನದಿ ಪಕ್ಕದಲ್ಲೇ ಜಮೀನು ಇದ್ದಿದ್ದರಿಂದ ರೈತ ಆಂಜನೇಯ ನಿನ್ನೆ ಸಂಜೆ ಹಸುವನ್ನ ನೀರು ಕುಡಿಯಲು ಬಿಟ್ಟಿದ್ದ, ಮೊಸಳೆ ದಾಳಿಗೆ ಹಸು ಬಲಿಯಾಗಿದ್ದು, ಇಂದು ಬೆಳಗ್ಗೆ ನದಿಯಲ್ಲಿ ತೇಲಾಡುತ್ತಿದ್ದಾಗ ರೈತರು ಗಮನಿಸಿದ್ದಾರೆ. ತೆಪ್ಪದ ಮೂಲಕ ಹೋಗಿ ತೇಲಾಡುತ್ತಿದ್ದ ಹಸು ಎಳೆದು ತಂದಿದ್ದಾರೆ. ಹಸುವಿನ ಮೈಮೇಲಿನ ಗಾಯಗಳಿಂದ ಮೊಸಳೆ ದಾಳಿ ಮಾಡಿರುವುದು ಖಚಿತವಾಗಿದೆ.

    ಈ ಹಿಂದೆ ಇದೇ ಸ್ಥಳದಲ್ಲಿ ಐದು ವರ್ಷದ ಬಾಲಕನನ್ನ ಮೊಸಳೆ ಎಳೆದುಕೊಂಡು ಹೋಗಿತ್ತು. ಹೀಗಾಗಿ ಕೃಷ್ಣಾ ನದಿ ಪಾತ್ರದ ಗ್ರಾಮಗಳ ಜನ ಮೊಸಳೆ ದಾಳಿಗೆ ಹೆದರಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಮಳೆಯ ಅಬ್ಬರ- ಶಿರಸಿಯಲ್ಲಿ ಮತ್ತೆ ಭೂ ಕುಸಿತ

  • ಎರಡೇ ತಿಂಗಳಲ್ಲಿ ಲಕ್ಷ ಮೌಲ್ಯದ ಎರಡು ಹಸು ಕಳವು- ಕಣ್ಣೀರಿಟ್ಟ ರೈತ ಮಹಿಳೆ

    ಎರಡೇ ತಿಂಗಳಲ್ಲಿ ಲಕ್ಷ ಮೌಲ್ಯದ ಎರಡು ಹಸು ಕಳವು- ಕಣ್ಣೀರಿಟ್ಟ ರೈತ ಮಹಿಳೆ

    – ಹಸುಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಕುಟುಂಬ
    – ಹಸುಗಳಿಲ್ಲದೆ ಕರುಗಳು ಅನಾಥ

    ಚಿಕ್ಕಮಗಳೂರು: ಎರಡು ತಿಂಗಳಲ್ಲಿ ಎರಡು ಹಸುಗಳು ಕಳವುವಾಗಿ ರೈತ ಮಹಿಳೆ ಕಣ್ಣೀರಿಡುತ್ತಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೂಡಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಹಸುಗಳನ್ನು ಕಳೆದುಕೊಂಡ ಮನೆಯೊಡತಿ ಜ್ಯೋತಿ ಕಂಗಾಲಾಗಿದ್ದಾರೆ. ರಾಸುಗಳನ್ನ ನಂಬಿಕೊಂಡೇ ಜ್ಯೋತಿ ಕುಟುಂಬ ಬದುಕು ಕಟ್ಟಿಕೊಂಡಿತ್ತು. ಹಸುಗಳು ಕೊಡುವ ಹಾಲಿನಿಂದಲೇ ಇವರು ಜೀವನ ಕಟ್ಟಿಕೊಂಡಿದ್ದರು. ಆದರೀಗ, ರಾಸುಗಳೇ ಕಳೆದು ಹೋಗಿರುವುದರಿಂದ ರೈತ ಕುಟುಂಬ ಬದುಕಿನ ಬಗ್ಗೆ ಆತಂಕಕ್ಕೀಡಾಗಿದೆ.

    ಸುಮಾರು 1 ಲಕ್ಷ ಹಣ ಕೊಟ್ಟು 2 ಹಸುಗಳನ್ನು ತಂದು ಮನೆಯಲ್ಲಿ ಸಾಕುತ್ತಿದ್ದೆವು. ಹಸುಗಳೇ ನಮ್ಮ ಬದುಕಿನ ಮೂಲವಾಗಿದ್ದವು. ಪ್ರತಿನಿತ್ಯ 20 ಲೀಟರ್ ಹಾಲು ಕೊಡುತ್ತಿದ್ದವು. ಆದರೀಗ, ಹಸುಗಳಿಲ್ಲದೇ ಕೊಟ್ಟಿಗೆ ಖಾಲಿಯಾಗಿದೆ. ಮೊದಲ ಬಾರಿ ಒಂದೂವರೆ ತಿಂಗಳ ಹಿಂದೆ ಒಂದು ಹಸು ಕಳವಾಯಿತು. ಈಗ ವಾರದ ಹಿಂದೆ ಮತ್ತೊಂದು ಹಸು ಕೂಡ ಕಾಣೆಯಾಗಿದೆ. ಹಸುಗಳಿಲ್ಲದೇ ಕರುಗಳು ಅನಾಥವಾಗಿವೆ ಎಂದು ರೈತ ಮಹಿಳೆ ಕಣ್ಣೀರಿಟ್ಟಿದ್ದಾರೆ.

    ಈಗ ಕೆಲಸವೂ ಇಲ್ಲ, ಕೂಲಿಯೂ ಇಲ್ಲ, ಬದುಕಿಗೆ ಆಧಾರವಾಗಿದ್ದ, ಹಸುವೂ ಇಲ್ಲ. ಸಾಲ ಮಾಡಿ ತಂದಿದ್ದ ರಾಸುಗಳು ಇಲ್ಲ ಎಂದು ಸತೀಶ್-ಜ್ಯೋತಿ ದಂಪತಿ ಕುಟುಂಬ ಕಂಗಾಲಾಗಿದೆ. ಭವಿಷ್ಯದ ಬದುಕನ್ನು ನೆನೆದು ಕಣ್ಣೀರಿಟ್ಟಿದೆ. ಮಲೆನಾಡಲ್ಲಿ ಗೋಕಳ್ಳತನ ಹೆಚ್ಚಾಗಿದ್ದು, ಆಗಾಗ್ಗೆ ಅಲ್ಲಲ್ಲೇ ಕಳ್ಳತನ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇತ್ತು. ಆದರೆ ಕಳೆದ ಎರಡು ತಿಂಗಳಿಂದ ಗೋಕಳ್ಳತನದ ಪ್ರಕರಣಗಳು ಅಷ್ಟಾಗಿ ಬೆಳಕಿಗೆ ಬಂದಿರಲಿಲ್ಲ. ಈಗ ಒಂದು ತಿಂಗಳ ಅಂತರದಲ್ಲಿ ಒಂದೇ ಮನೆಯಲ್ಲಿ ಎರಡು ಹಸುಗಳು ಕಳ್ಳತನವಾಗಿದೆ.

    ಇದರಿಂದ ಮಲೆನಾಡಲ್ಲಿ ಮತ್ತೆ ಗೋಕಳ್ಳರು ಕಾರ್ಯಪ್ರವೃತರಾಗಿದ್ದಾರಾ ಎಂಬ ಅನುಮಾನ ಮೂಡಿದೆ. ರಸ್ತೆಬದಿಗಳಲ್ಲಿ ಓಡಾಡುತ್ತಿದ್ದ ಹಾಗೂ ಬಯಲು ಪ್ರದೇಶದಲ್ಲಿ ಕಟ್ಟಿದ್ದ ರಾಸುಗಳು ಕಳ್ಳರ ಪಾಲಾಗುತ್ತಿದ್ದವು. ಈಗ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳು ಕಳ್ಳತನವಾಗಿರೋದು ಮಲೆನಾಡಿಗರ ಆತಂಕಕ್ಕೆ ಕಾರಣವಾಗಿದೆ. ಪ್ರಕರಣ ಸಂಬಂಧ ರೈತ ಕುಟುಂಬ ಪೊಲೀಸರಿಗೆ ದೂರು ಕೂಡ ನೀಡಿದೆ.

  • ಹಲವು ಖಾಯಿಲೆಗಳಿಗೆ ಮದ್ದು ಹಸು ತಬ್ಬಿಕೊಳ್ಳುವುದು- ಗೋಮಾತೆ ಅಪ್ಪುಗೆಯಲ್ಲಿ ಮಾನಸಿಕ ನೆಮ್ಮದಿ

    ಹಲವು ಖಾಯಿಲೆಗಳಿಗೆ ಮದ್ದು ಹಸು ತಬ್ಬಿಕೊಳ್ಳುವುದು- ಗೋಮಾತೆ ಅಪ್ಪುಗೆಯಲ್ಲಿ ಮಾನಸಿಕ ನೆಮ್ಮದಿ

    ಮೆರಿಕದಲ್ಲಿ ಹಸುಗಳನ್ನು ಅಪ್ಪಿಕೊಳ್ಳುವ ಟ್ರೆಂಡ್ ಹೆಚ್ಚಾಗಿದೆ. COW HUGGING ಎಂಬುವುದು ಒಂದು ಪ್ರಾಣಿ ಚಿಕಿತ್ಸೆಯಾಗಿದ್ದು, ಪಾಶ್ಚಿಮಾತ್ಯ ದೇಶಗಳಲ್ಲಿ ಹಸು ತಬ್ಬಿಕೊಳ್ಳಲು ಸಾವಿರಾರು ರೂಪಾಯಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ.

    ಒಂದು ಗಂಟೆಗೆ 200 ಡಾಲರ್(ಸುಮಾರು 15 ಸಾವಿರ ರೂಪಾಯಿ)ಗಳನ್ನು ನೀಡಿ ಜನರು ಚಿಕಿತ್ಸೆ ಪಡೆಯಲು ಆಗಮಿಸುತ್ತಿದ್ದು, ಕೆಲ ಪ್ರದೇಶಗಳಲ್ಲಿ ಇದಕ್ಕೆ ಸೆಷನ್‍ಗಳನ್ನೇ ತೆರೆದು ಉದ್ಯಮವನ್ನು ಆರಂಭಿಸಿದ್ದಾರೆ. ಅಲ್ಲದೇ ಹಲವು ಕಡೆ ಜುಲೈವರೆಗೂ ಬುಕಿಂಗ್ ಕೂಡ ಪೂರ್ಣಗೊಂಡಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಅರಿಜೋನಾದ 5 ಎಕರೆ ಪ್ರದೇಶದಲ್ಲಿ ಇರುವ ಎಮಿಸ್ ಫಾರ್ಮ್ ಅನಿಮಲ್ ಸ್ಯಾಂಚುರಿ, ಅಮೆರಿಕಾದಲ್ಲಿರುವ ಅಭಯಾರಣ್ಯಗಳಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿ ಹಸುಗಳನ್ನು ಅಪ್ಪಿಕೊಳ್ಳುವ ಅಭಿಯಾನವನ್ನು ನಡೆಸಲಾಗುತ್ತಿದೆ.

    ನಮ್ಮ ಹಸುಗಳನ್ನು ಅಪ್ಪಿಕೊಳ್ಳಲು ವಿಶ್ವದ ಹಲವು ಭಾಗಗಳಿಂದ ಜನರು ಬರುತ್ತಾರೆ. ಹಸುಗಳು ನಿಮ್ಮ ಮನದಲ್ಲಿ ಉಲ್ಲಾಸದ ಭಾವನೆಯನ್ನು ಮೂಡಿಸಲು ಸಹಕಾರಿ ಆಗಲಿದೆ. ಇದರಿಂದ ಅನೇಕ ಸಮಸ್ಯೆಗಳು, ರಕ್ತದೊತ್ತಡ, ಹೃದಯ ಸಮಸ್ಯೆ, ಬೆನ್ನು ನೋವು ಸೇರಿಂದಂತೆ ಹಲವು ಮಾನಸಿಕ ಸಮಸ್ಯೆಗಳಿಂದ ಹೊರಬರಲು ನೆರವಾಗುತ್ತದೆ ಎಂದು ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಹೇಳಿದ್ದಾರೆ.

    ತಾಯಿಯ ಮಡಿಲಲ್ಲಿ ಮಲಗಿಕೊಂಡರೆ ತಮ್ಮ ಸಮಸ್ಯೆಗಳನ್ನು ಮರೆತುಹೋಗುತ್ತಾರೆ. ಅದೇ ರೀತಿ ಹಸುವನ್ನು ಅಪ್ಪಿಕೊಂಡರೆ ತಮ್ಮ ಚಿಂತೆಗಳನ್ನು ಮರೆತು ಹೋಗುತ್ತಾರೆ. ಯುಎಸ್, ನೆದರ್‍ಲ್ಯಾಂಡ್, ಸ್ವಿಜರ್ಲ್ಯಾಂಡ್, ಯುಕೆ ಸೇರಿಂದತೆ ಹಲವು ಪ್ರದೇಶಗಳಲ್ಲಿ ಇಂಹತ ಚಿಕಿತ್ಸಾ ಪದ್ದತಿ ಇದೆ ಎಂದು ಎನ್‍ಜಿಓವೊಂದು ತಿಳಿಸಿದೆ. ಭಾರತದಲ್ಲಿ ಎನ್‍ಜಿಓವೊಂದು ಗುರುಗ್ರಾಮದಲ್ಲಿ ಹಸುವನ್ನು ಅಪ್ಪಿಕೊಳ್ಳುವ ಕೇಂದ್ರವನ್ನು ಆರಂಭಿಸಿದೆ.