Tag: Covid19 India

  • ಲಾಕ್‍ಡೌನ್ ಸಡಿಲಿಕೆ – ಯಾವೆಲ್ಲ ಅಂಗಡಿ ತೆರೆಯಬಹುದು?

    ಲಾಕ್‍ಡೌನ್ ಸಡಿಲಿಕೆ – ಯಾವೆಲ್ಲ ಅಂಗಡಿ ತೆರೆಯಬಹುದು?

    ನವದೆಹಲಿ: ದೇಶದಲ್ಲಿ ಕೊರೊನಾ ಲಾಕ್‍ಡೌನ್‍ನಿಂದ ಮತ್ತಷ್ಟು ವಿನಾಯಿತಿ ನೀಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ನಿನ್ನೆ ರಾತ್ರಿ ಪ್ರಕಟಿಸಿದ ಮಾರ್ಗಸೂಚಿಯಲ್ಲಿ ಎಲ್ಲಾ ಅಂಗಡಿ ತೆರೆಯಲು ಅವಕಾಶ ನೀಡಿತ್ತು. ಆದರೆ ಇಂದು ಮಧ್ಯಾಹ್ನ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿರುವ ಸರ್ಕಾರ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ.

    ಕೆಲವೊಂದನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಬಗೆಯ ಅಂಗಡಿಗಳನ್ನು ತೆರೆಯಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ರಾಜ್ಯದಲ್ಲಿ ಕರ್ನಾಟಕ ಅಂಗಡಿ ಮತ್ತು ಮಳಿಗೆಗಳ ಕಾಯ್ದೆ ಪ್ರಕಾರ ನೋಂದಣಿ ಆಗಿರುವ ಅಂಗಡಿ ತೆರೆಯಬಹುದಾಗಿದೆ. ಆದ್ರೆ ಕಂಟೈನ್‍ಮೆಂಟ್ ಜೋನ್‍ಗಳಲ್ಲಿ ಮೇ 3ವರೆಗೂ ಯಥಾರೀತಿಯ ಲಾಕ್‍ಡೌನ್ ಮುಂದುವರಿಯಲಿದೆ. ಇಲ್ಲಿನ ಮಂದಿಗೆ ಯಾವುದೇ ವಿನಾಯಿತಿ, ರಿಯಾಯಿತಿ ನೀಡಿಲ್ಲ.

    ಯಾವುದಕ್ಕೆ ವಿನಾಯಿತಿ? ಯಾವುದಕ್ಕೆ ಇಲ್ಲ?
    * ಮದ್ಯ – ಮಾರಾಟಕ್ಕೆ ಅವಕಾಶ ಸಿಕ್ಕಿದೆಯಾ?
    ಉತ್ತರ – ಇಲ್ಲ (ಮೇ 3ವರೆಗೂ ಅವಕಾಶ ಇಲ್ಲ)

    * ಗುಟ್ಕಾ, ತಂಬಾಕು ಮಾರಾಟಕ್ಕೆ ಅವಕಾಶ ಇದೆಯಾ?
    ಉತ್ತರ – ಇಲ್ಲ (ಮೇ 3ವರೆಗೂ ಅವಕಾಶ ಇಲ್ಲ)

    * ಹೇರ್ ಸಲೂನ್ ಶಾಪ್ ತೆರೆಯಬಹುದಾ?
    ಉತ್ತರ – ಖಂಡಿತವಾಗಿ ಇಲ್ಲ .ಇದಕ್ಕೆ ಸಂಬಂಧಿಸಿದಂತೆ ಮೊದಲು ಗೊಂದಲ ಇತ್ತು. ಮಧ್ಯಾಹ್ನ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿತು.


    * ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡಲಾಗಿದೆಯಾ?
    ಉತ್ತರ – ಇಲ್ಲ. ಇದಕ್ಕೆ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿಲ್ಲ.

    * ಶಾಪಿಂಗ್ ಮಾಲ್ ತೆರೆಯಬಹುದಾ?
    ಉತ್ತರ – ಇಲ್ಲ. ಒಂದು ಮತ್ತು ಬಹು ಬ್ರ್ಯಾಂಡ್‍ನ ಶಾಪಿಂಗ್ ಮಾಲ್‍ಗಳನ್ನು ಮೇ 3ವರೆಗೂ ಓಪನ್ ಮಾಡಬಾರದು.

    * ವಾಣಿಜ್ಯ ಸಂಕೀರ್ಣ, ಮಾರುಕಟ್ಟೆ ಮಳಿಗೆ ತೆರೆಯಬಹುದಾ?
    ಉತ್ತರ – ಹೌದು.. ಆದರೆ ಷರತ್ತುಗಳು ಅನ್ವಯ. ನಗರಸಭೆ, ಕಾರ್ಪೋರೇಷನ್ ವ್ಯಾಪ್ತಿಯ ಹೊರಗಿರುವ ಪ್ರದೇಶಗಳಲ್ಲಿ ಮಾತ್ರ ಅವಕಾಶ. ಶೇ.50ರಷ್ಟು ಕಾರ್ಮಿಕರೊಂದಿಗೆ ಕೆಲಸ ಮಾಡಿಸಬೇಕು ಬೆಂಗಳೂರು ಸೇರಿದಂತೆ ನಗರ ಪ್ರದೇಶದಲ್ಲಿ ಇಲ್ಲ)

    * ಯಾವ ರೀತಿಯ ಅಂಗಡಿಗಳನ್ನು ತೆರೆಯಬಹುದು?
    ಉತ್ತರ – ಒಂಟಿ ಅಂಗಡಿಗಳು. ಸಾಲಾಗಿ ನಿರ್ಮಿಸಿರುವ ಅಂಗಡಿಗಳನ್ನು ತೆರೆಯಬಹುದು.

    * ಬೆಂಗಳೂರಿನ ಎಲ್ಲೆಲ್ಲಿ ಅಂಗಡಿ ತೆರೆಯಬಹುದು?
    ಉತ್ತರ – ವಸತಿ ಪ್ರದೇಶದಲ್ಲಿ ಅಂಗಡಿಗಳನ್ನು ತೆರೆಯಲು ಅವಕಾಶ.

    * ಟೈಲರಿಂಗ್ ಶಾಪ್ ಓಪನ್ ಮಾಡಬಹುದಾ?
    ಉತ್ತರ – ಹೌದು. ಮನೆ ಅಥವಾ ಪ್ರತ್ಯೇಕವಾಗಿರುವ ಟೈಲರಿಂಗ್ ಶಾಪ್‍ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

     

  • ಕೊರೊನಾ ಪರೀಕ್ಷೆಗೆ ಕಿರಿಕ್ – ಶ್ರೀಕಂಠೇಗೌಡ, ಪುತ್ರನಿಗೆ ಜಾಮೀನು

    ಕೊರೊನಾ ಪರೀಕ್ಷೆಗೆ ಕಿರಿಕ್ – ಶ್ರೀಕಂಠೇಗೌಡ, ಪುತ್ರನಿಗೆ ಜಾಮೀನು

    – ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಪರೀಕ್ಷೆಗೆ ವಿರೋಧ
    – ಕೋರ್ಟಿನಿಂದ ಷರತ್ತುಬದ್ಧ ಜಾಮೀನು ಮಂಜೂರು

    ಮಂಡ್ಯ: ಅಂಬೇಡ್ಕರ್ ಭವನದಲ್ಲಿ ಕೊರೊನಾ ಪರೀಕ್ಷೆ ನಡೆಸಲು ಕಿರಿಕ್ ಮಾಡಿದ್ದ ಜೆಡಿಎಸ್ ಪರಿಷತ್ ಸದಸ್ಯ ಶ್ರೀಕಂಠೇಗೌಡ ಮತ್ತು ಪುತ್ರನಿಗೆ ಜಾಮೀನು ಸಿಕ್ಕಿದೆ.

    ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಇಂದು ಪತ್ರಕರ್ತರಿಗೆ ಕೊರೋನಾ ಟೆಸ್ಟ್ ಮಾಡಲು ಜಿಲ್ಲಾಡಳಿತ ಮುಂದಾಗಿತ್ತು. ಆದ್ರೆ ಬೆಂಬಲಿಗರ ಜೊತೆ ಬಂದ ಜೆಡಿಎಸ್ ಎಂಎಲ್‍ಸಿ ಶ್ರೀಕಂಠೇಗೌಡ ಬೆಳ್ಳಂಬೆಳಗ್ಗೆಯೇ ಕಿರಿಕ್ ತೆಗೆದರು.

    ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಬಂದಿದ್ದ ಪತ್ರಕರ್ತರ ಜೊತೆ ಜಗಳಕ್ಕೆ ಇಳಿದ್ರು. ಇಲ್ಲಿ ಕೊರೋನಾ ಟೆಸ್ಟ್‍ಗೆ ಅವಕಾಶ ಇಲ್ಲ. ಇಲ್ಲಿ ನಮ್ಮ ಮನೆ ಇದೆ. ಇಲ್ಲಿನ ಯಾರಿಗಾದ್ರೂ ಕೊರೋನಾ ಬಂದರೆ ಏನು ಗತಿ ಎಂದು ಶ್ರೀಕಂಠೇಗೌಡರು ಪ್ರಶ್ನಿಸಿ ಏರುಧ್ವನಿಯಲ್ಲಿ ಜಗಳಕ್ಕೆ ಮುಂದಾದರು.

    ಇದು ಸಾಲದು ಅಂತಾ ಶ್ರೀಕಂಠೇಗೌಡರ ಪುತ್ರ ಕೃಷಿಕ್ ಗೌಡ, ಪತ್ರಕರ್ತರ ಮೇಲೆ ದಾಳಿ ನಡೆಸಿದರು. ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ, ಗಲಾಟೆ ಆರೋಪದ ಮೇಲೆ ಎಂಎಲ್‍ಸಿ ಶ್ರೀಕಂಠೇಗೌಡ ಸೇರಿ ಐವರ ವಿರುದ್ಧ ಮಂಡ್ಯದ ಪಶ್ಚಿಮ ಠಾಣೆ ಪೊಲೀಸ್ರು ಎಫ್‍ಐಆರ್ ದಾಖಲಿಸಿದರು. ಎಂಎಲ್‍ಸಿ ಶ್ರೀಕಂಠೇಗೌಡ, ಶ್ರೀಕಂಠೇಗೌಡರ ಪುತ್ರ ಕೃಷಿಕ್ ಸೇರಿ ಐವರನ್ನು ಬಂಧಿಸಿ ವಿಚಾರಣೆ ನಡೆಸಿದ್ರು.

    ಈ ಬೆನ್ನಲ್ಲೇ ಜೆಡಿಎಸ್ ಮುಖಂಡರು ಪೊಲೀಸರ ಮೇಲೆ ಪ್ರಭಾವ ಬೀರಲು ಯತ್ನಿಸಿದ್ರು. ವಿಚಾರಣೆ ವೇಳೆ ಠಾಣೆಗೆ ಆಗಮಿಸಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ ರಮೇಶ್, ಸ್ಟೇಷನ್ ಬೇಲ್ ನೀಡುವಂತೆ ಮನವಿ ಮಾಡಿದ್ರು. ಆದ್ರೆ ಇದಕ್ಕೆ ಸೊಪ್ಪು ಹಾಕದ ಪೊಲೀಸರು ಐವರು ಆರೋಪಿಗಳನ್ನು ಜೆಎಂಎಫ್‍ಸಿ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ತಲಾ 10 ಸಾವಿರ ರೂ.ಗಳ ಬಾಂಡ್ ಪಡೆದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದರು. ನ್ಯಾಯಾಲಯಕ್ಕೆ ತಪ್ಪದೇ ಹಾಜರಾಗಬೇಕೆಂದು ಸೂಚಿಸಿದ್ರು.

     

    ಕೊರೋನಾ ವಾರಿಯರ್ಸ್ ಮೇಲೆ ದಾಳಿಗಳು ನಡೆದ್ರೆ, ಅವ್ರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ರೆ ಆರು ತಿಂಗಳಿಂದ 7 ವರ್ಷ ಜೈಲು ಶಿಕ್ಷೆ ಎಂದು ಕೇವಲ ಮೂರು ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ರಾಜ್ಯ ಸರ್ಕಾರ ಕೂಡ 3 ವರ್ಷ ಜೈಲು ಶಿಕ್ಷೆ ಅಂತ ಸುಗ್ರೀವಾಜ್ಞೆ ಹೊರಡಿಸಿದೆ. ಆದ್ರೆ, ಇದು ಗೊತ್ತಿದ್ದರೂ, ಜನರಿಗೆ ತಿಳುವಳಿಕೆ ಹೇಳಬೇಕಾದ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಗಲಾಟೆ ಮಾಡಿದ್ದಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ.

    ಆರೋಪಿಗಳು ಯಾರು?
    ಎ1 – ಇತರರು (ಅಪರಿಚಿತರು ಎಂದು ಉಲ್ಲೇಖಿಸಲಾಗಿದೆ)
    ಎ2 – ಶ್ರೀಕಂಠೇಗೌಡ, ಎಂಎಲ್‍ಸಿ
    ಎ3 – ಕೃಷಿಕ್ ಗೌಡ, ಶ್ರೀಕಂಠೇಗೌಡರ ಪುತ್ರ
    ಎ4 – ಚಂದ್ರಕಲಾವತಿ, ಶ್ರೀಕಂಠೇಗೌಡರ ಬೆಂಬಲಿಗ
    ಎ5 – ಜಗದೀಶ್, ಶ್ರೀಕಂಠೇಗೌಡರ ಬೆಂಬಲಿಗ
    ಎ6 – ರಾಜು@ ಪಿಳ್ಳೆ, ಶ್ರೀಕಂಠೇಗೌಡರ ಬೆಂಬಲಿಗ

    ಯಾವ್ಯಾವ ಸೆಕ್ಷನ್ ಮೇಲೆ ಕೇಸ್?
    * 143 – ಅಕ್ರಮವಾಗಿ ಗುಂಪು ಸೇರುವಿಕೆ
    * 149 – ಉದ್ದೇಶಪೂರ್ವಕವಾಗಿ ದೊಂಬಿ
    * 341 – ಉದ್ದೇಶಪೂರ್ವಕವಾಗಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು
    * 323 – ಉದ್ದೇಶಪೂರ್ವಕವಾಗಿ ಹಾನಿ ಯತ್ನ
    * 501 – ಜನರನ್ನು ಪ್ರಚೋದಿಸುವ ರೀತಿಯ ನಡವಳಿಕೆ
    * 269 – ಜೀವ ಹಾನಿ ಉಂಟು ಮಾಡುವ ರೋಗ ಹರಡಲು ಯತ್ನ
    * 270 – ರೋಗ ಹರಡುವ ಉದ್ದೇಶದಿಂದ ತಪ್ಪು ಮಾಹಿತಿ
    * 504 – ಜೀವ ಬೆದರಿಕೆ
    * ಎನ್‍ಡಿಎಂಎ ಕಾಯ್ದೆ(ವಿಪತ್ತು ನಿರ್ವಹಣಾ ಕಾಯ್ದೆ 2005) ಸೆಕ್ಷನ್ 51 – ಸಕಾರಣ ಇಲ್ಲದೇ ಕರ್ತವ್ಯಕ್ಕೆ ಅಡ್ಡಿ ಯತ್ನ