Tag: Covid-19 Report

  • ರಾಜ್ಯದಲ್ಲಿಂದು 41,400 ಹೊಸ ಪ್ರಕರಣ: ಸೋಂಕಿತರಿಗಿಂತ ಗುಣಮುಖರಾದವರೇ ಹೆಚ್ಚು

    ರಾಜ್ಯದಲ್ಲಿಂದು 41,400 ಹೊಸ ಪ್ರಕರಣ: ಸೋಂಕಿತರಿಗಿಂತ ಗುಣಮುಖರಾದವರೇ ಹೆಚ್ಚು

    ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಮೂರನೇ ಅಲೆಯ ಏರಿಳಿತ ಆಗುತ್ತಿದೆ. ಇಂದು 41,400 ಹೊಸ ಪ್ರಕರಣಗಳು ದೃಢಪಟ್ಟಿದೆ. ಇದೇ ಮೊದಲ ಬಾರಿಗೆ ಕೊರೊನಾ ಪ್ರಕರಣಗಳಿಗಿಂತ ಗುಣಮುಖರಾಗಿ ಡಿಸ್ಚಾರ್ಜ್‌ ಆದವರ ಸಂಖ್ಯೆಯೇ ಹೆಚ್ಚಾಗಿದೆ.

    ಈ ಕುರಿತು ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಅವರು ಟ್ವೀಟ್‌ ಮಾಡಿದ್ದಾರೆ. ಇಂದು 53,093 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದಾರೆ. ಸದ್ಯ 3,50,742 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿಂದು 52 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎಲ್ಲರಿಗೂ ಮಾನಸಿಕ ಆರೋಗ್ಯದ ತಪಾಸಣೆ ಅಗತ್ಯ: ಸುಧಾಕರ್

    ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ 19,105 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, 19 ಮಂದಿ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ. ನಗರದಲ್ಲಿ 212 ಸಾವಿರ ಸಕ್ರಿಯ ಪ್ರಕರಣಗಳಿವೆ ಎಂದು ಟ್ವಿಟ್ಟರ್‌ನಲ್ಲಿ ವಿವರಿಸಿದ್ದಾರೆ.

    ರಾಜ್ಯದಲ್ಲಿ ಕೋವಿಡ್‌ ಪಾಸಿಟಿವಿಟಿ ದರ ಶೇ.26.70 ಇದೆ. ಕಳೆದ 24 ಗಂಟೆಗಳಲ್ಲಿ 1,55,054 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 2-3 ವಾರಗಳಲ್ಲಿ 3ನೇ ಅಲೆ ಕಡಿಮೆಯಾಗುತ್ತೆ: ಸುಧಾಕರ್

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 402, ಬಳ್ಳಾರಿ 775, ಬೆಳಗಾವಿ 977, ಬೆಂಗಳೂರು ಗ್ರಾಮಾಂತರ 958, ಬೆಂಗಳೂರು ನಗರ 19,105, ಬೀದರ್ 403, ಚಾಮರಾಜನಗರ 589, ಚಿಕ್ಕಬಳ್ಳಾಪುರ 915, ಚಿಕ್ಕಮಗಳೂರು 244, ಚಿತ್ರದುರ್ಗ 649, ದಕ್ಷಿಣ ಕನ್ನಡ 667, ದಾವಣಗೆರೆ 403, ಧಾರವಾಡ 1,511, ಗದಗ 168, ಹಾಸನ 1,381, ಹಾವೇರಿ 164, ಕಲಬುರಗಿ 573, ಕೊಡಗು 389, ಕೋಲಾರ 2,185, ಕೊಪ್ಪಳ 310, ಮಂಡ್ಯ 1,495, ಮೈಸೂರು 1,494, ರಾಯಚೂರು 214, ರಾಮನಗರ 242, ಶಿವಮೊಗ್ಗ 494, ತುಮಕೂರು 2,026, ಉಡುಪಿ 1,202, ಉತ್ತರ ಕನ್ನಡ 1,007, ವಿಜಯಪುರ 333 ಮತ್ತು ಯಾದಗಿರಿಯಲ್ಲಿ 125 ಪಾಸಿಟಿವ್ ಪ್ರಕರಣ ದಾಖಲಾಗಿದೆ.

  • ಕೋವಿಡ್ ಸೋಂಕಿತೆ ಸತ್ತು 6 ತಿಂಗಳ ಬಳಿಕ ಬಂತು ನೆಗೆಟಿವ್ ವರದಿ

    ಕೋವಿಡ್ ಸೋಂಕಿತೆ ಸತ್ತು 6 ತಿಂಗಳ ಬಳಿಕ ಬಂತು ನೆಗೆಟಿವ್ ವರದಿ

    -ಆರೋಗ್ಯ ಇಲಾಖೆ ಹಾಗೂ ಖಾಸಗಿ ಆಸ್ಪತ್ರೆ ಸಿಬ್ಬಂದಿ ಯಡವಟ್ಟು

    ರಾಯಚೂರು: ಜಿಲ್ಲೆಯ ಸಿಂಧನೂರಿನಲ್ಲಿ ಕೋವಿಡ್ ಅಂತಲೇ 14 ದಿನಕಾಲ ಚಿಕಿತ್ಸೆ ಪಡೆದು ಕೊನೆಗೆ ಸಾವನ್ನಪ್ಪಿದ ಮಹಿಳೆಯ ಕೋವಿಡ್ ರಿಪೋರ್ಟ್ 6 ತಿಂಗಳ ನಂತರ ನೆಗೆಟಿವ್ ಬಂದಿದೆ. ಕೋವಿಡ್ ಸಾವಿನ ಪರಿಹಾರಕ್ಕಾಗಿ ಮೃತಳ ಮಕ್ಕಳು ಓಡಾಡಿದ್ದಕ್ಕೆ ವರದಿಯೇ ಬದಲಾಗಿದೆ. ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಅಂತ ಮೃತಳ ಮಕ್ಕಳು ಈಗ ಹೋರಾಟ ನಡೆಸಿದ್ದಾರೆ.

    ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದ 54 ವರ್ಷದ ಪಾರ್ವತಮ್ಮ ಜ್ವರ ಅಂತ ಸಿಂಧನೂರಿನ ಖಾಸಗಿ ಆಸ್ಪತ್ರೆಗೆ ಕಳೆದ ಮೇ 25ರಂದು ದಾಖಲಾಗಿದ್ದರು. ಮಹಿಳೆಯಲ್ಲಿ ಕೋವಿಡ್ ಲಕ್ಷಣಗಳು ಕಂಡು ಬಂದಿದ್ದರಿಂದ ವೈದ್ಯರು ಸಿಟಿ ಸ್ಕ್ಯಾನ್ ಮಾಡಿಸಿದ್ದರು. ಸಿಟಿ ಸ್ಕ್ಯಾನ್ ವರದಿ ಪ್ರಕಾರ ಕೋವಿಡ್ ಎಂದು ವೈದ್ಯರು ಪರಿಗಣಿಸಿ, ಮಹಿಳೆಯ ಗಂಟಲು ಮಾದರಿ ಸಂಗ್ರಹಿಸಿ ಎಸ್‌ಆರ್‌ಎಫ್‌ಐಡಿ ನೀಡಿ 14 ದಿನಗಳ ಕಾಲ ಚಿಕಿತ್ಸೆ ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಮಹಿಳೆಯ ಅಂತ್ಯಕ್ರಿಯೆಯೂ ಸಹ ಕೋವಿಡ್ ನಿಯಮದಂತೆ ನೆರವೇರಿಸಲಾಯಿತು. ಇದನ್ನೂ ಓದಿ: ಓಮಿಕ್ರಾನ್ ರೋಗಿಗಳ ಚಿಕಿತ್ಸೆಗೆ ಕೊಟ್ಟಿದ್ದು ವಿಟಮಿನ್, ಪ್ಯಾರಾಸಿಟಮಾಲ್ ಮಾತ್ರೆ

    ಆ ಬಳಿಕ ಮೃತ ಮಹಿಳೆಯ ಮಕ್ಕಳಾದ ಪ್ರಭು ಮತ್ತು ನಾಗರಾಜ್ ಸರ್ಕಾರದ ಪರಿಹಾರ ಹಣಕ್ಕಾಗಿ ಅರ್ಜಿ ಸಲ್ಲಿಕೆ ಮಾಡಲು ಮುಂದಾಗಿದ್ದರು. ಆ ವೇಳೆ ಮೃತ ಮಹಿಳೆಗೆ ಪರಿಹಾರ ಬರಬೇಕಾದರೇ ಕೋವಿಡ್ ರಿಪೋರ್ಟ್ ಕಡ್ಡಾಯವಾಗಿ ತೆಗೆದುಕೊಂಡು ಬರಲು ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಸೂಚನೆ ನೀಡಿದರು. ಹೀಗಾಗಿ ಮೃತ ಮಹಿಳೆಯ ಮಕ್ಕಳು ಕೋವಿಡ್ ರಿಪೋರ್ಟ್ ಪಡೆಯಲು ಎಸ್‌ಆರ್‌ಎಫ್‌ಐಡಿ ಹಿಡಿದು ರಾಯಚೂರಿನ ಡಿಚ್‍ಒ ಕಚೇರಿ, ಇತ್ತ ಸಿಂಧನೂರಿನ ಖಾಸಗಿ ಆಸ್ಪತ್ರೆ ಹಾಗೂ ಟಿಎಚ್‍ಒ ಕಚೇರಿಗೆ ಅಲೆದರೂ 6 ತಿಂಗಳ ಕಾಲ ಕೋವಿಡ್ ರಿಪೋರ್ಟ್ ಮಾತ್ರ ಮೃತಳ ಮಕ್ಕಳಿಗೆ ಸಿಗಲೇ ಇಲ್ಲ.

    ಅತ್ತ ತಾಯಿಯೂ ಇಲ್ಲ, ಇತ್ತ ಸರ್ಕಾರದ ಪರಿಹಾರ ಹಣವೂ ಇಲ್ಲದೆ ಮೃತ ಮಹಿಳೆಯ ಮಕ್ಕಳು ಪರದಾಟ ನಡೆಸಿದ್ದಾರೆ. ಸಿಂಧನೂರಿನ ಟಿಎಚ್‍ಒ ಕಚೇರಿಗೆ ಮೃತ ಮಹಿಳೆಯ ಮಕ್ಕಳು ಹಾಗೂ ಸ್ಥಳೀಯರು ಹೋಗಿ ಒತ್ತಡ ಹಾಕಿದಾಗ ಆರೋಗ್ಯ ಇಲಾಖೆ ಸಿಬ್ಬಂದಿಗಳ ಲೋಪದೊಷ ಕಂಡು ಬಂದಿದೆ. ಸಿಂಧನೂರು ಟಿಎಚ್‍ಒ ಅಯ್ಯಣ್ಣ ಗೌಡ ಖಾಸಗಿ ಆಸ್ಪತ್ರೆ ಸಿಬ್ಬಂದಿ ಹಾಗೂ ಸಿಂಧನೂರು ತಾಲೂಕು ಆಸ್ಪತ್ರೆಯ ಲ್ಯಾಬ್ ಟೆಕ್ನಿಷನ್ ಜೊತೆಗೆ ಸಂಧಾನ ಸಭೆ ನಡೆಸಿ ಪರಿಹಾರದ ಹಣ ಇಬ್ಬರು ಭರಿಸಬೇಕೆಂದು ಸೂಚನೆ ನೀಡಿದ್ದರು. ಅಷ್ಟೇ ಅಲ್ಲದೆ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಈಗ ಅಧಿಕಾರಿಗಳು ಎಸ್‌ಆರ್‌ಎಫ್‌ಐಡಿ ಆಧಾರದ ಸ್ಯಾಂಪಲ್‍ಗೆ ನೆಗೆಟಿವ್ ಎಂದು ರಿಪೋರ್ಟ್ ನೀಡಿದ್ದಾರೆ. ರಿಪೋರ್ಟ್ ನೀಡಲು ವಿಳಂಬ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಆಗಬೇಕು ಅಂತ ಮೃತರ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕೊರೊನಾ ವಾರಿಯರ್ಸ್‍ಗೆ 4 ತಿಂಗಳಿನಿಂದ ಸಿಕ್ಕಿಲ್ಲ ಸಂಬಳ

    ಒಟ್ಟಿನಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಮಾಡಿದ ಯಡವಟ್ಟಿನಿಂದ ಮಹಿಳೆ ಸತ್ತು 6 ತಿಂಗಳ ಬಳಿಕ ಈಗ ಕೋವಿಡ್ ವರದಿ ನೆಗೆಟಿವ್ ಅಂತ ಬಂದಿದೆ. ಆದರೆ ಕೋವಿಡ್ ರಿಪೋರ್ಟ್ ಇಲ್ಲದೆ ವೈದ್ಯರು ಮಹಿಳೆಗೆ ಕೋವಿಡ್ ಚಿಕಿತ್ಸೆ ಏಕೆ ನೀಡಿದ್ದು, ಅನ್ನೋದು ಮೃತರ ಕುಟುಂಬಸ್ಥರ ಪ್ರಶ್ನೆ? ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಪರಿಹಾರ ನೀಡುವಂತೆ ಮೃತರ ಸಂಬಂಧಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ವಿಶ್ವದಲ್ಲೇ ಮೊದಲು – ಈಕ್ವೆಡಾರ್‌ನಲ್ಲಿ 5 ವರ್ಷದ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ ಕಡ್ಡಾಯ