Tag: Counter

  • ಜನರಲ್ ಟಿಕೆಟ್‍ಗಾಗಿ ರೈಲು ಪ್ರಯಾಣಿಕರ ನೂಕಾಟ

    ಜನರಲ್ ಟಿಕೆಟ್‍ಗಾಗಿ ರೈಲು ಪ್ರಯಾಣಿಕರ ನೂಕಾಟ

    ರಾಯಚೂರು: ರೈಲ್ವೆ ಜನರಲ್ ಟಿಕೆಟ್‍ಗಾಗಿ ಪ್ರಯಾಣಿಕರು ಪರದಾಡುತ್ತಿರುವ ಘಟನೆ ನಗರದ ರೈಲು ನಿಲ್ದಾಣದಲ್ಲಿ ನಡೆದಿದೆ.

    ನೂರಾರು ಪ್ರಯಾಣಿಕರು ಜನರಲ್ ಟಿಕೆಟ್ ಪಡೆಯಲು ಮುಗಿಬಿದ್ದಿದ್ದಾರೆ. 3 ಟಿಕೆಟ್ ಕೌಂಟರ್ ಇದ್ದರೂ ಕೇವಲ ಒಂದೇ ಕೌಂಟರ್‍ನಲ್ಲಿ ಜನರಲ್ ಟಿಕೆಟ್ ವಿತರಣೆ ಮಾಡಲಾಗುತ್ತಿದೆ. ಹಾಗಾಗಿ ನೂರಾರು ಪ್ರಯಾಣಿಕರು ಲಗೇಜ್ ಹಿಡಿದು ಕ್ಯೂ ನಿಂತಿದ್ದಾರೆ. ಇದನ್ನೂ ಓದಿ: ವಾರಣಾಸಿ ಜಿಲ್ಲಾ ಕೋರ್ಟ್‍ನಲ್ಲಿ ಕಾಶಿ ಮಸೀದಿ ವಿಚಾರಣೆ – ಜ್ಞಾನವಾಪಿ ಮಸೀದಿಯಲ್ಲಿ ಮತ್ತೊಂದು ಶಿವಲಿಂಗ?

    ಪ್ರಯಾಣಿಕರು ಬೆಂಗಳೂರು, ಮುಂಬೈ, ತಿರುಪತಿ, ಹೈದರಾಬಾದ್ ತೆರಳಲು ರೈಲ್ವೆ ನಿಲ್ದಾಣಕ್ಕೆ ಬಂದಿದ್ದು, ತಿಕ್ಕಾಟ, ನೂಕಾಟ ಮಾಡುತ್ತಾ ಟಿಕೆಟ್ ಪಡೆಯುತ್ತಿದ್ದಾರೆ. ಪ್ರಯಾಣಿಕರ ನೂಕಾಟ ತಪ್ಪಿಸುವಂತೆ ಜನರು ಆಗ್ರಹಿಸಿ, ರಾತ್ರಿ ವೇಳೆ ಎರಡು-ಮೂರು ಟಿಕೆಟ್ ವಿತರಣೆ ಕೌಂಟರ್ ತೆರೆಯಲು ಮನವಿ ಮಾಡಕೊಂಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಶಾಂತನಾದ ವರುಣ, ತಗ್ಗಿದ ಪ್ರವಾಹ – ಚಿಕ್ಕಬಳ್ಳಾಪುರದ ಡ್ಯಾಮ್‍ನಲ್ಲಿ ಯುವಕನ ಕೋತಿಯಾಟ

  • ಎದುರಿಗೆ ಇದ್ದವ್ರು ಹೇಗಿರುತ್ತಾರೋ, ನಾನೂ ಹಾಗೇ ಇರ್ತ್ತೇನೆ: ದರ್ಶನ್ ಕೌಂಟರ್

    ಎದುರಿಗೆ ಇದ್ದವ್ರು ಹೇಗಿರುತ್ತಾರೋ, ನಾನೂ ಹಾಗೇ ಇರ್ತ್ತೇನೆ: ದರ್ಶನ್ ಕೌಂಟರ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವಿಟ್ಟರ್‌ನಲ್ಲಿ ಕೌಂಟರ್ ಕೊಟ್ಟಿದ್ದಾರೆ. ಆದರೆ ಅದು ಯಾರಿಗೆ ಎನ್ನುವುದನ್ನು ಡಿ ಬಾಸ್ ತಿಳಿಸಿಲ್ಲ.

    ದರ್ಶನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ‘ನಾನು ಐಸ್‍ಕ್ಯಾಂಡಿಯಷ್ಟು ಸಿಹಿ. ನೀರಿನಷ್ಟು ತಂಪು, ಕೆಟ್ಟತನದಲ್ಲಿ ನರಕ ತೋರಿಸುತ್ತೇನೆ. ಪ್ರಾಮಾಣಿಕತೆಯಲ್ಲಿ ಯೋಧನಷ್ಟು ನಿಷ್ಠ. ಎದುರಿಗೆ ಇದ್ದವರು ಹೇಗಿರುತ್ತಾರೊ, ನಾನೂ ಹಾಗೇ ಇರುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಡಿಬಾಸ್ ಈ ಪಂಚಿಂಗ್ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲ ಅಭಿಮಾನಿಗಳು ದರ್ಶನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲ ಸಿನಿಮಾ ಪ್ರಿಯರು ತಮ್ಮ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

    ಬಾಸ್. ಈ ಹೇಳಿಕೆ ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವಂತ್ತಿದೆ. ಆದರೆ ಅಭಿಮಾನಿಗಳು ಇದನ್ನು ಮತ್ತೊಂದು ಆಯಾಮದಲ್ಲಿ ನೋಡುವುದು ಬೇಡ ಎಂದು ನಿಶಾ ದರ್ಶ ವಿಜಿ ಎಂಬವರು ರಿಟ್ವೀಟ್ ಮಾಡಿದ್ದಾರೆ.

    https://twitter.com/Nish_Darsh_Vijz/status/1167743721628004357