Tag: Costumes

  • ಕಿಚ್ಚ ಸುದೀಪ್ ಜೊತೆ ಮಾತಾಡಲು ಹೇಗೆಲ್ಲಾ ರೆಡಿ ಆಗ್ತಾರೆ ಸ್ಪರ್ಧಿಗಳು?

    ಕಿಚ್ಚ ಸುದೀಪ್ ಜೊತೆ ಮಾತಾಡಲು ಹೇಗೆಲ್ಲಾ ರೆಡಿ ಆಗ್ತಾರೆ ಸ್ಪರ್ಧಿಗಳು?

    ವೀಕೆಂಡ್ ಬಂತೆಂದರೆ ಬಿಗ್ ಬಾಸ್ ಸ್ಪರ್ಧಿಗಳಿಗೆಲ್ಲ ಹಬ್ಬ ಎನ್ನುವುದು ತಿಳಿದಿರುವ ವಿಚಾರ. ಆದರೆ ಇದರ ಹಿಂದೆ ವೀಕೆಂಡ್ ಎರಡು ದಿನಗಳಿಗಾಗಿ ದೊಡ್ಮನೆ ಮಂದಿ ಇಷ್ಟೆಲ್ಲಾ ತಯಾರಾಗ್ತಾರಾ, ಇಷ್ಟೆಲ್ಲಾ ಯೋಚಿಸುತ್ತಾರಾ ಎಂಬ ಆಶ್ಚರ್ಯ ಇದೀಗ ಕಾಡತೊಡಗಿದೆ.

    ಹೌದು ಈ ಕುತೂಹಲವನ್ನು ಕಿಚ್ಚ ಸುದೀಪ್ ಅವರು ಈ ಬಾರಿಯ ಸೂಪರ್ ಸಂಡೇಯಲ್ಲಿ ಕೆದಿಕಿದ್ದು, ಎಲ್ಲ ಸ್ಪರ್ಧಿಗಳು ಒಂದೊಂದು ರೀತಿಯ ಉತ್ತರ ನೀಡಿದ್ದಾರೆ. ವೀಕೆಂಡ್ ದಿನಗಳಲ್ಲಿ ಕಿಚ್ಚ ಸುದೀಪ್ ಅವರೊಟ್ಟಿಗೆ ಮಾತನಾಡಲು ಸ್ಪರ್ಧಿಗಳು ಇಷ್ಟೆಲ್ಲಾ ತಯಾರಾಗ್ತಾರಾ ಎಂದು ಆಶ್ಚರ್ಯವಾಗುತ್ತಿದೆ. ಎಲ್ಲರೂ ಅವರ ಬಟ್ಟೆ, ಮೇಕಪ್ ಬಗ್ಗೆ ಮಾತನಾಡಿದ್ದು, ಯಾವ್ಯಾವ ರೀತಿ ತಯಾರಾಗುತ್ತಾರೆ ಎಂದು ಹೇಳಿಕೊಂಡಿದ್ದಾರೆ.

    ವೀಕೆಂಡ್‍ನಲ್ಲಿ ಶೋನಲ್ಲಿ ಭಾಗವಹಿಸಲು ಯಾವ ರೀತಿಯ ಬಟ್ಟೆ ಹಾಕೋಬೇಕು, ಹೇರ್ ಸ್ಟೈಲ್ ಯಾವ ರೀತಿ ಇರಬೇಕೆಂದು ಬಹುತೇಕ ಎಲ್ಲರಿಗೂ ಕನ್ಫ್ಯೂಸ್ ಇರುತ್ತದೆ. ಆದರೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಶುಭಾ ಪೂಂಜಾ, ದಿವ್ಯಾ ಸುರೇಶ್ ಎಂದು ಮನೆ ಮಂದಿ ಹೇಳಿದ್ದಾರೆ. ಅಲ್ಲದೆ ಇನ್ನೂ ಅಚ್ಚರಿಯ ರೀತಿಯಲ್ಲಿ ಪ್ರಶಾಂತ್ ಸಂಬರಗಿ ಉತ್ತರಿಸಿದ್ದು, ವೈಷ್ಣವಿ ಹಾಗೂ ದಿವ್ಯಾ ಉರುಡುಗ ಅವರಿಗೆ ಯಾವ ವೀಕೆಂಡ್‍ಗೆ, ಯಾವ ಬಟ್ಟೆ, ಯಾವ ರೀತಿ ಕಾಸ್ಟೂಮ್ ಮಾಡಿಕೊಳ್ಳಬೇಕೆಂಬ ಪಟ್ಟಿ ಅವರ ಕಾಸ್ಟೂಮ್ ಡಿಸೈನರ್ ಇಂದ ಬಂದಿರುತ್ತದೆ. ಅವರಿಗೆ ಕನ್ಫ್ಯೂಸ್ ಆಗಲ್ಲ. ಆದರೆ ಶುಭಾ ಪೂಂಜಾ ಹಾಗೂ ದಿವ್ಯಾ ಸುರೇಶ್ ಹೆಚ್ಚು ಕನ್ಫ್ಯೂಸ್ ಆಗುತ್ತಾರೆ ಎಂದು ಹೇಳಿದ್ದಾರೆ.

    ಹಿಯರಿಂಗ್, ಫಿಂಗರ್, ಹೇರ್ ಸ್ಟೈಲ್, ಬಟ್ಟೆ, ಸ್ಲಿಪ್ಪರ್ ತನಕ ದಿವ್ಯಾ ಸುರೇಶ್ ಅವರಿಗೆ ಕನ್ಫ್ಯೂಶನ್ ಇರುತ್ತದೆ. ಹೀಲ್ಸ್ ಹಾಕ್ಲಾ, ಸ್ಲಿಪ್ಪರ್ ಹಾಕ್ಲಾ, ಶೂ ಹಾಕ್ಲಾ ಎಂದು ಕೇಳುತ್ತಿರುತ್ತಾರೆ ಎಂದು ಹೇಳಿದ್ದಾರೆ. ಒಟ್ನಲ್ಲಿ ವೀಕೆಂಡ್‍ಗೆ ಹೇಗೆ ರೆಡಿ ಆಗ್ತಾರೆ, ಎಷ್ಟೆಲ್ಲಾ ಕಷ್ಟ ಪಡ್ತಾರೆ ಎಂಬ ವಿಚಾರವನ್ನು ಕಿಚ್ಚ ಸುದೀಪ್ ಕೆದಕಿದ್ದಾರೆ. ಅಲ್ಲದೆ ಮುಂದಿನ ಶನಿವಾರ ನಿಮ್ಮಿಷ್ಟದ ಬಟ್ಟೆ ಹಾಕಿಕೊಂಡು ಬನ್ನಿ, ಯಾರು ಚೆನ್ನಾಗಿ ಕಾಣುತ್ತಾರೋ ನೋಡೋಣ ಎಂದು ಸುದೀಪ್ ಹೇಳಿದ್ದಾರೆ.

  • `ಕುರುಕ್ಷೇತ್ರ’ ಸಿನಿಮಾ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ ಚಾಲೆಂಜಿಂಗ್ ಸ್ಟಾರ್!

    `ಕುರುಕ್ಷೇತ್ರ’ ಸಿನಿಮಾ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ ಚಾಲೆಂಜಿಂಗ್ ಸ್ಟಾರ್!

    ಬೆಂಗಳೂರು: ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ `ಮುನಿರತ್ನ ಕುರುಕ್ಷೇತ್ರ’ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ದೊಡ್ಡ ತಾರಾಗಣವಿದ್ದು, ಜನರಲ್ಲಿ ಬಾರಿ ನಿರೀಕ್ಷೆ ಹುಟ್ಟಿಸಿದೆ.

    ಈ ಕುರಿತು ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಈ ಚಿತ್ರದಲ್ಲಿ ನಾನು ಯಾವುದೇ ಪರಕಾಯಪ್ರವೇಶ ಮಾಡಲಿಲ್ಲ. ಕ್ಯಾಮರಾ ಆನ್ ಮಾಡಿದ ತಕ್ಷಣ ಅಭಿನಯಿಸಿ ಕಟ್ ಎಂದ ತಕ್ಷಣ ಪಾತ್ರದಿಂದ ಹೊರಬರುತ್ತೇನೆ. ನಾನು ಒಬ್ಬ ರಂಗಭೂಮಿ ಕಲಾವಿದನಾಗಿದ್ದು, ನಿನಾಸಂ ಮಾಡಿದ್ದೇನೆ ಹಾಗೂ ಬೇಸಿಕ್ ಕಲಿತಿದ್ದೇನೆ. ಈಗಿನ ಕಾಲದ ಮಕ್ಕಳಿಗೆ ಕುರುಕ್ಷೇತ್ರ, ರಾಮಾಯಣ, ಮಹಾಭಾರತದ ಬಗ್ಗೆ ತಿಳಿದಿಲ್ಲ. ಅಷ್ಟೇ ಅಲ್ಲದೆ ನನ್ನ ಮಗನಿಗೂ ಇದರ ಬಗ್ಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

    ನಮ್ಮ ಕಾಲದಲ್ಲಿ ಮಹಾಭಾರತ, ರಾಮಾಯಣದ ಬಗ್ಗೆ ಓದಿದ್ದೇವೆ, ಕೇಳಿದ್ದೇವೆ. ಆದರೆ ಈಗಿನ ಕಾಲದ ಮಕ್ಕಳಿಗೆ ಬೇರೆ ರೀತಿಯ ಶಿಕ್ಷಣವಿದ್ದು, ಅವರಿಗೆ ಇದರ ಬಗ್ಗೆ ತಿಳಿದಿರುವುದಿಲ್ಲ. ನಮ್ಮ ಕಾಲದಲ್ಲಿ ಟಿಪ್ಪು ಸುಲ್ತಾನ್ ಯಾರು? ಅವರ ಕಥೆ ಏನು? ಎಂಬುದು ನಾವು ಕೇಳಿದ್ದೇವೆ ಹಾಗೂ ಟಿವಿಯಲ್ಲಿ ನೋಡಿದ್ದೇವೆ. ಆದರೆ ಈಗಿನ ಕಾಲದ ಮಕ್ಕಳಿಗೆ ಚೋಟಾ ಭೀಮ್ ಹಾಗೂ ಪೋಕಿಮಾನ್ ಕಥೆಗಳು ಮಾತ್ರ ಅವರಿಗೆ ಗೊತ್ತಿರೋದು. ಆ ಮಕ್ಕಳಿಗಾಗಿ ನಾವು ಈ ಸಿನಿಮಾ ಮಾಡುತ್ತಿದ್ದೇವೆ ಎಂದು ದರ್ಶನ್ ಈಗಿನ ಕಾಲದ ಮಕ್ಕಳ ಬಗ್ಗೆ ಹೇಳಿದ್ದಾರೆ.

    ಬೇರೆ ಚಿತ್ರರಂಗದವರು ಇಂಥ ಸಿನಿಮಾಗಳಿಗೆ ನಾವು 5-6 ವರ್ಷ ತೆಗೆದುಕೊಂಡಿದ್ದೇವೆ ಎಂದು ಹೇಳುತ್ತಾರೆ. ಆದರೆ ನಾವು ಮೇ ತಿಂಗಳಿನಿಂದ ಜನವರಿ 5 ರವರೆಗೂ ಕುರುಕ್ಷೇತ್ರ ಎಂಬ ದೊಡ್ಡ ಸಿನಿಮಾದ ಚಿತ್ರೀಕರಣ ಮಾಡಿದ್ದೇವೆ. ಈ ಸಿನಿಮಾನೇ ದೊಡ್ಡದು ಹಾಗೂ ಈ ಸಿನಿಮಾ ಮುಂದೆ ಯಾರೂ ದೊಡ್ಡವರಿಲ್ಲ. ಈ ಸಿನಿಮಾ 3ಡಿಯಲ್ಲಿದ್ದು, 3ಡಿನೇ ಈ ಸಿನಿಮಾದ ಟ್ರೀಟ್ ಹಾಗೂ 3ಡಿ ಎಫೆಕ್ಟ್ ನಲ್ಲಿ ಇದು ಮೊದಲ ಪೌರಾಣಿಕಾ ಸಿನಿಮಾ ಆಗಿದೆ ಅಂದ್ರು.

    ಇನ್ನು ಕಾಸ್ಟೂಮ್ಸ್ ನ ಬಗ್ಗೆ ಮಾತನಾಡಿದ ದರ್ಶನ್, ನಾನು 50 ರಿಂದ 60 ಕೆ.ಜಿ ತೂಕದ ಕಾಸ್ಟೂಮ್ಸ್ ಹಾಕುತ್ತಿದ್ದೇನೆ. ಇದರಿಂದ ನನ್ನ ತೂಕ ಹೆಚ್ಚಾಗುತ್ತಿದ್ದು, ಮತ್ತೆ ಕಡಿಮೆಯಾಗುತ್ತಿದೆ. ಕುರುಕ್ಷೇತ್ರ ಒಂದು ಒಳ್ಳೆಯ ಸಿನಿಮಾ ಆಗುತ್ತದೆ ಹಾಗೂ ಈಗಿನ ಕಾಲದ ಮಕ್ಕಳಿಗೆ ಮಹಾಭಾರತದ ಬಗ್ಗೆ ಅದರಲ್ಲೂ ಕುರುಕ್ಷೇತ್ರದ ಬಗ್ಗೆ ತಿಳಿದುಕೊಳ್ಳುತ್ತಾರೆ ಎಂದು ದುರ್ಯೋಧನ ಪಾತ್ರ ನಿರ್ವಹಿಸುತ್ತಿರೋ ದರ್ಶನ್ ತಿಳಿಸಿದ್ದಾರೆ.

    ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಡೈಲಾಗ್ ಕಿಂಗ್ ಸಾಯಿಕುಮಾರ್, ಶಶಿಕುಮಾರ್, ಆರ್ಮುಗಂ ಖ್ಯಾತಿಯ ರವಿಶಂಕರ್, ಶ್ರೀನಿವಾಸ್ ಮೂರ್ತಿ, ಸೋನು ಸೂದ್ ಹಾಗೂ ಪ್ರಣಯ ರಾಜ ಶ್ರೀನಾಥ್ ಕಾಣಿಸಿಕೊಳ್ಳಲಿದ್ದಾರೆ. ನೀರ್ ದೋಸೆ ಬೆಡಗಿ ಹರಿಪ್ರಿಯಾ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಪವಿತ್ರಾ ಲೋಕೇಶ್ ಕೂಡ ಈ `ಕುರುಕ್ಷೇತ್ರ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

    https://youtu.be/LZgauZ2OOaM

    https://www.youtube.com/watch?v=K_B9Pw7SXRM


     

  • ಪದ್ಮಾವತಿ ಚಿತ್ರಕ್ಕೆ ಶಾಹಿದ್ ಕಪೂರ್ ರಾಯಲ್ ಕಾಸ್ಟ್ಯೂಮ್ ತಯಾರಾಗಿದ್ದು ಹೀಗೆ

    ಪದ್ಮಾವತಿ ಚಿತ್ರಕ್ಕೆ ಶಾಹಿದ್ ಕಪೂರ್ ರಾಯಲ್ ಕಾಸ್ಟ್ಯೂಮ್ ತಯಾರಾಗಿದ್ದು ಹೀಗೆ

    ಮುಂಬೈ: ಪದ್ಮಾವತಿ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರ ಫಸ್ಟ್ ಲುಕ್ ನೋಡಿ ಎಲ್ಲರೂ ಹುಬ್ಬೇರಿಸಿದ್ದರು. ಸೋಮವಾರ ಬಿಡುಗಡೆಯಾದ ಶಾಹಿದ್ ಕಪೂರ್ ಅವರ ಮಹಾರಾವಲ್ ರತನ್ ಸಿಂಗ್ ಫಸ್ಟ್ ಲುಕ್ ಕೂಡ ಜನರು ಸಾಕಷ್ಟು ಇಷ್ಟಪಟ್ಟಿದ್ದಾರೆ. ಈ ಚಿತ್ರಕ್ಕೆ ಶಾಹಿದ್ ಕಪೂರ್ ಅವರ ಕಾಸ್ಟ್ಯೂಮ್ ವಿನ್ಯಾಸಕ್ಕಾಗಿಯೇ 4 ತಿಂಗಳು ಹಿಡಿದಿದೆ ಹಾಗೂ 22 ಕಲಾವಿದರು ಡಿಸೈನ್ ಮಾಡಿದ್ದಾರೆ.

    ಪದ್ಮಾವತಿ ಚಿತ್ರದಲ್ಲಿ ಶಾಹಿದ್ ಕಪೂರ್ ಅವರ ಕಾಸ್ಟ್ಯೂಮ್ ವಿನ್ಯಾಸ ಮಾಡುವುದೇ ನಮಗೆ ಚಾಲೆಂಜಿಂಗ್ ಆಗಿತ್ತು. ಚಿತ್ರದಲ್ಲಿ ಶಾಹಿದ್ ಹಾಕುವ ಪ್ರತಿಯೊಂದು ಕಾಸ್ಟ್ಯೂಮ್ ಹಿಂದೆಯೂ ಸಾಕಷ್ಟು ಸಂಶೋಧನೆ ನಡೆದಿದೆ ಎಂದು ಡಿಸೈನರ್ ರಿಂಪಲ್ ಹಾಗೂ ಹರ್‍ಪ್ರೀತ್ ನರುಲಾ ಹೇಳಿದ್ದಾರೆ.

    ಚಿತ್ರದಲ್ಲಿ ನೈಜತೆ ಕಾಪಾಡಿಕೊಳ್ಳುವ ಸಲುವಾಗಿ 14ನೇ ಶತಮಾನದ ಉಡುಗೆಯ ಸ್ಟೈಲ್ ಹಾಗೂ ಚಿತ್ತೂರ್‍ನ ಹವಾಮಾನ ಎಲ್ಲವನ್ನೂ ಪರಿಗಣಿಸಿ ನಂತರ ಕಾಸ್ಟ್ಯೂಮ್ ಅಂತಿಮಗೊಳಿಸಲಾಯ್ತು. ರಾಜಸ್ಥಾನದಿಂದ ಸಾವಯುವ ಬಟ್ಟೆಗಳನ್ನು ತರಿಸಲಾಗಿತ್ತು ಹಾಗೂ 22 ಸ್ಥಳೀಯ ಕಲಾವಿದರು ಕಸೂತಿ ಮಾಡಿದ್ರು. ಮಸ್ಲಿನ್ ಬಟ್ಟೆಯನ್ನೇ ಇಟ್ಟುಕೊಂಡು ಅದಕ್ಕೆ ತರಕಾರಿಯ ಡೈ ಹಾಗೂ ಹ್ಯಾಂಡ್ ಡೈ ಬಳಸಲಾಗಿದೆ ಅಂತ ಹೇಳಿದ್ರು

    4 ತಿಂಗಳ ಈ ಸುದೀರ್ಘ ಪ್ರಕ್ರಿಯೆಯಲ್ಲಿ ಸಂಶೋಧನೆಗಾಗಿಯೇ ಜೈಪುರ್ ಹಾಗೂ ಅಹಮ್ಮದಬಾದ್‍ನ ಮ್ಯೂಸಿಯಂಗಳನ್ನ ಭೇಟಿ ಮಾಡಿದ್ದೇವೆ. ಆಗಿನ ಕಾಲದ ಬಟ್ಟೆಗಳು ಹಾಗೂ ಪುರಾತನ ವಸ್ತ್ರಗಳ ಸ್ಯಾಂಪಲ್‍ಗಳನ್ನ ಜಗತ್ತಿನಾದ್ಯಂತ ಹಲವಾರು ಮ್ಯೂಸಿಯಂಗಳಲ್ಲಿ ಪ್ರದರ್ಶನಕ್ಕೆ ಇಟ್ಟಿರುತ್ತಾರೆ. ಈ ಎಲ್ಲಾ ಮ್ಯೂಸಿಯಂಗಳಿಗೆ ಭೇಟಿ ನೀಡುವ ನಮ್ಮ ಕನಸು ಈಡೇರಿತು. ಕ್ಯಾಲಿಕೋ ಮ್ಯೂಸಿಯಂ ಮತ್ತು ಜೈಪುರ್‍ನ ಕೆಲವು ಮ್ಯೂಸಿಯಂಗಳಿಗೆ ನಾವು ಭೇಟಿ ನೀಡಿದೆವು. ಸಾಮಾನ್ಯವಾಗಿ ಮಾರ್ಕೆಟ್‍ಗಳಲ್ಲಿ ಪುರಾತನ ಶೈಲಿಯ ಆಭರಣಗಳನ್ನ ಸಂಗ್ರಹಿಸೋ ಅಭ್ಯಾಸವಿತ್ತು. ಅದನ್ನೆಲ್ಲಾ ಇಲ್ಲಿ ಬಳಸಿಕೊಂಡೆವು ಎಂದು ರಿಂಪಲ್ ತಿಳಿಸಿದ್ರು.

    https://twitter.com/deepikapadukone/status/912123492979564544

    https://twitter.com/deepikapadukone/status/912118818012512256

    https://twitter.com/deepikapadukone/status/910673498376364033

    https://twitter.com/deepikapadukone/status/910668862336544768