Tag: Costalwood

  • ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ ಜೊತೆ ತುಳು ಸಿನಿಮಾ ಮಾಡ್ತಾರಾ ಸುನೀಲ್ ಶೆಟ್ಟಿ?

    ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ ಜೊತೆ ತುಳು ಸಿನಿಮಾ ಮಾಡ್ತಾರಾ ಸುನೀಲ್ ಶೆಟ್ಟಿ?

    ಮುಂಬೈ: ಮಂಗಳೂರು ಸೀಮೆಯ ಕರಾವಳಿ ಪ್ರದೇಶದಿಂದ ಹೋದವರು ಪ್ರಸಿದ್ಧ ನಟ ನಟಿಯರಾಗಿ ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ಸದ್ದು ಮಾಡುತ್ತಿದ್ದಾರೆ. ಅಂಥ ಕರಾವಳಿಗರ ಸಾಲಿನಲ್ಲಿ ಐಶ್ವರ್ಯಾ ರೈ, ಸುನೀಲ್ ಶಿಟ್ಟಿ, ಶಿಲ್ಪಾ ಶೆಟ್ಟಿ ಮುಂತಾದವರು ಬಾಲಿವುಡ್ ಐಕಾನ್‍ಗಳಾಗಿ ಮಿಂಚುತ್ತಿದ್ದಾರೆ. ಇವರೆಲ್ಲರೂ ಸೇರಿಕೊಂಡು ತುಳು ಸಿನಿಮಾವೊಂದನ್ನು ಮಾಡಿದರೆ ತುಳುವರ ಪಾಲಿಗದು ಹಬ್ಬ. ಇಂಥಾದ್ದೊಂದು ಹಬ್ಬ ಶುರುವಾಗೋ ಸೂಚನೆಯನ್ನು ಸುನೀಲ್ ಶೆಟ್ಟಿ ರವಾನಿಸಿದ್ದಾರೆ!

    ಬಾಲಿವುಡ್ ನಲ್ಲಿ ಸ್ಟಾರ್ ಆಗಿದ್ದರೂ ಕೂಡಾ ತುಳುನಾಡ ಸಂಸ್ಕೃತಿ, ತುಳು ಭಾಷೆಯ ಬಗ್ಗೆ ಅಪಾರ ಪ್ರೀತಿ ಹೊಂದಿರುವವರು ಸುನೀಲ್ ಶೆಟ್ಟಿ. ಕರಾವಳಿಯ ಕಾರ್ಯಕ್ರಮಗಳಿಗೆಲ್ಲ ಓಡೋಡಿ ಬಂದು ಪಾಲ್ಗೊಳ್ಳುವ ಸುನೀಲ್ ಉಡುಪಿಯಲ್ಲಿ ನಡೆದ ಬಂಟರ ಕಾರ್ಯಕ್ರಮಕ್ಕೂ ಹಾಜರಾಗಿದ್ದರು. ಇದರಲ್ಲಿ ರಕ್ಷಿತ್ ಶೆಟ್ಟಿ ಸೇರಿದಂತೆ ಆ ಸಮುದಾಯದ ಸ್ಯಾಂಡಲ್‍ವುಡ್ ನಟ ನಟಿಯರೂ ಪಾಲ್ಗೊಂಡಿದ್ದರು.

    ಈ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಸೇರಿದಂತೆ ಎಲ್ಲರ ಹೆಸರು ಹೇಳಿಯೇ ಅಭಿನಂದಿಸಿದ ಸುನೀಲ್ ತುಳುನಾಡು ತಮ್ಮ ತಾಯಿ ನೆಲ. ತುಳು ಭಾಷೆ ತಮ್ಮ ಶಕ್ತಿ ಅಂದಿದ್ದಾರೆ. ಇದೇ ಸಂದರ್ಭದಲ್ಲಿ ತಾವು ಕನ್ನಡ ಚಿತ್ರದಲ್ಲಿ ನಟಿಸುತ್ತಿರೋ ವಿಚಾರವನ್ನೂ ಹೆಮ್ಮೆಯಿಂದಲೇ ಹೇಳಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಬಾಲಿವುಡ್ ಸ್ನೇಹಿತರು ಮತ್ತು ತುಳುನಾಡಿನವರಾದ ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ ಮತ್ತು ರೋಹಿತ್ ಶೆಟ್ಟಿ ಮುಂತಾದವರು ಜೊತೆಗೂಡಿ ತುಳು ಚಿತ್ರವೊಂದನ್ನು ಮಾಡುವ ಆಲೋಚನೆ ಇರೋದಾಗಿಯೂ ಹೇಳಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಟಪಾಡಿ ಕಟ್ಟಪ್ಪೆ ತುಳು ಚಿತ್ರದ ಆಡಿಯೋ ರಿಲೀಸ್ ಮಾಡಿದ ಕಿಚ್ಚ ಸುದೀಪ್

    ಕಟಪಾಡಿ ಕಟ್ಟಪ್ಪೆ ತುಳು ಚಿತ್ರದ ಆಡಿಯೋ ರಿಲೀಸ್ ಮಾಡಿದ ಕಿಚ್ಚ ಸುದೀಪ್

    ಮಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು ಸ್ಯಾಂಡಲ್‍ವುಡ್‍ನಿಂದ ಕೋಸ್ಟಲ್‍ವುಡ್ ಕಡೆಗೆ ಬಂದಿದ್ದು ಮಂಗಳೂರಿನಲ್ಲಿ ತುಳು ಚಿತ್ರವೊಂದರ ಆಡಿಯೋ ರಿಲೀಸ್ ಮಾಡಿದರು.

    ತುಳು ಚಿತ್ರ ‘ಕಟಪಾಡಿ ಕಟ್ಟಪ್ಪೆ’ ಅನ್ನುವ ತುಳು ಚಿತ್ರದ ಆಡಿಯೋ ರಿಲೀಸ್‍ನ್ನು ಮಂಗಳೂರಿನ ಪುರಭವನದಲ್ಲಿ ನೆರೆವೇರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್ ತುಳು ಭಾಷೆಯನ್ನು ಮುಂದಿನ ದಿನಗಳಲ್ಲಿ ಮಾತನಾಡಲು ಪ್ರಯತ್ನಿಸುತ್ತೇನೆ ಅಂತಾ ಹೇಳಿದ್ರು.

    ಅದ್ಧೂರಿ ಆಡಿಯೋ ರಿಲೀಸ್ ಬಳಿಕ ಮಾತನಾಡಿದ ಕಿಚ್ಚ ಸುದೀಪ್, ತುಳು ಚಿತ್ರರಂಗ ಹಾಗೂ ತುಳು ಭಾಷೆಯನ್ನು ಹಾಡಿ ಹೊಗಳಿದರು. ತನ್ನ ತಾಯಿಯೂ ತುಳುವರಾಗಿದ್ದು, ನಾನು ಮುಂದಿನ ದಿನದಲ್ಲಿ ತುಳು ಮಾತನಾಡಲು ಪ್ರಯತ್ನಿಸುತ್ತೇನೆ. ಕನ್ನಡ ಚಿತ್ರರಂಗದಿಂದ ತುಳು ಚಿತ್ರದ ಆಡಿಯೋ ರಿಲೀಸ್‍ಗೆ ನಾವೆಲ್ಲ ಬರುವಷ್ಟು ತುಳು ಚಿತ್ರರಂಗ ಬೆಳೆದಿದೆ. ಕರ್ನಾಟಕದಲ್ಲೇ ಇನ್ನೊಂದು ಭಾಷೆಯ ಚಿತ್ರದ ಆಡಿಯೋ ರಿಲೀಸ್ ಮಾಡೋದು ಖುಷಿ ತಂದಿದೆ. ಯಾವ ರಾಜ್ಯದಲ್ಲೂ ಎರಡು ಮೂರು ಭಾಷೆ ಇಲ್ಲ. ಹಾಗೆನೇ ಎರಡು ಭಾಷೆಯ ಚಿತ್ರರಂಗ ಇಲ್ಲ ಅದು ಈ ರಾಜ್ಯದಲ್ಲಿ ಮಾತ್ರ ಇರೋದು. ಕನ್ನಡ ಚಿತ್ರರಂಗಕ್ಕೆ ದುಡ್ಡು ಹಾಕುವ ನಿರ್ಮಾಪಕರು ಮಂಗಳೂರಿನಲ್ಲಿದ್ದರೂ ತಮ್ಮದೇ ಭಾಷೆಯನ್ನು ಉಳಿಸಬೇಕೆಂದು ತುಳು ಚಿತ್ರಗಳನ್ನು ಮಾಡುತ್ತಿರುವ ನಿರ್ಮಾಪಕರುಗೆ ಹ್ಯಾಟ್ಸ್ ಆಫ್ ಎಂದರು.

    ರಾಜೇಶ್ ಬ್ರಹ್ಮಾವರ ನಿರ್ಮಾಣದ ಕಟಪಾಡಿ ಕಟ್ಟಪ್ಪೆ ಚಿತ್ರ ಈಗಾಗಲೇ ಬಹಳಷ್ಟು ನಿರೀಕ್ಷೆ ಮೂಡಿಸಿದ್ದು, ಈ ಚಿತ್ರದ ಆಡಿಯೋ ರಿಲೀಸನ್ನೂ ಕಿಚ್ಚ ಸುದೀಪ್ ರಿಲೀಸ್ ಮಾಡಿರೋದು ಇದೀಗ ಮತ್ತಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.