Tag: Corporate

  • ಲಾಕ್‍ಡೌನ್‍ನಿಂದ ಪೀಣ್ಯ ಕೈಗಾರಿಕೆ ತತ್ತರಿಸಿದೆ- ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಕಳವಳ

    ಲಾಕ್‍ಡೌನ್‍ನಿಂದ ಪೀಣ್ಯ ಕೈಗಾರಿಕೆ ತತ್ತರಿಸಿದೆ- ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಕಳವಳ

    ಪೀಣ್ಯ: ಮಾರಾಣಾಂತಿಕ ಕೋವಿಡ್-19 ಲಾಕ್‍ಡೌನ್‍ನಿಂದ ಪೀಣ್ಯ ಕೈಗಾರಿಕೆ ವಲಯ ಅಕ್ಷರಶಃ ನಲುಗಿದೆ. ಬೆಂಗಳೂರು ಹೊರವಲಯದ ಸಣ್ಣ ಕೈಗಾರಿಕೆಗಳು ಸಂಕಷ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಶ್ರೀನಿವಾಸ ಅಸ್ರಣ್ಣ ಕಳವಳ ವ್ಯಕ್ತಪಡಿಸಿದ್ದಾರೆ.

    ಕೈಗಾರಿಕ ವಲಯದ ಶೇ.70 ರಷ್ಟು ಭಾಗದ ಕೈಗಾರಿಕೆಗಳು ಕಾರ್ಯನಿರ್ವಹಣೆ ಮಾಡುತ್ತಿದ್ದು, ಉಳಿದ ಶೇ.30 ರಷ್ಟು ಕೈಗಾರಿಕೆಗಳು ಕಾರ್ಯ ನಿರ್ವಹಿಸದಿರುವುದು ವಿಷಾದನೀಯ ಸಂಗತಿ. ಸಣ್ಣ ಕೈಗಾರಿಕೆಗಳ ಪರಿಸ್ಥಿತಿ ಗಂಭೀರವಾಗಿದ್ದು, ಮುಚ್ಚುವ ಸ್ಥಿತಿಗೆ ತಲುಪಿವೆ. ಪರಿಣಾಮ ಕಾರ್ಮಿಕರ ನೆರವಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅದಷ್ಟೂ ಬೇಗ ಧಾವಿಸಬೇಕು ಎಂದು ಅಸ್ರಣ್ಣ ಮನವಿ ಮಾಡಿದರು.

     

    ಇದೇ ವೇಳೆ ಕಾರ್ಮಿಕರಿಗೆ ಶೇ.50 ವೇತನ ನೀಡಬೇಕು ಎಂದು ಮನವಿ ಮಾಡಿದ ಅಸ್ರಣ್ಣ, ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಅನುದಾನ ನೀಡುವಂತೆ ಆಗ್ರಹಿಸಿದರು. ಕೈಗಾರಿಗೆಗಳ ಆರು ತಿಂಗಳ ಸಾಲದ ಬಡ್ಡಿಯನ್ನು ಮನ್ನ ಮಾಡಬೇಕು ಎಂದರು. ಇತ್ತ ಕೈಗಾರಿಕೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೆರವಿಗೆ ದಾವಿಸುವಂತೆ ಸಣ್ಣ ಕೈಗಾರಿಕಾ ವಲಯದ ಪದಾಧಿಕಾರಿಗಳು ಒತ್ತಾಯಿಸಿದರು.

    ಏಷ್ಯಾದಲ್ಲೇ ಅತೀದೊಡ್ಡ ಕೈಗಾರಿಕಾ ಪ್ರದೇಶವಾದ ಪೀಣ್ಯ ಕೈಗಾರಿಕಾ ವಲಯ ಹಲವಾರು ಹೆಸರಾಂತ ಕಂಪನಿಗಳು ಇಲ್ಲಿವೆ. ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಶ್ರೀನಿವಾಸ್ ಅಸ್ರಣ್ಣ, ಉಪಾಧ್ಯಕ್ಷರಾದ ಪ್ರಕಾಶ್, ಪ್ರಾಣೇಶ್, ಕಾರ್ಯದಶೀ ವಿಜಯ್ ಕುಮಾರ್, ಜಂಟಿ ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಮಂಜುನಾಥ್, ಜಂಟಿ ಖಜಾಂಚಿ ಮುರುಳಿ ಕೃಷ್ಣ, ನಿಕಟಪೂರ್ವ ಅಧ್ಯಕ್ಷ ಗಿರಿ ಇತರರು ಹಾಜರಿದ್ದರು.

  • ಬೂಟ್‍ನಿಂದ ಹೊಡಿತೀನಿ ಎಂದು ಬಿಜೆಪಿ ಶಾಸಕ ಧಮ್ಕಿ..!

    ಬೂಟ್‍ನಿಂದ ಹೊಡಿತೀನಿ ಎಂದು ಬಿಜೆಪಿ ಶಾಸಕ ಧಮ್ಕಿ..!

    ಕಲಬುರಗಿ: ಆಳಂದ ಶಾಸಕ ಸುಭಾಷ್ ಗುತ್ತೇದಾರ್ ದರ್ಪ ತೋರಿದ ಘಟನೆಯೊಂದು ಬೆಳಕಿಗೆ ಬಂದಿದೆ. ಅವಾಚ್ಯ ಶಬ್ಧಗಳಿಂದ ಪುರಸಭೆ ಮುಖ್ಯಾಧಿಕಾರಿಗೆ ನಿಂದಿಸಿದ್ದಾರೆ.

    ಆಳಂದ ಪುರಸಭೆ ಮುಖ್ಯಾಧಿಕಾರಿ ಚಂದ್ರಕಾಂತ್ ಪಾಟೀಲ್ ಅವರಿಗೆ ಶಾಸಕರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಮಾಜಿ ಶಾಸಕ ಬಿ.ಆರ್ ಪಾಟೀಲ್ ಶಾಸಕರಾಗಿದ್ದಾಗ ಮಂಜೂರಾಗಿದ್ದ ಒಂದೂವರೆ ಕೋಟಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಅನುಮತಿ ನೀಡಿದ್ದಕ್ಕೆ ಶಾಸಕರು ಕೆಂಡಾಮಂಡಲರಾಗಿದ್ದಾರೆ.

    ಇದೇ ವಿಚಾರಕ್ಕೆ ಚಂದ್ರಕಾಂತ್ ಅವರಿಗೆ ಫೋನ್ ಮಾಡಿ ಹಿಗ್ಗಾಮುಗ್ಗಾ ಬೈದಿದ್ದಾರೆ. ನಾಟಕ ನಡಿಸಿರಿ, ಬೋ ಮಗನ… ಕೆಲಸ ಬಂದ್ ಮಾಡಿಸಿರಿ, ಇಲ್ಲ ಅಂದ್ರೆ ನಾನು ಬರ್ತೇನೆ ಎಂದು ಅವಾಜ್ ಹಾಕಿದ್ದಾರೆ.


    ಇಬ್ಬರ ಸಂಭಾಷಣೆ ಇಂತಿದೆ:
    ಎಂಎಲ್‍ಎ-ಏನಾಯಿತು
    ಅಧಿಕಾರಿ-ಸರ್…ಸರ್…ಕೆಲಸ ಬಂದ್ ಮಾಡೋಕೆ ಹೇಳುತ್ತೇನೆ
    ಎಂಎಲ್‍ಎ-ಅವನು ಮಾಡುಕೆ ಹೇಗೆ ಕೊಟ್ಟ
    ಅಧಿಕಾರಿ-ಶಾಂತಪ್ಪ ಅವರೂ ಫಸ್ಟ್ ಮಾಡರಿ ಅಮೇಲೆ ಪೊಜೆ ಮಾಡುನಾ ಅಂದರು
    ಎಂಎಲ್‍ಎ-ಬೋ..ಮಗನಾ….ಏ ರಂಡಿ ಮಗನಾ…ಅವರ ಮೇಲೆ ಯಾಕ ಹೇಳತ್ತಿ. ನೀ…ಹೇಳಿದಿ ಅಂತಾ ನಿನ್ನ ಹೆಸರು ಹೇಳುತ್ತಿದ್ದಾನೆ
    ಅಧಿಕಾರಿ- ಸರ್….ಹಂಗಲ್ಲ….ಸರ್

    ಎಂಎಲ್‍ಎ-ಬೋ. ಮಗನಾ ಬೋಟ್‍ನಿಂದ ಹೊಡೆತ್ತೀನಿ ನಿನಗ…
    ಅಧಿಕಾರಿ-ಇಲ್ಲ…ಸರ್
    ಎಂಎಲ್‍ಎ-ರಾಜಕೀಯಮಾಡಿ ನಾಟಕ ಮಾಡಕಹತ್ತರಿ
    ಅಧಿಕಾರಿ-ಇಲ್ಲ ಸರ್ ಶಾಂತಪ್ಪನೆ ಹೇಳಿದ್ದು…
    ಎಂಎಲ್‍ಎ-ಬೋ.. ಮಗನಾ ಮೊದಲು ಕೆಲಸ ಬಂದ ಮಾಡಿಸು
    ಅಧಿಕಾರಿ- ಸರ್….ನಿಮ್ಮ ಎದುರಿಗೆ ನಾ ಹೇಳಿಸಿತ್ತೀನಿ ಸರ್
    ಎಂಎಲ್‍ಎ-ಬೋ..ಮಗನಾ…ಮೊದಲು ಕೆಲಸ ಬಂದ್ ಮಾಡಿಸಿತ್ತರೆ ಸರಿ…ಇಲ್ಲ ನಾನೇ ಬರತ್ತೀನಿ…

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಷ್ಟ್ರಗೀತೆ ಹಾಡುವಾಗ ನಿದ್ರೆಗೆ ಜಾರಿದ ಮಹಿಳಾ ಕಾರ್ಪೊರೇಟರ್

    ರಾಷ್ಟ್ರಗೀತೆ ಹಾಡುವಾಗ ನಿದ್ರೆಗೆ ಜಾರಿದ ಮಹಿಳಾ ಕಾರ್ಪೊರೇಟರ್

    ವಿಜಯಪುರ: ಮಹಾನಗರ ಪಾಲಿಕೆ ಸದಸ್ಯೆಯೊಬ್ಬರು ರಾಷ್ಟ್ರಗೀತೆ ಹಾಡುವಾಗ ನಿದ್ರೆಗೆ ಜಾರಿ ಅಗೌರವ ತೋರಿದ ಘಟನೆ ವಿಜಯಪುರಲ್ಲಿ ನಡೆದಿದೆ.

    ಆರು ತಿಂಗಳ ನಂತರ ಇಂದು ವಿಜಯಪುರ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ನಡೆಯಿತು. ಸಭೆಯ ಪ್ರಾರಂಭದ ಮೊದಲು ರಾಷ್ಟ್ರಗೀತೆ ಹಾಡಲಾಯಿತು. ಆಗ ವಾರ್ಡ್ ಸಂಖ್ಯೆ 25 ರ ಮಹಿಳಾ ಕಾರ್ಪೊರೇಟರ್ ಹೈರೋನಿಸಾ ಅವರು ಎದ್ದು ನಿಂತಿದ್ದರೂ, ನಿದ್ರೆಗೆ ಜಾರಿದ್ದರು.

    ಕಾರ್ಪೊರೇಟರ್ ಹೈರೋನಿಸಾ ಅವರ ಈ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ರಾಷ್ಟ್ರಗೀತೆಗೆ ಅಗೌರವ ತೋರಿದ ಪಾಲಿಕೆ ಮಹಿಳಾ ಕಾರ್ಪೊರೇಟರ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.