Tag: Core Green Sugar factory

  • ಸಕ್ಕರೆ ಕಾರ್ಖಾನೆಯ ವಿಷಪೂರಿತ ನೀರು ಕೃಷ್ಣಾ ನದಿ ಹೀನ್ನಿರಿಗೆ- ಲಕ್ಷಾಂತರ ಮೀನುಗಳು ಸಾವು

    ಸಕ್ಕರೆ ಕಾರ್ಖಾನೆಯ ವಿಷಪೂರಿತ ನೀರು ಕೃಷ್ಣಾ ನದಿ ಹೀನ್ನಿರಿಗೆ- ಲಕ್ಷಾಂತರ ಮೀನುಗಳು ಸಾವು

    ಯಾದಗಿರಿ: ಜಿಲ್ಲೆಯ ವಡಗೇರ ತಾಲೂಕಿನ ತುಮಕೂರು ಗ್ರಾಮದ ಸಮೀಪದ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಯಿಂದ ವಿಷಪೂರಿತ ನೀರನ್ನು ಕೃಷ್ಣಾ ನದಿ ಹೀನ್ನಿರಿಗೆ ಹರಿಬಿಟ್ಟ ಹಿನ್ನಲೆ ನದಿ ದಡದಲ್ಲಿ ಲಕ್ಷಾಂತರ ಮೀನುಗಳು ಸತ್ತುಬಿದ್ದಿವೆ.

    ಸದ್ಯ ಫ್ಯಾಕ್ಟರಿ ಸ್ವಚ್ಛಗೊಳಿಸುತ್ತಿದ್ದು, ಸಕ್ಕರೆ ತಯಾರಿಸಲು ಬಳಸುವ ವಿವಿಧ ರಾಸಾಯನಿಕ ವಸ್ತುಗಳನ್ನು ನದಿಯ ನೀರಿಗೆ ಹರಿಬಿಡಲಾಗುತ್ತಿದೆ. ಇದರಿಂದಾಗಿ ನದಿಯ ನೀರು ಕಲುಷಿತಗೊಂಡು ಈ ಮೀನುಗಳು ಸತ್ತಿರಬಹುದೆಂದು ಊಹಿಸಲಾಗಿದೆ.

    ಯಾದಗಿರಿ ಜಿಲ್ಲೆಯಲ್ಲಿರುವ ಏಕೈಕ ಶುಗರ್ ಫ್ಯಾಕ್ಟರಿ ಇದಾಗಿದ್ದು, ಕಾರ್ಖಾನೆಯ ಆಡಳಿತ ಮಂಡಳಿಯಿ ನಿರ್ಲಕ್ಷ್ಯದಿಂದ ಪಕ್ಕದ ಗ್ರಾಮಗಳ ಪರಿಸರ ಹದಗೆಟ್ಟು, ಸುತ್ತಲಿನ ಗ್ರಾಮಸ್ಥರು ನಾನಾ ಸಂಕಷ್ಟ ಎದುರಿಸುವಂತಾಗಿದೆ. ಫ್ಯಾಕ್ಟರಿಯವರು ಪದೇ ಪದೇ ಈ ರೀತಿಯ ನಿರ್ಲಕ್ಷ್ಯ ವಹಿಸುತ್ತಿದ್ದರೂ ಅಧಿಕಾರಿಗಳು ಮಾತ್ರ ಕಣ್ಣುಮಚ್ಚಿ ಕುಳಿತ್ತಿದ್ದಾರೆ.

  • ಕೋರ್ ಗ್ರೀನ್ ಶುಗರ್ ಫ್ಯಾಕ್ಟರಿ ಸೀಜ್- ಮಾಲೀಕರಿಂದ ರೈತರಿಗೆ ವಂಚನೆ

    ಕೋರ್ ಗ್ರೀನ್ ಶುಗರ್ ಫ್ಯಾಕ್ಟರಿ ಸೀಜ್- ಮಾಲೀಕರಿಂದ ರೈತರಿಗೆ ವಂಚನೆ

    ಯಾದಗಿರಿ: ಕಬ್ಬಿನ ಬಾಕಿ ಉಳಿಸಿಕೊಂಡ ಹಿನ್ನೆಲೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕೋರ್ ಗ್ರೀನ್ ಶುಗರ್ ಫ್ಯಾಕ್ಟರಿಯನ್ನು ಸೀಜ್ ಮಾಡಲಾಗಿದೆ. ತಹಶಿಲ್ದಾರರ ಸುರೇಶ್ ಮತ್ತು ಸಿಬ್ಬಂದಿ ಕಾರ್ಖಾನೆಯ ಮುಖ್ಯ ಗೇಟ್‍ಗೆ ಬೀಗ ಹಾಕಿ, ಫ್ಯಾಕ್ಟರಿಯನ್ನು ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿದೆ.

    ಕೋರ್ ಗ್ರೀನ್ ಯಾದಗಿರಿ ಜಿಲ್ಲೆಯಲ್ಲಿರುವ ಏಕೈಕ ಸಕ್ಕರೆ ಕಾರ್ಖಾನೆಯಾಗಿದೆ. ಯಾದಗಿರಿ, ವಡಗೇರಾ, ಹುಣಸಗಿ, ಕಲಬುರಗಿ ಜಿಲ್ಲೆಯ ಚಿತ್ತಾಪುರ, ಯಡ್ರಾಮಿ, ಜೇವರ್ಗಿ ತಾಲೂಕಿನ ನೂರಾರು ರೈತರು ಈ ಕೇಳದ ಬಾರಿ ತಾವು ಬೆಳದ ಕಬ್ಬನ್ನು ಫ್ಯಾಕ್ಟರಿಗೆ ನೀಡಿದ್ದರು. ಆದರೆ ಫ್ಯಾಕ್ಟರಿ ಮಾಲೀಕರು ಸರಿಯಾದ ಸಮಯಕ್ಕೆ ಕಬ್ಬಿನ ಹಣ ರೈತರಿಗೆ ನೀಡಿಲ್ಲ. ಸುಮಾರು 30 ಕೋಟಿ ಹಣವನ್ನು ರೈತರಿಗೆ ನೀಡಬೇಕಾಗಿದೆ. ರೈತರಿಂದ ನೂರಾರು ಕೋಟಿ ಮೌಲ್ಯದ ಕಬ್ಬು ಖರೀದಿ ಮಾಡಿರುವ ಫ್ಯಾಕ್ಟರಿ ಮಾಲೀಕ ಸೀಜನ್ ಮುಗಿದ ಬಳಿಕ ಪರಾರಿಯಾಗಿದ್ದಾರೆ.  ಇದನ್ನೂ ಓದಿ: ದೂದ್ ಗಂಗಾ ಯೋಜನೆ -ಬಿಎಸ್‍ವೈ ಮಹತ್ವದ ಚರ್ಚೆ

    ಇದರಿಂದಾಗಿ ಕಬ್ಬು ಮಾರಿದ ರೈತರು ವಡಗೇರಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿ, ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ಪರಿಣಾಮ ಡಿಸಿ ರಾಗಪ್ರಿಯ , ಫ್ಯಾಕ್ಟರಿ ಸೀಜ್ ಮಾಡುವಂತೆ ತಹಶಿಲ್ದಾರರಿಗೆ ಆದೇಶ ಮಾಡಿದ್ದರು.