Tag: cops

  • ಮಂಡ್ಯದಲ್ಲಿ ಹೆರಾಯಿನ್, ಅಫೀಮು ದಂಧೆ – ಆರೋಪಿಗಳು ಅರೆಸ್ಟ್

    ಮಂಡ್ಯದಲ್ಲಿ ಹೆರಾಯಿನ್, ಅಫೀಮು ದಂಧೆ – ಆರೋಪಿಗಳು ಅರೆಸ್ಟ್

    ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ವಿದ್ಯಾರ್ಥಿಗಳನ್ನು ಡಾರ್ಗೆಟ್ ಮಾಡಿಕೊಂಡು ಹೆರಾಯಿನ್, ಅಫೀಮುಗಳನ್ನು ಮಾರಾಟ ಮಾಡುತ್ತಿದ್ದ ಬೆಂಗಳೂರು ಮೂಲದ ಇಬ್ಬರು ಮಾದಕವಸ್ತುಗಳ ದಂಧೆಕೋರರನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ.

    ಬೆಂಗಳೂರಿನಲ್ಲಿ ಡ್ರಗ್ಸ್ ಪ್ರಕರಣ ಹೆಚ್ಚಾಗಿದ್ದು, ಬೆಂಗಳೂರು ಪೊಲೀಸರು ಫುಲ್ ಅಲರ್ಟ್ ಆಗಿರುವ ಹಿನ್ನೆಲೆ ಪಕ್ಕದ ಮಂಡ್ಯ ಜಿಲ್ಲೆಯತ್ತ ಮಾದಕವಸ್ತುಗಳ ದಂಧೆಕೋರರು ಮುಖ ಮಾಡಿದ್ದಾರೆ. ಇಲ್ಲಿ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಹೆರಾಯಿನ್, ಅಫೀಮುಗಳನ್ನು ಮಾರಾಟ ಮಾಡುತ್ತಿದ್ದು, ಇದರಿಂದ ಮಂಡ್ಯದ ಯುವ ಪೀಳಿಗೆ ಮಾದಕವಸ್ತುಗಳ ವ್ಯಸನಿಗಳಾಗುತ್ತಿದ್ದರು. ಈ ಬಗ್ಗೆ ಸಾರ್ವಜನಿಕರಿಂದ ಎಸ್‍ಪಿ ಕಚೇರಿಗೆ ಹಾಗೂ ಪೊಲೀಸ್ ಠಾಣೆಗಳಿಗೆ ಪದೇ ಪದೇ ದೂರುಗಳು ಬರುತ್ತಿದ್ದವು. ಇದನ್ನೂ ಓದಿ: ಭಾರೀ ಮಳೆಯಿಂದಾಗಿ ಇಂದು ಅಯ್ಯಪ್ಪನ ದರ್ಶನವಿಲ್ಲ

    ಈ ಹಿನ್ನೆಲೆ ಮಂಡ್ಯ ಪೊಲೀಸರು ಹೆರಾಯಿನ್, ಅಫೀಮು ಮಾರಾಟ ಮಾಡುವವರನ್ನು ಬಂಧಿಸಲು ಬಲೆ ಬೀಸಿದ್ದರು. ಇತ್ತೀಚೆಗೆ ಮಂಡ್ಯದ ಚರ್ಚ್ ರಸ್ತೆ ಬಳಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಇದನ್ನು ಕಂಡ ಪೊಲೀಸರು ಆ ಇಬ್ಬರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ದಾರೆ. ವಿಚಾರಣೆ ವೇಳೆ ಈ ಇಬ್ಬರು ಹೆರಾಯಿನ್ ಹಾಗೂ ಅಫೀಮು ಪೆಡ್ಲರ್‌ಗಳು ಎಂದು ತಿಳಿದಿದೆ.

    ಇನ್ನೂ ತೀವ್ರತರವಾದ ವಿಚಾರಣೆ ಮಾಡಿದಾಗ, ನಾವು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ಹೆರಾಯಿನ್ ಹಾಗೂ ಅಫೀಮು ಅನ್ನು ಮಾರಾಟ ಮಾಡುತ್ತಿದ್ದೇವೆ ಎಂದು ಬಾಯಿ ಬಿಟ್ಟಿದ್ದಾರೆ. ಈ ಬಂಧಿತರಿಂದ 6 ಲಕ್ಷ ಮೌಲ್ಯದ ಹೆರಾಯಿನ್, 75 ಸಾವಿರ ಮೌಲ್ಯದ ಅಫೀಮುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಜಿಲ್ಲೆಯಲ್ಲಿ ಈ ಮಾದಕವಸ್ತುಗಳ ಮಾರಾಟಗಾರರು ಇನ್ನೂ ಇರಬಹುದಾದ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದು, ಅವರ ಸೆರೆಗೂ ಸಹ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಗೆಲ್ಲುವವರೆಗೂ ರಾಜ್ಯ ವಿಧಾನಸಭೆಗೆ ಕಾಲಿಡಲ್ಲ: ಎನ್.ಚಂದ್ರಬಾಬು ನಾಯ್ಡು ಪ್ರತಿಜ್ಞೆ

  • ದೇವರಿಗೆ ಪೂಜೆ ಮಾಡಿ ಕಾಣಿಕೆ ಹುಂಡಿ ಎಗರಿಸಿದ ಖದೀಮರು

    ದೇವರಿಗೆ ಪೂಜೆ ಮಾಡಿ ಕಾಣಿಕೆ ಹುಂಡಿ ಎಗರಿಸಿದ ಖದೀಮರು

    ನೆಲಮಂಗಲ: ದೇವರೇ ಒಳ್ಳೆಯದು ಮಾಡಪ್ಪ ಎಂದು ದೇವರಿಗೆ ಕೈ ಮುಗಿದು ಬೇಡಿಕೊಳ್ಳುವ ಭಕ್ತರನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಕಳ್ಳರ ಕೂಟ ವಿನೂತನವಾಗಿ ದೇವರಲ್ಲಿ ನಾನೊಬ್ಬ ಕಳ್ಳ ಕಾಪಾಡು ಮಾರಮ್ಮ ಎಂದು ಪೂಜೆ ನೆರವೇರಿಸಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯ ಮಾರಮ್ಮ ದೇವಾಲಯದಲ್ಲಿ ಈ ಘಟನೆ ನಡೆದಿದೆ. ಕಳ್ಳತನಕ್ಕೆ ಬಂದ ಇಬ್ಬರು ಕಳ್ಳರು ದೇವಾಲಯದ ಹುಂಡಿ ಕದಿಯುವ ಮೊದಲು ಓರ್ವ ತಪ್ಪಾಯಿತು ಎಂದು ಪ್ರಾರ್ಥನೆ ಸಲ್ಲಿಸಿ, ದೇವಾಲಯದಲ್ಲಿ ಇದ್ದ ಕಾಣಿಕೆ ಹುಂಡಿಯನ್ನು ನಂತರ ಪ್ಲಾಸ್ಟಿಕ್ ಚೀಲ ಹೊದಿಸಿ ಕದ್ದು ಬೈಕ್ ನಲ್ಲಿ ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ವ್ಯಕ್ತಿ ಹೊಟ್ಟೆಯಲ್ಲಿ 1ಕೆ.ಜಿ ಮೊಳೆ, ಬೋಲ್ಟ್, ಸ್ಕ್ರೂ ನೋಡಿ ವೈದ್ಯರು ಶಾಕ್

    Thieves

    ಸದ್ಯ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರಯಾಗಿದ್ದು, ದಾಬಸ್ ಪೇಟೆ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಕೋರ್ಟ್ ಆದೇಶಕ್ಕೆ ತಲೆ ಬಾಗಿ ಬಂದಿದ್ದೇನೆ – ಸುಳ್ಯ ನ್ಯಾಯಾಲಯಕ್ಕೆ ಇಂದು ಡಿಕೆಶಿ ಹಾಜರು

  • ಮಹಿಳೆ ಮೇಲೆ ಆಟೋ ಚಾಲಕ ಸೇರಿದಂತೆ ಮೂವರಿಂದ ಸಾಮೂಹಿಕ ಅತ್ಯಾಚಾರ

    ಮಹಿಳೆ ಮೇಲೆ ಆಟೋ ಚಾಲಕ ಸೇರಿದಂತೆ ಮೂವರಿಂದ ಸಾಮೂಹಿಕ ಅತ್ಯಾಚಾರ

    ನವದೆಹಲಿ: ಮಧ್ಯ ದೆಹಲಿಯ ಐಟಿಒ ಪ್ರದೇಶದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಡಿ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

     27 ವರ್ಷದ ಮಹಿಳೆ, ಶನಿವಾರ ಬೆಳಗ್ಗೆ ಈಶಾನ್ಯ ದೆಹಲಿಯ ಖಜೂರಿ ಖಾಸ್ ಪ್ರದೇಶದಿಂದ ಕಾಶ್ಮೀರ ಗೇಟ್‍ಗೆ ಆಟೋ ಹತ್ತಿದ ನಂತರ ಚಾಲಕ ಸೇರಿದಂತೆ ಮೂವರು ಐಒಟಿ ಬಳಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಧೈರ್ಯಕ್ಕೆ ಅವರು ಹೆದರುತ್ತಾರೆ – ಪ್ರಿಯಾಂಕಾಗೆ ಧೈರ್ಯ ತುಂಬಿದ ಸಹೋದರ ರಾಹುಲ್

    ಈ ಕುರಿತಂತೆ ಪೊಲೀಸರು, ಮಹಿಳೆ ಉತ್ತರ ಪ್ರದೇಶದ ಸಂಭಾಲ್ ಮೂಲದವರಾಗಿದ್ದು, ಕೆಲವು ಕೆಲಸಕ್ಕಾಗಿ ದೆಹಲಿಗೆ ಬಂದಿದ್ದರು. ಆದರೆ ಆರೋಪಿಗಳು ಮಹಿಳೆಯನ್ನು ಐಟಿಒ-ಯಮುನಾ ಸೇತುವೆ ಬಳಿ ರೂಮ್‍ಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ನಂತರ ಕಾಶ್ಮೀರ ಗೇಟ್ ಬಳಿ ಬಿಟ್ಟು ಹೋಗಿದ್ದಾರೆ ಅಂತ ಮಹಿಳೆ ಆರೋಪಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ವೀಡಿಯೋ- ಕೈ ನಾಯಕಿ ಪ್ರಿಯಾಂಕಾ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು

    ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ಆಟೋ ಚಾಲಕ ತನ್ನ ಒಬ್ಬ ಸ್ನೇಹಿತನಿಗೆ ಮಾತ್ರ ಕರೆ ಮಾಡಿರುವುದಾಗಿ ತಿಳಿಸಿದ್ದಾನೆ. ಆದರೆ ಮಹಿಳೆ ಇನ್ನೂ ಇಬ್ಬರು ವ್ಯಕ್ತಿಗಳಿದ್ದರು ಎಂದು ಆರೋಪಿಸಿದ್ದಾರೆ. ಇದೀಗ ಮಹಿಳೆ ನೀಡಿರುವ ದೂರಿನ ಅನ್ವಯ ಐಪಿ ಎಸ್ಟೇಟ್ ಠಾಣೆಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದ್ದು, ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ಕುಡಿದ ಮತ್ತಿನಲ್ಲಿ ಮಚ್ಚಾ ಎಂದಿದ್ದಕ್ಕೆ ಜೋಡಿ ಕೊಲೆ – ಆರೋಪಿಗಳ ಬಂಧನ

    ಕುಡಿದ ಮತ್ತಿನಲ್ಲಿ ಮಚ್ಚಾ ಎಂದಿದ್ದಕ್ಕೆ ಜೋಡಿ ಕೊಲೆ – ಆರೋಪಿಗಳ ಬಂಧನ

    ಆನೇಕಲ್: ಇಡೀ ಆನೇಕಲ್ ಭಾಗವನ್ನೇ ಬೆಚ್ಚಿ ಬೀಳಿಸಿದ್ದ ನಿಗೂಢ ಜೋಡಿ ಕೊಲೆಯನ್ನು ಇದೀಗ ಹೆಬ್ಬಗೋಡಿ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮದ್ಯ ಸೇವಿಸಿದ ಮತ್ತಿನಲ್ಲಿ ಮಚ್ಚಾ ಎಂದಿದ್ದೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.

    ಕಳೆದ ನಾಲ್ಕೈದು ದಿನಗಳ ಹಿಂದೆ ಸಿಂಗೇನ ಅಗ್ರಹಾರದ ನೀಲಗಿರಿ ತೋಪಿನ ಸಂಪಿಗೆ ನಗರದ ನಿವಾಸಿ ರವಿಕುಮಾರ್ ಹಾಗೂ ಕೋಲ್ಕತ್ತಾ ಮೂಲದ ಚಂದನ್ ದಾಸ್ ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಈ ಘಟನೆ ತಾಲೂಕಿನಾದ್ಯಂತ ಸಂಚಲನ ಮೂಡಿಸಿತ್ತು. ಹೆಬ್ಬಗೋಡಿ ಸಿಐ ಗೌತಂ ತಂಡ ಕೊಲೆಗೂ ಮುನ್ನ ನಡೆದ ಘಟನಾವಳಿಗಳ ಹಿಂದೆ ಬಿದ್ದಿದ್ದಾರೆ. ಈ ಹಿನ್ನೆಲೆ ಶವಗಳ ನಡುವೆ ಇದ್ದ ಮದ್ಯದ ಬಾಟಲಿಗಳನ್ನು ಎಲ್ಲಿಂದ ತಂದಿದ್ದಾರೆ ಎಂದು ಹುಡುಕುತ್ತಾ ಹೋಗಿದ್ದಾರೆ. ಆಗ ಬಾರ್ ಕಂಡುಹಿಡಿದಿದ್ದು, ಆ ಮೂಲಕ ಸಿಸಿಟಿವಿಯನ್ನು ನೋಡಿ ಕೊಲೆಗಾರರ ಸುಳಿವನ್ನು ಪತ್ತೆ ಮಾಡಿದ್ದಾರೆ. ಇದನ್ನೂ ಓದಿ: ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿಯ ಕೊಲೆ ಯತ್ನ ಪ್ರಕರಣ – ಪ್ರಮುಖ ಆರೋಪಿಯ ಬಂಧನ

    ನಡೆದಿದ್ದೇನು?
    ರವಿಕುಮಾರ್, ಚಂದನ್ ದಾಸ್ ಮತ್ತು ದಾರುಲ್ ಆಲಂ ಕುಡಿಯಲು ಆರಂಭಿಸಿದ್ದಾರೆ. ಈ ವೇಳೆ ಇನ್ನೂ ಎಣ್ಣೆ ಬೇಕು ಎಂದು ಅಬ್ಸುಲ್ ಕರೀಂ ಅವರನ್ನು ಮದ್ಯ ತರಲು ರವಿ ಬೈಕ್‍ನಲ್ಲಿ ಕಳುಹಿಸಿದ್ದಾರೆ. ಬಾರ್ ನಿಂದ ಎಣ್ಣೆ ತಂದ ಕರೀಂ, ರವಿಕುಮಾರ್ ಗೆ ‘ತಗೋ ಮಚ್ಚಾ’ ಎಂದಿದ್ದೇ ತಡ ಕರೀಂ ಮೇಲೆ ಹಿಗ್ಗಾಮುಗ್ಗ ರವಿಕುಮಾರ್ ಮುಗಿಬಿದ್ದು ಹೊಡೆದಿದ್ದಾರೆ. ಇರುವ ನಾಲ್ವರಲ್ಲಿ ದಾಸ್ ರವಿಗೆ ಸಾಥ್ ನೀಡಿದ್ರೆ, ಆಲಂ ಕರೀಂಗೆ ಸಾಥ್ ನೀಡಿ ರವಿ ಮತ್ತು ದಾಸ್ ನನ್ನು ಮುಗಿಸಿ ಕರೀಂ ಮತ್ತು ಆಲಂ ಪರಾರಿಯಾಗಿದ್ದಾರೆ. ಇದನ್ನೂ ಓದಿ:  ಬೆಂಗಳೂರಿನಲ್ಲಿ ಕೋಳಿ ಪಂದ್ಯ ಪ್ರಕರಣ – ಜೂಜಾಟಕ್ಕೆ ಬ್ರೇಕ್ ಹಾಕಲು ಪೊಲೀಸರ ಹಿಂದೇಟು

    ಈ ಹಿನ್ನೆಲೆ ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಬಂದಿದ್ದು, ಐಜಿಪಿ ಚಂದ್ರಶೇಖರ್, ಎಸ್ಪಿ ವಂಶಿಕೃಷ್ಣ, ಎಎಸ್ಪಿ ಲಕ್ಣ್ಮಿ ಗಣೇಶ್, ಡಿವೈಎಸ್ಪಿ ಮಲ್ಲೇಶ್ ಆದಿಯಾಗಿ ಎಲ್ಲ ಆನೇಕಲ್ ಉಪವಿಭಾಗದ ಇನ್ಸ್‍ಪೆಕ್ಟರ್ ಗಳ ದಂಡು ಈ ಕೊಲೆ ಪ್ರಕರಣ ಭೇದಿಸಲು ಇಳಿದಿತ್ತು. ಇದನ್ನೂ ಓದಿ: ಕರಿಯಮ್ಮದೇವಿಯ ದೇವಸ್ಥಾನದಲ್ಲಿ ಕಾಣಿಕೆ ಡಬ್ಬಿ ಹೊತ್ತೊಯ್ದ ಖದೀಮರು

    ಅಸ್ಸಾಂನ ಅಬ್ಸುಲ್ ಕರೀಂ(22) ಮತ್ತು ದಾರುಲ್ ಆಲಂ(23) ಕೊಲೆ ಮಾಡಿ ವಿಮಾನದ ಮೂಲಕ ಅಸ್ಸಾಂ ತೆರಳುವ ಸಿದ್ಧತೆಯಲ್ಲಿದ್ದರು. ಇದನ್ನು ತಿಳಿದ ಪೊಲೀಸರು ಅವರು ವಿಮಾನ ಹತ್ತುವ ಮುನ್ನವೇ ಬಂಧಿಸಿದ್ದಾರೆ.

  • ಉತ್ತರ ಕನ್ನಡದಲ್ಲಿ 24.80 ಲಕ್ಷ ಮೌಲ್ಯದ ಮಾದಕ ವಸ್ತು ನಾಶ

    ಉತ್ತರ ಕನ್ನಡದಲ್ಲಿ 24.80 ಲಕ್ಷ ಮೌಲ್ಯದ ಮಾದಕ ವಸ್ತು ನಾಶ

    ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯಲ್ಲಿ ವಿವಿಧ ತಾಲೂಕಿನಲ್ಲಿ 79 ಪ್ರಕರಣದಲ್ಲಿ ವಶಪಡಿಸಿಕೊಂಡ ಮಾದಕ ದ್ರವ್ಯಗಳನ್ನು ಇಂದು ನಾಶಪಡಿಸಲಾಯಿತು.

    ಅಂಕೊಲ ತಾಲೂಕಿನ ಬೊಗ್ರಿಬೈಲಿನ ಕೆನರಾ ಐಎಮ್‍ಎ ಕಾನ್‍ಟ್ರಿಟ್‍ಮೆಂಟ್ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಶಿವಪ್ರಕಾಶ್ ನೇತ್ರತ್ವದಲ್ಲಿ 69 ಪ್ರಕರಣದ 19,04,600 ರೂ. ಮೌಲ್ಯದ 88 ಕೆ.ಜಿ ತೂಕದ ಗಾಂಜಾ, 25500 ರೂ.ನ 504 ಗ್ರಾಂ.ತೂಕದ ಚರಾಸ್, 3,21,000 ರೂ. ಮೌಲ್ಯದ 431 ಗಾಂಜಾ ಸಸಿ ಸೇರಿ ಒಟ್ಟು 24,80,600 ರೂ. ಬೆಲೆಯ ಮಾದಕ ದ್ರವ್ಯ ನಾಶಪಡಿಸಲಾಯಿತು.

    ಹಾವೇರಿಯಲ್ಲಿ 200 ಕೆ.ಜಿ. ಗಾಂಜಾ ನಾಶ
    ಹಾವೇರಿ ಜಿಲ್ಲೆಯಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 200 ಕೆ.ಜಿ.ಯಷ್ಟು ಮಾದಕ ವಸ್ತುಗಳನ್ನು ಇಂದು ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ನಾಶ ಮಾಡಲಾಯಿತು.

    ಜಿಲ್ಲೆಯಲ್ಲಿ 20 ಪ್ರಕರಣಗಳಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಮೌಲ್ಯದ 200 ಕೆ.ಜಿ.ಯಷ್ಟು ಗಾಂಜಾವನ್ನು ವಶಪಡಿಸಿಕೊಳ್ಳಲಾಯಿತ್ತು. ಮಾದಕ ವಸ್ತುಗಳ ವಿಲೇವಾರಿ ಸಮಿತಿ ಸಮ್ಮುಖದಲ್ಲಿ ಹುಬ್ಬಳ್ಳಿಯ ಕೈಗಾರಿಕಾ ಕೇಂದ್ರದಲ್ಲಿ ಇಂದು ನಾಶಪಡಿಸಲಾಯಿತು. ಹಾವೇರಿ ಎಸ್‍ಪಿ ಹನುಮಂತರಾಯ ನೇತ್ರತ್ವದಲ್ಲಿ ಮಾದಕ ವಸ್ತುಗಳ ವಿಲೇವಾರಿ ಸಮಿತಿಯ ಸಮ್ಮುಖದಲ್ಲಿ ಪರಿಶೀಲನೆ ನಡೆಸಿ ವಸ್ತುಗಳನ್ನ ನಾಶಪಡಿಸಲಾಯಿತು.

    ಚಿಕ್ಕಬಳ್ಳಾಪುರದಲ್ಲಿ ಕೋಟ್ಯಂತರ ರೂ. ಗಾಂಜಾ ನಾಶ
    ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಗಾಂಜಾವನ್ನು ಇಂದು ಪೊಲೀಸರು ನಾಶಪಡಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2008 ರಿಂದ 2020 ರವರೆಗೂ 42 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 2,36,80,000 ಮೌಲ್ಯದ ಸರಿಸುಮಾರು 592 ಕೆ.ಜಿ ಗಾಂಜಾ ಗಿಡಗಳನ್ನು ಪೊಲೀಸರು ನಾಶಪಡಿಸಿದ್ದಾರೆ. ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ನೇತೃತ್ವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್‍ಪೇಟೆ ಬಳಿಯ ಕೈಗಾರಿಕಾ ಪ್ರದೇಶದ ರಾಮ್ಕೋ ಎನ್ವರೋ ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಈ ಎಲ್ಲ ಗಾಂಜಾವನ್ನು ಸುಡಲಾಗಿದೆ. ಚಿಕ್ಕಬಳ್ಳಾಪುರ ಮಾತ್ರ ಅಲ್ಲದೆ ಕೇಂದ್ರವಲಯ ವ್ಯಾಪ್ತಿಯ ವಿವಿಧ ಜಿಲ್ಲೆಗಳ ಹಾಗೂ ಬೆಂಗಳೂರು ನಗರದಲ್ಲಿ ವಶಪಡಿಸಿಕೊಂಡಿರುವ ಸುಮಾರು 8,000 ಕೆ.ಜಿ.ಯಷ್ಟು ಗಾಂಜಾವನ್ನು ಸಹ ಸುಡಲಾಗಿದೆ. ಕಳೆದ 10-12 ವರ್ಷಗಳಿಂದ ಜಪ್ತಿ ಮಾಡಲಾಗಿದ್ದ ಗಾಂಜಾ ಇದಾಗಿದ್ದು, ಮೆಡಿಕಲ್ ವೇಸ್ಟ್ ಸುಟ್ಟು ಹಾಕುವ ಕೈಗಾರಿಕೆಯಲ್ಲಿ ಈ ಗಾಂಜಾವನ್ನು ಸುಟ್ಟು ಬೂದಿ ಮಾಡಲಾಗಿದೆ.

  • ಬೇಟೆಯಾಡಲು ಹೋದವನೇ ಬೇಟೆಯಾದ ?

    ಬೇಟೆಯಾಡಲು ಹೋದವನೇ ಬೇಟೆಯಾದ ?

    ಕೋಲಾರ: ಮಾವಿನ ತೋಟದಲ್ಲಿ ರಾತ್ರಿ ಕಾವಲಿಗೆ ಕೋವಿ ಇಟ್ಟುಕೊಂಡು ಕಾವಲಿದ್ದವನು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಲ್ದೂರು ಗ್ರಾಮದ ಬಳಿ ಮಾವಿನ ತೋಟದಲ್ಲಿ ನಡೆದಿದೆ.

    ಕಾವಲು ಗಾರ ಕೊಲೆಯಾದನೆ ಅಥವಾ ಬೇಟೆಯಾಡಲು ಹೋಗಿ ತಾನೇ ಬೇಟೆಯಾದನೆ ಎಂಬ ಹಲವು ಪ್ರಶ್ನೆಗಳು ಎದ್ದಿವೆ. ತಲೆಗೆ ಬಂದೂಕಿನಿಂದ ಹೊಡೆದ ಪರಿಣಾಮ ಸತ್ತು ಬಿದ್ದಿದ್ದಾನೆ. ಶಂಕರ (45) ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಸೀಗೆಹಳ್ಳಿ ಗ್ರಾಮದ ರವಿ ಅವರ ಮಾವಿನ ತೋಟದಲ್ಲಿ ರಾತ್ರಿ ಕಾವಲು ಕಾಯುವ ಕೆಲಸ ಮಾಡುತಿದ್ದ. ಆದರೆ ನಿನ್ನೆ ಮುಂಜಾನೆ ಆರು ಗಂಟೆಗೆ ಶವವಾಗಿ ಪತ್ತೆಯಾಗಿದ್ದಾನೆ.

    ತನ್ನದೇ ಕೈಯಲ್ಲಿದ್ದ ಕೋವಿಯಿಂದ ತಲೆಗೆ ಸರಿಯಾಗಿ ಗುಂಡೇಟು ಬಿದ್ದಿದ್ದು ಮೆದುಳು ಕೂಡ ಹೊರಬಿದ್ದು, ಭೀಕರವಾಗಿ ಮೃತಪಟ್ಟಿದ್ದಾನೆ. ಪ್ರಾಣಿ ಭೇಟೆಯಾಡಲು ಹೋಗಿದ್ದ ಕೋವಿ ಮಾಲೀಕ ಕೋದಂಡಪ್ಪ ಜೊತೆಗೆ ಶ್ರೀನಿವಾಸಗೌಡ ಮತ್ತು ಚೌಡಪ್ಪ ಎಂಬುವರಿದ್ದು, ರಾತ್ರಿ ನಡೆಯಬಾರದ್ದು ನಡೆದಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಶಂಕರಪ್ಪನ ತಲೆಗೆ ನೇರವಾಗಿ ಗುಂಡೇಟು ತಗಿಲಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೆ ಕೋವಿಯ ಮಾಲೀಕ ಕೋದಂಡಪ್ಪ ಆಗಿದ್ದು, ಮೃತನ ಕೈಗೆ ಕೋವಿ ಏಕೆ ಕೊಟ್ಟಿದ್ದರು ಎಂಬುದು ಕೂಡ ಪ್ರಶ್ನೆಯಾಗಿದೆ.

    ಗ್ರಾಮಸ್ಥರಲ್ಲಿ ಕೆಲವರು ಹೇಳುವ ಪ್ರಕಾರ ಮಿಸ್ ಆಗಿ ಗುಂಡೇಟು ಆತನ ತಲೆಗೆ ಬಿದ್ದಿದೆ, ಅವನ ಮೇಲೆ ವೈಷಮ್ಯ ಯಾರಿಗೂ ಇರಲಿಲ್ಲ. ಇದು ಕೊಲೆಯಲ್ಲ ಆಕಸ್ಮಿಕ ಆಗಿರಬಹುದು ಎನ್ನುತ್ತಿದ್ದಾರೆ. ಸದ್ಯ ಪ್ರಕರಣ ದಾಖಲಿಸಿರುವ ಶ್ರೀನಿವಾಸಪುರ ಪೋಲೀಸರು ಘಟನೆ ಸತ್ಯಾಸತ್ಯತೆ ಕುರಿತು ತನಿಖೆ ಮುಂದುವರೆಸಿದ್ದಾರೆ. ಘಟನೆ ಸಂಬಂಧ ನಾಲ್ವರನ್ನು ವಿಚಾರಣೆ ನಡೆಸುತಿದ್ದಾರೆ.

  • ಗ್ಯಾಂಗ್‍ಸ್ಟರ್ ಆಗುವಾಸೆಗೆ ರೌಡಿ ಶೀಟರ್ ಕೊಲೆ- ಜೈಲು ಪಾಲಾದ ಪುಡಿ ರೌಡಿಗಳು

    ಗ್ಯಾಂಗ್‍ಸ್ಟರ್ ಆಗುವಾಸೆಗೆ ರೌಡಿ ಶೀಟರ್ ಕೊಲೆ- ಜೈಲು ಪಾಲಾದ ಪುಡಿ ರೌಡಿಗಳು

    ಕೋಲಾರ: ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಮಾಲೂರು ತಾಲೂಕಿನಲ್ಲೂ ಪುಡಿರೌಡಿಗಳ ಹಾವಳಿ ಹೆಚ್ಚಾಗಿದೆ. ಗ್ಯಾಂಗ್ ಕಟ್ಟೊದಕ್ಕೆ ಹಾಗೂ ರೌಡಿಸಂನಲ್ಲಿ ಹೆಸರು ಮಾಡಬೇಕೆಂದು ಪುಡಿರೌಡಿಗಳು ರೌಡಿಶೀಟರ್ ನನ್ನು ಹಾಡುಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ, ಇದೀಗ ಜೈಲು ಪಾಲಾಗಿದ್ದಾರೆ.

    ಮಾರ್ಚ್-18 ಮಧ್ಯಾಹ್ನ ಕೊಲೆ ಪ್ರಕರಣದಲ್ಲಿ ರೌಡಿಶೀಟರ್ ಗಿರೀಶ್ ಆರೋಪಿಯಾಗಿದ್ದ. ಕೊಲೆ ಪ್ರಕರಣದಲ್ಲಿ ಕೋರ್ಟ್‍ಗೆ ಹಾಜರಾಗಿ ವಾಪಸ್ಸಾಗುತ್ತಿದ್ದ ವೇಳೆ ಕೋಲಾರ ತಾಲೂಕು ಗಂಗಾಪುರ ಗ್ರಾಮದ ಬಳಿ ಆತನನ್ನು ಅಡ್ಡಗಟ್ಟಿದ್ದ ಪುಡಿ ರೌಡಿಗಳ ಗುಂಪು, ಮಾಲೂರು ತಾಲೂಕು ಹರಳೇರಿ ಗ್ರಾಮದ ರೌಡಿಶೀಟರ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದರು. ಆರೋಪಿಗಳ ಬೆನ್ನು ಹತ್ತಿದ್ದ ಪೊಲೀಸರಿಗೆ ಒಟ್ಟು ಆರು ಜನ ಸಿಕ್ಕಿಬಿದ್ದಿದ್ದಾರೆ. ಹೊಸಕೋಟೆ ಮಣಿ ಹಾಗೂ ಆತನ ಗ್ಯಾಂಗ್ ಪ್ಲಾನ್ ಮಾಡಿ ಕೊಲೆ ಮಾಡಿರುವುದು ಪ್ರಾಥಮಿಕ ಹಂತದ ವಿಚಾರಣೆಯಲ್ಲಿ ತಿಳಿದುಬಂದಿದೆ.

    ಕೊಲೆ ಆರೋಪಿಗಳ ಪೈಕಿ ಯೋಗೇಶ್, ಮಂಜುನಾಥ್, ಪವನ್ ಜಾಕಿ ಆಲಿಯಾಸ್ ನಿಖಿಲ್, ಜೆಮಿನಿ ಆಲಿಯಾಸ್ ಜಯಂತ್, ಪ್ರತಾಪ್, ಕಾರ್ತಿಕ್ ಎಂಬುವರನ್ನು ಮಾಲೂರು ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ. ಪ್ರಕರಣದ ಕಿಂಗ್ ಪಿನ್ ಮಾಸ್ಟರ್ ಮೈಂಡ್ ಹೊಸಕೋಟೆ ಮಣಿ ಎಂಬಾತ ಇನ್ನು ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರ ತಂಡ ಹುಡಕಾಟ ನಡೆಸುತ್ತಿದೆ. ಒಟ್ಟು ಹನ್ನೊಂದು ಜನ ಕೊಲೆ ಆರೋಪಿಗಳಿದ್ದಾರೆ ಎನ್ನಲಾಗಿದ್ದು, ಈ ಪೈಕಿ ಸದ್ಯಕ್ಕೆ ಆರು ಜನರನ್ನು ಮಾಲೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಅಪರಾಧ ಹಿನ್ನೆಲೆ ಹೊಂದಿರುವವರಾಗಿದ್ದು, ಇದೊಂದು ಗ್ಯಾಂಗ್ ವಾರ್ ಎನ್ನಲಾಗಿದೆ.

  • ದುಷ್ಕರ್ಮಿಗಳಿಂದ ಚಿಂದಿ ಆಯುವ ಮಹಿಳೆ ಮೇಲೆ ಮಾನಭಂಗಕ್ಕೆ ಯತ್ನ

    ದುಷ್ಕರ್ಮಿಗಳಿಂದ ಚಿಂದಿ ಆಯುವ ಮಹಿಳೆ ಮೇಲೆ ಮಾನಭಂಗಕ್ಕೆ ಯತ್ನ

    ವಿಜಯಪುರ: ಚಿಂದಿ ಆಯುತ್ತಿದ್ದ ಮಹಿಳೆಯ ಮಾನಭಂಗಕ್ಕೆ ಯತ್ನಿಸಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಪಟ್ಟಣದಲ್ಲಿ ನಡೆದಿದೆ. ವಿವಾಹಿತ ಮಹಿಳೆ ಮೇಲೆ ಮೂವರು ಯುವಕರು ಮಾನಭಂಗಕ್ಕೆ ಯತ್ನಿಸಿದ್ದಾರೆ.

    ನಸುಕಿನಲ್ಲಿ ಇನ್ನೂ ಕತ್ತಲೆ ಇರುವಾಗಲೇ ಚಿಂದಿ ಆಯಲು ಮಹಿಳೆ ಹೊರಟಿದ್ದಳು. ಈ ವೇಳೆ ದುಷ್ಟರು ಮಹಿಳೆಯ ಮೈ ಮೇಲಿನ ಬಟ್ಟೆ ಹರಿದು, ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾರೆ.

    ಆರೋಪಿಗಳನ್ನು ಅಕ್ಬರ್ ಮಕಾನದಾರ, ಸಲೀಮ ನದಾಫ, ಸೋಯೆಲ್ ಹಡಗಲಿ ಎಂದು ಗುರುತಿಸಲಾಗಿದ್ದು, ಇದೀಗ ನೊಂದ ಮಹಿಳೆ ಆರೋಪಿಗಳ ವಿರುದ್ಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸದ್ಯ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • 2 ಅಡಿ ಇರೋದಕ್ಕೆ ಹುಡುಗಿಯರಿಂದ ರಿಜೆಕ್ಟ್- ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವಕ

    2 ಅಡಿ ಇರೋದಕ್ಕೆ ಹುಡುಗಿಯರಿಂದ ರಿಜೆಕ್ಟ್- ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವಕ

    – ಯಾರೊಂದಿಗೂ ಜೀವನ ಹಂಚಿಕೊಳ್ಳಬಾರದೆ- ಬೇಸರದಿಂದ ಅಜೀಮ್ ಪ್ರಶ್ನೆ
    – ಬಾಳ ಸಂಗಾತಿಗಾಗಿ ಯೋಗಿ ಆದಿತ್ಯನಾಥ್‍ಗೂ ಪತ್ರ ಬರೆದಿರುವ ಅಜೀಮ್

    ಲಕ್ನೋ: ಎಷ್ಟು ಹುಡುಕಿದರೂ ವಧು ಸಿಗುತ್ತಿಲ್ಲ. ಪ್ರತಿ ಬಾರಿ ಮನಸ್ಸಿಲ್ಲದ ಮನಸ್ಸಿನಿಂದಲೇ ಹುಡುಗಿ ಹುಡುಕುತ್ತಿದ್ದೇನೆ. ಆದರೂ ಸೆಟ್ ಆಗುತ್ತಿಲ್ಲ. ದಯವಿಟ್ಟು ನಿಮಗೆ ತಿಳಿದಿದ್ದರೆ ವಿವಾಹವಾಗಲು ಹುಡುಗಿ ಹುಡುಕಿ ಕೊಡಿ ಎಂದು ಕೇವಲ 2 ಅಡಿ ಎತ್ತರವಿರುವ ಯುವಕನೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

    ಪಶ್ಚಿಮ ಉತ್ತರ ಪದೇಶದಲ್ಲಿ ಇಂತಹದ್ದೊಂದು ಘಟನೆ ಬೆಳಕಿಗೆ ಬಂದಿದ್ದು, ಶಾಮ್ಲಿ ಜಿಲ್ಲೆಯ ಕೈರಾನಾ ನಗರದಲ್ಲಿ ಸೌಂದರ್ಯವರ್ಧಕಗಳ ಅಂಗಡಿ ಹೊಂದಿರುವ 26 ವರ್ಷದ ಅಜೀಮ್‍ಗೆ ವಿವಾಹವಾಗಲು ಹುಡುಗಿ ಸಿಗುತ್ತಿಲ್ಲ. ಆರು ಜನ ಸಹೋದರರ ಪೈಕಿ ಇತನೇ ಕೊನೇಯವನಾಗಿದ್ದಾನೆ. ಪ್ರತಿ ಬಾರಿ ಹೆಣ್ಣು ನೋಡಲು ತೆರಳಿದಾಗ ವರ ಕೀಳರಿಮೆಯಿಂದಲೇ ಹುಡುಗಿಯ ಮನೆ ಪ್ರವೇಶಿಸುತ್ತಾನೆ. ಅಲ್ಲದೆ ಹುಡುಗಿ ಸೆಟ್ ಆಗದೆ ನಿರಾಸೆಯಿಂದಲೇ ಹೊರ ಬರುತ್ತಿದ್ದಾನೆ. ಹೀಗಾಗಿ ಬೇಸತ್ತ ಯುವಕ, ವಿವಾಹವಾಗಲು ಹುಡುಗಿ ಹುಡುಕಿ ಕೊಡುವಂತೆ ಪೊಲೀಸರ ಬಳಿ ಮನವಿ ಮಾಡಿದ್ದಾನೆ.

    ಕಳೆದ ಐದು ವರ್ಷದಿಂದ ಹುಡುಗಿ ಹುಡುಕುತ್ತಿದ್ದು, ಅಜೀಮ್ ಕೇವಲ 2 ಅಡಿ ಎತ್ತರ ಇರುವುದರಿಂದಾಗಿ ಯಾವ ಹುಡುಗಿಯೂ ವಿವಾಹವಾಗಲು ಮುಂದೆ ಬರುತ್ತಿಲ್ಲ. ಇದರಿಂದ ಬೇಸತ್ತ ಅಜೀಮ್ ಉತ್ತರ ಪ್ರದೇಶ ಪೊಲೀಸರ ಮೊರೆ ಹೋಗಿದ್ದು, ಸಾರ್ವಜನಿಕ ಸೇವೆ ಮಾಡುತ್ತಿರುವ ನೀವು ನನಗೆ ಬಾಳ ಸಂಗಾತಿಯನ್ನು ಹುಡುಕಿಕೊಡಿ ಎಂದು ಮನವಿ ಮಾಡಿದ್ದಾನೆ.

    ಅಜೀಮ್ 21 ವರ್ಷ ಪೂರ್ಣವಾದಾಗಿನಿಂದ ಮನೆಯವರು ಹುಡುಗಿ ಹುಡುಕುತ್ತಿದ್ದಾರೆ. ಆದರೆ 26 ವರ್ಷ ಅಂದರೆ 5 ವರ್ಷಗಳಾದರೂ ಬಾಳ ಸಂಗಾತಿ ಸಿಕ್ಕಿಲ್ಲ. ಇವರ ಅಳಿಯ ಈ ಬಗ್ಗೆ ಮಾತನಾಡಿ ಅಳಲು ತೋಡಿಕೊಂಡಿದ್ದು, ನಾವು ಅವರ ವಿವಾಹ ಮಾಡಲು ಮುಂದಾಗಿದ್ದೇವೆ. ಆದರೆ ಕೇವಲ 2 ಅಡಿ ಎತ್ತರ ಇರುವುದರಿಂದ ವಿವಾಹವಾಗಲು ಯಾರೂ ಮುಂದೆ ಬರುತ್ತಿಲ್ಲ. ಪ್ರತಿ ಸಲ ತಿರಸ್ಕರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ರಾತ್ರಿ ನನಗೆ ನಿದ್ದೆ ಬರುತ್ತಿಲ್ಲ, ತುಂಬಾ ದಿನಗಳಿಂದ ಹುಡುಗಿ ಹುಡುಕುತ್ತಿದ್ದೇನೆ. ನಾನು ಯಾರೊಂದಿಗೂ ಜೀವನ ಹಂಚಿಕೊಳ್ಳಬಾರದೆ ಎಂದು ಅಜೀಮ್ ಬೇಸರದಿಂದ ಪ್ರಶ್ನಿಸಿದ್ದಾನೆ.

    ಆರಂಭದಲ್ಲಿ ಅಜೀಮ್ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದಾನೆ. ವಿವಾಹವಾಗಲು ನನಗೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾನೆ. 8 ತಿಂಗಳ ಬಳಿಕ ಕೈರಾನಾ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್(ಎಸ್‍ಡಿಎಂ) ಭೇಟಿ ಮಾಡಿದ್ದಾನೆ. ಇದೂ ಸಾಲದು ಎಂಬಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ಗೆ ಪತ್ರ ಬರೆದಿದ್ದಾನೆ. ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಪೊಲೀಸರನ್ನು ಸಂಪರ್ಕಿಸಲು ನಿರ್ಧರಿಸಿದ್ದಾನೆ.

    ಅಜೀಮ್ ಬುಧವಾರ ನಮ್ಮ ಬಳಿ ಬಂದು ವಧು ಹುಡುಕಿಕೊಡುವಂತೆ ಮನವಿ ಮಾಡಿದ್ದಾನೆ. ಏನು ಮಾಡಬೇಕೆಂದು ನಮಗೇ ತಿಳಿಯುತ್ತಿಲ್ಲ. ಆದರೂ ಇದು ಸಾಧ್ಯವಾಗುತ್ತದೆಯೇ ನೋಡುತ್ತೇವೆ, ಪ್ರಯತ್ನಿಸುತ್ತೇವೆ ಎಂದು ಶಾಮ್ಲಿ ಕೊತ್ವಾಲಿ ಎಸ್‍ಎಚ್‍ಒ ಸತ್ಪಾಲ್ ಸಿಂಗ್ ಭರವಸೆ ನೀಡಿದ್ದಾರೆ.

  • ಮೂವರು ಖತರ್ನಾಕ್ ಮನೆಗಳ್ಳರನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು

    ಮೂವರು ಖತರ್ನಾಕ್ ಮನೆಗಳ್ಳರನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು

    ಹುಬ್ಬಳ್ಳಿ: ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಮೂವರು ಐನಾತಿ ಮನೆಗಳ್ಳರನ್ನು ಹುಬ್ಬಳ್ಳಿಯ ಗೋಕುಲ ರಸ್ತೆ ಪೊಲೀಸರು ಬಂಧಿಸಿದ್ದಾರೆ.

    ಪ್ರೇಮ್‍ಕುಮಾರ್ ಭೀಮಪ್ಪ ಪೂಜಾರ, ವಿರೇಶ ಜಂಬುನಾಥ ಕಾಂಬಳೆ, ರಾಘವೇಂದ್ರ ಮಲ್ಲಪ್ಪ ಸಲಗಾರ ಬಂಧಿತ ಆರೋಪಿಗಳು. ಬಂಧಿತರಿಂದ ದ್ವಿಚಕ್ರ ವಾಹನ, ಲ್ಯಾಪ್‍ಟಾಪ್, ಟಿವಿ ಹಾಗೂ ಬೆಳ್ಳಿಯ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮನೆಯಲ್ಲಿ ಯಾರೂ ಇಲ್ಲದನ್ನು ಅರಿತ ಚಾಲಾಕಿ ಕಳ್ಳರು ಬೀಗ ಮುರಿದು ಮನೆಗೆ ಕನ್ನ ಹಾಕುತ್ತಿದ್ದರು. ಈ ಕುರಿತು ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿದ್ದವು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ಮೂಲಕ ಮೂವರು ಮನೆಗಳ್ಳರನ್ನು ಬಂಧಿಸಿದ್ದಾರೆ.