Tag: Copper

  • ಅಂಕೋಲದಲ್ಲಿ ಹತ್ತನೇ ಶತಮಾನದ ತಾಮ್ರ ಶಾಸನ ಪತ್ತೆ

    ಅಂಕೋಲದಲ್ಲಿ ಹತ್ತನೇ ಶತಮಾನದ ತಾಮ್ರ ಶಾಸನ ಪತ್ತೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕುಂಬಾರಕೇರಿಯಲ್ಲಿ ಕದಂಬೇಶ್ವರ ದೇವಾಲಯದ ಮರುನಿರ್ಮಾಣ ಕಾರ್ಯಕ್ಕಾಗಿ ಭೂಮಿ ಅಗೆಯುವ ವೇಳೆ 5 ಸೆಂ.ಮೀ ಹಾಗೂ 20 ಸೆಂ.ಮೀ ಉದ್ದಳತೆಯ ಜೊತೆಗೆ 15 ಸೆಂ.ಮೀ ಮತ್ತು 10 ಸೆಂ.ಮೀ ಉದ್ದಳತೆಯ ಎರಡು ತಾಮ್ರ ಶಾಸನಗಳು ಪತ್ತೆಯಾಗಿದೆ.

    ಈ ಸಂಬಂಧ ದೇವಸ್ಥಾನದ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ವಿಠ್ಠಲರಾವ್ ವರ್ಣೇಕರ್ ಮಾಹಿತಿ ನೀಡಿದ್ದು, ಹೆಚ್ಚಿನ ಸಂಶೋಧನೆ ನಡೆಸಲು ಜಿಲ್ಲೆಯ ಇತಿಹಾಸ ತಜ್ಞ ಶ್ಯಾಮಸುಂದರ್ ಮುಂದಾಗಿದ್ದಾರೆ. ಈ ಶಾಸನವು ಕಲ್ಯಾಣ ಚಾಲುಕ್ಯರ ತ್ರೈಳೋಕ್ಯಮಲ್ಲನ ಆಡಳಿತ ಕಾಲದ್ದಾಗಿದ್ದು ಹತ್ತನೇ ಶತಮಾನದ್ದಾಗಿದೆ.

    ಶಾಸನದಲ್ಲೇನಿದೆ?
    ಸ್ವಸ್ತಿ ಸಮಸ್ತ ಭುವನಾಶ್ರಯ ಪ್ರತೂವೀವಲ್ಲಭ ಮಹಾರಾಜಾಧಿರಾಜ ಸತ್ಯಾಶ್ರಯ
    ಕುಳತಿಳಕ ಪರಮಭಟ್ಟಾರಕ ಚಾಳುಕ್ಯಾಭರಣ

    ಶ್ರೀಮತ್ರೈಲೋಕ್ಯಮಲ್ಲ ದೇವರ ರಾಜ್ಯದಲ್ಲಿ ಶಕವರ್ಷ 897ನೇಯ ಯುವ ಸಂವತ್ಸರದ ಭಾದ್ರಪದ ಮಾಸದ ಅಮವಾಸ್ಯೆ ಆದಿತ್ಯವಾರದಂದು ಸಂಭವಿಸಿದ ಸೂರ್ಯ ಗ್ರಹಣದ ಸಂದರ್ಭದಲ್ಲಿ ಶ್ರೀಮದ್ ಕಲಿಯರಸ ಪ್ಪಿರಿಯ ಭೂತಯ್ಯಗಡಂಬನು ಕದಂಬೇಶ್ವರ ದೇವಾಲಯ ನಿರ್ಮಾಣ ಮಾಡಿ, ಸಿವರಾಸಿ ಜೀಯರ ಪಾದಗಳಿಗೆ ನಮಿಸಿ, ಕಣ್ನಸೆ, ಬಡ್ಡಗಿವಾಳ್ಯ, ಸತ್ಯಾವಾಳು, ನಂದಾದೀವಿಗೆ, ಸೋಡಗ್ರ್ಗೆ ಇತ್ಯಾದಿ ನಿತ್ಯ ದೇವಸ್ವಂ ಕಾರ್ಯಗಳಿಗಾಗಿ ಹರದರಕೇರಿಯಿಂದ ಹತ್ತು ಗದ್ಯಾಣ ಮತ್ತು ತೆಂಕಣ ಕೇರಿಯಿಂದ ಐದು ಗದ್ಯಾಣ(ಹಣ)ವನ್ನು ದಾನವಾಗಿ ನೀಡಲಾಯಿತು.

    ಈ ಧರ್ಮವನ್ನು ಹಾಳು ಮಾಡಿದವರು ಕುರುಕ್ಷೇತ್ರದಲ್ಲಿ, ವಾರಣಾಸಿಯಲ್ಲಿ ಸಾವಿರ ಗೋವುಗಳನ್ನು ಕೊಂದಂತಹ ಪಾಪಕ್ಕೆ ಗುರಿಯಾಗುತ್ತಾರೆ ಎಂಬ ಶಾಪಾಶಯದ ನುಡಿಗಳಿವೆ.

    ಶಾಸನದ ಪ್ರಾಮುಖ್ಯತೆ:
    ಪ್ರಸ್ತುತ ಶಾಸನಗಳು 10ನೇ ಶತಮಾನದ ಕೊನೆಯಲ್ಲಿ ಅಂಕೋಲೆಯು ನೇರವಾಗಿ ಕಲ್ಯಾಣ ಚಾಲುಕ್ಯರ ಆಡಳಿತಕ್ಕೆ ಒಳಪಟ್ಟಿತ್ತು ಎಂಬ ವಿಷಯವನ್ನು ತಿಳಿಸುತ್ತದೆ. ಶಾಸನದಲ್ಲಿ ಯಾವುದೇ ಮಾಂಡಳೀಕ ಅರಸನ ಉಲ್ಲೇಖವಿಲ್ಲ. ದೇವಾಲಯವನ್ನು ಕಟ್ಟಿಸಿದ ಭೂತಯ್ಯಗಡಂಬ ತ್ರೈಲೋಕ್ಯಮಲ್ಲನ ಯಾವುದೋ ಒಬ್ಬ ಅಧಿಕಾರಿಯಾಗಿರಬೇಕು. ಈ ಶಾಸನವು ಶಕವರ್ಷ 897 ಅಂದರೆ ಕ್ರಿ.ಶ. 975ನೇ ಇಸವಿಯಲ್ಲಿ ನಿರ್ಮಾಣವಾಗಿರುವುದು ತಿಳಿಸುವುದರಿಂದ ಇಂದಿಗೆ ಸರಿಯಾಗಿ 1046 ವರ್ಷಗಳ ಹಿಂದೆ ಕದಂಬೇಶ್ವರ ದೇವಾಲಯ ಶ್ರೀಮದ್ ಕಲಿಯರಸ ಪ್ಪಿರಿಯ ಭೂತಯ್ಯಗಡಂಬನಿಂದ ನಿರ್ಮಾಣವಾಯಿತೆಂದು ಸ್ಪಷ್ಟವಾಗಿ ಹೇಳುತ್ತದೆ.

    ಅಂತೆಯೇ ತೆಂಕಣಕೇರಿಯನ್ನು ಉಲ್ಲೇಖಿಸಿರುವುದರಿಂದ ಅದರ ಪ್ರಾಚೀನತೆಯೂ 1046 ವರ್ಷಗಳಷ್ಟು ಹಿಂದಕ್ಕೆ ಒಯ್ಯುತ್ತದೆ. ಶಾಸನದಲ್ಲಿ ಉಲ್ಲೇಖಿತ ತ್ರೈಲೋಕ್ಯಮಲ್ಲನು ಕಲ್ಯಾಣ ಚಾಳುಕ್ಯರ ಎರಡನೇ ತೈಲಪನಾಗಿದ್ದು ಈತನು ಕ್ರಿ.ಶ.973 ರಿಂದ 979ರ ವರೆಗೆ ಆಳ್ವಿಕೆ ನಡೆಸಿದ್ದಾನೆ. ಈತನ ಅವಧಿಯಲ್ಲಿ ಅಧಿಕಾರಿಯಾಗಿದ್ದ ಭೂತಯ್ಯ ಗಡಂಬ ಕದಂಬ ವಂಶಸ್ಥನಾಗಿರಬೇಕು ಎಂದು ಊಹಿಸಲಾಗಿದೆ.

    ಭೂತಯ್ಯ+ಕದಂಬ=ಭೂತಯ್ಯಗಡಂಬ. ಆದ್ದರಿಂದಲೇ ಆತ ಕಟ್ಟಿಸಿದ ದೇವಾಲಯ ಕದಂಬೇಶ್ವರ ದೇವಾಲಯವೆಂದು ಖ್ಯಾತಿಯಾಗಿದೆ. ಅಲ್ಲದೆ ಶಾಸನವು ಸಿವರಾಸಿ ಜೀಯನನ್ನು ಉಲ್ಲೇಖಿಸುವುದರಿಂದ ಆ ಸಮಯದಲ್ಲಿ ಈ ಪ್ರದೇಶದಲ್ಲಿ ಕಾಳಾಮುಖ ಯತಿಗಳ ಪ್ರಾಬಲ್ಯವಿರುವುದರ ಕುರಿತು ಬೆಳಕು ಚೆಲ್ಲುತ್ತದೆ. ಶಾಸನದಲ್ಲಿ ಬರುವ ತೆಂಕಣಕೇರಿಯು ಇಂದಿನ ತೆಂಕಣ ಕೇರಿಯೆಂದು ಗುರುತಿಸಿದರೆ ಶಾಸನ ಹೇಳುವ ‘ತಳವಟ್ಟೆ ಧಮ್ಮಗೇರಿ ಹರದರಕೇರಿ’ಯನ್ನು ತಳವೃತ್ತಿಯಾ ಧಾರಿತ ವ್ಯಾಪಾರಿಗಳ ಕೇರಿ ಎಂದು ಭಾವಿಸಿದಾಗ ಅದನ್ನು ಇಂದಿನ ಕುಂಬಾರಕೇರಿ ಎಂದು ಗುರುತಿಸಬಹುದು ಎಂದು ಶ್ಯಾಮಸುಂದರ ಗೌಡ ವಿವರಿಸಿದ್ದಾರೆ.

  • ತಾಮ್ರ ಬಳಸಿದ್ರೆ ಬರುತ್ತೆ ಜೀವಕ್ಕೆ ಕುತ್ತು

    ತಾಮ್ರ ಬಳಸಿದ್ರೆ ಬರುತ್ತೆ ಜೀವಕ್ಕೆ ಕುತ್ತು

    ಬೆಂಗಳೂರು: ತಾಮ್ರದ ಬಾಟೆಲ್‍ನಲ್ಲಿ ನೀರು ಹಾಗೂ ತಾಮ್ರದ ಲೋಟದಲ್ಲಿ ಹಾಲು ಕುಡಿಯುವವರು ಈ ಸುದ್ದಿ ನೋಡಲೇಬೇಕು. ಏಕೆಂದರೆ ತಾಮ್ರ ಬಳಸುವುದರಿಂದ ನಿಮ್ಮ ಜೀವಕ್ಕೆ ಅಪಾಯವಾಗಲಿದೆ.

    ಎಲ್ಲೆಡೆ ತಾಮ್ರದ ದರ್ಬಾರ್ ಶುರುವಾಗಿದ್ದು, ನೀವು ತೆಳ್ಳಗಾಗಬೇಕೆಂದರೆ, ಬಿಪಿ, ಶೂಗರ್, ಟೆನ್ಶನ್ ಕಡಿಮೆ ಆಗಬೇಕೆಂದರೆ ಕಾಪರ್ ನಲ್ಲಿ ನೀರು ಕುಡಿಯಿರಿ ಎಂದು ಹಲವು ಮಂದಿ ಸಲಹೆ ನೀಡುತ್ತಾರೆ. ಅಚ್ಚರಿಯಂದರೆ ಕಾಪರ್ ಅತಿಯಾದ್ರೆ ಪಿತ್ತಕೋಶ (ಲಿವರ್) ಕಾಯಿಲೆ ಬರುತ್ತದೆ ಎಂಬ ವಿಚಾರ ವಿಶ್ವ ಮಟ್ಟದಲ್ಲಿ ವರದಿಯಾಗಿದೆ.

    ಮಾಲ್‍ನಿಂದ ಹಿಡಿದು ಗಲ್ಲಿಗಲ್ಲಿಗಳಲ್ಲೂ ತಾಮ್ರದ ಮಾರಾಟ ಜೋರಾಗಿದೆ. ಒಂದು ಲೀಟರ್ ನೀರು ಹಿಡಿಯುವ ತಾಮ್ರದ ಬಾಟೆಲ್‍ಗೆ ಕನಿಷ್ಠ ಅಂದರೂ 1300 ರೂ. ಕೊಡಲೇ ಬೇಕು. ಇಷ್ಟಾದರೂ ಆರೋಗ್ಯ ಎಂದು ಹೇಳಿ ಜನ ತಾಮ್ರದ ಮೇಲೆ ಹಣ ಹಾಕುತ್ತಿದ್ದಾರೆ. ರಾತ್ರಿಯಲ್ಲಿ ತಾಮ್ರದೊಳಗೆ ನೀರಿಟ್ಟು ಬೆಳಗ್ಗೆ ಕುಡಿದರೆ ಗ್ಲೋ ಬರುತ್ತೆ, ಆರೋಗ್ಯವಾಗಿರುತ್ತಾರೆ ಎಂದು ಹತ್ತು ಹಲವು ಕಾರಣಗಳಿಗೆ ಕಾಪರ್ ಫೇಮಸ್ ಆಗಿದೆ.

    ಅಚ್ಚರಿ ಏನೆಂದರೆ ರಾತ್ರಿಯಿಡೀ ತಾಮ್ರದಲ್ಲಿ ನೀರಿಟ್ಟು ಕುಡಿದರೆ ಕಾಯಿಲೆ ಬರಲಿದೆ. ಪೌಷ್ಠಿಕತೆಗೆ ಕಾಪರ್ ವರವೂ ಹೌದು, ವಿಷವೂ ಹೌದು. ರಾತ್ರಿಯಲ್ಲಿ ಕಾಪರಿನಲ್ಲಿ ನೀರಿಟ್ಟು ಬೆಳಗ್ಗೆ ಕುಡಿದರೆ ಶೇ. 4 ಸಾವಿರದಷ್ಟು ಕಾಪರ್ ಪ್ರಮಾಣ ಜಾಸ್ತಿಯಾಗಿರುತ್ತದೆ. ಆಗ ನೀರಿನಲ್ಲಿ ಕಾಪರ್ ಲಿಚ್ಚಿಂಗ್ ಆದಾಗ ಮೆಟಲ್ ಪ್ರಮಾಣ ಹೆಚ್ಚಾಗಿ ರಾತ್ರಿಯಿಂದ ಬೆಳಗ್ಗೆ ಆಗುವ ಬದಲಾವಣೆಗಳು ಲಿವರ್ ಡ್ಯಾಮೇಜ್ ಮಾಡುತ್ತದೆ. ಇದನ್ನು ವೀಲಸನ್ ಡಿಸೀಸ್ (ವಿಲ್ಸನ್ ರೋಗ) ಎಂದು ಕರೆಯುತ್ತಾರೆ.

    ಒಂದು ದಿನಕ್ಕೆ ನಮ್ಮ ದೇಹಕ್ಕೆ 1.1 ಎಂ.ಜಿ ಮಾತ್ರ ತಾಮ್ರ ಸಾಕು. ಅನ್ನ ತಿಂದರು ಅಲ್ಲಿ ಕಾಪರ್ ಸಿಗಲಿದೆ. ಆದರೂ ತಾಮ್ರ ಬಳಸುತ್ತೇವೆ. ಕಾಪರ್ ವಿಷ ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. ಈ ಪ್ರಕಾರ ಆತ್ಮಹತ್ಯೆಗೆ ಹಲವೆಡೆ ಕಾಪರ್ ಸೆಲ್ ಫೈಡ್ ಕುಡಿಯುತ್ತಾರೆ, ಕುಡಿದರೆ ಸಾಯುತ್ತಾರೆ ಎಂಬ ಸತ್ಯ ರುಜುವತ್ತಾಗಿದೆ. ಹೀಗಾಗಿ ಕಾಪರ್ ಪ್ರಮಾಣ ದೇಹ ಸೇರಿದರೆ ಅಪಾಯವಾಗುತ್ತದೆ.

    ಕಾಪರ್ ಬಳಕೆಯ ಸೈಡ್ ಎಫೆಕ್ಟ್ ಗೊತ್ತಿರುವವರು, ವ್ಯಾಪಾರಿಗಳು, ಕಾಪರ್ ಬಗ್ಗೆ ಜಾಸ್ತಿ ಕೇಳಿದರೆ ಮಾತನಾಡಲು ಹಿಂದೇಟು ಹಾಕುತ್ತಾರೆ. ಇಷ್ಟಲ್ಲದೇ ಕಾಪರ್ ಎಂದರೆ ಮೆಟಲ್. ಪಿತ್ತಕೋಶಕ್ಕೆ ಹೋದ ಮೆಟಲ್ ಹೊರತರುವುದು ಕಷ್ಟವಾಗುತ್ತದೆ. ಆಗ ದೇಹದಲ್ಲಿ ಮೆಟಲ್ ಸಂಗ್ರಹವಾಗಿ ಕಾಯಿಲೆಗಳು ಉದ್ಭವವಾಗುತ್ತದೆ.

    ಕಾಪರ್ ಪ್ರಮಾಣ ಹೆಚ್ಚಾದ್ರೆ ಆಗುವ ತೊಂದರೆಗಳ ಪಟ್ಟಿ;
    * ಕಿಡ್ನಿ ಸಮಸ್ಯೆ
    * ಖಿನ್ನತೆ, ವ್ಯಕ್ತಿತ್ವ ಬದಲಾವಣೆ
    * ರಕ್ತ ಸಂಬಂಧಿ ಸಮಸ್ಯೆ

    ಕಾಪರ್ ಪ್ರಮಾಣ ಹೆಚ್ಚಾದ್ರೆ ಕಾಣಿಸಿಕೊಳ್ಳಲು ಲಕ್ಷಣಗಳು;
    * ಅಪಾರ ಪ್ರಮಾಣದ ಹೊಟ್ಟೆ ನೋವು
    * ಚರ್ಮ ಹಳದಿ ಬಣ್ಣಕ್ಕೆ ತಿರುಗಿ, ಕಣ್ಣುಗಳು ಬೆಳ್ಳಗೆ ಆಗುವುದು
    * ಹೊಟ್ಟೆ ಹಾಗೂ ಕಾಲುಗಳ ಬಳಿ ನೀರಿನ ಪ್ರಮಾಣ ಶೇಖರಣೆ
    * ಮಾತನಾಡುವಾಗ ತೊದಲುವುದು, ಮಾತು- ದೇಹ ಸನ್ಹೆಯಲ್ಲಿ ವ್ಯತ್ಯಯ
    * ಸ್ನಾಯು ಠೀವಿ (ಸೆಳೆತ)
    * ಬ್ರೈನ್ ಸಮಸ್ಯೆ

    ಕಾಪರ್ ಮೆಟಲ್ ಸಾಲದು ಎಂದು ಅದರಲ್ಲಿ ಮಾಡುವ ಟೀ, ಕಾಫಿ ಗಟ್ಟಿಯಾಗಲಿ ಎಂದು ಮತ್ತೊಂದು ಮೆಟಲ್ ಹಾಕುತ್ತಾರೆ.
    ಪ್ರತಿನಿಧಿ- ಸರ್ ತಾಮ್ರದಲ್ಲಿ ಯಾಕ್ ಮಾಡುವುದು
    ವ್ಯಾಪಾರಿ- ತಾಮ್ರದಲ್ಲಿ ಕಾಯಿಸಿದ್ರೆ ಗಟ್ಟಿಯಾಗುತ್ತೆ
    ಪ್ರತಿನಿಧಿ – ಏನಾದ್ರೂ ರೀಸನ್ ಇದೇಯಾ. ಹೆಲ್ತ್ ಚೆನ್ನಾಗಿ ಆಗುತ್ತೆ ಅಂತ
    ವ್ಯಾಪಾರಿ – ಹಾಗಂತ ಹೇಳ್ತಾ ಇದ್ದಾರೆ ಮೇಡಂ
    ಪ್ರತಿನಿಧಿ – ಟೆಸ್ಟ್
    ವ್ಯಾಪಾರಿ – ಹೌದು ಚೆನ್ನಾಗಿರುತ್ತೆ, ಗಟ್ಟಿ ಬರುತ್ತೆ ಸ್ವಲ್ಪ
    ಪ್ರತಿನಿಧಿ – ಆದ್ರೆ ಕೆಲವು ರಿಪೋರ್ಟ್ ಹೇಳುತ್ತೆ ತಾಮ್ರ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ
    ವ್ಯಾಪಾರಿ – ಮತ್ತೆ ನೀರು ಅದ್ರಲ್ಲೇ ಕುಡಿಯುತ್ತಾರಲ್ಲ ಮೇಡಂ
    ಪ್ರತಿನಿಧಿ – ಸ್ಟೀಲ್ ಪಾತ್ರೆಗಿಂತ ಸ್ವಲ್ಪ ಕಾಸ್ಲ್ಟಿ ಅಲ್ವ
    ವ್ಯಾಪಾರಿ – ತಿಂಗಳಿಗೆ ಒಂದ್ ಸಲ ಕಡಾಯ್ ಮಾಡಿಸ್ತೀವಿ, ಅದಕ್ಕೆ 350 ತೆಗೆದುಕೊಳ್ಳುತ್ತಾರೆ. ತಳ ಕಚ್ಚಬಾರದು ಅಂತಲೇ ಅದರಲ್ಲಿ ಕಾಯಿಸೊದು..

    ಪಾತ್ರೆಗಳಿಗೆ ಕಡಾಯ್ ಮಾಡಿಸಿದ್ರೆ ಅದರಲೂ ಮೆಟಲ್ ಇರುತ್ತೆ. ತಾಮ್ರ, ಕಡಾಯ್ ಎರಡು ಸೇರಿ ಲಿವರ್ ಮತ್ತಷ್ಟು ಹಾಳಾಗುತ್ತದೆ. ನಿರಂತರವಾಗಿ 2 ತಿಂಗಳು ಕಾಪರ್ ಬಳಸಿದರೆ ಕಾಯಿಲೆ ಬರುತ್ತದೆ. ಭಾರತದಲ್ಲಿ ಪ್ರತಿ ವರ್ಷ 100 ಕೇಸ್ ಈ ರೀತಿ ಬೆಳಕಿಗೆ ಬರುತ್ತಿದೆ.

    ಕಾಪರ್ ಬಳಸಲು ಒಂದು ಉಪಾಯವಿದೆ. ಕಾಪರ್ ನಲ್ಲಿ ನೀರು, ಹಾಲು ಏನ್ ಹಾಕಿದರೂ ತಕ್ಷಣ ಉಪಯೋಗಿಸಬೇಕು. ಆದರೆ ತಡ ಮಾಡಿದರೆ ಮೆಟಲ್ ಪ್ರಮಾಣ ಆಹಾರ ಸೇರುತ್ತದೆ. ಸೈಡ್ ಎಫೆಕ್ಟ್ ಶುರುವಾಗುತ್ತದೆ.

  • ತಾಮ್ರದ ಕುಲುಮೆ ಘಟಕ ಮುಚ್ಚುವಂತೆ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಗೋಲಿಬಾರ್: 9 ಸಾವು

    ತಾಮ್ರದ ಕುಲುಮೆ ಘಟಕ ಮುಚ್ಚುವಂತೆ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಗೋಲಿಬಾರ್: 9 ಸಾವು

    ಚೆನೈ: ಸ್ಟೆರ್‍ಲೈಟ್ ತಾಮ್ರದ ಕುಲುಮೆ ಘಟಕ ಮುಚ್ಚುವಂತೆ ತಮಿಳುನಾಡಿನ ಟ್ಯುಟಿಕಾರಿನ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಪೊಲೀಸರ ಗೋಲಿಬಾರ್ ನಿಂದಾಗಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ.

    ಸುಮಾರು 20 ಸಾವಿರ ಜನರು ಜಿಲ್ಲಾಧಿಕಾರಿ ಕಚೇರಿ ಬಳಿ ಜನರು ಪ್ರತಿಭಟನೆಗೆ ಇಳಿದಿದ್ದರು. ಸ್ಟೆರ್‍ಲೈಟ್ ಕಂಪೆನಿಯನ್ನು ಮುಚ್ಚಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದರು. ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದರಿಂದ ಪೊಲೀಸರಿಗೆ ಗೋಲಿಬಾರ್ ಮಾಡದೆ ಬೇರೆ ದಾರಿ ಇರಲಿಲ್ಲ ಎಂದು ಸಚಿವ ಜಯಕುಮಾರ್ ಹೇಳಿದ್ದಾರೆ.

    ಸ್ಥಳೀಯರು ಕಳೆದ ಮೂರು ತಿಂಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಸರ್ಕಾರದ ಗಮನಕ್ಕೆ ಸುಮಾರು ಬಾರಿ ತಂದರೂ ಗಂಭೀರವಾಗಿ ಪರಿಗಣಿಸಿಲ್ಲ. ಕಂಪೆನಿಯ 25 ವರ್ಷಗಳ ಪರವಾನಗಿ ಮುಗಿಯುವ ಹಂತದಲ್ಲಿದ್ದು, ನವೀಕರಣಕ್ಕೆ ಸರ್ಕಾರವನ್ನು ಒತ್ತಾಯಿಸುತ್ತಿದೆ ಎಂದು ತಿಳಿದ ಪ್ರತಿಭಟನಾಕಾರರು ಪ್ರತಿಭಟನೆಯ ತೀವ್ರತೆಯನ್ನು ಹೆಚ್ಚಿಸಿದ್ದಾರೆ. ಉದ್ರೇಕಗೊಂಡ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿ ಒಳಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.

    ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಮಾತನಾಡಿ, ಕೆಲವು ತಿಂಗಳಿನಿಂದ ಸ್ಟೆರ್‍ಲೈಟ್ ಕಂಪೆನಿಯನ್ನು ಮುಚ್ಚಿಸುವಂತೆ ಜನರು ಪ್ರತಿಭಟನೆ ಮಾಡುತ್ತಿದ್ದಾರೆ. ಎಐಎಡಿಎಂಕೆ ಆಡಳಿತಾರೂಢ ಸರ್ಕಾರ ಜನರ ಅಹವಾಲನ್ನು ಪೂರೈಸುವಲ್ಲಿ ನಿರ್ಲಕ್ಷ ವಹಿಸಿದೆ. ಘಟಕವನ್ನು ಮುಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.

    ಈ ಹಿಂದೆ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸದ್ದ ನಟ ಕಮ್ ರಾಜಕಾರಣಿ ಕಮಲ್ ಹಾಸನ್ ಮಾತನಾಡಿ, ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಸಾರ್ವಜನಿಕರು ಕ್ರಿಮಿನಲ್ ಗಳಲ್ಲ. ಇದು ಸರ್ಕಾರದ ನಿರ್ಲಕ್ಷ. ಶಾಂತಿಯುತ ಪ್ರತಿಭಟನೆಗೆ ಸರ್ಕಾರ ಬೆಲೆ ಕೊಡಲಿಲ್ಲ ಅಂತಾ ವಾಗ್ದಾಳಿ ನಡೆಸಿದ್ದಾರೆ.

    2013ರಲ್ಲಿ ನೂರಾರು ಜನ ಉಸಿರಾಟದ ತೊಂದರೆಗೀಡಾಗಿದ್ದರು. ಅನಿಲ ಸೋರಿಕೆಯಿಂದ ಬಹಳಷ್ಟು ಮಂದಿ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳಿಂದ ಬಳಲಿದ್ದಾರೆ. ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಕಂಪೆನಿ ಪಾಲಿಸುತ್ತಿಲ್ಲ ಹಾಗಾಗಿ ಘಟಕವನ್ನು ಮುಚ್ಚುವಂತೆ ಜನರು ಆಗ್ರಹಿಸಿದ್ದರು.

    ಇದೇ ವರ್ಷ ಎಂಡಿಎಂಕೆ ಮುಖ್ಯಸ್ಥ ವೈಕೋ, ಘಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ದೂರು ದಾಖಲಿಸಿದರು. ಮಾಲಿನ್ಯ ನಿಯಂತ್ರಣದ ನಿಯಮಗಳನ್ನು ಕಂಪೆನಿ ಪಾಲಿಸದೆ ಹಲವಾರು ವರ್ಷಗಳಿಂದ ಪರಿಸರವನ್ನು ಹಾಳುಮಾಡಿರುವುದಕ್ಕೆ 100 ಕೋಟಿ ದಂಡವನ್ನು ಕೋರ್ಟ್ ವಿಧಿಸಿತು. ಆ ಸಮಯದಲ್ಲಿ ವೇದಾಂತ ಸಂಸ್ಥೆಗಳ ಅಡಿಯಲ್ಲಿ ಸ್ಟೆರ್‍ಲೈಟ್ ನಡೆಯುತ್ತಿತ್ತು. ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಪಾಲಿಸುತ್ತಿದ್ದೇವೆ ಎಂದು ಕಂಪೆನಿ ವಾದಿಸಿತ್ತು.

    1996ರಲ್ಲಿ ಸ್ಟೆರ್‍ಲೈಟ್ ಕಾರ್ಯವನ್ನು ಆರಂಭಿಸಿದೆ. 1000 ಪೂರ್ಣ ಪ್ರಮಾಣದ ನೌಕರರನ್ನು, 2000 ಗುತ್ತಿಗೆ ನೌಕರರನ್ನು ಹೊಂದಿದೆ. 25 ಸಾವಿರ ಪರೋಕ್ಷ ಉದ್ಯೋಗವನ್ನು ಸೃಷ್ಟಿಸಿದೆ.