Tag: coorg

  • ಮಳೆಯ ಆರ್ಭಟದ ನಂತ್ರ ಗ್ರಾಮಗಳತ್ತ ಕಾಡುಪ್ರಾಣಿಗಳು-ಒಡೆಯನಿಗಾಗಿ ಕಾಯ್ತೀರೋ ನಾಯಿ

    ಮಳೆಯ ಆರ್ಭಟದ ನಂತ್ರ ಗ್ರಾಮಗಳತ್ತ ಕಾಡುಪ್ರಾಣಿಗಳು-ಒಡೆಯನಿಗಾಗಿ ಕಾಯ್ತೀರೋ ನಾಯಿ

    -ಭೂಮಿಯಲ್ಲಿ ನೀರಿನ ಶಬ್ಧ

    ಕೊಡಗು: ಮಹಾಮಳೆ ಮತ್ತು ಪ್ರವಾಹಕ್ಕೆ ಸಿಲುಕು ನಲುಗಿರುವ ಕೊಡಗು ಹಾಗೂ ಮಂಗಳೂರಿನ ಕೆಲವು ಕಡೆ ಇಂದು ಮತ್ತು ಬುಧವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಒಂದು ಕಡೆ ಮಳೆ ಬಿಡುವ ನೀಡಿದ ಹಿನ್ನೆಲೆಯಲ್ಲಿ ಹಲವು ನಿರಾಶ್ರಿತರು ತಮ್ಮ ಮನೆಗಳತ್ತ ಆಗಮಿಸುತ್ತಿದ್ದಾರೆ. ಒಂದು ಕಡೆ ಕಾಡು ಪ್ರಾಣಿಗಳು ಗ್ರಾಮಗಳ ಮುಖ ಮಾಡಿದ್ದು, ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

    ಭಾಗಮಂಡಲ ಸಮೀಪದ ತಾವೂರು ಗ್ರಾಮದ ಪುರುಷೋತ್ತಮ್ ಮನೆಯಲ್ಲಿ ಸೋಮವಾರ ರಾತ್ರಿ ಹುಲಿಯೊಂದು ಸಾಕಿದ ನಾಯಿ ಮೇಲೆ ದಾಳಿ ನಡೆಸಿದೆ. ಪರಿಣಾಮ ನಾಯಿ ಗಂಭೀರವಾಗಿ ಗಾಯಗೊಂಡಿದ್ದ ನಾಯಿ ಮೃತ ಪಟ್ಟಿದೆ. ಇದರಿಂದಾಗಿ ಗ್ರಾಮದಲ್ಲಿ ಅತಂಕ ಹೆಚ್ಚಾಗಿದೆ. ಹತ್ತು ದಿನಗಳಿಂದ ಮೂವತ್ತೊಕ್ಲು ಗ್ರಾಮದ ನಿವಾಸಿ ಮುಕ್ಕಾಟಿರ ಉತ್ತಪ್ಪ ಸುಳಿವಿಲ್ಲ. ಮನೆ ಮಣ್ಣಿನೊಂದಿಗೆ ಸುಮಾರು 500 ಮೀಟರ್ ಜರಿದು ಬಂದು ನಿಂತಿದೆ.

    ಒಡೆಯನಿಗಾಗಿ ಮನೆ ಮುಂದೆ ನಾಯಿಯೊಂದು ಸುಳಿದಾಡ್ತಿದೆ. ಈ ಮಧ್ಯೆ ಕೊಡಗು ಮತ್ತು ಕೇರಳ ಗಡಿಬಾಗವಾದ ಕರಿಕೆ ಸಮೀಪದ ಚೇತುಕಾಯ ಗ್ರಾಮದ ಕೇಶವ ನಾಯ್ಕರ ಮನೆ ಹಿಂಬದಿಯಲ್ಲಿ ಭೂಮಿಯೊಳಗೆಯಿಂದ ನೀರಿನ ಶಬ್ಧ ಕೇಳಿ ಬರುತ್ತಿದೆ. ಇದರಿಂದ ಗ್ರಾಮಸ್ಥರು ಅಂಕತಕ್ಕೆ ಒಳಗಾಗಿದ್ದಾರೆ. ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತದಿಂದಾಗಿ ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಮತ್ತೊಮ್ಮೆ ಮಳೆಯಾಗಲಿದೆ. ಈ ಸಂಬಂಧ ಹವಾಮಾನ ಇಲಾಖೆ ಮಂಗಳೂರು ಮತ್ತು ಕೊಡಗು ಜಿಲ್ಲಾಧಿಕಾರಿಗಳಿಗೆ ಮಾಹಿತಿ ರವಾನಿಸಿದೆ.

    ಕೊಡಗು, ಕರಾವಳಿಯಲ್ಲಿ ಮತ್ತೆ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ ಮುಂಜಾಗೃತ ಕ್ರಮವಾಗಿ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇತ್ತ ಮಳೆ, ಪ್ರವಾಹ ಹಿನ್ನೆಲೆಯಲ್ಲಿ ಕೊಡಗಿಗೆ ಆಗಸ್ಟ್ 31ರವರೆಗೆ ಪ್ರವಾಸಿಗರಿಗೂ ನಿರ್ಬಂಧ ವಿಧಿಸಲಾಗಿದೆ.

    ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇರುವುದರಿಂದ ಆಗಸ್ಟ್ 31ರವರೆಗೆ ಕೊಡಗು ಪ್ರವಾಸಕ್ಕೆ ಬರಬೇಡಿ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ. ಒಂದು ವೇಳೆ ಅಧಿಕಾರಗಳ ಆದೇಶವನ್ನು ನಿರಾಕರಿಸಿ ಪ್ರವಾಸಿಗರ ವಾಸ್ತವ್ಯಕ್ಕೆ ಅನುವು ಮಾಡಿಕೊಡುವ ಹೋಟೆಲ್ ರೆಸಾರ್ಟ್ ಮತ್ತು ಹೋಂಸ್ಟೇಗಳ ಮೇಲು ಕೇಸ್ ಹಾಕುವಂತೆ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾನವೀಯತೆ ಮೆರೆದ ಕೊಡಗಿನ ಉಸ್ತುವಾರಿ ಸಚಿವ ಸಾ.ರಾ ಮಹೇಶ್

    ಮಾನವೀಯತೆ ಮೆರೆದ ಕೊಡಗಿನ ಉಸ್ತುವಾರಿ ಸಚಿವ ಸಾ.ರಾ ಮಹೇಶ್

    ಮಡಿಕೇರಿ: ರಸ್ತೆ ಬದಿಯಲ್ಲಿ ಗಾಯಗೊಂಡು ಬಿದ್ದಿದ್ದ ಜಿಂಕೆಯ ರಕ್ಷಣೆಗೆ ಧಾವಿಸುವ ಮೂಲಕ ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್ ಅವರು ಮಾನವೀಯತೆ ಮೆರೆದಿದ್ದಾರೆ.

    ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಬಳಿಕ ಇಂದು ಮೊದಲ ಬಾರಿಗೆ ಮಡಿಕೇರಿಗೆ ಭೇಟಿ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಕುಶಾಲನಗರದ ಸಮೀಪದ ಆನೆಕಾಡು ರಸ್ತೆಯ ಮಾರ್ಗ ಮಧ್ಯೆ ಗಾಯಗೊಂಡು ಒದ್ದಾಡುತ್ತಿದ್ದ ಜಿಂಕೆಯನ್ನ ಸಚಿವರು ಗಮನಿಸಿದ್ದಾರೆ.

    ವಿಚಾರಿಸಿದಾಗ ತಮಿಳುನಾಡು ಮೂಲದ ಟೂರಿಸ್ಟ್ ಗಾಡಿಯೊಂದು ಜಿಂಕೆಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ ಅನ್ನೋ ಮಾಹಿತಿ ಸಿಕ್ಕಿದೆ. ಕೂಡಲೇ ಜಿಂಕೆಯ ರಕ್ಷಣೆಗೆ ಧಾವಿಸಿದ ಸಚಿವರು, ಪರಿಶೀಲನೆ ನಡೆಸಿ ಅರಣ್ಯ ಅಧಿಕಾರಿಗಳಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು. ಅಲ್ಲದೇ ಬಾಯಾರಿದ ಜಿಂಕೆಗೆ ತಮ್ಮ ಬಳಿ ಇದ್ದ ಮಿನರಲ್ ನೀರನ್ನು ಕೈಯಾರೆ ಕುಡಿಸಿದರು.

    ಜಿಂಕೆಯ ಬಲಗಾಲಿನಲ್ಲಿ ರಕ್ತ ಸುರಿಯುತ್ತಿರುವುದನ್ನ ಕಂಡು ಸಚಿವರು ಮರುಕ ವ್ಯಕ್ತಪಡಿಸಿದರು. ಈ ವೇಳೆಯಲ್ಲಿ ಕೊಡಗು ಡಿಸಿ ಶ್ರೀವಿದ್ಯಾ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸಚಿವರಿಗೆ ಸಾಥ್ ನೀಡಿದರು. ಕಷ್ಟದಲ್ಲಿದ್ದ ಜಿಂಕೆಯ ರಕ್ಷಣೆಗೆ ಧಾವಿಸಿದ ಸಚಿವರ ಮಾನವೀಯತೆಯ ನಡೆ ಅಲ್ಲಿ ನೆರೆದಿದ್ದವರ ಪ್ರಶಂಸೆಗೆ ಪಾತ್ರವಾಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • 40ಕ್ಕೂ ಹೆಚ್ಚು ಬಗೆಬಗೆಯ ಖಾದ್ಯ – ಮಡಿಕೇರಿಯಲ್ಲಿ ಸ್ಪೆಷಲ್ ಫುಡ್ ಫೆಸ್ಟ್

    40ಕ್ಕೂ ಹೆಚ್ಚು ಬಗೆಬಗೆಯ ಖಾದ್ಯ – ಮಡಿಕೇರಿಯಲ್ಲಿ ಸ್ಪೆಷಲ್ ಫುಡ್ ಫೆಸ್ಟ್

    ಮಡಿಕೇರಿ: ಕೊಡಗಿನ ಆಹಾರ ಪದ್ಧತಿ ತೀರಾ ಭಿನ್ನವಾಗಿದೆ. ಅಲ್ಲಿ ಮಳೆಗಾಲಕ್ಕಂತಲೇ ಕೆಲವೊಂದು ವಿಶೇಷ ಖಾದ್ಯಗಳನ್ನ ಸೇವಿಸಲಾಗುತ್ತದೆ. ಅಂತಹ ವಿಶೇಷ ಆಹಾರಗಳ ಹಬ್ಬವೊಂದು ಮಡಿಕೇರಿಯಲ್ಲಿ ನಡೆದಿದೆ.

    ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಮಡಿಕೇರಿಯಲ್ಲಿ ಫುಡ್ ಫೆಸ್ಟನ್ನು ಆಯೋಜಿಸಲಾಗಿತ್ತು. ಈ ಆಹಾರ ಮೇಳದಲ್ಲಿ 100ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡು 40ಕ್ಕೂ ಹೆಚ್ಚು ಬಗೆಯ ಸ್ಪೆಷಲ್ ಸ್ವಾದಿಷ್ಟ ಖಾದ್ಯಗಳನ್ನ ಉಣಬಡಿಸಿದ್ದಾರೆ. ಪಂದಿ ಕರಿ, ಕೋಳಿ ಕರಿ, ಕೊಯಿಲೆ ಮೀನ್, ಒಣಕ್ ಯರ್ಚಿ, ಅಡಿಕೆ ಪುಟ್, ಕರ್ಜಿಕಾಯಿ, ಕಾಡ್ ಮಾಂಗೆ, ಕೇಂಬು ಕರಿ, ಇವು ಕೊಡಗಿನಲ್ಲಿ ಸಿಗುವ ವಿಶೇಷ ಖಾದ್ಯಗಳ ಹೆಸರುಗಳಾಗಿವೆ.

    ಭಾಷೆ, ಸಂಸ್ಕೃತಿಯಂತೆ, ಕೊಡಗಿನ ಆಹಾರ ಪದ್ಧತಿ ಕೂಡಾ ಇತರೆಡೆಗಿಂತ ತೀರಾ ಭಿನ್ನವಾಗಿದ್ದು, ಅಲ್ಲಿ ಮಳೆಗಾಲಕ್ಕಂತಲೇ ಕೆಲವೊಂದು ವಿಶೇಷ ಖಾದ್ಯಗಳನ್ನ ಸೇವಿಸಲಾಗುತ್ತದೆ. ಅಂತಹ ವಿಶೇಷ ಆಹಾರಗಳ ಹಬ್ಬವೊಂದು ಮಡಿಕೇರಿಯಲ್ಲಿ ನಡೆದಿದೆ. ಈ ಹಬ್ಬದಲ್ಲಿ ಕೊಡವ ನಾರಿಯರು ರುಚಿ ರುಚಿಯಾದ ಕೂರ್ಗ್ ಸ್ಪೆಷಲ್ ಡಿಷ್ ಗಳನ್ನ ಮಾಡಿ ಗಮನ ಸೆಳೆದಿದ್ದಾರೆ.

    ಮಳೆಗಾಲದಲ್ಲಿ ಕೊಡಗಿನ ಆಹಾರ ಪದ್ಧತಿಯೇ ಸಂಪೂರ್ಣವಾಗಿ ಬದಲಾಗುತ್ತದೆ. ವಿಪರೀತ ಮಳೆ ಹಗೂ ಶೀತ ವಾತಾವರಣವಿರುವುದರಿಂದ ಮಳೆಗಾಲದಲ್ಲಿ ಕೊಡಗಿನ ಜನ ಹೆಚ್ಚು ಉಷ್ಣಾಂಶವುಳ್ಳ ಆಹಾರ ಪಧಾರ್ಥಗಳನ್ನೆ ಸೇವಿಸುತ್ತಾರೆ. ಬಿದಿರಿನ ಕಳಲೆ, ಏಡಿ, ಕೆಸ ಸೊಪ್ಪು, ಅಣಬೆ ಇವೆಲ್ಲಾ ಇಲ್ಲಿನ ಮಳೆಗಾಲದ ಫೆವರೀಟ್ ಆಹಾರ ವಸ್ತುಗಳು, ಇಂತಹ ಸುಮಾರು 40ಕ್ಕೂ ಹೆಚ್ಚು ಬಗೆಯ ಖಾದ್ಯಗಳು ಈ ಮೇಳದಲ್ಲಿ ತಯಾರಾಗಿದ್ದವು, ಹಿಂದಿನ ಕಾಲದ ಆಹಾರ ಪದ್ಧತಿಯನ್ನ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿಶೇಷ ಫುಡ್ ಫೆಸ್ಟ್ ಅನ್ನ ಆಯೋಜಿಸಲಾಗಿತ್ತು. ನೂರಾರು ಮಂದಿ ಪಾಲ್ಗೊಂಡು ಈ ಕೂರ್ಗ್ ಸ್ಪೆಷಲ್ ಫುಡ್ ರುಚಿ ಸವಿದಿದ್ದಾರೆ ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಹೇಳಿದ್ದಾರೆ.

  • ಮಲೆನಾಡು, ಕರಾವಳಿಯಲ್ಲಿ ಬಿರುಸುಗೊಂಡ ಮಳೆರಾಯ- ಎಲ್ಲಿ ಎಷ್ಟು ಮಿಮೀ ಮಳೆಯಾಗಿದೆ?

    ಮಲೆನಾಡು, ಕರಾವಳಿಯಲ್ಲಿ ಬಿರುಸುಗೊಂಡ ಮಳೆರಾಯ- ಎಲ್ಲಿ ಎಷ್ಟು ಮಿಮೀ ಮಳೆಯಾಗಿದೆ?

    ಬೆಂಗಳೂರು:ರಾಜ್ಯದಲ್ಲಿ ಮುಂಗಾರು ಮಳೆ ಇನ್ನಷ್ಟು ಬಿರುಸುಗೊಂಡಿದ್ದು ಇವತ್ತೂ ಕೂಡ ಮಳೆರಾಯನ ಆರ್ಭಟ ಮುಂದುವರೆದಿದೆ.

    ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ರಾಜ್ಯಕ್ಕೆ ವಾಡಿಕೆಯಂತೆ ಆರು ಮೀಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ 12 ಮಿಲಿ ಮೀಟರ್ ಮಳೆಯಾಗಿದ್ದು ಶೇ117 ರಷ್ಟು ಹೆಚ್ಚು ಮಳೆಯಾಗಿದೆ.

    ಇನ್ನೂ ನಾಲ್ಕು ದಿನಗಳ ಕಾಲ ಇದೇ ರೀತಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ಮಾಹಿತಿ ನೀಡಿದೆ.

    ಇಂದು ಕೂಡಗಿನಲ್ಲಿ 136 ಮಿ.ಮೀ, ಚಿಕ್ಕಮಗಳೂರಿನಲ್ಲಿ 65 ಮೀ.ಮೀ ದಕ್ಷಿಣ ಕನ್ನಡದಲ್ಲಿ 100 ಮೀ.ಮೀ. ಶಿವಮೊಗ್ಗದಲ್ಲಿ 208 ಮಿ.ಮೀ ಹಾಸನ 38 ಮಿ.ಮೀ, ಉತ್ತರಕನ್ನಡ 50 ಮಿ.ಮೀ, ಮೈಸೂರು 17 ಮಿಮೀ ನಷ್ಟು ಮಳೆಯಾಗಿದೆ.

    ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾದ ಹಿನ್ನಲೆ ಕೆಆರ್‍ಎಸ್ ನ ಒಳ ಹರಿವು ಹೆಚ್ಚಳ ಕಂಡಿದ್ದು 17,883 ಕ್ಯೂಸೆಕ್ ನಷ್ಟಿದೆ ಹಾಗೂ ಹೊರ ಹರಿವು 342 ಕ್ಯೂಸೆಕ್ ನಷ್ಟಿದೆ. ಒಂದೇ ದಿನದಲ್ಲಿ ಮೂರು ಅಡಿ ನೀರು ಹೆಚ್ಚಳವಾಗಿದೆ. 124.80 ಅಡಿ ಗರಿಷ್ಟ ಮಟ್ಟವನ್ನು ಹೊಂದಿರುವ ಕೆಆರ್‍ಎಸ್ ನಲ್ಲಿ ಸೋಮವಾರ 79.50 ಅಡಿ ನೀರಿದ್ದರೆ ಮಂಗಳವಾರ 82.80 ಅಡಿಗೆ ಏರಿಕೆಯಾಗಿದೆ.