Tag: Cooch Behar

  • ಕೂಚ್ ಬೆಹಾರ್ ಪ್ರತ್ಯೇಕ ರಾಜ್ಯದ ಬೇಡಿಕೆ ಇಡುವವರ ಮೊಣಕಾಲು ಮುರಿಯುತ್ತೇವೆ: ಉದಯನ್ ಗುಹಾ

    ಕೂಚ್ ಬೆಹಾರ್ ಪ್ರತ್ಯೇಕ ರಾಜ್ಯದ ಬೇಡಿಕೆ ಇಡುವವರ ಮೊಣಕಾಲು ಮುರಿಯುತ್ತೇವೆ: ಉದಯನ್ ಗುಹಾ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಗೆ ಪ್ರತ್ಯೇಕ ರಾಜ್ಯ ಸ್ಥಾನಮಾನ ನೀಡುವಂತೆ ಒತ್ತಾಯಿಸುತ್ತಿರುವವರ ಮೊಣಕಾಲು ಮುರಿಯುವುದಾಗಿ ಬೆದರಿಕೆ ಹಾಕುವ ಮೂಲಕ ತೃಣಮೂಲ ಕಾಂಗ್ರೆಸ್ ಶಾಸಕ ಉದಯನ್ ಗುಹಾ ಅವರು ವಿವಾದಕ್ಕೀಡಾಗಿದ್ದಾರೆ.

    ತೂಫಂಗಂಜ್ ಪುರಸಭೆಯಲ್ಲಿ ಆಡಳಿತ ಪಕ್ಷದ ಅಭ್ಯರ್ಥಿಯ ಪರ ಶುಕ್ರವಾರ ಪ್ರಚಾರ ನಡೆಸುವ ವೇಳೆ ಮಾತನಾಡಿದ ಅವರು, ಟಿಎಂಸಿ ಕಾರ್ಯಕರ್ತರ ಮೇಲೆ “ದೌರ್ಜನ್ಯ” ನಡೆಸಿದರೆ ಬಿಜೆಪಿ ನಾಯಕರ ಸ್ನಾಯುಗಳನ್ನು ಮುರಿದು ಕಳುಹಿಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ತುಂಗಾಭದ್ರಾ ಆರತಿಯಿಂದ ಹರಿಹರದ ಗತವೈಭವ ಮರಳಿ ಪಡೆಯುವ ಗುರಿ: ವಚನಾನಂದ ಸ್ವಾಮೀಜಿ

    Udayan Guha

    ಪ್ರತ್ಯೇಕ ಕೂಚ್ ಬೆಹಾರ್ ರಾಜ್ಯದ ಬೇಡಿಕೆಯನ್ನು ಯಾರಾದರೂ ಎತ್ತಿದರೆ, ಅವರ ಮೊಣಕಾಲು ಹಾಗೇ ಇರುವುದಿಲ್ಲ. ಯಾರಾದರೂ ಕೂಚ್ ಬೆಹಾರ್ ರಾಜ್ಯತ್ವವನ್ನು ಬೆಂಬಲಿಸಿ ಪ್ರತಿಭಟನೆ ನಡೆಸಿದರೆ, ನಾವು ಆ ವ್ಯಕ್ತಿಯ ಮೊಣಕಾಲು ಮುರಿಯುತ್ತೇವೆ ಎಂದಿದ್ದಾರೆ.

    ಉದಯನ್ ಗುಹಾ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕಿ ಮಾಲತಿ ರಾವಾ ಅವರು, ಉದಯನ್ ಗುಹಾಗೆ ನನ್ನ ಕಾಲು ಮುರಿಯುವ ಧೈರ್ಯವಿದೆ. ಶೀಘ್ರದಲ್ಲೇ ನಾವು ಅವರ ಕ್ಷೇತ್ರದಲ್ಲಿ ರ್‍ಯಾಲಿ ನಡೆಸುತ್ತೇವೆ. ಯಾರು ಯಾರ ಕೈಕಾಲು ಮುರಿಯುತ್ತಾರೆ ಎಂಬುದನ್ನು ನೋಡೋಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಜಕೀಯಕ್ಕೆ ಬರ್ತಾರಾ ನಿರ್ದೇಶಕ ಪ್ರೇಮ್..?

  • ಬಂಗಾಳದಲ್ಲಿ ನಾಲ್ಕನೇ ಹಂತದ ಮತದಾನ – ಗುಂಡೇಟಿಗೆ ನಾಲ್ವರು ಬಲಿ

    ಬಂಗಾಳದಲ್ಲಿ ನಾಲ್ಕನೇ ಹಂತದ ಮತದಾನ – ಗುಂಡೇಟಿಗೆ ನಾಲ್ವರು ಬಲಿ

    – ಆರೋಪ, ಪ್ರತ್ಯಾರೋಪದಲ್ಲಿ ಟಿಎಂಸಿ, ಬಿಜೆಪಿ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಾಲ್ಕನೇ ಹಂತದ ಮತದಾನದ ವೇಳೆ ನೆತ್ತರು ಚೆಲ್ಲಿದೆ. ಬಂಗಾಳದ ಕೂಚ್‍ಬೆಹಾರದ ಮತಗಟ್ಟೆ ಮುಂಭಾಗ ಗೋಲಿಬಾರ್ ನಡೆದಿದ್ದು, ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ.

    ನಡೆದಿದ್ದೇನು?: ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ಸಿಟಾಲ್ಕು ಚಿಯಾಟ್‍ನ ಮತದಾನದ ಕೇಂದ್ರದಲ್ಲಿ ಅಪರಿಚಿತರು ಕ್ಯೂಆರ್‍ಟಿ (ಕ್ವಿಕ್ ರೆಸ್ಪಾನ್ಸ್ ಟೀಂ) ತಂಡದ ಮೇಲೆ ಹಲ್ಲೆ ನಡೆಸಿದ್ದಾರೆ. ಅಪರಿಚಿತರು ಕ್ಯೂಆರ್‍ಟಿ ವಾಹನ ಧ್ವಂಸಗೊಳಿಸಲು ಮುಂದಾಗಿ, ಗನ್ ಕಸಿದುಕೊಳ್ಳಲು ಪ್ರಯತ್ನಿಸಿದ್ದರು. ಅಪರಿಚಿತರ ಚಲನವಲನ ಗಮನಿಸಿ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಈ ಗುಂಡಿನ ದಾಳಿ ವೇಳೆ ನಾಲ್ವರು ಮೃತಪಟ್ಟಿದ್ದಾರೆ. ಮೃತರನ್ನ ಹಮಿದುಲ್ ಹಕ್, ಮನಿರೂಲ್ ಹಕಂ ಸಮಿಯುಲ್ ಹಕ್ ಮತ್ತು ಅಜ್ಮದ್ ಹುಸೈನ್ ಎಂದು ಗುರುತಿಸಲಾಗಿದ್ದು, ಮತ್ತೋರ್ವ ಗುರುತು ಪತ್ತೆಯಾಗಿಲ್ಲ.

    ಎಡಿಜಿ ಸ್ಪಷ್ಟನೆ: ಗೋಲಿಬಾರ್ ಸಂಬಂಧ ಒಂದು ಗಂಟೆಯಲ್ಲಿ ಪ್ರಾಥಮಿಕ ವರದಿ ನೀಡುವಂತೆ ಚುನಾವಣಾ ಆಯೋಗ ಕೂಚಿಬೆಹಾರನ ಡಿಇಓಗೆ ಸೂಚನೆ ನೀಡಿದೆ. ಪಶ್ಚಿಮ ಬಂಗಾಳದ ಎಡಿಜಿ ಜಗಮೋಹನ್ ನಾಲ್ವರು ಮೃತಪಟ್ಟಿರೋದನ್ನು ಖಚಿತ ಪಡಿಸಿದ್ದಾರೆ. ಅಪರಿಚಿತರು ಸಿಬ್ಬಂದಿ ಮೇಲೆ ದಾಳಿಗೆ ಯತ್ನಿಸಿದಾಗ ಸಿಐಎಸ್‍ಎಫ್ ನ ಸೈನಿಕರು ಗುಂಡು ಹಾರಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ಗುಂಡು ಹಾರಿಸ್ತೀರಾ?: ಈ ಕುರಿತು ಟಿಎಂಸಿ ಸಂಸದ ಡೆರೆಕೆ ಓ ಬ್ರಾಯನ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ನೀವು ನಮ್ಮನ್ನ ಸೋಲಿಸಲು ಆಗದ್ದಕ್ಕೆ, ಗುಂಡು ಹಾರಿಸ್ತೀರಾ? ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಫೈರಿಂಗ್ ನಡೆದಿದೆ ಎಂದು ಆರೋಪಿಸಿದ್ದಾರೆ. ಚುನಾವಣಾ ಆಯೋಗ ಕೆಲ ದಿನಗಳ ಹಿಂದೆ ಇಲ್ಲಿಯ ಡಿಜಿ, ಎಡಿಜಿ ಮತ್ತು ಗೋಲಿಬಾರ್ ನಡೆದ ಸ್ಥಳದ ಎಸ್‍ಪಿಯನ್ನ ಸಹ ಬದಲಿಸಿತ್ತು ಎಂದು ಆರೋಪಿಸಿದ್ದಾರೆ.

    ಮತ್ತೋರ್ವ ಟಿಎಂಸಿ ಸಂಸದ ಮಹುವಾ ಮೊಯಿತ್ರಾ, ಸಿಎಪಿಎಫ್ ನವರು ನಾಲ್ವರನ್ನ ಕೊಲೆ ಮಾಡಿದ್ದಾರೆ. ಇದಕ್ಕೆ ಚುನಾವಣಾ ಆಯೋಗವೇ ಕಾರಣ. ಮೋದಿ-ಅಮಿತ್ ಶಾ ಫೋರ್ಸ್ ನಿಯಂತ್ರಣ ಮಾಡಲು ಆಗದವರು. ಈ ಗೊಂಬೆಗಳನ್ನ ಸದನದಲ್ಲಿ ತೋರಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪ್ರಧಾನಿ ಮೋದಿ ಪ್ರತಿಕ್ರಿಯೆ: ಸಿಲಿಗುಡಿ ಬಿಜೆಪಿ ರ್ಯಾಲಿಯಲ್ಲಿ ಕೂಚ್‍ಬೆಹರಾ ಗೋಲಿಬಾರ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದರು. ದೀದಿ ಮತ್ತು ಅವರ ಗೂಂಡಾಗಳು ಬಿಜೆಪಿಯ ಗೆಲುವನ್ನು ಕಂಡು ಚಡಪಡಿಸುತ್ತಿದ್ದಾರೆ. ಹಾಗಾಗಿ ಚುನಾವಣೆಯಲ್ಲಿ ಹಿಂಸೆಯ ಮೊರೆ ಹೋಗಿದ್ದಾರೆ. ಆದ್ರೆ ಈ ಹಿಂಸೆ ಬಂಗಾಲದಿಂದ ದೀದಿಯನ್ನ ಹೊರ ಕಳುಹಿಸೋದರಿಂದ ತಡೆಯಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.

  • ಬಿಜೆಪಿ ರ‍್ಯಾಲಿ ಮಾಡಿದ್ದ ಜಾಗವನ್ನು ಗಂಗಾಜಲ ಹಾಕಿ ಶುದ್ಧ ಮಾಡಿದ್ರು!

    ಬಿಜೆಪಿ ರ‍್ಯಾಲಿ ಮಾಡಿದ್ದ ಜಾಗವನ್ನು ಗಂಗಾಜಲ ಹಾಕಿ ಶುದ್ಧ ಮಾಡಿದ್ರು!

    ಕೋಲ್ಕತ್ತ: ಪಶ್ಚಿಮ ಬಂಗಾಳದ ಕೂಚ್ ಬೆಹರ್ ನಲ್ಲಿ ಬಿಜೆಪಿ ನಡೆಸಿದ್ದ ರ‍್ಯಾಲಿಯ ಬಳಿಕ ತೃಣಮೂಲ ಕಾಂಗ್ರೆಸ್(ಟಿಎಂಸಿ) ಕಾರ್ಯಕರ್ತರು ಗಂಗಾಜಲವನ್ನು ಹಾಕಿ ಶುದ್ಧಿಗೊಳಿಸಿದ್ದಾರೆ.

    ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧದ ನಡುವೆಯೂ ಬಿಜೆಪಿ ಕೂಚ್ ಬೆಹರ್ ನಲ್ಲಿ ಅದ್ಧೂರಿಯಾಗಿ ರ‍್ಯಾಲಿಯನ್ನು ಕೈಗೊಂಡಿತ್ತು. ಆದರೆ ಇಂದು ಟಿಎಂಸಿ ಕಾರ್ಯಕರ್ತರು ಗಂಗಾಜಲವನ್ನು ಸುರಿದು, ಸ್ವಚ್ಛ ಮಾಡುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳಿಯ ಟಿಎಂಸಿ ಮುಖಂಡ ಪಂಕಜ್ ಘೋಷ್, ಬಿಜೆಪಿಯವರು ಇಲ್ಲಿ ಧರ್ಮದ ಸಂದೇಶವನ್ನು ನೀಡಿದ್ದಾರೆ. ಹೀಗಾಗಿ ಈ ಸ್ಥಳವನ್ನು ಶುದ್ಧೀಕರಿಸಿದ್ದೇವೆ. ಇದು ಮದನ್ ಮೋಹನ್‍ರ ದೇವರ ನಾಡು. ಹೀಗಾಗಿ ಹಿಂದೂ ಸಂಪ್ರದಾಯದಂತೆ ನಾವು ಈ ಸ್ಥಳವನ್ನು ಶುದ್ಧ ಮಾಡಿದ್ದೇವೆ. ಇಲ್ಲಿ ಮದನ್ ಮೋಹನ್ ದೇವರ ರಥವನ್ನು ಬಿಟ್ಟು, ಯಾವುದೇ ರಥವನ್ನು ಹೋಗಲು ಬಿಡುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿ, ರಥಯಾತ್ರೆ ಸಾಗಿದ ದಾರಿಯನ್ನು ಶುದ್ಧಗೊಳಿಸಿ, ಏಕತಾ ಯಾತ್ರೆ ಕೈಗೊಳ್ಳುವಂತೆ ನನ್ನ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದೇನೆ. ಅಲ್ಲದೇ ಫೈವ್ ಸ್ಟಾರ್ ಸೌಲಭ್ಯ ಹೊಂದಿರುವ ರಥ ಯಾತ್ರೆಯಾದರೂ ಏನು? ಅದು ರಾವಣ ಯಾತ್ರೆಯೇ ಹೊರತು ರಥ ಯಾತ್ರೆಯಲ್ಲ ಎಂದು ಕಿಡಿಕಾರಿದ್ದಾರೆ.

    ಟಿಎಂಸಿ ಕಾರ್ಯಕರ್ತರ ವರ್ತನೆಯನ್ನು ಸ್ಥಳೀಯ ಬಿಜೆಪಿ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲುತ್ತೇವೆಂಬ ಭೀತಿಯಿಂದ ಈ ರೀತಿ ಮಾಡಿದ್ದಾರೆಂದು ತಿರುಗೇಟು ನೀಡಿದ್ದಾರೆ.

    ಬಿಜೆಪಿ ರಾಷ್ಟ್ರಾಧ್ಯಕ್ಷ ಅಮೀತ್ ಶಾ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 42 ಕ್ಷೇತ್ರಗಳಲ್ಲಿಯೂ ರಥಯಾತ್ರೆ ನಡೆಸುವ ಬಗ್ಗೆ ತೀರ್ಮಾನ ಕೈಗೊಂಡಿದ್ದರು. ಪ್ರಮುಖವಾಗಿ ಶನಿವಾರದಂದು ಕೂಚ್ ಬೆಹರ್ ನಲ್ಲಿ ನಡೆಯಬೇಕಿದ್ದ ರಥಯಾತ್ರೆಗೆ ಕೋಲ್ಕತ್ತ ಹೈಕೋರ್ಟ್ ತಡೆ ನೀಡಿತ್ತು. ಹೀಗಾಗಿ ಬಿಜೆಪಿ ಶನಿವಾರ ರ‍್ಯಾಲಿಯನ್ನು ಮಾತ್ರವೇ ಹಮ್ಮಿಕೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv