Tag: Convicted

  • ದೇಶದ ಬದ್ಧತೆಗೆ ಧಕ್ಕೆ ತಂದವರು ದೇಶ ದ್ರೋಹಿಗಳೇ: ಕಾರಜೋಳ

    ದೇಶದ ಬದ್ಧತೆಗೆ ಧಕ್ಕೆ ತಂದವರು ದೇಶ ದ್ರೋಹಿಗಳೇ: ಕಾರಜೋಳ

    ಚಿಕ್ಕೋಡಿ(ಬೆಳಗಾವಿ): ದೇಶದ ಏಕತೆ ಹಾಗೂ ಬದ್ಧತೆಗೆ ಧಕ್ಕೆ ತಂದರೆ ಅವರು ದೇಶ ದ್ರೋಹಿಗಳೇ. ಅವರು ಯಾವುದೇ ಸಮುದಾಯದವರು ಆಗಲಿ, ಅವರು ದೇಶ ದ್ರೋಹಿಗಳೇ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

    ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಬಾಂಬರ್ ಆದಿತ್ಯ ರಾವ್ ಬಗ್ಗೆ ಮಾತನಾಡಿದ ಅವರು, ತಪ್ಪು ಮಾಡಿದವರಿಗೆ ಕಾನೂನಿನ ಪ್ರಕಾರ ಶಿಕ್ಷೆ ಆಗಲಿದೆ. ಆದಿತ್ಯ ರಾವ್, ಪ್ರಭಾಕರ್ ಭಟ್ ಜೊತೆಗಿನ ಫೋಟೋ ವಿಚಾರವಾಗಿ ಮಾತನಾಡಿದ ಅವರು, ಕರ್ನಾಟಕದಲ್ಲಿ ನನ್ನೊಂದಿಗೂ ಬಹಳ ಜನ ಫೋಟೋ ತೆಗೆದುಕೊಂಡಿದ್ದಾರೆ. ಅವರು ಏನಾದರೂ ಮಾಡಿದರೆ ನಾನು ಜವಾಬ್ದಾರಿ ಆಗ್ತೀನಾ ಎಂದು ಪ್ರಶ್ನಿಸಿದರು.

    ಇದೇ ವೇಳೆ ಪ್ರವಾಹ ಸಂತ್ರಸ್ತರ ವಿಚಾರವಾಗಿ ಮಾತನಾಡಿದ ಅವರು, ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೊಡುವ ವಿಚಾರಕ್ಕೆ ಸರ್ಕಾರ ಬದ್ಧವಾಗಿದೆ. ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ ಎಂಬ ಆರೋಪ ಸುಳ್ಳು. ಕೇಂದ್ರಕ್ಕಿಂತ ಹೆಚ್ಚುವರಿಯಾಗಿ ಪರಿಹಾರ ಕೊಡುತ್ತಿದ್ದೇವೆ. ಎನ್.ಡಿ.ಆರ್.ಎಫ್ ಮಾನದಂಡಕ್ಕಿಂತ ಹೆಚ್ಚು ಪರಿಹಾರ ಕೊಟ್ಟಿದ್ದೇವೆ. ಕೆಲವೆಡೆ ತಾಂತ್ರಿಕ ತೊಂದರೆಯಿಂದಾಗಿ ಪರಿಹಾರ ವಿಳಂಬ ಆಗಿದೆ. ಆದರೆ ನೆರೆ ಪರಿಹಾರ ವಿಷಯದಲ್ಲಿ ಯಾವುದೇ ತಾರತಮ್ಯ ಇಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.

    ಇದೇ ವೇಳೆ ಪರಿಹಾರ ವಿಚಾರವಾಗಿ ಡಿಸಿಎಂ ಕಾರಿಜೋಳ ಬೆಳಗಾವಿ ಜಿಲ್ಲಾಧಿಕಾರಿಗೆ ಕರೆ ಮಾಡಿ ತಕ್ಷಣವೇ ಬಾಕಿ ಇರುವ ಸಂತ್ರಸ್ತರ ಪರಿಹಾರ ಬಿಡುಗಡೆ ಮಾಡುವಂತೆ ಸೂಚನೆ ನೀಡಿದರು.

  • ಸೇಲ್ಸ್‌ಗರ್ಲ್‌ ಮೇಲೆ ಅತ್ಯಾಚಾರಕ್ಕೆ ಯತ್ನ, ಆರೋಪಿ ಬಂಧನ

    ಸೇಲ್ಸ್‌ಗರ್ಲ್‌ ಮೇಲೆ ಅತ್ಯಾಚಾರಕ್ಕೆ ಯತ್ನ, ಆರೋಪಿ ಬಂಧನ

    ಆನೇಕಲ್: ಉತ್ಪನ್ನಗಳನ್ನು ಮಾರಾಟ ಮಾಡಲು ಬಂದಿದ್ದ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಹೊಸಕೋಟೆ ತಾಲ್ಲೂಕಿನ ಬೈಲ ನರಸಾಪುರ ಪ್ರದೇಶದ ಬಳಿ ನಡೆದಿದೆ.

    ತಾಲ್ಲೂಕಿನ ಗಂಗಾಪುರ ಗ್ರಾಮದ ನಿವಾಸಿ ರಮೇಶ್ (40) ಬಂಧಿತ ಆರೋಪಿಯಾಗಿದ್ದು, ನಿನ್ನೆ ಸಂಜೆ ಬೈಲ ನರಸಾಪುರ ಬಳಿ ಘಟನೆ ನಡೆದಿದೆ.

    ಏನಿದು ಪ್ರಕರಣ?
    ಬೈಲ ನರಸಾಪುರದಲ್ಲಿ ಸಾಮಾಗ್ರಿಗಳನ್ನು ಮಾರಾಟ ಮಾಡಲು ಯುವತಿ ಆಗಮಿಸಿದ್ದಳು. ಸಂಜೆಯಾಗಿದ್ದರಿಂದ ಮರಳಿ ಮನೆಗೆ ಹೊರಡಲು ಸಿದ್ಧರಾಗಿ ಬಸ್ಸಿಗೆ ಕಾಯುತ್ತಿದ್ದಳು. ಆದರೆ ಬಸ್ ಬಾರದ ಕಾರಣ ಯುವತಿ ಟಿವಿಎಸ್ ಬೈಕಿನಲ್ಲಿ ಬರುತ್ತಿದ್ದ ಆರೋಪಿಯ ಬಳಿ ಡ್ರಾಪ್ ಕೇಳಿದ್ದಳು. ಯುವತಿಯನ್ನು ಬೈಕ್ ಹತ್ತಿಸಿಕೊಂಡಿದ್ದ ಆರೋಪಿ ರಮೇಶ್ ಬೈಲನರಸಾಪುರದಿಂದ ಗಂಗಾಪುರಕ್ಕೆ ಹೋಗುವ ಮಾರ್ಗವಾಗಿ ಮುಖ್ಯರಸ್ತೆಗೆ ಆಗಮಿಸಿ ಆ ಬಳಿಕ ಅಲ್ಲಿಂದ ಅಡ್ಡ ದಾರಿ ಇದೆ ಬೇಗ ಹೋಗಬಹುದು ಎಂದು ಕರೆದುಕೊಂಡು ಹೋಗಿದ್ದಾನೆ.

    ಮುಖ್ಯರಸ್ತೆ ಇಂದ ಆರೋಪಿ ಯುವತಿಯನ್ನ ತಮ್ಮದೇ ತೋಟದ ಪಂಪ್ ಹೌಸ್ ಬಳಿ ಕರೆದುಕೊಂಡು ಬಂದಿದ್ದು, ಅಲ್ಲಗೆ ಬರುತ್ತಿದಂತೆ ಯುವತಿಯ ಕತ್ತಿನ ಮೇಲೆ ಕುಡುಗೋಲಿನಿಂದ ಹಲ್ಲೆಗೆ ಮುಂದಾಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಹಂತದಲ್ಲಿ ಆರೋಪಿಯಿಂದ ತಪ್ಪಿಸಿಕೊಂಡ ಯುವತಿ ಗ್ರಾಮದ ಕಡೆ ಓಡಿ ಬಂದಿದ್ದು, ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಘಟನೆ ಬಗ್ಗೆ ಯುವತಿ ನಂದಗುಡಿ ಪೊಲೀಸರಿಗೆ ದೂರು ನೀಡಿದ್ದು, ದೂರು ಪಡೆದ ಪೊಲೀಸರು ಆರೋಪಿ ರಮೇಶ್ ನನ್ನ ಬಂಧಿಸಿ ತನಿಖೆ ಆರಂಭಿಸಿದ್ದಾರೆ.