Tag: Convert

  • ಲವ್ ಜಿಹಾದ್ ಭಯೋತ್ಪಾದನೆಯ ಮತ್ತೊಂದು ಮುಖ: ಶೋಭಾ ಕರಂದ್ಲಾಜೆ

    ಲವ್ ಜಿಹಾದ್ ಭಯೋತ್ಪಾದನೆಯ ಮತ್ತೊಂದು ಮುಖ: ಶೋಭಾ ಕರಂದ್ಲಾಜೆ

    – ಮತಾಂತರ ನಿಷೇಧ ಕಾಯ್ದೆಯ ಅಗತ್ಯವಿದೆ

    ಚಿಕ್ಕಮಗಳೂರು: ಲವ್ ಜಿಹಾದ್ ಹೆಸರಲ್ಲಿ ದೇಶದಲ್ಲಿ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಲವ್ ಜಿಹಾದ್ ಈಗ ಕೇವಲ ಪ್ರೀತಿ-ಪ್ರೇಮ-ಮದುವೆಯಾಗಿ ಉಳಿದಿಲ್ಲ, ಇದು ಭಯೋತ್ಪಾದನೆ ಮತ್ತೊಂದು ಮುಖವಾಗಿದ್ದು, ಒಂದು ಕೋಮಿನ ಜನಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಲವ್ ಜಿಹಾದ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ನಗರದ ನಗರಸಭೆಯಲ್ಲಿ ಮಾತನಾಡಿದ ಅವರು, ಅವರೇ ಬೇರೆ-ಬೇರೆ ಭಾಗದಲ್ಲಿ ಅವರ ಪ್ರಾರ್ಥನಾಲಯದಲ್ಲಿ ಭಾಷಣ ಮಾಡಿರುವುದು, ಮಾತನಾಡಿರುವುದು ಈಗ ಬೆಳಕಿಗೆ ಬರುತ್ತಿದೆ. ಓವೈಸಿ ರೀತಿಯ ಕೋಮುವಾದಿಗಳು ಇದನ್ನು ಓಪನ್ ಆಗಿ ಮಾತನಾಡುವಂತದ್ದು ಆರಂಭವಾಗಿದೆ. ನಿನ್ನೆ ಕೂಡ ಉಡುಪಿಯಲ್ಲಿ 17 ವರ್ಷದ ಮೈನರ್ ಯುವತಿಯನ್ನ ಯುವಕ ಕರೆದುಕೊಂಡು ಹೋಗಿ ನಾಪತ್ತೆಯಾಗಿದ್ದಾನೆ ಎಂದರು.

    ಇದರ ಹಿಂದೆಯೂ ವ್ಯವಸ್ಥಿತ ಷಡ್ಯಂತ್ರ ನಡೆದಿದೆ. ಮೊದಲೇ ಪ್ಲ್ಯಾನ್ ಆಗಿದೆ. ಮೊಬೈಲ್ ಮನೆಯಲ್ಲೇ ಬಿಟ್ಟು ಹೋಗಬೇಕು. ಯಾವ ಬಸ್ಸಲ್ಲಿ ಹೋಗಬೇಕು. ಯಾವ ಕಾರಲ್ಲಿ ಹೋಗಬೇಕು. ರಾಜ್ಯದ ಬಾರ್ಡರ್ ಗೆ ಎಲ್ಲಿಗೆ ಹೋಗಬೇಕು. ಎಲ್ಲ ವ್ಯವಸ್ಥಿತ ಷಡ್ಯಂತ್ರ ಮಾಡಿದ್ದಾರೆ. ಚಿಕ್ಕ-ಚಿಕ್ಕ ಹೆಣ್ಣು ಮಕ್ಕಳನ್ನು ಪ್ರಚೋದನೆಗೆ ಒಳಪಡಿಸಿ ಹಣದ ಆಮಿಷ ತೋರಿಸಿ ಲವ್ ಜಿಹಾದ್ ಹೆಸರಲ್ಲಿ ಸಮಾಜ ಪರಿವರ್ತನೆಯ ಒಂದು ಷಡ್ಯಂತ್ರ ನಡೆಯುತ್ತಿದೆ. ಆದ್ದರಿಂದ ಕರ್ನಾಟಕದ ಕರಾವಳಿ ಭಾಗ ಹಾಗೂ ಬೆಂಗಳೂರು ಸೇರಿದಂತೆ ಬೇರೆ-ಬೇರೆ ಭಾಗದಲ್ಲಿ ಈ ರೀತಿಯ ಷಡ್ಯಂತ್ರ ತಡೆಯಬೇಕು. ಲವ್ ಜಿಹಾದ್ ತಡೆಯಬೇಕು ಅಂದ್ರೆ ಕಠಿಣ ಮತಾಂತರ ನಿಷೇಧ ಕಾಯ್ದೆಯ ಅಗತ್ಯ ಇದೆ ಎಂದಿದ್ದಾರೆ.

    ಕರ್ನಾಟಕದಲ್ಲಿ ಅತ್ಯಂತ ವೇಗವಾಗಿ ಈ ಕೆಲಸ ನಡೆಯಬೇಕಿದೆ. ಹಣದ ಆಮಿಷದಲ್ಲಿ ಏನು ಬೇಕಾದರೂ ಮಾಡಬಹುದು ಎಂಬ ಕುತಂತ್ರವನ್ನು ಒಂದು ಕೋಮಿನ ಜನ ಮಾಡುತ್ತಿದ್ದಾರೆ. ನಮ್ಮ ಹೆಣ್ಣು ಮಕ್ಕಳ ಇದಕ್ಕೆ ಬಲಿಯಾಗುತ್ತಿರುವ ಸಂದರ್ಭದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಆದಷ್ಟು ಬೇಗ ಜಾರಿಗೆ ತರಬೇಕು. ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಯಾವುದನ್ನ ಮಾಡಲು ಸಾಧ್ಯವಿದೆಯೋ ಅದನ್ನ ಕರ್ನಾಟಕದಲ್ಲೂ ಮಾಡಲು ಸಾಧ್ಯವಿದೆ, ಆದಷ್ಟು ಬೇಗ ಸರ್ಕಾರ ಈ ಕೆಲಸವನ್ನ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

    ತಮಿಳುನಾಡು, ಕೇರಳದ ಗಡಿ ಇರುವಾಗ ಬಹಳ ದೊಡ್ಡ ಪ್ರಮಾಣದಲ್ಲಿ ನಮ್ಮ ಹೆಣ್ಣು ಮಕ್ಕಳನ್ನು ಕೇರಳದ ಪೊನ್ನಾಣಿ, ಮಣಪ್ಪುರಂಗೆ ಸಾಗಿಸುವುದು ಬೆಳಕಿಗೆ ಬರುತ್ತಿದೆ. ಆದ್ದರಿಂದ ಆದಷ್ಟು ಬೇಗ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದ್ದಾರೆ.

  • ಮತಾಂತರ ಆಗಿದ್ದಾರಾ ಗಂಡ-ಹೆಂಡತಿ ನಟಿ ಸಂಜನಾ

    ಮತಾಂತರ ಆಗಿದ್ದಾರಾ ಗಂಡ-ಹೆಂಡತಿ ನಟಿ ಸಂಜನಾ

    ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿ ಮತಾಂತರ ಆಗಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

    ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ಅವರ ಹೆಸರು ಕೇಳಿ ಬಂದ ಸಮಯದಿಂದಲೂ ಅವರ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದೆ. ಬಂಧನದ ಮುನ್ನ 32 ವರ್ಷವಾದರೂ ಇನ್ನು ಮದುವೆಯೇ ಆಗಿಲ್ಲ. ನನ್ನ ಕಾರೆಕ್ಟರ್ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸಂಜನಾ ಆರೋಪಿಸಿದ್ದರು. ಆದರೆ ಆ ಬಳಿಕ ಅವರು ವೈದ್ಯರೊಬ್ಬರನ್ನು ಕಳೆದ ವರ್ಷವೇ ಮದುವೆಯಾಗಿದ್ದರು ಎಂಬ ಫೋಟೋ ಸಾಕಷ್ಟು ವೈರಲ್ ಆಗಿತ್ತು.

    ಸದ್ಯ ಸಂಜನಾ ಗಲ್ರಾನಿ ಅವರು ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎನ್ನಲಾಗಿದೆ. ಡಾ. ಅಜೀವ್ ಪಾಷಾ ಅವರ ಪರಿಚಯವಾದ ಬಳಿಕ ಪ್ರೇಮ ಪಾಶಕ್ಕೆ ಸಿಲುಕಿದ್ದ ಸಂಜನಾ ಅವರು ಮತಾಂತರವಾದ ಆಗಿ ಅವರನ್ನು ಮದುವೆಯಾಗಿದ್ದರು ಎಂಬ ಮಾಹಿತಿ ಪೊಲೀಸ್ ಉನ್ನತ ಮೂಲಗಳಿಂದ ಲಭಿಸಿದೆ. ಮದುವೆಯಾದ ಬಳಿಕ ಕೆಲ ಸಮಯ ವೈದ್ಯರೊಂದಿಗೆ ವಾಸವಿದ್ದ ಅವರು 7 ತಿಂಗಳ ಹಿಂದೆಯಷ್ಟೇ ಇಬ್ಬರ ನಡುವೆ ವೈಮನಸ್ಸು ಮೂಡಿದ್ದ ಕಾರಣದಿಂದ ದೂರವಾಗಿದ್ದರು. ಚಿತ್ರರಂಗದಲ್ಲಿ ಇರುವ ಕಾರಣ ತಮ್ಮ ಮದುವೆ ಹಾಗೂ ಮತಾಂತರದ ಮಾಹಿತಿಯನ್ನು ಮುಚ್ಚಿಟ್ಟಿದ್ದರು ಎನ್ನಲಾಗಿದೆ. ಇದನ್ನೂ ಓದಿ: ನನಗೆ ಸಿಗರೇಟ್ ಕೊಡಿ- ಜೈಲಿನಲ್ಲಿ ಸಂಜನಾ ಮತ್ತೆ ಕಿರಿಕ್

    ಸಂಜನಾ ಮದುವೆಯಾಗಿರುವುದು ಅಧಿಕೃತ ಮಾಹಿತಿ ಲಭಿಸಿಲ್ಲ. ಆದರೆ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ರಾಹುಲ್ ತಂದೆ ರಾಮಚಂದ್ರ ಅವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡುವ ವೇಳೆ ಸಂಜನಾ ಪತಿಯ ವಿಚಾರವನ್ನು ಪ್ರಸ್ತಾಪಿಸಿದ್ದರು. ನನಗೆ ಹೃದಯ ಸಂಬಂಧಿ ಖಾಯಿಲೆ ಇದೆ. ಸಂಜನಾ ಪತಿಯೇ ನನಗೆ ಚಿಕಿತ್ಸೆ ನೀಡಿದ್ದರು. ಸಂಜನಾ ಪತಿ ಕೂಡ ನನ್ನ ಮಗ ರಾಹುಲ್‍ಗೆ ಪರಿಚಯವಿದ್ದು, ಸಂಜನಾ ಪತಿ ಡಾಕ್ಟರ್ ಆಗಿದ್ದು ನನಗೆ ಸಹಾಯ ಮಾಡಿದ್ರು ಎಂದು ಹೇಳಿದ್ದರು. ಇದನ್ನೂ ಓದಿ: ಡ್ರಗ್ಸ್ ಪ್ರಕರಣ – ಅಕುಲ್ ಬಾಲಾಜಿಗೆ ಸಿಸಿಬಿ ನೋಟಿಸ್

    ತೆಲುಗು ಕಾರ್ಯಕ್ರಮ ಸಂದರ್ಶನವೊಂದರಲ್ಲಿ 2018ರಲ್ಲಿ ಮಾತನಾಡಿದ್ದ ಸಂಜನಾ ತಮ್ಮ ಪ್ರೀತಿಯ ಬಗ್ಗೆ ಹೇಳಿದ್ದರು. ನಾನು ಪ್ರೀತಿಸುತ್ತಿರುವ ಹುಡುಗ ಡಾಕ್ಟರ್ ಆಗಿದ್ದು, ನನ್ನ ಕುಟುಂಬದವರಿಗೂ ಪರಿಚಯವಿದೆ. ಮನೆಗೂ ಬಂದು ಹೋಗುತ್ತಾರೆ. ಬೆಂಗಳೂರಿನ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಅವರನ್ನು ಪರಿಚಯವಾಗಿದ್ದರು. ನನ್ನ ವೃತ್ತಿ ಜೀವನದ ಆರಂಭದಲ್ಲಿ ಈವೆಂಟ್ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ವೇಳೆ ಅವರನ್ನು ನೋಡಿದ್ದೆ, ಮೊದಲ ನೋಟದಲ್ಲೇ ಅವರ ಮೇಲೆ ಪ್ರೀತಿ ಮೂಡಿತ್ತು ಎಂದು ಸಂಜನಾ ಹೇಳಿದ್ದರು. ಇದನ್ನೂ ಓದಿ: ಜೈಲಿನಲ್ಲಿ ಸೊಳ್ಳೆ ಕಚ್ತಿದೆಂದು ನಿದ್ರಿಸದೆ ಸಂಜನಾ ರಂಪಾಟ!

  • ಕ್ರಿಶ್ಚಿಯನ್ನರಿಂದ ಲಂಬಾಣಿ ಸಮುದಾಯದವರ ಮತಾಂತರ ಆರೋಪ

    ಕ್ರಿಶ್ಚಿಯನ್ನರಿಂದ ಲಂಬಾಣಿ ಸಮುದಾಯದವರ ಮತಾಂತರ ಆರೋಪ

    ಬಾಗಲಕೋಟೆ: ಪ್ರಾರ್ಥನೆ ಮಾಡುವ ನೆಪದಲ್ಲಿ ಮತಾಂತರಕ್ಕೆ ಪ್ರೇರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕ್ರಿಶ್ಚಿಯನ್ ಮಿಷನರಿ ಸಿಬ್ಬಂದಿಯನ್ನು ಲಂಬಾಣಿ ಸಮುದಾಯದ ಮುಖಂಡರು ತರಾಟೆ ತೆಗೆದುಕೊಂಡ ಘಟನೆ ನಗರದ ಬಿಲಾಲ್ ಮಸ್ಜಿದ್ ಬಡಾವಣೆ ಬಳಿ ನಡೆದಿದೆ.

    ಪ್ರಾರ್ಥನೆ ನೆಪದಲ್ಲಿ ಲಂಬಾಣಿ ಸಮುದಾಯದ ಮಹಿಳೆಯರ ಮತಾಂತರಕ್ಕೆ ಪ್ರೇರೇಪಿಸುತ್ತಿದ್ದರು ಎನ್ನಲಾಗಿದ್ದು, ಮನೆಯಲ್ಲಿ ಬೈಬಲ್ ಓದಿಸುವ ಮೂಲಕ ಪ್ರಾರ್ಥನೆ ಮಾಡಿಸಲಾಗುತ್ತಿತ್ತು. ಬ್ಲೆಸ್ ಮಿಷನರಿಸ್ ಸಂಸ್ಥೆಯ ಸಿಬ್ಬಂದಿ ಮತಾಂತರಕ್ಕೆ ಯತ್ನಿಸಿದ್ದರು ಎಂದು ಆರೋಪಿಸಲಾಗಿದೆ.

    ಸುದ್ದಿ ತಿಳಿಯುತ್ತಿದ್ದಂತೆ ಬಾಗಲಕೋಟೆ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. ಸದ್ಯ ವಿಚಾರಣೆಗಾಗಿ ಮಿಷನರಿಯ ಕೆಲ ಸಿಬ್ಬಂದಿಯನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ನಾವು ಕೇವಲ ಪ್ರಾರ್ಥನೆ ಮಾಡುತ್ತಿದ್ದೆವು. ಯಾರನ್ನೂ ನಾವು ಕರೆದಿಲ್ಲ ಅವರಾಗಿಯೇ ಬಂದಿದ್ದಾರೆ. ಇದು ಮತಾಂತರವಲ್ಲ ಪ್ರಾರ್ಥನೆ ಎಂದು ಮಿಷನರಿ ಸಿಬ್ಬಂದಿ ಸಮರ್ಥನೆ ಮಾಡಿಕೊಂಡಿದ್ದಾರೆ. ಇದು ಮತಾಂತರವೇ ಅಥವಾ ಆರೋಪವೇ ಎಂಬುದೇ ಪೊಲೀಸರಿಗೆ ತಿಳಿಯುತ್ತಿಲ್ಲ. ಪೊಲೀಸರು ಎರಡು ಸಮುದಾಯದ ಮುಖಂಡರನ್ನು ಕರೆಸಿ ಮಾಹಿತಿ ಪಡೆಯುತ್ತಿದ್ದಾರೆ.

  • ಪೊಲೀಸ್ ಪೇದೆಯಿಂದಲೇ ಮತಾಂತರ- ಅಮಾಯಕ ಮಹಿಳೆಯರೇ ಟಾರ್ಗೆಟ್

    ಪೊಲೀಸ್ ಪೇದೆಯಿಂದಲೇ ಮತಾಂತರ- ಅಮಾಯಕ ಮಹಿಳೆಯರೇ ಟಾರ್ಗೆಟ್

    – ರೂಮಿನಲ್ಲಿ ಕೂಡಿ ಹಾಕಿ ಒತ್ತಾಯದ ಮತಾಂತರ

    ಬಾಗಲಕೋಟೆ: ಡಿಆರ್ ಪೊಲೀಸ್ ಪೇದೆ ಅಮಾಯಕ ಮಹಿಳೆಯರನ್ನು ರೂಮಿನಲ್ಲಿ ಕೂಡಿ ಹಾಕಿ ಒತ್ತಾಯದಿಂದ ಮತಾಂತರ ಮಾಡಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.

    ತುಕಾರಾಮ್ ರಾಠೋಡ್ ಎಂಬಾತನೇ ಮತಾಂತರಕ್ಕೆ ಮುಂದಾಗಿದ್ದನು. ಬಾಗಲಕೋಟೆ ನವನಗರದ ಸೆಕ್ಟರ್ 31 ರಲ್ಲಿ ಘಟನೆ ನಡೆದಿದ್ದು, ಆಸೆ, ಆಮಿಷ ತೋರಿಸಿ 35ಕ್ಕೂ ಹೆಚ್ಚು ಮಹಿಳೆಯರನ್ನು ಮತಾಂತರ ಮಾಡುತ್ತಿದ್ದನು. ಪೊಲೀಸ್ ಇಲಾಖೆ ನೌಕರರೇ ಮತಾಂತರ ಕಾರ್ಯಕ್ಕೆ ಇಳಿದಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ.

    ಈತ ಪ್ರಾರ್ಥನೆಯ ಹೆಸರಲ್ಲಿ ಅಮಾಯಕ ಮಹಿಳೆಯರನ್ನು ಒತ್ತಾಯ ಪೂರ್ವಕವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿಸಲು ಮುಂದಾಗಿದ್ದ. ಈ ವೇಳೆ ಬಂಜಾರ್ ಸಮುದಾಯ ಹಾಗೂ ಹಿಂದೂ ಸಂಘಟನೆಯ ಮುಖಂಡರು ದಾಳಿ ನಡೆಸಿದ್ದು, ತುಕಾರಾಮ್‌ಗೆ ಭರ್ಜರಿ ತರಾಟೆ ತೆಗದುಕೊಂಡಿದ್ದಾರೆ. ಮತಾಂತರ ಮಾಡಿಸುತ್ತಿರುವುದು ಖಚಿತವಾಗಿದ್ದರಿಂದ ಪೇದೆಯನ್ನು ಥಳಿಸಿದ್ದಾರೆ.

    ಮತಾಂತರ ಕಾರ್ಯಕ್ಕೆ ಮುಂದಾಗಿದ್ದ ತುಕಾರಾಮ್‌ಗೆ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಗೂಸಾ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ನವನಗರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಯನ್ನು ತಿಳಿಗೊಳಿಸಿದ್ದಾರೆ. ಆದರೆ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳದೇ ಬಿಟ್ಟು ಕಳುಹಿಸಿದ್ದಕ್ಕೆ ಹಿಂದೂ ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಬಂಜಾರ ಸಮುದಾಯಕ್ಕೆ ಆಮಿಷವೊಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರ: ಸ್ವಾಮೀಜಿ ಆರೋಪ

    ಬಂಜಾರ ಸಮುದಾಯಕ್ಕೆ ಆಮಿಷವೊಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರ: ಸ್ವಾಮೀಜಿ ಆರೋಪ

    ವಿಜಯಪುರ: ವ್ಯಕ್ತಿಯೊಬ್ಬ ಬಂಜಾರಾ ಕ್ರಿಸ್ ಮಸ್ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

    ರೇವು ಚವ್ಹಾಣ ಎಂಬಾತ ಬಂಜಾರಾ ಕ್ರಿಸ್ ಮಸ್ ಎಂದು ಪೋಸ್ಟ್ ಹಾಕಿದ್ದಾನೆ. ಈ ವಿಚಾರಕ್ಕೆ ವಿಜಯಪುರ ಬಂಜಾರ ಸಮಾಜದ ಸ್ವಾಮೀಜಿಗಳು ಹಾಗೂ ಮುಖಂಡರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

    ಕ್ರಿಸ್ ಮಸ್ ಆಚರಣೆ ಕಾರ್ಯಕ್ರಮಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ ಅದರಲ್ಲಿ ಬಂಜಾರ ಶಬ್ದ ಬಳಸಿದ್ದಕ್ಕೆ ವಿರೋಧ ಮಾಡುತ್ತಿದ್ದೇವೆ. ನಮ್ಮ ಸಮಾಜದ ಮುಗ್ಧ ಜನರನ್ನು ನಮ್ಮ ಸಮಾಜದವರೆ ಆದ ರೇವು ಚವ್ಹಾಣ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

    ಬಂಜಾರ ಸಮಾಜದವರಿಗೆ ಅನೇಕ ಆಮಿಷಗಳನ್ನು ಒಡ್ಡಿ ಮತಾಂತರ ಮಾಡುತ್ತಿದ್ದಾರೆ. ಇದನ್ನು ಬಂಜಾರ ಸಮಾಜ ಖಂಡಿಸುತ್ತದೆ. ಅಲ್ಲದೆ ರೇವು ಚವ್ಹಾಣ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ ದೂರು ದಾಖಲಿಸುವುದಾಗಿ ಬಂಜಾರ ಸಮಾಜದ ಸೋಮಲಿಂಗ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

  • ಉಡುಪಿಯಲ್ಲಿ ಹೆಚ್ಚುತ್ತಿದೆ ಮತಾಂತರ ಹಾವಳಿ – ಯುವತಿಯರನ್ನು ಬಳಸಿ ಕೃತ್ಯ

    ಉಡುಪಿಯಲ್ಲಿ ಹೆಚ್ಚುತ್ತಿದೆ ಮತಾಂತರ ಹಾವಳಿ – ಯುವತಿಯರನ್ನು ಬಳಸಿ ಕೃತ್ಯ

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮತಾಂತರದ ಹಾವಳಿ ಹೆಚ್ಚಾಗಿದ್ದು, ಕಳೆದ ತಿಂಗಳಿಂದೀಚೆಗೆ ಉಡುಪಿ, ಕಾಪು, ಕಾರ್ಕಳ ತಾಲೂಕಿನಲ್ಲಿ ಮತಾಂತರ ಮಾಡುವ ಸದಸ್ಯರಿಗೂ ಹಿಂದು ಸಂಘಟನೆಯ ಸದಸ್ಯರ ನಡುವೆ ತಿಕ್ಕಾಟ ಜೋರಾಗಿದೆ.

    ಗ್ರಾಮೀಣ ಪ್ರದೇಶದ ಕುಟುಂಬಗಳೇ ಇವರ ಟಾರ್ಗೆಟ್ ಆಗಿದ್ದು, ಮತಾಂತರಕ್ಕೆ ಪ್ರಚೋದಿಸುತ್ತಿದ್ದ ಇಬ್ಬರು ಯುವತಿಯರನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕಾರ್ಕಳದ ಮಾವಿನಕಟ್ಟೆ ಎಂಬಲ್ಲಿ ನಡೆದಿದೆ.

    ಆರ್ಥಿಕವಾಗಿ ಹಿಂದುಳಿದ ಬಡವರ್ಗಗಳನ್ನು ಟಾರ್ಗೆಟ್ ಮಾಡಿಕೊಂಡು ಇಬ್ಬರು ಯುವತಿಯರು ಆಮಿಷಗಳನ್ನು ಒಡ್ಡಿ ತಮ್ಮ ಧರ್ಮಕ್ಕೆ ಮತಾಂತರವಾಗುವಂತೆ ಪ್ರಚೋದಿಸುತ್ತಿದ್ದರು ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ದೂರಿದ್ದಾರೆ. ವಿಷಯ ತಿಳಿದ ಹಿಂದೂ ಸಂಘಟನೆಯ ಸದಸ್ಯರು ಇಬ್ಬರು ಮಹಿಳೆಯರನ್ನು ತರಾಟೆಗೆ ತೆದುಕೊಂಡಿದ್ದು, ಈ ವೇಳೆ ಅವರ ಬಳಿ ಮತಾಂತರಕ್ಕೆ ಬಳಸುವ ಪ್ರಚೋದನಕಾರಿ ಕರಪತ್ರಗಳು ಪತ್ತೆಯಾಗಿವೆ.

    ಹಿಂದೂ ಸಂಘಟನೆಯ ಸದಸ್ಯರನ್ನು ಮತಾಂತರ ಮಾಡಿಸಿ, ನಮ್ಮೆಲ್ಲ ಸಾಲ ತೀರಿಸಿ, ತಲಾ ಮೂರು ಲಕ್ಷ ರೂ. ಕೊಡಿ ಎಂದು ಮಹಿಳೆಯರನ್ನು ಹಿಂದೂ ಸಂಘಟನೆಯ ಯುವಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಮದುವೆಯಾಗದ ಹಲವು ಯುವಕರಿದ್ದಾರೆ ಅವರಿಗೆ ಒಳ್ಳೆಯ ಹುಡುಗಿ ನೋಡಿ ಮದುವೆ ಮಾಡುತ್ತೀರಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಈ ವೇಳೆ ಪರಸ್ಪರ ವಾಗ್ದಾಳಿ ನಡೆದಿದೆ. ಇಷ್ಟಾಗುತ್ತಿದ್ದಂತೆ ಇಬ್ಬರು ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂತಹ ಪ್ರಕರಣಗಳಿಗೆ ಕೂಡಲೇ ಕಡಿವಾಣ ಹಾಕಬೇಕು. ಕಳೆದ ಒಂದೆರಡು ತಿಂಗಳಿಂದ ಮತಾಂತರ ಪ್ರಕ್ರಿಯೆ ಜಾಸ್ತಿಯಾಗಿದೆ ಎಂದು ಕಾರ್ಕಳದ ಭಜರಂಗದಳದ ಕಾರ್ಯಕರ್ತರು ದೂರಿದ್ದಾರೆ.

  • ಇಸ್ಲಾಂಗೆ ಮತಾಂತರಿಸಿ, ಖುರಾನ್ ಪಠಣ ಮಾಡ್ಸಿ ಡಿವೋರ್ಸ್ ಕೊಟ್ಟ ಭೂಪ..!

    ಇಸ್ಲಾಂಗೆ ಮತಾಂತರಿಸಿ, ಖುರಾನ್ ಪಠಣ ಮಾಡ್ಸಿ ಡಿವೋರ್ಸ್ ಕೊಟ್ಟ ಭೂಪ..!

    ತುಮಕೂರು: ಬಡ ಹಿಂದೂ ಯುವತಿಯನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ, ಖುರಾನ್ ಪಠಣ ಮಾಡಿಸಿದ್ದಾನೆ. ಅಲ್ಲದೇ ಮದುವೆಯಾಗಿ ಎರಡು ವರ್ಷ ಕಳೆದ ಬಳಿಕ ನೀನು ನನಗೆ ಬೇಡ ಎಂದು ಪತಿರಾಯನೊಬ್ಬ ಡಿವೋರ್ಸ್ ನೋಟಿಸ್ ಕೊಟ್ಟ ಪ್ರಕರಣವೊಂದು ತುಮಕೂರಿನಲ್ಲಿ ನಡೆದಿದೆ.

    ಚಿಕ್ಕಪೇಟೆ ನಿವಾಸಿ ರಮ್ಯಾ(ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿಯನ್ನು ಕ್ಯಾತಸಂದ್ರ ನಿವಾಸಿ ಮೊಹಮ್ಮದ್ ಅತಿಕ್ ಮತಾಂತರ ಮಾಡಿಸಿ ಮದುವೆಯಾಗಿ ಈಗ ಕೈ ಕೊಟ್ಟಿದ್ದಾನೆ. ತುಮಕೂರು ನಗರದಲ್ಲಿದ್ದ ಮೊಹಮ್ಮದ್ ಅತಿಕ್ ನ ಬಳೆ ಅಂಗಡಿಯಲ್ಲಿ ರಮ್ಯಾ ಕೆಲಸ ಮಾಡುತ್ತಿದ್ದಳು.

    ರಮ್ಯಾ ಬಡತನವನ್ನೇ ಬಂಡವಾಳ ಮಾಡಿಕೊಂಡ ಅತಿಕ್ ಇಸ್ಲಾಂ ಧರ್ಮಕ್ಕೆ ಬಂದರೆ ನಿನಗೆ ಒಳ್ಳೆದಾಗತ್ತೆ. ನಾನು ನಿನ್ನನ್ನು ಮದುವೆಯಾಗಿ ನಿನ್ನ ತಂದೆ-ತಾಯಿಯನ್ನು ಸಾಕ್ತೀನಿ ಎಂದು ಪುಸಲಾಯಿಸಿದ್ದಾನೆ. ರಮ್ಯಾಳ ತಂದೆ-ತಾಯಿಗೂ ಗೊತ್ತಿಲ್ಲದೆ ಆಂಧ್ರದ ಮದರಸಾದಲ್ಲಿ ಎರಡು ವರ್ಷಗಳ ಕಾಲ ಖುರಾನ್ ಪಠಣ ಮಾಡಿಸಿದ್ದಾನೆ.

    ಅತಿಕ್, ರಮ್ಯಾ ಹೆಸರನ್ನು ಸುಮಯಾ ಫರ್ವಿನ್ ಎಂದು ಬದಲಾಯಿಸಿದ್ದಾನೆ. ಬಳಿಕ 2016 ರಲ್ಲಿ ಈಕೆಯನ್ನು ಮದುವೆಯಾಗಿದ್ದಾನೆ. ನಂತರ ಖುರಾನ್ ಅಭ್ಯಾಸಕ್ಕಾಗಿ ಆಂಧ್ರಕ್ಕೆ ಕಳುಹಿಸಿದ್ದಾನೆ. ಈ ನಡುವೆ ಎರಡನೇ ಮದುವೆಯಾದ ಅತಿಕ್ ಈಗ ರಮ್ಯಾಳಿಗೆ ಕೈ ಕೊಟ್ಟಿದ್ದಾನೆ.

    ನೀನು ನನಗೆ ಬೇಡ ಎಂದು ರಮ್ಯಾಳಿಗೆ ಅತಿಕ್ ಡಿವೋರ್ಸ್ ನೋಟಿಸ್ ತಲುಪಿಸಿದ್ದಾನೆ. ಅತ್ತ ತವರು ಮನೆಯಲ್ಲಿ ಯಾರೂ ಸೇರಿಸಿಕೊಳ್ಳದೆ, ಇತ್ತ ಮದುವೆಯಾದ ಗಂಡನಿಂದಲೂ ತಿರಸ್ಕಾರಕೊಳಗಾದ ರಮ್ಯಾ ಈಗ ಬೀದಿಗೆ ಬಂದಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಗನ ಸಾವಿಗೆ ನ್ಯಾಯ ಸಿಗಲು ಮುಸ್ಲಿಂ ಕುಟುಂಬ ಹಿಂದೂ ಧರ್ಮಕ್ಕೆ ಮತಾಂತರ!

    ಮಗನ ಸಾವಿಗೆ ನ್ಯಾಯ ಸಿಗಲು ಮುಸ್ಲಿಂ ಕುಟುಂಬ ಹಿಂದೂ ಧರ್ಮಕ್ಕೆ ಮತಾಂತರ!

    ಲಕ್ನೋ: ಕುಟುಂಬದ ಸದಸ್ಯನ ಅಸಹಜ ಸಾವನ್ನು ಆತ್ಮಹತ್ಯೆ ಎಂದು ಪೊಲೀಸರು ಬಿಂಬಿಸಿದ್ದಕ್ಕೆ, ಮನನೊಂದ ಮುಸ್ಲಿಂ ಕುಟುಂಬವೊಂದು ಶಾಸ್ತ್ರೋಕ್ತವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಘಟನೆ ಉತ್ತರ ಪ್ರದೇಶದ ಭಾಗ್‍ಪತ್ ನಲ್ಲಿ ನಡೆದಿದೆ.

    ಭಾಗ್‍ಪತ್ ಜಿಲ್ಲೆಯ ಭದ್ರಾರ್ಕಾ ಗ್ರಾಮದ ನಿವಾಸಿಯಾಗಿರುವ ಅಖ್ತರ್ ಹಾಗೂ ಅವರ 12 ಮಂದಿ ಕುಟುಂಬ ಸದಸ್ಯರು ಕೇಸರಿ ಪಟ್ಟಿಗಳನ್ನು ಹಣೆಗೆ ಕಟ್ಟಿಕೊಂಡು, ಜೈಶ್ರೀರಾಮ್ ಎಂಬ ಘೋಷಣೆಗಳನ್ನು ಕೂಗುತ್ತಾ ಶಾಸ್ತ್ರೋಕ್ತವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಇವರನ್ನು ಸ್ಥಳೀಯ ಹಿಂದೂ ಪರ ಸಂಘಟನೆಯ ಸದಸ್ಯರು ತಿಲಕವಿಡುವ ಮೂಲಕ ಬರಮಾಡಿಕೊಂಡಿದ್ದಲ್ಲದೇ, ಅವರಿಂದ ಹೋಮ-ಹವನ ಹಾಗೂ ಹನುಮಾನ್ ಚಾಲೀಸಾವನ್ನು ಪಠಣಮಾಡಿಸಿದ್ದಾರೆ.

    ಹಿಂದೂ ಧರ್ಮಕ್ಕೆ ಮತಾಂತರಗೊಂಡ ಬಳಿಕ ತಮ್ಮ ಹೆಸರನ್ನು ಧರ್ಮಸಿಂಗ್ ಎಂದು ಅಖ್ತರ್ ನಾಮಕರಣ ಮಾಡಿಕೊಂಡಿದ್ದಾರೆ. ಅಲ್ಲದೇ ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೂ ಸಹ ತಮ್ಮ ಧರ್ಮವನ್ನು ಬದಲಾಯಿಸುವಂತೆ ಅರ್ಜಿ ಸಲ್ಲಿಸಿದ್ದಾರೆ.

    ಮತಾಂತರಗೊಳ್ಳಲು ಕಾರಣವೇನು?
    ನನ್ನ ಮಗನಾಗಿದ್ದ 28 ವರ್ಷದ ಗುಲ್‍ಹಸನ್‍ರನ್ನು 2018 ರ ಜುಲೈ 28 ರಂದು ನವಡಾ ಗ್ರಾಮದಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಕೊಲೆ ಮಾಡಿದ್ದನ್ನು ಮರೆಮಾಚಿ ಆತ್ಮಹತ್ಯೆ ಎಂದು ಬಿಂಬಿಸಲು ಆತನ ಶವವನ್ನು ನೇಣಿಗೆ ಹಾಕಿದ್ದರು. ಶಂಕೆ ಹಿನ್ನೆಲೆಯಲ್ಲಿ ನಾನು ನಮ್ಮ ಸಮುದಾಯದ ನಾಲ್ವರ ವಿರುದ್ಧ ದೂರು ನೀಡಿದ್ದೆ. ಅಷ್ಟೇ ಅಲ್ಲದೇ ಪೊಲೀಸರು ಹಾಗೂ ನಮ್ಮ ಸಮುದಾಯದ ಮುಖ್ಯಸ್ಥರಿಗೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಮನವಿ ಮಾಡಿಕೊಂಡಿದ್ದೆ.

    ಪೊಲೀಸರು ಹಾಗೂ ನಮ್ಮ ಸಮುದಾಯದವರು ಸಹ ಗುಲ್‍ಹಸನ್ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಿದ್ದರು. ಇದಲ್ಲದೇ ಮುಸ್ಲಿಂ ಸಮುದಾಯದ ಯಾವೊಬ್ಬ ಮುಖಂಡರು ಸಹ ನನ್ನ ಮಾತನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಇದರಿಂದ ಮನನೊಂದು ಮಗನ ಸಾವಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದೇನೆ ಎಂದು ಅಖ್ತರ್ ಹೇಳಿಕೊಂಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಭಾಗ್‍ಪತ್ ಜಿಲ್ಲಾ ವರಿಷ್ಠಾಧಿಕಾರಿ ಶೈಲೇಶ್ ಕುಮಾರ್ ಪಾಂಡೆ, ಕುಟುಂಬಸ್ಥರು ಪೊಲೀಸರ ಮೇಲೆ ಆರೋಪಿಸುತ್ತಿರುವ ಆಪಾದನೆ ನಂಬಿಕಾರ್ಹವಾಗಿದ್ದು, ಅಲ್ಲದೇ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಐವರ ವಿರುದ್ಧ ದೂರು ದಾಖಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಯನ್ನು ಬಿಟ್ಟು, ಐಪಿಸಿ ಸೆಕ್ಷನ್ 302 (ಕೊಲೆ) ಪ್ರಕರಣದ ಅಡಿ ದೂರು ದಾಖಲಿಸಿಕೊಳ್ಳಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಪ್ರಕರಣದ ಸ್ಪಷ್ಟತೆ ನಿಖರವಾಗಿ ತಿಳಿಯುತ್ತದೆ ಎಂದು ಹೇಳಿದ್ದಾರೆ.

    ಅಲ್ಲದೇ ಈ ಬಗ್ಗೆ ಮಾತನಾಡಿದ ಭಾಗ್‍ಪತ್ ಮ್ಯಾಜಿಸ್ಟ್ರೇಟ್ ರಿಶಿರೇಂದ್ರ ಕುಮಾರ್ ಮಾತನಾಡಿ, ಅಖ್ತರ್ ಕುಟುಂಬ ಕೇವಲ ಪೊಲೀಸರ ಮೇಲೆ ಒತ್ತಡ ಹೇರಿ, ಪ್ರಕರಣವನ್ನು ವಿಚಾರಣೆ ಮಾಡಲು ಈ ರೀತಿ ಮುಂದಾಗಿದ್ದಾರೆ. ಸೋಮವಾರ 20 ಸದಸ್ಯರ ಕುಟಂಬದಲ್ಲಿನ ಐವರು ಮಾತ್ರ ಧರ್ಮ ಬದಲಾಯಿಸುವಂತೆ ಭಾರತ್ ತೆಹಲ್ಸಿಗೆ ಬಂದಿದ್ದರು ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv