Tag: constipation

  • ಕ್ವಾರಂಟೈನ್ ಕೋಣೆ ಮುಂದೆಯೇ ಮಲವಿಸರ್ಜಿಸಿ ವಿಕೃತಿ – ತಬ್ಲಿಘಿಗಳ ವಿರುದ್ಧ ಕೇಸ್

    ಕ್ವಾರಂಟೈನ್ ಕೋಣೆ ಮುಂದೆಯೇ ಮಲವಿಸರ್ಜಿಸಿ ವಿಕೃತಿ – ತಬ್ಲಿಘಿಗಳ ವಿರುದ್ಧ ಕೇಸ್

    ನವದೆಹಲಿ: ಕೊರೊನಾ ಕ್ವಾರಂಟೈನ್ ಕೋಣೆಯ ಮುಂದೆಯೇ ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಇಬ್ಬರು ತಬ್ಲಿಘಿಗಳು ಕ್ವಾರಂಟೈನ್ ಕೊಠಡಿಯ ಮುಂದೆಯೇ ಮಲವಿಸರ್ಜನೆ ಮಾಡಿ ವಿಕೃತಿ ಮರೆದಿರುವಂತಹ ಘಟನೆ ನರೇಲಾ ಕ್ವಾರಂಟೈನ್ ಕೇಂದ್ರದಲ್ಲಿ ನಡೆದಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಪೊಲೀಸರು, ಕ್ವಾರಂಟೈನ್ ಕೋಣೆಯ ಮುಂದೆ ಮುಲವಿಸರ್ಜನೆ ಮಾಡಿದ ಇಬ್ಬರ ಮೇಲೆ ದೂರು ದಾಖಲಾಗಿದೆ. ಈ ಇಬ್ಬರು ಆರೋಪಿಗಳು ಉತ್ತರ ಪ್ರದೇಶದ ಬರಾಬಂಕಿ ನಿವಾಸಿಗಳಾಗಿದ್ದು, ಕಳೆದ ತಿಂಗಳು ದೆಹಲಿಯ ನಿಜಾಮುದ್ದೀನ್‍ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಮಾಹಿತಿ ನೀಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಕ್ವಾರಂಟೈನ್ ಸೆಂಟರ್‍ನ ಸಿಬ್ಬಂದಿ ಅವರು ಕ್ವಾರಂಟೈನ್ ಕೋಣೆ 212 ಮುಂದೆಯೇ ಮಲವಿಸರ್ಜನೆ ಮಾಡಿದ್ದಾರೆ. ಈ ಬಗ್ಗೆ ನಾವು ಪೊಲೀಸರಿಗೆ ಮಾಹಿತಿ ನೀಡಿದ್ದೇವು. ಅವರ ಈ ಕೃತ್ಯದಿಂದ ನಮಗೆ ಅಸಹ್ಯವಾಗಿದೆ. ಇಲ್ಲಿರುವ ಕೆಲ ಕೊರೊನಾ ಶಂಕಿತರು ಆರೋಗ್ಯ ಇಲಾಖೆ ಮತ್ತು ಸರ್ಕಾರ ನೀಡುತ್ತಿರುವ ಕೊರೊನಾ ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳನ್ನು ಪಾಲಿಸುತ್ತಿಲ್ಲ ಎಂದು ದೂರಿದ್ದಾರೆ.

    ಇವರು ನಾವು ಹೇಳಿದ್ದನ್ನು ಕೇಳುತ್ತಿಲ್ಲ. ಸರ್ಕಾರದ ನಿಯಮದಂತೆ ನಡೆಯುತ್ತಿಲ್ಲ. ಇದರಿಂದ ಇವರ ಜೀವಕ್ಕೂ ಅಪಾಯವಿದೆ. ಅವರ ಜೊತೆಗೆ ಬೇರೆಯವರ ಮತ್ತು ನಮ್ಮ ಪ್ರಾಣವನ್ನು ಅಪಾಯಕ್ಕೆ ತಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ಆರೋಪ ಮಾಡಿದ್ದಾರೆ. ಪೊಲೀಸರು ಈಗ ಇಬ್ಬರ ಮೇಲೆ ಕೇಸ್ ದಾಖಲಿಸಿದ್ದಾರೆ.

    ಇಲ್ಲಿಯವರೆಗೆ ಮಾರ್ಚ್‍ನಲ್ಲಿ ನಡೆದ ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದವರ ಪೈಕಿ 400ಕ್ಕೂ ಹೆಚ್ಚು ಮಂದಿ ಕೊರೊನಾ ಪೀಡಿತರಾಗಿದ್ದಾರೆ. ಜೊತೆಗೆ 15 ಸಾವನ್ನಪ್ಪಿದ್ದಾರೆ. ಕಳೆದ ಮಾರ್ಚ್ ತಿಂಗಳು ದೆಹಲಿ ನಿಜಾಮುದ್ದೀನ್‍ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ದೇಶದ ನಾನಾ ಭಾಗದಿಂದ ಸರಿ ಸುಮಾರು 9,000 ಜನರು ಭಾಗವಹಿಸಿದ್ದರು. ದೆಹಲಿ, ತಮಿಳುನಾಡು ಕರ್ನಾಟಕ, ಸೇರಿದಂತೆ ಹಲವಾರು ರಾಜ್ಯಗಳಿಂದ ಈ ಧಾರ್ಮಿಕ ಸಭೆಗೆ ಬಂದಿದ್ದರು.

    ದೇಶದ 4 ಸಾವಿರಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳ ಪೈಕಿ 1,445 ತಬ್ಲಿಘಿ ಕಾರ್ಯಕ್ರಮದಿಂದಲೇ ದಾಖಲಾಗಿದೆ. ತಬ್ಲಿಘಿಗಳು ಮತ್ತು ಅವರ ಸಂಪರ್ಕಕ್ಕೆ ಬಂದವರನ್ನು ಸೇರಿದಂತೆ ಒಟ್ಟು 26 ಸಾವಿರ ಮಂದಿಯನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ.

  • ಮಲಬದ್ಧತೆಗೆ ಬದನೆಕಾಯಿ ಬಳಸಿ ಜೀವಕ್ಕೆ ಕುತ್ತು ತಂದುಕೊಂಡ!

    ಮಲಬದ್ಧತೆಗೆ ಬದನೆಕಾಯಿ ಬಳಸಿ ಜೀವಕ್ಕೆ ಕುತ್ತು ತಂದುಕೊಂಡ!

    ಚೀನಾ: ಮಲಬದ್ಧತೆಯಿಂದ ರೋಸಿ ಹೋಗಿದ್ದ ವ್ಯಕ್ತಿಯೊಬ್ಬ ಮನೆ ಮದ್ದಿನ ಮೂಲಕ ಗುಣಪಡಿಸಕೊಳ್ಳಬಹುದೆಂದು ತಿಳಿದು, 30 ಸೆಂ.ಮೀ ಉದ್ದದ ಬದನೆಕಾಯಿಯನ್ನು ಬಳಸಿ ತೀವ್ರವಾಗಿ ಅನಾರೋಗ್ಯಕ್ಕೆ ತುತ್ತಾದ ಘಟನೆ ಚೀನಾದಲ್ಲಿ ನಡೆದಿದೆ.

    50 ವರ್ಷದ ವ್ಯಕ್ತಿಯೊಬ್ಬ ಮಲಬದ್ಧತೆಯ ಕಾಯಿಲೆಯಿಂದ ಬೇಸತ್ತಿದ್ದನು. ಹೀಗಾಗಿ ಮನೆ ಮದ್ದು ಇದಕ್ಕೆ ಪರಿಹಾರವೆಂದು ಭಾವಿಸಿ ಬದನೆಕಾಯಿಯನ್ನು ಬಳಸಿದ್ದಾನೆ. ಆದರೆ ಇದು ಅವನ ಕಾಯಿಲೆ ಗುಣಪಡಿಸುವುದಕ್ಕಿಂತ ಅವನ ಜೀವಕ್ಕೆ ಆಪತ್ತು ತಂದಿದೆ.

    ಬದನೆಕಾಯಿ ಬಳಸಿದ ಎರಡು ದಿನದ ನಂತರ ಆತನಲ್ಲಿ ಮಲಬದ್ಧತೆ ಮತ್ತು ಕಿಬ್ಬೊಟ್ಟೆಯಲ್ಲಿ ಹೆಚ್ಚಿನ ನೋವುಕಾಣಿಸಿಕೊಂಡಿದೆ. ವಿಪರೀತ ವಾಕರಿಕೆ ಮತ್ತು ವಾಂತಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆಸ್ಪತ್ರೆಯಲ್ಲಿ ಎಕ್ಸ್‍ರೇ ಮಾಡಿದ ವೇಳೆ ಸುಮಾರು 30 ಸೆಂ.ಮೀ ಬದನೆಕಾಯಿಯು ದೇಹದ ಒಳಗೆ ಸಿಕ್ಕಿಕೊಂಡಿರುವುದು ಕಂಡುಬಂದಿದೆ. ಇದು ಅವನ ಶ್ವಾಸಕೋಶಕ್ಕೆ ಹಾನಿಯುಂಟುಮಾಡಿದೆ. ಕೂಡಲೇ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಬದನೆಕಾಯಿಯನ್ನು ದೇಹದಿಂದ ಹೊರತೆಗೆದಿದ್ದಾರೆ. ಸದ್ಯ ವ್ಯಕ್ತಿಯು ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.

    ನಮ್ಮಲ್ಲಿ ಅನೇಕರು ಕಾಯಿಲೆಗಳನ್ನು ಗುಣಪಡಿಸಲು ಮನೆಮದ್ದುಗಳನ್ನು ಉಪಯೋಗಿಸುವುದು ಅನಾಧಿ ಕಾಲದಿಂದಲೂ ರೂಢಿಯಲ್ಲಿದೆ. ಈ ರೀತಿ ಮನೆಮದ್ದುಗಳನ್ನು ಉಪಯೋಗಿಸುವಾಗ ಸಾಕಷ್ಟು ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಸ್ವಲ್ಪ ಎಚ್ಚರ ತಪ್ಪಿದರೂ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿರುತ್ತದೆ.

  • ಅಮ್ಮ-ಚಿಕ್ಕಮ್ಮ ಸೇರಿ ಮಾಟ ಮಾಡಿದ್ರು, ಬಾಲಕಿಯ ಬಾಯಿ, ಗುಪ್ತಾಂಗಕ್ಕೆ ಕೈ ಹಾಕಿ ಕೊಂದೇಬಿಟ್ರು!

    ಅಮ್ಮ-ಚಿಕ್ಕಮ್ಮ ಸೇರಿ ಮಾಟ ಮಾಡಿದ್ರು, ಬಾಲಕಿಯ ಬಾಯಿ, ಗುಪ್ತಾಂಗಕ್ಕೆ ಕೈ ಹಾಕಿ ಕೊಂದೇಬಿಟ್ರು!

    ಮುಂಬೈ: ಮಲಬದ್ಧತೆ ನಿವಾರಿಸುತ್ತೇವೆಂದು ಮಾಟ ಮಂತ್ರ ಮಾಡಿ 11 ವರ್ಷದ ಬಾಲಕಿಯನ್ನ ಕೊಲೆ ಮಾಡಿದ ಆರೋಪದ ಮೇಲೆ ಬಾಲಕಿಯ ತಾಯಿ, ತಂದೆ ಹಾಗೂ ಚಿಕ್ಕಮ್ಮನನ್ನು ಪೊಲೀಸರು ಬಂಧಿಸಿದ್ದಾರೆ.

    ಮೃತ ಬಾಲಕಿ ತನ್ನ ಪೋಷಕರೊಂದಿಗೆ ಮಹಾರಾಷ್ಟ್ರದ ವಿರಾರ್‍ನ ಮನ್ವೇಲ್‍ಪಾದಾದಲ್ಲಿ ವಾಸವಿದ್ದಳು. ಡಿಸೆಂಬರ್ 15ರಿಂದ ಬಾಲಕಿ ಮಲಬದ್ಧತೆಯಿಂದ ಬಳಲುತ್ತಿದ್ದಳು. ಹೀಗಾಗಿ ಬಾಲಕಿಯ ತಾಯಿ ತಾನು ದೇವಮಾನವಿ ಎಂದು ಹೇಳಿಕೊಂಡು ಬಾಲಕಿಯನ್ನ ರೋಗವನ್ನು ವಾಸಿ ಮಾಡ್ತೀನೆಂದು ಗಂಡನಿಗೆ ಹೇಳಿದ್ದಳು. ನಂತರ ಡಿಸೆಂಬರ್ 17ರಂದು ಚಿಕಿತ್ಸೆ ಮಾಡಲು ತನ್ನ ತಂಗಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಳು.

    ಹೊಟ್ಟೆ ಮೇಲೆ ಕುಳಿತ್ರು, ಗುಪ್ತಾಂಗಕ್ಕೆ ಕೈ ಹಾಕಿದ್ರು: ಇಬ್ಬರು ಮಹಿಳೆಯರು ಮೈ ಮೇಲೆ ದೆವ್ವ ಬಂದಿದೆ ಎಂದು ಹೇಳಿಕೊಂಡು, ಬಾಲಕಿಯ ದೇಹದ ಮೇಲೆ ಅರಿಶಿಣ ಕುಂಕುಮ ಸುರಿದಿದ್ದಾರೆ. ನಂತರ ತಾಯಿ ಬಾಲಕಿಯ ಹೊಟ್ಟೆ ಮೇಲೆ ಕುಳಿತಿದ್ದಾಳೆ. ಅಲ್ಲದೆ ಹೊಟ್ಟೆಯಿಂದ ಕಲ್ಮಶವನ್ನ ಹೊರತೆಗೆಯುವುದಾಗಿ ಹೇಳಿ ಬಾಲಕಿಯ ಬಾಯಿ ಹಾಗೂ ಗುಪ್ತಾಂಗಕ್ಕೆ ಕೈ ಹಾಕಿದ್ದಾರೆ. ಈ ವೇಳೆ ಬಾಲಕಿ ಜೋರಾಗಿ ಕಿರುಚಿಕೊಳ್ಳುತ್ತಿದ್ದರೂ ಆಕೆ ಕೈಯಿಂದ ತಪ್ಪಿಸಿಕೊಂಡು ಓಡಿಹೋಗದಂತೆ ನೋಡಿಕೊಂಡಿದ್ದಾರೆ.

    ತಡೆಯಲು ಬಂದ ಗಂಡನ ಕೆನ್ನೆಗೆ ಹೊಡೆದ್ಳು: ಈ ನಡುವೆ ಸಂತ್ರಸ್ತ ಬಾಲಕಿಯ ತಂದೆ ಹಾಗೂ 14 ವರ್ಷದ ಅಣ್ಣ ಮಹಿಳೆಯನ್ನು ತಡೆಯಲು ಬಂದಿದ್ದು, ಎರಡು ಬಾರಿ ಕೆನ್ನೆಗೆ ಹೊಡೆಸಿಕೊಂಡು ದೂರ ಸರಿದಿದ್ದಾರೆ. ನಂತರ ಬಾಲಕಿ ಪ್ರಜ್ಞೆ ತಪ್ಪಿದ್ದನ್ನು ಕಂಡು ಭಯಗೊಂಡ ತಾಯಿ ಮನೆಯವರಿಗೆಲ್ಲಾ ವಿಷಯ ತಿಳಿಸಿದ್ದಾಳೆ. ಆಕೆಯ ಅಣ್ಣ ಮನೆಗೆ ಬಂದು ಬಲಕಿಯನ್ನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ ಬಾಲಕಿ ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದಾಳೆಂದು ವೈದ್ಯರು ಹೇಳಿದ್ದಾರೆ.

    ಬಾಲಕಿಗೆ ಏನೆಲ್ಲಾ ಆಯಿತೆಂದು ಗೊತ್ತಾದ ಬಳಿಕ ಸೋದರ ಮಾವ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳೀಯರನ್ನ ವಿಚಾರಣೆ ಮಾಡಿದಾಗ, ಶನಿವಾರ ತಡರಾತ್ರಿ ಬಾಲಕಿ ಕಿರುಚಾಡುತ್ತಿದ್ದುದು ಕೇಳಿಸಿತ್ತು ಎಂದು ಹೇಳಿದ್ದಾರೆ.

    ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜೆಜೆ ಆಸ್ಪತ್ರೆಗೆ ಕಳಿಸಲಾಗಿತ್ತು. ಈ ವೇಳೆ ಬಾಲಕಿಯ ಕತ್ತು, ಎದೆ, ಕೈ ಹಾಗೂ ಗುಪ್ತಾಂಗದಲ್ಲಿ ಗಾಯಗಳಾಗಿರುವುದು ಪತ್ತೆಯಾಗಿತ್ತು. ಬಳಿಕ ಮೂವರ ವಿರುದ್ಧ ಕೊಲೆ ಪ್ರಕರಣ ದಾಖಲು ಮಾಡಲಾಗಿದ್ದು, ಮಂಗಳವಾರ ರಾತ್ರಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

    ಬುಧವಾರದಂದು ಆರೋಪಿಗಳನ್ನ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಡಿಸೆಂಬರ್ 23ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ವಿರಾರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಈ ಹಿಂದೆ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ 18 ವರ್ಷದ ಯುವತಿಯ ರೋಗ ಗುಣಪಡಿಸಲು ಮಾಂತ್ರಿಕನೊಬ್ಬ ಆಕೆಗೆ ಥಳಿಸಿ, ಸಗಣಿ ತಿನ್ನಿಸಿದ್ದ.

  • ವಿಡಿಯೋ: ವ್ಯಕ್ತಿಯ ಹೊಟ್ಟೆಯಿಂದ ಜೀವಂತ ಈಲ್ ಮೀನು ಹೊರತೆಗೆದ ವೈದ್ಯರು!

    ವಿಡಿಯೋ: ವ್ಯಕ್ತಿಯ ಹೊಟ್ಟೆಯಿಂದ ಜೀವಂತ ಈಲ್ ಮೀನು ಹೊರತೆಗೆದ ವೈದ್ಯರು!

    ಬೀಜಿಂಗ್: ಅಪ್ಪಿ ತಪ್ಪಿ ಚಿಕ್ಕ ಮೀನನ್ನ ನುಂಗಿದ್ರೆ ಏನಾಗುತ್ತೆ? ಹೀಗೆ ಊಹೆ ಮಾಡಿಕೊಂಡ್ರೇನೇ ಹೊಟ್ಟೆಯಲ್ಲಿ ಗುಳುಗುಳು ಅನುಭವವಾಗುತ್ತೆ. ಹೀಗಿರೋವಾಗ ದೊಡ್ಡ ಈಲ್ ಮೀನೊಂದು ವ್ಯಕ್ತಿಯ ಹೊಟ್ಟೆ ಸೇರಿತ್ತು ಅಂದ್ರೆ ನೀವು ನಂಬಲೇಬೇಕು.

    ಹೌದು. ವೈದ್ಯರು ಜೀವಂತ ಈಲ್ ಮೀನನ್ನ ವ್ಯಕ್ತಿಯ ಹೊಟ್ಟೆಯಿಂದ ಹೊರತೆಗೆಯೋ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವ್ಯಕ್ತಿ ಹೊಟ್ಟೆ ಸೇರಿದ್ದ ಮೀನನ್ನ ವೈದ್ಯರು ಹೊರತೆಗೆದಿದ್ದು, ಆ ಮೀನು ಇನ್ನೂ ಜೀವಂತವಾಗಿರುವಂತೆ ವಿಡಿಯೋದಲ್ಲಿ ಕಾಣಿಸುತ್ತದೆ. ಈ ವಿಡಿಯೋವನ್ನ ಚೀನಾದಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ.

    ಮೀನು ಹೊಟ್ಟೆ ಸೇರಿದು ಹೇಗೆ?: ಮಲಬದ್ಧತೆಯಿಂದ ಬಳಲುತ್ತಿದ್ದ ಚೀನಾದ 49 ವರ್ಷದ ವ್ಯಕ್ತಿಯೊಬ್ಬರು ನಾಟಿ ವೈದ್ಯ ಚಿಕಿತ್ಸೆಗೆ ಮೊರೆ ಹೋಗಿದ್ರು. ಅದಕ್ಕಾಗಿ ಈಲ್ ಮೀನನ್ನ ಗುದದ್ವಾರದಲ್ಲಿ ಇಟ್ಟುಕೊಂಡಿದ್ದರಂತೆ. ಆದ್ರೆ ಈ ಪ್ಲಾನ್ ವರ್ಕೌಟ್ ಆಗಿಲ್ಲ. ಆ ವ್ಯಕ್ತಿಗೆ ಹೊಟ್ಟೆ ನೋವು ಉಲ್ಬಣಿಸಿ ಕೊನೆಗೆ ಆಸ್ಪತ್ರೆಗೆ ಓಡಿದ್ದಾರೆ. ಹೇಗಾದ್ರೂ ಮಾಡಿ ಮೀನನ್ನ ಹೊರತೆಗೆಯಿರಿ ಅಂತ ಕೇಳಿಕೊಂಡಿದ್ದಾರೆ. ಅದರಂತೆ ವೈದ್ಯರು ವ್ಯಕ್ತಿಯ ಹೊಟ್ಟೆಯಲ್ಲಿದ್ದ ಸುಮಾರು ಒಂದೂವರೆ ಅಡಿಯಷ್ಟು ಉದ್ದದ ಮೀನನ್ನ ಆಪರೇಷನ್ ಮಾಡಿ ಹೊರತೆಗೆದಿದ್ದಾರೆ.

    ಮೊದಲಿಗೆ ಮೀನು ಹೊಟ್ಟೆ ಸೇರಿದ್ದು ಹೇಗೆ ಅಂತ ಕೇಳಿದಾಗ ಮೀನು ಈಜಿಕೊಂಡು ತಾನಾಗೇ ದೇಹದೊಳಗೆ ಹೋಯಿತು ಎಂದು ಆ ವ್ಯಕ್ತಿ ರೀಲ್ ಬಿಟ್ಟಿದ್ದರು. ಆದ್ರೆ ಕೊನೆಗೆ ತಾನೇ ಮಾಡಿದ ಎಡವಟ್ಟಿನಿಂದ ಹೀಗಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಇವೆಲ್ಲದರ ನಡುವೆ ಆತನ ಪ್ಯಾಂಕ್ರಿಯಾಸ್‍ಗೆ ತೊಂದರೆಯಾಗಿದೆ ಎಂದು ಮಿರರ್ ಪತ್ರಿಕೆಯಲ್ಲಿ ವರದಿಯಾಗಿದೆ.

    https://www.youtube.com/watch?v=rlJL6BBIfZ4