Tag: congressm

  • ನನಗೆ ಒಳ್ಳೆಯ ಸಾವು ಬರಲಿ ಎಂದಷ್ಟೇ ಪ್ರಾರ್ಥಿಸುತ್ತೇನೆ: ತನ್ವೀರ್ ಸೇಠ್

    ನನಗೆ ಒಳ್ಳೆಯ ಸಾವು ಬರಲಿ ಎಂದಷ್ಟೇ ಪ್ರಾರ್ಥಿಸುತ್ತೇನೆ: ತನ್ವೀರ್ ಸೇಠ್

    ಮೈಸೂರು: ನನಗೆ ಹೆಚ್ಚಿನ ಸೆಕ್ಯುರಿಟಿ ಬೇಕಿಲ್ಲ. ನನ್ನ ಜೊತೆ ನನ್ನ ಕಾರ್ಯಕರ್ತರೇ ಇದ್ದಾರೆ. ಸಾವನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಆದರೆ ನನಗೆ ಒಳ್ಳೆಯ ಸಾವು ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.

    ತಮ್ಮ ಮೇಲಿನ ಕೊಲೆ ಯತ್ನ ಪ್ರಕರಣದ ಬಗ್ಗೆ ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿ, ನನ್ನ ಮೇಲೆ ನಡೆದ ಹಲ್ಲೆ ಪ್ರಕರಣ ಅನಿರೀಕ್ಷಿತ. ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಅದರ ಪ್ರತಿಯನ್ನು ಪಡೆದುಕೊಂಡಿದ್ದೇನೆ. ತನಿಖೆ ಬಗ್ಗೆ ನನಗೆ ಯಾವುದೇ ತಕರಾರು ಇಲ್ಲ. ಪೊಲೀಸರು ತಮ್ಮ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿದವರು ಯಾರು ಎಂಬುದು ಗೊತ್ತಿಲ್ಲ. ಇದೆಲ್ಲವು ಸಾರ್ವಜನಿಕವಾಗಿ ಬಹಿರಂಗವಾಗಬೇಕು. ಇದನ್ನು ಪೊಲೀಸರು ಜನರಿಗೆ ತಿಳಿಸಬೇಕು ಎಂದರು.

    ಪಿಎಫ್‍ಐ, ಎಸ್‍ಡಿಪಿಐ ಬ್ಯಾನ್ ಮಾಡೋ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ತನ್ವೀರ್ ಸೇಠ್, ನನ್ನ ಮೇಲೆ ಯಾರು, ಏತಕ್ಕಾಗಿ ಹಲ್ಲೆ ಮಾಡಿದ್ದಾರೆ ಗೊತ್ತಿಲ್ಲ. ಅದನ್ನ ಗೊತ್ತಿಲ್ಲದೆ ನಾನು ಹೇಳಲು ಸಾಧ್ಯವಿಲ್ಲ. ಸದ್ಯ ಪ್ರಕರಣವನ್ನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಮುಕ್ತಾಯದ ಬಳಿಕ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ ಎಂದು ತಿಳಿಸಿದರು.

    ನಾನು ಈಗ ಆರೋಗ್ಯವಾಗಿದ್ದೇನೆ. ಧ್ವನಿ ಪೆಟ್ಟಿಗೆ ಮಾತ್ರ ಹಂತಹಂತವಾಗಿ ಸರಿಯಾಗಲಿದೆ. ಧ್ವನಿ ಸರಿಯಾಗಲು ಥೆರಪಿ ಟ್ರೀಟ್‍ಮೆಂಟ್ ನಡೆಯುತ್ತಿದೆ. ಅದನ್ನು ಹೊರತುಪಡಿಸಿ ನಾನು ಫುಲ್ ಆರಾಮವಾಗಿದ್ದೇನೆ. ಮೊದಲಿಗೆ ಹೋಲಿಸಿದರೆ ಇದೀಗ ಫೈನ್ ಮತ್ತು ಧ್ವನಿ ಸುಧಾರಿಸಿದೆ. ಇನ್ಮುಂದೆ ಹಂತ ಹಂತವಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತೇನೆ. ಸಭೆ ಸಮಾರಂಭಗಳಲ್ಲೂ ಭಾಗಿಯಾಗುತ್ತೇನೆ ಎಂದರು.

  • ಚೀಲದಲ್ಲಿ ಕಂತೆ ಕಂತೆ ದುಡ್ಡು ತಂದು ಎಣಿಸಿ ಕೊಟ್ಟ ಜಮೀರ್

    ಚೀಲದಲ್ಲಿ ಕಂತೆ ಕಂತೆ ದುಡ್ಡು ತಂದು ಎಣಿಸಿ ಕೊಟ್ಟ ಜಮೀರ್

    ಬೆಂಗಳೂರು: ಶಾಸಕ ಜಮೀರ್ ಅಹಮದ್ ಅವರು ಚೀಲದಲ್ಲಿ ಕಂತೆ ಕಂತೆ ನೋಟು ತಂದು ಎದುರುಗಿದ್ದ ವ್ಯಕ್ತಿಗೆ ಎಲ್ಲರೆದುರೇ ಲಕ್ಷ ಲಕ್ಷ ಹಣವನ್ನು ಎಣಿಸಿ ಕೊಟ್ಟ ಪ್ರಸಂಗವೊಂದು ನಡೆದಿದೆ.

    ಹೌದು. ಜಮೀರ್ ಅವರು ಒಂದಲ್ಲ ಎರಡಲ್ಲ ಸಾಮಾನ್ಯ ಚೀಲದಲ್ಲಿ ಬರೋಬ್ಬರಿ 20 ಲಕ್ಷ ಹಣವನ್ನು ಶಾಸಕ ತಂದಿದ್ದಾರೆ. ಶನಿವಾರ ಗೋರಿ ಪಾಳ್ಯದಲ್ಲಿ ರಾಜಿ ಪಂಚಾಯ್ತಿ ಮಾಡಲು ಈ ಹಣವನ್ನು ತಂದಿದ್ದಾರೆ ಎಂದು ಹೇಳಲಾಗುತ್ತಿದೆ.

    ರಾಜೀ ಮಾಡಿಸುವ ಸಲುವಾಗಿ 20 ಲಕ್ಷ ಹಣ ತಂದು ಏಕ್.. ದೋ.. ತೀನ್..ಚಾರ್.. ಅಂತ ಎಣಿಸಿ ಎಣಿಸಿ ನೂರಾರು ಜನರ ಎದುರೇ ವ್ಯಕ್ತಿಯೊಬ್ಬರ ಕೈಗಿಟ್ಟಿದ್ದಾರೆ. 500 ರೂಪಾಯಿಯ 9 ಲಕ್ಷ, 2000 ರೂಪಾಯಿಯ 11 ಲಕ್ಷ.. ಹೀಗೆ ಒಟ್ಟು 20 ಲಕ್ಷ ಹಣವನ್ನ ಬಹಿರಂಗವಾಗಿ ಎಣಿಸಿ ಎಣಿಸಿ ಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

  • ಬಂಡಾಯ ಶಾಸಕರ ಸಿಟ್ಟು ಶಮನಗೊಳಿಸಲು ಮುಂದಾದ್ರು ಎಚ್‍ಡಿಕೆ, ರೇವಣ್ಣ

    ಬಂಡಾಯ ಶಾಸಕರ ಸಿಟ್ಟು ಶಮನಗೊಳಿಸಲು ಮುಂದಾದ್ರು ಎಚ್‍ಡಿಕೆ, ರೇವಣ್ಣ

    ಬೆಂಗಳೂರು: ಸರ್ಕಾರಕ್ಕೆ ಕಂಟಕವಾಗಿರುವ ಕಾಂಗ್ರೆಸ್ ಬಂಡಾಯ ಶಾಸಕರ ಸಿಟ್ಟು ಶಮನಕ್ಕೆ ಬ್ರದರ್ಸ್ ಮುಂದಾಗಿದ್ದಾರೆ. ಅಣ್ಣ ರೇವಣ್ಣ ಒತ್ತಾಯ ಹಿನ್ನೆಲೆಯಲ್ಲಿ ತಡೆ ಹಿಡಿದಿದ್ದ ನಿಗಮ ಮಂಡಳಿಗಳ ನೇಮಕಾತಿಗೆ ಒಪ್ಪಿಗೆ ಸೂಚಿಸಲು ಸಿಎಂ ಕುಮಾರಸ್ವಾಮಿ ತೀರ್ಮಾನಿಸಿದ್ದಾರೆ.

    ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯಗೆ ರಾಜ್ಯ ರಸ್ತೆ ಅಭಿವೃದ್ಧಿ ಪ್ರಾಧಿಕಾರ, ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್ ಮತ್ತು ರಾಯಚೂರು ಗ್ರಾಮೀಣ ಶಾಸಕ ಬಸವರಾಜ್ ದದ್ದಲ್‍ಗೂ ನಿಗಮ ಮಂಡಳಿ ಸ್ಥಾನ ಒಲಿಯಲಿದೆ.

    ಹಾಸನ ಮೂಲದ ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿಗೆ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಲು ಓಕೆ ಅಂದಿದ್ದಾರೆ. ಗೋಪಾಲಸ್ವಾಮಿ ನೇಮಕಕ್ಕೆ ರೇವಣ್ಣ ತಡೆ ತಂದಿದ್ದರು. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್‍ಗೆ ಹಂಚಿಕೆ ಆಗಿತ್ತು. ಆದ್ರೆ ಕಾನೂನು ತೊಡಕಾಗಿರುವ ಹಿನ್ನೆಲೆಯಲ್ಲಿ ಕಾನೂನು ಸಲಹೆ ಪಡೆದು ನೇಮಕ ಮಾಡುವ ಬಗ್ಗೆ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಇತ್ತ ಕುಮಾರಸ್ವಾಮಿ ನೇತೃತ್ವದ ನಮ್ಮ ಸರ್ಕಾರ ಬಿದ್ದರೂ ನೀವೇ ಹೊಣೆ. ಸರ್ಕಾರ ಉಳಿದರೂ ನಿಮಗೆ ಶ್ರೇಯಸ್ಸು. ಏನ್ ಮಾಡ್ತೀರಿ ಗೊತ್ತಿಲ್ಲ ನಮ್ಮ ದೋಸ್ತಿ ಸರ್ಕಾರ ಬೀಳಲೇಬಾರದು. ದೋಸ್ತಿ ಸರ್ಕಾರವನ್ನು ಉಳಿಸುವ ಸಂಪೂರ್ಣ ಹೊಣೆ ನಿಮ್ಮದೇ ಆಗಿರುತ್ತದೆ ಎಂದು ಸಿದ್ದರಾಮಯ್ಯಗೆ ದೆಹಲಿಯಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಫರ್ಮಾನು ಹೊರಡಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಬುಧವಾರ ನಡೆದ ಅಧಿವೇಶನದ ಮೊದಲ ದಿನವೇ 11 ಮಂದಿ ಶಾಸಕರು ಗೈರಾಗಿರುವ ಹಿನ್ನೆಲೆಯಲ್ಲಿ ಸರ್ಕಾರವನ್ನ ಉಳಿಸಲು ಸರ್ವ ಪ್ರಯತ್ನಗಳನ್ನ ಮಾಡುವಂತೆ ಸಿದ್ದರಾಮಯ್ಯಗೆ ರಾಹುಲ್ ಸೂಚಿಸಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv